Moving text
ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ
ಜಿಲ್ಲೆ, ಮಂಡ್ಯ ದಿನಾಂಕ: 03-02-2017
ಪತ್ರಿಕಾ ಪ್ರಕಟಣೆ
ಕೆ.ಆರ್.ಪೇಟೆ
ಹಾಗೂ ಸುತ್ತಮುತ್ತಲ ಕೆಲವು
ಗ್ರಾಮಗಳ ಮನೆಗಳ ಬೀಗಗಳನ್ನು
ಹೊಡೆದು ಕಳ್ಳತನ ಮಾಡುತ್ತಿದ್ದ
ಜಗ್ಗಣ್ಣ @ ಜಗದೀಶ್ ಬಿನ್
ಬಸವರಾಜು, ಚಿಕ್ಕಬಿಳತಿ ಗ್ರಾಮ
ಚನ್ನರಾಯಪಟ್ಟಣ ತಾಲ್ಲೂಕು ಹಾಸನ
ಜಿಲ್ಲೆ ಎಂಬುವವನನ್ನು ದಸ್ತಗಿರಿ
ಮಾಡಿ ಆತನಿಂದ 4,40,000 ರೂ
ಮೌಲ್ಯದ ಚಿನ್ನಾಭರಣಗಳು ಹಾಗೂ
ಬೆಳ್ಳಿ ವಡವೆಗಳನ್ನು ವಶಪಡಿಸಿಕೊಂಡಿರುವ
ಬಗ್ಗೆ.
ದಿನಾಂಕಃ 30-01-2017 ರಂದು ಶ್ರೀ ವೆಂಕಟೇಶಯ್ಯ.ಹೆಚ್.ಬಿ, ಸಿಪಿಐ,
ಕೆ.ಆರ್.ಪೇಟೆ ವೃತ್ತ,
ಸಿದ್ದರಾಜು.ಆರ್, ಪಿಎಸ್ಐ,
ಕಿಕ್ಕೇರಿ ಪೊಲೀಸ್ ಠಾಣೆ ಹಾಗೂ
ಸಿಬ್ಬಂದಿಗಳಾದ ಹೆಚ್ಸಿ.245 ಪ್ರಕಾಶ್,
ಪಿಸಿ.52 ಆನಂದಕುಮಾರ್, ಪಿಸಿ.445 ಅಶೋಕ್ಕುಮಾರ್, ಜೀಪ್
ಚಾಲಕ ಎಹೆಚ್ಸಿ.117 ರಜಿತ್
ರವರುಗಳು ಕಿಕ್ಕೇರಿಯಿಂದ ಹೇಮಗಿರಿ ಜಾತ್ರಾ ಬಂದೋಬಸ್ತ್ಗೆ ಮಂದಗೆರೆ ಗ್ರಾಮದ
ರೈಲ್ವೆ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಅನುಮಾನದಿಂದ
ತಿರುಗಾಡುತ್ತಿದ್ದ ಜಗ್ಗಣ್ಣ @ ಜಗದೀಶ್ ಎಂಬುವವನನ್ನು ವಿಚಾರಣೆ
ಮಾಡಿ ಕೂಲಂಕುಷವಾಗಿ ಮಾಹಿತಿ ಪಡೆಯಲಾಗಿ ತನ್ನ
ಪೂರ್ಣ ಹೆಸರು ವಿಳಾಸ ಜಗದೀಶ
@ ಜಗ್ಗ ಬಿನ್ ಬಸವರಾಜು, 20 ವರ್ಷ,
ಚಿಕ್ಕಬಿಳತಿ ಗ್ರಾಮ, ಶ್ರವಣಬೆಳಗೊಳ ಹೋಬಳಿ,
ಚನ್ನರಾಯಪಟ್ಟಣ ತಾಲ್ಲೊಕು, ಹಾಸನ ಜಿಲ್ಲೆ ಎಂದು
ತಿಳಿಸಿರುತ್ತಾನೆ. ಆತನನ್ನು ಠಾಣೆಗೆ ಕರೆತಂದು
ಪೂರ್ಣ ವಿಚಾರಣೆಗೆ ಒಳಪಡಿಸಲಾಗಿ ತಾನು ಒಂದು ತಿಂಗಳ
ಹಿಂದೆ ಕಿಕ್ಕೇರಿಯ ಲಕ್ಷ್ಮಿಪುರದಲ್ಲಿ ಅಕ್ಕಪಕ್ಕದ ಎರಡು ಮನೆಗಳು ಬೀಗ
ಹಾಕಿದ್ದನ್ನು ನೋಡಿಕೊಂಡು ಅದೇ ದಿನ ರಾತ್ರಿ
ನಾನು ಆ ಮನೆಗಳ ಹೆಂಚುಗಳನ್ನು
ತೆಗೆದು ಮನೆಯ ಒಳಗೆ ಹೋಗಿ
