Moving text
Press Note Dated: 29-11-2015
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕ: 29-11-2015
ಪತ್ರಿಕಾ ಪ್ರಕಟಣೆ
ಖಾಸಗಿ ಶಾಲಾ ವಾಹನ ಚಾಲಕ ಹಾಗೂ ಖಾಸಗಿ ಬಸ್ ಚಾಲಕರಿಗೆ
ಚಾಲನಾ ಪರೀಕ್ಷೆ/ತರಬೇತಿ ಕಾರ್ಯಕ್ರಮ
ಮಂಡ್ಯ
ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಅಪಘಾತಗಳ
ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ
ಹಿನ್ನಲೆಯಲ್ಲಿ ಹಾಗೂ ಖಾಸಗಿ ಶಾಲಾ
ಮಕ್ಕಳುಗಳ ವಾಹನಗಳ ಅಪಘಾತಗಳು ಕೂಡ
ಜಿಲ್ಲೆಯ ಕೆಲವು ಭಾಗಗಳಲ್ಲಿ ವರದಿಯಾಗಿದ್ದ
ಹಿನ್ನಲೆಯಲ್ಲಿ ಕೆ.ಎಸ್.ಆರ್.ಟಿ.ಸಿ., ಪೊಲೀಸ್
ಮತ್ತು ಪ್ರಾದೇಶಿಕ ಸಾರಿಗೆ ಇಲಾಖಾ ವತಿಯಿಂದ
ಮಂಡ್ಯ ನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು
ಪಡೆಯ ಪೊಲೀಸ್ ಪೆರೇಡ್ ಮೈದಾನದಲ್ಲಿ
ಖಾಸಗಿ ಬಸ್ ಚಾಲಕರುಗಳ ಹಾಗೂ
ಖಾಸಗಿ ಶಾಲಾ ಮಕ್ಕಳ ಬಸ್
ಚಾಲಕರ ಚಾಲನಾ ಪರೀಕ್ಷೆ/ತರಬೇತಿಯನ್ನು
ಪರಿಣತಿ ಹೊಂದಿರುವ ಕೆ.ಎಸ್.ಆರ್.ಟಿ.ಸಿ. ಚಾಲಕರ
ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ
ಸಹಯೋಗದೊಡನೆ ನವೆಂಬರ್ ಮಾಹೆಯ ಪ್ರತಿ
ಭಾನುವಾರ ಏರ್ಪಡಿಸಲಾಗಿತ್ತು.
ಈ ತರಬೇತಿ ಕಾರ್ಯಕ್ರಮದಲ್ಲಿ
ಕೆಳಕಂಡಂತೆ ಖಾಸಗಿ ಬಸ್ ಚಾಲಕರುಗಳ
ಹಾಗೂ ಖಾಸಗಿ ಶಾಲಾ ಮಕ್ಕಳ
ಬಸ್ ಚಾಲಕರು ಭಾಗವಹಿಸಿದ್ದು, ದಿನಾಂಕ:
08-11-2015 ರಂದು 48 ಜನ, ದಿ:15-11-2015 ರಂದು
35 ಜನ ಚಾಲಕರು, ದಿ: 22-11-2015 ರಂದು
64 ಜನ ಚಾಲಕರು ಮತ್ತು ದಿ:29-11-2015
ರಂದು 35 ಜನ ಚಾಲಕರು ತರಬೇತಿಯನ್ನು
ಪಡೆದಿರುತ್ತಾರೆ. ಸದರಿ ತರಬೇತಿ ಕಾರ್ಯಕ್ರಮದಲ್ಲಿ
ಶ್ರೀ ವೀರೇಶ್, ಇಂಜಿನಿಯರ್, ಕೆಎಸ್ಆರ್ಟಿಸಿ, ಮಂಡ್ಯ
ವಿಭಾಗ, ಶ್ರೀ ಅನ್ವರ್ ಪಾಷಾ,
ಸಾರಿಗೆ ಅಧಿಕಾರಿಗಳು, ಮಂಡ್ಯ ಜಿಲ್ಲೆ, ಶ್ರೀ.ಅಬ್ದುಲ್ ನಸೀಮ್, ಸಾರಿಗೆ
ನಿರೀಕ್ಷಕರು, ಪ್ರಾದೇಶಿಕ ಸಾರಿಗೆ ಇಲಾಖೆ, ಶ್ರೀ
ಸದರುಲ್ಲಾ ಷರೀಪ್, ಸಾರಿಗೆ ನಿರೀಕ್ಷಕರು,
ಪ್ರಾದೇಶಿಕ ಸಾರಿಗೆ ಇಲಾಖೆ, ಶ್ರೀ
ವಿನ್ಸೆಂಟ್, ಟ್ರಾಫಿಕ್ ವಾರ್ಡ್ನ್ ಹಾಗೂ
ಮಂಡ್ಯ ಜಿಲ್ಲಾ ಖಾಸಗಿ ಬಸ್
ಮಾಲೀಕರ ಅಧ್ಯಕ್ಷರು ಮತ್ತು ಕಾರ್ಯದರ್ಶಿ ರವರುಗಳು
ಭಾಗವಹಿಸಿರುತ್ತಾರೆ.
