Moving text

Mandya District Police

Detection in S R PATNA POLICE STATION

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
  ಮಂಡ್ಯಜಿಲ್ಲೆ. ಮಂಡ್ಯ 
ದಿನಾಂಕಃ 30-03-2012 

ಪತ್ರಿಕಾ ಪ್ರಕಟಣೆ

ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿ,  ಬಾಬುರಾಯನಕೊಪ್ಪಲಿನಲ್ಲಿ ಇತ್ತೀಚಗೆ ಲಾರಿಯ ಕಳ್ಳತನವಾಗುತ್ತಿದ್ದು ಈ ಲಾರಿಗಳು ಕಳ್ಳತನವಾದ 2-3 ದಿನಗಳಲ್ಲಿ ಕೊಳ್ಳೇಗಾಲ,  ಸಂತೆಮರಳ್ಳಿ, ಚಾಮರಾಜನಗರಗಳ ಕಡೆ ಕಾಡು ರಸ್ತೆಗಳಲ್ಲಿ ಚಕ್ರಗಳನ್ನು ಬಿಚ್ಚಿಕೊಂಡು ಅಲ್ಲಿಯೇ ನಿಲ್ಲಿಸಿ, ಕಳ್ಳರು ಹೋರಟು ಹೋಗುತ್ತಿದ್ದರೆಂದು, ಈ ಸಂಬಂಧವಾಗಿ ಲಾರಿಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಪತ್ತೆ ಬಗ್ಗೆ ಶ್ರೀರಂಗಪಟ್ಟಣ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಎ.ವಿ.ವೆಂಕಟೇಶ ಮೂತರ್ಿರವರ ನೇತೃತ್ವದಲ್ಲಿ ಪಿ.ಎಸ್.ಐ ವೆಂಕಟರಾಮಪ್ಪ ಮತ್ತು ಸಿಬ್ಬಂದಿಗಳಾದ ಸಿ.ಪಿ.ಸಿ-01 ಸಿದ್ದರಾಜು, 471- ಕೆ.ಶ್ರೀನಿವಾಸಮೂತರ್ಿ, 633-ಕೃಷ್ಣಶೆಟ್ಟಿ, 638-ಪ್ರಕಾಶರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ದಿನಾಂಕಃ 26-03-12 ರಂದು ಬಾಬುರಾಯನಕೊಪ್ಪಲಿನಲ್ಲಿ ಬೆಳಿಗ್ಗೆ 1030 ಗಂಟೆಯಲ್ಲಿ     ಕೆ.ಎ-16-ಎ-8449 ಲಾರಿಯು ಕಳ್ಳತನವಾಗಿದ್ದು, ಇದರ ಪತ್ತೆ ಬಗ್ಗೆ ಪಿ.ಎಸ್.ಐ, ಶ್ರೀರಂಗಪಟ್ಟಣ ಮತ್ತು ಸಿಬ್ಬಂದಿಗಳನ್ನು ನೇಮಿಸಿ ಕಳುಹಿಸಿದ್ದು ದಿನಾಂಕ-29-03-2012 ರಂದು ಬೆಳಿಗ್ಗೆ 06-30 ಗಂಟೆಯಲ್ಲಿ ಲಾರಿ ಮತ್ತು ಆರೋಪಿಗಳನ್ನು ತಲಾಸು ಮಾಡಿಕೊಂಡು ಹೋಗಿದ್ದ ಸಿಬ್ಬಂದಿಯವರಿಗೆ ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಬಳಿಯ ಹುಲ್ಲೇಪುರ ಗ್ರಾಮದ ಬಳಿ ಆರೋಪಿಗಳು ಟೈರ್ಗಳನ್ನು ಬಿಚ್ಚುತ್ತಿದ್ದು ಕಂಡು ಬಂದಿದ್ದು, ಕೂಡಲೇ ಆರೋಪಿಗಳನ್ನು ಅದಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದು,  ಆರೋಪಿಗಳ ಹೆಸರು 1] ದೊರೆಸ್ವಾಮಿ ಬಿನ್ ಲೇಟ್ ಸುಬ್ಬಯ್ಯ, 50 ವರ್ಷ, ವ್ಯವಸಾಯ, ವಾಸ-ಹುಲ್ಲೇಪುರ ಗ್ರಾಮ, ಚಾಮರಾಜನಗರ ತಾಲ್ಲೋಕು & ಜಿಲ್ಲೆ. 2] ನಟರಾಜ ಬಿನ್ ಲೇಟ್ ಲೆಂಕಶೆಟ್ಟಿ, 26 ವರ್ಷ, ಕೂಲಿ ಕೆಲಸ, ವಾಸ- ಮಹಂತಾಳಪುರ ಗ್ರಾಮ, ಸಂತೆಮರಳ್ಳಿ ಹೋಬಳಿ, ಚಾಮರಾಜನಗರ ಜಿಲ್ಲೆ ಎಂದು ತಿಳಿಸಿದ್ದು, ಅವರ ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿಸಿ ರಮೇಶ ಎಂಬುವವನು ತಪ್ಪಿಸಿಕೊಂಡು ಹೋಗಿರುತ್ತಾನೆ. 

     ಇವರನ್ನು  ಪಿ.ಎಸ್.ಐ ರವರು ವಿಚಾರ ಮಾಡಲಾಗಿ ಆರೋಪಿಗಳು ಲಾರಿಯನ್ನು ತಾವೇ ಕಳ್ಳತನ ಮಾಡಿ, ಟೈರ್ ಗಳನ್ನು ಬಿಚ್ಚುತ್ತಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳನ್ನು ಲಾರಿ ಸಮೇತ ಶ್ರೀರಂಗಪಟ್ಟಣ ಠಾಣೆಗೆ ಕರೆದುಕೊಂಡು ಬಂದು ಸಿ.ಪಿ.ಐ ವೆಂಕಟೇಶ ಮೊರ್ತಿರವರ ಮುಂದೆ ಹಾಜರುಪಡಿಸಿದ್ದು, ಸಿ.ಪಿ.ಐರವರು ಕೂಲಂಕುಶವಾಗಿ ವಿಚಾರ ಮಾಡಲಾಗಿ ಆರೋಪಿಗಳು ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಈವರೆಗೆ ಕಳ್ಳತನವಾಗಿ ಶ್ರೀರಂಗಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಖ್ಯೆಃ 328/11, 545/11, 605/11, 640/11, 159/12, 189/12  ರ ಒಟ್ಟು 6 ಪ್ರಕರಣಗಳಲ್ಲಿ ಕಳುವಾಗಿರುವ ಲಾರಿಗಳನ್ನು ಕಾಡಿಗೆ ಹೋಗುವ ರಸ್ತೆಗಳಲ್ಲಿ ತೆಗೆದುಕೊಂಡು ಹೋಗಿ ಅವುಗಳ ಚಕ್ರಗಳನ್ನು ಬಿಚ್ಚಿಕೊಂಡು ಅಲ್ಲಿಯೇ ನಿಲ್ಲಿಸುತ್ತಿದ್ದರೆಂದು ತಮ್ಮ ಸ್ವ-ಇಚ್ಚಾ ಹೇಳಿಕೆಯ ಕಾಲದಲ್ಲಿ  ತಿಳಿಸಿರುತ್ತಾರೆ. 

ಮೇಲ್ಕಂಡ 5 ಪ್ರಕರಣಗಳಲ್ಲಿ ಈಗಾಗಲೇ ಲಾರಿಗಳು ಕೊಳ್ಳೇಗಾಲ ಮತ್ತು ಸುತ್ತ ಮುತ್ತ ಕಾಡಿಗೆ ಹೋಗುವ ರಸ್ತೆಗಳಲ್ಲಿ 3-4 ಚಕ್ರವಿಲ್ಲದೇ ನಿಂತಿದ್ದವುಗಳನ್ನು ಪತ್ತೆ ಹಚ್ಚಿ ಸ್ಥಳೀಯ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 

ಆರೋಪಿಗಳಿಂದ 1] ಒಂದು ಕೆ.ಎ-16-ಎ-8449 ಲಾರಿ 2] 15 ಡಿಸ್ಕ್ ಸಹಿತ ಇರುವ ಚಕ್ರಗಳು 3] 2 ಟಾರ್ಪಲ್ 4] ಒಂದು ಜಾಕ್ ಮತ್ತು ರಾಡು 5] 2 ಹಗ್ಗಗಳು ಇವುಗಳನ್ನು ಆರೋಪಿ ದೊರೆಸ್ವಾಮಿಯ ಮನೆಯಲ್ಲಿ ಅಡಗಿಸಿಟ್ಟಿದ್ದು ಅವುಗಳನ್ನು ಪೊಲೀಸ್ ಅದಿಕಾರಿಗಳು ಅಮಾನತ್ತುಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 10,50,000/- ರೂಗಳಾಗಿರುತ್ತೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದೀಕ್ಷಕರಾದ ಶ್ರೀ. ಕೌಶಲೇಂದ್ರಕುಮಾರ್, ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.