ಬೀರುವನ್ನು ಜಖಂ ಮಾಡಿ ಅದರಲ್ಲಿದ್ದ
ಚಿನ್ನದ ವಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು,
ಸದರಿ ವಡವೆಗಳನ್ನು ಈ ದಿವಸ ಸದರಿ
ವಡವೆಗಳನ್ನು ಮಾರಾಟ ಮಾಡಲು ಹೊಳೆನರಸಿಪುರಕ್ಕೆ
ಹೋಗಲು ಬಂದಿದ್ದಾಗಿ ತಿಳಿಸಿದ್ದು, ಆತನ ಬ್ಯಾಗಿನಲ್ಲಿ ವಡವೆಗಳು
ಹಾಗೂ 2000-00 ರೂ ನಗದು ಹಣ
ದೊರೆತಿದ್ದು, ನಂತರ ಈತನ್ನು ಪೂರ್ಣ
ಪ್ರಮಾಣದಲ್ಲಿ ವಿಚಾರ ಮಾಡಲಾಗಿ ತನ್ನ
ಸ್ವ ಇಚ್ಚಾ ಹೇಳಿಕೆಯಲ್ಲಿ ಈ
ಕೆಳಕಂಡ ಒಂಟಿ ಮನೆಗಳ ಹೆಂಚುಗಳನ್ನು
ತೆಗೆದು ರಾತ್ರಿ ಕಳ್ಳತನ ಹಾಗೂ
ಅಂಗಡಿ ಕಳ್ಳತನ ಮಾಡಿದ್ದ ಬಗ್ಗೆ
ಹೇಳಿಕೆ ನೀಡಿದ್ದು ಆತನ ಹೇಳಿಕೆಯಂತೆ ಕೆ.ಆರ್.ಪೇಟೆ ವೃತ್ತ
ವ್ಯಾಪ್ತಿಯಲ್ಲಿನ ಕಿಕ್ಕೇರಿ ಪೊಲೀಸ್ ಠಾಣಾ ಮೊ.ಸಂ.287/16, 284/16, 178/16,
187/16, 199/16, 223/16, 231/16, 245/16, 269/16, ಕೆ.ಆರ್.ಪೇಟೆ ಗ್ರಾಮಾಂತರ
ಪೊಲೀಸ್ ಠಾಣಾ ಮೊ.ನಂ.
250/16, 346/16, 345/2016, 357/16, 358/16, ಕೆ.ಆರ್.ಪೇಟೆ ಟೌನ್
ಪೊಲೀಸ್ ಠಾಣಾ ಮೊ.ನಂ.
353/16, ಒಟ್ಟು 15 ಕಳವು ಪ್ರಕರಣಗಳನ್ನು ಪತ್ತೆ
ಮಾಡಿ ಆರೋಪಿಯಿಂದ 3,90,000-00 ರೂ ಮೌಲ್ಯದ 130 ಗ್ರಾಂ
ಚಿನ್ನದ ಆಭರಣಗಳು ಹಾಗೂ 50,000-00 ರು
ಮೌಲ್ಯದ 1 ¼ ಬೆಳ್ಳಿ ವಡವೆಗಳು, ಒಟ್ಟು
4,40,000-00 ರೂ ಮೌಲ್ಯದ ಚಿನ್ನದ ಆಭರಣಗಳು
ಹಾಗೂ ಬೆಳ್ಳಿ ವಡವೆಗಳನ್ನು ವಶಪಡಿಸಿಕೊಂಡಿದ್ದು,
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರ್ ಪಡಿಸಿರುತ್ತಾರೆ.
ಮೇಲ್ಕಂಡ ಆರೋಪಿ ಪತ್ತೆಗೆ
ಶ್ರಮಿಸಿದ ಮೇಲ್ಕಂಡ ಪೊಲೀಸ್ ಅಧಿಕಾರಿಗಳು
ಹಾಗೂ ಸಿಬ್ಬಂದಿ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು
ಪ್ರಶಂಸಿರುತ್ತಾರೆ.
PRESS NOTE DATE 03-02-2017
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ:02-02-2017.
