Moving text
PRESS NOTE
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 02-05-2014
ಪತ್ರಿಕಾ ಪ್ರಕಟಣೆ
ಕೆ.ಆರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀಯುತ ಕೆ.ರಾಜೇಂದ್ರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಪಿಸಿ 678 ಕೃಷ್ಣೇಗೌಡ, ಪ್ರಶಾಂತ ಕುಮಾರ ಪಿಸಿ-492 ರವರು ದಿನಾಂಕ 30-04-2014 ರಂದು ರಾತ್ರಿ ಗಸ್ತಿನಲ್ಲಿದ್ದು ಬೆಳಗಿನ ಜಾವ 05-00 ಗಂಟೆಯಲ್ಲಿ ತೆಂಡೆಕೆರೆ ಸರ್ಕಲ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಮೈಸೂರು ಕಡೆಯಿಂದ ಬಂದ ಒಂದು ಪ್ಯಾಸೆಂಜರ್ ಆಟೋ ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾಗ ಕೆಎ-55-2893 ಆಟೋದಲ್ಲಿದ್ದ ಆರೋಪಿತರಾದ 1) ಯಲ್ಲಪ್ಪ @ ಯಲ್ಲಪ್ಪಬೋವಿ ಬಿನ್ ಚಿಕ್ಕಸುಬ್ಬಯ್ಯ @ ಚಿಕ್ಕಸುಬ್ಬಯ್ಯಬೋವಿ, 38 ವರ್ಷ, ಬೋವಿಜನಾಂಗ ಆಟೋ ಡ್ರೈವರ್ ನಂ 7, ರಿಂಗ್ರೋಡ್ ಸಾತಗಹಳ್ಳಿ ಇಂಜಿನೀಯರಿಂಗ್ ಕಾಲೇಜು ಪಕ್ಕ ಮೈಸೂರು ಮತ್ತು 2) ಸರೋಜ @ ರಾಧ ಕೊಂ ರಾಜು, 25 ವರ್ಷ, ಬೋವಿ ಜನಾಂಗ, ಗಂಧದಕಡ್ಡಿ ವ್ಯಾಪಾರ ಮಾಡುವ ಕೆಲಸ ನಂ 7, 1 ನೇ ಕ್ರಾಸ್, ಕುರಿಮಂಡಿ ಆಲದಮರದ ಪಕ್ಕ, ಕೆಸರೆ, ಮೈಸೂರು ಸಿಟಿ ಎಂದು ತಿಳಿಸಿದ್ದು ಆಟೋ ಪರಿಶೀಲಿಸಿದಾಗ ಹಿಂಬಾಗದ ಸೀಟಿನಲ್ಲಿ ಪ್ಲಾಸ್ಟಿಕ್ ಕವರಿನ ಒಳಗೆ 18 ಜೊತೆ ಬೆಳ್ಳಿ ಕಾಲು ಚೈನುಗಳಿದ್ದು ವಿಚಾರಣೆಮಾಡಿದಾಗ ಸದರಿ ವಸ್ತುಗಳನ್ನು ಮದ್ದೂರಿನ ಬಜಾರ್ ಸ್ಟ್ರೀಟ್ ನಲ್ಲಿರುವ ಒಂದು ಜ್ಯೂಯಲರ್ಸ್ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿ ಮಾಡಲು ಹೋಗಿ ಅಂಗಡಿಯವರಿಗೆ ಗೊತ್ತಾಗದೇ 18 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ನಾವು ಮತ್ತು ನಮ್ಮ ಸಂಬಂದಿಕರಾದ 1) ಸುಬ್ಬಮ್ಮ @ ಸುಜಾತ ಮತ್ತು 2) ಮಂಜು @ ಮಂಜುಳ ಮೈಸೂರು ರವರು ಜೊತೆಗೂಡಿ ಕಳ್ಳತನ ಮಾಡಿದ್ದು ಗಿರಾಕಿಗಳು ಸಿಕ್ಕರೆ ಮಾರಾಟ ಮಾಡಿ ಬಂದ ಹಣವನ್ನು ನಾವೆಲ್ಲರೂ ಹಂಚಿಕೊಳ್ಳೋಣ ಎಂದು ಬರುತ್ತಿದ್ದೆವು ತಿಳಿಸಿದ್ದು ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು ಆಟೋವನ್ನು ಮತ್ತು 18 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ಅಮಾನತ್ತುಪಡಿಸಿಕೊಂಡು ಅರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ನಂತರ ಮೇಲ್ಕಂಡ ಆರೋಪಿಗಳನ್ನು ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಆರೋಪಿತರಿಂದ ಸುಮಾರು 60.000 ರೂಪಾಯಿ ಬೆಲೆ ಬಾಳುವ 1200 ಗ್ರಾಂ ತೂಕದ ಬೆಳ್ಳಿಯ 18 ಜೊತೆ ಕಾಲು ಚೈನುಗಳನ್ನು ಆರೋಪಿತರಿಂದ ವಶ ಪಡಿಸಿಕೊಂಡಿರುತ್ತೆ.
ಈ ಪ್ರಕರಣವನ್ನು ಮಾನ್ಯ ಶ್ರೀರಂಗಪಟ್ಟಣ ಅರಕ್ಷಕ ಉಪ ಪೊಲೀಸ್ ಅದಿಕ್ಷಕರಾದ ಶ್ರೀಮತಿ ಎಂ.ಎಸ್. ಗೀತಾ ರವರ ಮಾರ್ಗದರ್ಶನದಲ್ಲಿ ಕೆ.ಅರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಕೆ. ರಾಜೇಂದ್ರ ರವರು ಮತ್ತು ಆರಕ್ಷಕ ಉಪ ನಿರೀಕ್ಷಕರಾದ ಡಿ.ಪಿ. ಧನರಾಜ್ ಮತ್ತು ಸಿಬ್ಬಂದಿಗಳಾದ ಪಿಸಿ 678 ಕೃಷ್ಣೇಗೌಡ, ಪ್ರಶಾಂತ ಕುಮಾರ ಪಿಸಿ-492 ಇವರುಗಳ ಕಾರ್ಯವನ್ನು ಅವರುಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ.