Detection of Kidnapped Engineer case from Pandavapura PS Police

               ಪೊಲೀಸ್ ಸೂಪರಿಂಟೆಂಡೆಂಡ್ ರವರ ಕಛೇರಿ
                                  ಮಂಡ್ಯಜಿಲ್ಲೆ. ಮಂಡ್ಯ 
                                    ದಿನಾಂಕಃ 29-03-2012 

                                                                    ಪತ್ರಿಕಾ ಪ್ರಕಟಣೆ.

     ಬೆಂಗಳೂರಿನ ಮೆಟ್ರೋದಲ್ಲಿ ಡೆಪ್ಯೂಟಿ ಚೀಪ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ. ಕೆ.ಆರ್ ಶಿವಾನಂದ ಬಿನ್ ರಾಮಪ್ಪ, 44 ವರ್ಷ ಎಂಬುವವರ ಅಪಹರಣವನ್ನು ಮಂಡ್ಯ ಜಿಲ್ಲಾ ಪೊಲೀಸರು ಚಾಕಚಕ್ಯತೆಯಿಂದ ಪತ್ತೆ ಹಚ್ಚಿ ಅವರ ಪ್ರಾಣ ರಕ್ಷಣೆ ಮಾಡಿರುವ ಬಗ್ಗೆ.

     ಶ್ರೀ. ಕೆ.ಆರ್ ಶಿವಾನಂದ ಬಿನ್ ರಾಮಪ್ಪ, 44 ವರ್ಷ, ಮೆಟ್ರೋದಲ್ಲಿ ಡೆಪ್ಯೂಟಿ ಚೀಪ್ ಇಂಜಿನಿಯರ್. ಬೆಂಗಳೂರು ರವರು ದಿನಾಂಕಃ 28/03/2012 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ಬೆಂಗಳೂರಿನ ಶಾಂತಿನಗರದ ಮೆಟ್ರೋ ರೈಲ್ ಕಾರ್ಪೊ ರೇಷನ್ ಲಿಮಿಟೆಡ್  ಕಛೇರಿಯ ಕಾರ್ ಪಾರ್ಕಿಂಗ್ ಬಳಿ ಟಾಟಾ ಇಂಡಿಕಾ ಕಾರ್ ಕೆ.ಎ-50-2011 ನ್ನು ಹತ್ತಿದಾಗ ಅದರಲ್ಲಿ ಇಬ್ಬರು ಆರೋಪಿತರು ಕುಳಿತುಕೊಂಡಿದ್ದು ನಂತರ ಮತೋಬ್ಬ ವ್ಯಕ್ತಿ ಕಾರಿಗೆ ಹತ್ತಿಕೊಂಡು, ಚಾಲಕ ಜಯಂತ್ ಎಂಬುವವನೊಂದಿಗೆ ಸೇರಿಕೊಂಡು ಕೆ.ಅರ್. ಶಿವಾನಂದ ರವರನ್ನು ಅಲ್ಲಿಂದ ಅಪಹರಣ ಮಾಡಿ ಹಣ ಸುಲಿಗೆ ಮಾಡುವ ಸಲುವಾಗಿ, ಅವರ ಕೈ ಮತ್ತು ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ಬಿಗಿದು ಹಲ್ಲೆ ಮಾಡಿ, ಬೆಂಗಳೂರಿನಿಂದ ಹೊರಟು ಮೈಸೂರು ರಸ್ತೆಯಲ್ಲಿ ಸಂಚರಿಸಿ ಅವರ ಬಳಿ ಇದ್ದ ಚಿನ್ನಾಭರಣ, ನಗದು ಹಣ ಹಾಗೂ ಬ್ಯಾಂಕ್ನ ಎ.ಟಿ.ಎಂ ಕಾರ್ಡ್ ಗಳನ್ನು ಸುಲಿಗೆ ಮಾಡಿ ಪ್ರಾಣ ಬೆದರಿಕೆ ಹಾಕಿ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿ ಅದೇ ಕಾರಿನಲ್ಲಿ ಸಂಚರಿಸುತ್ತಿರುವಾಗ ಪಾಂಡವಪುರ ರೈಲ್ವೆ ಸ್ಟೇಷನ್ ಬಳಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಪಾಂಡವಪುರದ ಪೊಲೀಸರು ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಆರೋಪಿಗಳು ವಾಹನವನ್ನು ನಿಲ್ಲಿಸದೇ ಮುಂದೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ಕೂಡಲೇ ಚೆಕ್ ಪೋಸ್ಟ್ನ ಪೊಲೀಸ್ ಸಿಬ್ಬಂದಿಗಳು ಮುಂದಿನ ಚೆಕ್ಪೋಸ್ಟ್ಗಳಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ವಾಹನದ ಬಗ್ಗೆ ಮಾಹಿತಿ ನೀಡಿದ್ದು ಪಾಂಡವಪುರ - ಮೇಲುಕೋಟೆ ಮುಖ್ಯ ರಸ್ತೆಯ ಜಕ್ಕನಹಳ್ಳಿ ಚೆಕ್ ಪೋಸ್ಟ್ ಬಳಿ ಬೆಳಗಿನ ಜಾವ 2-30 ಗಂಟೆಗೆ ಅಲ್ಲಿನ ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಈ ವಾಹನವನ್ನು ಪರಿಶ್ರಮ ಹಾಗೂ ಚಾಕಚಕ್ಯತೆಯಿಂದ ತಡೆದು, ಪರಿಶೀಲನೆ ಮಾಡಿ ಕಾರಿನಲ್ಲಿದ್ದ ಆರೋಪಿ ಕಲ್ಯಾಣ್ಕುಮಾರ್ ಬಿನ್ ಬಸವರಾಜು, 24ವರ್ಷ, ಕೊಪ್ಪಳ ಈತನನ್ನು ವಶಕ್ಕೆ ತೆಗೆದುಕೊಂಡು ಅಪಹರಣಕ್ಕೊಳಗಾಗಿದ್ದ ಇಂಜಿನಿಯರ್ ಶ್ರೀ. ಕೆ.ಆರ್. ಶಿವಾನಂದ ರವರನ್ನು ರಕ್ಷಣೆ ಮಾಡಿರುತ್ತಾರೆ. ಇನ್ನುಳಿಕೆ ಮೂರು ಜನ ಆರೋಪಿಗಳು ಕಾರಿನಿಂದ ಕತ್ತಲೆಯಲ್ಲಿ ತಪ್ಪಿಸಿಕೊಂಡು ಹೋಗಿರುತ್ತಾರೆ.  

     ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು, ಎರಡು ಬ್ಲೇಡ್ ಕಟರ್ ಗಳು , ವೈರ್ ಹಾಗೂ ಸುಲಿಗೆ ಮಾಡಿದ್ದ ಎ.ಟಿ.ಎಂ. ಕಾರ್ಡ್, ಚೆಕ್ ಗಳನ್ನು ಮೇಲುಕೋಟೆ ಪೊಲೀಸರು ವಶಪಡಿಸಿಕೊಂಡು, ಮೆಲ್ಕಂಡ ಇಂಜಿನಿಯರ್ ಕೆ.ಆರ್. ಶಿವಾನಂದ್ ರವರು ನೀಡಿದ ಪಿರ್ಯಾದಿ ನ ಮೇರೆಗೆ ಅಪಹರಣ ಮತ್ತು ಸುಲಿಗೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಕೈಗೊಂಡು, ಅವರಿಗೆ ಕೂಡಲೇ ಚಿಕಿತ್ಸೆಯನ್ನು ಕೊಡಿಸಲಾಗಿರುತ್ತದೆ. ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. 

     ವಿಷಯ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ಅದಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ಈ ಅಪಹರಣ ಪ್ರಕರಣವನ್ನು ಕ್ಷಣಾರ್ದದಲ್ಲಿ ಶ್ರಮವಹಿಸಿ ಪತ್ತೆ ಹಚ್ಚಿದ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯವರನ್ನು ಪ್ರಶಂಸಿರುತ್ತಾರೆ.   

