Moving text

Mandya District Police

dcR of Mandya Dist As on 13-01-12

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 33 ಪ್ರಕರಣಗಳು ವರದಿಯಾಗಿ ಅದರಲ್ಲಿ 4 ರಸ್ತೆ ಅಪಘಾತ ಪ್ರಕರಣ. 1 ದರೋಡೆ ನಡೆಸಲು ಗುಂಪು ಸೇರುವ ಪ್ರಕರಣ. 2 ಮನುಷ್ಯ ಕಾಣೆಯಾದ ಪ್ರಕರಣ. 1 ರಾಬರಿ ಪ್ರಕರಣ. 2 ಕಳ್ಳತನ ಪ್ರಕರಣ. 3 ಯು.ಡಿ.ಆರ್ ಪ್ರಕರಣ. 1 ಅಪಹರಣ ಪ್ರಕರಣ ಮತ್ತು 19 ಇತರೆ ಪ್ರಕರಣಗಳು ವರದಿಯಾಗಿರುತ್ತೆ

ದರೋಡೆ ನಡೆಸಲು ಗುಂಪು ಸೇರುವ ಪ್ರಕರಣ

ಶ್ರೀರಂಗಪಟ್ಟಣ ಪೊಲೀಸ್ ಠಾಣೆ

1] ಮೊ.ಸಂ 36/12 ಕಲಂ 399-400-402-120 [ಬಿ] ಐಪಿಸಿ ದಿನಾಂಕ 13-01-2012 ರಂದು ರಾತ್ರಿವೇಳೆ ಪಿರ್ಯಾದಿ ಪಿ.ಎಸ್. ಶ್ರೀರಂಗಪಟ್ಟಣ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪ ವಾಹಿನಿ ಬಳಿ ಹೋಗಿ ನೋಡಲಾಗಿ ಒಂದು ಆಟೋ ಮತ್ತು ಒಂದು ಮೋ ಸೈ ನಿಂತಿದ್ದು, ಆರೋಪಿಗಳಾದ ಗುರುರಾಜು ಮತ್ತು ಇತರೆ 5 ಜನರು ಮಾರಕಾಸ್ತ್ರಗಳನ್ನು ಹಿಡಿದು ಪಶ್ಚಿವಾಹಿನಿ ವಾಸಿ ಸರೋಜಮ್ಮ ರವರ ಮನೆಯನ್ನು ಸುತ್ತುವರೆದಿದ್ದು, ಪೊಲೀಸ್ನವರನ್ನು ಕಂಡು ಓಡಿಹೋಗಲು ಪ್ರಯತ್ನಿಸುತ್ತಿದ್ದು ಅನುಮಾನ ಬಂದು ಅವರನ್ನು ಹಿಡಿದು ವಿಚಾರ ಮಾಡಲಾಗಿ ಯಾವುದೋ ದುಷ್ಕೃತ್ಯವೆಸಗಲು ಬಂದಿರುವುದಾಗಿ ತಿಳಿದುಬಂದಿರುವುದರಿಂದ ಸ್ವಯಂ ವರದಿ ನೀಡಿ ದೂರು ದಾಖಲಿಸಿರುತ್ತೆ

ರಸ್ತೆ ಅಪಘಾತ ಪ್ರಕರಣ

1] ಮೊ.ಸಂ 37/12 ಕಲಂ 279-304 [] ಐಪಿಸಿ ರೆ/ವಿ 187 ಐಎಂವಿ ಕಾಯಿದೆ ದಿನಾಂಕ 14-01-12 ರಂದು ಮೃತ ಮಂಜುನಾಥ ರವರು ಹಾಲಿನ ಡೈರಿಗೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಆರೋಪಿ ವಾಹನದ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂಧ ಚಲಿಸಿಕೊಂಡು ಬಂದು ಡಿಕ್ಕಿ ಮಾಡಿದ್ದರಿಂದ ಪೆಟ್ಟಾಗಿ ಮೃತಪಟ್ಟ ಬಗ್ಗೆ ದೂರು.

ಮನುಷ್ಯ ಕಾಣೆಯಾದ ಪ್ರಕರಣ

1] ಮೊ.ಸಂ 13/12 ಕಲಂ ಹೆಂಗಸು ಕಾಣೆಯಾಗಿದ್ದಾಳೆ ದಿನಾಂಕ 14-01-12 ರಂದು ಕಾಣೆಯಾದ ಹೆಂಗಸು ಟಿ.ವಿದ್ಯಾವತಿ ಕೋಂ ರಂಗನಾಥ್, 42 ವರ್ಷ, ರವರು ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ

2]ಮೊ.ಸಂ 15/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 14-01-12 ರಂದು ಪಿರ್ಯಾದಿ ಗುಲ್ಲ ರವರ ಗಂಡ ಅರ್ಜುನ ಬಿನ್ ಅಶ್ವತ್ ನಾಯ್ಕ್, 35 ವರ್ಷ 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ಇಬ್ಬರೂ ಹೆಣ್ಣು ಮಕ್ಕಳಿರುತ್ತಾರೆ, ನನ್ನ ಗಂಡ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದು ಅದರಂತೆ ದಿ:- 04-11-2011 ರಂದು ನಮ್ಮ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆಂದು ಹೋದವನು ರಾತ್ರಿಯಾದರು ಮನೆಗೆ ಬಂದಿರುವುದಿಲ್ಲ,

ರಾಬರಿ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಮೊ.ಸಂ 14/12 ಕಲಂ 392 ಐಪಿಸಿ ದಿನಾಂಕ 14-01-12 ಪಿರ್ಯಾದಿ ಶಿಲ್ಪ ಕೋಂ ರಾಜೇಗೌಡ ರವರು ಅವರ ಮಗನೊಂದಿಗೆ ಕೆ.ಆರ್.ಪೇಟೆಯಿಂದ ಆರತಿಉಕ್ಕಡಕ್ಕೆ ದೇವರ ಪೂಜೆಗಾಗಿ ಹೋಗಲು ಕೆ.ಆರ್.ಪೇಟೆಯಿಂದ ಟಾಟಾ ಎ.ಸಿ.ಇ.ಸಂಖ್ಯೆ ಕೆಎ11/ಎ1028 ರಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡು ಬರುತ್ತಿದ್ದು ವಾಹನದಲ್ಲಿ ಇತರೆ ಪ್ರಯಾಣಿಕರಿದ್ದರೆಂತ, ವಾಹನ ತೆಂಡೆಕೆರೆ ಮಾರ್ಗವಾಗಿ ಬರುತ್ತಿದ್ದಾಗ ಮಂಚನಹಳ್ಳಿ ಕೆರೆಯ ಸಮೀಪ ಬೆಳಿಗ್ಗೆ 10.30 ಗಂಟೆಯಲ್ಲಿ ತಾವು ಪ್ರಯಾಣಿಸುತ್ತಿದ್ದ ವಾಹನದ ಹಿಂದಿನಿಂದ ಒಂದು ಬೈಕಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಾವು ಪ್ರಯಾಣಿಸುತ್ತಿದ್ದ ವಾಹನದ ಪಕ್ಕಕ್ಕೆ ಬಂದು ಬ್ಕೆಕ್ನ ಹಿಂದೆ ಕುಳಿತಿದ್ದ ವ್ಯಕ್ತಿ ತಮ್ಮ ಕತ್ತಿಗೆ ಕೈ ಹಾಕಿ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕಿನಲ್ಲಿ ಸ್ಪೀಡಾಗಿ ಮೈಸೂರು ಕಡೆಗೆ ಹೋರಟು ಹೋದರೆಂತ ಇದರ ಬೆಲೆ ಎರಡು ಲಕ್ಷ ರೂಪಾಯಿಗಳಾಗುತ್ತೆ

ಕಳ್ಳತನ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಮೊ.ಸಂ 15/12 ಕಲಂ 379 ಐಪಿಸಿ ದಿನಾಂಕ 14-01-12 ದಿನಾಂಕ 14-01-12 ರಂದು ಪಿರ್ಯಾದಿ ರೇವಣ್ಣ ರವರ ಬಾಬ್ತು ಕೆಎ-11-ಆರ್-2920 ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ ನಂ ಕೆಎ-11-ಆರ್ -2920 ಅನ್ನು ಪಾಂಡವಪುರ ಟೌನ್ ತಾಲ್ಲೋಕು ಪಂಚಾಯ್ತಿ ಕಛೇರಿ ಮುಂಬಾಗ ನಿಲ್ಲಿಸಿದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ

2] ಮೊ.ಸಂ 016/12 ಕಲಂ 379 ಐಪಿಸಿ ದಿನಾಂಕ: 12/01/2012 ರಂದು ಮಧ್ಯಾಹ್ನ 03.00 ಗಂಟೆ ಸಮಯದಲ್ಲಿ ಪಿರ್ಯಾದಿ ಮೊಹಮ್ಮದ್ ನಾಸಿರ್ ರವರು ಅವರ ಬಾಬ್ತು ಕೆ.ಎ11, ಕೆ-3772 ಆರೆಂಜ್ ಕಲ್ಲರ್ ಹಿರೋ ಹೊಂಡ ಸ್ಪ್ಲೆಂಡರ್, ಮೋಟಾರ್ ಬೈಕನ್ನು ಮನೆಯ ಮುಂದೆ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಮನೆಯಲ್ಲಿ ಊಟ ಮಾಡುತ್ತಿದ್ದೆನು, ಊಟ ಮಾಡಿದ ನಂತರ, ವಾಪಸ್ ಅಂಗಡಿಯ ಬಳಿ ಹೋಗಲು, ಮನೆಯ ಮುಂದೆ ನಿಲ್ಲಿಸಿದ್ದ ಮೇಲ್ಕಂಡ ದ್ವಿಚಕ್ರ ವಾಹನವನ್ನು ನೋಡಲಾಗಿ, ಸದರಿ ವಾಹನವು ನಾನು ನಿಲ್ಲಿಸಿದ್ದ ಜಾಗದಲ್ಲಿ ಇರಲಿಲ್ಲ. ಆಗ ನಾನು ಗಾಬರಿಗೊಂಡು, ನನ್ನ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆಲ್ಲಾ ವಿಚಾರ ಮಾಡಿದರೂ ಪತ್ತೆಯಾಗಿರುವುದಿಲ್ಲ

ಯು.ಡಿ.ಆರ್ ಪಕ್ರರಣ

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ

1] ಯು.ಡಿ.ಆರ್ ನಂ 01/12 ಕಲಂ 174 [ಸಿ] ಸಿ.ಆರ್ ಪಿಸಿ ದಿನಾಂಕ 14-01-12 ರಂದು ಪಿರ್ಯಾದಿ ರಾಜು ಚವಾಣ್ ರವರು ಮತ್ತು ಮೃತ ವಿರೆಂದರ್ ಮತ್ತು ಇತರರೆಲ್ಲರೂ ಊಟಮಾಡಿ ಬಿ.ಜಿ.ಕೃಷ್ಣಮೂರ್ತಿ ರವರ ಹೊಸ ಮನೆಯಲ್ಲಿ ಮಲಗಿದ್ದು ನಂತರ ಬೆಳಿಗ್ಗೆ 14/01/2012 ರ ಬೆಳಿಗ್ಗೆ 09-00 ಗಂಟೆಯಾದರೂ ವೀರೆಂದರ್ ಎದ್ದು ಬರಲಿಲ್ಲ ನಾವುಗಳು ಹೋಗಿ ಎಬ್ಬಿಸಿದಾಗ ಏಳಲಿಲ್ಲ ಸ್ಥಳದಲ್ಲೆ ಮೃತಪಟ್ಟಿರುವುದಾಗಿ ಇತ್ಯಾದಿ ದೂರಿನ ಮೇರೆಗೆ.

2] ಯು.ಡಿ.ಆರ್ ನಂ 02/12 ಕಲಂ 174 [ಸಿ] ಸಿ,ಆರ್ ಪಿ.ಸಿ ಪಿರ್ಯಾದಿ ಟಿ ಗೋವಿಂದರಾಜು ರವರ ಅಣ್ಣ ರಾಮ @ ರಾಮಣ್ಣನು ತುಪ್ಪದಮಡುವಿನಿಂದ ಶಿಕಾರಿಪುಕ್ಕೆ ಹೋಗುವುದಕ್ಕೆ ನಾಗಮಂಗಲದಿಂದ ಬರುತ್ತಿದ್ದ ಆಪೇ ಆಟೋ ಕೆಎ-54-1661 ರ ಗಾಡಿಗೆ ಅತ್ತಿ ಆಟೋ ಗಾಡಿಯಿಂದ ಇಳಿಯುವಾಗ ಆಯತಪ್ಪಿ ಕೆಳಕ್ಕೆ ಬಿದ್ದು ಪ್ರಜ್ಷೆ ತಪ್ಪಿದಾಗ ನಾಗಮಂಗಲ ಜನರಲ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಳ್ಳೂರಿನ ಎ.ಸಿ.ಗಿರಿ ಆಸ್ಪತ್ರೆ ಮತ್ತು ಬೆಂಗಳೂರಿನ ನಿಮಾನ್ಸ್ಗೆ ಸೇರಿಸಿದ್ದು ಅಲ್ಲಿ ಸ್ಥಳೀಯ ಆಸ್ಪತ್ರೆಗೆ ಸೇರಿಸುವಂತೆ ತಿಳಿಸಿದ ಕಾರಣ ವಾಪಸ್ ಊರಿಗೆ ಕರೆತರುವಾಗ ಮಾರ್ಗ ಮದ್ಯದಲ್ಲಿ ಮೃತ ಹೊಂದಿರುವುದಾಗಿ ಇತ್ಯಾದಿ.