PRESS NOTE
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 02-05-2014
ಪತ್ರಿಕಾ ಪ್ರಕಟಣೆ
ದಿನಾಂಕಃ 01-05-2014 ರಂದು ಮಂಡ್ಯ ನಗರದ ಮಹಾವೀರ ಚಿತ್ರಮಂದಿರದಲ್ಲಿ ಮಾಣಿಕ್ಯ ಎಂಬ ಸುದೀಪ್ ಅಭಿನಯದ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಈ ಸಮಯದಲ್ಲಿ ಸುದೀಪ್ರವರು ಮಾತನಾಡುವ ಧ್ವನಿಯು ಅಸ್ಪಷ್ಟವಾಗಿ ಕೇಳುತ್ತಿದೆ ಎಂದು ಪ್ರೇಕ್ಷಕರು ಈ ಬಗ್ಗೆ ಚಿತ್ರಮಂದಿರದ ಮೇಲ್ವಿಚಾರಕರನ್ನು ಪ್ರಶ್ನಿಸುತ್ತಿದ್ದ ಸಮಯದಲ್ಲಿ ರೊಚ್ಚಿಗೆದ್ದ ಕೆಲವು ಕಿಡಿಗೇಡಿಗಳು ಚಿತ್ರಮಂದಿರದ ಪೀಠೋಪಕರಣಗಳು ಮತ್ತು ಗ್ಲಾಸುಗಳನ್ನು ಹೊಡೆದು ಗಲಾಟೆ ಮಾಡಿದ್ದು, ನಂತರ ಚಲನಚಿತ್ರ ಪ್ರದರರ್ಶಿಸಲು ಸಾಧ್ಯವಾಗದ ಕಾರಣ ಪ್ರೇಕ್ಷಕರಿಗೆ ಬೆಳಗ್ಗಿನ ಪ್ರದರ್ಶನ ಮತ್ತು ಮದ್ಯಾಹ್ನದ ಪ್ರದರ್ಶನದ ಎರಡು ವೇಳೆಯ ಹಣವನ್ನು ವಾಪಸ್ ನೀಡಿ ಕಳುಹಿಸಿರುತ್ತಾರೆ. ಗಲಾಟೆ ಸಮಯದಲ್ಲಿ ಚಿತ್ರಮಂದಿರ ಹಾನಿಗೊಳಗಾಗಿದ್ದ ಸಂಬಂಧವಾಗಿ ಚಿತ್ರಮಂದಿರದ ಮ್ಯಾನೇಜರ್ ಆದ ರಾಮು ಎಂಬುವವರು ಮಂಡ್ಯ ಪೂರ್ವ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಕೇಸಿನ ಆರೋಪಿಗಳಾದ 1] ವಿನಿಲ್ಕುಮಾರ್ ಬಿನ್ ರಾಮಚಂದ್ರ, 24 ವರ್ಷ, ಒಕ್ಕಲಿಗರು, ವ್ಯವಸಾಯ, ಕನ್ನಲಿ ಗ್ರಾಮ, ಮಂಡ್ಯ ತಾಲ್ಲೂಕು. 2] ಹೆಚ್.ಎನ್.ದೀಪು ಬಿನ್ ನಾಗರಾಜು 27 ವರ್ಷ, ಒಕ್ಕಲಿಗರು, ಕ್ಲಬ್ನಲ್ಲಿ ಸಪ್ಲೈಯರ್ ಕೆಲಸ, ಸ್ವಂತ ಊರು ಹುಚ್ಚಲಗೆರೆ ಮಂಡ್ಯ ತಾಲ್ಲೂಕು. 3] ರಮೇಶ ಬಿನ್ ಲೇಟ್ ಸವಡೆ ಉರುಗಯ್ಯ, 26 ವರ್ಷ, ಗಂಗಾಮತಸ್ತರು, ವ್ಯವಸಾಯ, ವಾಸ ಚೀರನಹಳ್ಳಿ ಗ್ರಾಮ, ಮಂಡ್ಯ ತಾಲ್ಲೂಕು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
MANDYA RURAL POLICE STATION CRIME NUMBER 226/2014 U/s 302-201 IPC Case PRESS NOTE
Click here for DETAILED REPORT
Labels:
Press Note,
Press Note Image
PRESS NOTE DATED 28-04-2014
WOMEN HELPLINE
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ ಮಂಡ್ಯ ಜಿಲ್ಲೆ. ಮಂಡ್ಯ ದಿಃ-28-04-2014
ಪತ್ರಿಕಾ ಪ್ರಕಟಣೆ
ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಯಾವುದೇ ಸಮಯದಲ್ಲಾದರೂ ಸರಿ ಹಾಗೂ ಯಾವುದೇ ಸ್ಥಳದಲ್ಲಾದರೂ ಸರಿ ಯಾರಿಂದಲಾದರೂ ಸರಿ ತೊಂದರೆಯುಂಟಾದಲ್ಲಿ ಅವರ ಸಹಾಯಕ್ಕಾಗಿ ಕೂಡಲೇ ಬರುವ ಸಲುವಾಗಿ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಮಹಿಳಾ ಸಹಾಯವಾಣಿಯನ್ನು [HELP LINE] ಪ್ರಾರಂಭ ಮಾಡಿದ್ದು, ಈ ಕೆಳಕಂಡ ವಿಚಾರಗಳ ಬಗ್ಗೆ ನೊಂದ ಮಹಿಳೆಯರು ಮಹಿಳಾ ಸಹಾಯವಾಣಿಯನ್ನು ಈ ಕೆಳಗೆ ಸೂಚಿಸಿರುವ ದೂರವಾಣಿಗೆ ತಾವುಗಳು ಇದ್ದ ಸ್ಥಳದಿಂದಲೇ ಸಂಪರ್ಕಿಸಿ ಸಹಾಯವನ್ನು ಪಡೆಯಬಹುದಾಗಿರುತ್ತದೆ.
1] ಶಾಲಾ - ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಸ್ಪತ್ರೆಗಳು, ಇತರೆ ಸಾರ್ವಜನಿಕ ಸ್ಥಳಗಳು, ಬಸ್ ಮತ್ತು ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದಲ್ಲಿ ಹಾಗೂ ಒಬ್ಬಂಟಿಯಾಗಿ ಮಹಿಳೆಯರು ರಾತ್ರಿ ವೇಳೆ ಯಾವುದೇ ಸ್ಥಳದಲ್ಲಿ ಸಂಚರಿಸುತ್ತಿದ್ದಲ್ಲಿ ಯಾವುದೇ ಕಿಡಿಗೇಡಿಗಳಿಂದ ತೊಂದರೆಯಾದಲ್ಲಿ ಈ ಮಹಿಳಾ ಸಹಾಯವಾಣಿ ಕೇಂದ್ರವನ್ನು ಇದ್ದ ಸ್ಥಳದಿಂದಲೇ ಸಂಪರ್ಕಿಸಿದ್ದಲ್ಲಿ ಸಹಾಯವಾಣಿ ಕೇಂದ್ರದವರು ನೊಂದ ಮಹಿಳೆಯರು ತೊಂದರೆಗೀಡಾದ ಸ್ಥಳದ ಸಮೀಪದ ಠಾಣೆಗಳಿಗೆ ಮಾಹಿತಿಯನ್ನು ನೀಡಿ ಆ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಲವೇ ನಿಮಿಷಗಳೊಳಗೆ ತೊಂದರೆಗೀಡಾದ ಮಹಿಳೆ ಇದ್ದ ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ ಒದಗಿಸಲು ಬರುವವರಿದ್ದಾರೆ.