Press Note - Pandavapura Dacoity Case
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕಃ 14-11-2015.
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕಃ 14-11-2015.
-: ಪತ್ರಿಕಾ ಪ್ರಕಟಣೆ :-
ದಿನಾಂಕ: 25-10-2015 ರಂದು ರಾತ್ರಿ ಸಮಯದಲ್ಲಿ ಪಾಂಡವಪುರ ತಾಲ್ಲೂಕು ಪಟ್ಟಸೋಮನಹಳ್ಳಿ ಗ್ರಾಮದ ಶ್ರೀ. ಶಿವಶೈಲ ಕ್ಷೇತ್ರದಲ್ಲಿ ವಾಸವಾಗಿರುವ ನಿವೃತ್ತ ಜಸ್ಟೀಸ್ ಶ್ರೀ ಶಿವಪ್ಪ ರವರ ಮನೆಗೆ 10 ಜನ ದುಷ್ಕರ್ಮಿಗಳು ನುಗ್ಗಿ ಶಿವಪ್ಪ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಹಲ್ಲೆ ಮಾಡಿ ಕಟ್ಟಿ ಹಾಕಿ, ಸುಮಾರು 12,70,000/- ರೂ. ಬೆಲೆ ಬಾಳುವ ಒಡವೆ ಹಾಗೂ ಹಣವನ್ನು ದೋಚಿಕೊಂಡು ಹೋಗಿದ್ದು, ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆ ಮೊ.ಸಂ. 378/2015. ಕಲಂಃ 395 ಕೂಡ 149 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಶ್ರೀ. ಸಿದ್ದೇಶ್ವರ್, ಡಿ.ಎಸ್.ಪಿ. ಶ್ರೀರಂಗಪಟ್ಟಣ, ಶ್ರೀ ಪ್ರಕಾಶ್.ಬಿ.ಎಸ್. ಪೊಲೀಸ್ ಇನ್ಸ್ಪೆಕ್ಟರ್, ಪಾಂಡವಪುರ ಠಾಣೆ, ಶ್ರೀ ಲೋಕೇಶ್, ವೃತ್ತ ನಿರೀಕ್ಷಕರು, ಮಂಡ್ಯ ಗ್ರಾಮಾಂತರ ವೃತ್ತ, ಶ್ರೀ ಪ್ರೀತಂ ದತ್ತ ಶ್ರೇಯಾಕರ, ಸಿ.ಪಿ.ಐ. ಮಂಡ್ಯ ನಗರ ವೃತ್ತ, ಶ್ರೀ ಹರೀಶ್ಬಾಬು, ಪೊಲೀಸ್ ಇನ್ಸ್ಪೆಕ್ಟರ್, ಡಿ.ಸಿ.ಐಬಿ, ಡಿಪಿಓ, ಮಂಡ್ಯ, ಶ್ರೀ ಅಯ್ಯನಗೌಡ, ಪಿ.ಎಸ್.ಐ. ಪಾಂಡವಪುರ, ಶ್ರೀ ಅಜರುದ್ದೀನ್, ಪಿ.ಎಸ್.