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ

3] ಯು.ಡಿ.ಆರ್ ನಂ 02/12 ಕಲಂ 174 ಸಿ.ಆರ್,ಪಿ.ಸಿ ದಿನಾಂಕ 14-01-12 ರಂದು ಮೃತೆ ಚಿಕ್ಕತಾಯಮ್ಮ 50 ವರ್ಷ ಕೆರೆಯಲ್ಲಿ ನೀರು ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ಮೃತಪಟ್ಟಿರುತ್ತಾಳೆ

ಅಪಹರಣ ಪ್ರಕರಣ

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ

1] ಮೊ.ಸಂ 143-341-366 ರೆ/ವಿ 149 ಐಪಿಸಿ ದಿನಾಂಕ 14-01-12 ರಂದು ಪಿರ್ಯಾದಿ ಶಿವಲಿಂಗೇಗೌಡ ರವರ ಮಗಳು ಭಾರತೀ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸಮಾಡುತ್ತಿದ್ದು ಈ ದಿವಸ ದಿ.14-12-2012 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಕಾಲೇಜಿಗೆ ಹೋಗಲು ಕೆ.ಎಂ.ದೊಡ್ಡಿ ಓಂ ಶಾಂತಿ ಮಾರ್ಗದ ರಸ್ತೆಯಲ್ಲಿ ತನ್ನ ಸ್ವಂತ ಕೆಎ.11ಎಕ್ಸ್2364 ಟಿವಿಎಸ್, ಮೋಪೆಡ್ ನಲ್ಲಿ ಹೋಗುತ್ತಿದ್ದಾಗ ಈ ಕೇಸಿನ ಆರೋಪಿ ಆಲೂರಯ್ಯ ಮತ್ತು ಇತರರು ಪಿರ್ಯಾದಿ ಮಗಳು ಹೋಗುತ್ತಿದ್ದ ಮೊಪೆಡ್ನ್ನು ಅಡ್ಡಗಟ್ಟಿ ಬಲವಂತವಾಗಿ ಕಾರಿನ ಓಳಗಡೆ ಕಿರುಚದಂತೆ ಕುರಿಸಿಕೊಂಡು, ಹೊಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರು.

Road Safety

ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಂಡ್ಯ ಜಿಲ್ಲಾ ಪೊಲೀಸ್
ವತಿಯಿಂದ ನಡೆದ ಮ್ಯಾರಥಾನ್ ಓಟ






DCR of

Raid as 22-12-11

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ 345/11 ಕಲಂ 285 ಐಪಿಸಿ ಮತ್ತು ಕಲಂ 3 [ಬಿ] [ಸಿ] 4 [1] [] 6 & 7 ಎಲ್.ಪಿ.ಜಿ ರೆಗ್ಯೂಲೇಷನ್ ಫಾರ್ ಸಪ್ಲೈಸ್ ಮತ್ತು ಡಿಸ್ಟ್ರಿಬ್ಯುಷನ್ ಆರ್ಡರ್ 2000 ಮತ್ತು 3 & 7 .ಸಿ. ಆಕ್ಸ್

ದಿನಾಂಕ: 22-12-11 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಆರೋಪಿ -1 ಸೈಯದ್ ಬುರಾನ್ ರವರು ಅವರ ಮನೆಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದಾರೆಂದು ಪಿರ್ಯಾದಿ ಎನ್.ಸಿ ನಾಗೇಗೌಡ ಪೊಲೀಸ್ ಇನ್ಸ್ ಪೆಕ್ಟರ್ ಡಿ.ಎಸ್.ಬಿ ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿ ದೊರೆತ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಪಂಚರನ್ನು ಕರೆದುಕೊಂಡು ಆರೋಪಿ-1 ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಆರೋಪಿ-1 ರವರು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ಗಳನ್ನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು ಆತನನ್ನು ಹಿಡಿದು ವಿಚಾರಿಸಲಾಗಿ ತಾನು ಕಿರುಗಾವಲಿನ ಆರೋಪಿ-3 ರವರಿಂದ ಆರೋಪಿ- ವಿನೋದ್ ರವರ ಮುಖಾಂತರ ಹೆಚ್ಚಿನ ಹಣ ಕೊಟ್ಟು ಗ್ಯಾಸ್ ಸಿಲಿಂಡರ್ಗಳನ್ನು ಮಾರುತಿ ಆಮ್ನಿ ಕಾರಿನಲ್ಲಿ ತಂದು ಮಾರಾಟ ಮಾಡುತ್ತಿದ್ದುದ್ದಾಗಿ ತಿಳಿಸಿದ್ದು ನಂತರ ಆರೋಪಿಯನ್ನು ಕರೆದುಕೊಂಡು ಕಿರುಗಾವಲಿಗೆ ಹೋಗಿ ಆರೋಪಿ- ಪುಟ್ಟಸ್ವಾಮಿ ರವರ ಮನೆಯನ್ನು ಪರಿಶೀಲಿಸಿ ಅಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದು ಗ್ಯಾಸ್ ಸಿಲಿಂಡರ್ಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಆರೋಪಿ-ಪುಟ್ಟಸ್ವಾಮಿ ರವರ ಕೋಳಿ ಅಂಗಡಿಯಲ್ಲಿದ್ದ ಆರೋಪಿ-2 ರವರನ್ನು ವಶಕ್ಕೆ ತೆಗೆದುಕೊಂಡಿದ್ದು ಒಟ್ಟು ಭಾರತ್ ಕಂಪನಿಯ 8 ಗೃಹ ಬಳಕೆಯ ಎಲ್ಪಿಜಿ ಭರತ್ ಸಿಲಿಂಡರ್, ಭಾರತ್ ಕಂಪನಿಯ 2 ವಾಣಿಜ್ಯ ಬಳಕೆಯ ಖಾಲಿ ಸಿಲಿಂಡರ್, ಇಂಡೇನ್ ಕಂಪನಿಯ 10 ಗೃಹ ಬಳಕೆಯ ಖಾಲಿ ಸಿಲಿಂಡರ್, 3 ಚಿಕ್ಕ ಖಾಲಿ ಸಿಲಿಂಡರ್, ಒಂದು ರೀಫಿಲ್ಲಿಂಗ್ ರಾಡ್, ನಂ. ಸಿಟಿಎಕ್ಸ್ 4495 ರ ಮಾರುತಿ ಓಮ್ನಿ ಕಾರು ಮತ್ತು ನಗದು ಹಣ 1225-00 ರೂ. ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿ-1 & 2 ರವರನ್ನು ಮುಂದಿನ ಕ್ರಮದ ಬಗ್ಗೆ ಠಾಣೆಗೆ ಹಾಜರುಪಡಿಸಿರುವುದಾಗಿ ಇತ್ಯಾದಿ

Press Note: West PS On 18-12-2011

ಪತ್ರಿಕಾ ಪ್ರಕಟಣೆ
ದಿನಾಂಕ 17-12-2011 ರಂದು ಶ್ರೀರಂಗಪಟ್ಟಣ ಠಾಣೆಯ ಅಪರಾಧ ಪತ್ತೆ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಸಿಪಿಸಿ-01 ,ಕೆ.ಎನ್. ಸಿದ್ದರಾಜು, ಸಿಪಿಸಿ - 638 ಪ್ರಕಾಶ್, ಸಿಪಿಸಿ-633 ಕೃಷಶೆಟ್ಟಿ ರವರುಗಳು ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇಗೌಡನ ಕೊಪ್ಪಲು ಗ್ರಾಮದ ಬಳಿ ಬೆಳಿಗ್ಗೆ 0715 ಗಂಟೆಯಲ್ಲಿ ಅನುಮಾನಸ್ಪದವಾಗಿ ನಿಂತಿದ್ದ ಇಬ್ಬರು ಅಸಾಮಿಗಳನ್ನು ಹಿಡಿದು ಪ್ರಶ್ನಿಸಲಾಗಿ ತಮ್ಮ ಹೆಸರು 1] ರಘು ಡಿ ಕೆ ಬಿನ್ ಲೇಟ್ ಕಾಳೇಗೌಡ 20 ವರ್ಷ, ಒಕ್ಕಲಿಗರು ವ್ಯವಸಾಯ ವಾಸ ಕಂಪೇಗೌಡ ಸರ್ಕಲ್ ದೊಡ್ಡ ಬ್ಯಾಡರಹಳ್ಳಿ ಗ್ರಾಮ ಪಾಂಡವಪುರ ತಾಲ್ಲೂಕ್. 2] ನಿಂಗೇಗೌಡ @ ನಿಂಗ ಬಿನ್ ತಮ್ಮೇಗೌಡ 24 ವರ್ಷ, ವಕ್ಕಲಿಗರುವ್ಯವಸಾಯ ವಾಸ ಕಂಪೇಗೌಡ ಸರ್ಕಲ್ ದೊಡ್ಡ ಬ್ಯಾಡರಹಳ್ಳಿ ಗ್ರಾಮ ಪಾಂಡವಪುರ ತಾಲ್ಲೂಕು ಎಂತಲೂ ತಿಳಿಸಿದ್ದು, ಅವರ ಬಳಿ ಇದ್ದ ಮೊಟಾರ್ ಸೈಕಲ್ ಮತ್ತು ಪಂಪ್ಸೆಟ್ನ ಬಗ್ಗೆ ಯಾವುದೇ ಸರಿಯಾದ ಮಾಹಿತಿಯನ್ನು ನೀಡದೆ ಇದ್ದಾಗ ಅವರುಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪಿಎಸ್ಐ ರವರ ಮುಂದೆ ಹಾಜರು ಪಡಿಸಲಾಗಿ ಪಿಎಸ್ಐ ರವರು ಮೆಲ್ಕಂಡವರುಗಳನ್ನು ಕೂಲಂಕುಷವಾಗಿ ವಿಚಾರ ಮಾಡಲಾಗಿ, ಸದರಿ ಆಸಾಮಿಗಳು ಮತ್ತೊಬ್ಬ ಕಾಳೇನಹಳ್ಳಿ ಕುಮಾರನ ಜೊತೆಯಲ್ಲಿ ಸೇರಿ ಪಾಂಡವಪುರ ತಾಲ್ಲೂಕು, ತಿಮ್ಮನ ಕೊಪ್ಪಲು, ತಿರುಮಾಲಾಪುರ, ಕನಗನಮರಡಿ, ದೊಡ್ಡಬ್ಯಾಡರಹಳ್ಳಿ, ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು, ಗಣಂಗೂರು ಗ್ರಾಮಗಳಲ್ಲಿ ಜಮೀನಿಗೆ ಅಳವಡಿಸಿದ್ದ ಪಂಪ್ಸೆಟ್ ಮೋಟಾರ್ಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಅವರ ಸ್ವಯಿಚ್ಚಾ ಹೇಳಿಕೆ ಮೇರೆಗೆ ಮೇಲ್ಕಂಡಂತೆ ಆರೋಪಿಗಳು ಕಳುವು ಮಾಡಿರುವ ಒಟ್ಟು 5 ಪಂಪ್ಸೆಟ್ ಮೋಟಾರ್ ಹಾಗೂ ಕೃತ್ಯಕ್ಕೆ ಬಳಸಿರುವ ಹಿರೋ ಹೊಂಡಾ ಮೊಟಾರ್ ಸೈಕಲ್ ನಂ. ಕೆಎ 09-ಈಜಿ-6119 ನ್ನು ಅಮಾನತ್ತುಪಡಿಸಿದ್ದು, ಅವುಗಳ ಅಂದಾಜು ಬೆಲೆ 1 ಲಕ್ಷ ರೂಗಳಾಗಿರುತ್ತದೆ. ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿರುತ್ತದೆ.

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅದಿಕಾರಿ ಮತ್ತು ಸಿಬ್ಬಂದಿಯವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಂಡ್ಯ ಜಿಲ್ಲೆ ರವರು ಪ್ರಶಂಶಿಸಿರುತ್ತಾರೆ.