2] ಮಹಿಳಾ ಸಹಾಯವಾಣಿಯನ್ನು ಮಂಡ್ಯ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತೆರೆಯಲಾಗಿದ್ದು, ಅದರ ದೂರವಾಣಿ ಸಂಖ್ಯೆ ಈ ಕೆಳಕಂಡಂತೆ ಇರುತ್ತದೆ.
1] 08232 - 220239
2] 08232 - 220242
PRESS NOTE DATE 27-04-2014
ಕಿರುಗಾವಲು ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ : 61/2014 ಕಲಂ 302 ಕೂಡ 34 ಐಪಿಸಿ ಪ್ರಕರಣದ ಆರೋಪಿಗಳ ಬಂಧನ
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ ದಿಃ-27-04-2014
ಪತ್ರಿಕಾ ಪ್ರಕಟಣೆ
ಕಿರುಗಾವಲು ಪೊಲೀಸ್ ಠಾಣಾ ಸರಹದ್ದಿನ ಕನ್ನಹಳ್ಳಿ ಗ್ರಾಮದ ಬಳಿ ದಿನಾಂಕಃ 24-04-2014 ರಂದು ಬೆಳಗಿನ ಜಾವ ಶ್ರೀಮತಿ.ಶಿಲ್ಪಾ ಕೋಂ ಅಭಿಜಿತ್, 19 ವರ್ಷ, ಬೈರವೇಶ್ವರ ನಗರ, 2 ನೇ ಕ್ರಾಸ್, ಮೇಟಗಳ್ಳಿ, ಮೈಸೂರು ಎಂಬಾಕೆಯನ್ನು ಬೆಂಕಿ ಹಚ್ಚಿ ಕೊಲೆಗೆ ಪ್ರಯತ್ನಿಸಿದ್ದು, ನಂತರ ಆಕೆಯು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ವಿಚಾರದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿರುವ ಬಗ್ಗೆ.
ಮಳವಳ್ಳಿ ಗ್ರಾಮಾಂತರ ವೃತ್ತ ವ್ಯಾಪ್ತಿಯ ಕಿರುಗಾವಲು ಪೊಲೀಸ್ ಠಾಣಾ ಸರಹದ್ದಿನ ಮೈಸೂರು ಮಳವಳ್ಳಿ ಮುಖ್ಯರಸ್ತೆಯ ಕನ್ನಹಳ್ಳಿ ಗ್ರಾಮದ ಮುಂದೆ ರಸ್ತೆಯ ಪಕ್ಕದಲ್ಲಿ ದಿನಾಂಕಃ 24-04-2014 ರಂದು ಬೆಳಗಿನ ಜಾವದ ಸಮಯದಲ್ಲಿ ಆರೋಪಿಗಳು ಶಿಲ್ಪಾ ಕೋಂ ಅಭಿಜಿತ್, 19 ವರ್ಷ, ಬೈರವೇಶ್ವರ ನಗರ, 2 ನೇ ಕ್ರಾಸ್, ಮೇಟಗಳ್ಳಿ, ಮೈಸೂರು ಎಂಬಾಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಗೆ ವೇಲನ್ನು ಬಿಗಿದು ನಂತರ ಶಿಲ್ಪಾಳ ಮುಖಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಹೊರಟು ಹೋಗಿದ್ದು ಇದನ್ನು ಕಂಡ ಸಾರ್ವಜನಿಕರು ಈಕೆಯನ್ನು 108 ಸಹಾಯದಿಂದ ಮಳವಳ್ಳಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು ಚಿಕಿತ್ಸೆ ಪಲಕಾರಿಯಾಗದೇ ಶಿಲ್ಪಾಳು ಮೃತ ಪಟ್ಟಿರುತ್ತಾಳೆ. ಈ ವಿಚಾರದಲ್ಲಿ ಶಿಲ್ಪಾಳು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಸಮಕ್ಷಮ ಹೇಳಿಕೆಯನ್ನು ನೀಡಿದ್ದು ಈ ಬಗ್ಗೆ ಕಿರುಗಾವಲು ಠಾಣಾ ಮೊಸಂಃ 61/14 ಕಲಂ 302 ರೆವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಈ ಮೇಲ್ಕಂಡ ಪ್ರಕರಣದ ಆರೋಪಿಗಳ ಪತ್ತೆ ಬಗ್ಗೆ ಡಾ|| ವಿ.ಜೆ ಶೋಬಾರಾಣಿ, ಡಿಎಸ್ಪಿ ಮಂಡ್ಯ ಉಪವಿಭಾಗ ಹಾಗೂ ಶ್ರೀ ಅಣ್ಣಪ್ಪನಾಯಕ ಡಿಎಸ್ಪಿ ಮಳವಳ್ಳಿ ಉಪವಿಭಾಗ ರವರ ನೇತೃತ್ವದಲ್ಲಿ ಮಳವಳ್ಳಿ ಗ್ರಾಮಾಂತರ ವೃತ್ತದ ಸಿ.ಪಿ.ಐ ಹೆಚ್.ಕೆ ಶಿವಸ್ವಾಮಿ ಶ್ರೀ ಬಿ.ದೇವರಾಜು, ಪಿ.ಎಸ್.