ದಿನಾಂಕ: 30-12-2017 ರಂದು ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಲಾವಣ್ಯ ಬಿ.ಎನ್. ರವರ ನೇತೃತ್ವದಲ್ಲಿ ಮಂಡ್ಯ ನಗರದಲ್ಲಿ ಬೈಕ್ ರಾ ್ಯಲಿ ಯನ್ನು ಹಮ್ಮಿಕೊಳ್ಳಲಾಯಿತು. ಹಾಗೂ ಸಾರ್ವಜನಿಕರಿಗೆ ಅಪರಾಧ ತಡೆಗೆ ಸಂಬಂಧಿಸಿದ ಕರ ಪತ್ರಗಳನ್ನು ಹಂಚಲಾಯಿತು.




ಪತ್ರಿಕಾ ಪ್ರಕಟಣೆ

ಶ್ರೀರಂಗಪಟ್ಟಣ ಗ್ರಮಾಂತರ ಪೊಲೀಸ್ ಠಾಣೆ ಮತ್ತು ಅರಕೆರೆ ಪೊಲೀಸ್ ಠಾಣೆರವರ ಕಾರ್ಯಾಚರಣೆ.

ಮೋಸಮಾಡಿ ಚಿನ್ನಾಭರಣಗಳನ್ನು ಕಳ್ಳತನ ಮಾಡುವಂತಹ ಆರೋಪಿಗಳನ್ನು ಬಂಧಿಸಿ ಒಟ್ಟು 11 ಪ್ರಕರಣಗಳನ್ನು ಭೇದಿಸಿ 492 ಗ್ರಾಂ ಚಿನ್ನ ಮತ್ತು 20 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿರುತ್ತಾರೆ. ಒಟ್ಟು ಮೌಲ್ಯ 15.50 ಲಕ್ಷ ರೂಗಳಾಗಿರುತ್ತದೆ


ಅರಕೆರೆ ಪೊಲೀಸ್ ಠಾಣೆ ಹಾಗು  ವಿವಿಧ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಬೈಕ್ ಕಳ್ಳತನದ ಪ್ರಕರಣಗಳನ್ನು ಭೇದಿಸಿ ಆರೊಪಿಯನ್ನು ಬಂಧಿಸಿ ಒಟ್ಟು 11 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದು ಅಂದಾಜು ಮೌಲ್ಯ 4 ಲಕ್ಷ ರೂಗಳಾಗಿರುತ್ತದೆ. 


ದಿನಾಂಕ:29-12-2017 ರಂದು ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರಾದ ಶ್ರೀಮತಿ ರಾಧಿಕಾ.ಜಿ, ಐಪಿಎಸ್ ರವರ ನೇತೃತ್ವದಲ್ಲಿ ಸೈಕಲ್ ಜಾಥಾ ಕಾರ್ಯಕ್ರಮ ಹಾಗು ಅಪರಾಧ ತಡೆಗೆ ಸಂಬಂಧಿಸಿದಂತೆ ಕರ ಪತ್ರಗಳನ್ನು ಸಾರ್ವಜನಿಕರಿಗೆ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.




ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜಿಲ್ಲಾ ಪೊಲೀಸ್ ವತಿಯಿಂದ ಬೀದಿ ನಾಟಕವನ್ನು ಆಯೋಜಿಸಲಾಯಿತು.



ಪತ್ರಿಕಾ ಪ್ರಕಟಣೆ
“ಆಪರೇಷನ್ ಸೋನಾ ಕಾರ್ಯಾಚರಣೆ”
ಚಿನ್ನದ ಸರಗಳನ್ನು ಕದಿಯುತ್ತಿದ್ದ ಕಳ್ಳರ ತಂಡದ ಬಂಧನ, 24 ಲಕ್ಷ ಮೌಲ್ಯದ ಸುಮಾರು 850 ಗ್ರಾಂ ಚಿನ್ನದ ಸರಗಳ ವಶ 

ದಿನಾಂಕ:21-12-2017 ರಂದು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ “ಸೈಬರ್ ಕ್ರೈಂ” ವಿಷಯದ ಬಗ್ಗೆ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗು ಪೊಲೀಸ್ ಠಾಣೆಯ ತನಿಖಾ ಸಿಬ್ಬಂಧಿರವರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. 







ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ -2017 ಅಂಗವಾಗಿ ಶಾಲಾ ಮಕ್ಕಳಿಗೆ ಅಪರಾಧ ತಡೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಗು ಅಪರಾಧ ತಡೆಗೆ ಸಂಬಂಧಿಸಿದ ಫಲಕಗಳನ್ನು ಬಿತ್ತರಿಸಲಾಯಿತು. 


ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ -2017 ಅಂಗವಾಗಿ ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಅಪರಾಧ ತಡೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಪರಾಧ ತಡೆಗೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಒಳಗೊಂಡ ಶಾಲಾಮಕ್ಕಳ ಜಾಥಾವನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರಾದ ಶ್ರೀಮತಿ ರಾಧಿಕಾ.ಜಿ, ಐಪಿಎಸ್ ರವರು ಉದ್ಘಾಟಿಸಿದರು ಹಾಗು ಮಂಡ್ಯ ನಗರದ ಕಲಾ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.






ಮಂಡ್ಯ ಜಿಲ್ಲಾ ಪೊಲೀಸ್ ವಾರ್ಷಿಕ ಪೊಲೀಸ್ ಕ್ರೀಡಾ ಕೂಟ -2017 ಅನ್ನು ದಿನಾಂಕ:15-12-2017 ರಂದು ಉದ್ಘಾಟಿಸಲಾಯಿತು.