Moving text

Mandya District Police

press Note 09-07-2012

ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ. ದಿಃ09-07-2012 
ಪತ್ರಿಕಾ ಪ್ರಕಟಣೆ

ಇಂಡಿಕಾ ಕಾರಿನಲ್ಲಿ ಬಂದು ಖಾರದಪುಡಿ ಹಾಕಿ ಸರಗಳ್ಳತನ ಮಾಡುತ್ತಿದ್ದ ದರೋಡೆ ಕೋರರ ಬಂಧನ. 
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಮೊ. ನಂ 120/2012 ಕಲಂ: 399-402 ಐಪಿಸಿ.

ಹಳ್ಳಿಯಿಂದ ಬೆಂಗಳೂರಿಗೆ ವಲಸೆ ಹೋಗಿ ಆಟೋರಿಕ್ಷಾ ಹಾಗೂ ಕಾರು ಚಾಲನೆ ಮಾಡಿಕೊಂಡಿದ್ದ ಐವರು ವ್ಯಕ್ತಿಗಳು ಸುಲಭವಾಗಿ ಹಣ ಸಂಪಾದನೆ ಮಾಡಲು ತಾವು ಚಾಲನೆ ಮಾಡುತ್ತಿದ್ದ ಕಾರನ್ನೆ ಬಳಸಿ ಒಂಟಿಯಾಗಿ ಹೋಗುವ ಮಹಿಳೆಯರಿಗೆ ಮಚ್ಚು ತೋರಿಸಿ ಹೆದರಿಸಿ ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಸರಗಳ್ಳತನ ಮಾಡುತ್ತಿದ್ದ ದರೋಡೆ ಕೋರರ ತಂಡವನ್ನು ನಾಗಮಂಗಲ ಪೊಲೀಸರು ಪತ್ತೆಮಾಡಿದ್ದಾರೆ. 

ನಾಗಮಂಗಲ ತಾಲ್ಲೂಕು, ಹೊಣಕೆರೆ ಹೋಬಳಿ, ಮಾರನಾಯಕನಹಳ್ಳಿ ಗ್ರಾಮದ ಮಂಜುನಾಥ, ಕೆ.ಆರ್.ಪೇಟೆ ನಾರಾಯಣಪುರ ವಾಸಿ ಲೋಕೇಶ, ಮಾಯಸಂದ್ರ ಹೋಬಳಿ ಹೊನಕೆರೆ ಗ್ರಾಮದ ವಾಸಿ ನವೀನ ಇವರುಗಳು ಬೆಂಗಳೂರಿನಲ್ಲಿ ಆಟೋರಿಕ್ಷಾ ಮತ್ತು ಬಾಡಿಗೆ ಕಾರು ಚಾಲನೆಮಾಡಿಕೊಂಡಿದ್ದು ನವೀನ ಮಾಚರ್್ ತಿಂಗಳಲ್ಲಿ ಆಡಂಬರದ ಜೀವನ ಶೈಲಿಯಿಂದ ಸಾಲ ಮಾಡಿಕೊಂಡಿದ್ದು ಇವರುಗಳು ಬೆಂಗಳೂರಿನಲ್ಲಿ ನವೀನನು ಓಡಿಸುತ್ತಿದ್ದ ಇಂಡಿಕಾ ಕಾರಿನಲ್ಲಿ ತನ್ನ ಸ್ನೇಹಿತರುಗಳಾದ ಕೆ.ರ್.ಎಸ್.ನ ವಾಸಿ ರಾಜು ಮತ್ತು ಬೆಂಗಳೂರು ವಾಸಿ ಜಾಯ್ ಇವರೊಂದಿಗೆ ದರೋಡೆಮಾಡಿ ಹಣ ಮಾಡುವ ಉದ್ದೇಶದಿಂದ ಕಾರಿನಲ್ಲಿ ಲಾಂಗ್ ಮತ್ತು ಖಾರದ ಪುಡಿಯನ್ನು ಇಟ್ಟುಕೊಂಡು ದಿನಾಂಕಃ30-05-2012 ರಂದು ರಾತ್ರಿ ನಾಗಮಂಗಲ ತಾಲ್ಲೂಕು ಬ್ರಹ್ಮದೇವರಹಳ್ಳಿಯ ಬಳಿ ಮೊಟಾರ್ ಬೈಕ್ನಲ್ಲಿ ಹೋಗುತ್ತಿದ್ದ ದಂಪತಿಗಳನ್ನು ವಿಳಾಸ ಕೇಳುವ ನೆಪದಲ್ಲಿ ಅಡ್ಡಹಾಕಿ ಮಚ್ಚು ತೋರಿಸಿ ಹೆದರಿಸಿ ಅವರಿಂದ ಒಂದು ಜೊತೆ ಓಲೆ, ಒಂದು ಮೊಬೈಲ್ ಮತ್ತು ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ನಂತರ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ದಿನಾಂಕಃ02-06-2012 ರಂದು ಕೆ.ಆರ್.ಪೇಟೆ ತಾಲ್ಲೂಕು, ಬೂಕನಕೆರೆಯ ಬಳಿ ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಒಂಟಿ ಹೆಂಗಸಿಗೆ ವಿಳಾಸ ಕೇಳುವ ನೆಪದಲ್ಲಿ ಅಡ್ಡಹಾಕಿ ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಒಂದು ಮಾಂಗಲ್ಯಸರವನ್ನು ಕಿತ್ತುಕೊಂಡು ಹೋಗಿದ್ದು, ಇದಾದ ನಂತರ ಸುಲಭವಾಗಿ ಕುರಿಗಳನ್ನು ಕಳವುಮಾಡಬಹುದೆಂದು ಇಂಡಿಕಾ ಕಾರು ರಿಪೇರಿಗೆ ಬಂದಿದ್ದ ಕಾರಣ ಬೇರೊಂದು ಮಾರುತಿ ವ್ಯಾನ್ ಬಳಸಿ ಪುನಃ ದಿನಾಂಕ ಃ27/28-06-2012 ರಂದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾಗ ನಾಗಮಂಗಲ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ ಬಂಧಿತರಿಂದ ಒಂದು ಇಂಡಿಕಾ ಕಾರು, ಒಂದು ಮಾರುತಿ ವ್ಯಾನ್, ಓಲೆ, ಮೊಬೈಲ್ ಹಾಗೂ ಒಂದು ಮಾಂಗಲ್ಯಸರವನ್ನು ವಶಪಡಿಸಿಕೊಂಡಿರುತ್ತೆ. ಇವುಗಳ ಅಂದಾಜು ಮೌಲ್ಯ ಸುಮಾರು 1.22.800 ರೂ ಆಗಿರುತ್ತೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ. 

ಮೇಲ್ಕಂಡ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮವಹಿಸಿದ ನಾಗಮಂಗಲದ ವೃತ್ತನಿರೀಕ್ಷಕರಾದ ಶ್ರೀ ಟಿ.ಡಿ.ರಾಜು, ನಾಗಮಂಗಲ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಹೆಚ್.ಎನ್.ವಿನಯ್ ಹಾಗೂ ಪ್ರೋ ಪಿ.ಎಸ್.ಐ ನಾರಾಯಣ ಹಾಗೂ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಆಧೀಕ್ಷಕರು ಪತ್ತೆ ತಂಡವನ್ನು ಪ್ರಶಂಸಿದ್ದಾರೆ. 

Press Note 26-05-2012

ಪೊಲೀಸ್ ಸೂಪರಿಂಟೆಂಡ್ರವರ ಕಛೇರಿ 
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕಃ 26-05-2012 

ಪತ್ರಿಕಾ ಪ್ರಕಟಣೆ. 

ದಿನಾಂಕ 25.05.2012 ರಂದು ರಾತ್ರಿ 08.30 ಗಂಟೆ ಸಮಯದಲ್ಲಿ ಕೆ.ಆರ್.ಪೇಟೆ ಟೌನ್ನ ಚಕ್ರಪಾಣಿ ಎಂಬುವರ ಬಾಬ್ತು ಜೀವಿತ ಪೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್ ಅಂಗಡಿ ಮಳಿಗೆಯಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಹಣವನ್ನು ಮತ್ತು ಮೊಬೈಲ್ಗಳನ್ನು ಪಣವಾಗಿಟ್ಟುಕೊಂಡು ಕ್ರಿಕೆಟ್ ಸ್ಪಾಟ್ ಬೆಟ್ಟಿಂಗ್ ಎಂಬ ಜೂಜಾಟವನ್ನು ಆಡುತ್ತಿದ್ದ ವೇಳೆ ಕೆ.ಆರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಎಸ್.ಎನ್.ಸಂದೇಶಕುಮಾರ ಮತ್ತು ಕೆ.ಆರ್. ಪೇಟೆ ಟೌನಿನ ಪಿಎಸ್ಐ ಶ್ರೀ. ರೇಣುಕಾ ಪ್ರಸಾದ್ ಹಾಗೂ ಇತರೆ ಸಿಬ್ಬಂದಿಗಳು ದಾಳಿ ಮಾಡಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಇಟ್ಟಿದ್ದ 50.023 ರೂ ನಗದು ಹಣ ಮತ್ತು 15 ವಿವಿಧ ಕಂಪನಿಯ ಮೊಬೈಲ್ಗಳು ಹಾಗು ಶಾಪರ್್ಲೈನ್ ಟಿವಿಯನ್ನು ತನಿಖೆ ಸಂಬಂದ ಅಮಾನತ್ತುಪಡಿಸಿಕೊಂಡು ಜೂಜಾಟ ಆಡುತ್ತಿದ್ದ 1] ಬಾಬು @ ರವೀಂದ್ರಬಾಬು ಬಿನ್ ರಾಮಲಿಂಗೇಗೌಡ 33 ವರ್ಷ, ಅಗ್ರಹಾರ ಕೆ. ಆರ್ ಪೇಟೆ ಟೌನ್ 2] ರವಿ ಬಿನ್ ಲೇ|ಪುಟ್ಟಚಾರಿ 33 ವರ್ಷ, ಗುತ್ತಿಗೆದಾರರು, ಹೊಸಹೊಳಲು ಗ್ರಾಮ, ಕೆ. ಆರ್. ಪೇಟೆ ತಾ|| 3] ಕೆ.ಟಿ ವಿಶ್ವನಾಥ ಬಿನ್ ತಮ್ಮಣ್ಣಗೌಡ, 34 ವರ್ಷ, ವ್ಯವಸಾಯ, ಸುಬಾಷ್ ನಗರ, ಕೆ.ಆರ್ ಪೇಟೆ ಟೌನ್ 4] ದೇವರಾಜು ಬಿನ್ ಕುಳ್ಳೇಗೌಡ, 40 ವರ್ಷ, ವಿಠಲಾಪುರ, ಬೂಕನಕೆರೆ ಹೋಬಳಿ, ಕೆಆರ್ ಪೇಟೆ ತಾ|| 5] ರವಿ ಬಿನ್ ಚನ್ನೇಗೌಡ 31 ವರ್ಷ, ಕೆ. ಆರ್. ಪೇಟೆ ಟೌನ್ 6] ದಿನೇಶ ಬಿನ್ ಮರಿಯಪ್ಪ, 30 ವರ್ಷ, ಬಟ್ಟೆ ವ್ಯಾಪಾರ, ಕೆ. ಆರ್. ಪೇಟೆ ಟೌನ್ 7] ರಾಮು ಬಿನ್ ಬೋರಯ್ಯ, 25 ವರ್ಷ, ಕತ್ತರಘಟ್ಟ ಗ್ರಾಮ, ಕಸಬಾ ಹೋಬಳಿ, ಕೆ.ಆರ್. ಪೇಟೆ ತಾ|| 8] ಅರುಣ್ ಬಿನ್ ಕೃಷ್ಣಪ್ಪ, 40 ವರ್ಷ, ಕೆ.ಆರ್. ಪೇಟೆ ಟೌನ್ 9] ಮಣಿಕಂಠ ಬಿನ್ ನಾಗರಾಜು, 26 ವರ್ಷ, ಅಗ್ರಹಾರ, ಕೆ.ಆರ್. ಪೇಟೆ ಟೌನ್ 10] ತಂಜಾಮ್ ಪಾಷಾ ಬಿನ್ ಗೌಸ್ ಪಾಷ, 20 ವರ್ಷ,ಮೊಬೈಲ್ ಅಂಗಡಿಯಲ್ಲಿ ಕೆಲಸ, ಕೆಆರ್ ಪೇಟೆ ಟೌನ್ 11] ಅವಿನಾಶ್ ಬಿನ್ ರಂಗೇಗೌಡ, 23 ವರ್ಷ, ವ್ಯವಸಾಯ, ಕಟ್ಟೆಕ್ಯಾತನಹಳ್ಳಿ ಗ್ರಾಮ ಅಕ್ಕಿಹೆಬ್ಬಾಳ್ಹೋಬಳಿ ಕೆಆರ್ ಪೇಟೆ ತಾ|| 12] ಕ.ೆಎಸ್ ಮಂಜುನಾಥ್ ಬಿನ್ ಸಣ್ಣೇಗೌಡ, 30 ವರ್ಷ, ಕೆ.ಆರ್. ಪೇಟೆ ಟೌನ್ 13] ಬಸವೇಗೌಡ ಬಿನ್ ಜವರೇಗೌಡ, 32 ವರ್ಷ, ಬೇಸಾಯ ಬಸವನಗುಡಿ, ಕೆ.ಆರ್ ಪೇಟೆ ಟೌನ್ 14] ಚಕ್ರಪಾಣಿ ಬಿನ್ ಟಿ. ತಿಮ್ಮೇಗೌಡ, 38 ವರ್ಷ, ವ್ಯಾಪಾರ, ಕೆ. ಆರ್ ಪೇಟೆ ಟೌನ್ ರವರನ್ನು ದಸ್ತಗಿರಿ ಮಾಡಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿರುತ್ತಾರೆ. 
ಸದರಿ ಆರೋಪಿಗಳನ್ನು ಬಂಧಿಸುವಲ್ಲಿ ಬಾಗವಹಿಸಿದ್ದ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳನ್ನು ಪ್ರಶಂಸಿರುತ್ತಾರೆ. 

