Moving text
TRAFFIC SAFETY WEEK - DAILY EVENTS
MANDYA DISTRICT POLICE
TRAFFIC SAFETY WEEK -2014
ದಿನಾಂಕ:21-01-2014 ರಂದು ಉದ್ಗಾಟನೆ ಕಾರ್ಯಕ್ರಮ ಮತ್ತು ಕೆ.ಎಸ್.ಆರ್.ಟಿ.ಸಿ ಚಾಲಕ ಮತ್ತು ನಿರ್ವಾಹಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ
ದಿನಾಂಕ:21-01-2014 ರಂದು ಉದ್ಗಾಟನೆ ಕಾರ್ಯಕ್ರಮ ಮತ್ತು ಕೆ.ಎಸ್.ಆರ್.ಟಿ.ಸಿ ಚಾಲಕ ಮತ್ತು ನಿರ್ವಾಹಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ
ದಿನಾಂಕ: 22-01-2014 ರಂದು ಮಂಡ್ಯ ನಗರದ ವಿವಿಧ ಶಾಲೆಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳೊಡನೆ ಸಂವಾದ
ದಿನಾಂಕ: 23-01-2014 ರಂದು ಮಂಡ್ಯ ನಗರದಲ್ಲಿ ಸಂಚರಿಸುವ ಎತ್ತಿನಗಾಡಿ ಹಾಗೂ ಟ್ರಾಕ್ಟರ್ ಗಳಿಗೆ ರಿಪ್ಲೆಕ್ಟರ್ ಅಳವಡಿಸುವ ಕಾರ್ಯಕ್ರಮ
ದಿನಾಂಕ: 24-01-2014 ರಂದು ಮಂಡ್ಯ ನಗರದಲ್ಲಿ ವಿದ್ಯಾರ್ಥಿಗಳಿಂದ ರಸ್ತೆಯ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮ ಮತ್ತು ಶಾಲೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ


MANDYA RURAL CIRCLE PRESS NOTE DTD : 21-01-2014
ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 21-01-2014
ಪತ್ರಿಕಾ ಪ್ರಕಟಣೆ
ಮಂಡ್ಯ ಗ್ರಾಮಾಂತರ ಪೊಲೀಸರ ಕಾರ್ಯಚರಣೆಯಲ್ಲಿ, ಕುಖ್ಯಾತ ದ್ವಿಚಕ್ರ ವಾಹನ ಕಳ್ಳನ ಬಂಧನ
ಬೆಂಗಳೂರು ನಗರದ ಕೆಂಗೇರಿ, ವಿಜಯನಗರ, ಗಿರಿನಗರ, ಹನುಮಂತನಗರ, ಬ್ಯಾಟರಾಯನಪುರ ಈ ಕಡೆಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿ ಟಿ.ವೆಂಕಟೇಶ ಬಿನ್ ತಿಮ್ಮಯ್ಯ ಈತನನ್ನು ದಸ್ತಗಿರಿ ಮಾಡಿ ಈತನಿಂದ ಒಟ್ಟು ಸುಮಾರು 4.50 ಲಕ್ಷ ರೂ ಬೆಲೆ ಬಾಳುವ 13 ವಿವಿದ ಮೋಟಾರ್ ಬೈಕ್ಗಳ ವಶ.
ಆರೋಪಿ ಹೆಸರು ವಿಳಾಸ 1] ಟಿ. ವೆಂಕಟೇಶ್ ಬಿನ್ ತಿಮ್ಮಯ್ಯ, 38 ವರ್ಷ, ಗಂಗಾಮತ ಜನಾಂಗ, ಗಾರೆ ಕೆಲಸ, ಮತ್ತು ವ್ಯವಸಾಯ, ವಾಸ ದುದ್ದಾ ಗ್ರಾಮ, ದುದ್ದಾ ಹೋಃ ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ.
ಈ ಕೇಸಿನ ವಿಚಾರಣೆ ಕಾಲದಲ್ಲಿ ಸದರಿ ಆರೋಪಿಯು ನಕಲಿ ಕೀಗಳನ್ನು ಬಳಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ತನ್ನ ಸ್ವಂತ ಬೈಕ್ ಎಂದು ತನಗೆ ತೊಂದರೆಯಿರುವ ಪ್ರಯುಕ್ತ ಬೈಕನ್ನು ಅಡಮಾನ ಇಟ್ಟುಕೊಳ್ಳಿ ನಂತರ ಬಿಡಿಸಿಕೊಳ್ಳುವುದಾಗಿ ಹೇಳಿ ಸುಲಭವಾಗಿ ಮಾರಾಟ ಮಾಡುತ್ತಿದುದ್ದಾಗಿ ತಿಳಿದು ಬಂದಿರುತ್ತೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಗ್ರಾಮಾಂತರ ವೃತ್ತನಿರೀಕ್ಷಕರಾದ ಶ್ರೀ ಲೋಕೇಶ್ರವರ ನೇತೃತ್ವದಲ್ಲಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಶ್ರೀ ಆನಂದೇಗೌಡ, ಮತ್ತು ಅಪರಾಧ ಪತ್ತೇದಳ ಸಿಬ್ಬಂದಿಗಳಾದ ಶ್ರೀ ಬಿ.ಚಿಕ್ಕಯ್ಯ, ಶ್ರೀ ಮಹೇಶಕುಮಾರ್, ಶ್ರೀ ಆಂತೋನಿರಾಜ್, ಶ್ರೀ ಮಹೇಶ್, ಶ್ರೀ ರಘುಪ್ರಕಾಶ್, ಶ್ರೀರಾಮ, ಕರಿಗಿರಿಗೌಡ ಹಾಗೂ ಚಾಲಕರಾದ ಶ್ರೀ ಪುಟ್ಟರಾಜುರವರುಗಳು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದು ಸದರಿ ಪೊಲೀಸ್ ಅದಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.
Subscribe to:
Posts (Atom)