Keragodu PS Cr.No. 50/2012 u/s 302-201 IPC

     ಪೊಲೀಸ್ ಸೂಪರಿಂಟೆಂಡೆಂಟ್  ರವರ ಕಛೇರಿ
ಮಂಡ್ಯಜಿಲ್ಲೆ. ಮಂಡ್ಯ 
  ದಿನಾಂಕಃ 28-03-2012 
                                 
                                                 ಪತ್ರಿಕಾ ಪ್ರಕಟಣೆ.
 
            ಕೆರಗೋಡು ಪೊಲೀಸ್ ಠಾಣಾ ಮೊ.ಸಂ  50/2012 ಕಲಂ 302-201 ಐಪಿಸಿ.

      ದಿನಾಂಕಃ21-3-2012 ರ ಬೆಳಿಗ್ಗೆ 8-30 ಗಂಟೆಯಲ್ಲಿ ಕೆ.ಗೌಡಗೆರೆಯ ಶಿವರಾಮುರವರ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಒಂದು ಗಂಡಸಿನ ಸುಮಾರು 26ವರ್ಷ ಪ್ರಾಯದ ಶವ ತೇಲುತ್ತಿದ್ದು.  ಶವದ ಎರಡು ಕಾಲುಗಳನ್ನು ಕಲ್ಲು ಸೇರಿಸಿ ಕಟ್ಟಿದ್ದು ತಲೆಯ ಭಾಗದಿಂದ ಪ್ಲಾಸ್ಟಿಕ್ ಕವರಿಗೆ ಕಲ್ಲು ಸೇರಿಸಿ ಹಾಕಿ ಕಟ್ಟಿದ್ದು ಶವದ ತಲೆಯಲ್ಲಿ , ಬಲ ಕೆನ್ನೆಯಲ್ಲಿ, ಕುತ್ತಿಗೆಯಲ್ಲಿ ಹರಿತವಾದ ರಕ್ತಗಾಯಗಳಿದ್ದು , ಮೃತನು ಎಸ್.ಐ.ಕೋಡಿಹಳ್ಳಿಯ ಶಿವಣ್ಣರವರ ಮಗ ಕೆ.ಎಸ್.ಸುನೀಲ್ ಆಗಿದ್ದು.  ಈತನನ್ನು ಯಾರೋ ದುಷ್ಕಮರ್ಿಗಳು ಯಾವುದೋ ದ್ವೇಷದಿಂದ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಬಾವಿ ನೀರಿಗೆ ಹಾಕಿ ಮೃತನ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿದ್ದು.  ಈ ಬಗ್ಗೆ ಬಿ.ಎಸ್.ಕಾಂತರವರು ಕೊಟ್ಟ ದೂರಿನ ಮೇರೆಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆಯ ಕೈಗೊಳ್ಳಲಾಯಿತು.

   ಈ ಕೇಸಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಸಿಪಿಐ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ  ಒಂದು ತಂಡವನ್ನು ರಚಿಸಲಾಗಿತ್ತು. ಈ ತಂಡವು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಕೊಲೆಯ ಆರೋಪಿಗಳಾದ 1. ರವಿ 2. ವರದರಾಜು 3. ಮಹೇಶ ರವರುಗಳನ್ನು ದಿಃ26-03-2012 ರಂದು ಬಂಧಿಸಿ ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ಪುರಾವೆಗಳನ್ನು ಸಂಗ್ರಹಿಸಿ ಮೃತ ಸುನೀಲನಿಂದ ತೆಗೆದುಕೊಂಡು ಹೋಗಿದ್ದ 60,000=00 ಬೆಲೆ ಬಾಳುವ ಹೊಸ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನು ಅಮಾನತ್ತುಪಡಿಸಿರುತ್ತಾರೆ.  

   ಈ ತಂಡದಲ್ಲಿ ಸಿಪಿಐ ಕೃಷ್ಣಮೂರ್ತಿ ರವರು ಮಂಡ್ಯ ಗ್ರಾಮಾಂತರ ವೈತ್ತ ಹಾಗು ಎ.ಎಸ್.ಐ. ಜಾರ್ಜ್ ವಿಲ್ಸನ್, ಸಿಬ್ಬಂದಿಗಳಾದ ರಮೇಶ್, ಚಿಕ್ಕಯ್ಯ, ಬಾಲಾಜಿ,  ಪ್ರದೀಪ್ಕುಮಾರ್, ಮರಿಯಪ್ಪ ಆರ್.ಬ್ಯಾಳಿ, ರಾಘವೇಂದ್ರ ಇಂಗಳಗಿ, ಶ್ರೀರಾಮ, ಸೋಮಶೇಖರ ರವರು ಕಾರ್ಯ ನಿರ್ವಹಿಸಿದ್ದು.  ಇವರ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಸಂಶಿಸಿ ಮೆಚ್ಚಿ ಬಹುಮಾನ ಘೋಷಿಸಿರುತ್ತಾರೆ. 

Mandya Rural PS Cr.No.50/2012 u/s 302-201 IPC

A-1. Ravi.  A-2 Varadaraju.               Deceased K.S.Sunil s/o Shivanna
                                                A-3.Mahesha                                        S.I. Kodihalli, Mandya

Mandya Rural PS Cr.No.50/2012 u/s 302-201 IPC

             ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
           ಮಂಡ್ಯಜಿಲ್ಲೆ. ಮಂಡ್ಯ 
ದಿನಾಂಕಃ 28-03-2012 
        
                                                                                 ಪತ್ರಿಕಾ ಪ್ರಕಟಣೆ.
 
                                      ಕೆರಗೋಡು ಪೊಲೀಸ್ ಠಾಣಾ ಮೊ.ಸಂ  50/2012 ಕಲಂ 302-201 ಐಪಿಸಿ

      ದಿನಾಂಕಃ21-3-2012 ರ ಬೆಳಿಗ್ಗೆ 8-30 ಗಂಟೆಯಲ್ಲಿ ಕೆ.ಗೌಡಗೆರೆಯ ಶಿವರಾಮುರವರ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಒಂದು ಗಂಡಸಿನ ಸುಮಾರು 26ವರ್ಷ ಪ್ರಾಯದ ಶವ ತೇಲುತ್ತಿದ್ದು.  ಶವದ ಎರಡು ಕಾಲುಗಳನ್ನು ಕಲ್ಲು ಸೇರಿಸಿ ಕಟ್ಟಿದ್ದು ತಲೆಯ ಭಾಗದಿಂದ ಪ್ಲಾಸ್ಟಿಕ್ ಕವರಿಗೆ ಕಲ್ಲು ಸೇರಿಸಿ ಹಾಕಿ ಕಟ್ಟಿದ್ದು ಶವದ ತಲೆಯಲ್ಲಿ , ಬಲ ಕೆನ್ನೆಯಲ್ಲಿ, ಕುತ್ತಿಗೆಯಲ್ಲಿ ಹರಿತವಾದ ರಕ್ತಗಾಯಗಳಿದ್ದು , ಮೃತನು ಎಸ್.ಐ.ಕೋಡಿಹಳ್ಳಿಯ ಶಿವಣ್ಣರವರ ಮಗ ಕೆ.ಎಸ್.ಸುನೀಲ್ ಆಗಿದ್ದು.  ಈತನನ್ನು ಯಾರೋ ದುಷ್ಕಮರ್ಿಗಳು ಯಾವುದೋ ದ್ವೇಷದಿಂದ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಬಾವಿ ನೀರಿಗೆ ಹಾಕಿ ಮೃತನ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿದ್ದು.  ಈ ಬಗ್ಗೆ ಬಿ.ಎಸ್.ಕಾಂತರವರು ಕೊಟ್ಟ ದೂರಿನ ಮೇರೆಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆಯ ಕೈಗೊಳ್ಳಲಾಯಿತು.

   ಈ ಕೇಸಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಸಿಪಿಐ ಕೃಷ್ಣಮೂರ್ತಿರವರ ನೇತೃತ್ವದಲ್ಲಿ  ಒಂದು ತಂಡವನ್ನು ರಚಿಸಲಾಗಿತ್ತು. ಈ ತಂಡವು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಕೊಲೆಯ ಆರೋಪಿಗಳಾದ 1. ರವಿ 2. ವರದರಾಜು 3. ಮಹೇಶ ರವರುಗಳನ್ನು ದಿಃ26-03-2012 ರಂದು ಬಂಧಿಸಿ ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ಪುರಾವೆಗಳನ್ನು ಸಂಗ್ರಹಿಸಿದ್ದು, ಆರೋಪಿ-2 ವರದರಾಜುವಿನ ಪತ್ನಿಯೊಡನೆ ಮೃತ ಸುನೀಲ್ ಅನೈತಿಕ ಸಂಬಂಧ ಹೊಂದಿದ್ದನೆಂಬ ಸಂಶಯದ ಮೇಲೆ ಕೊಲೆ ಮಾಡಿರುತ್ತಾರೆ. ಮೃತ ಸುನೀಲನಿಂದ ತೆಗೆದುಕೊಂಡು ಹೋಗಿದ್ದ 60,000=00 ಬೆಲೆ ಬಾಳುವ ಹೊಸ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನು ಅಮಾನತ್ತುಪಡಿಸಿರುತ್ತಾರೆ.  