ಗೆ,
ಎಲ್ಲಾ ಪತ್ರಿಕಾ ಮಾಧ್ಯಮ /ದೃಶ್ಯ ಮಾಧ್ಯಮದವರಿಗೆ.
ಮಂಡ್ಯ ಜಿಲ್ಲೆ.
ಮಂಡ್ಯ.
ಮಾನ್ಯರೆ,
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಂಡ್ಯ ಜಿಲ್ಲಾ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ( ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಂಡ್ಯ ) ಇವರ ಸಂಯುಕ್ತಾಶ್ರಯದಲ್ಲಿ “ ಮಾದಕ ವಸ್ತು ಮತ್ತು ಮಾದಕ ದ್ರವ್ಯಗಳ ಸೇವನೆ ತಡೆಗಟ್ಟುವಲ್ಲಿ ಎದುರಾಗುವ ಸವಾಲುಗಳು “ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ: 04-02-2017 ರಂದು ಜಿಲ್ಲಾ ಪಂಚಾಯತ್ ಸಭಾಂಗಣ, ಮಂಡ್ಯದಲ್ಲಿ ಬೆಳಿಗ್ಗೆ 10-15 ಗಂಟೆಗೆ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಳ್ಳಲಿದೆ. ದಯವಿಟ್ಟು ಈ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ಎಲ್ಲಾ ಪತ್ರಿಕಾ ಮಾಧ್ಯಮ/ದೃಶ್ಯ ಮಾಧ್ಯಮದವರು ಭಾಗವಹಿಸಬೇಕೆಂದು ಪೊಲೀಸ್ ಇಲಾಖಾ ವತಿಯಿಂದ ಕೋರಲಾಗಿದೆ.
ತಮ್ಮ ವಿಶ್ವಾಸಿ
ಪೊಲೀಸ್ ಸೂಪರಿಂಟೆಂಡೆಂಟ್
ಮಂಡ್ಯ ಜಿಲ್ಲೆ.
ಗೆ,
ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯರವರಿಗೆ ಮಾಹಿತಿಗಾಗಿ ರವಾನಿಸುತ್ತಾ ಎಲ್ಲಾ ಪತ್ರಿಕಾ / ದೃಶ್ಯ ಮಾಧ್ಯಮದವರಿಗೆ ಮಾಹಿತಿಯನ್ನು ರವಾನಿಸಲು ಈ ಮೂಲಕ ಕೋರಲಾಗಿದೆ.
ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ
ಜಿಲ್ಲೆ, ಮಂಡ್ಯ ದಿನಾಂಕ:29-12-2016
ಪತ್ರಿಕಾ ಪ್ರಕಟಣೆ
ಮದ್ದೂರು
ತಾಲ್ಲೂಕು ತೊಪ್ಪನಹಳ್ಳಿ ಗ್ರಾಮದಲ್ಲಿ ದಿನಾಂಕ: 25-12-2016 ರಂದು ನಡೆದ ಗುಂಪುಘರ್ಷಣೆ
ಸಮಯದಲ್ಲಿ ಮದ್ದೂರು ಠಾಣೆಯಲ್ಲಿ ದಾಖಲಾಗಿದ್ದ
ಕೊಲೆ ಪ್ರಕರಣದಲ್ಲಿ ಈವರೆಗೆ ಪೊಲೀಸ್ ಅಧಿಕಾರಿಗಳು
13 ಜನ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ. ಕೆ.ಹೊನ್ನಲಗೆರೆ ಗ್ರಾಮ
ಪಂಚಾಯಿತಿ ಅಧ್ಯಕ್ಷೆಯಾದ ಶ್ರೀಮತಿ ಶೋಭಾರವರನ್ನು ಈ
ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿರುತ್ತದೆ. ಅವರನ್ನು ಈವರೆಗೆ ದಸ್ತಗಿರಿ
ಮಾಡಿರುವುದಿಲ್ಲ. ಈ ಪ್ರಕರಣದಲ್ಲಿ ಇನ್ನೂ
ಕೆಲವರು ತಲೆಮರೆಸಿಕೊಂಡಿದ್ದು ಅವರನ್ನು ದಸ್ತಗಿರಿ ಮಾಡಬೇಕಾಗಿರುತ್ತದೆ.
ತಲೆ ಮರೆಸಿಕೊಂಡಿರುವವರ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಹಾಲಿ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದ್ದು ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿರುತ್ತದೆ.
Subscribe to:
Posts (Atom)