ಐ. ಅರಕೆರೆ ಪೊಲಿಸ್ ಠಾಣೆ. ಶ್ರೀ ಚಂದ್ರಶೇಖರ್, ಪಿ.ಎಸ್.ಐ. ಮೇಲುಕೋಟೆ, ಶ್ರೀ ಮಹೇಶ್, ಪಿ.ಎಸ್.ಐ. ಶ್ರೀರಂಗಪಟ್ಟಣ ಅಪರಾಧ ವಿಭಾಗ. ಶ್ರೀ ಸುನೀಲ್ಕುಮಾರ್, ಪಿ.ಎಸ್.ಐ. ಶ್ರೀರಂಗಪಟ್ಟಣ, ಶ್ರೀ ಆನಂದ್ಕುಮಾರ್, ಮಂಡ್ಯ ಗ್ರಾಮಾಂತರ ಠಾಣೆ, ಶ್ರೀ ಸತೀಶ್ನಾಯಕ್, ಪಿ.ಎಸ್.ಐ. ಕೆರಗೋಡು ಠಾಣೆ, ಶ್ರೀ ಕೆ.ಆರ್.ಸತೀಶ್, ಸಿಹೆಚ್ಸಿ-33, ಶ್ರೀ ತಾಂಡವಮೂರ್ತಿ, ಸಿಹೆಚ್ಸಿ-69, ಶ್ರೀ ಚಿಕ್ಕಯ್ಯ, ಸಿಹೆಚ್ಸಿ-56, ಶ್ರೀ ಕೃಷ್ಣೇಗೌಡ, ಸಿಪಿಸಿ-678, ಶ್ರೀ ಮಹೇಶ್ಕುಮಾರ್, ಪಿಸಿ-170, ಶ್ರೀ ಉಮರ್, ಸಿಪಿಸಿ-173, ಶ್ರೀ ಅನಿಲ್, ಪಿಸಿ-56, ಶ್ರೀ ಪ್ರದೀಪ್, ಪಿಸಿ-224, ಶ್ರೀ ಮುಕ್ರಂಜಾನ್, ಪಿಸಿ-733, ಶ್ರೀ ರಾಜೇಶ್, ಪಿಸಿ-257, ಶ್ರೀ ರೇವಣ್ಣ, ಪಿಸಿ-393, ಶ್ರೀ ಮಣಿಕಂಠಸ್ವಾಮಿ, ಪಿಸಿ-150, ಶ್ರೀ ಶ್ರೀನಿವಾಸ್, ಪಿಸಿ-471, ಶ್ರೀಮತಿ ಶೋಭ.ಜೆ. ಮಪಿಸಿ-46, ಹಾಗೂ ಸಿ.ಡಿ.ಆರ್. ವಿಭಾಗದ ರವಿಕಿರಣ್, ಲೋಕೇಶ್ ಮತ್ತು ಜೀಪ್ ಚಾಲಕರುಗಳಾದ ಅಶೋಕ, ಭಾರ್ಗವ, ಮತ್ತು ಪುಟ್ಟರಾಜುರವರುಗಳನ್ನೊಳಗೊಂಡಂತೆ ಒಟ್ಟು ನಾಲ್ಕು ತಂಡಗಳನ್ನು ರಚಿಸಿ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಶ್ರೀ. ಸಿದ್ದೇಶ್ವರ್, ಡಿ.ಎಸ್.ಪಿ. ಶ್ರೀರಂಗಪಟ್ಟಣ, ಶ್ರೀ ಪ್ರಕಾಶ್.ಬಿ.ಎಸ್. ಪೊಲೀಸ್ ಇನ್ಸ್ಪೆಕ್ಟರ್, ಪಾಂಡವಪುರ ಠಾಣೆ, ಶ್ರೀ ಲೋಕೇಶ್, ವೃತ್ತ ನಿರೀಕ್ಷಕರು, ಮಂಡ್ಯ ಗ್ರಾಮಾಂತರ ವೃತ್ತ, ಶ್ರೀ ಪ್ರೀತಂ ದತ್ತ ಶ್ರೇಯಾಕರ, ಸಿ.ಪಿ.ಐ. ಮಂಡ್ಯ ನಗರ ವೃತ್ತ, ಶ್ರೀ ಹರೀಶ್ಬಾಬು, ಪೊಲೀಸ್ ಇನ್ಸ್ಪೆಕ್ಟರ್, ಡಿ.