   ಈ ತಂಡದಲ್ಲಿ ಸಿಪಿಐ ಕೃಷ್ಣಮೂತರ್ಿರವರ ಮಂಡ್ಯ ಗ್ರಾಮಾಂತರ ವೈತ್ತ ಹಾಗು ಎ.ಎಸ್.ಐ. ಜಾರ್ಜ್ ವಿಲ್ಸನ್, ಸಿಬ್ಬಂದಿಗಳಾದ ರಮೇಶ್, ಚಿಕ್ಕಯ್ಯ, ಬಾಲಾಜಿ,  ಪ್ರದೀಪ್ಕುಮಾರ್, ಮರಿಯಪ್ಪ ಆರ್.ಬ್ಯಾಳಿ, ರಾಘವೇಂದ್ರ ಇಂಗಳಗಿ, ಶ್ರೀರಾಮ, ಸೋಮಶೇಖರ ರವರು ಕಾರ್ಯ ನಿರ್ವಹಿಸಿದ್ದು.  ಇವರ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಸಂಶಿಸಿ ಮೆಚ್ಚಿ ಬಹುಮಾನ ಘೋಷಿಸಿರುತ್ತಾರೆ. 

Press Note Dated 03-03-2012

ಪೊಲೀಸ್ ಸೂಪರಿಂಟೆಂಡೆಂಟ್ ರವ ರವರ ಕಛೇರಿ

ಮಂಡ್ಯ ಜಿಲ್ಲೆ. ಮಂಡ್ಯ. ದಿಃ 03-03-2012

ಪತ್ರಿಕಾ ಪ್ರಕಟಣೆ

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದಿಂದ 3 ಮಂದಿ ಆರೋಪಿಗಳ ಬಂಧನ, ಇವರುಗಳಿಂದ 50,000-00 ರೂ ಮೌಲ್ಯದ ಚಿನ್ನದ ಮಾಂಗಲ್ಯ ಸರ, ನಗದು ಹಣ 50,000-00 ರೂಗಳ ವಶ

ಮಂಡ್ಯ ಉಪ-ವಿಭಾಗದ ಅಪರಾದ ಪತ್ತೆ ದಳದವರು ದಿನಾಂಕಃ 01-03-2012 ರಂದು ಮಂಡ್ಯ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗಸ್ತಿನಲ್ಲಿದ್ದಾಗ 3 ಜನ ಆಸಾಮಿಗಳು ಬಸ್ ಪ್ರಯಾಣಿಕರಂತೆ 2-3 ಬಸ್ಸಿಗೆ ಹತ್ತಿ ಇಳಿಯುತ್ತಿದ್ದವರ ಮೇಲೆ ಅನುಮಾನ ಬಂದು ವಶಕ್ಕೆ ತೆಗೆದುಕೊಂಡು ಬಂದು ವಿಚಾರಣೆಗೊಳಪಡಿಸಲಾಗಿ ಈಗ್ಗೆ ಸುಮಾರು 2 ತಿಂಗಳ ಹಿಂದೆ ಮಂಡ್ಯ ರೈಲ್ವೇ ಸ್ಟೇಷನ್ನಲ್ಲಿ ಬೆಂಗಳೂರು ಕಡೆಗೆ ಹೋಗಲು ಟ್ರೈನ್ ಹತ್ತುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ 1 ವರ್ಷದ ಹಿಂದೆ ಮಂಡ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೈಸೂರಿಗೆ ಹೋಗಲು ಬಸ್ ಹತ್ತುತ್ತಿದ್ದ ಆಸಾಮಿಯ ಪ್ಯಾಂಟ್ ಜೇಬಿನಲ್ಲಿದ್ದ 2 ಲಕ್ಷರೂಗಳನ್ನು ಕಳುವು ಮಾಡಿದ್ದು ಈ ಪೈಕಿ ಹಣವನ್ನು ಖರ್ಚು ಮಾಡಿಕೊಂಡು ಉಳಿದಿದ್ದ 50,000 ರೂಗಳನ್ನು ಹಾಗೂ ಒಂದು ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 1 ಲಕ್ಷ ರೂ ಆಗಿರುತ್ತೆ.

ಆರೋಪಿಗಳ ಹೆಸರು-ವಿಳಾಸ

1] ಅಸ್ಲಂಪಾಷ @ ಅಸ್ಲಂ,ಬಿನ್ ಸೈಯದ್ ಪಾಷ, 38 ವರ್ಷ, ಆಟೋ ಚಾಲಕ, ವಾಸ ಕೇರಾಫ್ ಸಾಮಿದಾ ಬೇಗಂ, ಪುಲಿಕೇಶಿ ರಸ್ತೆ ಕೈಲಾಸ್ ಪುರಂ, ಕನ್ನಡ ಸ್ಕೂಲ್ ಹಿಂಬಾಗ ಮೈಸೂರು ಸಿಟಿ,

2] ಮುಕ್ರಂ ಬಿನ್ ಗೌಸ್ ಅಹಮದ್, 28 ವರ್ಷ, ಮುಸ್ಲಿಂ, ಪೈಂಟ್ ಕೆಲಸ, ಬೀಡಿ ಕಾಲೋನಿ ಹತ್ತಿರ, 5 ನೇ ಬ್ಲಾಕ್, ಚಾಮರಾಜನಗರ ಟೌನ್,

3] ಜಾಕೀರ್ ಬಿನ್ ಲೇ|| ಷರೀಫ್ ಅಹಮದ್, 32 ವರ್ಷ, ಮುಸ್ಲಿಂ, ಸ್ಟೀಮ್ ಇಟ್ಟಿಗೆ ಕೆಲಸ, ನಂ 170, 6 ನೇ ಕ್ರಾಸ್, ಗಾಳಿಪುರ, ಚಾಮರಾಜನಗರ ಟೌನ್

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ ಕೆ.ಆರ್. ಕಾಂತರಾಜ್ ಮತ್ತು ಮಂಡ್ಯ ಉಪ-ವಿಭಾಗದ ಅಪರಾಧ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳಾದ ಶ್ರೀ. ಕೌಶಲೇಂದ್ರಕುಮಾರ್ ರವರು ಪ್ರಶಂಶಿಸಿರುತ್ತಾರೆ.

DCR Of Mandya Dist As on 23-02-2012

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 16 ಪ್ರಕರಣಗಳು ವರದಿಯಾಗಿ ಅದರಲ್ಲಿ 2 ರಸ್ತೆ ಅಪಘಾತ ಪ್ರಕರಣ. 2 ಕಳ್ಳತನ ಪ್ರಕರಣ. 3 ಮನುಷ್ಯ ಕಾಣೆಯಾದ ಪ್ರಕರಣ. 1 ರಾಬರಿ ಪ್ರಕರಣ ಮತ್ತು ಇತರೆ 8 ಪ್ರಕರಣಗಳು ವರದಿಯಾಗಿರುತ್ತೆ

ಕಳ್ಳತನ ಪ್ರಕರಣ

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ

1] ಮೊ.ಸಂ 38/12 ಕಲಂ 457-380 ಐಪಿಸಿ ದಿನಾಂಕಃ 21-02-12ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠಶಾಲೆ, ಸುನುಗನಹಳ್ಳಿಯಲ್ಲಿ ಇಟ್ಟಿದ್ದ ಅನ್ನದಾಸೋಹದ ಆಹಾರ ಪದಾರ್ಥಗಳು, ಮತ್ತು ಪಾತ್ರೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ

2] ಮೊ.ಸಂ 38/12 ಕಲಂ 379 ಐಪಿಸಿ ಪಿರ್ಯಾದಿ ಹೆಚ್.ಕೆ.ಸಿದ್ದಯ್ಯ ರವರು ಅವರ ಬಾಬ್ತು ಕೆಎ-15 ಜೆ 302 ನಂಬರಿನ ಹೀರೊಹೋಂಡ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ಮಂಡ್ಯದ ಜಿಲ್ಲಾಧಿಕಾರಿಗಳ ಕಛೇರಿಯ ಎದುರುಗಡೆ ಇರುವ ಪಾರ್ಕ್ ನ ಮುಂದೆ ಬೀಗ ಹಾಕಿ ನಿಲ್ಲಿಸಿ ಪಾಕರ್್ನ ಒಳಗಡೆ ಹೋಗಿ ವಿಶ್ರಾಂತಿ ಪಡೆದುಕೊಂಡು ವಾಪಸ್ ಸಂಜೆ 6-45 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ಇದುವರೆವಿಗೂ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ

ಮನುಷ್ಯ ಕಾಣೆಯಾಗಿದ್ದಾನೆ

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ

1] ಮೊ.ಸಂ 81/12 ಕಲಂ ಹುಡುಗ ಕಾಣೆಯಾಗಿದ್ದಾನೆ ದಿನಾಂಕ 22/02/11 ರಂದು ಪಿರ್ಯಾದಿ ಶಿವಣ್ಣ ರವರ ಮಗ ರಘುವೀರ್ ಬಿನ್ ಶಿವಣ್ಣ 13 ವರ್ಷ ಮಂಡ್ಯ ಸಿಟಿ ಗೀತಾ ಫ್ರಾಡಶಾಲೆಯಲ್ಲಿ 8 ನೇ ತರಗತಿಯಲ್ಲಿ ಒದುತ್ತಿದ್ದು ದಿಃ-17-02-12 ರಂದು ಬೆಳಿಗ್ಗೆ 08-00 ಗಂಟೆಗೆ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು ಸಂಜೆಯಾದರೂ ಮನೆಗೆ ಬರಲಿಲ್ಲ ನಂತರ ನಮ್ಮ ಸಂಬಂದಿಕ ಮನೆ, ಅವನ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ

ಕೆ.ಆರ್ ಸಾಗರ ಪೊಲೀಸ್ ಠಾಣೆ

2] ಮೊ.ಸಂ 28/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 22/02/12 ರಂದು ಕಾಣೆಯಾದ ಮನುಷ್ಯ ಶಂಕರನು ಬತ್ತವನ್ನು ಕಟ್ಟಾವು ಮಾಡಲು ಹಣವನ್ನು ತೆಗೆದುಕೊಂಡು ಮನೆಯಿಂದ ಹೊರಗೇ ಹೋದವನು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ

ಶಿವಳ್ಳಿ ಪೊಲೀಸ್ ಠಾಣೆ

3] ಮೊ.ಸಂ 021/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 22/02/12 ರಂದು ಕಾಣೆಯಾದ ಮನುಷ್ಯ ದಾಳಯ್ಯ ಬಿನ್ ಲೇಟ್ ದಾಳಿಗೌಡ 60 ವರ್ಷ ತಂದೆಯವರು ದಿನಾಂಕ:17-02-2012 ರಂದು ಇದುವೆರೆಗೂ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ಹಿಂತಿರುಗಿ ಬಂದಿರುವುದಿಲ್ಲ ಇದುವರೆಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ.

ರಾಬರಿ ಪ್ರಕರಣ

ಬೆಳ್ಳೂರು ಪೊಲೀಸ್ ಠಾಣೆ

1] ಮೊ.ಸಂ 27/12 ಕಲಂ 392 ಐಪಿಸಿ ದಿನಾಂಕ 22-02-11 ರಂದು ಪಿರ್ಯಾದಿ ನವೀನ್ ಕುಮಾರ್ ಮತ್ತು ಅವರ ಮನೆಯವರು ಪ್ರವಾಸದಿಂದ ಬೆಂಗಳೂರಿಗೆ ಕೆಎ-01-ಬಿ-1490 ಕ್ವಾಲೀಸ್ ಕಾರಿನಲ್ಲಿ ವಾಪಸ್ಸು ಬೆಳ್ಳೂರು ಮಾರ್ಗವಾಗಿ ಹೋಗುತ್ತಿದ್ದಾಗ ತಿಟ್ಟನಹೊಸಹಳ್ಳಿ - ಎ ನಾಗತಿಹಳ್ಳಿ ಮಧ್ಯ ಯಾರೋ ಅಪರಿಚಿತರು 4 ಜನ ಮಾರುತಿ ಅಮ್ನಿ ಕೆಎ-02-ಎಂ-1152 ಮೇಲ್ಕಂಡ ಸ್ಥಳದಲ್ಲಿ ಅಡ್ಡಗಟ್ಟಿ ಮಾಕಾಸ್ತ್ರಗಳನ್ನು ತೋರಿಸಿ ವಾಹನದಲ್ಲಿ ಪಿರ್ಯಾದಿ ಮತ್ತು ಅವರ ಮನೆಯವರನ್ನು ಹೆದರಿಸಿ ಅವರ ಬಳಿ 6 ರಿಂದ 7 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ

Press Note

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ
ದಿನಾಂಕಃ 18-02-2012
ಪತ್ರಿಕಾ ಪ್ರಕಟಣೆ

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದಿಂದ 4 ಮಂದಿ ಆರೋಪಿಗಳ ಬಂಧನ ಇವರುಗಳಿಂದ 1ಲಕ್ಷ ರೂ ಮೌಲ್ಯದ ಕಳುವು ಮಾಡಿದ್ದ 1140 ಕೆ.ಜಿ.ಯಷ್ಟು ಕಬ್ಬಿಣದ ಆಂಗ್ಲರ್ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಟಾಟಾ 407 ನಂಬರ್ ಕೆ.ಎ-12, 2488 ವಾಹನ ವಶ.

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದವರು ಬಾತ್ಮೀದಾರರ ಮಾಹಿತಿ ಮೇರೆಗೆ ದಿನಾಂಕಃ 17-02-2012 ರಂದು ಬೆಳಗಿನ ಜಾವ 0500 ಗಂಟೆಯಲ್ಲಿ ಮಂಡ್ಯ ನಗರದ ಸಿವಿಲ್ ಬಸ್ ನಿಲ್ದಾಣದ ಬಳಿ ಇರುವ ಸಾಯಿ ಮಂದಿರದ ರಸ್ತೆಯ ರಾಜರಾಜೇಶ್ವರಿ ವೇ ಬ್ರಿಡ್ಜ್ ಪಕ್ಕದಲ್ಲಿ ಟಾಟಾ 407 ವಾಹನ ಸಂಖ್ಯೆ ಕೆಎ-12, 2488 ರಲ್ಲಿ ಅನುಮಾನಸ್ಪದವಾಗಿ ಇದ್ದ 4 ಜನ ಆಸಾಮಿಗಳನ್ನು ಅದರಲ್ಲಿದ್ದ 1140 ಕೆ.ಜಿ ತೂಕವಿದ್ದ 13 ಕಬ್ಬಿಣದ ಆಂಗ್ಲರ್ಗಳ ಸಮೇತ ಅವರುಗಳನ್ನು ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿಲಾಗಿ ಸದರಿ ಆಸಾಮಿಗಳು ರಾಮನಗರ-ಕನಕಪುರ ರಸ್ತೆಯಲ್ಲಿ ಕೈಲಂಚ ಗ್ರಾಮ ಹೆಂಚಿನ ಫ್ಯಾಕ್ಟರಿ ಬಳಿ ಇದ್ದ ಸುಮಾರು 25,000/-ರೂ ಮೌಲ್ಯದ 13 ಕಬ್ಬಿಣದ ಆಂಗ್ಲರ್ಗಳನ್ನು ಕಳುವು ಮಾಡಿಕೊಂಡು ಬಂದು ಮಂಡ್ಯದಲ್ಲಿ ಮಾರಾಟಮಾಡಲು ಹೊಂಚುಹಾಕುತ್ತಿದ್ದಾಗಿ ತಿಳಿಸಿದ್ದು, ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿ, ಮೆಲ್ಕಂಡ ಕಬ್ಬಿಣದ ಆಂಗ್ಲರ್ಗಳು ಮತ್ತು ವಾಹನವನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಆರೋಪಿಗಳ ಹೆಸರು-ವಿಳಾಸ :

1] ಅಜ್ಜುಂ. ಬಿನ್, ಮಹಮದ್ ಯೂಸಫ್, 26 ವಸ ವಾಸ, ಹೊಂಗನೂರು, ರಾಮನಗರ ಟೌನ್.
2] ಮುರುಗ, ಬಿನ್, ರಾಜ,23 ವರ್ಷ, ವಾಸ, ಆಸ್ಪತ್ರೆ ಶೆಡ್, ಮಂಡ್ಯ ಸಿಟಿ.
3] ಸಲೀಂ ಪಾಷ, ಬಿನ್ ತಾಜ್ ಪಾಷಾ, 23ವರ್ಷ, ವಾಸ, ಟಿಪ್ಪು ನಗರ, ರಾಮನಗರ ಟೌನ್
4] ಖುರಂ ಪಾಷಾ, ಬಿನ್ ಮಹಮದ್ ಗೌಸ್, 35ವರ್ಷ, ವಾಸ-ಲೇಬರ್ ಕಾಲೋನಿ, ಮಂಡ್ಯ ಟೌನ್

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಪೂರ್ವ ಠಾಣೆಯ ಪಿಎಸ್ಐ ಎಂ. ಮಂಜುನಾಥ್ ಮತ್ತು ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳನ್ನು ಪೊಲೀಸ್ ಅದೀಕ್ಷಕರಾದ ಶ್ರೀ. ಕೌಶಲೇಂದ್ರಕುಮಾರ್, ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.