Photo of Missing person Michael David John Easton, British National and further details.


         Office of the 
         Superintendent of Police, 
         Mandya Distirct, Dated: 23-05-2012. 

                       :Press Note:

     In continuation of this office Press Note dated: 22-05-2012 regarding Missing of Two United Kingdom Foreign Nationals by Name Mr: Turton  Ian Richard and Mr: Michael David John Easton from  Muthathi forest area in the limits of Halagur Police  Station,  Malavalli Taluk, Mandya District,  Karnataka on 21-05-2012. 

The details of Sl. No. 2 missing National Mr. Michael David John Easton, British National is as follows.  

II]    Mr: Michael David John Easton
British National  
Passport No. 706824834, Dated 04-06-2008 Valid Up to 04-06-2018.
Employment  Visa No. VI.0280216 dated: 02-02-2011 valid upto 01-12-2012 [Multiple] Registered at FRRO, Bangalore vide RC No. RCF /2281/UK/Bangalore/2011, R.P. valid upto 01-02-2013. 

PERMANENT ADDRESS IN U.K.

MICHAEL DAVID JOHN EASTON s/o DAVID ALBERT EASTON, 57 Years
No. 159 HOLLAND PARK AVENUE LONDON W114 UX, United Kingdom.
PRESENT WORKING ADDRESS IN INDIA.
SENIOR WELL ENGINEER,  SHELL INDIA MARKETS PRIVATE LIMITED
3RD FLOOR, RMZ, CENTENNIL CAMPUS, BB KUNDANAHALL, BANGALORE.

PRESENT RESIDENTIAL ADDRESS IN INDIA.

ROOM NO.334, TAJ VIVANTA ITBB WHITE FIELD, BANGALORE


PHYSICAL APPEARANCE: 

HEIGHT :    5.6 FT, WEIGHT:   60KGS
COLOUR: WHITE, BODY COMPLEXION:LEAN BODY COMPLEXION
HAIR: GREY COLOUR HAIR
DRESS:T-SHIRT & SHORTS 
 
       A sharp look out may please be maintained and if traced may please be informed to Superintendent of Police and FRO, Mandya District, Karnataka State through E-Mail: spmdy@ksp.gov.in and PH. No. 08232- 224500, Control Room No. 08232 – 224888, E-Mail: dcmdy@ksp.gov.in and Halgur Police Station PH. No. 08231 – 295322 [.] 

Press Note 22-05-2012


:Press Note: 

Subject: Missing of two Foreign Nationals by Name Mr: Turton   Ian Richard and Mr:                    Michael David John Easton from  Muthathi forest area in the limits of Halagur                  Police   Station,  Malavalli Taluk, Mandya District,  Karnataka.

-:-

 

That on 21-05-2012 at 9.30 P.M. Mr: S. Jayaprabhu S/o Subbaraj, Manager HR, Tenneco  Automotive India Pvt. Ltd., No. 122,  SIPCOT INDUSTRIAL COMPLEX,  HOSUR,  TAMIL NADU lodged a complaint at Halagur Police Station in Mandya District stating that the following two Foreign Nationals by Name Mr: Ian Turton  Richard and Mr: Michael David John Easton  are missing from Muthathi  forest area in the limits of Halagur Police Station, Malavalli Taluk, Mandya District,  Karnataka state on  19-05-2012 at 12 noon onwards. The details of the facts of the complaint are as follows.

“ Mr: Ian Turton Richard, Project Manager an expert from our Tenneco Automotive India Pvt. Ltd.,  is being deputed to lead a project under progress at our Hosur plant. On Friday 18th May 2012, when he was back from office he informed the car driver Mr: Saravanan to pick his friend Mr: Michael David John Easton an another expert at Indiranagar, Bangalore at 6 am. They left  the hotel Lord’s Plaza, Bangalore towards Muthathi. 

After boarding into the car they were giving  directions to the car driver using their hand map and GPS system. Finally they took the drop at Muthathy forest area in Mandya district, Karnataka state. Mr: Ian Turton Richard directed the driver to go back and report to the hotel on Monday, 21st May 2012 at 7am as regular. 

From there on Mr: Ian Turton Richard and his friend entered into the Muthathy forest area. We have been informed by the driver that they were carrying a big travel bag in which he has also seen a air boat and few life jackets. 

When the driver reported to the hotel on Monday, 21st May 2012 he was informed by the hotel authorities that Mr: Ian Turton Richard is not in hotel i.e he has not returned back since Saturday, 19th May 2012. Immediately the driver informed the travel agency owner Mr Murthy and also informed the HR department of Tenneco Pvt. Ltd., Mr: Ravi Kumar Hosur, Tamilnadu. 

Immediately after receiving the message the HR of Tenneco Pvt. Ltd. contacted and confirmed again with the hotel authorities about the presence of Mr: Ian Turton Richard that he has not reached the hotel after his Saturday check out. Then we called up the driver and we started our “Own Search” with our department colleagues since 10 a.m Monday 21st May 2012. 

We have approached the Forest Ranger Mr Sukumar at Denkanikottai, Tamilnadu  and informed about the above scenario and sought their support in finding the where about’s of Mr: Ian Turton Richard and Mr: Michael David John Easton. They have contacted the nearby forest range authorities and conveyed the message to inform them,   if any such traces. 

Then we travelled the same route which Mr: Ian Turton Richard has taken on Saturday to reach the Muthathy forest area. We walked few k.m.s inside the forest and we could not locate him, hence we returned back and approached the Forest range authorities at Sathanur in Ramanagar district. 

As per the directions of above and the advice of the Police officials of Sathanur, since the Muthathy forest area is under the jurisdiction of Halgur Police Station in Mandya district, now we approached the Halagur Police to help us in this regards” 

Mr: Ian Turton Richard being a foreign national he used to travel / outing during weekends. While we were talking to Mr. Mohan the driver of Mr: Michael David John Easton, he informed us that he was asked to pickup Mr: Ian Turton Richard and Mr: Michael David John Easton on Sunday 20th May 2012 evening at Anchetti forest area, near Denkanikottai, Tamilnadu. When he reached the said location and waited for a long but unable to locate them and also tried to reach them over phone but heard switched off message from the mobile service.

 In this connection the complainant requested the police for tracing of the above two foreigners who are missing since Saturday, 19th May 2012 at  12 noon onwards. 

In this connection a case in Halagur Police Station Cr. No. 108/ 2012 u/s Man Missing has been registered and being investigated. The details of the  missing foreign nationals are as fallows.

 Foreign Person Missing Details 

1.      Mr: Ian Turton Richard


 


PERMANENT ADDRESS

Mr: Ian Turton Richard, 45 years S/o SAMUEL BERNARD

Passport No: 706666831, dated: 08-08-2008 valid upto 15-10-2018.

British citizen, Date of Birth: 03-12-1969. [Previously registered  and obtained RP at DCP [HQ] and FRO, Gurgaon, Hariyana. Vide RC. No. 2011/101/F-II, dated: 24-05-2010 and issued RP upto 05-06-2011. Further extension will be ascertained]

1] N/o No. 81, Broome, Close, Huntington, Yeork, U.K.,

Ph. No. +44 [D] 1904 765591.

2] LIL-MAGNO, LL-11/30, GLIWICE-44

POLAND, EUROPE

WORKING ADDRESS

PROJECT MANAGER,

TENNECO AUTOMOTIVE INDIA PRIVATE LIMITED

NO.122, SIPCOT INDUSTRIAL COMPLEX,

HOSUR-635126, KRISHNAGIRI DISTRICT

TAMIL NADU State.

PRESENT ADDRESS

ROOM NO.308,, HOTEL LORDS PLAZA

ELECTRONICS CITY,  BANGALORE.

 

 PHYSICAL APPEARANCE:

 HEIGHT :    6 FT, WEIGHT:    65 KGS

COLOUR: WHITE, BODY COMPLEXION: NORMAL BODY COMPLEXION

HAIR: HALF BALD GREY COLOUR HAIR

DRESS:BLUE COLOUR T-SHIRT & KHAKI COLOUR SHORTS

II] Mr:   Mr: Michael David John Easton

British National 

Passport No. 706824834, Dated 04-06-2008 Valid Up to 04-06-2018.

Employment  Visa No. VI.0280216 dated: 02-02-2011 valid upto 01-12-2012 [Multiple] Registered at FRRO, Bangalore vide RC No. RCF /2281/UK/Bangalore/2011, R.P. valid upto 01-02-2013.

 

WORKING ADDRESS

SHELL COMPANY, BANGALORE

 

PRESENT ADDRESS

100 feet road,  INDIRANAGAR,  Bangalore. 

PHYSICAL APPEARANCE:

HEIGHT :    5.6 FT, WEIGHT:   60KGS

COLOUR: WHITE, BODY COMPLEXION:LEAN BODY COMPLEXION

HAIR: GREY COLOUR HAIR

DRESS:T-SHIRT & SHORTS 

          The Superintendent of Police, Mandya visited the above said Muthathi Forest Area along with the subordinates police officers of Halagur and Malavalli sub division and issued suitable instructions to trace the above two  missing foreign nationals [.] A team has been constituted headed by Shri. A.N. Rajanna, Addl. S.P. Mandya for searching of the said missing Foreign Nationals with the co-ordination of Ramanagaram [K.S] & Dharmapuri District [Tamilnadu State] Police,   Jungle Resort Fishing Camp and Forest Officials. The last call as   per CDR of the said missing foreigner shows near Heggalur Village in Kanakapur Taluk of Ramnagaram district on 19-05-2012 at 1630 hrs.  All the efforts are being made to trace the  missing persons. 

 A sharp look out may please be maintained and if traced may please be informed to Superintendent of Police and FRO, Mandya District, Karnataka State through E-Mail: spmdy@ksp.gov.in and PH. No. 08232- 224500, Control Room No. 08232 – 224888, E-Mail: dcmdy@ksp.gov.in and Halgur Police Station PH. No. 08231 – 295322 [.]

 

Press Note 19-05-2012

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಚೇರಿ,
ಮಂಡ್ಯ ಜಿಲ್ಲೆ, ದಿನಾಂಕ 19-05-2012
-ಃ ಪತ್ರಿಕಾ ಪ್ರಕಟಣೆ ಃ-

ಮಂಡ್ಯ ಜಿಲ್ಲೆಯ ನಾಗರೀಕರಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ದಿನಾಂಕ 27-05-2012 ರಿಂದ 05-06-2012ರವರೆಗೆ 10 ದಿವಸಗಳಕಾಲ ಬಂದೂಕು ತರಬೇತಿಯನ್ನು ನಡೆಸಲಾಗುತ್ತಿದ್ದು ಬಂದೂಕು ತರಬೇತಿಯನ್ನು ಅಪೇಕ್ಷಿಸುವವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಯುದಗಾರದಲ್ಲಿ ದಿನಾಂಕ 20-05-2012ರಿಂದ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಪಡೆಯುವುದು ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 26-05-2012ರ ಸಂಜೆ 5-00ಗಂಟೆಯೊಳಗೆ ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಜಿಲ್ಲಾ ಆಯುಧಗಾರದಲ್ಲಿ ಪಾವತಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್ ಪೆಕ್ಟರ್ ರವರನ್ನು ಸಂಪರ್ಕಿಸುವುದು.


Press Note on Nagamangala Town PS

ಪೊಲೀಸ್ ಸೂಪರಿಂಟೆಂಡ್ರವರ ಕಛೇರಿ 
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕಃ 29-04-2012 

ಪತ್ರಿಕಾ ಪ್ರಕಟಣೆ. 