ಐ, ಕಿರುಗಾವಲು ಪೊಲೀಸ್ ಠಾಣೆ, ಶ್ರೀ ವೆಂಕಟೇಗೌಡ ಪಿಎಸ್ಐ ಮಂಡ್ಯ ಪೂರ್ವ ಪೊಲೀಸ್ ಠಾಣೆ ಹಾಗೂ ಇತರೆ ಸಿಬ್ಬಂದಿಗಳ ತನಿಖಾ ತಂಡವನ್ನು ರಚಿಸಿ, ಸದರಿ ತಂಡದವರು ದಿನಾಂಕಃ24/04/2014 ರಂದು ಆರೋಪಿ ಸಂಖ್ಯೆ 3] ಪ್ರಮಿಳಾ ಕೊಂ ಪುಟ್ಟಸ್ವಾಮಿ, 33 ವರ್ಷ, ನೆಲಮಾಕನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೂಕು, ಹಾಲಿ ವಾಸ ಬೈರವೇಶ್ವರ ನಗರ, ಮೇಟಗಳ್ಳಿ ಪೋಸ್ಟ್, ಮೈಸೂರುರವರನ್ನು ನೆಲಮಾಕನಹಳ್ಳಿ ಗ್ರಾಮದಲ್ಲಿ ವಶಕ್ಕೆ ಪಡೆದು ನಂತರ ಆರೋಪಿ ಸಂಖ್ಯೆ-4] ನಾಗಮ್ಮ ಕೊಂ ಬಿಲ್ಲಯ್ಯ, 38 ವರ್ಷ, ನೆಲಮಾಕನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೂಕು, ಹಾಲಿ ವಾಸ, ಜಯದೇವನಗರ, ಮೇಟಗಳ್ಳಿ ಪೋಸ್ಟ್, ಮೈಸೂರು ರವರನ್ನು ಮೈಸೂರಿನ ಜಯದೇವನಗರದಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತಾರೆ. ನಂತರ ದಿನಾಂಕ: 26-04-2014 ರಂದು ಬೆಳಿಗ್ಗೆ ಆರೋಪಿ ಸಂಖ್ಯೆ-1 ಪುಟ್ಟಸ್ವಾಮಿ ಬಿನ್ ಬಿಲ್ಲಯ್ಯ, 36ವರ್ಷ, ವುಡ್ ಪಾಲಿಸ್ ಕೆಲಸ, 2ನೇ ಕ್ರಾಸ್, ಕಲ್ಪವೃಕ್ಷ ಬಾರ್ ಹಿಂಭಾಗ, ಬೈರವೇಶ್ವರ ನಗರ, ಮೇಟಗಳ್ಳಿ ಪೋಸ್ಟ್, ಮೈಸೂರು. ಆರೋಪಿ ಸಂಖ್ಯೆ-2 ಬಿಲ್ಲಯ್ಯ ಬಿನ್ ಬಿಲ್ಲಯ್ಯ, 44 ವರ್ಷ, ವುಡ್ ಪಾಲಿಸ್ ಕೆಲಸ, ಮನೆ ನಂ 08/1, 1 ನೇ ಕ್ರಾಸ್, ಜಯದೇವನಗರ, ಮೇಟಗಳ್ಳಿ ಪೋಸ್ಟ್, ಮೈಸೂರು. ರವರನ್ನು ಬೆಂಗಳೂರಿನ ಹೆಬ್ಬಾಳದ ಬಸ್ನಿಲ್ದಾಣದ ಬಳಿ ವಶಕ್ಕೆ ಪಡೆದು ಕರೆತಂದು ವಿಚಾರಣೆ ಮಾಡಿ ದಸ್ತಗಿರಿ ಮಾಡಿ ಆರೋಪಿಗಳಿಂದ ಎರಡು ಮೊಬೈಲ್ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಹೊಂಡಾ ಆಕ್ಟಿವಾ ಬೈಕ್ ಕೆ.ಎ.09-ಇ.ಎಸ್-1284 ಹಾಗೂ ಬಜಾಜ್ ಡಿಸ್ಕವರ್ ಮೋಟಾರ್ ಬೈಕ್ ಕೆ.ಎ.09-ಇವಿ-8233 ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. ಆರೋಪಿಗಳ ವಿಚಾರಣಾ ವೇಳೆಯಲ್ಲಿ ಮೃತೆ ಶಿಲ್ಪಾಳು ಅಭಿಜಿತ್ ನೊಂದಿಗೆ ಅಂರ್ತಜಾತಿ ಪ್ರೇಮ ವಿವಾಹವಾಗಿದ್ದು ಮೃತೆ ಶಿಲ್ಪಾಳ ಅತ್ತೆ ನಾಗಮ್ಮ ಮಾವ ಬಿಲ್ಲಯ್ಯನವರಿಗೆ ಇಷ್ಟವಿಲ್ಲದೇ ಇದ್ದು ಆರೋಪಿ ಸಂಖ್ಯೆ-2 ಬಿಲ್ಲಯ್ಯ ರವರ ಮಗಳು ಅಭಿಲಾಷ್ ರವರ ಮದುವೆ ನಿಶ್ಚಯವಾದಲ್ಲಿ ಈಕೆಯ ತಮ್ಮನಾದ ಅಭಿಜಿತ್ ಅಂರ್ತಜಾತಿ ಹುಡುಗಿಯ ಜೊತೆ ಮದುವೆಯಾಗಿರುವುದರಿಂದ ತಮ್ಮ ಮಗಳ ಮದುವೆಗೆ ಅಡ್ಡಿಯಾಗುತ್ತದೆಂಬ ಕಾರಣದಿಂದ ಒಂದು ವಾರದ ಮುಂಚೆ ಆರೋಪಿಗಳೆಲ್ಲರೂ ಶಿಲ್ಪಾಳನ್ನು ಕೊಲೆ ಮಾಡುವ ಸಂಚು ಮಾಡಿ ಮೈಸೂರು ಮಳವಳ್ಳಿ ಮುಖ್ಯರಸ್ತೆಯ ಪಕ್ಕದ ಕನ್ನಹಳ್ಳಿ ಗ್ರಾಮದ ಬಳಿ ಆರೋಪಿಗಳಾದ ಪುಟ್ಟಸ್ವಾಮಿ ಮತ್ತು ಪ್ರಮೀಳಾ ಇಬ್ಬರು ಸೇರಿ ಶಿಲ್ಪಾಳಿಗೆ ವೇಲ್ನಿಂದ ಕುತ್ತಿಗೆಗೆ ಬಿಗಿದು ಮುಖಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿರುವುದಾಗಿ ತನಿಖಾ ಕಾಲದಲ್ಲಿ ತಿಳಿಸಿರುತ್ತಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ
Labels:
Press Note,
Press Note Image
PRESS NOTE DATED : 06-03-2014