Property Return Parade




ಮಂಡ್ಯ ಜಿಲ್ಲಾ ಪೊಲೀಸ್
ಅಪರಾಧ ಅಂಕಿ-ಅಂಶಗಳ ಪಕ್ಷಿನೋಟ
ಪತ್ರಿಕಾ ಪ್ರಕಟಣೆ

1] ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ (2011ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಮಾಹೆ) ವರದಿ ಮತ್ತು ಪತ್ತೆಯಾದ ಅಪರಾಧ ಪ್ರಕರಣಗಳ ಅಂಕಿ ಅಂಶಗಳು :

2] ಮೇಲ್ಕಂಡ ಅಪರಾಧಗಳಲ್ಲಿ ಕಳುವಾಗಿರುವ ಮಾಲುಗಳ ಒಟ್ಟು ಮೌಲ್ಯ ಸು. 1,10,44,140-00 ರೂ. (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ , ವಾಹನಗಳು, ಮೊಬೈಲ್ಗಳು, ಕಂಪ್ಯೂಟರ್ ಮತ್ತು ಕಬ್ಬಿಣದ ಉಪಕರಣಗಳು ಹಾಗೂ ಇತರೆ)

3] ಇದೇ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಮಾಲುಗಳ ಒಟ್ಟು ಮೌಲ್ಯ ಸು. 57,38,309-00 ರೂ. ಗಳು (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ, ವಾಹನಗಳು, ಮೊಬೈಲ್ಗಳು ಮತ್ತು ಇತರೆ)

4] ಇದೇ ಅವಧಿಯಲ್ಲಿ ವಾರಸುದಾರರಿಗೆ ಹಿಂದಿರುಗಿಸಿದ ಮಾಲುಗಳ ಒಟ್ಟು ಮೌಲ್ಯ ಸು. 49,10,700-00 ರೂ. ಗಳು (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ, ವಾಹನಗಳು, ಮೊಬೈಲ್ಗಳು ಮತ್ತು ಇತರೆ)
5] ಇದೇ ಅವಧಿಯಲ್ಲಿ ನ್ಯಾಯಾಲಯದಲ್ಲಿ 2 ಕೊಲೆ, 1 ಸುಲಿಗೆ, 11 ಕಳವು, 1 ಕೊಲೆ ಪ್ರಯತ್ನ, 8 ಹಲ್ಲೆ, 16 ಕೆ.ಪಿ.ಕಾಯ್ದೆ ಮತ್ತು 136 ಅಪಘಾತ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ, ಆರೋಪಿಗಳಿಗೆ ಶಿಕ್ಷೆಯಾಗಿರುತ್ತದೆ.
6] ಈ 3 ತಿಂಗಳ ಅವಧಿಯಲ್ಲಿ 1 ಕೊಲೆ, 2 ಎಸ್ಸಿ/ಎಸ್ಟಿ ದೌರ್ಜನ್ಯ, 8 ಕಳವು, 1 ಕೊಲೆ ಪ್ರಯತ್ನ, 6 ಕಿರುಕುಳ, 1 ಅಪಹರಣ, 25 ಹಲ್ಲೆ ಮತ್ತು 4 ಅಪಘಾತ ಪ್ರಕರಣಗಳು ನ್ಯಾಯಾಲಯದಲ್ಲಿ ಬಿಡುಗಡೆ ಆಗಿರುತ್ತವೆ.

7] ಇದೇ ಅವಧಿಯಲ್ಲಿ 2 ಕಳವು, 1 ಕೊಲೆ ಪ್ರಯತ್ನ, 1 ಕಿರುಕುಳ, 62 ಹಲ್ಲೆ ಮತ್ತು 14 ಅಪಘಾತ ಪ್ರಕರಣಗಳು ನ್ಯಾಯಾಲಯದಲ್ಲಿ ಇತರೆ ರೀತಿಯಲ್ಲಿ ವಿಲೇವಾರಿಗೊಂಡಿರುತ್ತವೆ.

8] ಇದೇ ಅವಧಿಯಲ್ಲಿ ಕಳವು ಕೇಸುಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ 7 ಸಿಪಿಐ, 5 ಪಿಎಸ್ಐ, 3 ಎಎಸ್ಐ, 18 ಸಿಹೆZï¹ ಮತ್ತು 75 ಜನ ಪಿಸಿ ರವರುಗಳಿಗೆ ಒಟ್ಟು 20,675/-ರೂ. ನಗದು ಬಹುಮಾನವನ್ನು ನೀಡಲಾಗಿದೆ.

Press Note Date 30-01-2012




ಮಂಡ್ಯ ಜಿಲ್ಲಾ ಪೊಲೀಸ್
ಅಪರಾಧ ಅಂಕಿ-ಅಂಶಗಳ ಪಕ್ಷಿನೋಟ
ಪತ್ರಿಕಾ ಪ್ರಕಟಣೆ

1] ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ (2011ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಮಾಹೆ) ವರದಿ ಮತ್ತು ಪತ್ತೆಯಾದ ಅಪರಾಧ ಪ್ರಕರಣಗಳ ಅಂಕಿ ಅಂಶಗಳು :

2] ಮೇಲ್ಕಂಡ ಅಪರಾಧಗಳಲ್ಲಿ ಕಳುವಾಗಿರುವ ಮಾಲುಗಳ ಒಟ್ಟು ಮೌಲ್ಯ ಸು. 1,10,44,140-00 ರೂ. (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ , ವಾಹನಗಳು, ಮೊಬೈಲ್ಗಳು, ಕಂಪ್ಯೂಟರ್ ಮತ್ತು ಕಬ್ಬಿಣದ ಉಪಕರಣಗಳು ಹಾಗೂ ಇತರೆ)

3] ಇದೇ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಮಾಲುಗಳ ಒಟ್ಟು ಮೌಲ್ಯ ಸು. 57,38,309-00 ರೂ. ಗಳು (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ, ವಾಹನಗಳು, ಮೊಬೈಲ್ಗಳು ಮತ್ತು ಇತರೆ)

4] ಇದೇ ಅವಧಿಯಲ್ಲಿ ವಾರಸುದಾರರಿಗೆ ಹಿಂದಿರುಗಿಸಿದ ಮಾಲುಗಳ ಒಟ್ಟು ಮೌಲ್ಯ ಸು. 49,10,700-00 ರೂ. ಗಳು (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ, ವಾಹನಗಳು, ಮೊಬೈಲ್ಗಳು ಮತ್ತು ಇತರೆ)
5] ಇದೇ ಅವಧಿಯಲ್ಲಿ ನ್ಯಾಯಾಲಯದಲ್ಲಿ 2 ಕೊಲೆ, 1 ಸುಲಿಗೆ, 11 ಕಳವು, 1 ಕೊಲೆ ಪ್ರಯತ್ನ, 8 ಹಲ್ಲೆ, 16 ಕೆ.ಪಿ.ಕಾಯ್ದೆ ಮತ್ತು 136 ಅಪಘಾತ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ, ಆರೋಪಿಗಳಿಗೆ ಶಿಕ್ಷೆಯಾಗಿರುತ್ತದೆ.
6] ಈ 3 ತಿಂಗಳ ಅವಧಿಯಲ್ಲಿ 1 ಕೊಲೆ, 2 ಎಸ್ಸಿ/ಎಸ್ಟಿ ದೌರ್ಜನ್ಯ, 8 ಕಳವು, 1 ಕೊಲೆ ಪ್ರಯತ್ನ, 6 ಕಿರುಕುಳ, 1 ಅಪಹರಣ, 25 ಹಲ್ಲೆ ಮತ್ತು 4 ಅಪಘಾತ ಪ್ರಕರಣಗಳು ನ್ಯಾಯಾಲಯದಲ್ಲಿ ಬಿಡುಗಡೆ ಆಗಿರುತ್ತವೆ.