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕು, ಸಿಂಗಾಪುರದ ನಿವಾಸಿಗಳಾದ ಮಂಜ @ ಮಂಜೇಗೌಡ ಬಿನ್ ಸಿದ್ದೇಗೌಡ, 23ವರ್ಷ, ಮತ್ತು ರವಿ ಬಿನ್ ವೆಂಕಟೇಗೌಡ,  28ವರ್ಷ ಎಂಬುವವರನ್ನು ಬಂದಿಸಿ 9 ಲಕ್ಷ ಬೆಲೆ ಬಾಳುವ ಮಾಲುಗಳ ವಶ.

ಕಳವು ಮಾಡಿದ ಮೊಟಾರ್ ಬೈಕನ್ನು ಮಾರಾಟಮಾಡಲು ದಿನಾಂಕಃ 26-04-2012ರಂದು ಸಂಜೆ 05.00 ಗಂಟೆ ಸಮಯದಲ್ಲಿ, ನಾಗಮಂಗಲ ಟೌನ್ನಲ್ಲಿ ಪ್ರಯತ್ನಿಸುತ್ತಿದ್ದಾಗ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವೆಂಕಟೇಗೌಡ ರವರು ಕೆ.ಆರ್. ಪೇಟೆ ತಾಲ್ಲೂಕು, ಸಿಂಗಾಪುರದ ನಿವಾಸಿಗಳಾದ 1] ಮಂಜ @ ಮಂಜೇಗೌಡ ಬಿನ್ ಸಿದ್ದೇಗೌಡ, 23ವರ್ಷ ಮತ್ತು 2] ರವಿ ಬಿನ್ ವೆಂಕಟೇಗೌಡ, 28ವರ್ಷ ಎಂಬುವವರನ್ನು ಮೊಟಾರ್ ಬೈಕ್ ಸಮೇತ ವಶಕ್ಕೆ ತೆಗೆದುಕೊಂಡು ಕೂಲಂಕುಶವಾಗಿ ವಿಚಾರಣೆಮಾಡಿದಾಗ 2 ವರ್ಷದ ಹಿಂದೆ ಬೋಗಾದಿಯಲ್ಲಿ ಬಟ್ಟೆ ಒಗೆದುಕೊಂಡು ಬರುತ್ತಿದ್ದ ಹೆಂಗಸಿಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವುದಾಗಿ, 1 ತಿಂಗಳ ಹಿಂದ ಚೀಣ್ಯಾ ಗ್ರಾಮದ ಬಳಿ ನೀರು ಕುಡಿಯಲು ಕೇಳಿ ಬಟ್ಟೆ ತೊಳೆಯುತ್ತಿದ್ದ ಹೆಂಗಸಿನ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವುದಾಗಿ, ಕಳೆದ 15 ದಿವಸಗಳ ಹಿಂದೆ ಸಂಕನಹಳ್ಳಿ ಗ್ರಾಮದ ಬಳಿ ದನಕರುಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ಹೆಂಗಸಿನ ಬಳಿ ಸರ ಕಿತ್ತುಕೊಳ್ಳಲು ಪ್ರಯತ್ನ ಮಾಡಿದ್ದಾಗಿ, 95 ಗ್ರಾಂ ತೂಕದ 2 ಚಿನ್ನದಮಾಂಗಲ್ಯ ಸರಗಳನ್ನು ಕೆ.ಆರ್.ಪೇಟೆಯ ಶ್ರೀ ದುಗರ್ಾ ಬ್ಯಾಂಕರ್ಸ್ನ ಮಾಲೀಕರಾದ ಪುಕ್ರಾಜ್ ಎಂಬಾತನಿಗೆ ಮಾರಾಟಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಅದೊ ಅಲ್ಲದೇ 1] ರಂಗಸ್ವಾಮಿ @ ಸ್ವಾಮಿ, ಕುದೂರು ಗ್ರಾಮ ಮತ್ತು 2] ಸಂತೋಷ @ ಪರಾಕ್ ಬಿಲ್ಲೇನಹಳ್ಳಿ ಗ್ರಾಮ, ಇವರುಗಳೊಂದಿಗೆ ಸೇರಿಕೊಂಡು ನಾಗಮಂಗಲ, ಬೆಳ್ಳೂರು, ಪಾಂಡವಪುರ ಮತ್ತು ಕೆ,ಆರ್.ಪೇಟೆ ಕಡೆಗಳಲ್ಲಿಯೂ ಸಹ ಮೊಟಾರ್ ಬೈಕ್ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ 11 ಮೊಟಾರ್ ಬೈಕ್ಗಳನ್ನು ಸಹಾ ವಶಪಡಿಸಿಕೊಂಡಿದ್ದು ಮೇಲ್ಕಂಡ ಚಿನ್ನಾಭರಣ ಮತ್ತು ದ್ವಿಚಕ್ರಗಳ ಒಟ್ಟು ಮೌಲ್ಯ ಸುಮಾರು 9 ಲಕ್ಷ ರೂ ಬೆಲೆ ಬಾಳುವ ವಸ್ತುಗಳನ್ನು ನಾಗಮಂಗಲ ಪೊಲೀಸರು ಕಾರ್ಯಚರಣೆ ನಡೆಸಿ ವಶಪಡಿಸಿಕೊಂಡಿರುತ್ತಾರೆ. 

ಸದರಿ ಆರೋಪಿಗಳನ್ನು ಬಂಧಿಸುವಲ್ಲಿ ಬಾಗವಹಿಸಿದ್ದ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ.                     ಶ್ರೀ ವೆಂಕಟೇಗೌಡ, ಸಿಬ್ಬಂದಿಗಳಾದ ಶ್ರೀ ಪ್ರಶಾಂತ್, ಶ್ರೀ ಅನಿಲ್ ಕುಮಾರ್, ಶ್ರೀ ಹಫೀಸ್ ಪಾಷ, ಹಾಗೂ ಚಂದ್ರಶೇಖರ್ ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳನ್ನು ಪ್ರಶಂಸಿರುತ್ತಾರೆ. 

Press Note on Mandya Rural PS Murder Case

                ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ 
          ಮಂಡ್ಯ ಜಿಲ್ಲೆ, ಮಂಡ್ಯ,  ದಿನಾಂಕಃ 17-04-2012  

                              ಪತ್ರಿಕಾ ಪ್ರಕಟಣೆ
ಮಂಡ್ಯ ತಾಲ್ಲೂಕು, ಸಂಪಹಳ್ಳಿ ಗ್ರಾಮದ ಶಿವಲಿಂಗಯ್ಯ @ ಚಿಕ್ಕೋನು ಎಂಬುವವರ ಕೊಲೆ ಪ್ರಕರಣವನ್ನು ಪತ್ತೆ ಮಾಡಿ, ಆರೋಪಿಯನ್ನು ದಸ್ತಗಿರಿ ಮಾಡಿರುವ ಬಗ್ಗೆ. 

      ದಿನಾಂಕಃ 13-04-2012 ರಂದು ಬೆಳಿಗ್ಗೆ ಮಂಡ್ಯ ತಾಲ್ಲೂಕು, ಸಂಪಹಳ್ಳಿ ಗ್ರಾಮದ ಶಿವಲಿಂಗಯ್ಯ @ ಚಿಕ್ಕೋನು ಮತ್ತು ಅದೇ ಗ್ರಾಮದ ಕಾಳೇಗೌಡರ ಮಗ ಸತೀಶ ಜಮೀನಿಗೆ ನೀರು ಕಟ್ಟುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದು, ಸತೀಶನು ಶಿವಲಿಂಗಯ್ಯನಿಗೆ ಎಲೆಗುದ್ದಲಿಯಿಂದ ತಲೆಗೆ ಹೊಡೆದು ತೀವ್ರ ರಕ್ತ ಗಾಯಗಳನ್ನುಂಟು ಮಾಡಿ ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದನು. ಈ ಸಂಬಂದ ಸ್ಥಳೀಯ ಪೊಲೀಸ್ ಅದಿಕಾರಿಗಳು ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು.  

ಈ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಲು ಮಂಡ್ಯ ಗ್ರಾಮಾಂತರ ವೃತ್ತದ ಸಿಪಿಐ ಶ್ರೀ. ಜಿ. ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ  ಒಂದು ತಂಡವನ್ನು ರಚಿಸಲಾಗಿತ್ತು.  ಈ ತಂಡವು ಕಾರ್ಯಾಚರಣೆ ನಡೆಸಿ ಕೊಲೆಯಾದ 72 ಗಂಟೆಗಳ ಒಳಗೆ ದಿನಾಂಕ: 16-04-2012 ರಂದು ಬೆಳಿಗ್ಗೆ ಆರೋಪಿ ಸತೀಶನನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ, ಆತನು ಕೊಟ್ಟ ಸುಳುವಿನ ಮೇಲೆ ಕೊಲೆ ಮಾಡಲು ಉಪಯೋಗಿಸಿದ ಗುದ್ದಲಿಯನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಾಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.  

   ಈ ಕೊಲೆ ಪ್ರಕರಣದ ಪತ್ತೆ ಕಾರ್ಯ ಕೈಗೊಂಡ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ. 
 

Press Note on Mandya East PS Crime Rep.15-04-2012


                                                       ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ 
                                                  ಮಂಡ್ಯ ಜಿಲ್ಲೆ, ಮಂಡ್ಯ,  ದಿನಾಂಕಃ 16-04-2012  
                            
                                                                  ''ಪತ್ರಿಕಾ ಪ್ರಕಟಣೆ''

     ರಾಯಲ್ ಛಾಲೆಂಜರ್ ಬೆಂಗಳೂರು [ಆರ್.ಸಿ.ಬಿ] ವಿರುದ್ದ ರಾಜಸ್ಥಾನ್ ರಾಯಲ್ [ಆರ್ಆರ್] ಕ್ರಿಕೆಟ್ ಮ್ಯಾಚ್ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿಕೊಂಡು ಜೂಜಾಟವಾಡುತ್ತಿದ್ದ   9 ಜನ ಆಸಾಮಿಗಳ ಬಂಧನ, ಪಣಕ್ಕಿಟ್ಟಿದ್ದ ನಗದು ಹಣ 2,10,550-00 ರೂ,      16 ಮೊಬೈಲ್ ಹ್ಯಾಂಡ್ಸೆಟ್ಗಳು ಮತ್ತು 3 ಮೋಟಾರ್ ಸೈಕಲ್ಗಳ ವಶ.

     ದಿನಾಂಕಃ 15-04-2012 ರಂದು ರಾತ್ರಿ 8-00 ಗಂಟೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಛಾಲೆಂಜರ್ ಬೆಂಗಳೂರು [ ಆರ್.ಸಿ.ಬಿ] ವಿರುದ್ದ ರಾಜಸ್ಥಾನ ರಾಯಲ್ [ಆರ್ಆರ್] ಕ್ರಿಕೆಟ್ ಮ್ಯಾಚ್ ಪ್ರಾರಂಭವಾಗಿ ನಡೆಯುತ್ತಿದ್ದು ಸದರಿ ಕ್ರಿಕೆಟ್ ಮ್ಯಾಚ್ನಲ್ಲಿ ಹಣ, ಮೊಬೈಲ್ ಹ್ಯಾಂಡ್ಸೆಟ್, ಮೋಟಾರ್ ಸೈಕಲ್ಗಳನ್ನು ಪಣವಾಗಿ ಕಟ್ಟಿಕೊಂಡು ಮಂಡ್ಯ ನಗರದ ಹಾಲಹಳ್ಳಿ 1ನೇ ಕ್ರಾಸ್ನಲ್ಲಿರುವ ಅನಿಲ ಕುಮಾರ ಬಿನ್ ನಾಗೇಗೌಡ [ ಭೂತೇಗೌಡ] ಎಂಬುವರ ಮನೆಯ ರೂಂನಲ್ಲಿ ಟಿವಿ ನೋಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಎಂಬ ಜೂಜಾಟವನ್ನು ಆಡುತ್ತಿದ್ದ ಮನೆಯ ಮೇಲೆ ಮಂಡ್ಯ ಪೂರ್ವ ಠಾಣೆಯ ಪಿ.ಎಸ್.ಐ. ಮತ್ತು ಸಿಬ್ಬಂದಿಯವರುಗಳು ರಾತ್ರಿ 9-30 ಗಂಟೆಯಲ್ಲಿ ದಾಳಿಮಾಡಿ ಈ ಕೆಳಕಂಡ ಆರೋಪಿಗಳನ್ನು ಹಿಡಿದು ವಶಕ್ಕೆ ತೆಗೆದುಕೊಂಡು ಕ್ರಿಕೆಟ್ ಬೆಟ್ಟಿಂಗ್ ಕಟ್ಟಿದ್ದ ನಗದು ಹಣ 2,10,550-00 ರೂಗಳು, 16 ವಿವಿಧ ಕಂಪನಿಯ ಮೊಬೈಲ್ ಹ್ಯಾಂಡ್ಸೆಟ್ಗಳು, 3 ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಂಡಿರುತ್ತಾರೆ. ಸದರಿ ಆಸಾಮಿಗಳು ಕ್ರಿಕೆಟ್ ಬೆಟ್ಟಿಂಗ್ ಕಟ್ಟಲು ಬಳಸುತ್ತಿದ್ದ ಶಾಪರ್್ ಕಲರ್ ಟಿವಿ ಮತ್ತು 4 ಕ್ಯಾಲುಕೇಟರ್ಗಳನ್ನು ಸಹ ವಶಪಡಿಸಿಕೊಂಡು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

                                                       ಆರೋಪಿಗಳ ಹೆಸರು ಮತ್ತು ವಿಳಾಸ.

1] ಪಂಚಾಕ್ಷರಿ ಬಿನ್ ಲೇಟ್ ನಿಂಗೇಗೌಡ, 34 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಹಾಲಹಳ್ಳಿ ಸ್ಲಂ ಮಂಡ್ಯ ಸಿಟಿ. ಸ್ವಂತ ಸ್ಥಳ ಬೂತನ ಹೊಸೂರು ಗ್ರಾಮ, ಮಂಡ್ಯ ತಾಲ್ಲೋಕು. 
2] ನಾಗೇಶ ಬಿನ್ ವೆಂಕಟರಾಮು, 33 ವರ್ಷ, ವಾಸ ಮನೆ ನಂ. 140. ಎಲ್.ಜೆ. ಟೆಂಪಲ್ ಸ್ಟ್ರೀಟ್. ಹಳೆ ನಗರ, ಮಂಡ್ಯ. 
3] ಅನಿಲ್ಕುಮಾರ್ ಬಿನ್ ನಾಗೇಗೌಡ, 33ವರ್ಷ, ವ್ಯವಸಾಯ, ವಾಸ 1ನೇಕ್ರಾಸ್, ಹಾಲಹಳ್ಳಿ, ಮಂಡ್ಯ 
4] ದೇವರಾಜು ಬಿನ್ ನಂಜುಂಡಯ್ಯ, 34 ವರ್ಷ, ಟೈಲರ್ ಕೆಲಸ, ವಾಸ 7 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ. 
5] ಆನಂದ ಬಿನ್ ವೆಂಕಟೇಶ, 26 ವರ್ಷ, ವಾಸ 4 ನೇ ಕ್ರಾಸ್, ಬೋವಿ ಕಾಲೋನಿ. ಮಂಡ್ಯ. 
6] ವೇಣುಗೋಪಾಲ ಬಿನ್ ರಾಮೇಗೌಡ, 28 ವರ್ಷ, ಆಪ್ಟಿಕಲ್ ಕೆಲಸ, ವಾಸ 4 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ ಸಿಟಿ. 
7] ಶಿವರಾಜ್ ಬಿನ್ ಲೇಟ್ ನಿಂಗೇಗೌಡ, 26 ವರ್ಷ, ಕಾಪೀ ಟಿ ವ್ಯಾಪಾರ, ವಾಸ ಕೇರಾಪ್ ಪಂಚಾಕ್ಷರಿ, ಹಾಲಹಳ್ಳಿ ಸ್ಲಂ ಮಂಡ್ಯ           ಸಿಟಿ. ಸ್ವಂತ ಸ್ಥಳ ಬೆಳ್ಳಾಳೆ ಗ್ರಾಮ, ಕನಕಪುರ ತಾಲ್ಲೋಕು.
8] ಮಧು ಬಿನ್ ಮಾದಯ್ಯ, 19 ವರ್ಷ, , ವಾಸ ಕೇರಾಪ್ ನಂಜುಂಡಯ್ಯ 7 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ. ಸ್ವಂತ               ಸ್ಥಳ ರಾಮನಾಥಮೋಳೆ, ಕನಕಪುರ ತಾಲ್ಲೋಕು. 
9] ಶಂಕರ ಬಿನ್ ಲೇಟ್ ಸಿದ್ದಯ್ಯ, 28 ವರ್ಷ, ಲಾರಿ ಚಾಲಕ, ವಾಸ 5 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ. 

         ಈ ಮೇಲ್ಕಂಡ ದಾಳಿಯಲ್ಲಿ ಪಾಲ್ಗೊಂಡಿದ್ದ ಮಂಡ್ಯ ಪೂರ್ವ ಠಾಣೆಯ ಪಿ.ಎಸ್.ಐ. ಶ್ರೀ ಎಂ. ಮಂಜುನಾಥ ಅಪರಾಧ ವಿಭಾಗದ ಪಿ.ಎಸ್.ಐ. ಶ್ರೀ ಎಂ.ಡಿ.ಶಿವರಾಜು ಹಾಗೂ ಸಿಬ್ಬಂದಿಯವರುಗಳುನ್ನು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಪ್ರಶಂಸಿರುತ್ತಾರೆ

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-04-12 ರಂದು ಒಟ್ಟು 23 ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು, 3 ಅಕ್ರಮ ಮರಳು ಸಾಗಣಿಕೆ ಪ್ರಕರಣಗಳು, 1 ಮಹಿಳಾ ದೌರ್ಜನ್ಯ ಪ್ರಕರಣ, 2 ಯು.ಡಿಆರ್ ಪ್ರಕರಣಗಳು ಹಾಗೂ 15 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  
 
ಕಳ್ಳತನ ಪ್ರಕರಣಗಳು :

1. ಕೆಸ್ತೂರು ಪೊಲೀಸ್ ಠಾಣೆ ಮೊ.ಸಂ.51/12 ಕಲಂ.379 ಐಪಿಸಿ.

     ದಿ:11-04-12 ರಂದು ಪಿರ್ಯಾದಿ ಮಲ್ಲಿಕಾರ್ಜನ ಬಿನ್ ಈರೇಗೌಡ, ಮುಟ್ಟನಹಳ್ಳಿ ಗ್ರಾಮ, ಮದ್ದೂರು ತಾಲೋಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ವಿವರವೇನೆಂದರೆ ಕೆ.ಎ. 02 ಇ.ಡಬ್ಲ್ಯೂ. 7935 ಹೀರೋ ಹೋಂಡಾ ಪ್ಯಾಷನ್ ಬೈಕನಲ್ಲಿ ಬಂದು ಬೈಕನ್ನು ದೇವಸ್ಥಾನದ ಮುಂದಿನ ಜಾಗದಲ್ಲಿ ನಿಲ್ಲಿಸಿ ಹೋಗಿ ನಂತರ ಪೂಜೆ ಮುಗಿಸಿಕೊಂಡು ವಾಪಸ್ಸು ಬಂದು ನೋಡಲಾಗಿ ಸದರಿ ಬೈಕನ್ನು ಯಾರೋ ಕಳ್ಳರು ಕಳ್ಳತಮಾಡಿಕೊಂಡು ಹೋಗಿರುತ್ತಾರೆ ಪತ್ತೆಮಾಡಿ ಕೊಡಿ ಇತ್ಯಾದಿ ದೂರು.

2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ212/12 ಕಲಂ.379 ಐ.ಪಿ.ಸಿ

     ದಿ: 11-04-2012 ರಂದು ಎಂ.ಸ್ವಾಮಿ ಬಿನ್ ಮುದ್ದೇಗೌಡ, ತಡಗವಾಡಿ ಗ್ರಾಮ, ಶ್ರೀರಂಗಪಟ್ಟಣ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ನನ್ನ ಮೋಟಾರ್ ಬೈಕ್ ವಾಹನ ಟಿವಿಎಸ್ ವಿಕ್ಟರ್ ಗಾಡಿ ನಂ ಕೆ.ಎ- 11 - ಕೆ -4295 ರಲ್ಲಿ ಮಿನಿವಿಧಾನ ಸೌಧದ ಆವರಣದಲ್ಲಿ ಸುಮಾರು 1-00 ಗಂಟೆ ವೇಳೆಯಲ್ಲಿ ವಾಹನ ನಿಲ್ಲಿಸಿ ಬೀಗ ಹಾಕಿ ತಾಲ್ಲೂಕು ಕಛೇರಿಗೆ ಹೋಗಿ ನನ್ನ ಸ್ವಂತ ಕೆಲಸ ಮುಗಿಸಿ 1-30 ಗಂಟೆಗೆ ಹೊರಗೆ ಬಂದು ಮೋಟಾರ್ ಬೈಕ್ ನೋಡಲಾಗಿ ಇರಲಿಲ್ಲ. ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿ ಕಳ್ಳತನ ಮಾಡಿರುವವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿಕೆ.  ವಾಹನದ ಅಂದಾಜು ಬೆಲೆ ಸುಮಾರು 20,000 ರೂ. ಆಗುತ್ತದೆ. ಎಂದು ದೂರು.

ಅಕ್ರಮ ಮರಳು ಸಾಗಣಿಕೆ ಪ್ರಕರಣಗಳು :

1. ಕೊಪ್ಪ ಪೊಲೀಸ್ ಠಾಣೆ ಮೊ.ಸಂ.68/12 ಕಲಂ.ಕಲಂ.188-379 ಐಪಿಸಿ ರೆ.ವಿ. 4[1], 1[ಎ] & 21[1] ಎಂಎಂಆರ್ಡಿ ಆಕ್ಟ್..
     
     ದಿ: 11-04-2012 ರಂದು ನವೀನ್. ಪಿ.ಎಸ್. ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಯಡವನಹಳ್ಳಿ ಗ್ರಾಮದ ಶಿಂಷಾನದಿ ಪಾತ್ರದಲ್ಲಿ, ಕೊಪ್ಪ ಹೋ, ಮದ್ದೂರು ತಾ ಇಲ್ಲಿ ನಂಬರ್ ಇಲ್ಲದ ಟ್ರಾಕ್ಟರ್ ಚಾಲಕರು ಮತ್ತು ಮಾಲೀಕರು, ಅಕ್ರಮ ಮರಳು ಗಣಿಗಾರಿಕೆ & ಸಾಗಾಣಿಕೆಗೆ ನಿರ್ಬಂಧವಿದ್ದು ನಿಷೇಧಾಜ್ಞೆ ಜಾರಿ ಯಲ್ಲಿರುತ್ತದೆ. ಆದರೂ ಮೇಲ್ಕಂಡ ಟ್ರಾಕ್ಟರ್ ಚಾಲಕ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಳ್ಳತನದಿಂದ ಅಕ್ರಮ ಮರಳು ಸಾಗಣಿಕೆ ಮಾಡಿರುತ್ತಾರೆ.

2. ಕೊಪ್ಪ ಪೊಲೀಸ್ ಠಾಣೆ ಮೊ.ಸಂ.69/12 ಕಲಂ.ಕಲಂ.188-379 ಐಪಿಸಿ ರೆ.ವಿ. 4[1], 1[ಎ] & 21[1] ಎಂಎಂಆರ್ಡಿ ಆಕ್ಟ್..
    
      ದಿ:11-04-12 ರಂದು ಪಿರ್ಯಾದಿ ನವೀನ್. ಪಿ.ಎಸ್. ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಶಿಂಷಾನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ & ಸಾಗಾಣಿಕೆಗೆ ನಿರ್ಬಂಧವಿದ್ದು ನಿಷೇಧಾಜ್ಞೆ ಜಾರಿ ಯಲ್ಲಿರುತ್ತದೆ. ಆದರೂ ಕೆಎ-11-ಟಿ-9523/9524 ರ ಮರಳು ತುಂಬಿದ ಟ್ರಾಕ್ಟರ್ ಚಾಲಕ ಮತ್ತು ಮಾಲೀಕರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಳ್ಳತನದಿಂದ ಅಕ್ರಮ ಮರಳು ಸಾಗಣಿಕೆ ಮಾಡಿರುತ್ತಾರೆ ಅವರ ಮೇಲೆ ಕ್ರಮ ಜರುಗಿಸಲು ದೂರು.

3. ಕೊಪ್ಪ ಪೊಲೀಸ್ ಠಾಣೆ ಮೊ.ಸಂ.70/12 ಕಲಂ.ಕಲಂ.188-379 ಐಪಿಸಿ ರೆ.ವಿ. 4[1], 1[ಎ] & 21[1] ಎಂಎಂಆರ್ಡಿ ಆಕ್ಟ್..
       
     ದಿ:11-04-12 ರಂದು ಪಿರ್ಯಾದಿ ನವೀನ್. ಪಿ.ಎಸ್. ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಶಿಂಷಾನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ & ಸಾಗಾಣಿಕೆಗೆ ನಿರ್ಬಂಧವಿದ್ದು ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಆದರೂ ಕೆಎ-11-ಟಿ-4720/4721 ರ ಮರಳು ತುಂಬಿದ ಟ್ರಾಕ್ಟರ್ ಚಾಲಕ ಮತ್ತು ಮಾಲೀಕರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಳ್ಳತನದಿಂದ ಅಕ್ರಮ ಮರಳು ಗಣಿಗಾರಿಗೆ ಮತ್ತು ಸಾಗಾಣಿಕೆಯಲ್ಲಿ ತೊಡಗಿದು ಅವರ ಮೇಲೆ ಕ್ರಮ ಜರುಗಿಸಲು ದೂರು.