Press Note: West PS On 16-12-2011


ಪತ್ರಿಕಾ ಪ್ರಕಟಣೆ
ಮಂಡ್ಯ ಉಪ ವಿಭಾಗದ ಅಪರಾಧ ಪತ್ತೆ ದಳದಿಂದ 8 ಮಂದಿ ಆರೋಪಿಗಳ ಬಂಧನ ಇವರುಗಳಿಂದ 2 ಲಕ್ಷ ರೂ ಮೌಲ್ಯದ ಕಳುವು ಮಾಡಿ ಸುಟ್ಟಿರುವ ಏರಟೆಲ್ ಫೀಡರ್ ವೈರ್ ನ ಬಾಬ್ತು 447 ಕೆ.ಜಿ. ಯಷ್ಟು ತಾಮ್ರದ ಕೇಬಲ್ ವಶ
ಮಂಡ್ಯ ಉಪ ವಿಭಾಗದ ಅಪರಾಧ ಪತ್ತೆ ದಳದವರು ದಿನಾಂಕ:13-12-2011 ರಂದು ಮಾರುತಿ ಓಮ್ನಿ ಕಾರ್ ನಂ ಕೆಎ-03-ಎನ್ 570 ರಲ್ಲಿ ಅನುಮಾನಸ್ಪದವಾಗಿ ಇದ್ದ 4 ಜನ ಅಸಾಮಿಗಳನ್ನು ಅದರಲ್ಲಿದ್ದ ಸುಟ್ಟಿರುವ ತಾಮ್ರದ ಕೇಬಲ್ ನ ಸಮೇತ ಬಂಧಿಸಿ ಅವರುಗಳನ್ನು ವಿಚಾರಣೆಗೊಳಪಡಿಸಲಾಗಿ ಸದರಿ ಅಸಾಮಿಗಳು ಈ ಕೆಳಕಂಡ ಇತರೆ ಆರೋಪಿಗಳ ಜೊತೆ ಸೇರಿ ಈಗ್ಗೆ ಸುಮಾರು 1 ತಿಂಗಳಿನಿಂದ ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಸೇರಿದ ಬೂದಿಹಾಳದ ಬಳಿ ಇರುವ ಏರಟೆಲ್ ನ ಗೋಡಾನ್ ಬಳಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 7 ಲಕ್ಷ ರೂ ಮೌಲ್ಯದ ಏರಟೆಲ್ ಫೀಡರ್ ಕೇಬಲ್ ನ್ನು ಬಂಡಲ್ ಸಮೇತ 3 ಬಾರಿ ಕಳವು ಮಾಡಿಕೊಂಡು ಬಂದು ಮಂಡ್ಯ ಕೆರೆ ಅಂಗಳದಲ್ಲಿ ಮಂಡ್ಯ ಕೆರೆ ಅಂಗಳದಲ್ಲಿ ಮಂಡ್ಯದ ಜಬ್ಬರ್ ಸರ್ಕಲ್ ನ ವಾಸಿ ಫಾರುಕ್ ಅಬ್ದುಲ್ಲಾ ಎಂಬುವವರೊಂದಿಗೆ ಸೇರಿ ಸುಟ್ಟು ಹಾಕಿ ಆತನಿಗೆ ಮಾರಾಟ ಮಾಡಿದ 447 ಕೆ.ಜಿ ಯಷ್ಟು ತಾಮ್ರದ ಕೇಬಲ್ ನ್ನು ವಶಪಡಿಸಿಕೊಂಡಿರುತ್ತದೆ. ಇವುಗಳ ಒಟ್ಟು ಮೌಲ್ಯ 2 ಲಕ್ಷ ರೂಗಳಾಗಿರುತ್ತದೆ.

ಆರೋಪಿಗಳ ಹೆಸರು ವಿಳಾಸ
1.ಅಂದಾನಿ ಬಿನ್ ಲೇ|| ದೊಡ್ಡಯ್ಯ, 28 ವರ್ಷ, ಪರಿಶಿಷ್ಟ ಜನಾಂಗ, ಡ್ರೈವರ್ ಕೆಲಸ, ವಾಸ ಮಲ್ಲೇಶ್ವರ ಬಡಾವಣೆ, ರಾಮನಗರ ಟೌನ್.
2.ಶಿವಕುಮಾರ @ ರವಿ ಬಿನ್ ಮಹದೇವ, 24 ವರ್ಷ, ದೊಂಬಿದಾಸರ ಜನಾಂಗ, ಕೂಲಿ ಕೆಲಸ, ವಾಸ ಹನುಮಂತ ನಗರ, ಐಜೂರು, ರಾಮನಗರ ಟೌನ್.
3] ರಂಗನಾಥ ಬಿನ್ ರಂಗಪ್ಪ, 28ವರ್ಷ, ದೊಂಬಿದಾಸರ ಜನಾಂಗ, ಕೂಲಿ ಕೆಲಸ, ವಾಸ-26ನೇ ವಾಡರ್್, 2ನೇ ಕ್ರಾಸ್, ಐಜೂರು, ರಾಮನಗರ ಟೌನ್
4] ಪ್ರತಾಪ ಬಿನ್ ವೀರ, 19ವರ್ಷ, ತಮಿಳು ಜನಾಂಗ, ಪ್ಲಂಬರ್ ಕೆಲಸ, ವಾಸ-ತಮಿಳು ಕಾಲೋನಿ ಚನ್ನಪಟ್ಟಣ ಟೌನ್
5] ರಾಜೇಶ ಬಿನ್ ಲೇ. ನಾಗರಾಜು. 23 ವರ್ಷ, ವಕ್ಕಲಿಗರು, ಕೂಲಿಕೆಲಸ, ವಾಸ-ಕೋಡಿಪುರ, 25ನೇ ವಾಡರ್್, ಐಜೂರು, ರಾಮನಗರ ಟೌನ್
6] ಮುನಿಯ ಬಿನ್ ಏಳುಮಲೈ, 24 ವರ್ಷ, ಪರಿಶಿಷ್ಟ ಜನಾಂಗ, ಕೂಲಿ ಕೆಲಸ, ವಾಸ- ಕಾಶೀಮಠ, ಐಜೂರು, ರಾಮನಗರ ಟೌನ್
7] ಕಾಳಯ್ಯ ಬಿನ್ ಲೇ. ರಾಮಸ್ವಾಮಿ, 23 ವರ್ಷ, ಪರಿಶಿಷ್ಟ ಜನಾಂಗ, ಕೂಲಿ ಕೆಲಸ, ವಾಸ- ನಾಗರಕಟ್ಟೆ, ಐಜೂರು, ರಾಮನಗರ ಟೌನ್
8] ಫಾರುಕ್ ಅಬ್ದುಲ್ಲಾ ಬಿನ್ ಸುಬಾನುಲ್ಲಾ, 35 ವರ್ಷ, ಮುಸ್ಲೀಂ ಜನಾಂಗ, ಟಿಂಕರ್ ಕೆಲಸ, ವಾಸ- ನಾಲಬಂದವಾಡಿ, ಜಬ್ಬರ್ ಸರ್ಕಲ್, ಮಂಡ್ಯ. ಸದರಿ ಆರೋಪಿಗಳನ್ನು ದಿನಾಂಕಃ15-12-2011 ರಂದು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅದಿಕಾರಿ ಮತ್ತು ಸಿಬ್ಬಂದಿಯವರಾದ ಮಂಡ್ಯ ಪಶ್ಚಿಮ ಠಾಣೆಯ ಪಿಎಸ್ಐ ಜೆ. ಮಂಜು, ಮಂಡ್ಯ ಪಶ್ಚಿಮ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಕೆ. ಪ್ರಭಾಕರ್, ಎಎಸ್ಐ ಸಿ.ಕೆ.ಪುಟ್ಟಸ್ವಾಮಿ, ಎಎಸ್ಐ ಕೆ.ಎಸ್. ಶಿವಲಿಂಗೇಗೌಡ ಸಿಬ್ಬಂದಿಗಳಾದ ನಾರಾಯಣ, ನಿಂಗಣ್ಣ, ಅಕರ್ೇಶ, ಟಿ.ಲಿಂಗರಾಜು, ಕೆ.ಸಿ.ನಟರಾಜು, ಪುಟ್ಟಸ್ವಾಮಿ, ಮಂಜುನಾಥ, ಭರತ್, ಪರಶುರಾಮ, ಚಂದ್ರಶೇಖರ, ಜೀಪ್ ಚಾಲಕರುಗಳಾದ ರವಿ, ಶ್ರೀನಿವಾಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಂಡ್ಯ ಜಿಲ್ಲೆ ರವರು ಪ್ರಶಂಶಿಸಿರುತ್ತಾರೆ.

press Note: West PS On 14-12-2011

ಪತ್ರಿಕಾ ಪ್ರಕಟಣೆ

ಸ್ನೇಹಿತನಿಂದಲೇ ಮನೆ ಕಳವು ಃ ಚಿನ್ನಾಭರಣ, ನಗದು ವಶ

ದಿನಾಂಕ 07-12-2011 ರಂದು ನಾಗಮಂಗಲ ತಾಲ್ಲೂಕು, ಬಿಂಡಿಗನವಿಲೆ ಠಾಣಾ ವ್ಯಾಪ್ತಿಯ ಡಿ.ಕೋಡಿಹಳ್ಳಿ ಗ್ರಾಮದ ತಿಮ್ಮಯ್ಯ ಬಿನ್ ಲೇ ತಿಮ್ಮಯ್ಯ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಹೊಲ ಕುಯ್ಯಲು ಹೋಗಿದ್ದು ಮತ್ತು ವಾಪಸ್ಸ್ ಬಂದು ನೋಡಲಾಗಿ ಮನೆಯ ಚಿಲಕವನ್ನು ಮುರಿದು ಮನೆಯಲ್ಲಿನ ಬೀರುವಿನಲ್ಲಿದ್ದ 60.000/- ರೂ ಮೌಲ್ಯದ ಚಿನ್ನ, ಬೆಳ್ಳಿ ವಡವೆ ಹಾಗೂ 10.000 ರೂ ನಗದು ಹಣವನ್ನು ಕಳುವು ಮಾಡಿದ್ದು, ಅದೇ ರೀತಿ ತಿಮ್ಮೇಗೌಡ ಬಿನ್ ಲೇ ಗೌಡೇಗೌಡ ಮನೆಯಲ್ಲಿಯೂ ಸಹ 48500/- ರೂ ನಗದನ್ನು ಕಳವು ಮಾಡಿದ್ದು ಈ ಬಗ್ಗೆ ಬಿಂಡಿಗನವಿಲೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣಗಳ ತನಿಖೆಯನ್ನು ಸಿಪಿಐ, ನಾಗಮಂಗಲ ವೃತ್ತ ರವರು ಕೈಗೊಂಡಿದ್ದು, ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ಸಿಬ್ಬಂದಿಯೊಡನೆ ಮಾಹಿತಿ ಪಡೆದಿದ್ದು, ಮೇಲ್ಕಂಡ ಕೃತ್ಯ ನಡೆಯುವ ಹಿಂದಿನ ದಿನದಲ್ಲಿ ಡಿ. ಕೋಡಿಹಳ್ಳಿ ಗ್ರಾಮದ ನಂಜುಂಡೇಗೌಡರ ಮಗ ಹರೀಶ, ರಾಮೇಗೌಡನ ಮಗ ಕಿರಣ ಮತ್ತು ಕೇಸಿನ ಪಿರ್ಯಾದಿ ಪೂಜಾರಿ ತಿಮ್ಮಯ್ಯನ ಮಗ ಮಹೇಶ ಎಂಬುವವರು ಜೊತೆಯಲ್ಲಿದ್ದು, ಈ ಘಟನೆ ನಡೆದ ನಂತರ ಆರೋಪಿ ಹರೀಶನು ಗ್ರಾಮದಲ್ಲಿಲ್ಲದೆ ಬೆಂಗಳೂರಿಗೆ ಹೋಗಿರುವುದಾಗಿ ಮಾಹಿತಿ ತಿಳಿದುಬಂದಿದ್ದು, ಸ್ಥಳೀಯ ಪೊಲೀಸ್ ಅದಿಕಾರಿಗಳು ಹಾಗೂ ಸಿಬ್ಬಂದಿಗಳು ಆತನ ಚಲನ ವಲನಗಳ ಮೇಲೆ ನಿಗಾ ಇಟ್ಟು ನಂತರ ಆತನನ್ನು ದಿನಾಂಕಃ 13-12-2011 ರಂದು ಬೆಂಗಳೂರಿನಲ್ಲಿ ವಶಕ್ಕೆ ತೆಗೆದುಕೊಂಡು ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ತಮ್ಮ ಗ್ರಾಮದ ರಾಮೇಗೌಡನ ಮಗ ಕಿರಣ್ ಎಂಬಾತನು ಆಟೋರಿಕ್ಷಾ ಸಾಲ ಕಟ್ಟಲು ಹಳ್ಳದ ಹೊಸಹಳ್ಳಿ ಗ್ರಾಮದಲ್ಲಿ 50.000 ರೂಗಳನ್ನು ಬಡ್ಡಿಗೆ ತೆಗೆದುಕೊಂಡಿದ್ದು, ಆಗ ತಾನು ಸಹ ಆತನ ಜೊತೆಯಲ್ಲಿ ಹೋಗಿದ್ದು, ಆ ದುಡ್ಡನ್ನು ಪೂಜಾರಿ ತಿಮ್ಮಯ್ಯನವರ ಮಗ ಮಹೇಶನ ಮನೆಯಲ್ಲಿಟ್ಟಿದ್ದನು. ತಾನು ಸ್ವಲ್ಪ ಸಾಲ ಮಾಡಿಕೊಂಡಿದ್ದರಿಂದ ಅದನ್ನು ತೀರಿಸುವ ಸಲುವಾಗಿ ಮೆಲ್ಕಂಡ ಎರಡು ಮನೆಗಳಲ್ಲಿ ಕಳ್ಳತನ ಮಾಡಿದ್ದಾಗಿ ತಿಳಿಸಿರುತ್ತಾನೆ. ನಂತರ ಆತನನ್ನು ದಸ್ತಗಿರಿ ಮಾಡಿ ಆತನು ನೀಡಿದ ಸುಳಿವಿನ ಮೇರೆಗೆ ಕಳವು ಮಾಡಿದ್ದ 60,000/- ರೂ ಬೆಲೆ ಬಾಳುವ ಒಡವೆಗಳು ಹಾಗೂ 32.500/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗಬಂದನಕ್ಕೆ ಒಪ್ಪಿಸಿರುತ್ತಾರೆ.