ತೂಬಿನಕೆರೆ ಕೈಗಾರಿಕಾ ಪ್ರದೇಶದ ಸಂಪತ್ ರೀಫೈನ್ಡ್ ಪ್ರೈ.ಲಿ ನಲ್ಲಿ
5 ಕಾರ್ಮಿಕರ ದುರ್ಮರಣ
ಮಂಡ್ಯ ತಾಲ್ಲೂಕಿನ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಂಪತ್ ರೀಫೈನ್ಡ್ ಪ್ರೈ.ಲಿ, ನಲ್ಲಿ ಸುಮಾರು 10 ಜನ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಉಪಯೋಗಿಸಲ್ಪಟ್ಟ ಗೇರ್ ಆಯಿಲ್ಅನ್ನು ಸಂಸ್ಕರಿಸಿ ಇದೇ ಕಾರ್ಖಾನೆಯ ಬೆಂಗಳೂರು ಶಾಖೆಗೆ ಕಳುಹಿಸುವ ಕೆಲಸ ಮಾಡುತ್ತಿದ್ದು, ಕಾರ್ಖಾನೆಯ ಮಾಲಿಕರಾದ ಅರುಣ್, ಕುಮಾರ್ ಅಥವಾ ರೈಟರ್ ಅಮೃತ್ ರಾಜ್ ರವರ ಸೂಚನೆಯ ಮೇರೆಗೆ ಲೋಡಿಂಗ್, ಅನ್ಲೋಡಿಂಗ್, ಮತ್ತಿತರೆ ಕೆಲಸ ಮಾಡಿಕೊಂಡಿದ್ದರು. ಕಳೆದ 10 ದಿನಗಳಿಂದ ಕಾರ್ಖಾನೆಯ ರಿಯಾಕ್ಟರ್ನಲ್ಲಿ ಬೋಲ್ಡ್ ಸಡಿಲಗೊಂಡು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದ ಕಾರಣ ಈ ದಿನ ದಿನಾಂಕ;6-3-14 ರಂದು ಬೆಳಿಗ್ಗೆ ಬೆಂಗಳೂರಿನಲ್ಲಿರುವ ಕಾರ್ಖಾನೆಯ ಮಾಲಿಕರಾದ ಅರುಣ್ ರವರು ರೈಟರ್ ಅಮೃತ್ ರಾಜ್ ಮಾಡಿ ರಿಯಾಕ್ಟರ್ ಒಳಗೆ ಇಳಿದು ಬೋಲ್ಡ್ ಸರಿಪಡಿಸುವಂತೆ ತಿಳಿಸಿದ್ದರು. ಅದರಂತೆ ಈ ದಿನ ಬೆಳಿಗ್ಗೆ 11-00 ಗಂಟೆಯಲ್ಲಿ ಅಮೃತ್ರಾಜ್ ಕಾರ್ಖಾನೆಯ ಕಾರ್ಮಿಕರಾದ ಶ್ರೀರಾಮ್ಗೆ ರಿಯಾಕ್ಟರ್ನ ಒಳಗೆ ಇಳಿದು ಬೋಲ್ಟ್ ಸರಿಪಡಿಸಿ ಕ್ಲೀನ್ ಮಾಡುವಂತೆ ತಿಳಿಸಿದರು. ಆಗ ಶ್ರೀರಾಮ ಒಳಗೆ ಇಳಿದು, ಚೇತು ಮೇಲೆ ನೋಡುತ್ತಿದ್ದಾಗ, ಶ್ರೀರಾಮ ಪ್ರಜ್ಞೆತಪ್ಪಿ ಒಳಗೆ ಬಿದ್ದಿದ್ದಾನೆಂದು ಹೇಳಿ ಮೇಲಕ್ಕೆ ಎತ್ತಿತರುತ್ತೇನೆಂದು ಹೇಳಿ ಇಳಿದವನು ಹೊರಗೆ ಬಾರದಿದ್ದಾಗ ಒಬ್ಬರ ನಂತರ ಒಬ್ಬೊಬ್ಬರಾಗಿ ರಾಜು, ಗಾಮ, ಮತ್ತು ಬಬ್ಲು ರವರುಗಳು ರಿಯಾಕ್ಟರ್ ಒಳಗೆ ಇಳಿದಿದ್ದು, ಇವರುಗಳು ಯಾರೂ ಅರ್ಧಗಂಟೆಯಾದರೂ ಹೊರಗೆ ಬಾರದಿದ್ದಾಗ, ಪಿರ್ಯಾದಿ ಮತ್ತು ರೈಟರ್ ಅಮೃತ್ರಾಜ್ ರವರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಪೋನ್ ಮಾಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸುಮಾರು 2 ಗಂಟೆ ಕಾರ್ಯಾಚರಣೆ ನಡೆಸಿ ರಿಯಾಕ್ಟರ್ ನ ತಳಬಾಗವನ್ನು ಕಟ್ ಮಾಡಿ ನೋಡಲಾಗಿ ಕೆಳಬಾಗದಲ್ಲಿ ಸಿಕ್ಕಿಕೊಂಡಿದ್ದ ಮೇಲ್ಕಂಡ ಐದು ಮಂದಿ ಉಸಿರುಕಟ್ಟಿ ಮೃತಪಟ್ಟಿದ್ದರು. ಕಾರ್ಖಾನೆಯ ಮಾಲಿಕರಾದ ಅರುಣ್ ಮತ್ತು ಕುಮಾರ ಹಾಗೂ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ರೈಟರ್ ಅಮೃತ್ ರಾಜ್ ರವರುಗಳು ಕಾರ್ಮಿಕರ ಸುರಕ್ಷತೆಯ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೇ ಉಸಿರಾಡಲು ಕಷ್ಟಕರವಾಗಿರುವ ರಿಯಾಕ್ಟರ್ ನ ಒಳಗೆ ಇಳಿಸಿ ನಿರ್ಲಕ್ಷತೆ ವಹಿಸಿರುವುದರಿಂದ ಮೇಲ್ಕಂಡವರು ಮೃತಪಟ್ಟಿರುತ್ತಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ ನಂ 140/2014, ಕಲಂ 304(ಎ) ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತದೆ.