ಮಹಿಳಾ ದೌರ್ಜನ್ಯ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ಸಂ.56/12 ಕಲಂ.143-504-324-498(ಎ)-506 ಕೂಡ 149 ಐಪಿಸಿ

     ದಿ:11-04-2012 ರಂದು ಗಾಯತ್ರಿ ಕೋಂ ನಂಜಪ್ಪ,  ಅಂಚೇಬೀರನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಏನೆಂದರೆ ಈಗ್ಗೆ ಸುಮಾರು 11 ತಿಂಗಳ ಹಿಂದೆ ಅಂಚೇಬಿರನಹಳ್ಳಿ ಗ್ರಾಮ ನಂಜಪ್ಪ ಎಂಬುವವರಿಗೆ 10,000/- ರೂ ವರದಕ್ಷಿಣೆ, 15 ಗ್ರಾಂ ಚಿನ್ನ ಕೊಟ್ಟು ನನ್ನ ಮದುವೆ ಮಾಡಿದ್ದು ಸರಿಯಸ್ಟೆ, ಪಿರ್ಯಾದಿಯವರ ನಾದಿನಿ, ಅತ್ತಿಗೆ, ಇವರ ಗಂಡ ಎಲ್ಲರೂ ಪಿರ್ಯಾದಿಯವರ ಮನೆಯಲ್ಲಿ ಉಳಿದುಕೊಂಡಿದ್ದರು ಈಗಿರುವಲ್ಲಿ ಕೆಲವು ದಿವಸಗಳು ಅನ್ಯೋನ್ಯವಾಗಿದ್ದು ನಂತರ ಮೇಲ್ಕಂಡ ಆರೋಪಿಗಳು ಪಿರ್ಯಾದಿಯವರಿಗೆ ಮತ್ತು ಅವರ ಗಂಡನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ನೀಡುತ್ತಿದ್ದರು. ದಿನಾಂಕ 10-04-12 ರಂದು ಸಂಜೆ 7-30 ಗಂಟೆ ಯಲ್ಲಿ ಮೇಲ್ಕಂಡ ಆರೋಪಿಗಳು ಪಿರ್ಯಾದಿಯವರನ್ನು ಅವರ ಗಂಡನನ್ನು ಉದ್ದೇಶಿಸಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ 4 ರವರು ಮಚ್ಚನಿಂದ ಪಿರ್ಯಾದಿಯವರ ಕೈಗೆ ಹೊಡೆದು ಗಾಯಗೊಳಿಸಿ, ಪಿರ್ಯಾದಿಯವರ ಗಂಡನನ್ನು ಹಿಡಿದುಕೊಂಡು ಎಳೆದಾಡಿ ತರಚಿದ ಗಾಯಗೊಳಿಸಿ ಎಲ್ಲರೂ ಇವತ್ತಲ್ಲ ನಾಳೆ ಕೊಲೆ ಮಾಡುತ್ತೆವೆ ಎಂದು ಕೊಲೆ ಬೆದರಿಕೆಯನ್ನು ಹಾಕಿ ಗಲಾಟೆ ಮಾಡಿದರು ಎಂದು ಎಂಬಿತ್ಯಾದಿಯಾಗಿ ದೂರು..


ಯು.ಡಿಆರ್ ಪ್ರಕರಣಗಳು :

1. ಕೆ,ಆರ್,ಸಾಗರ ಪೊಲೀಸ್ ಠಾಣೆ ಮೊ.ಸಂ. ಯುಡಿಆರ್ ನಂ.15/12 ಕಲಂಃ174 ಸಿಆರ್.ಪಿ.ಸಿ

     ದಿ:11-04-12 ರಂದು ಈರಮ್ಮ ಕೋಂ ಲೇಟ್ ಕೆಂಪೇಗೌಡ, 40 ವರ್ಷ, ವಕ್ಕಲಿಗರು, ಹೊಸ ಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲೋಕು. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯ ಮಗಳಾದ ಶೃತಿ ಡಾಟರ್ ಆಪ್ ಲೇಟ್ ಕೆಂಪೇಗೌಡ, 19 ವರ್ಷ, ಮನೆ ಕೆಲಸ, ಒಕ್ಕಲಿಗರು, ಹೊಸ ಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲೋಕು ರವರಿಗೆ ಕಳೆದ 6 ತಿಂಗಳಿಂದ ಆಗ್ಗಾಗ್ಗೆ ಹೊಟ್ಟೆ ನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ದಿನಾಂಕ: 07-04-12 ರಂದು ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ಶೃತಿಯು ಅಡುಗೆ ಮನೆಗೆ ತಿಂಡಿ ತಿನ್ನಲು ಹೋಗಿದ್ದಾಗ ಹೊಟ್ಟೆನೋವು ಬಂದು ತಾಳಲಾರದೆ ಅಡುಗೆ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ತೆಗೆದುಕೊಂಡು ಮೈಮೇಲೆ ಸುರುದುಕೊಂಡು ಬೆಂಕಿ ಕಡ್ಡಿ ಗೀರಿ ಹಚ್ಚಿಕೊಂಡು ಚಿಕಿತ್ಸೆ ಫಲಕಾರಿಯಾಗದೆ ಶೃತಿಯು ಮೃತಪಟ್ಟಿರುತ್ತಾಳೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ ದೂರು ಮೇರೆಗೆ.

2. ಪಾಂಡವ ಪುರ ಪೊಲೀಸ್ ಠಾಣೆ ಮೊ.ಸಂ. 17/12 ಕಲಂ. 174 ಸಿಆರ್.ಪಿ.ಸಿ

     ದಿ: 11-04-12 ರಂದು ಪಿರ್ಯಾದಿ ಆಕಾಶ್. ಡಿ. ಬಿನ್ ದಾಸಪ್ಪ, ಶಿವರಾಂ ಬಡಾವಣೆ, ಕೆನ್ನಾಳು ಗ್ರಾಮ, ಪಾ ಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಮನೆಯ ಮುಂದಿನ ಮೈಸೂರು ಪಾಂಡವಪುರ ರಸ್ತೆಯ ಫುಟ್ಪಾತ್ ನ ಹುಲ್ಲಿನ ಮೇಲೆ ಒಬ್ಬ ಅಪರಿಚಿತ ಗಂಡಸು ಸುಮಾರು 35 ರಿಂದ 40 ವರ್ಷ ಆಸಾಮಿಯು ಮಲಗಿಕೊಂಡಿದ್ದು,  ಹತ್ತಿರ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಮೃತಪಟ್ಟಿರುವುದು ಕಂಡು ಬಂದು ಈ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ನರಳಿ ಮೃತಪಟ್ಟಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ದೂರಿನ ಮೇರೆಗೆ ಠಾಣಾ ಯುಡಿಆರ್ ನಂ 17/2012 ಕಲಂ 174 ಸಿ.ಆರ್.ಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ. 

Press Note on Nagamangala Town PS

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
  ಮಂಡ್ಯಜಿಲ್ಲೆ. ಮಂಡ್ಯ 
ದಿನಾಂಕಃ 04-04-2012 

ಪತ್ರಿಕಾ ಪ್ರಕಟಣೆ.

ನಾಗಮಂಗಲ ಟೌನಿನಲ್ಲಿರುವ ಸರ್ಕಾರಿ ಸ್ವಾಮ್ಯದ ಎಂ.ಎಸ್.ಐ.ಎಲ್. ಮದ್ಯದ ಅಂಗಡಿಯಲ್ಲಿ ಕಳುವಾಗಿದ್ದ ಮದ್ಯದ ಬಾಟಲಿಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿರುವ ಬಗ್ಗೆ. 

     ದಿನಾಂಕ:01-04-2012 ರಂದು ಮದ್ಯರಾತ್ರಿ ನಾಗಮಂಗಲ ಟೌನಿನ ಮುಖ್ಯರಸ್ತೆಯಲ್ಲಿರುವ  ಸರ್ಕಾರಿ  ಸ್ವಾಮ್ಯದ ಎಂಎಸ್ಐಎಲ್.ನ ಮದ್ಯಮಾರಾಟದ ಅಂಗಡಿಗೆ ಹಾಕಿದ್ದ ಷೆಟರ್ ಬಾಗಿಲನ್ನು ಮುರಿದು ತೆಗೆದು ಸದರಿ  ಮಳಿಗೆಯಲ್ಲಿದ್ದ  750 ಎಂ.ಎಲ್ನ 3 ಮದ್ಯದ ಬಾಟೆಲ್ಗಳು ಹಾಗೂ 94,908 .ರೂ. ನಗದು ಹಣವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಎಂಎಸ್ಐಎಲ್ ಜಿಲ್ಲಾ ಮೆಲ್ವಿಚಾರಕರಾದ ಹೆಚ್.ಎಂ.ಶಂಕರಯ್ಯ ರವರು ನೀಡಿದ್ದ ದೊರಿನ ಮೇರೆಗೆ ನಾಗಮಂಗಲ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಸ್ಥಳೀಯ ಪೊಲೀಸ್ ಅದಿಕಾರಿಗಳು ತನಿಖೆ ಕೈಗೊಂಡಿದ್ದರು.  

     ಈ ವಿಚಾರದಲ್ಲಿ ಪ್ರಕರಣದ ತನಿಖಾದಿಕಾರಿಗಳಾದ ಶ್ರೀ. ಟಿ.ಡಿ. ರಾಜು, ಸಿಪಿಐ, ನಾಗಮಂಗಲ ವೃತ್ತ, ಶ್ರೀ. ವೆಂಕಟೇಗೌಡ, ಪಿಎಸ್ಐ, ನಾಗಮಂಗಲ ಟೌನ್ ಠಾಣೆ ಹಾಗೂ ಸಿಬ್ಬಂದಿಯವರು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದು, ಸದರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 1] ಮಹೇಂದ್ರ ಬಿನ್ ಮಾಯಣ್ಣಗೌಡ, 32 ವರ್ಷ, ಬಸ್ತಿ ಗ್ರಾಮ, ಬೂಕರನಕೆರೆ ಹೋಬಳಿ ಕೆ.ಆರ್. ಪೇಟೆ ತಾಲ್ಲೊಕು, 2] ಮಹೇಶ ಬಿನ್ ಬಸಪ್ಪ 25ವರ್ಷ, ಚೋಕನಹಳ್ಳಿ, ವರುಣಾ ಹೋಬಳಿ, ಮೈಸೂರು ಜಿಲ್ಲೆ. 3] ರಾಮಲಿಂಗೇಗೌಡ ಬಿನ್ ಮರಿಗೌಡ, 32 ವರ್ಷ, ಬೇಬಿ ಗ್ರಾಮ, ಬಸರಾಳು ಹೋಬಳಿ, ಮಂಡ್ಯ ತಾಲ್ಲೊಕು, ರವರುಗಳನ್ನು  ದಿನಾಂಕಃ 03-04-2012 ರಂದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ, ತಾವು ಮೂರು ಜನರು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಎಲ್ಲರೂ ಮಾತನಾಡಿಕೊಂಡು ದಿನಾಂಕ 01-04-2012 ರ ರಾತ್ರಿ ಜಾಕ್ನಿಂದ ಅಂಗಡಿಯ ರೋಲಿಂಗ್ ಷೆಟರ್ ಅನ್ನು ಎತ್ತಿ ಹಣ ಮತ್ತು ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿರುವುದಾಗಿ ತಪ್ಪನ್ನು ಒಪ್ಪಿಸಿಕೊಂಡಿರುತ್ತಾರೆ. ಅವರ ಹೇಳಿಕೆ ಅನ್ವಯ ಆರೋಪಿತರಿಂದ ಕಳುವು ಮಾಡಿದ್ದ ಹಣದ ಪೈಕಿ ರೂ.  80,900 ಹಣ ಹಾಗೂ ಒಂದು ಕಾರಿನ ಜಾಕ್ ಅನ್ನು ವಶಪಡಿಸಿಕೊಂಡು, ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತದೆ. 

     ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ  ವೃತ್ತನಿರೀಕ್ಷಕರಾದ ಶ್ರೀ. ಟಿ.ಡಿ.ರಾಜು, ನಾಗಮಂಗಲ ಪುರ ಠಾಣೆಯ ಪಿ.ಎಸ್.ಐ ಶ್ರೀ. ವೆಂಕಟೇಗೌಡ ಹಾಗೂ ಸಿಬ್ಬಂದಿಯವರು ರವರನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಶಿಸಿರುತ್ತಾರೆ. 

Detection in S R PATNA POLICE STATION

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
  ಮಂಡ್ಯಜಿಲ್ಲೆ. ಮಂಡ್ಯ 
ದಿನಾಂಕಃ 30-03-2012 

ಪತ್ರಿಕಾ ಪ್ರಕಟಣೆ

ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿ,  ಬಾಬುರಾಯನಕೊಪ್ಪಲಿನಲ್ಲಿ ಇತ್ತೀಚಗೆ ಲಾರಿಯ ಕಳ್ಳತನವಾಗುತ್ತಿದ್ದು ಈ ಲಾರಿಗಳು ಕಳ್ಳತನವಾದ 2-3 ದಿನಗಳಲ್ಲಿ ಕೊಳ್ಳೇಗಾಲ,  ಸಂತೆಮರಳ್ಳಿ, ಚಾಮರಾಜನಗರಗಳ ಕಡೆ ಕಾಡು ರಸ್ತೆಗಳಲ್ಲಿ ಚಕ್ರಗಳನ್ನು ಬಿಚ್ಚಿಕೊಂಡು ಅಲ್ಲಿಯೇ ನಿಲ್ಲಿಸಿ, ಕಳ್ಳರು ಹೋರಟು ಹೋಗುತ್ತಿದ್ದರೆಂದು, ಈ ಸಂಬಂಧವಾಗಿ ಲಾರಿಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಪತ್ತೆ ಬಗ್ಗೆ ಶ್ರೀರಂಗಪಟ್ಟಣ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಎ.ವಿ.ವೆಂಕಟೇಶ ಮೂತರ್ಿರವರ ನೇತೃತ್ವದಲ್ಲಿ ಪಿ.ಎಸ್.ಐ ವೆಂಕಟರಾಮಪ್ಪ ಮತ್ತು ಸಿಬ್ಬಂದಿಗಳಾದ ಸಿ.ಪಿ.ಸಿ-01 ಸಿದ್ದರಾಜು, 471- ಕೆ.ಶ್ರೀನಿವಾಸಮೂತರ್ಿ, 633-ಕೃಷ್ಣಶೆಟ್ಟಿ, 638-ಪ್ರಕಾಶರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ದಿನಾಂಕಃ 26-03-12 ರಂದು ಬಾಬುರಾಯನಕೊಪ್ಪಲಿನಲ್ಲಿ ಬೆಳಿಗ್ಗೆ 1030 ಗಂಟೆಯಲ್ಲಿ     ಕೆ.ಎ-16-ಎ-8449 ಲಾರಿಯು ಕಳ್ಳತನವಾಗಿದ್ದು, ಇದರ ಪತ್ತೆ ಬಗ್ಗೆ ಪಿ.ಎಸ್.ಐ, ಶ್ರೀರಂಗಪಟ್ಟಣ ಮತ್ತು ಸಿಬ್ಬಂದಿಗಳನ್ನು ನೇಮಿಸಿ ಕಳುಹಿಸಿದ್ದು ದಿನಾಂಕ-29-03-2012 ರಂದು ಬೆಳಿಗ್ಗೆ 06-30 ಗಂಟೆಯಲ್ಲಿ ಲಾರಿ ಮತ್ತು ಆರೋಪಿಗಳನ್ನು ತಲಾಸು ಮಾಡಿಕೊಂಡು ಹೋಗಿದ್ದ ಸಿಬ್ಬಂದಿಯವರಿಗೆ ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಬಳಿಯ ಹುಲ್ಲೇಪುರ ಗ್ರಾಮದ ಬಳಿ ಆರೋಪಿಗಳು ಟೈರ್ಗಳನ್ನು ಬಿಚ್ಚುತ್ತಿದ್ದು ಕಂಡು ಬಂದಿದ್ದು, ಕೂಡಲೇ ಆರೋಪಿಗಳನ್ನು ಅದಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದು,  ಆರೋಪಿಗಳ ಹೆಸರು 1] ದೊರೆಸ್ವಾಮಿ ಬಿನ್ ಲೇಟ್ ಸುಬ್ಬಯ್ಯ, 50 ವರ್ಷ, ವ್ಯವಸಾಯ, ವಾಸ-ಹುಲ್ಲೇಪುರ ಗ್ರಾಮ, ಚಾಮರಾಜನಗರ ತಾಲ್ಲೋಕು & ಜಿಲ್ಲೆ. 2] ನಟರಾಜ ಬಿನ್ ಲೇಟ್ ಲೆಂಕಶೆಟ್ಟಿ, 26 ವರ್ಷ, ಕೂಲಿ ಕೆಲಸ, ವಾಸ- ಮಹಂತಾಳಪುರ ಗ್ರಾಮ, ಸಂತೆಮರಳ್ಳಿ ಹೋಬಳಿ, ಚಾಮರಾಜನಗರ ಜಿಲ್ಲೆ ಎಂದು ತಿಳಿಸಿದ್ದು, ಅವರ ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿಸಿ ರಮೇಶ ಎಂಬುವವನು ತಪ್ಪಿಸಿಕೊಂಡು ಹೋಗಿರುತ್ತಾನೆ. 

     ಇವರನ್ನು  ಪಿ.ಎಸ್.ಐ ರವರು ವಿಚಾರ ಮಾಡಲಾಗಿ ಆರೋಪಿಗಳು ಲಾರಿಯನ್ನು ತಾವೇ ಕಳ್ಳತನ ಮಾಡಿ, ಟೈರ್ ಗಳನ್ನು ಬಿಚ್ಚುತ್ತಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳನ್ನು ಲಾರಿ ಸಮೇತ ಶ್ರೀರಂಗಪಟ್ಟಣ ಠಾಣೆಗೆ ಕರೆದುಕೊಂಡು ಬಂದು ಸಿ.ಪಿ.ಐ ವೆಂಕಟೇಶ ಮೊರ್ತಿರವರ ಮುಂದೆ ಹಾಜರುಪಡಿಸಿದ್ದು, ಸಿ.ಪಿ.ಐರವರು ಕೂಲಂಕುಶವಾಗಿ ವಿಚಾರ ಮಾಡಲಾಗಿ ಆರೋಪಿಗಳು ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಈವರೆಗೆ ಕಳ್ಳತನವಾಗಿ ಶ್ರೀರಂಗಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಖ್ಯೆಃ 328/11, 545/11, 605/11, 640/11, 159/12, 189/12  ರ ಒಟ್ಟು 6 ಪ್ರಕರಣಗಳಲ್ಲಿ ಕಳುವಾಗಿರುವ ಲಾರಿಗಳನ್ನು ಕಾಡಿಗೆ ಹೋಗುವ ರಸ್ತೆಗಳಲ್ಲಿ ತೆಗೆದುಕೊಂಡು ಹೋಗಿ ಅವುಗಳ ಚಕ್ರಗಳನ್ನು ಬಿಚ್ಚಿಕೊಂಡು ಅಲ್ಲಿಯೇ ನಿಲ್ಲಿಸುತ್ತಿದ್ದರೆಂದು ತಮ್ಮ ಸ್ವ-ಇಚ್ಚಾ ಹೇಳಿಕೆಯ ಕಾಲದಲ್ಲಿ  ತಿಳಿಸಿರುತ್ತಾರೆ. 

ಮೇಲ್ಕಂಡ 5 ಪ್ರಕರಣಗಳಲ್ಲಿ ಈಗಾಗಲೇ ಲಾರಿಗಳು ಕೊಳ್ಳೇಗಾಲ ಮತ್ತು ಸುತ್ತ ಮುತ್ತ ಕಾಡಿಗೆ ಹೋಗುವ ರಸ್ತೆಗಳಲ್ಲಿ 3-4 ಚಕ್ರವಿಲ್ಲದೇ ನಿಂತಿದ್ದವುಗಳನ್ನು ಪತ್ತೆ ಹಚ್ಚಿ ಸ್ಥಳೀಯ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 

ಆರೋಪಿಗಳಿಂದ 1] ಒಂದು ಕೆ.ಎ-16-ಎ-8449 ಲಾರಿ 2] 15 ಡಿಸ್ಕ್ ಸಹಿತ ಇರುವ ಚಕ್ರಗಳು 3] 2 ಟಾರ್ಪಲ್ 4] ಒಂದು ಜಾಕ್ ಮತ್ತು ರಾಡು 5] 2 ಹಗ್ಗಗಳು ಇವುಗಳನ್ನು ಆರೋಪಿ ದೊರೆಸ್ವಾಮಿಯ ಮನೆಯಲ್ಲಿ ಅಡಗಿಸಿಟ್ಟಿದ್ದು ಅವುಗಳನ್ನು ಪೊಲೀಸ್ ಅದಿಕಾರಿಗಳು ಅಮಾನತ್ತುಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 10,50,000/- ರೂಗಳಾಗಿರುತ್ತೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದೀಕ್ಷಕರಾದ ಶ್ರೀ. ಕೌಶಲೇಂದ್ರಕುಮಾರ್, ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.

Detection of Kidnapped Engineer case from Pandavapura PS Police

               ಪೊಲೀಸ್ ಸೂಪರಿಂಟೆಂಡೆಂಡ್ ರವರ ಕಛೇರಿ
                                  ಮಂಡ್ಯಜಿಲ್ಲೆ. ಮಂಡ್ಯ 
                                    ದಿನಾಂಕಃ 29-03-2012 

                                                                    ಪತ್ರಿಕಾ ಪ್ರಕಟಣೆ.

     ಬೆಂಗಳೂರಿನ ಮೆಟ್ರೋದಲ್ಲಿ ಡೆಪ್ಯೂಟಿ ಚೀಪ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ. ಕೆ.ಆರ್ ಶಿವಾನಂದ ಬಿನ್ ರಾಮಪ್ಪ, 44 ವರ್ಷ ಎಂಬುವವರ ಅಪಹರಣವನ್ನು ಮಂಡ್ಯ ಜಿಲ್ಲಾ ಪೊಲೀಸರು ಚಾಕಚಕ್ಯತೆಯಿಂದ ಪತ್ತೆ ಹಚ್ಚಿ ಅವರ ಪ್ರಾಣ ರಕ್ಷಣೆ ಮಾಡಿರುವ ಬಗ್ಗೆ.

     ಶ್ರೀ. ಕೆ.ಆರ್ ಶಿವಾನಂದ ಬಿನ್ ರಾಮಪ್ಪ, 44 ವರ್ಷ, ಮೆಟ್ರೋದಲ್ಲಿ ಡೆಪ್ಯೂಟಿ ಚೀಪ್ ಇಂಜಿನಿಯರ್. ಬೆಂಗಳೂರು ರವರು ದಿನಾಂಕಃ 28/03/2012 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ಬೆಂಗಳೂರಿನ ಶಾಂತಿನಗರದ ಮೆಟ್ರೋ ರೈಲ್ ಕಾರ್ಪೊ ರೇಷನ್ ಲಿಮಿಟೆಡ್  ಕಛೇರಿಯ ಕಾರ್ ಪಾರ್ಕಿಂಗ್ ಬಳಿ ಟಾಟಾ ಇಂಡಿಕಾ ಕಾರ್ ಕೆ.ಎ-50-2011 ನ್ನು ಹತ್ತಿದಾಗ ಅದರಲ್ಲಿ ಇಬ್ಬರು ಆರೋಪಿತರು ಕುಳಿತುಕೊಂಡಿದ್ದು ನಂತರ ಮತೋಬ್ಬ ವ್ಯಕ್ತಿ ಕಾರಿಗೆ ಹತ್ತಿಕೊಂಡು, ಚಾಲಕ ಜಯಂತ್ ಎಂಬುವವನೊಂದಿಗೆ ಸೇರಿಕೊಂಡು ಕೆ.ಅರ್. ಶಿವಾನಂದ ರವರನ್ನು ಅಲ್ಲಿಂದ ಅಪಹರಣ ಮಾಡಿ ಹಣ ಸುಲಿಗೆ ಮಾಡುವ ಸಲುವಾಗಿ, ಅವರ ಕೈ ಮತ್ತು ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ಬಿಗಿದು ಹಲ್ಲೆ ಮಾಡಿ, ಬೆಂಗಳೂರಿನಿಂದ ಹೊರಟು ಮೈಸೂರು ರಸ್ತೆಯಲ್ಲಿ ಸಂಚರಿಸಿ ಅವರ ಬಳಿ ಇದ್ದ ಚಿನ್ನಾಭರಣ, ನಗದು ಹಣ ಹಾಗೂ ಬ್ಯಾಂಕ್ನ ಎ.ಟಿ.ಎಂ ಕಾರ್ಡ್ ಗಳನ್ನು ಸುಲಿಗೆ ಮಾಡಿ ಪ್ರಾಣ ಬೆದರಿಕೆ ಹಾಕಿ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿ ಅದೇ ಕಾರಿನಲ್ಲಿ ಸಂಚರಿಸುತ್ತಿರುವಾಗ ಪಾಂಡವಪುರ ರೈಲ್ವೆ ಸ್ಟೇಷನ್ ಬಳಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಪಾಂಡವಪುರದ ಪೊಲೀಸರು ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಆರೋಪಿಗಳು ವಾಹನವನ್ನು ನಿಲ್ಲಿಸದೇ ಮುಂದೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ಕೂಡಲೇ ಚೆಕ್ ಪೋಸ್ಟ್ನ ಪೊಲೀಸ್ ಸಿಬ್ಬಂದಿಗಳು ಮುಂದಿನ ಚೆಕ್ಪೋಸ್ಟ್ಗಳಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ವಾಹನದ ಬಗ್ಗೆ ಮಾಹಿತಿ ನೀಡಿದ್ದು ಪಾಂಡವಪುರ - ಮೇಲುಕೋಟೆ ಮುಖ್ಯ ರಸ್ತೆಯ ಜಕ್ಕನಹಳ್ಳಿ ಚೆಕ್ ಪೋಸ್ಟ್ ಬಳಿ ಬೆಳಗಿನ ಜಾವ 2-30 ಗಂಟೆಗೆ ಅಲ್ಲಿನ ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಈ ವಾಹನವನ್ನು ಪರಿಶ್ರಮ ಹಾಗೂ ಚಾಕಚಕ್ಯತೆಯಿಂದ ತಡೆದು, ಪರಿಶೀಲನೆ ಮಾಡಿ ಕಾರಿನಲ್ಲಿದ್ದ ಆರೋಪಿ ಕಲ್ಯಾಣ್ಕುಮಾರ್ ಬಿನ್ ಬಸವರಾಜು, 24ವರ್ಷ, ಕೊಪ್ಪಳ ಈತನನ್ನು ವಶಕ್ಕೆ ತೆಗೆದುಕೊಂಡು ಅಪಹರಣಕ್ಕೊಳಗಾಗಿದ್ದ ಇಂಜಿನಿಯರ್ ಶ್ರೀ. ಕೆ.ಆರ್. ಶಿವಾನಂದ ರವರನ್ನು ರಕ್ಷಣೆ ಮಾಡಿರುತ್ತಾರೆ. ಇನ್ನುಳಿಕೆ ಮೂರು ಜನ ಆರೋಪಿಗಳು ಕಾರಿನಿಂದ ಕತ್ತಲೆಯಲ್ಲಿ ತಪ್ಪಿಸಿಕೊಂಡು ಹೋಗಿರುತ್ತಾರೆ.  

     ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು, ಎರಡು ಬ್ಲೇಡ್ ಕಟರ್ ಗಳು , ವೈರ್ ಹಾಗೂ ಸುಲಿಗೆ ಮಾಡಿದ್ದ ಎ.ಟಿ.ಎಂ. ಕಾರ್ಡ್, ಚೆಕ್ ಗಳನ್ನು ಮೇಲುಕೋಟೆ ಪೊಲೀಸರು ವಶಪಡಿಸಿಕೊಂಡು, ಮೆಲ್ಕಂಡ ಇಂಜಿನಿಯರ್ ಕೆ.ಆರ್. ಶಿವಾನಂದ್ ರವರು ನೀಡಿದ ಪಿರ್ಯಾದಿ ನ ಮೇರೆಗೆ ಅಪಹರಣ ಮತ್ತು ಸುಲಿಗೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಕೈಗೊಂಡು, ಅವರಿಗೆ ಕೂಡಲೇ ಚಿಕಿತ್ಸೆಯನ್ನು ಕೊಡಿಸಲಾಗಿರುತ್ತದೆ. ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. 

     ವಿಷಯ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ಅದಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ಈ ಅಪಹರಣ ಪ್ರಕರಣವನ್ನು ಕ್ಷಣಾರ್ದದಲ್ಲಿ ಶ್ರಮವಹಿಸಿ ಪತ್ತೆ ಹಚ್ಚಿದ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯವರನ್ನು ಪ್ರಶಂಸಿರುತ್ತಾರೆ.   

Keragodu PS Cr.No. 50/2012 u/s 302-201 IPC

     ಪೊಲೀಸ್ ಸೂಪರಿಂಟೆಂಡೆಂಟ್  ರವರ ಕಛೇರಿ
ಮಂಡ್ಯಜಿಲ್ಲೆ. ಮಂಡ್ಯ 
  ದಿನಾಂಕಃ 28-03-2012 
                                 
                                                 ಪತ್ರಿಕಾ ಪ್ರಕಟಣೆ.
 
            ಕೆರಗೋಡು ಪೊಲೀಸ್ ಠಾಣಾ ಮೊ.ಸಂ  50/2012 ಕಲಂ 302-201 ಐಪಿಸಿ.

      ದಿನಾಂಕಃ21-3-2012 ರ ಬೆಳಿಗ್ಗೆ 8-30 ಗಂಟೆಯಲ್ಲಿ ಕೆ.ಗೌಡಗೆರೆಯ ಶಿವರಾಮುರವರ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಒಂದು ಗಂಡಸಿನ ಸುಮಾರು 26ವರ್ಷ ಪ್ರಾಯದ ಶವ ತೇಲುತ್ತಿದ್ದು.  ಶವದ ಎರಡು ಕಾಲುಗಳನ್ನು ಕಲ್ಲು ಸೇರಿಸಿ ಕಟ್ಟಿದ್ದು ತಲೆಯ ಭಾಗದಿಂದ ಪ್ಲಾಸ್ಟಿಕ್ ಕವರಿಗೆ ಕಲ್ಲು ಸೇರಿಸಿ ಹಾಕಿ ಕಟ್ಟಿದ್ದು ಶವದ ತಲೆಯಲ್ಲಿ , ಬಲ ಕೆನ್ನೆಯಲ್ಲಿ, ಕುತ್ತಿಗೆಯಲ್ಲಿ ಹರಿತವಾದ ರಕ್ತಗಾಯಗಳಿದ್ದು , ಮೃತನು ಎಸ್.ಐ.ಕೋಡಿಹಳ್ಳಿಯ ಶಿವಣ್ಣರವರ ಮಗ ಕೆ.ಎಸ್.ಸುನೀಲ್ ಆಗಿದ್ದು.  ಈತನನ್ನು ಯಾರೋ ದುಷ್ಕಮರ್ಿಗಳು ಯಾವುದೋ ದ್ವೇಷದಿಂದ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಬಾವಿ ನೀರಿಗೆ ಹಾಕಿ ಮೃತನ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿದ್ದು.  ಈ ಬಗ್ಗೆ ಬಿ.ಎಸ್.ಕಾಂತರವರು ಕೊಟ್ಟ ದೂರಿನ ಮೇರೆಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆಯ ಕೈಗೊಳ್ಳಲಾಯಿತು.

   ಈ ಕೇಸಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಸಿಪಿಐ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ  ಒಂದು ತಂಡವನ್ನು ರಚಿಸಲಾಗಿತ್ತು. ಈ ತಂಡವು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಕೊಲೆಯ ಆರೋಪಿಗಳಾದ 1. ರವಿ 2. ವರದರಾಜು 3. ಮಹೇಶ ರವರುಗಳನ್ನು ದಿಃ26-03-2012 ರಂದು ಬಂಧಿಸಿ ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ಪುರಾವೆಗಳನ್ನು ಸಂಗ್ರಹಿಸಿ ಮೃತ ಸುನೀಲನಿಂದ ತೆಗೆದುಕೊಂಡು ಹೋಗಿದ್ದ 60,000=00 ಬೆಲೆ ಬಾಳುವ ಹೊಸ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನು ಅಮಾನತ್ತುಪಡಿಸಿರುತ್ತಾರೆ.  

   ಈ ತಂಡದಲ್ಲಿ ಸಿಪಿಐ ಕೃಷ್ಣಮೂರ್ತಿ ರವರು ಮಂಡ್ಯ ಗ್ರಾಮಾಂತರ ವೈತ್ತ ಹಾಗು ಎ.ಎಸ್.ಐ. ಜಾರ್ಜ್ ವಿಲ್ಸನ್, ಸಿಬ್ಬಂದಿಗಳಾದ ರಮೇಶ್, ಚಿಕ್ಕಯ್ಯ, ಬಾಲಾಜಿ,  ಪ್ರದೀಪ್ಕುಮಾರ್, ಮರಿಯಪ್ಪ ಆರ್.ಬ್ಯಾಳಿ, ರಾಘವೇಂದ್ರ ಇಂಗಳಗಿ, ಶ್ರೀರಾಮ, ಸೋಮಶೇಖರ ರವರು ಕಾರ್ಯ ನಿರ್ವಹಿಸಿದ್ದು.  ಇವರ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಸಂಶಿಸಿ ಮೆಚ್ಚಿ ಬಹುಮಾನ ಘೋಷಿಸಿರುತ್ತಾರೆ. 

Mandya Rural PS Cr.No.50/2012 u/s 302-201 IPC

A-1. Ravi.  A-2 Varadaraju.               Deceased K.S.Sunil s/o Shivanna
                                                A-3.Mahesha                                        S.I. Kodihalli, Mandya

Mandya Rural PS Cr.No.50/2012 u/s 302-201 IPC

             ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
           ಮಂಡ್ಯಜಿಲ್ಲೆ. ಮಂಡ್ಯ 
ದಿನಾಂಕಃ 28-03-2012 
        
                                                                                 ಪತ್ರಿಕಾ ಪ್ರಕಟಣೆ.
 
                                      ಕೆರಗೋಡು ಪೊಲೀಸ್ ಠಾಣಾ ಮೊ.ಸಂ  50/2012 ಕಲಂ 302-201 ಐಪಿಸಿ

      ದಿನಾಂಕಃ21-3-2012 ರ ಬೆಳಿಗ್ಗೆ 8-30 ಗಂಟೆಯಲ್ಲಿ ಕೆ.ಗೌಡಗೆರೆಯ ಶಿವರಾಮುರವರ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಒಂದು ಗಂಡಸಿನ ಸುಮಾರು 26ವರ್ಷ ಪ್ರಾಯದ ಶವ ತೇಲುತ್ತಿದ್ದು.  ಶವದ ಎರಡು ಕಾಲುಗಳನ್ನು ಕಲ್ಲು ಸೇರಿಸಿ ಕಟ್ಟಿದ್ದು ತಲೆಯ ಭಾಗದಿಂದ ಪ್ಲಾಸ್ಟಿಕ್ ಕವರಿಗೆ ಕಲ್ಲು ಸೇರಿಸಿ ಹಾಕಿ ಕಟ್ಟಿದ್ದು ಶವದ ತಲೆಯಲ್ಲಿ , ಬಲ ಕೆನ್ನೆಯಲ್ಲಿ, ಕುತ್ತಿಗೆಯಲ್ಲಿ ಹರಿತವಾದ ರಕ್ತಗಾಯಗಳಿದ್ದು , ಮೃತನು ಎಸ್.ಐ.ಕೋಡಿಹಳ್ಳಿಯ ಶಿವಣ್ಣರವರ ಮಗ ಕೆ.ಎಸ್.ಸುನೀಲ್ ಆಗಿದ್ದು.  ಈತನನ್ನು ಯಾರೋ ದುಷ್ಕಮರ್ಿಗಳು ಯಾವುದೋ ದ್ವೇಷದಿಂದ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಬಾವಿ ನೀರಿಗೆ ಹಾಕಿ ಮೃತನ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿದ್ದು.  ಈ ಬಗ್ಗೆ ಬಿ.ಎಸ್.ಕಾಂತರವರು ಕೊಟ್ಟ ದೂರಿನ ಮೇರೆಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆಯ ಕೈಗೊಳ್ಳಲಾಯಿತು.

   ಈ ಕೇಸಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಸಿಪಿಐ ಕೃಷ್ಣಮೂರ್ತಿರವರ ನೇತೃತ್ವದಲ್ಲಿ  ಒಂದು ತಂಡವನ್ನು ರಚಿಸಲಾಗಿತ್ತು. ಈ ತಂಡವು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಕೊಲೆಯ ಆರೋಪಿಗಳಾದ 1. ರವಿ 2. ವರದರಾಜು 3. ಮಹೇಶ ರವರುಗಳನ್ನು ದಿಃ26-03-2012 ರಂದು ಬಂಧಿಸಿ ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ಪುರಾವೆಗಳನ್ನು ಸಂಗ್ರಹಿಸಿದ್ದು, ಆರೋಪಿ-2 ವರದರಾಜುವಿನ ಪತ್ನಿಯೊಡನೆ ಮೃತ ಸುನೀಲ್ ಅನೈತಿಕ ಸಂಬಂಧ ಹೊಂದಿದ್ದನೆಂಬ ಸಂಶಯದ ಮೇಲೆ ಕೊಲೆ ಮಾಡಿರುತ್ತಾರೆ. ಮೃತ ಸುನೀಲನಿಂದ ತೆಗೆದುಕೊಂಡು ಹೋಗಿದ್ದ 60,000=00 ಬೆಲೆ ಬಾಳುವ ಹೊಸ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನು ಅಮಾನತ್ತುಪಡಿಸಿರುತ್ತಾರೆ.  

   ಈ ತಂಡದಲ್ಲಿ ಸಿಪಿಐ ಕೃಷ್ಣಮೂತರ್ಿರವರ ಮಂಡ್ಯ ಗ್ರಾಮಾಂತರ ವೈತ್ತ ಹಾಗು ಎ.ಎಸ್.ಐ. ಜಾರ್ಜ್ ವಿಲ್ಸನ್, ಸಿಬ್ಬಂದಿಗಳಾದ ರಮೇಶ್, ಚಿಕ್ಕಯ್ಯ, ಬಾಲಾಜಿ,  ಪ್ರದೀಪ್ಕುಮಾರ್, ಮರಿಯಪ್ಪ ಆರ್.ಬ್ಯಾಳಿ, ರಾಘವೇಂದ್ರ ಇಂಗಳಗಿ, ಶ್ರೀರಾಮ, ಸೋಮಶೇಖರ ರವರು ಕಾರ್ಯ ನಿರ್ವಹಿಸಿದ್ದು.  ಇವರ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಸಂಶಿಸಿ ಮೆಚ್ಚಿ ಬಹುಮಾನ ಘೋಷಿಸಿರುತ್ತಾರೆ. 

Press Note Dated 03-03-2012

ಪೊಲೀಸ್ ಸೂಪರಿಂಟೆಂಡೆಂಟ್ ರವ ರವರ ಕಛೇರಿ

ಮಂಡ್ಯ ಜಿಲ್ಲೆ. ಮಂಡ್ಯ. ದಿಃ 03-03-2012

ಪತ್ರಿಕಾ ಪ್ರಕಟಣೆ

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದಿಂದ 3 ಮಂದಿ ಆರೋಪಿಗಳ ಬಂಧನ, ಇವರುಗಳಿಂದ 50,000-00 ರೂ ಮೌಲ್ಯದ ಚಿನ್ನದ ಮಾಂಗಲ್ಯ ಸರ, ನಗದು ಹಣ 50,000-00 ರೂಗಳ ವಶ

ಮಂಡ್ಯ ಉಪ-ವಿಭಾಗದ ಅಪರಾದ ಪತ್ತೆ ದಳದವರು ದಿನಾಂಕಃ 01-03-2012 ರಂದು ಮಂಡ್ಯ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗಸ್ತಿನಲ್ಲಿದ್ದಾಗ 3 ಜನ ಆಸಾಮಿಗಳು ಬಸ್ ಪ್ರಯಾಣಿಕರಂತೆ 2-3 ಬಸ್ಸಿಗೆ ಹತ್ತಿ ಇಳಿಯುತ್ತಿದ್ದವರ ಮೇಲೆ ಅನುಮಾನ ಬಂದು ವಶಕ್ಕೆ ತೆಗೆದುಕೊಂಡು ಬಂದು ವಿಚಾರಣೆಗೊಳಪಡಿಸಲಾಗಿ ಈಗ್ಗೆ ಸುಮಾರು 2 ತಿಂಗಳ ಹಿಂದೆ ಮಂಡ್ಯ ರೈಲ್ವೇ ಸ್ಟೇಷನ್ನಲ್ಲಿ ಬೆಂಗಳೂರು ಕಡೆಗೆ ಹೋಗಲು ಟ್ರೈನ್ ಹತ್ತುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ 1 ವರ್ಷದ ಹಿಂದೆ ಮಂಡ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೈಸೂರಿಗೆ ಹೋಗಲು ಬಸ್ ಹತ್ತುತ್ತಿದ್ದ ಆಸಾಮಿಯ ಪ್ಯಾಂಟ್ ಜೇಬಿನಲ್ಲಿದ್ದ 2 ಲಕ್ಷರೂಗಳನ್ನು ಕಳುವು ಮಾಡಿದ್ದು ಈ ಪೈಕಿ ಹಣವನ್ನು ಖರ್ಚು ಮಾಡಿಕೊಂಡು ಉಳಿದಿದ್ದ 50,000 ರೂಗಳನ್ನು ಹಾಗೂ ಒಂದು ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 1 ಲಕ್ಷ ರೂ ಆಗಿರುತ್ತೆ.

ಆರೋಪಿಗಳ ಹೆಸರು-ವಿಳಾಸ

1] ಅಸ್ಲಂಪಾಷ @ ಅಸ್ಲಂ,ಬಿನ್ ಸೈಯದ್ ಪಾಷ, 38 ವರ್ಷ, ಆಟೋ ಚಾಲಕ, ವಾಸ ಕೇರಾಫ್ ಸಾಮಿದಾ ಬೇಗಂ, ಪುಲಿಕೇಶಿ ರಸ್ತೆ ಕೈಲಾಸ್ ಪುರಂ, ಕನ್ನಡ ಸ್ಕೂಲ್ ಹಿಂಬಾಗ ಮೈಸೂರು ಸಿಟಿ,

2] ಮುಕ್ರಂ ಬಿನ್ ಗೌಸ್ ಅಹಮದ್, 28 ವರ್ಷ, ಮುಸ್ಲಿಂ, ಪೈಂಟ್ ಕೆಲಸ, ಬೀಡಿ ಕಾಲೋನಿ ಹತ್ತಿರ, 5 ನೇ ಬ್ಲಾಕ್, ಚಾಮರಾಜನಗರ ಟೌನ್,

3] ಜಾಕೀರ್ ಬಿನ್ ಲೇ|| ಷರೀಫ್ ಅಹಮದ್, 32 ವರ್ಷ, ಮುಸ್ಲಿಂ, ಸ್ಟೀಮ್ ಇಟ್ಟಿಗೆ ಕೆಲಸ, ನಂ 170, 6 ನೇ ಕ್ರಾಸ್, ಗಾಳಿಪುರ, ಚಾಮರಾಜನಗರ ಟೌನ್

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ ಕೆ.ಆರ್. ಕಾಂತರಾಜ್ ಮತ್ತು ಮಂಡ್ಯ ಉಪ-ವಿಭಾಗದ ಅಪರಾಧ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳಾದ ಶ್ರೀ. ಕೌಶಲೇಂದ್ರಕುಮಾರ್ ರವರು ಪ್ರಶಂಶಿಸಿರುತ್ತಾರೆ.

DCR Of Mandya Dist As on 23-02-2012

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 16 ಪ್ರಕರಣಗಳು ವರದಿಯಾಗಿ ಅದರಲ್ಲಿ 2 ರಸ್ತೆ ಅಪಘಾತ ಪ್ರಕರಣ. 2 ಕಳ್ಳತನ ಪ್ರಕರಣ. 3 ಮನುಷ್ಯ ಕಾಣೆಯಾದ ಪ್ರಕರಣ. 1 ರಾಬರಿ ಪ್ರಕರಣ ಮತ್ತು ಇತರೆ 8 ಪ್ರಕರಣಗಳು ವರದಿಯಾಗಿರುತ್ತೆ

ಕಳ್ಳತನ ಪ್ರಕರಣ

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ

1] ಮೊ.ಸಂ 38/12 ಕಲಂ 457-380 ಐಪಿಸಿ ದಿನಾಂಕಃ 21-02-12ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠಶಾಲೆ, ಸುನುಗನಹಳ್ಳಿಯಲ್ಲಿ ಇಟ್ಟಿದ್ದ ಅನ್ನದಾಸೋಹದ ಆಹಾರ ಪದಾರ್ಥಗಳು, ಮತ್ತು ಪಾತ್ರೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ

2] ಮೊ.ಸಂ 38/12 ಕಲಂ 379 ಐಪಿಸಿ ಪಿರ್ಯಾದಿ ಹೆಚ್.ಕೆ.ಸಿದ್ದಯ್ಯ ರವರು ಅವರ ಬಾಬ್ತು ಕೆಎ-15 ಜೆ 302 ನಂಬರಿನ ಹೀರೊಹೋಂಡ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ಮಂಡ್ಯದ ಜಿಲ್ಲಾಧಿಕಾರಿಗಳ ಕಛೇರಿಯ ಎದುರುಗಡೆ ಇರುವ ಪಾರ್ಕ್ ನ ಮುಂದೆ ಬೀಗ ಹಾಕಿ ನಿಲ್ಲಿಸಿ ಪಾಕರ್್ನ ಒಳಗಡೆ ಹೋಗಿ ವಿಶ್ರಾಂತಿ ಪಡೆದುಕೊಂಡು ವಾಪಸ್ ಸಂಜೆ 6-45 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ಇದುವರೆವಿಗೂ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ

ಮನುಷ್ಯ ಕಾಣೆಯಾಗಿದ್ದಾನೆ

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ

1] ಮೊ.ಸಂ 81/12 ಕಲಂ ಹುಡುಗ ಕಾಣೆಯಾಗಿದ್ದಾನೆ ದಿನಾಂಕ 22/02/11 ರಂದು ಪಿರ್ಯಾದಿ ಶಿವಣ್ಣ ರವರ ಮಗ ರಘುವೀರ್ ಬಿನ್ ಶಿವಣ್ಣ 13 ವರ್ಷ ಮಂಡ್ಯ ಸಿಟಿ ಗೀತಾ ಫ್ರಾಡಶಾಲೆಯಲ್ಲಿ 8 ನೇ ತರಗತಿಯಲ್ಲಿ ಒದುತ್ತಿದ್ದು ದಿಃ-17-02-12 ರಂದು ಬೆಳಿಗ್ಗೆ 08-00 ಗಂಟೆಗೆ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು ಸಂಜೆಯಾದರೂ ಮನೆಗೆ ಬರಲಿಲ್ಲ ನಂತರ ನಮ್ಮ ಸಂಬಂದಿಕ ಮನೆ, ಅವನ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ

ಕೆ.ಆರ್ ಸಾಗರ ಪೊಲೀಸ್ ಠಾಣೆ

2] ಮೊ.ಸಂ 28/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 22/02/12 ರಂದು ಕಾಣೆಯಾದ ಮನುಷ್ಯ ಶಂಕರನು ಬತ್ತವನ್ನು ಕಟ್ಟಾವು ಮಾಡಲು ಹಣವನ್ನು ತೆಗೆದುಕೊಂಡು ಮನೆಯಿಂದ ಹೊರಗೇ ಹೋದವನು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ

ಶಿವಳ್ಳಿ ಪೊಲೀಸ್ ಠಾಣೆ

3] ಮೊ.ಸಂ 021/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 22/02/12 ರಂದು ಕಾಣೆಯಾದ ಮನುಷ್ಯ ದಾಳಯ್ಯ ಬಿನ್ ಲೇಟ್ ದಾಳಿಗೌಡ 60 ವರ್ಷ ತಂದೆಯವರು ದಿನಾಂಕ:17-02-2012 ರಂದು ಇದುವೆರೆಗೂ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ಹಿಂತಿರುಗಿ ಬಂದಿರುವುದಿಲ್ಲ ಇದುವರೆಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ.

ರಾಬರಿ ಪ್ರಕರಣ

ಬೆಳ್ಳೂರು ಪೊಲೀಸ್ ಠಾಣೆ

1] ಮೊ.ಸಂ 27/12 ಕಲಂ 392 ಐಪಿಸಿ ದಿನಾಂಕ 22-02-11 ರಂದು ಪಿರ್ಯಾದಿ ನವೀನ್ ಕುಮಾರ್ ಮತ್ತು ಅವರ ಮನೆಯವರು ಪ್ರವಾಸದಿಂದ ಬೆಂಗಳೂರಿಗೆ ಕೆಎ-01-ಬಿ-1490 ಕ್ವಾಲೀಸ್ ಕಾರಿನಲ್ಲಿ ವಾಪಸ್ಸು ಬೆಳ್ಳೂರು ಮಾರ್ಗವಾಗಿ ಹೋಗುತ್ತಿದ್ದಾಗ ತಿಟ್ಟನಹೊಸಹಳ್ಳಿ - ಎ ನಾಗತಿಹಳ್ಳಿ ಮಧ್ಯ ಯಾರೋ ಅಪರಿಚಿತರು 4 ಜನ ಮಾರುತಿ ಅಮ್ನಿ ಕೆಎ-02-ಎಂ-1152 ಮೇಲ್ಕಂಡ ಸ್ಥಳದಲ್ಲಿ ಅಡ್ಡಗಟ್ಟಿ ಮಾಕಾಸ್ತ್ರಗಳನ್ನು ತೋರಿಸಿ ವಾಹನದಲ್ಲಿ ಪಿರ್ಯಾದಿ ಮತ್ತು ಅವರ ಮನೆಯವರನ್ನು ಹೆದರಿಸಿ ಅವರ ಬಳಿ 6 ರಿಂದ 7 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