ಆರೋಪಿಯನ್ನು ಪತ್ತೆ ಮಾಡಲು ಶ್ರಮ ವಹಿಸಿದ ನಾಗಮಂಗಲ ವೃತ್ತನಿರೀಕ್ಷಕರಾದ ಶ್ರೀ. ಟಿ.ಡಿ.ರಾಜು, ಸಿಬ್ಬಂದಿಯವರಾದ ಸಿಪಿಸಿ 404, ಜಿ.ನಾಗರಾಜು, ಬಿಂಡಿಗನವಿಲೆ ಠಾಣೆ ರವರು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.

Mandya District Police Annual Sports Meet-2011








Press Note: West PS On 01-11-2011

Press Note: West PS On 01-11-2011

-ಃ ಪತ್ರಿಕಾ ಪ್ರಕಟಣೆ ಃ-
   
ಮಂಡ್ಯ ನಗರದ ಎಂ.ಸಿ. ರಸ್ತೆಯಲ್ಲಿರುವ ಸಕರ್ಾರಿ ಮಹಾವಿದ್ಯಾಲಯದ ಬಳಿ ಹೊಂಚುಹಾಕುತ್ತಿದ್ದ  3 ಜನ ದರೋಡೆಕಾರರಾದ ಕೆ.ಪಿ. ಚಂದ್ರ @ ದರಸಗುಪ್ಪೆ ಚಂದ್ರ, ಮೋಹನ ಕುಮಾರ @ ಪುರಿಬಟ್ಟಿ ಮೋಹನ, ವಿನಯ @ ಗಾಂಧಿ ಇವರುಗಳ ಬಂಧನ ಇವರುಗಳಿಂದ, ಒಂದು ಮೋಟಾರ್ ಸೈಕಲ್ ಮತ್ತು ಅಕ್ರಮವಾಗಿ ಇಟ್ಟುಕೊಂಡಿದ್ದ ಒಂದು ರಿವಾಲ್ವಾರ್ ಹಾಗೂ 4 ಗುಂಡುಗಳ ವಶ  
 
ದಿನಾಂಕ 01-12-11 ರಂದು ಬೆಳಗಿನ ಜಾವ  0435 ಗಂಟೆಯ ಸಮಯದಲ್ಲಿ ಮಂಡ್ಯ ನಗರ ಸರ್ಕಲ್ ಇನ್ಸ್ಪೆಕ್ಟರ್ ಅಪ್ ಪೊಲೀಸ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಪಿಐ, ಮಂಡ್ಯ ನಗರ ರವರು  ಸಿಬ್ಬಂದಿಯವರ ಸಮೇತ ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ ಬಳಿ ದರೋಡೆಮಾಡಲು ಹೊಂಚುಹಾಕುತ್ತಿದ್ದ ಈ ಕೆಳಕಂಡ ಅಸಾಮಿಗಳ ಮೇಲೆ ದಾಳಿ ಮಾಡಿ ಅವರ ವಶದಲ್ಲಿದ್ದ  ಅಪಾಯಕಾರಿ ವಸ್ತುಗಳಾದ ಲಾಂಗು ಮಚ್ಚು, ಒಂದು ಚೂರಿ, ಖಾರದ ಪುಡಿ ಪೊಟ್ಟಣ, 2 ಹಗ್ಗಗಳು, ಎರಡು ಕಾಡು ಮರದ ದೊಣ್ಣೆಗಳು, ಮೂರು ಮಂಕಿ ಕ್ಯಾಪ್, ರೂ. 1000/- ನಗದು ಹಣ, ಒಂದು ಪ್ಲಾಸ್ಟಿಕ್ ಚೀಲ, ಒಂದು ಹಿರೋಹೊಂಡಾ ಎಸ್ಎಸ್ ಸಿಡಿ 100 ಮೋಟಾರ್ ಸೈಕಲ್, 4 ಮೊಬೈಲ್ ಹ್ಯಾಂಡ್ಸೆಟ್ಗಳ ಸಮೇತ ಹಿಡಿದು ವಶಕ್ಕೆ ತೆಗೆದುಕೊಂಡು ಠಾಣಾ.ಮೊ.ಸಂ. 326/11 ಕಲಂ. 399-402 ಭಾ.ದ.ಸಂ. ರೀತ್ಯ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. 
 
ಆರೋಪಿಗಳ ಹೆಸರು ವಿಳಾಸ ಕೆಳಕಂಡಂತಿರುತ್ತದೆ.
1]  ಕೆ.ಪಿ. ಚಂದ್ರ @ ಪಿ.ಕೆ. @ ದರಸಗುಪ್ಪೆ ಚಂದ್ರ ಬಿನ್ ಪುಟ್ಟೇಗೌಡ, 28ವರ್ಷ, ವಕ್ಕಲಿಗರು, ವ್ಯವಸಾಯ ವಾಸ-ಕಪ್ಪರನಕೊಪ್ಪಲು [ದರಸಗುಪ್ಪೆ] ಗ್ರಾಮ,    ಶ್ರೀರಂಗಪಟ್ಟಣ ತಾ, ಮಂಡ್ಯ ಜಿಲ್ಲೆ
  
 2] ಮೋಹನ್ಕುಮಾರ @ ಮೋಹನ @ ಪುರಿಬಟ್ಟಿ ಮೋಹನ ಬಿನ್ ಲೇ. ವೆಂಕಟಪ್ಪ, 27ವರ್ಷ, ಗಾಣಿಗಶೆಟ್ಟರ ಜನಾಂಗ, ನಾರಾಯಣಪ್ಪರ ಪುರಿಬಟ್ಟಿಯಲ್ಲಿ ಕೆಲಸ,ವಾಸ-3ನೇ ಕ್ರಾಸ್, ಸಿಹಿನೀರುಕೊಳ, ಮಂಡ್ಯ
 
3] ವಿನಯ @ ಗಾಂಧಿ ಬಿನ್ ಕೃಷ್ಣೇಗೌಡ, 22ವರ್ಷ, ವಕ್ಕಲಿಗರು, ವಾಸ-ಕೊಮ್ಮೇರಹಳ್ಳಿ ಗ್ರಾಮ, ಮಂಡ್ಯ ತಾಲ್ಲೋಕು   
 
ನಂತರ ಮೆಲ್ಕಂಡ ಆರೋಪಿಗಳನ್ನು ಅ ದಿನವೇ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ವಶಕ್ಕೆ ಪಡೆದುಕೊಂಡು ನಂತರ ವಿಚಾರಣೆ ಕಾಲದಲ್ಲಿ ಮೇಲ್ಕಂಡ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಅನಧಿಕೃತವಾಗಿ ಪರವಾನಿಗೆ ಇಲ್ಲದ ಒಂದು ರಿವಾಲ್ವಾರ್ ಮತ್ತು 4 ಗುಂಡುಗಳನ್ನು ಮಂಡ್ಯ ತಾಲ್ಲೋಕು ರಾಗಿಮುದ್ದನಹಳ್ಳಿ ಬಳಿ ಇರುವ ತೆಂಗಿನ ತೋಟ ಒಂದರಲ್ಲಿ ಬಚ್ಚಿಟ್ಟಿದ್ದನ್ನು ಅವರುಗಳ ಮುಖಾಂತರ ತನಿಖಾದಿಕಾರಿಗಳು ವಶಪಡಿಸಿಕೊಂಡಿರುತ್ತಾರೆ
 
     ಮೆಲ್ಕಂಡ ಆರೋಪಿಗಳು ಈ ಕೇಸಿನಲ್ಲಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳೊಂದಿಗೆ ಸೇರಿ ತಮ್ಮ ಎದುರಾಳಿಗಳನ್ನು ಕೊಲೆ ಮಾಡಲು ಸಂಚು ಮಾಡಿದ್ದು, ಅದಕ್ಕೆ ಉಪಯೋಗಿಸಲು ಬಚ್ಚಿಟ್ಟಿರುವುದಾಗಿ ವಿಚಾರಣೆ ಕಾಲದಲ್ಲಿ ತಿಳಿದು ಬಂದಿರುತ್ತೆ.  ಈ ಕೇಸಿನಲ್ಲಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ. ನಂತರ ಆರೋಪಿಗಳನ್ನು ಈ ದಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅವರುಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿರುತ್ತದೆ. 

ಈ ಮೆಲ್ಕಂಡ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ.ಕೆ.ಆರ್ ಕಾಂತರಾಜ್, ಮಂಡ್ಯ ಪಶ್ಚಿಮ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಶ್ರೀ ಜೆ. ಮಂಜು, ಅಪರಾಧ ವಿಭಾಗದ ಪಿಎಸ್ಐ ಶ್ರೀ ಕೆ. ಪ್ರಭಾಕರ್, ಮಂಡ್ಯ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಸಿ. ಕೆ. ಪುಟ್ಟಸ್ವಾಮಿ, ನಿಂಗಣ್ಣ, ನಾರಾಯಣ, ಅರ್ಕೇಶ, ಟಿ. ಲಿಂಗರಾಜು, ಮಂಜುನಾಥ್, ತಿಲಕ್ಕುಮಾರ್, ಪರಶುರಾಮ, ಪುಟ್ಟಸ್ವಾಮಿ, ಭರತ್, ಮುದ್ದುಮಲ್ಲಪ್ಪ, ಜೀಪ್ ಚಾಲಕರಾದ ರವಿ, ಶ್ರೀನಿವಾಸ  ಹಾಗೂ ಇತರೆ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.

raid on 06-11-11

ದಿನಾಂಕ: 06-11-11 ರಂದು ಸಂಜೆ 06-00 ಗಂಟೆಯ ಸಮಯದಲ್ಲಿ ಶ್ರೀ ಕೃಷ್ಣಮೂರ್ತಿ ಪೊಲೀಸ್ ಇನ್ಸ್ ಪೆಕ್ಟರ್ . ಡಿ.ಸಿ.ಐ.ಬಿ ಡಿ,ಪಿ.ಓ ಮಂಡ್ಯ ರವರಿಗೆ ಬಾಕ್ಮಿಧಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕೆರಗೋಡು ಟೌನಿನ, ಮಂಡ್ಯ - ಕೊಪ್ಪ ಮುಖ್ಯ ರಸ್ತೆಯ ಪಶ್ಚಿಮ ದಿಕ್ಕಿನಲ್ಲಿರುವ ಪ್ರಕಾಶರವರ ಬಿಲ್ಡಿಂಡ್ ನಲ್ಲಿ, ಸತೀಶ ಎಂಬುವವರ ಚಿಲ್ಲರೆ ಅಂಗಡಿಯಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯ ಮೇರೆಗೆ. ಕೃಷ್ಣಮೂರ್ತಿ ಪೊಲೀಸ್ ಇನ್ಸ್ ಪೆಕ್ಟರ್ ರವರು ಮತ್ತು ಸಿಬ್ಬಂದಿಗಳಾದ ಎಂ.ಎಸ್. ಗುರುಸ್ವಾಮಿ. ಸಿ.ಹೆಚ್.ಸಿ 277. ಸಿ.ಹೆಚ್.ಸಿ 04 ಮಾದಯ್ಯ. ಸಿ.ಹೆಚ್.ಸಿ 191 ಸಿ.ಡಿ. ನಿಂಗೇಗೌಡ. ಸಿಪಿಸಿ 343 ವಿ. ಬಾಬು. ಸಿ.ಪಿ.ಸಿ. 580 ರಮೇಶ. ಸಿಪಿಸಿ 731 ಅರಸು. ಎ.ಪಿ.ಸಿ. ಕೇಶವ ಮೂರ್ತಿ ರವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಒಬ್ಬ ಅಸಾಮಿ ನಿಂತಿದ್ದು ಆತನನ್ನು ವಿಚಾರ ಮಾಡಲಾಗಿ ನನ್ನ ಹೆಸರು ಸತೀಶ ಎಂದು ತಿಳಿಸಿದ ಮತ್ತೊಂದು ಕೋಣೆಯಲ್ಲಿ 5 ಜನರು ಬಾರ್ ಮಾದರಿಯಲ್ಲಿ ಕುಳಿತು ಕೊಂಡು ಕುಡಿಯುತ್ತಿದ್ದು. ಸತೀಶನನ್ನು ಯಾವುದಾದರು ಲೈಸನ್ಸ್ ಇದೆಯೇ ಎಂದು ಕೇಳಲಾಗಿ ಯಾವುದೇ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿದ,. ನಂತರ ಆತನ ಅಂಗಡಿಯನ್ನು ಪರಿಶೀಲಿಸಲಾಗಿ ಅಂಗಡಿಯಲ್ಲಿ ಸೂಪರ್ ಜಾಕ್ 180 ಎಂ.ಎಲ್ ನ 1 ಬಾಟಲ್. ಸೂಪರ್ ಜಾಪ್ ಕ್ಲಾಸಿಕ್ 180 ಎಂ.ಎಲ್ 1 ಬಾಟಲ್. ಸಾವರಿನ್ ಬ್ರಾಂಡಿ 180 ಎಂ.ಎಲ್ ನ 3 ಬಾಟಲ್. ಓಲ್ಡ್ ಟ್ರವಿನ್ ವಿಸ್ಕಿ 180 ಎಂ.ಎಲ್ ನ 3 ಬಾಟಲ್. ಓಲ್ಡ್ ಅಡಿವಿರಲ್ ಬ್ರಾಂಡಿ 3 ಬಾಟಲ್, ಓಲ್ಡ್ ಅಡಿವಿರಲ್ ಬ್ರಾಂಡಿ 90 ಎಂ.ಎಲ್ 1 ಬಾಟಲ್ ಮತ್ತು ಮ್ಯಾಕ್ ಡುವೆಲ್ ಬ್ರಾಂಡಿ 90 ಎಂ.ಎಲ್ ನ 7 ಬಾಟಲ್ ಗಳು ಮತ್ತು ಈ ದಿನ ವ್ಯಾಪಾರ ಮಾಡಿದ ಬಾಬ್ತು ರೂ 2606/- ಹಣವನ್ನು ಸದರಿ ವ್ಯಕ್ತಿಯಿಂದ ವಶಪಡಿಸಿಕೊಂಡು. ಅನಧಿಕೃತವಾಗಿ ಬಾರ್ ನಡೆಸುತ್ತಿದ್ದ ಬಾರ್ ಮಾಲೀಕನಾದ ಸತೀಶನ ವಿರುದ್ದ ಕೆರಗೋಡು ಪೊಲೀಸ್ ಠಾಣೆಯ ಮೊ.ಸಂ 197/11 ಕಲಂ 32-34 ಕೆ.ಇ ಆಕ್ಟ್ ಪ್ರಕಾರ ಕೇಸು ದಾಖಲು ಮಾಡಿ ನ್ಯಾಯಾಲಕ್ಕೆ ಹಾಜರ್ ಪಡಿಸಿರುತ್ತೆ

Press Note Dated: 05-11-2011.

ಪತ್ರಿಕಾ ಪ್ರಕಟಣೆ

ಇತ್ತೀಚಿಗೆ ಮಹಿಳೆಯರ ಮಾಂಗಲ್ಯ ಸರ ಅಪಹರಣ ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನಲೆಯಲ್ಲಿ ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲುಗಳ ಪತ್ತೆ ಮಾಡಲು ಪಾಂಡವಪುರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನರಸಿಂಹಯ್ಯ ರವರ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀ ಕೆ.ಮಂಜು, ಎಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು.

ಈ ತಂಡವು ಕಾರ್ಯಪ್ರವೃತ್ತರಾಗಿ ದಿನಾಂಕ:13-10-2011 ರಂದು ಆರೋಪಿ 1. ರಾಜೇಶ ಬಿನ್ ಪುಟ್ಟಸ್ವಾಮಿ, 28 ವರ್ಷ, ಬೈಕ್ ಮೆಕಾನಿಕ್ ಕೆಲಸ, ಹೊಸಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು. 2. ಅನಂತಕುಮಾರ್ ಬಿನ್ ವರದರಾಜು, 28 ವರ್ಷ, ಕುಂಬಾರಕೊಪ್ಪಲು, ಮೈಸೂರು ರವರನ್ನು ಪಾಂಡವಪುರ ಠಾಣಾ ಮೊ.ಸಂ.445/11 ಕಲಂ 392-511 ಐಪಿಸಿ ಪ್ರಕರಣದಲ್ಲಿ ದಸ್ತಗಿರಿ ಮಾಡಿ ವಿಚಾರಣೆ ಕೈಗೊಂಡು ನಂತರ ದಿನಾಂಕ:14-10-2011 ರಿಂದ ದಿನಾಂಕ:17-10-2011 ರವರೆಗೆ ಇಬ್ಬರೂ ಆರೋಪಿಗಳನ್ನು ಪೊಲೀಸ್ ಬಂಧನಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿ 1 ರಾಜೇಶನು ತಾನು ಮತ್ತು ಮತ್ತೊಬ್ಬ ಆರೋಪಿ ಪುರುಷೋತ್ತಮ ಬಿನ್ ರುದ್ರಪ್ಪ, 23 ವರ್ಷ, ಟೈಲರ್ ಕೆಲಸ, ಬೆಳಗೊಳ ಗ್ರಾಮ, ಶ್ರೀರಂಗಪಟ್ಟಣ ತಾ|| ಇಬ್ಬರೂ ಸೇರಿ ಮಂಡ್ಯ, ಪಾಂಡವಪುರ ಮತ್ತು ಮೈಸೂರುಗಳಲ್ಲಿ ಸರ ಅಪಹರಣದ ಕೃತ್ಯವೆಸಗಿರುವುದಾಗಿ ತಿಳಿಸಿದ ಮೇರೆಗೆ ಆರೋಪಿ ರಾಜೇಶನು ಕೊಟ್ಟ ಮಾಹಿತಿಯಂತೆ ಪಾಂಡವಪುರ ಠಾಣಾ ಮೊ.ಸಂ.296/2011 ಕಲಂ 392 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿತ್ತು. ಆರೋಪಿ ಅನಂತ ಕುಮಾರನ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಿಕೊಂಡು ಆರೋಪಿ ಪುರುಷೋತ್ತಮನ ಪತ್ತೆ ಬಗ್ಗೆ ಬಲೆ ಬೀಸಲಾಗಿತ್ತು.

ನಂತರ ದಿನಾಂಕ 01-11-2011 ರಂದು 3 ನೇ ಆರೋಪಿ ಪುರುಷೋತ್ತಮ ಬಿನ್ ರುದ್ರಪ್ಪ, 23 ವರ್ಷ, ಟೈಲರ್ ಕೆಲಸ, ಬೆಳಗೊಳ ಗ್ರಾಮ, ಶ್ರೀರಂಗಪಟ್ಟಣ ತಾ|| ಈತನನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದಾಗ ತಾನು ಮತ್ತು ಮೇಲ್ಕಂಡ 1 ನೇ ಆರೋಪಿ ರಾಜೇಶ ಬಿನ್ ಪುಟ್ಟಸ್ವಾಮಿ(ಈಗಾಗಲೇ ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿರುವ) ಜೊತೆ ಸೇರಿ ಸರ ಅಪಹರಣದ ಪ್ರಕರಣಗಳನ್ನು ಎಸಗಿರುವುದಾಗಿ ತಿಳಿಸಿದ ಮೇರೆಗೆ ಆರೋಪಿ ಪುರುಷೋತ್ತಮನನ್ನು ದಿ:02-11-2011 ರಿಂದ 04-11-2011 ರವರೆಗೆ ಪೊಲೀಸ್ ಬಂಧನಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಆರೋಪಿ ನೀಡಿದ ಮಾಹಿತಿಯ ಮೇರೆಗೆ ಮಂಡ್ಯ ಗ್ರಾಮಾಂತರ ಠಾಣಾ ಮೊ.ಸಂ.239/11 ಕಲಂ 392 ಐಪಿಸಿ ಕೇಸಿಗೆ ಸಂಬಂಧಿಸಿದ 15 ಗ್ರಾಂ ಚಿನ್ನದ ಚೈನು, 2 ಗ್ರಾಂ, 3 ಮಿಲಿಯ 2 ಚಿನ್ನದ ಕಾಸುಗಳು, 5 ಗ್ರಾಂ ಚಿನ್ನದ ತಾಳಿಯನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ.

ನಂತರ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ರಾಜೇಶನನ್ನು ದಿನಾಂಕ:03-11-11 ರಿಂದ 05-11-11 ರವರೆಗೆ ಪೊಲೀಸ್ ಬಂಧನಕ್ಕೆ ಪಡೆದುಕೊಂಡು ಆರೋಪಿಗಳಿಬ್ಬರನ್ನೂ ಜೊತೆಯಾಗಿ ವಿಚಾರಣೆ ಮಾಡಿ ತನಿಖೆ ಕೈಗೊಂಡಿದ್ದು, ಅವರು ಕೊಟ್ಟ ಮಾಹಿತಿಯ ಮೇರೆಗೆ ಈ ಕೆಳಕಂಡ ಪ್ರಕರಣಗಳಲ್ಲಿ ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.

ಮಂಡ್ಯ ಪೂರ್ವ ಪೊಲೀಸ್ ಠಾಣಾ ಮೊ.ಸಂ.137/11 ಕಲಂ 392 ಐಪಿಸಿ

ದಿನಾಂಕ 21-05-11 ರಂದು ರಾತ್ರಿ ಶ್ರೀಮತಿ ರಾಣಿ ಕೋಂ ಚಂದ್ರಶೇಖರ್, ಮಂಡ್ಯ ರವರು ಷುಗರ್ ಫ್ಯಾಕ್ಟರಿ ಕಲ್ಯಾಣ ಮಂಟಪಕ್ಕೆ ತನ್ನ ಗಂಡನ ಜೊತೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಆಕೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಮತ್ತು ಮುತ್ತಿನ ಸರವನ್ನು ಕಿತ್ತುಕೊಂಡು ಹೋಗಿದ್ದು, ಈ ಸಂಬಂಧ 18 ಗ್ರಾಂ, 150 ಮಿಲಿಯುಳ್ಳ ಚಿನ್ನದ ಚೈನ್ ನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.

ಮಂಡ್ಯ ಪೂರ್ವ ಪೊಲೀಸ್ ಠಾಣಾ ಮೊ.ಸಂ.143/11 ಕಲಂ 392 ಐಪಿಸಿ

ದಿನಾಂಕ 26-05-11 ರಂದು ರಾತ್ರಿ ಶ್ರೀಮತಿ ಮನೋರಮಣಿ, ಮಂಡ್ಯ ರವರು ಮಂಡ್ಯ ಗ್ರೀನ್ ಪ್ಯಾಲೇಸ್ ಕಲ್ಯಾಣ ಮಂಟಪಕ್ಕೆ ತಮ್ಮ ಮಗಳ ಜೊತೆ ತಮ್ಮ ಬಾಬ್ತು ಹೊಂಡಾ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಜ್ಯೋತಿ ರವರ ಕತ್ತಿನಲ್ಲಿದ್ದ ಚಿನ್ನದ ಲಾಂಗ್ ಸರವನ್ನು ಕಿತ್ತುಕೊಂಡು ಹೋಗಿದ್ದು, ಈ ಸಂಬಂಧ 17 ಗ್ರಾಂ ಚಿನ್ನದ ಚೈನ್ ನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.

ಮೈಸೂರು ಸಿಟಿ ಅಶೋಕಪುರಂ ಪೊಲೀಸ್ ಠಾಣಾ ಮೊ.ಸಂ.18/11 ಕಲಂ 392 ಐಪಿಸಿ

ದಿನಾಂಕ 07-03-11 ರಂದು ಮೈಸೂರು ಸಿಟಿ ನಿವಾಸಿ ಶ್ರೀಮತಿ ವಾಣಿ ಎಂಬುವವರು ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ಹೊಂಡಾ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಹೋದ ಆರೋಪಿಗಳು ವಾಣಿ ರವರ ಕತ್ತಿನಲ್ಲಿದ್ದ ಚಿನ್ನದ ಚೈನ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದರು, ಈ ಸಂಬಂಧ 32 ಗ್ರಾಂ, 670 ಮಿಲಿ ಚಿನ್ನದ ಚೈನ್ ನ್ನು ಆರೋಪಿಗಳಿಂದ ಅಮಾನತ್ತುಪಡಿಸಿಕೊಂಡಿರುತ್ತಾರೆ.

ಮೇಲ್ಕಂಡ ಆರೋಪಿಗಳಾದ ಪುರುಷೋತ್ತಮ ಮತ್ತು ರಾಜೇಶ ರವರು ನೀಡಿದ ಮಾಹಿತಿಯ ಮೇರೆಗೆ ಒಟ್ಟು ಆರು ಪ್ರಕರಣಗಳನ್ನು ಮತ್ತೆ ಮಾಡಿದ್ದು, ಸದರಿ ಆಸಾಮಿಗಳ ನೀಡಿದ ಸುಳುವಿನ ಮೇರೆಗೆ ಒಟ್ಟು ಎರಡು ಲಕ್ಷ ಎಪ್ಪತ್ತೇಳು ಸಾವಿರ ಬೆಲೆ ಬಾಳುವ 110 ಗ್ರಾಂ ಚಿನ್ನದ ವಡವೆಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.

ಈ ಮೇಲ್ಕಂಡ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಪಾಂಡವಪುರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನರಸಿಂಹಯ್ಯ ರವರ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀ ಕೆ.ಮಂಜು, ಎಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳ ತಂಡವನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ.

Property Parade Press Meet On 30-10-2011


ಮಂಡ್ಯ ಜಿಲ್ಲಾ ಪೊಲೀಸ್
ಅಪರಾಧ ಅಂಕಿ ಅಂಶಗಳ ಪಕ್ಷಿನೋಟ
ಪತ್ರಿಕಾ ಪ್ರಕಟಣೆ

ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ (2011 ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ಮಾಹೆ) ವರದಿಯಾದ ಮತ್ತು ಪತ್ತೆಯಾದ ಅಪರಾಧ ಪ್ರಕರಣಗಳ ಅಂಕಿಅಂಶಗಳು.

ವರದಕ್ಷಿಣೆ ಸಾವು ಪ್ರಕರಣಗಳು 3
ವರದಕ್ಷಿಣೆ ಕಿರುಕುಳ ಪ್ರಕರಣಗಳು - 14
ಮಾನಭಂಗ ಪ್ರಕರಣಗಳು -9
ರಸ್ತೆ ಅಪಘಾತ ಪ್ರಕರಣಗಳು (304 ಎ) - 59
ಜೂಜಾಟದ ಪ್ರಕರಣಗಳು - 80
ವೇಶ್ಯಾವಾಟಿಕೆ ಪ್ರಕರಣಗಳು - 2

ಮೇಲ್ಕಂಡ ಅಪರಾಧ ಶೀರ್ಷಿಕೆಗಳಲ್ಲಿ ಕಳುವಾಗಿರುವ ಮಾಲುಗಳ ಒಟ್ಟು ಮೌಲ್ಯ : ರೂ 1,14,07,501/- (ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ನಗದು, ವಾಹನಗಳು, ಮೊಬೈಲ್ ಹಾಗೂ ಇತರೆ)

ಇದೇ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಮಾಲುಗಳ ಒಟ್ಟು ಮೌಲ್ಯ : ರೂ. 57,26,500/- ( ಚಿನ್ನಾಭರಣಗಳು, ವಾಹನಗಳು, ಮೊಬೈಲ್ ಮತ್ತು ಇತರೆ)

ಇದೇ ಅವಧಿಯಲ್ಲಿ ವಾರಸುದಾರರಿಗೆ ಹಿಂದಿರುಗಿಸಿದ ಮಾಲುಗಳ ಒಟ್ಟು ಮೌಲ್ಯ : ರೂ. 29,44,625/- ( ಚಿನ್ನಾಭರಣಗಳು, ವಾಹನಗಳು, ಮೊಬೈಲ್ ಮತ್ತು ಇತರೆ)

ಇದೇ ಅವಧಿಯಲ್ಲಿ ನ್ಯಾಯಾಲಯದಲ್ಲಿ 40 ಅಪಘಾತ ಪ್ರಕರಣಗಳು , 3 ಕಳವು ಪ್ರಕರಣಗಳು, 9 ಕೆ.ಪಿ.ಕಾಯ್ದೆ, 2 ಹಲ್ಲೆ ಮತ್ತು 1 ಕೊಲೆ ಪ್ರಯತ್ನ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ಆರೋಪಿಗಳಿಗೆ ಶಿಕ್ಷೆಯಾಗಿರುತ್ತದೆ.

ಈ 3 ತಿಂಗಳ ಅವಧಿಯಲ್ಲಿ 1 ಕೊಲೆ, 9 ಕಳವು, 15 ಹಲ್ಲೆ, 1 ಅಪಹರಣ, 2 ಅಪಘಾತ ಮತ್ತು 1 ವರದಕ್ಷಿಣೆ ಕಿರುಕುಳ ಪ್ರಕರಣಗಳು ನ್ಯಾಯಾಲಯದಲ್ಲಿ ಬಿಡುಗಡೆಯಾಗಿರುತ್ತದೆ.

ಇದೇ ಅವಧಿಯಲ್ಲಿ 1 ಕೊಲೆ, 1 ದೊಂಬಿ,. 48 ಹಲ್ಲೆ, 2 ವಂಚನೆ, 14 ಅಪಘಾತ ಮತ್ತು 7 ಕಳವು ಪ್ರಕರಣಗಳು ನ್ಯಾಯಾಲಯದಲ್ಲಿ ಇತರೆ ರೀತಿಯಲ್ಲಿ ವಿಲೇವಾರಿಗೊಂಡಿರುತ್ತದೆ.







Press Note Dated: 26-10-2011.

ಪತ್ರಿಕಾ ಪ್ರಕಟಣೆ
7 ಜನ ದರೋಡೆಕೋರರ ಬಂಧನ : 5 ಕಾರುಗಳು ಹಾಗೂ ಚಿನ್ನಾಭರಣ ವಶ

ನಾಗಮಂಗಲದಲ್ಲಿ ದಿನಾಂಕ:22-10-2011 ರಂದು ಬೆಳಗಿನ ಜಾವ 02.30 ಗಂಟೆಯಲ್ಲಿ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದಾಗ ನಾಗಮಂಗಲ-ಕೋಟೆಬೆಟ್ಟ ರಸ್ತೆಯ ಪಾಲ ಅಗ್ರಹಾರದ ಹಳ್ಳದ ಸಮೀಪ ರಸ್ತೆಯ ಬದಿಯಲ್ಲಿ ಒಂದು ಇಂಡಿಕಾ ಕಾರ್ ನಿಂತಿದ್ದು, ಅನುಮಾನಗೊಂಡ ಪೊಲೀಸರು ಕಾರಿನ ಹತ್ತಿರ ಹೋಗಿ ಒಳಗಿದ್ದವರನ್ನು ತಪಾಸಣೆಗೊಳಪಡಿಸಿದಾಗ ಕಾರಿನಲ್ಲಿದ್ದವರ ಬಳಿ ಲಾಂಗು, ಚೈನು ಹಾಗೂ ಚಾಕು ಇದ್ದು, ಸದರಿಯವರುಗಳನ್ನು ಕಾರು ಮತ್ತು ಆಯುಧಗಳ ಸಮೇತ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಅವರುಗಳ ಹೆಸರುಗಳನ್ನು ಈ ಕೆಳಕಂಡಂತೆ ತಿಳಿಸಿರುತ್ತಾರೆ.

1. ಗೋವಿಂದರಾಜು ಬಿನ್ ಚೆನ್ನರಾಯಪ್ಪ, ದೇಗನಹಳ್ಳಿ ಗ್ರಾಮ, ನೆಲಮಂಗಲ ತಾ||, ಬೆಂಗಳೂರು ಗ್ರಾ ಜಿಲ್ಲೆ.
2. ರವಿಕುಮಾರ್ ಬಿನ್ ಲೇ|| ಮಲ್ಲೇಶ್, ಗಂಕಾರ್ ನಹಳ್ಳಿ ಗ್ರಾಮ, ಮಧುಗಿರಿ ತಾ||, ತುಮಕೂರು ಜಿಲ್ಲೆ.
3. ವೆಂಕಟೇಶ ಬಿನ್ ಮುನಿಯಪ್ಪ, ಮಾಕಳ್ಳಿ, ಬೆಂಗಳೂರು.
4. ಶ್ರೀಕಾಂತ.ಎಂ. ಬಿನ್ ಲೇ|| ಮಲ್ಲೇಶ, ಮಾವಿನಹಳ್ಳಿ ಗ್ರಾಮ , ಹಾಸನ ಟೌನ್.
5. ರಮೇಶ ಜಿ. ಬಿನ್ ಗಂಗನರಸಯ್ಯ, ನೆಲಮಂಗಲ ತಾ||, ಬೆಂಗಳೂರು ಗ್ರಾ ಜಿಲ್ಲೆ.

ಮೇಲ್ಕಂಡವರುಗಳನ್ನು ಆ ಸಮಯದಲ್ಲಿ ಹಾಗೂ ಆ ಸ್ಥಳದಲ್ಲಿ ಇದ್ದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೇ ಇದ್ದುದರಿಂದ ಸದರಿಯವರುಗಳನ್ನು ಠಾಣೆಗೆ ಕರೆದುಕೊಂಡು ಬಂದು ತೀವ್ರ ವಿಚಾರಣೆಗೆ ಒಳಪಡಿಸಲಾಗಿ ಅವರುಗಳು ಆ ಸ್ಥಳದಲ್ಲಿ ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆದು ದರೋಡೆ ಮಾಡಲು ಬಂದಿದ್ದಾಗಿ ಒಪ್ಪಿಕೊಂಡಿರುತ್ತಾರೆ. ಇವರುಗಳನ್ನು ದಿನಾಂಕ:23-10-2011 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖಾ ಸಂಬಂಧ ನಾಗಮಂಗಲ ಪೊಲೀಸ್ ಅಧಿಕಾರಿಗಳು ಪೊಲೀಸ್ ವಶಕ್ಕೆ ತೆಗದುಕೊಂಡು ವಿಚಾರಣೆಗೆ ಒಳಪಡಿಸಲಾಗಿ, ಇವರ ಜೊತೆಗೆ 6] ರೋಷನ್ ಬಿನ್ ಕರೀಂಷ ರೀಪ್, ಸದಾಶಿವನಗರ, ನೆಲಮಂಗಲ ಟೌನ್, 7] ಪಿ.ಶರತಚಂದ್ರ ಬಿನ್ ಪುಟ್ಟಸ್ವಾಮಿ, ಪ್ರಮೋದ್ ಲೇಔಟ್, ಬೆಂಗಳೂರು ರವರುಗಳನ್ನು ದಿನಾಂಕ:26-10-2011 ರಂದು ದಸ್ತಗಿರಿ ಮಾಡಿದ್ದು, ಮೇಲ್ಕಂಡ ಎಲ್ಲಾ ಆರೋಪಿಗಳು ಈ ಕೆಳಕಂಡ ಸ್ಥಳಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ.

ಡಾಬಸ್ ಪೇಟೆ ಬಳಿ ಒಂದು ಟಾಟಾ ಸುಮೋ, 2 ಇಂಡಿಕಾ ಕಾರು, ನಂಜನಗೂಡು ರಸ್ತೆಯಲ್ಲಿ ಒಂದು ಇಂಡಿಕಾ ಕಾರು, ಬಿಂಡಿಗನವಿಲೆ ಠಾಣಾ ವ್ಯಾಪ್ತಿಯ ಎನ್.ಹೆಚ್.48 ರಸ್ತೆಯಲ್ಲಿ ಒಂದು ಇಂಡಿಕಾ ಕಾರು, ಡ್ರಾಪ್ ಕೇಳುವ ನೆಪದಲ್ಲಿ ಕಾರಿಗೆ ಹತ್ತಿಕೊಂಡು ಚಾಲಕರುಗಳಿಗೆ ಲಾಂಗ್ ಮತ್ತು ಚಾಕು ತೋರಿಸಿ ಹೆದರಿಸಿ ಅವರಿಂದ ಕಾರು ಹಾಗೂ ಮೊಬೈಲ್ ಗಳನ್ನು ದೋಚಿಕೊಂಡು ಹೋಗಿರುವುದಾಗಿಯೂ ಅದೇ ರೀತಿ ಬೆಳ್ಳೂರು ವ್ಯಾಪ್ತಿಯ ಗುರುದರ್ಶನ ಹೋಟೆಲ್-ಅಗಚಹಳ್ಳಿ ಮಧ್ಯೆ ಸರ್ವಿಸ್ ರಸ್ತೆಯ ಬಳಿ ಹಾಗೂ ತುಮಕೂರು ರಸ್ತೆಯ ಪಾಳ್ಯದಹಳ್ಳಿ ಗೇಟ್ ಬಳಿ ಮತ್ತು ತುಮಕೂರು ಜಿಲ್ಲೆಯ ಕೊರಟಿಕೆರೆಯ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹೆಂಗಸರಿಗೆ ಲಾಂಗ್ ನಿಂದ ಹೆದರಿಸಿ ಕತ್ತಿನಲ್ಲಿದ್ದ ಸರಗಳನ್ನು ಕಿತ್ತುಕೊಂಡಿರುವುದಾಗಿ ತಿಳಿಸಿರುತ್ತಾರೆ. ಅವರ ಹೇಳಿಕೆ ಅನುಸಾರ ಮೇಲ್ಕಂಡವರುಗಳಿಂದ ಸುಮಾರು 22 ಲಕ್ಷ ಬೆಲೆ ಬಾಳುವ 5 ಕಾರುಗಳು, ಚಿನ್ನದ ಆಭರಣಗಳು ಹಾಗೂ ಮೊಬೈಲ್ ಪೋನ್ ಗಳನ್ನು ಸ್ಥಳೀಯ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.

ಈ ಮೇಲ್ಕಂಡ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ನಾಗಮಂಗಲ ವೃತ್ತ ನಿರೀಕ್ಷಕರಾದ ಶ್ರೀ ಟಿ.ಡಿ.ರಾಜು, ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವೆಂಕಟೇಗೌಡ, ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವಿನಯ್ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ.

Press Note Date: 15-10-2011

ಪತ್ರಿಕಾ ಪ್ರಕಟಣೆ

1. ನಾಗಮಂಗಲ ತಾಲ್ಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಗಮಂಗಲ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 150/2011 ಕಲಂ 3 Cl (10) SC/ST Act, 1989 ಕೂಡ 143-427-504-114-506 ಕೂಡ 149 ಐಪಿಸಿ

ದಿನಾಂಕ:08-09-2011 ರಂದು ರಾತ್ರಿ ನಾಗಮಂಗಲ ತಾಲ್ಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ಗಣೇಶ ಉತ್ಸವಕ್ಕೆ ತಮಟೆ ಬಡಿಯಲಿಲ್ಲವೆಂಬ ವಿಚಾರಕ್ಕೆ ಸವರ್ಣೀಯರ ಮತ್ತು ಪರಿಶಿಷ್ಠ ಜನಾಂಗದವರ ನಡುವೆ ಉಂಟಾಗಿದ್ದ ಮನಸ್ತಾಪದ ವಿಚಾರದಲ್ಲಿ ಹಾಗೂ ದಿನಾಂಕ:05-10-2011 ರಂದು ರಾತ್ರಿ ಅದೇ ಗ್ರಾಮದ ಪರಿಶಿಷ್ಠ ಜನಾಂಗದವರ ಮನೆಯ ಮೇಲೆ ಕಲ್ಲು ತೂರಾಟ ಮಾಡಿ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದ ವಿಚಾರದಲ್ಲಿ ಕಸುವಿನಹಳ್ಳಿ ಗ್ರಾಮದ ಶಿವರಾಜು ಎಂಬುವವರು ದಿನಾಂಕ:10-10-2011 ರಂದು ನೀಡಿದ ದೂರಿನ ಮೇರೆಗೆ ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿತ್ತು.

ಮೇಲ್ಕಂಡ ಪ್ರಕರಣದಲ್ಲಿ ದಿನಾಂಕ:13-10-2011 ರಂದು ಈ ಕೆಳಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.
1.ಶಿವಣ್ಣ @ ಶಿವರಾಮು ಬಿನ್ ಲೇ|| ದ್ಯಾವರೇಗೌಡ, 48 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.
2. ಹಲಗೇಗೌಡ ಬಿನ್ ಲೇ|| ಕರೀಗೌಡ, 70 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.
3.ನಿಂಗಮ್ಮ ಕೋಂ ಲೇ|| ಜವರಯ್ಯ ಉ ಜವರೇಗೌಡ, ವಕ್ಕಲಿಗರು, ಕಸುವಿನಹಳ್ಳಿ ಗ್ರಾಮ.

ಮೇಲ್ಕಂಡ ಆರೋಪಿಗಳು ದಿನಾಂಕ:13-10-2011 ರಂದು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುತ್ತಾರೆ.

ಮೇಲ್ಕಂಡ ಪ್ರಕರಣದಲ್ಲಿ ಈ ದಿನ ದಿನಾಂಕ:15-10-2011 ರಂದು ಈ ಕೆಳಕಂಡ ಇನ್ನುಳಿಕೆ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.
1.ಎಂ.ಕೃಷ್ಣಪ್ಪ ಬಿನ್ ಲೇ|| ಮುದ್ದೇಗೌಡ, 57 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
2.ಪುಟ್ಟಪ್ಪ ಬಿನ್ ಲೇ|| ಕಾಳೇಗೌಡ, 68 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
3.ಕೆ.ಪಿ.ಪಾಪೇಗೌಡ ಬಿನ್ ಲೇ|| ಕಾಳೇಗೌಡ, 65 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
4.ತೂಬಿನಕೆರೆ ವೆಂಕಟೇಶ ಬಿನ್ ತಿಮ್ಮೇಗೌಡ, 40 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
5.ಕೆ.ಎಂ.ಪುಟ್ಟೇಗೌಡ ಬಿನ್ ಮಾಯಣ್ಣ, 40 ವರ್ಷ, ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
6.ಮಂಜ @ ಕೆ.ಪಿ.ಮಂಜೇಗೌಡ ಬಿನ್ ಜಿ.ಪುಟ್ಟೇಗೌಡ,31 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
7. ರಮೇಶ ಬಿನ್ ಲೆ|| ಮಾಯಣ್ಣ, 39 ವರ್ಷ,ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು.
8. ಅಕ್ಕಮ್ಮ ಕೋಂ ಲೇ|| ಮೆಡ್ಡಣ್ಣ @ ಚಿಕ್ಕ್ಕಮಾಯಣ್ಣ, 60 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು

ಸದರಿ ಪ್ರಕರಣದಲ್ಲಿ ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಗ್ರಾಮದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ.

2. ಕಿರುಗಾವಲು ಪೊಲೀಸ್ ಠಾಣೆಯ ಮೊ.ಸಂ,118/2011 ಕಲಂ 341-324 ಕೂಡ 34 ಐಪಿಸಿ ಮತ್ತು 3 ಕ್ಲಾಸ್ (1) (X) ಎಸ್.ಟಿ/ಎಸ್.ಸಿ ಆಕ್ಟ್ 1989

ದಿನಾಂಕ:09-10-2011 ರಂದು ಸಂಜೆ ಕಿರುಗಾವಲು ಗ್ರಾಮದ ಶ್ರಂಗಾರ ಹೇರ್ ಡ್ರೆಸಸ್ ಸೆಲೂನ್ ನಲ್ಲಿ ಅದೇ ಗ್ರಾಮದ ಪರಿಶಿಷ್ಠ ಜನಾಂಗಕ್ಕೆ ಸೇರಿದ ಚಿಕ್ಕಮಂಚಯ್ಯ ಬಿನ್ ಲೇ|| ಪುಟ್ಟಮಂಚಯ್ಯನು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದಾಗ ಅಂಗಡಿ ಮಾಲೀಕರಾದ ಮರಿ ಬಿನ್ ಲೇ|| ಸಿದ್ದಯ್ಯ ಮತ್ತು ಆತನ ಮಗನಾದ ಮಹಾದೇವ ಇವರಿಬ್ಬರೂ ಕ್ಷೌರ ಮಾಡುವ ವಿಚಾರದಲ್ಲಿ ಜಗಳ ತೆಗದು, ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು.

ಮೇಲ್ಕಂಡ ಪ್ರಕರಣದಲ್ಲಿ ಈ ದಿನ ದಿನಾಂಕ:15-10-2011 ರಂದು ಈ ಕೆಳಕಂಡ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
1. ಮರಿ ಬಿನ್ ಲೇ|| ಸಿದ್ದಯ್ಯ, 72 ವರ್ಷ, ನಯನಕ್ಷತ್ರಿಯ ಜನಾಂಗ, ವಾಸ ಕಿರುಗಾವಲು.
2. ಮಹಾದೇವ ಬಿನ್ ಸಿದ್ದಯ್ಯ, 32 ವರ್ಷ, ನಯನಕ್ಷತ್ರಿಯ ಜನಾಂಗ, ವಾಸ ಕಿರುಗಾವಲು.

ಕಿರುಗಾವಲು ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

DCR

Daily Crime Report

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 18 ಪ್ರಕರಣಗಳು ವರದಿಯಾಗಿ ಅದರಲ್ಲಿ 6 ರಸ್ತೆ ಅಪಘಾತ ಪ್ರಕರಣ, 1 ಕಳ್ಳತನ ಪ್ರಕರಣ ಮತ್ತು 11 ಇತರೆ ಪ್ರಕರಣಗಳು ದಾಖಲಾಗಿರುತ್ತೆ,
ಕಳ್ಳತನ ಪ್ರಕರಣ
ಮೇಲುಕೋಟೆ ಪೊಲೀಸ್ ಠಾಣೆ
1] ಮೊ.ಸಂ 193/11 ಕಲಂ 379 ಐಪಿಸಿ ದಿನಾಂಕ 18-09-11 ರಂದು ಪಿರ್ಯಾದಿ ಅಯಿ ಎಸ್,ಎಲ್ ನರಸಿಂಹನ್ ರವರ ಬಾಬ್ತು ಮೇಲುಕೋಟೆ ಸರ್ವೆ ನಂ 69/1 ರ ಜಮೀನಿನ ಕೊಳವೆ ಬಾವಿಗೆ 3 ಹೆಚ್,ಪಿ ಸಬ್ ಮರ್ಸಿಬಲ್ ಪಂಪ್ ನಲ್ಲಿ ಅಳವಡಿಸಿದ್ದು, ಸದರಿ ಪಂಪ್ ಸೆಟ್ ನ್ನು ಹಾಗೂ ಕೇಬಲ್ ವೈರ್ ಅನ್ನು ರಾತ್ರಿ ವೇಳೆ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ

ರಸ್ತೆ ಅಪಘಾತ ಪ್ರಕರಣ
ಬೆಳಕವಾಡಿ ಪೊಲೀಸ ಠಾಣೆ
1] ಮೊ.ಸಂ 122/11 ಕಲಂ 279-304 [ಎ] ಐಪಿಸಿ ರೆ/ವಿ 187 ಐಎಂವಿ ಕಾಯಿದೆ, ದಿನಾಂಕ 18-09-11 ರಂದು ಆರೋಪಿ ಕೆಎ-02-ಎಂಎ-4618 ರ ಕಾರಿನ ಚಾಲತ ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಜಾಗರೂ ಕತೆಯಿಂದ ಓಡಿಸಿಕೊಂಡು ಬಂದು ಸೈಕಲ್ ಸವಾರ ಕಾಡಯ್ಯ ಎಂಬುವವರಿಗೆ ಡಿಕ್ಕಿ ಮಾಡಿದ ಪರಿಣಾಮ ಸದರಿಯವರು ಮೃತ ಪಟ್ಟಿರುತ್ತಾರೆ

Press Note Dated: 12-09-2011.

ಪತ್ರಿಕಾ ಪ್ರಕಟಣೆ

ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೋಕು ಕಛೇರಿಯಲ್ಲಿ 'ಡಿ'ಗ್ರೋಪ್ ನೌಕರರಾಗಿದ್ದ ಶ್ರೀಮತಿ ಮಂಜುಳಾ ಎಂಬುವವರ ಮನೆಯಲ್ಲಿ ದಿನಾಂಕ:19-08-2011 ರಂದು ಮಂಜುಳಾ ರವರು ಮಧ್ಯಾಹ್ನ ಊಟದ ನಂತರ ಮನೆ ಬೀಗ ಹಾಕಿಕೊಂಡು ಕಛೇರಿ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಯಾರೋ ಮನೆಯ ಬೀಗ ಹೊಡೆದು 1 ಲಕ್ಷ 25 ಸಾವಿರ ರೂ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಠಾಣೆಯಲ್ಲಿ ಮೊ.ಸಂ.211/2011 ಕಲಂ 454-380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದರು.

ಈ ಪ್ರಕರಣದ ತನಿಖೆ ಕೈಗೊಂಡಿದ್ದ ಕೆ.ಆರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಎನ್.ಎಸ್.ಸಂದೇಶ ಕುಮಾರ್ ರವರು ಕಳ್ಳತನ ಮಾಡಿದ ಆರೋಪಿ ಅಜ್ಜೇಗೌಡ @ ಅಜ್ಜ @ ರಾಜ @ ರಿವಾಲ್ವರ್ ರಾಜ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ, ಆತನನ್ನು ದಸ್ತಗಿರಿ ಮಾಡಿ ಆತನಿಂದ ಕಳುವಾಗಿದ್ದ ಈ ಕೆಳಕಂಡ ಒಡವೆಗಳನ್ನು ವಶಪಡಿಸಿಕೊಂಡಿರುತ್ತಾರೆ.

ಆತನು ಒಂದು ಮೊಬೈಲ್ ಮತ್ತು 10 ಗ್ರಾಂ 2 ಚಿನ್ನದ ಉಂಗುರಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದು, 2 ಬಳೆ, 2 ಜೊತೆ ಓಲೆ, 1 ಚಿನ್ನದ ನಾಣ್ಯ, 2 ಚಿನ್ನದ ಗುಂಡುಗಳನ್ನು ಚನ್ನರಾಯಪಟ್ಟಣದ ಅಶೋಕ ಜ್ಯೂಯೆಲರ್ಸ್ ಮತ್ತು ಪೂರ್ಣಿಮಾ ಬ್ರೋಕರ್ಸ್ ಇವರಲ್ಲಿ ಮಾರಾಟ ಮಾಡಿರುತ್ತಾನೆಂದು ಸದರಿ ಎಲ್ಲಾ ಒಡವೆಗಳನ್ನು ಮೇಲ್ಕಂಡ ಆರೋಪಿಯಿಂದ ವಶಪಡಿಸಿಕೊಂಡಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಆರೋಪಿಯನ್ನು ದಸ್ತಗಿರಿ ಮಾಡಲು ಶ್ರಮವಹಿಸಿದ್ದ ಸಿಪಿಐ, ಕೆ.ಆರ್.ಪೇಟೆ ವೃತ್ತ ರವರಾದ ಶ್ರೀ ಎಸ್.ಎನ್.ಸಂದೇಶಕುಮಾರ್ ಮತ್ತು ಕೆ.ಆರ್.ಪೇಟೆ ಪಿಎಸ್.ಐ ರವರಾದ ಶ್ರೀ ಹರಿವರ್ಧನ ಹಾಗೂ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಶಿಸಿರುತ್ತಾರೆ

Press Note Dated: 02-09-2011.


ಪತ್ರಿಕಾ ಪ್ರಕಟಣೆ

ಮಂಡ್ಯ ನಗರದ ನೂರಡಿ ರಸ್ತೆಯಲ್ಲಿ ಹೊಂಚುಹಾಕುತ್ತಿದ್ದ 5 ಜನ ದರೊಡೆಕಾರರಾದ ಕೈಲಾಸಮೂರ್ತಿ @ ಟೈಗರ್ ಮತ್ತು ಇತರೆ 4 ಜನ ದರೋಡೆಕೋರರ ಬಂಧನ, ಇವರು ಸುಲಿಗೆ ಮಾಡಿದ 1 ಮಾರುತಿ ಕಾರ್, 1 ಮೋಟಾರ್ ಸೈಕಲ್, 2 ಲ್ಯಾಪ್ ಟಾಪ್ ಮತ್ತು 72 ಗ್ರಾಂ ತೂಕದ ಚಿನ್ನದ ಆಭರಣಗಳು ವಶ, ಇವುಗಳ ಒಟ್ಟು ಮೌಲ್ಯ 5.5 ಲಕ್ಷ ರೂಗಳು.

ದಿನಾಂಕ:28-08-2011 ರಂದು ಸಂಜೆ 7.30 ಗಂಟೆ ಸಮಯದಲ್ಲಿ ಮಂಡ್ಯ ನಗರದ ಪಶ್ಚಿಮ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಸಾರ್ವಜನಿಕರ ಸಹಾಯದಿಂದ ಮಂಡ್ಯದ ನೂರಡಿ ರಸ್ತೆಯಲ್ಲಿರುವ ರಾಜಸ್ಥಾನ್ ಜ್ಯೂಯೆಲರಿ ಅಂಗಡಿಯ ಬಳಿ ದರೋಡೆ ಮಾಡಲು ಹೊಂಚುಹಾಕುತ್ತಿದ್ದ ಆಸಾಮಿಗಳನ್ನು ಕಾರ್ ಮತ್ತು ಮೋಟಾರ್ ಸೈಕಲ್ ಸಮೇತ ಹಿಡಿದುಕೊಂಡು ವಶಕ್ಕೆ ತೆಗೆದುಕೊಂಡಿರುತ್ತಾರೆ.

ಆರೋಪಿಗಳ ಹೆಸರು ಮತ್ತು ವಿಳಾಸ ಕೆಳಕಂಡಂತಿರುತ್ತದೆ.
1.ಕೈಲಾಸ್ ಮೂರ್ತಿ @ ಮೂರ್ತಿ @ ಟೈಗರ್ ಬಿನ್ ಪೆರುಮಾಳ್, 22 ವರ್ಷ, ತಮಿಳು ಗೌಂಡರ್ ಜನಾಂಗ, ಆಕ್ಟೀವ್ ಜಿಮ್ ಕೋಚರ್, ವಾಸ ಕೇರಾಪ್ ಕುಡ್ಲುಗೇಟ್, ಮುನಿಯಪ್ಪ ರೆಡ್ಡಿ ಬಿಲ್ಡಿಂಗ್, ಬೆಂಗಳೂರು

2.ವಿಶ್ವನಾಥಶೆಟ್ಟಿಗಾರ್ ಬಿನ್ ಶ್ರೀನಿವಾಸ್ ಶೆಟ್ಟಿಗಾರ್, 26 ವರ್ಷ, ವಾಸ ಕೋರಮಂಗಲ, ಬೆಂಗಳೂರು, ಸ್ವಂತ ಸ್ಥಳ, ಅಮಾಸೆಬೈಲ್, ಕುಂದಾಪುರ, ತಾಲ್ಲೋಕು, ಉಡುಪಿ ಜಿಲ್ಲೆ.
3.ಕೃಷ್ಣಚಾರ್ @ ಕೃಷ್ಣ ಬಿನ್ ಶ್ರೀನಿವಾಸಚಾರ್, 23 ವರ್ಷ, ಬ್ರಾಹ್ಮಣ ಜನಾಂಗ, ವಾಸ ನಂ 246/ಎ, 3 ನೇ ಮೈನ್, 3 ನೇ ಕ್ರಾಸ್, ಕೆಂಪೇಗೌಡ ನಗರ, ಬೆಂಗಳೂರು.

4.ನಯಾಜ್ ಖಾನ್ @ ನಯಾಜ್ ಬಿನ್ ಸಮೀವುಲ್ಲಾ, 27 ವರ್ಷ, ವಾಸ ಎಸ್.ಎನ್.ಮೆಡಿಕಲ್, ಕೊರಟಗೆರೆ, ತುಮಕೂರು ಜಿಲ್ಲೆ.

5.ಮಹಮದ್ ಅರೀಪ್ @ ಅರೀಪ್ ಬಿನ್ ಅಬ್ದುಲ್ ರೆಹಮಾನ್, 27 ವರ್ಷ, ವಾಸ ಸಾಲಿಗ್ರಾಮ, ಕುಂದಾಪುರ ತಾಲ್ಲೋಕು, ಉಡುಪಿ ಜಿಲ್ಲೆ.

ಈ ಪ್ರಕರಣದ ವಿಚಾರಣೆ ಕಾಲದಲ್ಲಿ ಮೇಲ್ಕಂಡ ಆರೋಪಿಗಳು ದಿ:25-05-2011 ರಂದು ಬೆಂಗಳೂರಿನ ಉತ್ತರಹಳ್ಳಿ ಪೂರ್ಣಪ್ರಜ್ಞಾ ಲೇಔಟ್ ವಾಸಿಯಾದ ಎನ್.ಎಸ್.ಚಂದ್ರಶೇಖರ್ ಎಂಬುವವರ ಮನೆಗೆ ನುಗ್ಗಿ ಲಾಂಗ್ ತೋರಿಸಿ ಹೆದರಿಸಿ ಬೀರುವನ್ನು ತೆಗದು ಅದರಲ್ಲಿದ್ದ ಚಿನ್ನದ ಆಭರಣಗಳನ್ನು ಸುಲಿಗೆ ಮಾಡಿಕೊಂಡು ಅವರ ಬಾಬ್ತು ಮಾರುತಿ ಜೆನ್ ಎಸ್ಟಿಲೊ ಕಾರ್.ನಂ. ಕೆಎ-05 ಎಂಎಫ್ 9419 ಕಾರ್ ಕೀಯನ್ನು ಕಿತ್ತಕೊಂಡು ಪರಾರಿಯಾಗಿ ಹೋಗಿದ್ದು, ಈ ಬಗ್ಗೆ ಸುಬ್ರಮಣ್ಯಪುರಂ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳು ದಿ:20-06-2011 ರಂದು ಬೆಂಗಳೂರಿನ ಬನಶಂಕರಿ 2 ನೇ ಹಂತದ 24 ನೇ ಕ್ರಾಸ್ ನಲ್ಲಿ ವಾಸವಿರುವ ಶ್ರೀಮತಿ ಲಕ್ಷ್ಮೀ ರಾಮಣ್ಣ ಎಂಬುವವರ ಮನೆಗೆ ನುಗ್ಗಿ ಪಿರ್ಯಾದಿ ಲಕ್ಷ್ಮೀ ಎಂಬುವವರಿಗೆ ಬೆದರಿಸಿ ಬೀರುವನ್ನು ಜಖಂಗೊಳಿಸಿ ತೆಗೆದು ಅದರಲ್ಲಿದ್ದ 10 ಗ್ರಾಂನಷ್ಟು ಚಿನ್ನದ ಆಭರಣಗಳು, ನಗದು, ಮನೆಯಲ್ಲಿಟ್ಟಿದ್ದ ಒಟ್ಟು 6.1/2 ನಷ್ಟು ಬೆಳ್ಳಿಯ ಸಾಮಾನುಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದು, ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳು ಚಂದ್ರಶೇಖರ್ ರವರ ಬಾಬ್ತು ಮೇಲ್ಕಂಡ ಕಾರ್ ಕೆಎ-06-ಎಂ-6043 ಎಂದು ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಸದರಿ ಕಾರ್ ನಲ್ಲಿ ಮಂಡ್ಯದಲ್ಲಿ ಕೃತ್ಯವೆಸಗಲು ಬಂದಿರುವುದು ತನಿಖೆಯಿಂದ ಧೃಡಪಟ್ಟಿರುತ್ತದೆ. ಸದರಿ ಕಾರ್ ಸೇರಿದಂತೆ ಆರೋಪಿಗಳು ಸುಲಿಗೆ ಮಾಡಿ ಮಾರಾಟ ಮಾಡಿದ 72 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 2 ಲ್ಯಾಪ್ ಟಾಪ್, 2 ಕ್ಯಾಮೆರಾಗಳನ್ನು ವಶಪಡಿಸಿಕೊಂಡಿರುತ್ತದೆ. ಇವುಗಳ ಅಂದಾಜು ಮೌಲ್ಯ 5.5 ಲಕ್ಷ ರೂಗಳು. ಈ ಕೇಸಿನಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಪೊಲೀಸರು ಬಲೆ ಬೀಸಿರುತ್ತಾರೆ.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಕೌಶಲೇಂದ್ರಕುಮಾರ್, ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಎ.ಎನ್.ರಾಜಣ್ಣ, ಮಂಡ್ಯ ಉಪವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಶ್ರೀ ಚೆನ್ನಬಸವಣ್ಣ.ಎಸ್.ಎಲ್. ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ ಕಾಂತರಾಜ್.ಕೆ.ಆರ್. ರವರ ಮಾರ್ಗದರ್ಶನದಲ್ಲಿ ಮಂಡ್ಯ ಪಶ್ಚಿಮ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಕೆ.ಪ್ರಭಾಕರ್, ಮಂಡ್ಯ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಸಿ.ಕೆ.ಪುಟ್ಟಸ್ವಾಮಿ, ಕೆ.ಎಸ್.ಶಿವಲಿಂಗೇಗೌಡ, ನಿಂಗಣ್ಣ, ನಾರಾಯಣ, ಮಂಜುನಾಥ್, ತಿಲಕ್ ಕುಮಾರ್, ಪರಶುರಾಮ, ಪುಟ್ಟಸ್ವಾಮಿ, ಲಿಂಗರಾಜು, ನಟರಾಜು,ಭರತ್, ಪ್ರಕಾಶ್, ಮಹೇಶ, ಮುದ್ದುಮಲ್ಲಪ್ಪ, ಜೀಪ್ ಚಾಲಕರಾದ ರವಿ, ಯೋಗೇಶ್ ಇವರುಗಳು ಈ ಪತ್ತೆ ಕಾರ್ಯದಲ್ಲಿ ಪಾಲ್ಗೋಂಡಿರುತ್ತಾರೆ.