ಮೃತರು,
1] ಗಾಮ ಬಿನ್ ಸಿಂಘಾಸನ್, 25 ವರ್ಷ, ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ:, ಬಿಹಾರ,
2] ಬಬ್ಲು ಬಿನ್ ಸಿಂಘಾಸನ್, ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ: ಬಿಹಾರ,
3] ಶ್ರೀರಾಮ ಬಿನ್ ಬೋಚ್, ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ: ಬಿಹಾರ,
4] ಚೇತುಬಿನ್ ಮುನಾರ್ ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ: ಬಿಹಾರ,
5] ರಾಜು ಬಿನ್ ಮಿಠಾಯ್ಲಾಲ್, ಮುಲ್ಲಾ ಜನಾಂಗ, ಲೋಗ್ರೋರಾ ಗ್ರಾಮ, ಉಚೆಹರ ತಾ: ಮಧ್ಯಪ್ರದೇಶ
Press Note : Date 03-03-2014
ಮಂಡ್ಯ ಉಪ ವಿಭಾಗದ ಅಪರಾಧ ಪತ್ತೆದಳದ ಅಧಿಕಾರಿ ಮತ್ತು ಸಿಬ್ಬಂದಿಯವರು, ಮಂಡ್ಯ ನಗರ ಮತ್ತು ಮಂಡ್ಯ ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಂಟಿ ಹೆಂಗಸರನ್ನು ಮೋಸ ಮಾಡುತ್ತಿದ್ದ ಆರೋಪಿಗಳಾದ ಜ್ಯೋತಿ, ಗೌರಮ್ಮ @ ಜಯಮ್ಮ, ರತ್ನಮ್ಮ, ನಾಗಮ್ಮ ಇವರುಗಳ ಬಂಧನ. ಇವರುಗಳಿಂದ ಸುಮಾರು 13,00,000-00 ರೂ ಬೆಲೆಬಾಳುವ ಸುಮಾರು ಒಟ್ಟು 440. ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳು ಮತ್ತು ಚಿನ್ನದ ಚೈನುಗಳ ವಶ.
For more details click on : PRESS NOTE DATE : 03-03-2014
PRESS NOTE DATE : 26-02-2014
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ, ದಿನಾಂಕಃ 26-02-2014
ಪತ್ರಿಕಾ ಪ್ರಕಟಣೆ
ದಿನಾಂಕಃ 24-02-2014 ರಂದು ಪಿಎಸ್ಐ ಶ್ರೀ. ಧನರಾಜ್, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ಸಿಬ್ಬಂದಿಗಳ ಸಮೇತ ರಾತ್ರಿ ಗಸ್ತಿನಲ್ಲಿದ್ದಾಗ ರಾತ್ರಿ 1215 ಗಂಟೆಯಲ್ಲಿ ಬೂಕನಕೆರೆ ಗ್ರಾಮದಿಂದ ಬಲ್ಲೇನಹಳ್ಳಿ ಕಡೆಗೆ ಹೋಗುವ ರಸ್ತೆಯ ಪೆಟ್ರೋಲ್ ಬಂಕ್ ಬಳಿ 1) ನಟ @ ನಟರಾಜು ಬಿನ್ ಲಕ್ಷ್ಮಯ್ಯ, 35 ವರ್ಷ, ಚಾಲಕ ವೃತ್ತಿ, ಐಚನಹಳ್ಳಿ ಗ್ರಾಮ, ಬೂಕನಕೆರೆ ಹೊಬಳಿ ಕೆ.ಆರ್.ಪೇಟೆ ತಾ 2) ಚಲುವರಾಜು ಬಿನ್ ನಾಗಯ್ಯ, 22 ವರ್ಷ, ವ್ಯವಸಾಯ, ಹೆರಗನಹಳ್ಳಿ ಗ್ರಾಮ ಬೂಕನಕೆರೆ ಹೋಬಳಿ, ಕೆ.ಆರ್.ಪೇಟೆ ತಾಲ್ಲೂಕು ರವರುಗಳು ಒಂದು ಗೂಡ್ಸ್ ಆಟೋವನ್ನು ತೆಗೆದುಕೊಂಡು ಹೋಗಲು ಪ್ರಯತ್ನಮಾಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ಅವರುಗಳನ್ನು ಹಿಡಿದು ಆಟೋ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಲಾಗಿ ಸದರಿ ಆಟೋ ಬಗ್ಗೆ ದಾಖಲಾತಿ ಇಲ್ಲದೇ ಇದ್ದು ನಕಲೀ ಕೀ ಬಳಸಿ ಮೈಸೂರು ಹತ್ತಿರ ಕಳ್ಳತನ ಮಾಡಿರುತ್ತೇವೆಂದು ತಿಳಿಸಿರುತ್ತಾರೆ. ನಂತರ ಆರೋಪಿತರನ್ನು ಠಾಣೆಗೆ ಕರೆದುಕೊಂಡು ಬಂದು ಅವರ ವಿರುದ್ದ ಪ್ರಕರಣ ದಾಖಲುಮಾಡಿ ಆರೋಪಿತರನ್ನು ವಿಚಾರಣೆಗೊಳಪಡಿದಾಗ ಆರೋಪಿತರು ಈಗ್ಗೆ ಮೂರು ದಿವಸಗಳ ಹಿಂದೆ ಮೈಸೂರು ಹತ್ತಿರ ರಾತ್ರಿ ವೇಳೆಯಲ್ಲಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಒಂದು 407 ಗೂಡ್ಸ್ ಟೆಂಪೋ ಮತ್ತು ನಂತರ ಕೆ.ಆರ್.ಎಸ್. ಬಳಿ ಒಂದು ಪಲ್ಸರ್ ಮೋಟಾರ್ ಸೈಕಲ್ ನ ಕೀ ಬಳಸಿ ಕಳ್ಳತನಮಾಡಿ ಆರೋಪಿತನಾದ ಚೆಲುವರಾಜು ರವರ ಹೆರಗನಹಳ್ಳಿ ಗ್ರಾಮದ ಮನೆಯಲ್ಲಿ ಮಾರಾಟಮಾಡಲು ನಿಲ್ಲಿಸಿರುತ್ತೇವೆಂದು ತಿಳಿಸಿರುತ್ತಾರೆ.
ಆರೋಪಿತರಿಂದ ಸುಮಾರು 7 ಲಕ್ಷ ರೂಪಾಯಿ ಬೆಲೆ ಬಾಳುವ 1) ನಂಬರ್ ಪ್ಲೇಟ್ ಇಲ್ಲದ ಗೂಡ್ಸ್ ಆಟೋ 2) ಕೆಎ-21-ಕೆ-72 ಪಲ್ಸರ್ ಮೋಟಾರ್ ಸೈಕಲ್ 3) ಕೆಎ-30-260 ನಂಬರಿನ 407 ಗೂಡ್ಸ್ ಟೆಂಪೋವನ್ನು ವಶಪಡಿಸಿಕೊಂಡಿರುತ್ತಾರೆ. ನಂತರ ಮೇಲ್ಕಂಡ ಆರೋಪಿಗಳನ್ನು ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.