ಸಿ.ಐಬಿ, ಡಿಪಿಓ, ಮಂಡ್ಯ, ಶ್ರೀ ಅಯ್ಯನಗೌಡ, ಪಿ.ಎಸ್.ಐ. ಪಾಂಡವಪುರ, ಶ್ರೀ ಅಜರುದ್ದೀನ್, ಪಿ.ಎಸ್.ಐ. ಅರಕೆರೆ ಪೊಲಿಸ್ ಠಾಣೆ. ಶ್ರೀ ಚಂದ್ರಶೇಖರ್, ಪಿ.ಎಸ್.ಐ. ಮೇಲುಕೋಟೆ, ಶ್ರೀ ಮಹೇಶ್, ಪಿ.ಎಸ್.ಐ. ಶ್ರೀರಂಗಪಟ್ಟಣ ಅಪರಾಧ ವಿಭಾಗ. ಶ್ರೀ ಸುನೀಲ್ಕುಮಾರ್, ಪಿ.ಎಸ್.ಐ. ಶ್ರೀರಂಗಪಟ್ಟಣ, ಶ್ರೀ ಆನಂದ್ಕುಮಾರ್, ಮಂಡ್ಯ ಗ್ರಾಮಾಂತರ ಠಾಣೆ, ಶ್ರೀ ಸತೀಶ್ನಾಯಕ್, ಪಿ.ಎಸ್.ಐ. ಕೆರಗೋಡು ಠಾಣೆ, ಶ್ರೀ ಕೆ.ಆರ್.ಸತೀಶ್, ಸಿಹೆಚ್ಸಿ-33, ಶ್ರೀ ತಾಂಡವಮೂರ್ತಿ, ಸಿಹೆಚ್ಸಿ-69, ಶ್ರೀ ಚಿಕ್ಕಯ್ಯ, ಸಿಹೆಚ್ಸಿ-56, ಶ್ರೀ ಕೃಷ್ಣೇಗೌಡ, ಸಿಪಿಸಿ-678, ಶ್ರೀ ಮಹೇಶ್ಕುಮಾರ್, ಪಿಸಿ-170, ಶ್ರೀ ಉಮರ್, ಸಿಪಿಸಿ-173, ಶ್ರೀ ಅನಿಲ್, ಪಿಸಿ-56, ಶ್ರೀ ಪ್ರದೀಪ್, ಪಿಸಿ-224, ಶ್ರೀ ಮುಕ್ರಂಜಾನ್, ಪಿಸಿ-733, ಶ್ರೀ ರಾಜೇಶ್, ಪಿಸಿ-257, ಶ್ರೀ ರೇವಣ್ಣ, ಪಿಸಿ-393, ಶ್ರೀ ಮಣಿಕಂಠಸ್ವಾಮಿ, ಪಿಸಿ-150, ಶ್ರೀ ಶ್ರೀನಿವಾಸ್, ಪಿಸಿ-471, ಶ್ರೀಮತಿ ಶೋಭ.ಜೆ. ಮಪಿಸಿ-46, ಹಾಗೂ ಸಿ.ಡಿ.ಆರ್. ವಿಭಾಗದ ರವಿಕಿರಣ್, ಲೋಕೇಶ್ ಮತ್ತು ಜೀಪ್ ಚಾಲಕರುಗಳಾದ ಅಶೋಕ, ಭಾರ್ಗವ, ಮತ್ತು ಪುಟ್ಟರಾಜುರವರುಗಳನ್ನೊಳಗೊಂಡಂತೆ ಒಟ್ಟು ನಾಲ್ಕು ತಂಡಗಳನ್ನು ರಚಿಸಿ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಆರೋಪಿಗಳು ಹಾಗೂ ಮಾಲುಗಳನ್ನು ಪತ್ತೆ ಮಾಡುವಲ್ಲಿ ಶ್ರಮ ವಹಿಸಿದ ಮೇಲ್ಕಂಡ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.
Subscribe to:
Posts (Atom)