7] ಇದೇ ಅವಧಿಯಲ್ಲಿ 2 ಕಳವು, 1 ಕೊಲೆ ಪ್ರಯತ್ನ, 1 ಕಿರುಕುಳ, 62 ಹಲ್ಲೆ ಮತ್ತು 14 ಅಪಘಾತ ಪ್ರಕರಣಗಳು ನ್ಯಾಯಾಲಯದಲ್ಲಿ ಇತರೆ ರೀತಿಯಲ್ಲಿ ವಿಲೇವಾರಿಗೊಂಡಿರುತ್ತವೆ.

8] ಇದೇ ಅವಧಿಯಲ್ಲಿ ಕಳವು ಕೇಸುಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ 7 ಸಿಪಿಐ, 5 ಪಿಎಸ್ಐ, 3 ಎಎಸ್ಐ, 18 ಸಿಹೆZï¹ ಮತ್ತು 75 ಜನ ಪಿಸಿ ರವರುಗಳಿಗೆ ಒಟ್ಟು 20,675/-ರೂ. ನಗದು ಬಹುಮಾನವನ್ನು ನೀಡಲಾಗಿದೆ.

dcR of Mandya Dist As on 13-01-12

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 33 ಪ್ರಕರಣಗಳು ವರದಿಯಾಗಿ ಅದರಲ್ಲಿ 4 ರಸ್ತೆ ಅಪಘಾತ ಪ್ರಕರಣ. 1 ದರೋಡೆ ನಡೆಸಲು ಗುಂಪು ಸೇರುವ ಪ್ರಕರಣ. 2 ಮನುಷ್ಯ ಕಾಣೆಯಾದ ಪ್ರಕರಣ. 1 ರಾಬರಿ ಪ್ರಕರಣ. 2 ಕಳ್ಳತನ ಪ್ರಕರಣ. 3 ಯು.ಡಿ.ಆರ್ ಪ್ರಕರಣ. 1 ಅಪಹರಣ ಪ್ರಕರಣ ಮತ್ತು 19 ಇತರೆ ಪ್ರಕರಣಗಳು ವರದಿಯಾಗಿರುತ್ತೆ

ದರೋಡೆ ನಡೆಸಲು ಗುಂಪು ಸೇರುವ ಪ್ರಕರಣ

ಶ್ರೀರಂಗಪಟ್ಟಣ ಪೊಲೀಸ್ ಠಾಣೆ

1] ಮೊ.ಸಂ 36/12 ಕಲಂ 399-400-402-120 [ಬಿ] ಐಪಿಸಿ ದಿನಾಂಕ 13-01-2012 ರಂದು ರಾತ್ರಿವೇಳೆ ಪಿರ್ಯಾದಿ ಪಿ.ಎಸ್. ಶ್ರೀರಂಗಪಟ್ಟಣ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪ ವಾಹಿನಿ ಬಳಿ ಹೋಗಿ ನೋಡಲಾಗಿ ಒಂದು ಆಟೋ ಮತ್ತು ಒಂದು ಮೋ ಸೈ ನಿಂತಿದ್ದು, ಆರೋಪಿಗಳಾದ ಗುರುರಾಜು ಮತ್ತು ಇತರೆ 5 ಜನರು ಮಾರಕಾಸ್ತ್ರಗಳನ್ನು ಹಿಡಿದು ಪಶ್ಚಿವಾಹಿನಿ ವಾಸಿ ಸರೋಜಮ್ಮ ರವರ ಮನೆಯನ್ನು ಸುತ್ತುವರೆದಿದ್ದು, ಪೊಲೀಸ್ನವರನ್ನು ಕಂಡು ಓಡಿಹೋಗಲು ಪ್ರಯತ್ನಿಸುತ್ತಿದ್ದು ಅನುಮಾನ ಬಂದು ಅವರನ್ನು ಹಿಡಿದು ವಿಚಾರ ಮಾಡಲಾಗಿ ಯಾವುದೋ ದುಷ್ಕೃತ್ಯವೆಸಗಲು ಬಂದಿರುವುದಾಗಿ ತಿಳಿದುಬಂದಿರುವುದರಿಂದ ಸ್ವಯಂ ವರದಿ ನೀಡಿ ದೂರು ದಾಖಲಿಸಿರುತ್ತೆ

ರಸ್ತೆ ಅಪಘಾತ ಪ್ರಕರಣ

1] ಮೊ.ಸಂ 37/12 ಕಲಂ 279-304 [] ಐಪಿಸಿ ರೆ/ವಿ 187 ಐಎಂವಿ ಕಾಯಿದೆ ದಿನಾಂಕ 14-01-12 ರಂದು ಮೃತ ಮಂಜುನಾಥ ರವರು ಹಾಲಿನ ಡೈರಿಗೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಆರೋಪಿ ವಾಹನದ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂಧ ಚಲಿಸಿಕೊಂಡು ಬಂದು ಡಿಕ್ಕಿ ಮಾಡಿದ್ದರಿಂದ ಪೆಟ್ಟಾಗಿ ಮೃತಪಟ್ಟ ಬಗ್ಗೆ ದೂರು.

ಮನುಷ್ಯ ಕಾಣೆಯಾದ ಪ್ರಕರಣ

1] ಮೊ.ಸಂ 13/12 ಕಲಂ ಹೆಂಗಸು ಕಾಣೆಯಾಗಿದ್ದಾಳೆ ದಿನಾಂಕ 14-01-12 ರಂದು ಕಾಣೆಯಾದ ಹೆಂಗಸು ಟಿ.ವಿದ್ಯಾವತಿ ಕೋಂ ರಂಗನಾಥ್, 42 ವರ್ಷ, ರವರು ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ

2]ಮೊ.ಸಂ 15/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 14-01-12 ರಂದು ಪಿರ್ಯಾದಿ ಗುಲ್ಲ ರವರ ಗಂಡ ಅರ್ಜುನ ಬಿನ್ ಅಶ್ವತ್ ನಾಯ್ಕ್, 35 ವರ್ಷ 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ಇಬ್ಬರೂ ಹೆಣ್ಣು ಮಕ್ಕಳಿರುತ್ತಾರೆ, ನನ್ನ ಗಂಡ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದು ಅದರಂತೆ ದಿ:- 04-11-2011 ರಂದು ನಮ್ಮ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆಂದು ಹೋದವನು ರಾತ್ರಿಯಾದರು ಮನೆಗೆ ಬಂದಿರುವುದಿಲ್ಲ,

ರಾಬರಿ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಮೊ.ಸಂ 14/12 ಕಲಂ 392 ಐಪಿಸಿ ದಿನಾಂಕ 14-01-12 ಪಿರ್ಯಾದಿ ಶಿಲ್ಪ ಕೋಂ ರಾಜೇಗೌಡ ರವರು ಅವರ ಮಗನೊಂದಿಗೆ ಕೆ.ಆರ್.ಪೇಟೆಯಿಂದ ಆರತಿಉಕ್ಕಡಕ್ಕೆ ದೇವರ ಪೂಜೆಗಾಗಿ ಹೋಗಲು ಕೆ.ಆರ್.ಪೇಟೆಯಿಂದ ಟಾಟಾ ಎ.ಸಿ.ಇ.ಸಂಖ್ಯೆ ಕೆಎ11/ಎ1028 ರಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡು ಬರುತ್ತಿದ್ದು ವಾಹನದಲ್ಲಿ ಇತರೆ ಪ್ರಯಾಣಿಕರಿದ್ದರೆಂತ, ವಾಹನ ತೆಂಡೆಕೆರೆ ಮಾರ್ಗವಾಗಿ ಬರುತ್ತಿದ್ದಾಗ ಮಂಚನಹಳ್ಳಿ ಕೆರೆಯ ಸಮೀಪ ಬೆಳಿಗ್ಗೆ 10.30 ಗಂಟೆಯಲ್ಲಿ ತಾವು ಪ್ರಯಾಣಿಸುತ್ತಿದ್ದ ವಾಹನದ ಹಿಂದಿನಿಂದ ಒಂದು ಬೈಕಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಾವು ಪ್ರಯಾಣಿಸುತ್ತಿದ್ದ ವಾಹನದ ಪಕ್ಕಕ್ಕೆ ಬಂದು ಬ್ಕೆಕ್ನ ಹಿಂದೆ ಕುಳಿತಿದ್ದ ವ್ಯಕ್ತಿ ತಮ್ಮ ಕತ್ತಿಗೆ ಕೈ ಹಾಕಿ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕಿನಲ್ಲಿ ಸ್ಪೀಡಾಗಿ ಮೈಸೂರು ಕಡೆಗೆ ಹೋರಟು ಹೋದರೆಂತ ಇದರ ಬೆಲೆ ಎರಡು ಲಕ್ಷ ರೂಪಾಯಿಗಳಾಗುತ್ತೆ