PRESS NOTE
ಮಳವಳ್ಳಿ ಉಪವಿಭಾಗದ ಡಿ.ವೈ.ಎಸ್.ಪಿ ರವರಾದ ಹೆಚ್.ಆರ್. ಧರಣೇಂದ್ರರವರ ಮಾರ್ಗದರ್ಶನದಲ್ಲಿ, ಮಳವಳ್ಳಿ ಗ್ರಾಮಾಂತರ ವೃತ್ತದ ಸಿಪಿಐ ರವರಾದ ಹೆಚ್.ಕೆ.ಶಿವಸ್ವಾಮಿ ರವರ ನೇತೃತ್ವದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಅಪರಾದ ಪತ್ತೆ ದಳ ರಚಿಸಿ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ದಿನಾಂಕಃ13-02-2014 ರಂದು ಮಳವಳ್ಳಿ ಗ್ರಾಮಾಂತರ ವೃತ್ತದ ಸಿಪಿಐ ರವರಾದ ಹೆಚ್.ಕೆ.ಶಿವಸ್ವಾಮಿ ರವರು ಮಳವಳ್ಳಿ ಪುರ ಠಾಣೆ ಪಿಎಸ್ಐ ಎಸ್.ಸಂತೋಷ, ಮಳವಳ್ಳಿ ಗ್ರಾಮಾಂತರ ಠಾಣೆ ಪಿ.ಎಸ್.ಐ ಸುಬ್ಬಯ್ಯ ಹಾಗೂ ಸಿಬ್ಬಂದಿಯವರಾದ ಸಿಹೆಚ್ಸಿ-145 ಕೆ.ಕಷ್ಣಶೆಟ್ಟಿ, ಸಿ.ಪಿ.ಸಿ 697 ವಿ.ಎಸ್. ಪ್ರಕಾಶ್, ಸಿಪಿಸಿ-441 ಆರ್.ಪ್ರಭುಸ್ವಾಮಿ, ಸಿ.ಪಿ.ಸಿ.465 ಎಂ.ವೆಂಕಟೇಶ್, ಸಿಪಿಸಿ 158 ಎಸ್ಡಿ ಪ್ರದೀಪ್ಕುಮಾರ್, ಸಿ.ಪಿ.ಸಿ.735 ಎಸ್.ಲೋಕೇಶ್, ಸಿ.ಪಿ.ಸಿ 15 ಎಸ್.ರಾಘವೇಂದ್ರ ಹಾಗೂ ಜೀಪ್ ಚಾಲಕ ಸಿದ್ದರಾಜು ರವರ ಜೊತೆಯಲ್ಲಿ ಕಾಯರ್ಾಚರಣೆ ಮಾಡಿ ಬನ್ನೂರಿನಿಂದ ಮುಂದೆ ಮೈಸೂರು ಮುಖ್ಯ ರಸ್ತೆಯಲ್ಲಿರುವ ಕಾವೇರಿ ನದಿ ಸೇತುವೆ ಹತ್ತಿರ ಆರೋಪಿ ಮನು @ ಮನುಕುಮಾರ ಬಿನ್ ಲೇ:ವೆಂಕಟೇಶ್ @ ಹುಚ್ಚಯ್ಯ, ಗಣಂಗೂರು ಗ್ರಾಮ ಈತನನ್ನು ಹಾಗೂ ಈತನ ವಶದಲ್ಲಿದ್ದ ಬಜಾಜ್ ಪಲ್ಸರ್ ಮೋಟಾರ್ ಬೈಕ್ ನಂ ಕೆ.ಎ.11-ವೈ-8503 ಅನ್ನು ವಶಕ್ಕೆ ತೆಗೆದುಕೊಂಡು ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ವಿಚಾರಣಾ ವೇಳೆಯಲ್ಲಿ ಈತ ಬಾಗಿಯಾಗಿದ್ದ ಮಳವಳ್ಳಿ ಗ್ರಾಮಾಂತರ ವೃತ್ತ ವ್ಯಾಪ್ತಿಯ 3 ಘೋರ ಹಾಗೂ 5 ಅಘೋರ ಪ್ರಕರಣಗಳನ್ನು ಪತ್ತೆ ಹಚ್ಚಿ ಈತನಿಂದ ಸುಮಾರು 300 ಗ್ರಾಂ ತೂಕದ 8 ಚಿನ್ನದ ಸರಗಳನ್ನು ಹಾಗೂ ಒಂದು ಬಜಾಜ್ ಪಲ್ಸರ್ ಮೋಟಾರ್ ಬೈಕ್ನ್ನು ಅಮಾನತ್ತು ಪಡಿಸಿಕೊಂಡಿರುತ್ತದ.ೆ ಒಟ್ಟು ಅಂದಾಜು ಮೌಲ್ಯ ಸುಮಾರು 10 ಲಕ್ಷರೂಗಳಾಗಿರುತ್ತದೆ
ಈ ಮೇಲ್ಕಂಡ ಪ್ರಕರಣದ ಆರೋಫಿಗಳನ್ನು ಪತ್ತೆ ಮಾಡಿದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ .
PRESS NOTE OF K R PETE CIRCLE DTD : 06-02-2014
ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 06-02-2014
ಪತ್ರಿಕಾ ಪ್ರಕಟಣೆ
ಕೆ.ಆರ್.ಪೇಟೆ ತಾಲ್ಲೂಕಿನ ಕೊಟಗಹಳ್ಳಿ ಗ್ರಾಮದ ಬಳಿ ದುಗ್ಗನಹಳ್ಳಿ ಕಡೆ ಹೋಗುವ ರಸ್ತೆಯಲ್ಲಿ ಈಗ್ಗೆ ಏಳು ತಿಂಗಳ ಹಿಂದೆ ಸರಗಳ್ಳತನವಾಗಿದ್ದು ಹಾಗೂ ಈಗ್ಗೆ 4 ತಿಂಗಳ ಹಿಂದೆ ಕೆ.ಅರ್.ಪೇಟೆ ಟೌನ್ನ ಜಯನಗರ ಬಡಾವಣೆಯಲ್ಲಿ ಸರಗಳ್ಳತನವಾಗಿದ್ದು ಈ ಸಂಬಂಧ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು. ದಿನಾಂಕ: 05-04-2014 ರಂದು ಕೆ.ಆರ್.ಪೇಟೆ ಸಿ.ಪಿ.ಐರವರಾದ ಶ್ರೀ.ಕೆ.ರಾಜೇಂದ್ರರವರು ಗಸ್ತಿನಲ್ಲಿದ್ದಾಗ ಮೈಸೂರು ಕಡೆಯಿಂದ ಒಂದು ಮೋಟಾರ್ ಸೈಕಲನಲ್ಲಿ ಬರುತ್ತಿದ್ದ ಮೋಟಾರ್ ಸವಾರರನ್ನು ತಡೆದು ಪರಿಶೀಲಿಸಲಾಗಿ, ಸದರಿ ಆಸಾಮಿಗಳು ಸಮರ್ಪಕವಾದ ಉತ್ತರವನ್ನು ಮತ್ತು ವಾಹನದ ದಾಖಲಾತಿಗಳನ್ನು ಹಾಜರ್ಪಡಿಸದೆ ಅನುಮಾನಸ್ಪದವಾಗಿ ಕಂಡು ಬಂದಿದ್ದರಿಂದ, ಸದರಿಯವರುಗಳನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರ ಮಾಡಲಾಗಿ ಮೇಲ್ಕಂಡ ಪ್ರಕರಣಗಳನ್ನು ಎಸಗಿರುವ ಸ್ವ-ಇಚ್ಚಾ ಹೇಳಿಕೆಯಲ್ಲಿ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿಗಳಿಂದ ಒಟ್ಟು 56 ಗ್ರಾಂನ ಎರಡು ಚಿನ್ನದ ಚೈನುಗಳನ್ನು ಅಮಾನತ್ಪಡಿಸಿರುತ್ತೆ. ಇವುಗಳ ಬೆಲೆ 1,57,000/- ರೂ ಆಗಿರುತ್ತೆ.
ಈ ಪ್ರಕರಣವನ್ನು ಮಾನ್ಯ ಶ್ರೀರಂಗಪಟ್ಟಣ ಅರಕ್ಷಕ ಉಪ ಪೊಲೀಸ್ ಅದಿಕ್ಷಕರಾದ ಶ್ರೀಮತಿ ಎಂ.ಎಸ್. ಗೀತಾ ರವರ ಮಾರ್ಗದರ್ಶನದಲ್ಲಿ ಕೆ.ಅರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಕೆ. ರಾಜೇಂದ್ರ ರವರು ಮತ್ತು ಆರಕ್ಷಕ ಉಪ ನಿರೀಕ್ಷಕರಾದ ಎಂ.ಶಿವಕುಮಾರ್ ಮತ್ತು ಡಿ.ಪಿ. ದನರಾಜ್ ಮತ್ತು ಮುಖ್ಯ ಪೇದೆಗಳಾದ ಮಹದೇವಯ್ಯ, ಶಿವಣ್ಣ, ಸಿಬ್ಬಂದಿಗಳಾದ ಕೃಷ್ಣೇಗೌಡ, ಪ್ರಶಾಂತ್ ಕುಮಾರ್, ಶತ್ರುಜ್ಞಾ, ರವಿ, ಚಾಲಕ ಕೆ.ಜೆ. ಲೋಕೇಶ್ ಇವರುಗಳ ಕಾರ್ಯವನ್ನು ಅವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.
PRESS NOTE DTD : 06-02-2014
ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 06-02-2014
ಪತ್ರಿಕಾ ಪ್ರಕಟಣೆ
ಮಂಡ್ಯ ಗ್ರಾಮಾಂತರ ಮತ್ತು ಮಂಡ್ಯ ನಗರ ಪೊಲೀಸರ ಕಾರ್ಯಚರಣೆ, ದೇವಸ್ಥಾನ ಕಳವು ಹಾಗೂ ಸರಕಳ್ಳತನ ಸೇರಿದಂತೆ 52 ಪ್ರಕರಣಗಳ ಪತ್ತೆ.
ಮಂಡ್ಯ ಜಿಲ್ಲೆಯ ಹೊಳಲು, ಮಂಡ್ಯ ಕೊಪ್ಪಲು ಹಾಗೂ ಮಂಡ್ಯ ನಗರ, ಅರಕೆರೆ, ಬೆಸಗರಹಳ್ಳಿ, ಮೇಲುಕೋಟೆ ವಿವಿದೆಡೆಗಳಲ್ಲಿ ವರದಿಯಾಗಿದ್ದ ಹಲವು ದೇವಸ್ಥಾನ ಹಾಗೂ ಸರಕಳ್ಳತನ ಪ್ರಕರಣಗಳ ಪತ್ತೆ ಬಗ್ಗೆ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ. ಲೋಕೇಶ್ ಮತ್ತು ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ. ಹರೀಶ್ಬಾಬು ರವರನ್ನೊಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ಡಿಎಸ್ಪಿ, ಮಂಡ್ಯ ಉಪವಿಬಾಗ ರವರ ನೇತೃತ್ವದಲ್ಲಿ ನೇಮಿಸಲಾಗಿತ್ತು. ಸದರಿ ತಂಡಗಳ 2-3 ದಿನಗಳ ಸತತ ಪ್ರಯತ್ನದಿಂದ ಒಟ್ಟು 14 ಜನ ಆರೋಪಿಗಳನ್ನು ಬಂದಿಸಿದ್ದು, ಒಟ್ಟು 52 ಪ್ರಕರಣಗಳ ಪತ್ತೆಯಾಗಿರುತ್ತವೆ. ಸದರಿ ಆರೋಪಿಗಳಿಂದ ಈ ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
1] 422.5 ಗ್ರಾಂ ಚಿನ್ನಾಬರಣಗಳು. 330 ಗ್ರಾಂ ಬೆಳ್ಳಿ. ಒಟ್ಟು ಮೌಲ್ಯ ಸುಮಾರು 13 ಲಕ್ಷ ರೂಗಳು.
3] ಎರಡು ನೋಕಿಯಾ ಕಂಪನಿಯ ಮೊಬೈಲ್ಗಳು
4] ದೇವಸ್ಥಾನ ಹುಂಡಿಯ ಸುಮಾರು 10, 000 ರೂ ಹಣ.
5] ಕೃತ್ಯಕ್ಕೆ ಬಳಸಿದ ನಾಲ್ಕು ದ್ವಿಚಕ್ರ ವಾಹನಗಳು
ಮೇಲ್ಕಂಡ 52 ಪ್ರಕರಣಗಳಲ್ಲಿ ಒಟ್ಟು ಹತ್ತು ಸರಗಳ್ಳತನ ಪ್ರಕರಣಗಳು, ಅರಕರೆ ಮತ್ತು ಹೊಳಲುವಿನಲ್ಲಿ ನಡೆದ 02 ಡಕಾಯಿತಿ ಪ್ರಕರಣಗಳು ಸಹ ಪತ್ತೆಯಾಗಿರುತ್ತವೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅದಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.
Subscribe to:
Posts (Atom)




.jpg)