ಕಳ್ಳತನ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಮೊ.ಸಂ 15/12 ಕಲಂ 379 ಐಪಿಸಿ ದಿನಾಂಕ 14-01-12 ದಿನಾಂಕ 14-01-12 ರಂದು ಪಿರ್ಯಾದಿ ರೇವಣ್ಣ ರವರ ಬಾಬ್ತು ಕೆಎ-11-ಆರ್-2920 ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ ನಂ ಕೆಎ-11-ಆರ್ -2920 ಅನ್ನು ಪಾಂಡವಪುರ ಟೌನ್ ತಾಲ್ಲೋಕು ಪಂಚಾಯ್ತಿ ಕಛೇರಿ ಮುಂಬಾಗ ನಿಲ್ಲಿಸಿದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ

2] ಮೊ.ಸಂ 016/12 ಕಲಂ 379 ಐಪಿಸಿ ದಿನಾಂಕ: 12/01/2012 ರಂದು ಮಧ್ಯಾಹ್ನ 03.00 ಗಂಟೆ ಸಮಯದಲ್ಲಿ ಪಿರ್ಯಾದಿ ಮೊಹಮ್ಮದ್ ನಾಸಿರ್ ರವರು ಅವರ ಬಾಬ್ತು ಕೆ.ಎ11, ಕೆ-3772 ಆರೆಂಜ್ ಕಲ್ಲರ್ ಹಿರೋ ಹೊಂಡ ಸ್ಪ್ಲೆಂಡರ್, ಮೋಟಾರ್ ಬೈಕನ್ನು ಮನೆಯ ಮುಂದೆ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಮನೆಯಲ್ಲಿ ಊಟ ಮಾಡುತ್ತಿದ್ದೆನು, ಊಟ ಮಾಡಿದ ನಂತರ, ವಾಪಸ್ ಅಂಗಡಿಯ ಬಳಿ ಹೋಗಲು, ಮನೆಯ ಮುಂದೆ ನಿಲ್ಲಿಸಿದ್ದ ಮೇಲ್ಕಂಡ ದ್ವಿಚಕ್ರ ವಾಹನವನ್ನು ನೋಡಲಾಗಿ, ಸದರಿ ವಾಹನವು ನಾನು ನಿಲ್ಲಿಸಿದ್ದ ಜಾಗದಲ್ಲಿ ಇರಲಿಲ್ಲ. ಆಗ ನಾನು ಗಾಬರಿಗೊಂಡು, ನನ್ನ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆಲ್ಲಾ ವಿಚಾರ ಮಾಡಿದರೂ ಪತ್ತೆಯಾಗಿರುವುದಿಲ್ಲ

ಯು.ಡಿ.ಆರ್ ಪಕ್ರರಣ

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ

1] ಯು.ಡಿ.ಆರ್ ನಂ 01/12 ಕಲಂ 174 [ಸಿ] ಸಿ.ಆರ್ ಪಿಸಿ ದಿನಾಂಕ 14-01-12 ರಂದು ಪಿರ್ಯಾದಿ ರಾಜು ಚವಾಣ್ ರವರು ಮತ್ತು ಮೃತ ವಿರೆಂದರ್ ಮತ್ತು ಇತರರೆಲ್ಲರೂ ಊಟಮಾಡಿ ಬಿ.ಜಿ.ಕೃಷ್ಣಮೂರ್ತಿ ರವರ ಹೊಸ ಮನೆಯಲ್ಲಿ ಮಲಗಿದ್ದು ನಂತರ ಬೆಳಿಗ್ಗೆ 14/01/2012 ರ ಬೆಳಿಗ್ಗೆ 09-00 ಗಂಟೆಯಾದರೂ ವೀರೆಂದರ್ ಎದ್ದು ಬರಲಿಲ್ಲ ನಾವುಗಳು ಹೋಗಿ ಎಬ್ಬಿಸಿದಾಗ ಏಳಲಿಲ್ಲ ಸ್ಥಳದಲ್ಲೆ ಮೃತಪಟ್ಟಿರುವುದಾಗಿ ಇತ್ಯಾದಿ ದೂರಿನ ಮೇರೆಗೆ.

2] ಯು.ಡಿ.ಆರ್ ನಂ 02/12 ಕಲಂ 174 [ಸಿ] ಸಿ,ಆರ್ ಪಿ.ಸಿ ಪಿರ್ಯಾದಿ ಟಿ ಗೋವಿಂದರಾಜು ರವರ ಅಣ್ಣ ರಾಮ @ ರಾಮಣ್ಣನು ತುಪ್ಪದಮಡುವಿನಿಂದ ಶಿಕಾರಿಪುಕ್ಕೆ ಹೋಗುವುದಕ್ಕೆ ನಾಗಮಂಗಲದಿಂದ ಬರುತ್ತಿದ್ದ ಆಪೇ ಆಟೋ ಕೆಎ-54-1661 ರ ಗಾಡಿಗೆ ಅತ್ತಿ ಆಟೋ ಗಾಡಿಯಿಂದ ಇಳಿಯುವಾಗ ಆಯತಪ್ಪಿ ಕೆಳಕ್ಕೆ ಬಿದ್ದು ಪ್ರಜ್ಷೆ ತಪ್ಪಿದಾಗ ನಾಗಮಂಗಲ ಜನರಲ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಳ್ಳೂರಿನ ಎ.ಸಿ.ಗಿರಿ ಆಸ್ಪತ್ರೆ ಮತ್ತು ಬೆಂಗಳೂರಿನ ನಿಮಾನ್ಸ್ಗೆ ಸೇರಿಸಿದ್ದು ಅಲ್ಲಿ ಸ್ಥಳೀಯ ಆಸ್ಪತ್ರೆಗೆ ಸೇರಿಸುವಂತೆ ತಿಳಿಸಿದ ಕಾರಣ ವಾಪಸ್ ಊರಿಗೆ ಕರೆತರುವಾಗ ಮಾರ್ಗ ಮದ್ಯದಲ್ಲಿ ಮೃತ ಹೊಂದಿರುವುದಾಗಿ ಇತ್ಯಾದಿ.

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ

3] ಯು.ಡಿ.ಆರ್ ನಂ 02/12 ಕಲಂ 174 ಸಿ.ಆರ್,ಪಿ.ಸಿ ದಿನಾಂಕ 14-01-12 ರಂದು ಮೃತೆ ಚಿಕ್ಕತಾಯಮ್ಮ 50 ವರ್ಷ ಕೆರೆಯಲ್ಲಿ ನೀರು ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ಮೃತಪಟ್ಟಿರುತ್ತಾಳೆ

ಅಪಹರಣ ಪ್ರಕರಣ

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ

1] ಮೊ.ಸಂ 143-341-366 ರೆ/ವಿ 149 ಐಪಿಸಿ ದಿನಾಂಕ 14-01-12 ರಂದು ಪಿರ್ಯಾದಿ ಶಿವಲಿಂಗೇಗೌಡ ರವರ ಮಗಳು ಭಾರತೀ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸಮಾಡುತ್ತಿದ್ದು ಈ ದಿವಸ ದಿ.14-12-2012 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಕಾಲೇಜಿಗೆ ಹೋಗಲು ಕೆ.ಎಂ.ದೊಡ್ಡಿ ಓಂ ಶಾಂತಿ ಮಾರ್ಗದ ರಸ್ತೆಯಲ್ಲಿ ತನ್ನ ಸ್ವಂತ ಕೆಎ.11ಎಕ್ಸ್2364 ಟಿವಿಎಸ್, ಮೋಪೆಡ್ ನಲ್ಲಿ ಹೋಗುತ್ತಿದ್ದಾಗ ಈ ಕೇಸಿನ ಆರೋಪಿ ಆಲೂರಯ್ಯ ಮತ್ತು ಇತರರು ಪಿರ್ಯಾದಿ ಮಗಳು ಹೋಗುತ್ತಿದ್ದ ಮೊಪೆಡ್ನ್ನು ಅಡ್ಡಗಟ್ಟಿ ಬಲವಂತವಾಗಿ ಕಾರಿನ ಓಳಗಡೆ ಕಿರುಚದಂತೆ ಕುರಿಸಿಕೊಂಡು, ಹೊಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರು.