Moving text

Mandya District Police

DAILY CRIME REPORT DATED : 04-02-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-02-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅತ್ಯಾಚಾರ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಕಳವು ಪ್ರಕರಣ,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 7 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.  


ಅತ್ಯಾಚಾರ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 376 ಐ.ಪಿ.ಸಿ.

ದಿನಾಂಕ: 04-02-2013 ರಂದು ಚಿಕ್ಕಬಾಗಿಲು ಗ್ರಾಮದ  ಪಿರ್ಯಾದಿ ರವರು ನೀಡಿದ ದೂರು ಏನೆಂದರ ಆರೋಪಿ ಮಹೇಶ @ ಚಿದರಹಳ್ಳಿ ಮಹೇಶ, ಸು:24 ವರ್ಷ, ಪರಿಶಿಷ್ಟ ಜನಾಂಗ, ಚಿಕ್ಕಬಾಗಿಲು ಗ್ರಾಮ, ಬಿ.ಜಿ.ಪುರ ಹೋ|| ಮಳವಳ್ಳಿ ತಾ||  ಪಿರ್ಯಾದಿಯವರ ಇಚ್ಛೆಗೆ ವಿರುದ್ದವಾಗಿ ಬಲಂತವಾಗಿ ಅತ್ಯಾಚಾರ ಮಾಡಿರುತ್ತಾರೆ, ಇದರಿಂದ ಪಿರ್ಯಾದಿಯವರಿಗೆ ತೊಂದರೆ ಯಾಗಿರುವ ಬಗ್ಗೆ ಗ್ರಾಮದಲ್ಲಿ ದಿನಾಂಕ:04-02-13 ರಂದು ಬೆಳಿಗ್ಗೆ ಪಂಚಾಯಿತಿ ಸೇರಿಸಿ ತೀರ್ಮಾನವಾಗದಿದ್ದಾಗ ಹಾಗೂ ಆರೋಪಿತನು ಪಂಚಾಯಿತಿಗೆ ಬಾರದಿದ್ದರಿಂದ ಠಾಣೆಗೆ ಈ ದಿನ ತಡವಾಗಿ ಬಂದು ಆರೋಪಿತನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಕೊಟ್ಟ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಆರ್. ಪ್ರಕರಣಗಳು :

 1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-02-2013 ರಂದು ಪಿರ್ಯಾದಿ ಬಿ.ಎನ್.ಕೆಂಪರಾಜು ಬಿನ್ ನಚಿಜಯ್ಯ, ಬಾಚನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ,  ನಂದಿನಿ, ಬಾಚನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರಿಗೆ ಹೊಟ್ಟೆ ನೋವು ಜಾಸ್ತಿಯಾಗಿ ದಿನಾಂಕ: 31-01-2013 ರಂದು ರಾತ್ರಿ 08-30 ಗಂಟೆಯ ಸಮಯದಲ್ಲಿ ಹೊಟ್ಟೆ ನೋವು ಜಾಸ್ತಿಯಾಗಿ ಔಷದಿ ತೆಗೆದುಕೊಳ್ಳುತ್ತಿದ್ದು, ನೋವು ತಾಳಲಾರದೆ ಯಾವುದೋ ವಿಷದ ಔಷದಿಯನ್ನು ಕುಡಿದು ಒದ್ದಾಡುತ್ತಿದ್ದವಳನ್ನು ಮಳವಳ್ಳಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 03-02-2013 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾಳೆ ಶವವು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಇರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-02-2013 ರಂದು ಪಿರ್ಯಾದಿ ಚನ್ನಪ್ಪ ಬಿನ್ ಸಿದ್ದಶೆಟ್ಟಿ ಕಾರಸವಾಡಿ, ಮಹದೇಶ್ವರ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ 04 ವರ್ಷದ ಅಮೂಲ್ಯ ಸತ್ತು ಹೋಗಿರುತ್ತಾಳೆಂದು ವೈದ್ಯರು ತಿಳಿಸಿದ್ದು  ಹಾಗು ಸಂಜಯ್ನನ್ನು ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಸೇರಿಸಿ ಹೆಣ್ಣು ಮಗುವಿನ ಶವವನ್ನು ಊರಿಗೆ ತೆಗೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಗಂಡು ಮಗು  ಸಂಜಯ  ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ: 04-02-2013 ರಂದು ಭೆಳಿಗ್ಗೆ 06-30 ರ ಸಮಯದಲ್ಲಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿಸಂಜಯ್ನನ್ನು ಮೈಸೂರಿಗೆ ಕರೆದುಕೊಂಡು ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಿರುವಾಗ  ಮಾರ್ಗದ ಮದ್ಯೆ ಬೆಳಿಗ್ಗೆ 07-15 ರಲ್ಲಿ ಮೈಸೂರು ಸಮೀಪ ಮಗು ಸಂಜಯ್ ಮೃತಪಟ್ಟಿರುತ್ತಾನೆ ಆದ್ದರಿಂದ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಕಳವು ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 379, 436 ಐ.ಪಿ.ಸಿ.

        ದಿನಾಂಕ: 04-02-2013 ರಂದು ಪಿರ್ಯಾದಿ ಬಸವೇಗೌಡ, ಎ.ಎಲ್. ನುಡಿಭಾರತಿ ಸಮುದಾಯ ಭವನದ ಮಾಲೀಕರು,  ಗುತ್ತಲು ರವರು ನೀಡಿದ ದೂರು ಏನೆಂದರರೆ ಯಾರೊ ದುಷ್ಕಮರ್ಿಗಳು ಬೆಂಕಿ ಹಚ್ಚಿ ಕಾಣೆಯಾಗಿರುತ್ತಾರೆ ಇದರಿಂದಾಗಿ ಪೆಟ್ಟಿ ಅಂಗಡಿ ಸಂಪೂರ್ಣ ಭಸ್ಮಗೊಂಡಿದ್ದು ಅಂಗಡಿಯಲ್ಲಿದ್ದ ನಗದು ಸುಮಾರು 15.ಸಾವಿರ ಮತ್ತು ಎರಡು ಸಿಲಿಂಡರ್ ಗಳನ್ನು (ಭಾರತ್ ಗ್ಯಾಸ್ ಕಂಪನಿ) ಕಳವು ಮಾಡಿರುತ್ತಾರೆ ಪಕ್ಕದಲ್ಲಿದ್ದ ಸುಮಾರು 15.ಸಾವಿರ ರೂ ಬೆಲೆ ಬಾಳುವ ಹಣ್ಣಗಳು ಭಸ್ಮವಾಗಿದೆ ಸುಮಾರು 2 ಲಕ್ಷ ರೂ ಬೆಲೆ ಬಾಳುವ ಪದಾರ್ಥಗಳು ಸುಟ್ಟು ಕಟ್ಟಡ ವಿಕಾರಗೊಂಡಿರುತ್ತೆದೆ ಅವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 498(ಎ)-323-506 ಕೂಡ 34 ಐ.ಪಿ.ಸಿ.

ದಿನಾಂಕ: 04-02-2013 ರಂದು ಪಿರ್ಯಾದಿ ಲಕ್ಷಮ್ಮ  ಕೊಂ. ಐಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ, ಶಂಕರಪುರ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಮಧು 2] ನಾಗಣ್ಣ  3] ಲಕ್ಷಮ್ಮ  ಎಲ್ಲರೂ ಶಿವಳ್ಳಿ ಗ್ರಾಮದ ವಾಸಿಗಳು  ನನ್ನ ಮಗಳಿಗೆ ಸರಿಯಾಗಿ ಊಟ ಬಟ್ಟೆ ತಂದುಕೊಡದೆ ನೀನು ಸರಿಯಾಗಿ ಕೆಲಸ ಮಾಡುವುದಿಲ್ಲ ಕೆಲಸಕ್ಕೆ ಬಾರದವಳು ನೋಡಲು ಚೆನ್ನಾಗಿಲ್ಲ ಕಪ್ಪಾಗಿದ್ದಿಯಾ ಎಂದು ಸಣ್ಣ ಪುಟ್ಟ ವಿಚಾರಕ್ಕೆಲ್ಲ ಬೈಯುವುದು, ಹೊಡೆಯುವುದು ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕಿರುಕುಳ ಕೊಡುತ್ತಿದ್ದರು. ಹಿಂಸೆ ಕಿರುಕುಳದ ಅವಮಾನವನ್ನು ತಾಳಲಾರದೆ ನನ್ನ ಮಗಳು ಗಂಡನ ಮನೆಯಲ್ಲಿ ನೇಣು ಹಾಕಿಕೊಂಡಿರುತ್ತಾಳೆ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 54/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 04-02-2013 ರಂದು ಪಿರ್ಯಾದಿ ಕುಮಾರ ಬಿನ್ ತಿಬ್ಬಯ್ಯ, 40 ವರ್ಷ, ಒಕ್ಕಲಿಗರು, ಚಂದಗಾಲು ಗ್ರಾಮ, ಶ್ರೀರಂಗಪಟ್ಟಣ ತಾ|| ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಲೀಲಾವತಿ ಹಾಗು ಮಗು ರೇಖಾ, 11 ವರ್ಷ ರವರುಗಳು ದಿನಾಂಕ: 04-02-2013 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಪಿರ್ಯಾದಿಯವರ ಮನೆಯಿಂದ 20,000/- ರೂ. ಹಣ ಮತ್ತು 50 ಗ್ರಾಂ, ಚಿನ್ನದ ಚೈನನ್ನು ತೆಗೆದುಕೊಂಡು  ಹೊರಟುಹೋಗಿರುತ್ತಾರೆ ಇವರುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 03-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-02-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  3 ಯು.ಡಿ.ಆರ್. ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ,  2 ಹಗಲು/ರಾತ್ರಿ ಕಳ್ಳತನ ಪ್ರಕರಣಗಳು,  1 ವಂಚನೆ ಪ್ರಕರಣ,  2 ರಸ್ತೆ ಅಪಘಾತ ಪ್ರಕರಣಗಳು ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 379 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಮಲ್ಲೇಶ ಲೇಟ್ ಮಲ್ಲೇಗೌಡ, 48 ವರ್ಷ, ಕೋಡಿಶೆಟ್ಟಿಪುರ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರ ಅವರ ಇಂಡಿಗೋ ಕಾರ್ ನಂ. ಕೆ.ಎ-11-ಎ-1840 ನ್ನು ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡು ಬೆಳಿಗ್ಗೆ 06-00 ಗಂಟೆಗೆ ಮನೆಯ ಹೊರಗಡೆ ಬಂದು ನೋಡಿದಾಗ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2.ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 379 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ನಾಗರತ್ನ, ಸ್ವರ್ಣಸಂದ್ರ, ಮಂಡ್ಯ ರವರು ನೀಡಿದ ದೂರು ಏನೆಂದರೆ ಮಳವಳ್ಳಿ ಸಕರ್ಾರಿ ಬಸ್ ನಿಲ್ದಾಣದಲ್ಲಿ ಮಂಡ್ಯಕ್ಕೆ ಬಸ್ನ್ನು ಹತ್ತುವ ವೇಳೆಯಲ್ಲಿ ತನ್ನ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಲೋಕೇಶ ಬಿನ್. ಲೇಟ್. ಜವರಯ್ಯ, ಹೊನಗಾನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಹರೀಶ.ಹೆಚ್.ಜೆ. 23 ವರ್ಷ, ಹೊನಗಾನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ಎಂಬುವವರು ಟಿಪ್ಪರ್ ಕೆಲಸಕ್ಕೆಂದು ಹೋಗಿದ್ದು, ಕ್ರಷರ್ ಹತ್ತಿರ ನಿಂತಿದ್ದ ಟಿಪ್ಪರ್ ನಂ ಕೆಎ-01-9326 ಮೇಲೆ ಹತ್ತಿದಾಗ ಮೇಲೆ ಹಾದು ಹೋಗಿದ್ದ ವಿಧ್ಯುತ್ ತಂತಿ ತಾಗಿದ್ದು, ಪರಿಣಾಮ ವಿಧ್ಯುತ್ ಮೈಮೇಲೆ ಹರಿದು ಟಿಪ್ಪರ್ ಮೇಲಿಂದ ಕೆಳಕ್ಕೆ ಬಿದ್ದ ಪರಿಣಾಮ ಬೆನ್ನು ಮತ್ತು ತಲೆಯ ಹಿಂಭಾಗ ಪೆಟ್ಟಾಗಿದ್ದು  ಮಿಷನ್ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಮಹಾದೇವ ಬಿನ್. ಕುಳ್ಳಿ ಮರೀಗೌಡ, ಜೆ.ಸಿ.ನಗರ ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಹದೇವ ಬಿನ್ ದೊಡ್ಡನಿಂಗೇಗೌಡ ಎಂಬುವವರು ಮಲವಿಸರ್ಜನೆಗೆ ಹೋಗಿ ಹೆಡ್ವಕ್ಸರ್್ ಬಳಿ ನೀರು ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸತ್ತುಹೋಗಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಕಾತರ್ಿಕ್ ಬಿನ್. ಲೋಕೇಶ್, 16 ವರ್ಷ, 10 ನೇ ತರಗತಿ ವಿದ್ಯಾಥರ್ಿ, ಕಾಳೇನಹಳ್ಳಿ, ಹೊಸಕೊಪ್ಪಲು, ಕೆ.ಆರ್. ನಗರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಆರೋಪಿ ರವಿಕುಮಾರ ಬಿನ್. ಪುಟ್ಟಸ್ವಾಮಿಗೌಡ ರವರು ಆದಿಚುಂಚನಗಿರಿ ಕ್ಷೇತ್ರದಲ್ಲಿರುವ ಐಲ್ಯಾಂಡ್ ಕಲ್ಯಾಣಿ ಕೆರೆಗೆ ಸ್ನಾನಕ್ಕಾಗಿ ಹೋಗಿ ನೀರಿನಲ್ಲಿ ಇಳಿದು ಸ್ನಾನ ಮಾಡುತ್ತಿದ್ದಾಗ ರವಿಕುಮಾರ ಕೆರೆಯ ನೀರಿನಲ್ಲಿ ಈಜುತ್ತಿದ್ದಾಗ ಸರಿಯಾಗಿ ಈಜುಬಾರದೆ ಇದ್ದುದರಿಂದ ರವಿಕುಮಾರ ಆಕಸ್ಮಿಕವಾಗಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ 


ಮನುಷ್ಯ ಕಾಣೆಯಾದ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 10/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.  

ದಿನಾಂಕ: 03-02-2013 ರಂದು ಪಿರ್ಯಾದಿ ನಟರಾಜು, ಹುಲ್ಲಂಬಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಟರಾಜು ಬಿನ್. ನಂಜಯ್ಯ, ಹುಲ್ಲಂಬಳ್ಳಿ ಗ್ರಾಮ ಎಂಬುವವರು ಪೂರಿಗಾಲಿಗೆ ಹೋಗಿ ಬರುತ್ತೇನೆಂದು ಹೋದವನು ಮನೆಗೆ ವಾಪಸ್ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಹಗಲು/ರಾತ್ರಿ ಕಳ್ಳತನ ಪ್ರಕರಣಗಳು :

1. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 454-380 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಯಮುನಾ ಕೊಂ ಗುರಪ್ಪ, ಎಂ.ಎಸ್ಸಿ. ವಿದ್ಯಾರ್ಥನಿರವರು ನೀಡಿದ ದೂರು ಏನೆಂದರೆ ಆರೋಪಿ ಕೃಷ್ಣ ಬಿನ್. ಸಣ್ಣೇಗೌಡ, ದಿನಗೂಲಿ ನೌಕರ, ಕೃಷಿಮಹಾವಿದ್ಯಾಲಯ, ವಿ.ಸಿ.ಫಾರಂ ರವರು ರೂಂ ಒಳಗಡೆ ಇಟ್ಟಿದ್ದ ಭರಣಿ ಕೊಂ. ಕೃಷ್ಣಮೂರ್ತಿ ರವರ ಬ್ಯಾಗ್ ನಲ್ಲಿದ್ದ ಸ್ಯಾಮ್ಸಂಗ್ ಮೋಬೈಲ್, ನಾಗಮಣಿ ಕೊಂ ವೆಂಕಟರಮಣಪ್ಪ ರವರ ಬ್ಯಾಗ್ ನಲ್ಲಿದ್ದ ಕಾರ್ಬನ್ ಮೊಬೈಲ್ ಕಳ್ಳತನವಾಗಿದ್ದವು. ಇವುಗಳನ್ನು ಕೃಷ್ಣ ಎಂಬುವನು ರೂಂ ಬಾಗಿಲು ತೆಗೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 457-380 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಹೆಚ್ಸಿ.ಶಿವಕುಮಾರ ಬಿನ್. ಲೇ|| ಹೆಚ್.ಕೆ. ಚಲುವಯ್ಯ, 56ವರ್ಷ, ಒಕ್ಕಲಿಗರು, ಕೆ. ಹೊನ್ನಲಗೆರೆ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಹೊಡೆದು ಒಳಗೆ ನುಗ್ಗಿ ಮನೆಯಲ್ಲಿದ್ದ 168 ಗ್ರಾಂ ಚಿನ್ನದ ವಡವೆಗಳು ಮತ್ತು 12 ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 420 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಎನ್.ಡಿ.ಮಂಜುಳ ಕೋಂ. ಡಾ|| ಕೆ.ಪಿ.ವೆಂಕಟೇಶ್, ವಾಸ ಪೂರ್ಣ ನಿಲಯ, 12ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಜಯಲಕ್ಷ್ಮಿ, 7ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ಫಿರ್ಯಾದಿಯ ಅತ್ತೆಯವರಿಗೆ ಬೀರುವನ್ನು ಕ್ಲೀನ್ ಮಾಡಿಕೊಡುವುದಾಗಿ ನಂಬಿಸಿ ಕ್ಲೀನ್ ಮಾಡುವಾಗ ಅವರಿಗೆ ಗೊತ್ತಿಲ್ಲದಂತೆ ಅವರ ಬೀರುವಿನಲ್ಲಿದ್ದ ಹವಳ ಮತ್ತು ಚಿನ್ನದ ಮುಡಿ ಚೈನ್ ಮತ್ತು ಒಂದು ಬಿಳಿ ಅರಳಿನ ಚಿನ್ನದ ಉಂಗುರ ಇವುಗಳ ಒಟ್ಟು ತೂಕ 40 ಗ್ರಾಂ ಇರುತ್ತೆ ಹಾಗೂ 1500/- ರೂ. ನಗದು ಹಣವನ್ನು ಹಾಗೂ ಫಿರ್ಯಾದಿಯವರ ಬೆಡ್ರೂಮಿನ ಬೀರುವಿನಲ್ಲಿದ್ದ ಫಿರ್ಯಾದಿಯವರ ಬಾಬ್ತು 15 ಗ್ರಾಂ ತೂಕದ ಚಿನ್ನದ ಒಂಟಿ ಬಳೆ ಮತ್ತು 15 ಗ್ರಾಂ ತೂಕದ ಒಂದು ಚಿನ್ನದ ಚೈನ್ ಇದರಲ್ಲಿ ವೆಂಕಟೇಶ್ವರಸ್ವಾಮಿಯ ಚಿನ್ನದ ಡಾಲರ್ ಇರುತ್ತೆ. ಇವುಗಳನ್ನು ಜಯಲಕ್ಷ್ಮಿಯು ಕಳವು ಮಾಡಿಕೊಂಡು ಮೋಸ ಮಾಡಿರುತ್ತಾರೆ. ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 279-337-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಕಾಯಿದೆ. 

ದಿನಾಂಕ: 03-02-2013 ರಂದು ಪಿರ್ಯಾದಿ ರುದ್ರೇಗೌಡ ಬಿನ್. ಹಲಗೇಗೌಡ, ಅಗ್ರಹಾರ ಬಡಾವಣೆ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾವುದೋ ಟ್ರಾಕ್ಟರ್ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕು ಇವರು ಟ್ರಾಕ್ಟರ್ ಅನ್ನು ವೇಗವಾಗಿ ಚಲಿಸಿದ ಪರಿಣಾಮ ಆಟೋರಿಕ್ಷಾ ಟ್ರೇಲರ್ ಗೆ  ತಗುಲಿ ಉರುಳಿ ಬಿದ್ದು ಆಟೋದಲ್ಲಿದ್ದ ನಾರ್ಗೋನಹಳ್ಳಿ ಗ್ರಾಮದ ಶ್ರೀನಿವಾಸ ಮತ್ತು ಮಾರ್ಗೋನಹಳ್ಳಿಯ ಮಂಜ ರವರಿಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದವರೆಲ್ಲರಿಗೂ ಮೈಕೈ ಮುಖ ಸೇರಿದಂತೆ ರಕ್ತ ಗಾಯಗಳಾಗಿದ್ದು ಅಪಘಾತ ಮಾಡಿದ ಟ್ರಾಕ್ಟರ್ ನ್ನು ಅದರ ಚಾಲಕ ಕಿಕ್ಕೇರಿ ಕಡೆಗೆ ಓಡಿಸಿಕೊಂಡು ಹೊರಟು ಹೋದನು ನಂಬರ್ ನೋಡಲಾಗಲಿಲ್ಲ ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 279,304[ಎ] ಐಪಿಸಿ ಕೂಡ 187 ಐ.ಎಂ..ವಿ. ಆಕ್ಟ್.

ದಿನಾಂಕ:03-02-2013 ರಂದು ಪಿರ್ಯಾದಿ ಕುಮಾರ್ ಬಿನ್. ಚಿಕ್ಕೇಗೌಡ, ಕಂಚನಹಳ್ಳಿ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ದಿನಾಂಕಃ03-02-2013 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಬೆಳ್ಳೂರು ಪೊಲೀಸ್ ಠಾಣ ಸರಹದ್ದಿಗೆ ಸೇರಿದ ಚಂದ್ರಶೇಖರಪುರದ ಐಯ್ಯನ ಕೆರೆಯ ತಿರುವಿನಲ್ಲಿ ಆರೊಪಿ ಕೆಎ-05-ಸಿ-6233ರ ಲಾರಿಯ ಚಾಲಕ, ಸದರಿ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಎದುರುಗಡೆಯಿಂದ ಬರುತ್ತಿದ್ದ ಕೆಎ-11-ಕ್ಯೂ-7913ರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿ ಬೈಕಿನಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಮೂರು ಜನರು ಸ್ಥಳದಲ್ಲೇ ಮೃತರಾಗಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 02-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-02-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನೆ ಕಳ್ಳತನ ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,    2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
  

ಮನೆ ಕಳ್ಳತನ ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 457, 380 ಐ.ಪಿ.ಸಿ.   

ದಿನಾಂಕ: 02-02-2013 ರಂದು ಪಿರ್ಯಾದಿ ಜೆ.ಎಂ. ಜಮುನಾ, ಶಶ್ರೂಷಕಿ, ಚಿನಕುರಳಿ ಪ್ರಾಥಮಿಕ ಆರೋಗ್ಯ ಕೇಂದ್ರ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಚಿನಕುರಳಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯ ನಿಮಿತ್ತ ಆಸ್ಪತ್ರೆಗೆ ಹೋಗಿದ್ದು, ಕರ್ತವ್ಯ ಮುಗಿಸಿ ಬೆಳಗ್ಗೆ 08-00 ಗಂಟೆಗೆ ವಾಪಾಸ್ ವಸತಿಗೃಹಕ್ಕೆ ಬಂದಾಗ ಮನೆಯ ಹಿಂದಿನ ಬಾಗಿಲನ್ನು ಹಾರೆಯಿಂದ ತಿವಿದು ಚಿಲಕ ಹೊಡೆದಿದ್ದು, ಮನೆಯಲ್ಲಿದ್ದ 5 ಸಾವಿರ ರೂ ನಗದು ಹಣ, ಸುಮಾರು 75 ಸಾವಿರ ರೂ ಬೆಲೆಬಾಳುವ ಒಂದು ಚಿನ್ನದ ನಕ್ಲೇಸ್, 2150 ರೂ. ಮೊತ್ತದ ಒಂದು ಟೈಟಾನ್ ರಾಗ ವಾಚ್, 2 ಸಾವಿರ ರೂ ಮೊತ್ತದ ಎರಡು ಸೊನಾಟ ವಾಚ್, 5 ಸಾವಿರ ರೂ ಮೊತ್ತದ 2 ಜೊತೆ ಬೆಳ್ಳಿಯ ಕಾಲು ಚೈನ್ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

 2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 454, 380 ಐ.ಪಿ.ಸಿ.

        ದಿನಾಂಕ: 02-02-2013 ರಂದು ಪಿರ್ಯಾದಿ ಮಲ್ಲಾಜಮ್ಮ ಕೋಂ, ಲೇಟ್ ಗವಿಸಿದ್ದಯ್ಯ ಗೌಡಗೆರೆ. ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಪ್ರಮೋದ 2) ಪ್ರಕಾಶ, ಗೌಡಗೆರೆ ಗ್ರಾಮ, ಮಳವಳ್ಳಿ ತಾಲ್ಲೋಕು. ಪಿರ್ಯಾದಿಯವರ ಮನೆಯ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ಡಿವಿಡಿ, ಕಬ್ಬಿನಣದ ಸರಳುಗಳು, ಸಾಮಾನುಗಳು, 5 ಸಿಮೆಂಟ್ ಮೂಟೆಗಳು ಒಟ್ಟು 6000 ರೂ ಬೆಳೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 02-02-2013 ರಂದು ಪಿರ್ಯಾದಿ ಸಣ್ಣತಾಯಮ್ಮ ಕೋಲಕಾರನದೊಡ್ಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ 19 ವರ್ಷದ ಮಗಳು ಕೋಲಕಾರನದೊಡ್ಡಿ ಗ್ರಾಮ ಮಂಡ್ಯ ತಾ. ರವರು ದಿನಾಂಕ: 01-02-2013 ರಂದು ನಮ್ಮ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇದುವರೆವಿಗೂ ವಾಪಸ್ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಆದ್ದರಿಂದ ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

1. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 279-337-304(ಎ) ಐ.ಪಿ.ಸಿ.

ದಿನಾಂಕ: 02-02-2013 ರಂದು ಪಿರ್ಯಾದಿ ಎಂ. ಲೋಕೇಶ್ ಬಿನ್. ಮಲ್ಲಪ್ಪ, ಕೊಳ್ಳೆಗಾಲ ಟೌನ್, ಚಾಮರಾಜನಗರ ನಗರ ಜಿಲ್ಲೆ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಚಲುವ, ಮಾಂಬಳ್ಳಿ ಗ್ರಾಮ, ಕೊಳ್ಳೆಗಾಲ ತಾ|| ರವರ ಬೈಕಿನಲ್ಲಿ ಬೆಳಕವಾಡಿ-ಮಳವಳ್ಳಿ ರಸ್ತೆಯ ನಿಂಗಪ್ಪನಕಟ್ಟೆಯ ಹತ್ತಿರ ತಿರುವಿನಲ್ಲಿ ತಿರುಗಿಸಿದಾಗ ಹಳ್ಳಕ್ಕೆ ಬಿದ್ದು ಚಲುವನಿಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಪಿರ್ಯಾದಿಯವರಿಗೆ ಪೆಟ್ಟಾಗಿರುತ್ತೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 498(ಎ) 504, 506, 323 ರೆ:ವಿ 34 ಐ.ಪಿ.ಸಿ.

ದಿನಾಂಕ: 02-02-2013 ರಂದು ಪಿರ್ಯಾದಿ ರಶ್ಮಿ ಕೋಂ. ಡಿ.ವಿ. ಗೋವಿಂದರಾಜು, ಟಿ.ಕಾಗೇಪುರ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ  1) ಡಿ.ವಿ.ಗೋವಿಂದರಾಜು, 2) ಅತ್ತೆ ಶಿವಮ್ಮ,      3) ಮೈದುನಾ ಗಿರೀಶ, 4) ನಾದಿನಿ ಶಾರದಮ್ಮ ಟಿ.ಕಾಗೇಪುರ ಗ್ರಾಮ ಪಿರ್ಯಾದಿಯವರಿಗೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈಯ್ದಿ, ನಿಮ್ಮ ತಂದೆಯ ಮನೆಯಿಂದ 1,00000 ರೂ. ವರದಕ್ಷಿಣೆ ತರುವಂತೆ ಹಿಂಸೆ ನೀಡಿ ಇಲ್ಲವಾದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಹಾಗೂ ನಿನ್ನನ್ನು ಕೊಲೆ ಮಾಡಿ ನನ್ನ ಮಗನಿಗೆ ಬೇರೆ ಮಧುವೆ ಮಾಡುತ್ತೇವೆ ಎಂದು ಹೇಳಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 498(ಎ) ರೆ:ವಿ 34 ಐ.ಪಿ.ಸಿ.

ದಿನಾಂಕ: 02-02-2013 ರಂದು ಪಿರ್ಯಾದಿ ಸೌಜನ್ಯ ಕೋಂ.ಸಿದ್ದು @ ಸಿದ್ದೇಗೌಡ, ಕೆ.ಜಿ.ದೊಡ್ಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1)ಸಿದ್ದು @ ಸಿದ್ದೇಗೌಡ  2) ಸಿದ್ದಮ್ಮ, 3) ಶಿವು ಕೆ.ಜಿ.ದೊಡ್ಡಿ ಗ್ರಾಮ,  ಪಿರ್ಯಾದಿಯವರಿಗೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕಿರುಕುಳ ನೀಡಿ ನಿನ್ನನ್ನು ಮಧುವೆಯಾಗಿರುವುದೇ ದುಡ್ಡಿಗಾಗಿ ಎಂದು ನಿಮ್ಮ ತಂದೆಯ  ಮನೆಯಿಂದ ಹೆಚ್ಚು ವರದಕ್ಷಿಣೆ ತರುವಂತೆ ಹಿಂಸೆ ನೀಡಿ ಇಲ್ಲವಾದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED 01-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-02-2013 ರಂದು ಒಟ್ಟು 14 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  1 ವಂಚನೆ ಪ್ರಕರಣ,  1 ಅಪಹರಣ ಪ್ರಕರಣ,  1 ರಾಬರಿ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 01-02-2013 ರಂದು ಪಿರ್ಯಾದಿ ಹೆಚ್.ಎಂ.ಗಿರಿಜಾ ಕೋಂ. ಡಿ.ಪಿ.ಕಾಂತರಾಜು, ಕೆ.ಎಂ.ದೊಡ್ಡಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಡಿ.ಪಿ.ಕಾಂತರಾಜು. ರವರು ತೊರೆಬೊಮ್ಮನಹಳ್ಳಿಯಲ್ಲಿರುವ ವೆಟನರಿ ಆಸ್ಪತ್ರೆಯಲ್ಲಿ 'ಡಿ'. ದರ್ಜಿಯ ಕೆಲಸ ಮಾಡುತ್ತಿದ್ದು ದಿನಾಂಕ: 26-01-2013 ರಂದು ಬೆಳಿಗ್ಗೆ 07-30 ಗಂಟೆ ಸಮಯದಲ್ಲಿ ಕೆಲಸಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 420 ಐ.ಪಿ.ಸಿ.

     ದಿನಾಂಕ: 01-02-2013 ರಂದು ಪಿರ್ಯಾದಿ ಚಂದ್ರೇಗೌಡ, ಆಹಾರ ನಿರೀಕ್ಷಕರು, ಕೆ.ಆರ್..ಪೇಟೆ ತಾ| ಕಚೇರಿ ರವರು ನೀಡಿದ ದೂರು ಏನೆಂದರೆ ಹೊನ್ನಪ್ಪ ಬಿನ್. ತಿಮ್ಮೇಗೌಡ, ರಾಯಸಮುದ್ರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿದ್ದು ಅದರಲ್ಲಿಯು ಸಹ ಮೇಲ್ಕಂಡ ಕುಂಟುಂಬದ ಸದಸ್ಯರ ಹೆಸರಿದ್ದು ಈ ಚೀಟಿಯಲ್ಲಿಯು ಸರ್ಕಾರ ರಿಯಾಯಿತಿ ದರದಲ್ಲಿ ಆಹಾರ ಸಾಮಗ್ರಿ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆಂದು ಆದ ಕಾರಣ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಪಹರಣ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 365,324,506 ಕೂಡ 34 ಐ.ಪಿ.ಸಿ.

     ದಿನಾಂಕ: 01-02-2013 ರಂದು ಪಿರ್ಯಾದಿ ಶ್ರೀನಿವಾಸ, ಟೈಲ್ಸ್ ಫಿಟ್ಟಿಂಗ್ ಕೆಲಸ, ವಾಸ ಆಡಿಲಿಂಗನಪಾಳ್ಯ ಗ್ರಾಮ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳು ಪಿರ್ಯಾದಿಯನ್ನು ಒಂದು ಟೆಂಪೋ ಟ್ರಾವೆಲ್ನಲ್ಲಿ ಎತ್ತಿಹಾಕಿಕೊಂಡು ಈ ಬಾರಿ ನಡೆಯುವ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಎ.ಮಂಜುರವರಿಗೆ  ಕ್ಯಾನ್ವಾಸ್ ಮಾಡುತ್ತಿದ್ದಾರೆ. ನೀವು ನಿಮ್ಮಪ್ಪ ಊರಿನಲ್ಲಿ ಕ್ಯಾನ್ವಾಸ್ ಮಾಡೋದು ಬೇಡ, ಚುನಾವಣೆವರೆಗೆ ನೀವು ಊರು ಬಿಟ್ಟು ಹೋಗಿ ಚುನಾವಣೆ ಮುಗಿದ ಮೇಲೆ ಬರಬೇಕು ಎಂದು ಹೆದರಿಸಿ ಪ್ರಾಣ ಭಯ ಹಾಕಿದ. ನಾನು ಅದಕ್ಕೆ ಪ್ರತಿರೋಧಿಸಿದಾಗ ಟೆಂಪೋ ಒಳಗಡೆ ಇದ್ದ ಯಾರೋ ಮತ್ತಿಬ್ಬರೂ ಕಬ್ಬಿಣದ ರಾಡನ್ನು ತೋರಿಸಿ ಕಬ್ಬಿಣದ ರಾಡಿನಲ್ಲಿ ಒಬ್ಬ ನನ್ನ ಎಡತೊಡೆ ಮತ್ತು ಎಡಸೊಂಟಕ್ಕೆ ಹೊಡೆದು ನೋವುಂಟು ಮಾಡಿರುತ್ತಾರೆ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಮೇಲುಕೋಟಿ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 392 ಐ.ಪಿ.ಸಿ.

     ದಿನಾಂಕ: 01-02-2013 ರಂದು ಪಿರ್ಯಾದಿ ದೇವಮ್ಮ ಕೋಂ. ಲೇಟ್. ಜವರೇಗೌಡ, ಗೃಹಿಣಿ, ಮಾಡರಹಳ್ಳಿ ಗ್ರಾಮ, ದೇವಮ್ಮ ಕೋಂ. ಲೇಟ್. ಜವರೇಗೌಡ, ಗೃಹಿಣಿ, ಮಾಡರಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರು ಅವರ ಮನೆಯಲ್ಲಿ ಮಲಗಿದ್ದಾಗ ಯಾರೋ ಮನೆಯ ಬಾಗಿಲನ್ನು ತಟ್ಟಿದ್ದು ಬಾಗಿಲನ್ನು ತೆಗೆದಾಗ ಇಬ್ಬರು ವ್ಯೆಕ್ತಿಗಳು ಬಾಯಿ, ಕಣ್ಣನ್ನು ಮುಚ್ಚಿ ಕತ್ತಿನಲ್ಲಿದ್ದ ಚಿನ್ನದ ತಾಳಿ, ಕತ್ತಿನ ಗುಂಡು, ಕಿವಿಯ ಓಲೆಯನ್ನು ಕಿತ್ತುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 31-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 31-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್.  ಪ್ರಕರಣಗಳು,  3 ಕಳ್ಳತನ ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ವಂಚನೆ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ  ಧನರಾಜ್, ಪಿಎಸ್.ಐ, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರು ನಂದಿಪುರ ಗ್ರಾಮದ ದೊಡ್ಡಪ್ಪ ಸಣ್ಣಪುಟ್ಟೇಗೌಡರ 3 ನೇ ಮಗ ಬಿ.ಎಸ್.ಪುಟ್ಟರಾಜು ದಿನಾಂಕ 31-01-13 ರಂದು ಜಮೀನಿಗೆ ನೀರು ಹಾಯಿಸಲು ಹೋಗಿರುವಾಗ ಮದ್ಯಾಹ್ನ 03-00 ಗಂಟೆಯಲ್ಲಿ ಯಾವುದೋ ವಿಷಪೂರಿತ ಹಾವು ಪುಟ್ಟರಾಜುವಿನ ಬಲ ಕಣಕಾಲಿನ ಬಳಿ ಕಚ್ಚಿದ್ದು ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಕುಬೇರಪ್ಪ ಬಿನ್ ಕುಂಟಯ್ಯ, ಡಿ.ಎಸ್.ಎಸ್. ಸಂಚಾಲಕರು, ಕೆ.ಶೆಟ್ಟಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರು ಏನೆಂದರ ಅಪರಿಚಿತ ಗಂಡಸು, ಸುಮಾರು 65 ವರ್ಷ ವಯಸ್ಸು ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ ಈ ಬಗ್ಗೆ ಮುಂದಿನ ಕ್ರಮ ಜರುಗಿಸುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಯುಡಿಆರ್ 01/13 ಕಲಂ-174[ಸಿ] ಸಿ.ಆರ್.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಹೆಚ್.ಎಸ್. ಚಂದ್ರ ಬಿನ್ ಲೇಟ್ ಹೆಚ್.ಎಸ್.ಸಿದ್ದೇಗೌಡ, 37 ವರ್ಷ, ಒಕ್ಕಲಿಗರು, ಕೂಲಿ ಕೆಲಸ, ವಾಸ ಎನ್.ಹೆಚ್.209 ಮುಖ್ಯರಸ್ತೆ, ಹಲಗೂರು ಗ್ರಾಮ, ಮಳವಳ್ಳಿ ತಾಲ್ಲೂಕು. ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ತನ್ನ ಅಣ್ಣ ಮಹದೇವೇಗೌಡ @ ಸುರೇಶ ಬಿನ್ ಲೇಟ್ ಹೆಚ್.ಎಸ್.ಸಿದ್ದೇಗೌಡ, ವಯಸ್ಸು ಸುಮಾರು 47 ವರ್ಷ, ಒಕ್ಕಲಿಗರು, ಅಂಗವಿಕಲ, ವಾಸ 4ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ. ಸ್ವಂತ ಸ್ಥಳ ಹಲಗೂರು ಗ್ರಾಮ, ಮಳವಳ್ಳಿ ತಾಲ್ಲೂಕು ರವರು ಮನೆಯ ಹಾಲಿನ ಮೂಲೆಯಲ್ಲಿರುವ ಮೇಲ್ಛಾವಣಿಯ ಕಬ್ಬಿಣದ ಸರಳಿನ ಕೊಂಡಿಗೆ ವಿದ್ಯುತ್ ವೈರಿನಿಂದ ನೇಣುಹಾಕಿಕೊಂಡು ಸತ್ತು ನೇತಾಡುತ್ತಿದ್ದು ಮನೆಯಲ್ಲಿ ಹೆಂಡತಿ ಮಕ್ಕಳೆಲ್ಲರೂ ಇದ್ದರು. ತನ್ನ ಅಣ್ಣ ಮಹದೇವೇಗೌಡ @ ಸುರೇಶನು ಮನೆಯಲ್ಲಿ ಇಲ್ಲದಿದ್ದಾಗ ಪ್ರೆಸ್ ರಿಪೋರ್ಟರ್ ಶಿವಕುಮಾರ ಎಂಬುವನು ತಮ್ಮ  ಮನೆಗೆ ಬಂದು ಹೋಗುತ್ತಿರುವ ವಿಚಾರ ತಿಳಿದು ಈ ವಿಷಯವನ್ನು ಮನನೊಂದು ಅವರ ಸ್ನೇಹಿತ ಚಂದೂಪುರ ಗ್ರಾಮದ ಮಾದೇಗೌಡ ರವರಿಗೆ ಹೇಳಿಕೊಂಡಿರುವ ವಿಚಾರ ತಿಳಿದುಬಂದಿರುತ್ತದೆ. ಇದರಿಂದಲೇ ತನ್ನ ಅಣ್ಣ ಮಹದೇವೇಗೌಡ @ ಸುರೇಶನು ಮನನೊಂದು ನೇಣುಹಾಕಿಕೊಂಡು ಸತ್ತಿರುವಂತೆ ಕಂಡುಬರುತ್ತದೆ. ಆದರೂ ತನ್ನ ಅಣ್ಣನ ಸಾವಿನ ಬಗ್ಗೆ ಅನುಮಾನವಿರುತ್ತದೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರು



ಕಳ್ಳತನ ಪ್ರಕರಣಗಳು :

1. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಪುಟ್ಟಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಡುಕೊತ್ತನಹಳ್ಳಿ ಗ್ರಾಮ,  ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಕಾಡುಕೊತ್ತನಹಳ್ಳಿ ಗ್ರಾಮದ  ಶಾಲೆಯ ಅಡುಗೆ ಮನೆಯ ಬಾಗಿಲು ಬೀಗವನ್ನು  ಮುರಿದು ಒಳಹೋಗಿ ಸುಮಾರು 1200/-ರೂ. ಬೆಲೆ ಬಾಳುವ ಗ್ಯಾಸ್ ಸಿಲೆಂಡರ್ನ್ನು ಕಳುವು ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾತರ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಮಹದೇವಮ್ಮ ಬಿನ್. ಗವಿಸಿದ್ದಯ್ಯ, 40 ವರ್ಷ, ಅಂಗನವಾಡಿ ಕಾರ್ಯಕರ್ತೆ, ಹೆಮ್ಮಿಗೆ ಗ್ರಾಮ ರವರು ನೀಡಿದ ದೂರು ಏನೆಂದರೆ  ಅವರು ಕೆಲಸ ಮಾಡುತ್ತಿದ್ದ ಹೆಮ್ಮಿಗೆ 2ನೇ ಅಂಗನವಾಡಿ ಕೇಂದ್ರದಲ್ಲಿ ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು  ಕೇಂದ್ರದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಹಾಕಿ ಒಳಗೆ ನುಗ್ಗಿ 2 ಕುಕ್ಕರ್ ಗಳು, 10 ತಟ್ಟೆಗಳು, 2 ಬೇಸಿನ್ ಗಳು, ಮತ್ತು 2 ಮುಚ್ಚಳಗಳು ಹಾಗೂ ತೂಕಮಾಪನ ಯಂತ್ರ ಒಟ್ಟು 6000/- ರೂ ಬೆಲೆಬಾಳು ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಸತ್ಯನಾರಾಯಣ ಬಿನ್ ಲೇಟ್ ನರಸಿಂಹಯ್ಯ, ಗೋಸೇಗೌಡರ ಬೀದಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕಿಲರ್ೋಸ್ಕರ್ ಕಂಪನಿಯ 1 ಹೆಚ್.ಪಿ. ಪಂಪ್ಸೆಟ್ ಮೋಟರ್ 2) ಒಂದು ಕಿರ್ಲೋಸ್ಕರ್ ಕಂಪನಿಯ 2 ಹೆಚ್.ಪಿ.ಯ ಸಬ್ ಮರ್ಸಿಬಲ್  ಪಂಪ್ಸೆಟ್ ಮೋಟರ್ ಒಟ್ಟು ಬೆಲೆ ಸುಮಾರು 10,000/- ರೂ. ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿ ಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 279-304(ಎ) ಐ.ಪಿ.ಸಿ.

      ದಿನಾಂಕ: 31-01-2013 ರಂದು ಪಿರ್ಯಾದಿ ಎಸ್.ಸುರೇಶ್ ಬಿನ್ ಲೇಟ್. ಸಣ್ಣಯ್ಯ, 32 ವರ್ಷ, ಪರಿಶಿಷ್ಟ ಜಾತಿ, ಹೊನಗಳ್ಳಿ ಮಠ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಹೆಚ್.ಬಿ.ಶ್ರೀಕಾಂತ್ ಬಿನ್. ಲೇಟ್. ಬೋರಯ್ಯ, 58 ವರ್ಷ, ಹೊನಗಳ್ಳಿ ಮಠ ಕಾಲೋನಿ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಮೋಟಾರ್ ಸೈಕಲ್ನ್ನು ಅತಿವೇಗ ಮತ್ತು ಅಜಾಗರೂ ಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಿಯಂತ್ರಣ ತಪ್ಪಿ ತಾನಾಗಿಯೇ ಮೋಟಾರ್ ಸೈಕಲ್ ಸಮೇತ ಬಿದ್ದು ತೀವ್ರ ಪೆಟ್ಟಾಗಿದ್ದು, ಸದರಿಯವರನ್ನು ಕೂಡಲೇ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ತಂದು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 30-1-2013 ರಂದು ರಾತ್ತಿ 11-45 ಗಂಟೆಯ ಸಮಯದಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ : 

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 420 ಐ.ಪಿ.ಸಿ.

      ದಿನಾಂಕ: 31-01-2013 ರಂದು ಪಿರ್ಯಾದಿ ಚಿಕ್ಕಮಾದಮ್ಮ ಕೋಂ ಬೀರೇಗೌಡ, ಸು:55ವರ್ಷ, ಮನೆ ಕೆಲಸ, ಹಿಪ್ಪೆ ಮರದ ಬೀದಿ, ಬೆಳಕವಾಡಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ತಮ್ಮ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಯಾರೋ ಇಬ್ಬರು ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಗಂಡಸರು ಬಂದು ಚಿನ್ನ ಮತ್ತು ಬೆಳ್ಳಿ ತೊಳೆದುಕೊಡುತ್ತೇವೆಂದು ಹೇಳಿ ಪಿರ್ಯಾದಿಯವರನ್ನು ನಂಬಿಸಿ ಮೋಸಮಾಡಿ ಮಾಂಗಲ್ಯ ಸರವನ್ನು ತೆಗೆದುಕೊಂಡಿರುತ್ತಾರೆಂದು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 30-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 30-01-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು,  2 ಕಳವು ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 5 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳ್ಳತನ ಪ್ರಕರಣಗಳು :

1. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 457-380 ಐ.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಜೆ. ಹೇಮಾವತಿ, ಅಂಗನವಾಡಿ ಕಾರ್ಯಕರ್ತೆ,  ಅರೆಚಾಕನಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅರೆಚಾಕನಹಳ್ಳಿ ಗ್ರಾಮದ ಅಂಗನವಾಡಿ ಬೀಗವನ್ನು ಮುರಿದು ಒಳಹೋಗಿ ಸುಮಾರು 2500/-ರೂ. ಬೆಲೆ ಬಾಳುವ ಗ್ಯಾಸ್ ಸಿಲೆಂಡರ್ ಗಳನ್ನು ಮತ್ತು ಒಂದು ತೂಕದ ಯಂತ್ರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 457-380 ಐ.ಪಿ.ಸಿ.

       ದಿನಾಂಕ: 30-01-2013 ರಂದು ಪಿರ್ಯಾದಿ ಹೆಚ್.ಎನ್. ಗಣೇಶಮೂರ್ತಿ,  ಮುಖ್ಯೋಪಾಧ್ಯಾಯ, ಪದ್ಯಾ ಗೋಪನಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 29-01-2013 ರಂದು ಯಾರೋ ಕಳ್ಳರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗವನ್ನು ಮುರಿದು ಒಳಹೋಗಿ ಸುಮಾರು 2500/-ರೂ. ಬೆಲೆ ಬಾಳುವ ಗ್ಯಾಸ್ ಸಿಲೆಂಡರ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 379 ಐ.ಪಿ.ಸಿ.

        ದಿನಾಂಕ: 30-01-2013 ರಂದು ಪಿರ್ಯಾದಿ ಎಸ್. ಮಹೇಶ, ಕಾಮನಕೆರೆ ಹುಂಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಫಿಯರ್ಾದಿಯ ಕೆ.ಎ-55-ಎಲ್-8080  ಹೀರೋ ಮೋಟಾರ್ ಸೈಕಲ್ ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 379 ಐ.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಎಂ.ಕೃಷ್ಣಯ್ಯ ಬಿನ್. ಮುದ್ದೀರಯ್ಯ, ಸಿದ್ದಪ್ಪಾಜಿ ದೇವಸ್ಥಾನದ ರಸ್ತೆ, 5ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಫಿರ್ಯಾದಿಯವರು ತಮ್ಮ ಬಾಬ್ತು ಕೆಎ-11 ಎಲ್. 1664 ನಂಬರಿನ ಹೀರೊಹೊಂಡ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 25,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 10/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 30-01-2013 ರಂದು ಪಿರ್ಯಾದಿ ಗಂಗಮ್ಮ ಕೋಂ. ಲೇ.ಹನುಮಂತಪ್ಪ, ಬಿಂಡಿಗನವಿಲೆ ಗ್ರಾಮರವರು ನೀಡಿದ ದೂರು ಏನೆಂದರೆ ರವರ ಮಗಳು 18ವರ್ಷ, ಪಿ.ಯು.ಸಿ. ವಿದ್ಯಾರ್ಥಿನಿ ರವರು ಕಾಲೇಜಿಗೆ ಹೊಗಿ ಬರುತ್ತೇನೆ ಎಂದು ಹೇಳಿ ಹೋದವಳು ಇದುವರೆವಿಗೂ ಮನೆಗೆ ವಾಪಸ್ ಬಂದಿರುವುದಿಲ್ಲ. ಕಾಣೆಯಾಗಿರುವ ನನ್ನ ಮೊಮ್ಮಗಳನ್ನು ಪತ್ತೆ ಮಾಡಿಕೊಡಿ ಎಂದು ಫಿರ್ಯಾದಿಯವರು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 30/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.


ದಿನಾಂಕ: 30-01-2013 ರಂದು ನಾಗರಾಜು ಬಿನ್. ಲೇಟ್. ಚನ್ನೇಗೌಡ, 50 ವರ್ಷ, ಬಿ.ಗೌಡಗೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ನನ್ನ ಮಗಳು 23 ವರ್ಷ, ಬಿ.ಗೌಡಗೆರೆ ಎಂಬುವವರು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಮನೆಯಿಂದ ಹೋದವಳು ಇದುವರೆಗೂ ವಾಪಸ್ ಬಂದಿರುವುದಿಲ್ಲ ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 498(ಎ)-448-323-324-504-506 ಕೂಡ34 ಐ.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಅಭಿಲಾಶಾ ಕೋಂ. ಶಂಕರ, 26 ವರ್ಷ, 1ನೇಕ್ರಾಸ್, ಹೊನಗಿರಿ ಡೈರಿ ಬೀದಿ, ಹೊಸಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಶಂಕರ ಬಿನ್ ಉಳ್ಳಕ್ಕಿ ಮಂಚಯ್ಯ, ಹೊಸಹಳ್ಳಿ ಮಂಡ್ಯ ಸಿಟಿ ರವರು ಆಗಾಗ್ಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ದೊಣ್ಣೆಯನ್ನು ಹಿಡಿದುಕೊಂಡು ಬಂದು ಬಾಯಿಗೆ ಬಂದಂತೆ ಬೈಯ್ದು ಭುಜ ಹಾಗೂ ಬೆನ್ನಿನ ಮೇಲೆ ಹೊಡೆದು ನೋವುಂಟುಮಾಡಿರುತ್ತಾನೆ.ಹಾಗೂ ಆತನ ಅಕ್ಕನ ಮಗನಾದ ಶಶಿಕುಮಾರ್ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಹಾಗೂ ನಿನ್ನ ಕತೆಯನ್ನು ಮುಗಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾನೆ.  ಆತನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿ ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಸರಸಮ್ಮ ಕೋಂ ಲೇಟ್. ರಾಜು, ನಿಡಘಟ್ಟ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಅವರ ಮಗಳು ರೂಪ ಕೋಂ. ಶೇಖರ್, ಬಸವನ ಪುರ ಗ್ರಾಮ, ಸ್ವಂತ ಊರು ಬಿ.ಗೌಡಗೆರೆ ಮಂಡ್ಯ ತಾಲ್ಲೂಕು ರವರಿಗೆ ಆಗ್ಗಾಗ್ಗೆ ಹೊಟ್ಟೆ ನೋವು ಬರುತ್ತಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ತೋರಿಸಿದ್ದು, ವಾಸಿಯಾಗದೆ ಇದ್ದುದ್ದರಿಂದ ಹೊಟ್ಟೆನೋವು ತಾಳಲಾರದೆ ದಿನಾಂಕ: 25-01-2013 ರಂದು ರೂಪಳು ಯಾವುದೋ ಕ್ರಿಮಿನಾಶಕದ ಔಷಧಿಯನ್ನು ಕುಡಿದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 29-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 29-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಕಳವು ಪ್ರಕರಣ,  1 ಹೆಂಗಸು ಕಾಣೆಯಾದ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 11 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.   


ರಸ್ತೆ ಅಪಘಾತ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಅಶೋಕ ಬಿನ್. ಚಿಕ್ಕಮರೀಗೌಡ, ಅರಳಕುಪ್ಪೆ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರು ಏನೆಂದರೆ ಮಹೇಂದ್ರ ಟ್ರಾಕ್ಟರ್ ಚಾಲಕ,  ಕೆಂಪು ಬಣ್ಣ, ವಾಹನದ ನಂಬರ್ ಗೊತ್ತಿರುವುದಿಲ್ಲ,  ಇಂಜಿನ್. ನಂ. ಎಸ್.ಎನ್.ಎಸ್. ಡಬ್ಯೂ-4742 ಡಿ-1 ರ ಚಾಲಕ ರಸೆ ದಾಟುತ್ತಿದ್ದಾಗ ಹಾರೋಹಳ್ಳಿ ಕಡೆಯಿಂದ ಬಂದ ಸದರೆ ಟ್ರಾಕ್ಟರ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬಸವಶೆಟ್ಟಿ ಎಂಬುವವರಿಗೆ ಡಿಕ್ಕಿ ಮಾಡಿ ಬಲಭಾಗದ ಚಕ್ರ ಹರಿದಿದ್ದು ನಾನು ಹಾಗು ಇತರರು ಆಸ್ಪತ್ರೆಗೆ ಸೇರಿಸಿದೆವು ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು, ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ರಾಜ ಬಿನ್ ಸತೀಶ, ಗೆಜ್ಜಲಗೆರೆ ಕಾಲೋನಿ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಪರಿಚಿತ ಗಂಡಸು, 45 ವರ್ಷ, ಹೆಸರು, ವಿಳಾಸ ತಿಳಿದಿರುವುದಿಲ್ಲ ಈ ವ್ಯಕ್ತಿಯು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಪೌಲಿಸನ್ ಕಬ್ಬಿಣದ ಕಾಖರ್ಾನೆ ಬಳಿ ಮೈಸೂರು-ಬೆಂಗಳೂರು ರಸ್ತೆಯ ಪಕ್ಕ ಯಾವುದೋ ಕಾಯಿಲೆಯಿಂದ ಬಳಲಿ ಸತ್ತು ಬಿದ್ದಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಪದ್ಮ ಕೋಂ. ಮಲ್ಲಿಕಾರ್ಜುನಸ್ವಾಮಿ, ಮನೆ. ನಂ.03, ಟಿ.ಬಿ. ಸರ್ಕಲ್ ಸೇಟು ಬಿಲ್ಡಿಂಗ್ ಬಳಿ. ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಅವರ ಗಂಡ ಮಲ್ಲಿಕಾರ್ಜುನಸ್ವಾಮಿ ರವರು ಮನೆಯಲ್ಲಿ ಇಲಿಗಳಿಗೆ ಪಾಷಣ ಹಾಕಿ ಇಟ್ಟಿದ್ದು ಗೊತ್ತಿಲ್ಲದೆ ತಿಂದು ಚಿಕಿತ್ಸೆ ಫಲಕಾರಿಯಾಗದೆ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 379 ಐ.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಶ್ರೀಕಾಂತ್ ಎ.ಪಿ. ಬಿನ್. ಜಿ.ಪ್ರಕಾಶ್, 29 ವರ್ಷ, ಅಂಗಡಿ ಬೀದಿ, ಹಳೆ ಪಂಚಾಯ್ತಿ ಆಫೀಸ್ ಹಿಂದೆ, ಅರಕೆರೆ ಪಟ್ಟಣ ರವರು ನೀಡಿದ ದೂರು ಏನೆಂದರೆ ದಿನಾಂಕ: 19-01-2013 ರಂದು ಅವರ ಬಾಬ್ತು ಹಿರೋಹೊಂಡ ಪ್ಯಾಷನ್ ಪ್ಲಸ್ ನಂ. ಕೆಎ-11-ಎಸ್-6954 ಮೋಟಾರ್ ಸೈಕಲ್ ನ್ನು ಪಿರ್ಯಾದಿಯವರು ಕಾವೇರಿ ನಸರ್ಿಂಗ ಹೋಂ, ಅಶೋಕ ನಗರ, 1 ನೇ ಕ್ರಾಸ್, ಮಂಡ್ಯ ನಗರ ಅಲ್ಲಿ ಪುಟ್ ಪಾತ್ ನಲ್ಲಿ ನಿಲ್ಲಿಸಿದ್ದು ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ, ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ, ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಹೆಂಗಸು ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 29-01-2013 ರಂದು ಪಿರ್ಯಾದಿ ಕೆಂಗಮ್ಮ ಕೋಂ. ಮರೀಗೌಡ, ಅಮಚಹಳ್ಳಿ ಗ್ರಾಮ, ಕೆ.ಆರ್. ಪೇಟಿ ತಾ. ರವರು ನೀಡಿದ ಪಿರ್ಯಾದು ಏನೆಂದರೆ ಅವರ ಮಗಳು ಮಂಜುಳ ಕೊಂ. ಸ್ವಾಮಿ, 25 ವರ್ಷ, ಅಮಚಹಳ್ಳಿ ರವರು ದಿನಾಂಕ: 25-01-2013 ರಂದು ಗಂಡನ ಮನೆಯಾದ ಮಾವಿನಕಟ್ಟೆ ಗ್ರಾಮಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ಗಂಡನ ಮನೆಗೆ ಹೋಗದೆ ಎಲ್ಲಿಯೋ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 457-380 ಐ.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಹೆಚ್.ಸಿ. ಸೋಮು ಬಿನ್. ಚನ್ನೇಗೌಡ, ಪಾಂಡವಪುರ ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ: 28-01-2013 ರಂದು ಯಾರೋ ಕಳ್ಳರು ಪಿರ್ಯಾದಿಯವರ ಪಂಪ್ ಸೆಟ್ ಮನೆಯ ಬಾಗಿಲು ಮುರಿದು 7 ಹೆಚ್.ಪಿ. ಮೋಟಾರ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ರೂ. 16,000/- ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 28-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 28-01-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನೆ/ಶಾಲೆ ಕಳ್ಳತನ ಪ್ರಕರಣಗಳು,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನೆ/ಶಾಲೆ ಕಳ್ಳತನ ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 457-380 ಐ.ಪಿ.ಸಿ.

ದಿನಾಂಕ: 28-01-13 ರಂದು ಪಿರ್ಯಾದಿ ಲೋಕೇಶ, ಹಳೆ ಕಿಕ್ಕೇರಿ ರಸ್ತೆ, ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮನೆಯ ಬಾಗಿಲು ತೆರೆದಿರುವುದು ಕಂಡಿತು ನಂತರ ಪಿರ್ಯಾದಿ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಒಳಬಾಗ ಹಾಲ್ನಲ್ಲಿ ಇಟ್ಟಿದ್ದ ಟಿವಿ ಷೋಕೆಸ್ ಹೊಡೆದು ಹಾಕಿದ್ದು ಮತ್ತು ಗೋಡೆ ಬೀರು ತೆಗೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದು ಬೀರುವನ್ನು ಯಾವುದೋ ಆಯುದದಿಂದ ಮೀಟಿ ಬೀರುವಿನಲ್ಲಿದ್ದ ಸುಮಾರು 22 ಸಾವಿರ ಬೆಲೆ ಬಾಳುವ 1 ಚಿನ್ನದ ಚೈನು. ಹಾಗು ಒಂದು ಜೊತೆ ಬೆಳ್ಳಿ ಚೈನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 457-380 ಐ.ಪಿ.ಸಿ.

ದಿನಾಂಕ: 28-01-13 ರಂದು ಪಿರ್ಯಾದಿ ಮಹದೇವೇಗೌಡ. ಎನ್. ಮುಖ್ಯೋಪಾಧ್ಯಾಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಡಾಲ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಕ್ಷರ ದಾಸೋಹ ಕೊಠಡಿಯ ಬಾಗಿಲಿಗೆ ಹಾಕಿದ್ದ ಬೀಗ ಹೊಡೆದು ಒಂದು ಸಿಲಿಂಡರ್ ಮತ್ತು ಒಂದು ಚಿಕ್ಕ ಗ್ಯಾಸ್ ಒಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾಗಿರುವ ವಸ್ತುಗಳ ಬೆಲೆ ಅಂದಾಜು 2250-00 ರೂಗಳಾಗಿದ್ದು, ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 28-01-2013 ರಂದು ಪಿರ್ಯಾದಿ ಮುಶ್ರಫ್ ಜಾನ್ ಕೋಂ. ರಫಿ ಮಹಮ್ಮದ್, 55 ವರ್ಷ, ಮುಖ್ಯ ಶಿಕ್ಷಕಿ, ಸರ್ಕಾರಿ  ಫ್ರೌಡ ಶಾಲೆ,  ಲಕ್ಷ್ಮೀಸಾಗರ ಗ್ರಾಮ,  ಮೇಲುಕೋಟೆ  ಹೋಬಳಿ ಪಾಂಡವಪುರ  ತಾಲ್ಲೋಕು, ಹಾಲಿ ವಾಸ ಮೈಸೂರು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 28-01-2013 ರಂದು ಪಿರ್ಯಾದಿಯವರು ಕೊಟ್ಟ ಲಿಖಿತ ದೂರೆನೆಂದರೆ ಸರ್ಕಾರಿ  ಪ್ರೌಢಶಾಲೆ ಲಕ್ಷ್ಮೀಸಾಗರ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆಂದು 7(ಏಳು) ಸಿಲಿಂಡರ್ ಗಳು  ಸರಬರಾಜು ಮಾಡಿದ್ದು ದಿನಾಂಕಃ 27-01-2013 ರ ಭಾನುವಾರ ರಾತ್ರಿ ಅಡುಗೆ ಮನೆಯ ಬೀಗ ಮತ್ತು ಬಾಗಿಲನ್ನು ಒಡೆದು ಎರಡು ಸಿಲಿಂಡರ್ಗಳು ಹಾಗೂ ಒಂದು ಸ್ಟೀಲ್ ಬಕೆಟ್, ಒಂದು ದೊಡ್ಡ ನೀರು ತುಂಬುವ ಡ್ರಮ್  [ ಎರಡು ಸಿಲಿಂಡರ್ ಗಳು ಭರ್ತಿಯಾಗಿದ್ದವು ] ಕಳುವಾಗಿದ್ದು  ದಿನಾಂಕಃ 28-01-2013 ರ ಬೆಳಿಗ್ಗೆ 08-15 ಕ್ಕೆ ನಮ್ಮ ಗಮನಕ್ಕೆ ಬಂದಿದ್ದು ಅವುಗಳನ್ನು ಹುಡುಕಿಸಿ ಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 143,504,355 ಕೂಡ 149 ಐ.ಪಿ.ಸಿ. ಹಾಗು 3 ಸಬ್ ಸಿಐಎಸ್ (11) ಎಸ್.ಸಿ./ಎಸ್.ಟಿ. ಕಾಯಿದೆ 1989.

       ದಿನಾಂಕ: 28-01-2013 ರಂದು ಪಿರ್ಯಾದಿ ದೇವಿರಮ್ಮ ಕೊಂ. ಶಿವಣ್ಣ, 40 ವರ್ಷ, ಪರಿಶಿಷ್ಟ ಜಾತಿ, ಕಡಿಲುವಾಗಿಲು ಗ್ರಾಮ ಪಂಚಾಯ್ತಿ ಸದಸ್ಯರು ಹಾಗು ಮಾಜೀ ಅಧ್ಯಕ್ಷರು, ಮಾದರಹಳ್ಳಿ ಗ್ರಾಮ ಪಂಚಾಯ್ತಿ, ಮದ್ದೂರು ತಾಲ್ಲೂಕು ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಾಗಿದು, ತಮ್ಮ ಕ್ಷೇತ್ರದಲ್ಲಿನ ಸ್ವಚ್ಚತೆ ಮತ್ತು ನೈರ್ಮಲತೆಯ ಪರಿಶೀಲನೆಗಾಗಿ ದಿನಾಂಕ;28-01-13 ರಂದು ಬೆಳಿಗ್ಗೆ 8.30 ಗಂಟೆಯಿಂದ ಬೆಳಿಗ್ಗೆ 9.00 ಗಂಟೆ ಸಮುದಾಯದಲ್ಲಿ ಕಡಿಲುವಾಗಿಲು ಗ್ರಾಮದ ಮಸಣಮ್ಮ ದೇವಸ್ಥಾನದ ಬೀದಿಯಲ್ಲಿ ಪರಿಶೀಲನೆಗೆ ಹೋಗುತ್ತಿದ್ದಾಗ ಆರೋಪಿಗಳಾದ 1]ಬೋರಯ್ಯ ಬಿನ್. ಚಿಕ್ಕಬೋರಯ್ಯ ಇತರೆ 6 ಜನರು ಎಲ್ಲರೂ ಕಡಿಲುವಾಗಿಲು ಗ್ರಾಮ, ಮದ್ದೂರು ತಾಲ್ಲೂಕು, ರವರುಗಳು ಪಿರ್ಯಾದಿಯವರನ್ನು ಉದ್ದೆಶಿಸಿ ಅವಾಚ್ಯವಾಗಿ ಬೈಯ್ದು ಚಪ್ಪಲಿ ತೋರಿಸಿ ಜಾತಿ ನಿಂದನೆ ಮಾಡಿರುತ್ತಾರೆ ಎಂಬಿತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 27-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-01-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ಅಪಹರಣ ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವಾಹನ ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ರಸ್ತೆ ಅಪಘಾತ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 279-304(ಎ) ಐಪಿಸಿ ಕೂಡ 187 ಐ.ಎಂ.ವಿ. ಕಾಯಿದೆ.

ದಿನಾಂಕ: 27-01-2013 ರಂದು ಪಿರ್ಯಾದಿ ಎನ್.ಆನಂದ ಬಿನ್ ನಟರಾಜು ಮಾರುತಿನಗರ ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. ಕೆಎ-11 ಟಿ-1634 ಟ್ರಾಕ್ಟರ್ ಚಾಲಕ (ಹೆಸರು ವಿಳಾಸ ತಿಳಿದಿಲ್ಲ) ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಹಿಂದಿನಿಂದ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ರಾಜೇಶನ ತಲೆಗೆ ತೀವ್ರ ತರಹದ ಪೆಟ್ಟಾಗಿ ಕೆ.ಆರ್.ಪೇಟೆ ಆಸ್ಪತ್ರೆಗೆ ಸೇರಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಆದ್ದರಿಂದ ಅಪಘಾತ ಉಂಟು ಮಾಡಿದ ಕೆಎ-11 ಟಿ-1634 ರ ಟಾಕ್ಟರ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಕೋರಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  



ಅಪಹರಣ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 363-366 (ಎ) ಐ.ಪಿ.ಸಿ.

       ದಿನಾಂಕ: 27-01-2013 ರಂದು ಪಿರ್ಯಾದಿ ಜಯಮ್ಮ ಕೋಂ. ರಮೇಶಚಾರಿ. ಹೊಸಕನ್ನಂಬಾಡಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ಅಂಗಡಿಯಲ್ಲಿ ಸಾಮಾನು ತರಲು ಹೋಗಿದ್ದಾಗ, ನೆಲಮನೆ ಗ್ರಾಮದ ಆರೋಪಿ ಶ್ರೀಕಂಠ ಬಿನ್ ಸುಬ್ಬಾಚಾರಿ, ನೆಲಮನೆ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ,  ಕಾನೂನು ರೀತ್ಯಾ ಕ್ರಮ ಕೈಗೊಂಡು, ನನ್ನ ಮಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

        ದಿನಾಂಕ: 27-01-2013 ರಂದು ಪಿರ್ಯಾದಿ ಪಾಲಲೋಚನ ಬಿನ್. ಗಂಗಾಧರಯ್ಯ, 4 ನೇ ಕ್ರಾಸ್, ಸಿದ್ದಾರ್ಥನಗರ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ಅಂತಿಮ ಬಿ.ಎ. ವಿದ್ಯಾಥರ್ಿನಿ ರವರು ದಿನಾಂಕ:: 22-01-2013 ರಂದು ಸಂಜೆ 04-00 ಗಂಟೆೆಯಲ್ಲಿ ಮಳವಳ್ಳಿ ಟೌನ್ ನಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 27-01-2013 ರಂದು ಪಿರ್ಯಾದಿ ನಾಗರಾಜು ಬಿನ್. ರಾಮಣ್ಣ ಮಂಡ್ಯ ಸಿಟಿ, ಗೂಬೇಹಳ್ಳ, 7 ನೇ ಕ್ರಾಸ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗಳು ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುವ ನಮ್ಮ ಮಗಳು ಅನಿತಾಳನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ವಾಹನ ಕಳವು ಪ್ರಕರಣ :

 ಹಲಗೂರು ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 379 ಐ.ಪಿ.ಸಿ.

ದಿನಾಂಕ: 27-01-2013 ರಂದು ಪಿರ್ಯಾದಿ ಸಿ.ಎಸ್.ಡಾಲಿ ಬಿನ್ ಸುಬ್ಬಯ್ಯ, ಹೆಚ್.ಎಸ್.ಆರ್ ಲೇಔಟ್, ಮಡಿವಾಳ ಬೆಂಗಳೂರು-79 ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ತನ್ನ ಬಾಬ್ತು ಕೆಎ-51, ಜಡ್-7839 ಮಹೀಂದ್ರಾ ಜೈಲೋ ಕಾರಿನಲ್ಲಿ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದು ಕಾರ್ ನಿಲ್ಲಿಸಿ ಕಾವೇರಿ ನದಿಯ ಹೊಳೆ ಕಡೆ ಹೋಗಿದ್ದಾಗ ಯಾರೋ ದುಷ್ಕಮರ್ಿಗಳು ಕಾರಿನ ಗ್ಲಾಸ್ಗಳನ್ನು ಹೊಡೆದು ಕಾರಿನಲ್ಲಿದ್ದ ಮೊಬೈಲ್ಗಳು, ಕ್ರೆಡಿಟ್ ಕಾಡರ್್ಗಳು, ಡೆಬಿಟ್ ಕಾಡರ್್ಗಳು, ಆರ್.ಸಿ ಬುಕ್, ಡಿ.ಎಲ್, ನಗದು 13,500/- ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 27-01-2013 ರಂದು ಪಿರ್ಯಾದಿ ವಿ.ಎಂ ಗಂಗಾಧರನ್ ಬಿನ್ ಮೋಹನ್, ಸಿವಿಲ್ ಇಂಜಿನಿಯರ್, ಮದುರೈ, ತಮಿಳುನಾಡು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಶಿವನಸಮುದ್ರದಲ್ಲಿ ಬಿ.ಡಬ್ಯೂ.ಎಸ್.ಎಸ್.ಬಿ.  ಕಾಮಗಾರಿಯನ್ನು ಕಂಟ್ರಾಕ್ಟ ಪಡೆದುಕೊಂಡು ನಿರ್ವಹಿಸುತ್ತಿದ್ದು, ಇವರ ಬಳಿ ಕೂಲಿಕೆಲಸ ಮಾಡಿಕೊಂಡಿದ್ದ ಲಿಂಗುಡು ಪ್ರಜಾ @ ಕೃಷ್ಣ, ಅಸ್ಸಾಂ ರಾಜ್ಯ ರವರು ರಾತ್ರಿವೇಳೆಯಲ್ಲಿ ಮಲವಿಸರ್ಜನೆಗೆ ಹೋಗಿ ನೀರು ತೆಗೆದುಕೊಳ್ಳಲು ಚಾನೆಲ್ಗೆ ಹೋದಾಗ ಕಾಲು ಜಾರಿ ಕೊಚ್ಚಿಕೊಂಡು ಸತ್ತುಹೋಗಿರುತ್ತಾನೆ. ಆದ್ದರಿಂದ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರುನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

Press Note MDY RL 27012013


ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ದಿನಾಂಕಃ 27-01-2013.

ಪತ್ರಿಕಾ ಪ್ರಕಟಣೆ 

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ  49/2012 ರ ಕೊಲೆ ಪ್ರಕರಣದ ಪತ್ತೆ ಬಗ್ಗೆ.





     ದಿನಾಂಕಃ 22-04-2011 ರಂದು ಬೆಳಿಗ್ಗೆ ಮಂಡ್ಯ ತಾಲ್ಲೂಕು ಹಳೇಬೂದನೂರು ಗ್ರಾಮದ ಹತ್ತಿರ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಿಂದ ಸುಮಾರು 15 ಅಡಿ ಅಂತರದಲ್ಲಿ ಹಳೇಬೂದನೂರು ಗ್ರಾಮದ ರತ್ನಮ್ಮರವರ ಜಮೀನು ಕಡೆಗಾದಂತೆ ಖಾಲಿ ಜಾಗದಲ್ಲಿ ಒಂದು ಆಪರಿಚಿತ ಗಂಡಸಿನ ಶವ ಬಿದ್ದಿದ್ದು. ಎಡಗೈನಲ್ಲಿ ರೂಪ ಎಂಬ ಹಚ್ಚೆ ಇರುತ್ತದೆ.  ಶವವನ್ನು ನೋಡಿದರೆ ಸಾವಿನ ಬಗ್ಗೆ ಅನುಮಾನವಿರುತ್ತದೆ ಈ ಬಗ್ಗೆ ತಾವು ಸ್ಥಳಕ್ಕೆ ಬಂದು ಕ್ರಮ ಜರುಗಿಸಬೇಕೆಂದು ದಿನಾಂಕ: 22-4-2011 ರಂದು  ಹಳೇಬೂದೂರು ಗ್ರಾಮದ ವಾಸಿ ಶ್ರೀಮಾನ್ ಟೀ ಸ್ಟಾಲ್ ಮಾಲೀಕ ಮಾದೇಶ ಬಿನ್ ಲೇಟ್ ಸಿದ್ದಯ್ಯ ರವರು ಮಂಡ್ಯ ಗ್ರಾಮಾಂತರ ಠಾಣೆಗೆ ನೀಡಿದ ಪಿಯರ್ಾದುವಿನ ಮೇರೆಗೆ  ಯು.ಡಿ.ಆರ್. ನಂ. 14/2011 ಕಲಂ 174 (ಸಿ) ಸಿ.ಆರ್.ಪಿ.ಸಿ ರೀತ್ಯ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ವೈದ್ಯರ ಶವ ಪರೀಕ್ಷೆಯ ನಂತರ ಸದರಿ ಪ್ರಕರಣವನ್ನು ಕೊಲೆ ಪ್ರಕರಣವೆಂದು ದಾಖಲಿಸಿ ತನಿಖೆಯನ್ನು ಮುಂದುವರೆಸಿರುತ್ತಾರೆ. 

      ತನಿಖೆಯಲ್ಲಿ ಮೃತ ಅಪರಿಚಿತ ಗಂಡಸಿನ ಶವವು ಬೆಂಗಳೂರು ಯಶವಂತಪುರ ಪೊಲೀಸ್ ಠಾಣಾ ಮೊ.ನಂ. 141/11 ಕಲಂ.ಮನುಷ್ಯ ಕಾಣೆಯಾದ ಪ್ರಕರಣದಲ್ಲಿ ಕಾಣೆಯಾಗಿರುವ ವ್ಯಕ್ತಿ ಮಲ್ಲೇಶ್ರವರ ಚಹರೆ ಗುರುತಿಗೆ ಹೋಲಿಕೆಯಾಗಿದ್ದು ಆ ಮುಖಾಂತರ ಕಾಣೆಯಾಗಿರುವ ವ್ಯಕ್ತಿ ಮಲ್ಲೇಶರವರ ವಾರಸುದಾರರ ದೂರವಾಣಿ ನಂಬರ್ನ್ನು ಪಡೆದುಕೊಂಡು ಕಾಣೆಯಾದ ಮಲ್ಲೇಶನ ತಂದೆ ಶಿವಲಿಂಗಯ್ಯ, ನಿವೃತ್ತ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಬೆಂಗಳೂರು ರವರಿಗೆ ಮೃತ ಅಪರಿಚಿತ ಗಂಡಸಿನ ಚಹರೆ ಮಾಹಿತಿ ತಿಳಿಸಲಾಯಿತು. ನಂತರ ಮೃತನ  ತಂದೆ ಮತ್ತು ಸಂಬಂಧಿಕರಿಂದ ಗುರುತಿಸಿ, ಮೃತ ಮಲ್ಲೇಶ ಬಿನ್ ಸಿ.ಎಲ್.ಶಿವಲಿಂಗಯ್ಯ 33ವರ್ಷ, ಒಕ್ಕಲಿಗರು, ನಂ. 81/48, 10 ನೇ ಮೈನ್, 1 ನೇ ಸ್ಟೇಜ್, 2ನೇ ಪೇಸ್, ಗೋಕುಲ್ ಎಕ್ಸ್ಟೆಷನ್. ಮತ್ತಿಕೆರೆ ಬೆಂಗಳೂರು-54 ನಿವಾಸಿಯಾಗಿರುವುದು ಪತ್ತೆಯಾಗಿರುತ್ತದೆ.

     ಮಾನ್ಯ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಾಗಿದ್ದ ಶ್ರೀ. ಕೌಶಲೇಂದ್ರಕುಮಾರ್ ಐಪಿಎಸ್ ರವರ ಆದೇಶದಂತೆ ದಿ:01-12-2012 ರಂದು ಮಂಡ್ಯ ಗ್ರಾಮಾಂತರ ವೃತ್ತದ ಪ್ರಬಾರವನ್ನು ಪೊಲೀಸ್ ಇನ್ಸ್ಪೆಕ್ಟರ್ ಎನ್.ಸಿ.ನಾಗೇಗೌಡರವರು ವಹಿಸಿಕೊಂಡು, ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಎ.ಎನ್. ರಾಜಣ್ಣ ರವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಮುಂದುವರೆಸಿ, ದಿನಾಂಕಃ 25-01-2013 ರಂದು ಮೃತನ ಸ್ವಂತ ಮಂಜುನಾಥ ಎಂಬುವವನ್ನು ವಿಚಾರಣೆಗೊಳಪಡಿಸಲಾಗಿ, ಆತನು  ಹಳೇ ದ್ವೇಷ ಹಾಗು ತಂದೆ ಮಾಡಿದ ಆಸ್ತಿ ಸಂಪೂರ್ಣ ತಾನೆ ಅನುಭವಿಸಬೇಕೆಂಬ ದುರಾಸೆಯಿಂದ ಈ ಕೆಳಕಂಡ ತನ್ನ ಸ್ನೇಹಿತರೊಡಗೂಡಿ ಮಲ್ಲೇಶನನ್ನು ಕೊಲೆ ಮಾಡುವ ಸಂಚು ರೂಪಿಸಿ, ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾನೆ.  ಈತನ ಸುಳಿವಿನ ಮೇರೆಗೆ ಈ ಕೆಳಕಂಡ ಎಲ್ಲ ಆರೋಪಿಗಳನ್ನು ಅ ದಿನ ರಾತ್ರಿಯೇ ತನಿಖಾದಿಕಾರಿಗಳು ದಸ್ತಗಿರಿ ಮಾಡಿರುತ್ತಾರೆ. 

ಎ1] ಮಂಜುನಾಥ . ಎಲ್,ಎಸ್. ಬಿನ್ ಎಲ್. ಶಿವಲಿಂಗಯ್ಯ, 25 ವರ್ಷ, ಸಾಪ್ಟವೇರ್ ಇಂಜಿನಿಯರ್. ನಂ. 81/48,
       10 ನೇ ಮೈನ್, 1 ನೇ ಸ್ಟೇಜ್, 2ನೇ ಪೇಸ್, ಗೋಕುಲ್ ಎಕ್ಸ್ಟೆಷನ್. ಮತ್ತಿಕೆರೆ (ಯಶವಂತಪುರ ) ಬೆಂಗಳೂರು-54
ಎ2] ಬಸವರಾಜು. ಎನ್. ಕೆ. ಬಿನ್ ಬಿ. ಕೆ  ನಾಗಪ್ಪ, 25 ವರ್ಷ, ಡ್ರೈವರ್ ಕೆಲಸ, ನಂ-139/ಬಿ, ರೈಲ್ವೇ   ಕ್ವಾಟ್ರಾಸ್,    
       ಯಶವಂತಪುರ, ಬೆಂಗಳೂರು-22
ಎ3] ಶ್ರೀಕಾಂತ .ಎಸ್. ಬಿನ್ ಲೇಟ್ ಶ್ರೀನಿವಾಸ್ .ಟಿ. , 25 ವರ್ಷ, ಅಲ್ಲ್ಯೂಮಿನಿಯಂ ಫ್ಯಾಬಿಕೇಶನ್ , ನಂ. 746,
    4 ನೇ ಕ್ರಾಸ್, ಗೋಕುಲ್ ಮೊದಲನೆ ಹಂತ, 2 ನೇ ಫ್ಯಾಸ್, ಗೋಕುಲ್, ಯಶವಂತಪುರ ಬೆಂಗಳೂರು-54
ಎ4] ಸಂತೋಷ ಬಿ.ಎ. ಬಿನ್ ಆನಂದಪ್ಪ , 27 ವರ್ಷ, ಕಾರು ಚಾಲಕ ವೃತ್ತಿ, ನಂ.45/3, 11 ನೇ ಕ್ರಾಸ್, 2ನೇ ಮೆಯಿನ್ ರಸ್ತೆ,
       ಎಲ್.ಸಿ.ಆರ್. ಸ್ಕೂಲ್ ಎದುರು, ಯಶವಂತಪುರ ಬೆಂಗಳೂರು,

       ಮೇಲ್ಕಂಡವರುಗಳು ಮಲ್ಲೇಶನನ್ನು ಕೊಲೆ ಮಾಡಲು ಸಂಚು ರೂಪಿಸಿ ದಿನಾಂಕ: 19-04-2011 ರಂದು ಬೆಂಗಳೂರಿನಿಂದ ಮೈಸೂರು ಕಡೆಗೆ ನಂ. ಕೆಎ-05-ಎನ್-86 ರ ಮಾರುತ್ತಿ ಎಸ್ಟೀಂ ಕಾರಿನಲ್ಲಿ ಮೃತ ಮಲ್ಲೇಶನನ್ನು ಕರೆದುಕೊಂಡು ಬಂದು ಬಲಮುರಿ, ಶ್ರೀರಂಗಪಟ್ಟಣ , ಮೈಸೂರು ಕಡೆಗಳಲ್ಲಿ ಸುತ್ತಾಡಿ ದಿನಾಂಕ: 21/22-04-2011 ರಂದು ಮದ್ಯರಾತ್ರಿ ಕೊಲೆ ಮಾಡಿ, ಕೊಲೆಯನ್ನು ಮರೆಮಾಚಲು ಶವವನ್ನು ಮಂಡ್ಯ ತಾಲ್ಲೂಕು ಹಳೇಬೂದನೂರು ಗ್ರಾಮದ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಿಂದ ಸುಮಾರು 15 ಅಡಿ ಅಂತರದಲ್ಲಿ ಹಳೇಬೂದನೂರು ಗ್ರಾಮದ ರತ್ನಮ್ಮ ರವರ ಜಮೀನು ಕಡೆಗಾದಂತೆ ಬಿಸಾಡಿ ಹೋಗಿದ್ದಾಗಿ ತಿಳಿಸಿರುತ್ತಾರೆ.  ನಾಲ್ಕು ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತದೆ.

ಮೇಲ್ಕಂಡ ಪ್ರಕರಣದ ಪತ್ತೆ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ವೃತ್ತ ನಿರೀಕ್ಷರಾದ ಶ್ರೀ. ಎನ್.ಸಿ.ನಾಗೇಗೌಡ, ಪ್ರೊಬೇಷನರಿ ಪಿ.ಎಸ್.ಐ. ಬ್ಯಾಟರಾಯಗೌಡ, ಸಿಬ್ಬಂದಿಯವರಾದ ಹೇಮಂತಕುಮಾರ್. ರಘುಪ್ರಕಾಶ್, ಮಹೇಶ, ರಾಮಣ್ಣ, ಆನಂದ, ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿಸಿರುತ್ತಾರೆ. 

Press Note Date:27-01-2013


                                                                                            ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
                                                ಮಂಡ್ಯ ಜಿಲ್ಲೆ, ದಿನಾಂಕಃ 27-01-2013.
ಪತ್ರಿಕಾ ಪ್ರಕಟಣೆ

      ದಿನಾಂಕ 06-09-12 ರಂದು ಶ್ರೀ. ಎಸ್.ಜಿ. ಕಾಳೇಗೌಡ ಬಿನ್ ಗೌಡೇಗೌಡ, ಸುಂಕಾತೊಣ್ಣೂರು ಗ್ರಾಮ, ಪಾಂಡವಪುರ ತಾಲ್ಲೋಕು ರವರು ಪಾಂಡವಪುರ ಠಾಣೆಗೆ ಹಾಜರಾಗಿ ತನ್ನ ತಂಗಿಯಾದ ಸುನಂದಾಳು ದಿನಾಂಕ 05-09-12 ರಂದು ಸಂಜೆ 5-00 ಗಂಟೆಯಿಂದ ಕಾಣುತ್ತಿಲ್ಲವೆಂದು ನೀಡಿದ ಪಿಯರ್ಾದುವಿನ ಮೇರೆಗೆ ಹೆಂಗಸು ಕಾಣೆಯಾಗಿದ್ದಾಳೆ ರೀತ್ಯಾ ಪ್ರಕರಣವನ್ನು ಪಾಂಡವಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. 

    ಸದರಿ ಪ್ರಕರಣದ ತನಿಖಾ ಕಾಲದಲ್ಲಿ  ಪಾಂಡವಪುರದ ಠಾಣೆಯ ಪಿಎಸ್ಐ ಶ್ರೀ. ಕೆ.ಮಂಜು ರವರು ಕಾಣೆಯಾದ ಶ್ರೀಮತಿ. ಸುನಂದಳು ಉಪಯೋಗಿಸುತ್ತಿದ್ದ ಮೊಬೈಲ್ನ ಐ.ಎಂ.ಇ.ಐ ನಂಬರ್ನ್ನು ಪಡೆದುಕೊಂಡು, ಅ ಮೊಬೈಲ್ನಲ್ಲಿ ಸಿಮ್ ಅಳವಡಿಸಿಕೊಂಡು ಉಪಯೋಗಿಸುತ್ತಿದ್ದ ಬಗ್ಗೆ ಕಾಲ್ ಡಿಟೈಲ್ಸ್ನ್ನು ಪಡೆದಿದ್ದು, ಮೇಲ್ಕಂಡ ಕಾಲ್ ಡಿಟೈಲ್ನ ಆದಾರದ ಮೇರೆಗೆ ಅದನ್ನು ಉಪಯೋಗಿಸಿರುವ ಸಿಮ್ ಅಸಾಮಿಯಾದ ಮಹೇಂದ್ರ ಬಿನ್ ನಾಗಣ್ಣ @ ನಾಗರಾಜು, ಚಿಕ್ಕಾಡೆ ಗ್ರಾಮ ರವರನ್ನು ದಿನಾಂಕಃ 24-01-2013 ರಂದು ಪತ್ತೆ ಹಚ್ಚಿ ಕರೆದುಕೊಂಡು ಬಂದು ಮೊಬೈಲ್ ಬಗ್ಗೆ ವಿಚಾರ ಮಾಡಲಾಗಿ ಸದರಿಯವರು ತಮ್ಮ ಸ್ವ ಇಚ್ಚಾ ಹೇಳಿಕೆಯಲ್ಲಿ ತನಗೆ ಹಾಗೂ ಆತನ ಸ್ನೇಹಿತ ವಿನೋದನಿಗೆ ಸಾಲ ಇರುತ್ತದೆ ಹಾಗೂ ಕುಡಿಯುವ ಹಾಗು ಹುಡುಗಿಯರ ಚಟ ಇದ್ದು ಸಾಲಗಾರರ ಕಾಟ ಜಾಸ್ತಿಯಾಗಿದ್ದರಿಂದಾಗಿ ಮೇಲ್ಕಂಡ ಸುನಂದಳು ಒಬ್ಬಳೆ ಪ್ರತಿ ದಿವಸ ಸಂಜೆ ಗದ್ದೆಯ ಕಡೆಗೆ ಒಬ್ಳಳೆ ಹೋಗಿ ಬರುತ್ತಿದುದ್ದನ್ನು ಹಾಗೂ ಅವಳ ಕತ್ತಿನಲ್ಲಿ ಯಾವಾಗಲು ಚಿನ್ನದ ಮಾಂಗಲ್ಯದ ಸರ ಇದ್ದುದನ್ನು ನೋಡಿದ್ದ ನಾವು ಹೇಗಾದರು ಮಾಡಿ ಇವಳನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ, ಕೊಲೆ ಮಾಡಿ ಸರವನ್ನು ಮಾರಾಟ ಮಾಡಿ ಸಾಲ ತೀರಿಸಿಕೊಳ್ಳೋಣ ಎಂದು ತಿಮರ್ಾನಿಸಿ ಅದರಂತೆ ದಿನಾಂಕ 05-09-12 ರಂದು ಸುನಂದ ಗದ್ದೆಯ ಕಡೆಗೆ ಹೋದಾಗ ಹಿಂಬಾಲಿಸಿಕೊಂಡು ಹೋಗಿ ಪುಸಲಾಯಿಸಿ ಕಬ್ಬಿನ ಗದ್ದೆಯ ಕಡೆಗೆ ಕರೆದುಕೊಂಡು ಹೋಗಿ ಆಕೆಯನ್ನು ಕೊಲೆ ಮಾಡಿ ಹೆಣವನ್ನು ಹಳ್ಳದ ನೀರಿಗೆ ಬಿಸಾಡಿ ಅವಳ ಬಳಿ ಇದ್ದ ಒಂದು ಮೊಬೈಲ್ ಹ್ಯಾಂಡ್ಸೆಟ್ ಹಾಗೂ 500/- ರೂ ಹಣವನ್ನು ತಾನು ಇಟ್ಟುಕೊಂಡಿದ್ದಾಗಿ ಮಾಂಗಲ್ಯದ ಸರವನ್ನು ವಿನೋದ ಇಟ್ಟುಕೊಂಡಿದ್ದು ನಂತರ ಅದನ್ನು ಮಾರಾಟ ಮಾಡಲು ಪಾಂಡವಪುರದ ಸೇಟು ಬಳಿ ಹೋದಾಗ ಅದು ನಕಲಿ ಎಂದು ತಿಳಿದ ಮೇಲೆ ಅದನ್ನು ವಿನೋದನ ಮನೆಯಲ್ಲಿ ಇಟ್ಟುಕೊಂಡಿದ್ದು ಮೊಬೈಲ್ ತನ್ನ ಬಳಿ ಇರುವುದಾಗಿ ತಿಳಿಸಿರುತ್ತಾನೆ.

ನಂತರ ಸದರಿ ಪ್ರಕರಣದಲ್ಲಿ ಈಗಾಗಲೇ ದಾಖಲಾಗಿರುವ ಮೊ.ನಂ. 323/2012 ಕಲಂ ಹೆಂಗಸು ಕಾಣೆಯಾಗಿದ್ದಾಳೆ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ತಯಾರಿಸಿ ಹೆಂಗಸು ಕಾಣೆಯಾಗಿದ್ದಾಳೆ ಎಂಬದರ ಬದಲು ಕಲಂ 302, 201, 404 ಕೂಡ 34 ಐಪಿಸಿಯನ್ನಾಗಿ ಬದಲಾವಣೆ ಮಾಡಿಕೊಂಡಿರುವ ಬಗ್ಗೆ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಗು ಹಿರಿಯ ಅದಿಕಾರಿಗಳಿಗೆ ವರದಿಯನ್ನು ಸಲ್ಲಿಸಿಕೊಂಡು ತನಿಖೆ ಮುಂದುವರೆಸಿ,  ಆರೋಪಿ ಮಹೇಂದ್ರನನ್ನು ದಸ್ತಗಿರಿ ಮಾಡಿ, ಆತನು ತನ್ನ ಮನೆಯಲ್ಲಿಟ್ಟಿದ್ದ ಡ್ಯೂಯಲ್ ಸಿಮ್ನ ಒಂದು ಕಾರ್ಬನ್ ಮೊಬೈಲ್ ಅಮಾನತ್ತು ಪಡಿಸಿಕೊಂಡಿರುತ್ತದೆ.      
                                                        
ಮತ್ತೊಬ್ಬ ಆರೋಪಿ ವಿನೋದ ಎಂಬುವವನ್ನು ಸಹ ದಿನಾಂಕಃ 24-01-2013 ರಂದು ಮದ್ಯಾಹ್ನ ದಸ್ತಗಿರಿ ಮಾಡಿ, ಕೂಲಂಕುಶವಾಗಿ ವಿಚಾರ ಮಾಡಿ ಆತನು ನೀಡಿದ ಸ್ವ ಇಚ್ಚಾ ಹೇಳಿಕೆಯನ್ನು ಪಡೆದುಕೊಂಡಿದ್ದು, ಆತನು ಸಹ ಈ ಕೊಲೆಯಲ್ಲಿ ಬಾಗಿಯಾಗಿರುವುದಾಗಿ ಹಾಗೂ ತನ್ನ ಮನೆಯ ಅಟ್ಟದ ಮೇಲೆ ಮೃತೆಯ ತಾಳಿ ಸಮೇತ ಇರುವ ಚೈನ್ನ್ನು ಇಟ್ಟಿರುವುದಾಗಿ ತಿಳಿಸಿ, ಅ ವಾಸದ ಮನೆಗೆ ಕರೆದುಕೊಂಡು ಹೋಗಿ ತಮ್ಮ ಮನೆಯ ಅಟ್ಟದ ಮೇಲೆ ಇಟ್ಟಿದ್ದ ತಾಳಿ ಸಮೇತ ಇರುವ ಮಾಂಗಲ್ಯದ ಸರವನ್ನು ಹಾಜರು ಪಡಿಸಿದ್ದನ್ನು ತನಿಖಾದಿಕಾರಿಗಳು ಅಮಾನತ್ತು ಪಡಿಸಿಕೊಂಡಿರುತ್ತಾರೆ.   

    ಸದರಿ ಪ್ರಕರಣದಲ್ಲಿ ಆರೋಪಿತರು ತೋರಿಸಿದ ಕೃತ್ಯ ನಡೆದ ಜಾಗಕ್ಕೆ ತನಿಖಾದಿಕಾರಿಗಳು ಸಿಬ್ಬಂದಿಗಳ ಸಮೇತ ತೆರಳಿ ಮೃತೆಯ ಶವದ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ. ಈವರೆಗೂ ಮೇಲ್ಕಂಡ ಮೃತೆ ಸುನಂದಳ ಶವ ದೊರಕಿರುವುದಿಲ್ಲ. ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಆದೇಶಿಸಿರುತ್ತದೆ.  

      ನಾಲ್ಕು ತಿಂಗಳಿನಿಂದ ಪತ್ತೆಯಾಗದೇ ಇದ್ದ ಮೇಲ್ಕಂಡ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪಾಂಡವಪುರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಕೆ.ಎಂ.ಮಂಜು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.  

DAILY CRIME REPORT DATED : 26-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-01-2013 ರಂದು ಒಟ್ಟು 08 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು,  2 ಕಳ್ಳತನ ಪ್ರಕರಣಗಳು, 1 ವಾಹನ ಕಳವು ಪ್ರಕರಣ ಹಾಗು 3 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ರಸ್ತೆ ಅಪಘಾತ ಪ್ರಕರಣಗಳು :

1. ಹಲಗೂರು ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 279, 337, 304(ಎ) ಐ.ಪಿ.ಸಿ.

ದಿನಾಂಕ: 26-01-2013 ರಂದು ಪಿರ್ಯಾದಿ ಬಿ.ಟಿ.ರಾಜಣ್ಣ ಬಿನ್ ತಮ್ಮೇಗೌಡ, ಬಾಣಸಮುದ್ರ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮೋಟಾರ್ ಸೈಕಲ್ ಸವಾರ ಮಹೇಶ್ ಕುಮಾರ್, ಡಿ,ಹಲಸಹಳ್ಳಿ ಗ್ರಾಮ ರವರು ತಮ್ಮ ಮೋಟಾರ್ ಸೈಕಲ್ ನಂ. ಕೆಎ-11, ಯು-1847 ಹೊಂಡಾ ಸೈನ್ ನ್ನ ಅತಿವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ವಾಕಿಂಗ್ ಮಾಡಿಕೊಂಡು ಹೋಗುತ್ತಿದ್ದ ನಂಜುಂಡೇಗೌಡರವರಿಗೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಕೆಳಗೆ ಬಿದ್ದಾಗ ಬಲ ಕಪಾಲಕ್ಕೆ, ಬಲ ಕಿಬ್ಬರಿಗೆ ಮತ್ತು ಬಲ ಮಂಡಿಗೆ ಏಟು ಬಿದ್ದು ಮೂಗು, ಬಾಯಿ ಮತ್ತು ಬಲ ಕಪಾಲ ಹೊಡೆದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 05/13 ಕಲಂ. 279, 304 (ಎ) ಐ.ಪಿ.ಸಿ.

ದಿನಾಂಕ: 26-01-2013 ರಂದು ಪಿರ್ಯಾದಿ ವೀರೇಶ್ ಬಿನ್. ಮಹದೇವಪ್ಪ, 27ವರ್ಷ,  ಕಾರು ಚಾಲಕ, ಬೆಂಡರವಾಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾಜುಬಿನ್ ಗುರುಮಲ್ಲಪ್ಪ, 35ವರ್ಷ, ಕೆ.ಎ.05-ಹೆಚ್ಆರ್-1047ಮೋಟಾರ್ ಬೈಕ್ ಸವಾರ, ಬೆಂಡರವಾಡಿ ಗ್ರಾಮ, ರಸ್ತೆಯಲ್ಲಿ ಚಲಿಸುತ್ತಿದ್ದಾಗ ಹಳ್ಳವನ್ನು ತಪ್ಪಿಸುವ ಸಲುವಾಗಿ ಬೈಕ್ನ್ನು ಪಕ್ಕಕ್ಕೆ ಎಳೆದಾಗ ಬೈಕ್ ಹಿಡಿತ ತಪ್ಪಿ ಕೆಳಕ್ಕೆ ಬಿದ್ದು ಬೈಕ್ನ್ನು ಓಡಿಸುತ್ತಿದ್ದ ರಾಜುವಿನ ತಲೆಗೆ ರಕ್ತಗಾಯವಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು. ಚಿಕಿತ್ಸೆ ದುಬಾರಿ ಆದ್ದರಿಂದ ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸೋಣವೆಂದು ರಾಜುವನ್ನು ಸದರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ರಾಜು  ಮೃತಪಟ್ಟಿರುತ್ತಾನೆಂದು ಮೃತನ ಅಣ್ಣ ಶಿವಮಲ್ಲಪ್ಪ ಬಿನ್ ಗುರುಮಲ್ಲಪ್ಪ ರವರು ಈ ದಿನ ಗಂಟೆ ಸಮಯದಲ್ಲಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಪ್ರಕರಣದಲ್ಲಿ ಕಲಂ:304(ಎ) ಐ.ಪಿ.ಸಿಯನ್ನು ಅಳವಡಿಸಿಕೊಂಡು ತನಿಖೆ ಕೈಗೊಂಡಿರುವ ಬಗ್ಗೆ ತುತರ್ುವರದಿ.


ಕಳ್ಳತನ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 457,380 ಐ.ಪಿ.ಸಿ.

       ದಿನಾಂಕ: 26-01-2013 ರಂದು ಪಿರ್ಯಾದಿ ಜಯಮಾಲ ಬಿನ್. ರಾಚಯ್ಯ, 36ವರ್ಷ,ಅಂಗನವಾಡಿ ಕಾರ್ಯಕತರ್ೆ, ಗೆಂಡೆಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಂಗನವಾಡಿಯ ಬಾಗಿಲ ಬೀಗ ಮುರಿದು ಒಳಗೆ ಪ್ರವೇಶ ಮಾಡಿ, ಅಡುಗೆ ಮಾಡಲು ಉಪಯೋಗಿಸುತ್ತಿದ್ದ ಇಂಡೇನ್ ಗ್ಯಾಸ್ ಸಿಲಿಂಡರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರ. ಇದರ ಬೆಲೆ 2800/- ರೂ. ಆಗುತ್ತದೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457,454,380 ಐ.ಪಿ.ಸಿ.

      ದಿನಾಂಕ: 26-01-2013 ರಂದು ಪಿರ್ಯಾದಿ ಕು. ಸುಮತಿ. ಎನ್.ಎಂ ಬಿನ್. ಮಾದೇಗೌಡ , ಉಪಪ್ರಾಂಶುಪಾಲರು, ಸಕರ್ಾರಿ ಪದವಿ ಪೂರ್ವ ಕಾಲೇಜು, ಕೊಡಿಯಾಲ ಗ್ರಾಮ, ಹಾಲಿ ವಾಸಃ ನೇರಲಕೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಅಡುಗೆ ಮನೆಯ ಕಿಟಕಿಯ ಎರಡು ಸರಳುಗಳನ್ನು ಮುರಿದು ಒಳಗೆ ಪ್ರವೇಶ ಮಾಡಿ, ಅಡುಗೆ ಮಾಡಲು ಉಪಯೋಗಿಸುತ್ತಿದ್ದ ಒಂದು ಹೆಚ್.ಪಿ ಗ್ಯಾಸ್ ಸಿಲಿಂಡರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ 1200/- ರೂ. ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 379 ಐ.ಪಿ.ಸಿ.

ದಿನಾಂಕ: 26-01-2013 ರಂದು ಪಿರ್ಯಾದಿ ವೈ.ಎನ್. ಸಿದ್ದರಾಜು ಬಿನ್ ಲೇಟ್ ನಿಂಗೇಗೌಡ, ಯಲಾದಹಳ್ಳಿ, ಸಿ.ಎ. ಕೆರೆ ಹೋಬಳಿ, ಮದ್ದೂರು ತಾಃ ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ಯಾರೋ ಕಳ್ಳರು ತಾಲ್ಲೂಕು ಕಛೇರಿ ಕಾಂಪೌಂಡ್ ಒಳಗೆ ಮೋಟಾರು ಸೈಕಲ್ ನಂಬರ್ ಕೆಎ-41/ಹೆಚ್-2589 ಸ್ಪ್ಲೆಂಡರ್ ಪ್ಲಸ್ ಹಿರೋ ಹೋಂಡಾ ಗಾಡಿಯನ್ನು ನಿಲ್ಲಿಸಿ ಕಛೇರಿ ಒಳಗಡೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಬಂದು ತಾನು ನಿಲ್ಲಿಸಿದ್ದ ಮೋಟಾರ್ ಸೈಕಲ್ ಅನ್ನು ನೋಡಲಾಗಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರ ಬೆಲೆ ಸುಮಾರು 20000/- ರೂ ಆಗಲಿದ್ದು, ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 25-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-01-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,   1 ಅಪಹರಣ ಪ್ರಕರಣ,  2 ವಾಹನ ಹಾಗು ಸಾಮಾನ್ಯ ಕಳವು ಪ್ರಕರಣಗಳು ದಾಖಲಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

1. ಕಿರುಗಾವಲು ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. - 174 ಸಿ.ಆರ್.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಕೆ, ಸಿದ್ದೇಗೌಡ ಎ.ಎಸ್.ಐ, ಕಿರುಗಾವಲು ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೃಷ್ಣಾಚಾರಿ ಬಿನ್ ಲೇಃ ಸಣ್ಣಾಚಾರಿ, ದೋರನಹಳ್ಳಿ ಎಂಬುವವರು ಹೊಟ್ಟೆನೋವು ತಾಳಲಾರದೆ ಕಬ್ಬಿನ ಗದ್ದೆಗೆ ಸಿಂಪಡಿಸುವ ಔಷದವನ್ನು ಕುಡಿದಿದ್ದು ಚಿಕಿತ್ಸೆಗೆ ಆಸ್ಪತ್ರಗೆ ದಾಖಲು ಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಜೆ.ಜಿ.ಶಿವಮಂಜು ಎ.ಎಸ್.ಐ ಅರಕೆರೆ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ಪುಟ್ಟೇಗೌಡ ಬಿನ್. ಲೇ. ನಾಥೇಗೌಡ, 85 ವರ್ಷ,  ದಮ್ಮು (ಅಸ್ತಮ) ಜಾಸ್ತಿಯಾಗಿ ಬೇನೆ ತಾಳಲಾರದೆ ಮನೆಯ ಹಜಾರದಲ್ಲಿ ತರಕಾರಿ ಗಿಡಗಳಿಗೆ ತಂದಿದ್ದ ಕ್ರಿಮಿನಾಷಕ ಔಷದಿಯನ್ನು ದಮ್ಮಿಗೆ ತಂದಿರುವ ಔಷಧಿ ಎಂದು ತಿಳಿದು ಕುಡಿದು ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

 ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 143-498(ಎ)-341-504-506 ಕೂಡ 149 ಐ.ಪಿ.ಸಿ.

        ದಿನಾಂಕ: 25-01-2013 ರಂದು ಪಿರ್ಯಾದಿ ಡಿ.ಎನ್.ಪೂಣರ್ಿಮ ಕೋಂ. ಹೆಚ್.ಸತೀಶ, ಆರೋಪಿ.1 ಸತೀಶ ಹೆಚ್. ಪಿರ್ಯಾದಿಯವರನ್ನು ಮದುವೆಯಾಗಿ 8 ವರ್ಷವಾಗಿದ್ದು ಇಬ್ಬರೂ ಬೆಂಗಳೂರಿನಲ್ಲಿ ಇದ್ದು ಆರೋಪಿ-1 ರವರು ವಾಸದ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಎತ್ತಿಕೊಂಡು ಊರಿಗೆ ಬಂದಿದ್ದು ಈ ದಿವಸ ಪಿರ್ಯಾದಿಯವರು ಸಾಮಾಗ್ರಿಗಳನ್ನು ಕೇಳಿದ್ದಕ್ಕೆ ಆರೋಪಿಗಳೆಲ್ಲರು ಪಿರ್ಯಾದಿಯವರನ್ನು ತಡೆದು ಅವಾಚ್ಯವಾಗಿ ಬೈದು, ಕೊಲೆಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಇದಕ್ಕೆ ಇತರೆ 8 ಜನರು  ಎಲ್ಲರೂ ಕರಡಕೆರೆ ಗ್ರಾಮ, ಮದ್ದೂರು ತಾ. ರವರುಗಳು ಸಹ ಕುಮ್ಮಕ್ಕು ನೀಡಿರುತ್ತಾರೆ.  


ಅಪಹರಣ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 365,324,506 ಕೂಡ 34 ಐ.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಶ್ರೀನಿವಾಸ ಬಿನ್. ದೊಡ್ಡರಾಮಣ್ಣ, 26ವರ್ಷ, ವಕ್ಕಲಿಗರು, ವ್ಯವಸಾಯ ಮತ್ತು ಟೈಲ್ಸ್ ಫಿಟ್ಟಿಂಗ್ ಕೆಲಸ, ಆಡಿಲಿಂಗನಪಾಳ್ಯ ಗ್ರಾಮ, ಸಂಕೇಘಟ್ಟ ಅಂಚೆ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಹಾಗು ಸಾಮಾನ್ಯ ಕಳವು ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 379 ಐ.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಸಜ್ಜಾದ್ ಅಹಮದ್ ಬಿನ್. ರುಹುಲ್ಲಾ, ಫಿರ್ದೋಷ್ ಸಾಮಿಲ್ ಮಾಲೀಕರು, ಕಲ್ಕುಣಿ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಬಾಬ್ತು ಕೆಎ-11 ಆರ್.-3052 ನಂಬರಿನ ಹೀರೊಹೊಂಡ ಪ್ಯಾಷನ್ ಮೋಟಾರ್ ಸೈಕಲನ್ನು ಮಂಡ್ಯದ ಹಡರ್ಿಕರ್ ಭವನದ ಮುಂಭಾಗ ಬೀಗ ಹಾಕಿ ನಿಲ್ಲಿಸಿ ಹರ್ಡಿಕರ್ ಭವನದಲ್ಲಿದ್ದ ಸಾಮೀಲ್ ಮಾಲೀಕರ ಸಮಾವೇಶಕ್ಕೆ ಹೋಗಿ ನಂತರ ವಾಪಸ್ ಮಧ್ಯಾಹ್ನ     02-30 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 40/13 ಕಲಂ. 379  ಐ.ಪಿಸಿ. 

ದಿನಾಂಕ: 25-01-2013 ರಂದು ಪಿರ್ಯಾದಿ ಸತ್ಯನಾರಯಣ ಬಿನ್. ಲೇಟ್. ನರಸಿಂಹಯ್ಯ, ಗೋಸೇಗೌಡರ ಬೀದಿ, ಶ್ರಿರಂಗಪಟ್ಟಣ ಟೌನ್ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಅವರ ತೋಟದಲ್ಲಿ 70 ಗೊನೆಗಳನ್ನು ಕಳ್ಳತನ ಮಾಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 24-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು,  1 ವಂಚನೆ/ಕಳವು ಪ್ರಕರಣ,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    


ವಾಹನ ಕಳವು :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 379 ಐ.ಪಿ.ಸಿ.

ದಿನಾಂಕ: 24-01-2013 ರಂದು ಪಿರ್ಯಾದಿ ವೈ ನರಸಿಂಹಯ್ಯ ಬಿನ್. ಲೇಟ್. ಯರಪ್ಪ, ಎಲ್.ಐ.ಜಿ. 21 ಕೆ.ಹೆಚ್.ಬಿ ಕಾಲೋನಿ, ಸ್ವರ್ಣಸಂದ್ರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಕೆಎ-11-ಎಕ್ಸ್-3142ರ ಟಿವಿಎಸ್ ಎಕ್ಸೆಲ್ ಹೆವಿ ಡ್ಯೂಟಿ ಮೊಪೆಡ್ನ್ನು  ಯಾರೋ ಕಳ್ಳರು ಕಳವು ಮಾಡಿರುತ್ತಾರೆ, ಕಳುವಾಗಿರುವ ನನ್ನ ಬೈಕನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ/ಕಳವು ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 379-462-468-471-417-419-420-465-120(ಬಿ)-404-500 ಐ.ಪಿ.ಸಿ.

ದಿನಾಂಕ: 24-01-2013 ರಂದು ಪಿರ್ಯಾದಿ ಬಿ.ಸಿ.ಮಾದಪ್ಪ ಬಿನ್. ಲೇಟ್. ಚಿಕ್ಕಚನ್ನಯ್ಯ, ಒಕ್ಕಲಿಗರು, ಮಲ್ಲಯ್ಯನದೊಡ್ಡಿ ಗ್ರಾಮ, ಮಂಡ್ಯ  ತಾ. ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯ ಮಗ ಆರೋಪಿಯ ಬಳಿ ಸಾಲ ಪಡೆಯಲು ಪಿರ್ಯಾದಿಯವರ ಸಿಂಡಿಕೇಟ್ ಬ್ಯಾಂಕಿಗೆ ಸೇರಿದ 498358 ನಂಬರಿನ ಚೆಕ್ಕನ್ನು ಆರೋಪಿಗೆ ಕೊಟ್ಟಿದ್ದು ಆದರೆ ಆರೋಪಿಯು ಚೆಕ್ ಗೆ ಸಾಲವನ್ನು ನೀಡದೆ ಇದು ಫೋರ್ಜರಿ ಸಹಿವುಳ್ಳ ಚೆಕ್ಕೆಂದು ನಮ್ಮ ಮೇಲೆ ಗಲಾಟೆ ಮಾಡಿ ಚೆಕ್ಕನ್ನು ದುರುಪಯೋಗಪಡಿಸಿಕೊಂಡಿದ್ದು, ಪಿರ್ಯಾದಿಗೆ ಸೇರಿದ್ದ ಖಾಲಿ ಚೆಕ್ಕನ್ನು ತನ್ನದಲ್ಲವೆಂದು ಗೊತ್ತಿದ್ದರೂ ಸಹ ತನ್ನ ಬಳಿ ಇಟ್ಟುಕೊಂಡು ಪಿರ್ಯಾದಿಯವರಿಗೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 24-01-2013 ರಂದು ಪಿರ್ಯಾದಿ ಮಂಜುನಾಥ ಬಿನ್. ಭಿಮಪ್ಪ ತಳವಾರ್, ನೀಲನಕೊಪ್ಪಲು ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಸಂತೋಷ 13 ವರ್ಷ, ಶಾಲೆ ಬಿಟ್ಟು ನಂತರ ವಾಪಸ್ಸು ಬಂದಿರುವುದಿಲ್ಲಾ  ಪತ್ತೆ  ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 24-01-2013 ರಂದು ಪಿರ್ಯಾದಿ ಪಿ.ಕೃಷ್ಣಕುಮಾರ್. ಬಿನ್. ಎಸ್.ಪುಟ್ಟಸ್ವಾಮಿ, ಜೀವನ ಜ್ಯೋತಿ ವಿದ್ಯಾಸಂಸ್ಥೆಯ ಸಂಸ್ಥಾಪಕರು, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಡ್ಯದ ಜೀವನ ಜ್ಯೋತಿ ವಿದ್ಯಾರ್ಥಿ  ನಿಲಯದಲ್ಲಿದ್ದ ವಿದ್ಯಾರ್ಥಿ ಎಸ್.ಕೃಷ್ಣ ಬಿನ್ ಶಿವಣ್ಣ, 15 ವರ್ಷ, ರವರು, ಎಲ್ಲರಂತೆ ಮಲಗಿಕೊಂಡಿದ್ದು ದಿನಾಂಕ: 24-01-2013 ರಂದು ಬೆಳ್ಳಿಗೆ ಹಾಜರಾತಿ ವೇಳಿಯಲ್ಲಿ ಆತನು ಕಾಣೆಯಾಗಿರುತ್ತಾನೆ ಆದ್ದರಿಂದ ಕಾಣೆಯಾಗಿರುವ ಹುಡುಗನನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮದ್ದೂರು ಪೊಲೀಸ್ ಠಾಣೆ ಮೊ.ನಂ. 45/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 24-01-2013 ರಂದು ಪಿರ್ಯಾದಿ ಕಾಳಶೆಟ್ಟಿ ಬಿನ್. ಕರಿಶೆಟ್ಟಿ, ಉಪ್ಪಾರದೊಡ್ಡಿ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಹೆಂಡತಿ ಕಮಲಮ್ಮಳು ತಮ್ಮ ಮನೆಯಿಂದ ಕೆ.ಎಂ.ದೊಡ್ಡಿ ಕಡೆಗೆ ಹೋದವಳು ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂಬುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಯು.ಡಿ.ಆರ್. ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. ಯುಡಿಆರ್ ನಂ 01/13

ದಿನಾಂಕ: 24-01-2013 ರಂದು ಪಿರ್ಯಾದಿ ಕೃಷ್ಣ ಬಿನ್. ಲೇಟ್. ಕೆಂಡೇಗೌಡ, 40 ವರ್ಷ, ಹೊಸಕೆರೆ, ಕೊಪ್ಪ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಸ್ವಾಮಿ ಬಿನ್ ಕುಳ್ಳೇಗೌಡ, 46 ವರ್ಷ, ಹೊಸಕೆರೆ ಗ್ರಾಮ ಎಂಬುವವರು ಸಂಕ್ರಾಂತಿ ಹಬ್ಬದಲ್ಲಿ ದನ ಕಿಚಾಯಿಸುವಾಗ ದನಗಳ ಹಗ್ಗ ಮೃತನ ಕಾಲಿಗೆ ಸಿಕ್ಕಿಹಾಕಿಕೊಂಡು ಬೆಂಕಿ ತಗುಲಿ ಸುಟ್ಟಗಾಯಗಳಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 498(ಎ) 494, 506, ಕೂಡ 34 ಐ.ಪಿ.ಸಿ.

      ದಿನಾಂಕ: 24-01-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ಲಿಂಗರಾಜು, ಸುಣ್ಣದದೊಡ್ಡಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಗೆ ಮಕ್ಕಳಾಗದೆ ಇರುವುದರಿಂದ  ಆರೋಪಿಗಳಾದ 1] ಲಿಂಗರಾಜು, 2] ಮಾಲಮ್ಮ  3] ರಾಜು, ಎಲ್ಲರೂ ಸುಣ್ಣದದೊಡ್ಡಿ ಗ್ರಾಮ ರವರುಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದು,  ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿದರೂ ಪ್ರಯೋಜವಾಗದೆ ಈಗ್ಗೆ  ಒಂದು ವರ್ಷಗಳ ಹಿಂದೆ ಪಿರ್ಯಾದಿ ತನ್ನ ತಂದೆ-ತಾಯಿ ಮನೆಯಲ್ಲಿ ವಾಸವಿದ್ದು  ಈ ಸಮಯದಲ್ಲಿ  ಪಿಯರ್ಾದಿ ಗಂಡ ಮತ್ತೊಂದು ಮದುವೆಯಾಗಿದ್ದು  ಇದನ್ನು ಕೇಳಲು ಹೋದ ಪಿರ್ಯಾದಿಗೆ   ಈಕೆಯ ಗಂಡ, ಅತ್ತೆ, ಮತ್ತು ಪಿಯರ್ಾದಿ ಸ್ನೇಹಿತ ಪೋನಿನಲ್ಲಿ ಕೊಲೆ ಬೆದರಿಕೆ ಹಾಕಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 498(ಎ), 504, 427, 307,114 ಕೂಡ 34 ಐ.ಪಿ.ಸಿ.

        ದಿನಾಂಕ: 24-01-2013 ರಂದು ಪಿರ್ಯಾದಿ ವಿಜಯಲಕ್ಷ್ಮಿ ಕೋಂ.ಕರಿಯಪ್ಪ, 35 ವರ್ಷ, ವಕ್ಕಲಿಗರು, ಮನೆಕೆಲಸ, ಎನ್.ಇ.ಎಸ್.ಬಡಾವಣೆ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1) ಕರಿಯಪ್ಪ. 2) ತರಕಾರಿ ಶಿವಣ್ಣ. 3) ಚೇತನ ಎಲ್ಲರೂ ಮಳವಳ್ಳಿ ಟೌನ್ ರವರುಗಳು ಮನೆಯ ಬಾಗಿಲಿಗೆ ಕಲ್ಲನ್ನು ಎತ್ತಿ ಹಾಕಿ ಜಖಂಗೊಳಿಸಿ ಮನೆಯ ಟಿ.ವಿ ಇನ್ನಿತರ ಬೆಲೆ ಬಾಳುವ ಸಾಮಾನು ಗಳನ್ನು ಜಖಂಗೊಳಿಸಿ ನನಗೆ ನಿಮ್ಮ ತಂದೆ ಮನೆಯಿಂದ ಹಣವನ್ನು ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿ, ಒಂದು ಮಚ್ಚನ್ನು ತೆಗೆದು ಕೊಂಡು ನಿನ್ನನ್ನು ಇದೆ ಮಚ್ಚಿನಿಂದ ಕೊಲೆ ಮಾಡುತ್ತೇನೆಂದು  ಓಡಾಡಿಸಿ ಕೊಂಡು ಅಟ್ಟಾಡಿಸಿಕೊಂಡು ಮಚ್ಚ ನ್ನು ಬೀಸಿದಾಗ ಅದೃಷ್ಟವಶಾತ್ ನಾನು ತಪ್ಪಿಸಿಕೊಂಡೆನು. ಮಚ್ಚನ್ನು ಹಿಡಿದುಕೊಂಡು ಮತ್ತೆ ನನ್ನನ್ನು ಎಲ್ಲ ಕಡೆಯೂ ಮನೆಯ ಮುಂಭಾಗ ಓಡಾಡಿಸಿ ನಿನ್ನನ್ನು ಈ ದಿನ ಕೊಲೆ ಮಾಡದೆ ಬಿಡುವುದಿಲ್ಲ ಎಂದು ಹೇಳಿದ್ದು, ಆಸ್ತಿಯ ವಿಚಾರದಲ್ಲಿ ಇದಕ್ಕೆಲ್ಲ  ಅವರ ಅಣ್ಣ ಮತ್ತು ಅವರ ತಂಗಿಯ ಮಗ ಚೇತನ ರವರ ಕುಮ್ಮಕ್ಕು ಇರುತ್ತದೆ ಎಂದು ನೀಡಿದ ದೂರಿನ ಮೇರೆಗೆ.

DAILY CRIME REPORT DATED : 23-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-01-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಂಚನೆ ಹಾಗು ಸರ ಕಳವು ಪ್ರಕರಣ,  1 ಅಪಹರಣ ಹಾಗು ರಾಬರಿ ಪ್ರಕರಣ,   1 ಕೊಲೆ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  4 ಸಾಮಾನ್ಯ ಹಾಗು ವಾಹನ ಕಳವು ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ವಂಚನೆ ಹಾಗು ಸರ ಕಳವು ಪ್ರಕರಣ :

ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 420, 379 ಕೂಡ 34 ಐ.ಪಿ.ಸಿ.

ದಿನಾಂಕ: 23-01-2013 ರಂದು ಪಿರ್ಯಾದಿ ಸಣ್ಣತಾಯಮ್ಮ ಕೋಂ. ಮರೀಗೌಡ, ಶಂಭೂನಹಳ್ಳಿ ಗ್ರಾಮ, ಮೇಲುಕೋಟೆ ಹೋಬಳಿ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರು ಜಕ್ಕನಹಳ್ಳಿ ಸಂತೆಯಲ್ಲಿ ಮನೆ ಸಾಮಾನು ತೆಗೆದುಕೊಂಡು ದೇವರಹಳ್ಳಿಗೆ ಹೋಗುವ ರಸ್ತೆಯ ಕಟ್ಟೆಯ ಹತ್ತಿರ ಹೋಗುತ್ತಿದ್ದಾಗ ಅಪರಿಚಿತ ಇಬ್ಬರು ಹೆಂಗಸರು ಮತ್ತು ಒಬ್ಬ ಗಂಡಸು ಹೆಸರು ವಿಳಾಸ ಗೊತ್ತಿಲ್ಲ. ರವರಿಗ:ಇ ಕಚರ್ಿಪನ್ನು ಫಿರ್ಯಾದಿಯವರಿಗೆ ತೋರಿಸಿ ನಿನ್ನದೇನಮ್ಮ ಎಂದು ಹತ್ತಿರಕ್ಕೆ ತಂದು ತೋರಿಸಿ ತಲೆ ಮತ್ತು ಮೈಯನ್ನು ಸವರಿ  ಜ್ಞಾನ ತಪ್ಪಿಸಿ, ಫಿರ್ಯಾದಿಯವರಿಗೆ ಜ್ಞಾನ ಬಂದಾಗ ತಮ್ಮ ಮೈಯನ್ನು ನೋಡಿಕೊಂಡಾಗ ಕತ್ತಿನಲ್ಲಿದ್ದ ತಾಳಿ 2 ಗುಂಡು ಸಹಿತ ಚಿನ್ನದ ಮಾಂಗಲ್ಯ ಚೈನು ಇರಲಿಲ್ಲ ಮತ್ತು ಆರೋಪಿತರು ಸಹ ಇರಲಿಲ್ಲ ಅವರು ಹೋರಟು ಹೋಗಿರುವುದನ್ನ ನೋಡಿದರೆ ಅವರೆ ನನಗೆ ಕಚರ್ಿಫನ್ನು ತೋರಿಸಿ, ನಂಬಿಸಿ, ಮೋಸ ಮಾಡಿ ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಚೈನನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕಳುವಾಗಿರುವ ಚಿನ್ನದ ಮಾಂಗಲ್ಯ ಚೈನಿನ ತೂಕ ಸುಮಾರು 28 ಗ್ರಾಂ ಆಗಿದ್ದು ಬೆಲೆ ಸುಮಾರು 48,000/- ರೂ ಬೆಲೆ ಬಾಳುವುದಾಗಿರುತ್ತದೆ ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಪಹರಣ ಹಾಗು ರಾಬರಿ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 341-364[ಎ]-384-307 ಕೂಡ 149 ಐ.ಪಿ.ಸಿ.

       ದಿನಾಂಕ: 23-01-2013 ರಂದು ಪಿರ್ಯಾದಿ ಗೋವಿಂದೇಗೌಡ ಬಿನ್. ಲೇಟ್. ಚಿಕ್ಕತಿಮ್ಮೇಗೌಡ, ಕ್ಯಾತನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಕಿರಣ, ಹೊಸಕೋಟೆ ಗ್ರಾಮ, 2]ನವೀನ, ಕ್ಯಾತನಹಳ್ಳಿ ಗ್ರಾಮ, 3]ರವಿ, ಕ್ಯಾತನಹಳ್ಳಿ ಗ್ರಾಮ ಮತ್ತು ಇತರೆ 6 ಜನರು. ಹೆಸರು ವಿಳಾಸ ತಿಳಿದಿಲ್ಲ ಇವರುಗಳು 5 ಲಕ್ಷಕ್ಕೆ ಡೀಲ್ ಕೊಟ್ಟಿದ್ದು 50 ಸಾವಿರ ಅಡ್ವಾನ್ಸ್ ಕೊಟ್ಟಿದ್ದಾರೆ ಎಂದು ಹೇಳಿದಾಗ ಗಾಯಾಳು ತಾನೆ 10 ಲಕ್ಷ ರೂ ಕೊಡುತ್ತೇನೆ ಎಂದು ಹೇಳಿ ಸ್ನೇಹಿತ ಸ್ವಾಮಿಗೌಡನಿಗೆ 10:30 ಗಂಟೆಯಲ್ಲಿ ಪೋನ್ ಮಾಡಿ ಹಣ ರೆಡಿ ಮಾಡುವಂತೆ ತಿಳಿಸಿದ ನಂತರ ಪುನಃ ಸಿ.ಪಿ.ಎಡ್ ಕಾಲೇಜು ಬಳಿಗೆ ಕರೆದುಕೊಂಡು ಬಂದಿದ್ದು ಅಲ್ಲಿ ಇಬ್ಬರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದವರ ಜೊತೆ ಮಾತನಾಡಿ ಅವರು ಕಾರಿನಲ್ಲಿ ಬಂದು ಎಲೆಕರೆ ಹ್ಯಾಂಡ್ ಪೋಸ್ಟ್ ಬಳಿ ಒಬ್ಬರು ಕೆ.ಬೆಟ್ಟಹಳ್ಳಿ ಬಳಿ ಒಬ್ಬರು ಇಳಿದುಕೊಂಡಿದ್ದು ನಂತರ ಹುಲ್ಕೆರೆ ಪಾರೆಸ್ಟ್ ಬಳಿ ಹೋಗುವಾಗ ಪೋನ್ನಲ್ಲಿ ಜನರುಗಳು ಬರುತ್ತಿರುವ ಮಾಹಿತಿ ಬಂದ ಮೇರೆಗೆ ತನ್ನ ಬಳಿ ಇದ್ದ 40 ಸಾವಿರ ನಗದು, ಎರಡು ಎ.ಟಿ.ಎಂ ಕಾರ್ಡ್ ಗಳು,  ಒಂದು ಮೊಬೈಲ್ನ್ನು ಜೇಬಿನಿಂದ ತೆಗೆದುಕೊಂಡು ತನ್ನನ್ನು ಬಿಸಾಡಿ ಹೋಗಿದ್ದು, ತಾನು ಹುಲ್ಕೆರೆ ಗ್ರಾಮಕ್ಕೆ ಬಂದು ಯಾವುದೋ ಒಂದು ಮನೆಯವರನ್ನು ಎಚ್ಚರ ಮಾಡಿ ಮೊಬೈಲ್ ಪಡೆದುಕೊಂಡು ಸತ್ಯಪ್ಪ ರವರಿಗೆ ಪೋನ್ ಮಾಡಿ ಜನರನ್ನು ಕರೆಸಿಕೊಂಡು ಪಾಂಡವುಪರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಆರೋಪಿಗಳು 30 ವರ್ಷದ ಒಳಗಿನವರಾಗಿದ್ದು, ಪ್ಯಾಂಟ್, ಶರ್ಟ್ ಧರಿಸಿದ್ದರು ಎಂದು ಇತ್ಯಾದಿಯಾಗಿ ನೀಡಿದ ದೂರಾಗಿರುತ್ತೆ  ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.


ಕೊಲೆ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 302 ಐ.ಪಿ.ಸಿ.

        ದಿನಾಂಕ: 23-01-2013 ರಂದು ಪಿರ್ಯಾದಿ ಸಾಕಮ್ಮ ಕೋಂ. ಬೋರೇಗೌಡ, 50 ವರ್ಷ, ಒಕ್ಕಲಿಗರು, ಗೃಹಿಣಿ, ಚನ್ನಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ 22-01-2012 ರಂದು ಫಿರ್ಯಾದಿಯ ಮಗನಾದ ಜಗದೀಶ @ ಜಗ್ಗಿ ಎಂಬುವನು ರಾತ್ರಿ 09-00 ಗಂಟೆಯಲ್ಲಿ ತನ್ನ ಗ್ರಾಮದ ಸರ್ಕಲ್ ಬಳಿ ಹೋಗಿ ಬರುತ್ತೇನೆಂದು ಮನೆಯಿಂದ ಹೋದವನು ಮನೆಗೆ ಬಂದಿರಲಿಲ್ಲ. ಬೆಳಿಗ್ಗೆ 05-30 ಗಂಟೆಯ ಸಮಯದಲ್ಲಿ ಫಿರ್ಯಾದಿಯವರ ಮೈದನ ಮಗ ಬೋರೇಗೌಡ ಎಂಬುವರು ಫಿರ್ಯಾದಿಯ ಮಗನಾದ ಜಗದೀಶ @ ಜಗ್ಗಿಯನ್ನು ಯಾರೋ ಕೊಲೆ ಮಾಡಿರುತ್ತಾರೆಂದು ತಿಳಿಸಿದ ಮೇರೆಗೆ ಹೋಗಿ ನೋಡಲಾಗಿ ಯಾರೋ ದುರಾತ್ಮರು ಜಗದೀಶ @ ಜಗ್ಗಿಯ ತಲೆಯ ಮೂರು ಕಡೆ ಬಲವಾಗಿ ಹೊಡೆದು, ಮಿದುಳು ಹೊರಬಂದು ಜಗದೀಶ @ ಜಗ್ಗಿ ಸತ್ತು ಹೋಗಿರುತ್ತಾನೆಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿಆರ್.ಪಿ.ಸಿ.

          ದಿನಾಂಕ: 23-01-2013 ರಂದು ಪಿರ್ಯಾದಿ ಎಸ್.ಕೆ.ರಮೇಶ್ ಬಿನ್. ಎಸ್.ಸಣ್ಣಯ್ಯ,, 60 ವರ್ಷ, ವಕ್ಕಲಿಗರು, ಹಾಲಿನ ಡೈರಿ ಅದ್ಯಕ್ಷರು, ವಾಸ ಕಾರ್ಕಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಅನಾಥ ಗಂಡಸು, ಸುಮಾರು 68-70  ವರ್ಷ ಹೆಸರು ವಿಳಾಸ ಗೊತ್ತಿರುವುದಿಲ್ಲ, ಅನಾರೋಗ್ಯದಿಂದಲೋ ಏನೋ ಹಾಲಿನ ಡೈರಿನ ಜಗುಲಿಯ ಮೇಲೆ ಮಲಗಿದ್ದ ಸಮಯದಲ್ಲಿ ಮೇಲ್ಕಂಡ ಬಿಕ್ಷುಕ ಮೃತ ಪಟ್ಟಿರುತ್ತಾರೆ ಆತ ಎಲ್ಲಿಯವನು ಏನು ಎಂದು ಗೊತ್ತಿರುವುದಿಲ್ಲ. ತಾವುಗಳು ಸ್ಥಳಕ್ಕೆ ಬಂದು ಕಾನೂನು ಕ್ರಮ ಜರುಗಿಸಲು ಮನವಿ ಎಂದು ನಿಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಲಾಗಿದೆ.  



ಸಾಮಾನ್ಯ ಹಾಗು ವಾಹನ ಕಳವು ಪ್ರಕರಣಗಳು :

1. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 379 ಐ.ಪಿ.ಸಿ.

         ದಿನಾಂಕ: 23-01-2013 ರಂದು ಪಿರ್ಯಾದಿ ಸಿ.ಪುಟ್ಟೇಗೌಡ  ಬಿನ್ ಲೇ|| ಚಿಕ್ಕಸ್ವಾಮಿ, ನಿಖರ ಭಾರತ್ ಕನ್ಸ್ಟ್ರಕ್ಸನ್, ಕಂಪನಿಯ ಮ್ಯಾನೇಜರ್, ಸಂಕಲೆಗೆರೆ ಗ್ರಾಮ, ಮಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅನುಮಾನಿತ ಆರೋಪಿಗಳಾದ ವೆಂಕಟೇಶ, ಮಂಜುನಾಥ, ವೆಂಕಟೇಶ, ಬಿ.,  ಹಗಳು ಕರ್ತವ್ಯದಲ್ಲಿದ್ದ ದೇವಪ್ಪ ಮತ್ತು ಮಹದೇವಪ್ಪ, ಸೆಕ್ಯೂರಿಟಿ ರವರುಗಳು ಕಳ್ಳತನವಾಗಿರುವ ವಸ್ತುಗಳು ನಮ್ಮ ಸೆಕ್ಯೂರಿಟಿಗಳ ಜವಾಬ್ದಾರಿಯಲ್ಲಿದುದ್ದರಿಂದ ಯಾರು ಕಳ್ಳತನ ಮಾಡಿರುತ್ತಾರೆ ಎಂಬ ಬಗ್ಗೆ ಪರಿಶೀಲಿಸಿ ನಮ್ಮ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥನೆ. ಕಳವು ಆಗಿರುವ ವಸ್ತುಗಳ ಬೆಲೆ 21.500/- ರೂ ಆಗಿರುತ್ತದೆ. ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 379 ಐ.ಪಿ.ಸಿ.

ದಿನಾಂಕ: 23-01-2013 ರಂದು ಪಿರ್ಯಾದಿ ಎಂ.ಜಿ ನಂಜುಂಡಸ್ವಾಮಿ ಬಿನ್. ಲೇಟ್. ಗುರುವಯ್ಯ, ಕೀರ್ತಿ ನಗರ, ಮಳವಳ್ಳಿ ಟೌನ್ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ತಮ್ಮ ಬಾಬ್ತು ಕೆ,ಎ-11-ಕ್ಯೂ-1280 ಮೋಟಾರ್ ಸೈಕಲನ್ನು ಮಳವಳ್ಳಿ ಆಸ್ಪತ್ರೆಯ ಆವರಣದ ಬಳಿ ನಿಲ್ಲಿಸಿ ಆಸ್ಪತ್ರೆಯ ಒಳಗಡೆ ಹೋಗಿದ್ದು, ವಾಪಸ್ಸು ಬಂದು ನೋಡಲಾಗಿ ನನ್ನ ಬಾಬ್ತು ಮೇಲ್ಕಂಡ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 379 ಐ.ಪಿ.ಸಿ.

ದಿನಾಂಕ: 23-01-2013 ರಂದು ಪಿರ್ಯಾದಿ ಕೆ.ಹೆಚ್.ರವೀಂದ್ರನಾಥ್ ಬಿನ್. ಕೆ.ಹರಿಆಚಾರ್, ಹೋಟೆಲ್ ವಿಶ್ರಾಂತ್, ವಿ.ವಿ.ರಸ್ತೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ಮೋಟಾರ್ ಸೈಕಲನ್ನು ಮಂಡ್ಯದ ವಿ.ವಿ.ರಸ್ತೆಯಲ್ಲಿರುವ ವಿಶ್ರಾಂತ್ ಹೋಟೆಲ್ ಮುಂಭಾಗ ಬೀಗ ಹಾಕಿ ನಿಲ್ಲಿಸಿದ್ದು ನಂತರ ವಾಪಸ್ ರಾತ್ರಿ 09-30 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 25,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 379 ಐ.ಪಿ.ಸಿ.

ದಿನಾಂಕ: 23-01-2013 ರಂದು ಪಿರ್ಯಾದಿ ಪಿ,ಎಂ,ಷರೀಫ್ ಬಿನ್. ಲೇಟ್ ಪಿ,ಮೋದು, ಮನೆ. ನಂ. 79/ಎ, 4ನೇ ಕ್ರಾಸ್, ಉದಯಗಿರಿ, ಮಂಡ್ಯಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಮೋಟಾರ್ಸೈಕಲ್ ಬೈಕ್ ನಲ್ಲಿ ಬಂದು ಇಂಡಿಯನ್ ಬ್ಯಾಂಕ್ ಮುಂದಿನ ಕಾಂಪೌಂಡ್ ಬಳಿ ನಿಲ್ಲಿಸಿದ್ದು ಮದ್ಯಾಹ್ನ ಬಂದು ನೋಡಲಾಗಿ ಬೈಕ್ ಇರುವುದಿಲ್ಲಾ ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಬೆಲೆ 12000/- ರೂ ಆಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇಲೆ ಕೇಸು ದಾಖಲಾಗಿರುತ್ತೆ.



ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 23-01-2013 ರಂದು ಪಿರ್ಯಾದಿ ಬಿ.ಜೆ.ಮಹೇಶ ಬಿನ್. ಸಿ.ಜಯರಾಮು, 31ವರ್ಷ, ವ್ಯವಸಾಯ, ಒಕ್ಕಲಿಗರು, ಬಿ.ಗೌಡಗೆರೆ ಗ್ರಾಮ,  ಕಸಬಾ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸಂತೋಷ್ ಬಿನ್. ಬಿ.ಸಿ.ಸುರೇಶ, ಟ್ರಾಕ್ಟರ್ ನಂ.ಕೆ.ಎ-11 ಟಿ/3278  ಹಾಗೂ ಟ್ರಾಲಿ ನಂ.ಕೆಎ-11/ಟಿ-817 ರ ಚಾಲಕ, ಹಳೇಬೂದನೂರು ರವರು ಟ್ರಾಕ್ಟರ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದು ರಾಜ್ಯ ಹೆದ್ದಾರಿಯಲ್ಲಿ ನಮ್ಮ ಮುಂದೆ ಹೋಗುತ್ತಿದ್ದ ಶಂಕರನ ವಿಕ್ಟರ್ ಗಾಡಿಗೆ ಸಂಜೆ 07-00ಗಂಟೆಯ ಸಮಯದಲ್ಲಿ ಅಪಘಾತ ಪಡಿಸಿದ್ದರಿಂದ ಶಂಕರನ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು ಟ್ರಾಕ್ಟರ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದು ಮೇಲ್ಕಂಡ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು  ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ .ವರದಿ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 23-01-2013 ರಂದು ಪಿರ್ಯಾದಿ ಚಿಕ್ಕಣ್ಣ ಬಿನ್. ಲೇಟ್. ಮಹದೇವಯ್ಯ, 50 ವರ್ಷ, ಹಾಲುಮತ ಜನಾಂಗ, ವ್ಯವಸಾಯ ಮತ್ತು ಕೂಲಿಕೆಲಸ, ಚಂದಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಸಿದ್ದೇಗೌಡ, ಚಂದಹಳ್ಳಿ ಗ್ರಾಮ ಎಂಬುವವರು ಸಂಸಾರದ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದು, ದಿನಾಂಕ : 12-12-2012 ರಂದು ಮನೆಯಿಂದ ಹೋದವನು ಇರುವರೆವಿಗೂ ಬಂದಿರುವುದಿಲ್ಲ. ನಾವುಗಳು ನಮ್ಮ ಸಂಬಂಧಿಕರ ಹಾಗೂ ನೆಂಟರಿಷ್ಟರ ಮನೆಗಳ ಕಡೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



2. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 23-01-2013 ರಂದು ಪಿರ್ಯಾದಿ ಸಣ್ಣು ಬಿನ್. ಮರಿಮಾದಯ್ಯ, ಚಿಕ್ಕೇಗೌಡನದೊಡ್ಡಿ ಗ್ರಾಮ, ಕಿರುಗಾವಲು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಗ ಸಣ್ಣು  ಬಿನ್. ಮರಿಮಾದಯ್ಯ, ಚಿಕ್ಕೇಗೌಡನದೊಡ್ಡಿ ಗ್ರಾಮ, ಕಿರುಗಾವಲು ರವರು ದಿನಾಂಕ: 21-01-2013 ರಂದು ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋದವರು ಬೆಂಗಳೂರಿಗೆ ಹೋಗದೆ ಎಲೋ ಕಾಣೆಯಾಗಿರುತ್ತಾನೆ ನಾವು ಎಲ್ಲಾ ಕಡೆ ಹುಡುಕಾಡಿದರೂ ಆತ ಪತ್ತೆಯಾಗಿರುವುದಿಲ್ಲ,  ಅದ್ದರಿಂದ ಈದಿನ ತಡವಾಗಿ ಬಂದು ಈ ದೂರನ್ನು ನೀಡಿರುತ್ತೇನೆ.  ಕಾಣಿಯಾದ ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 21-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಮಹಿಳಾ ಕಿರುಕುಳ/ವರದಕ್ಷಿಣೆ ಪ್ರಕರಣಗಳು,  1 ಕಳವು ಪ್ರಕರಣ,  1 ವಂಚನೆ ಕಳವು ಪ್ರಕರಣ,  4 ಯು.ಡಿ.ಆರ್. ಪ್ರಕರಣಗಳು ಹಾಗು 7 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 21-01-2013 ರಂದು ಪಿರ್ಯಾದಿ ಸಿದ್ದರಾಮು ಬಿನ್. ಲೇಟ್. ನಿಂಗೇಗೌಡ, ಹೊಳಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿರವರ ಮಗ ಹೆಚ್.ಎಸ್. ಹೇಮಂತ್, 17 ವರ್ಷರವರು ತಮ್ಮ ಮನೆಯಿಂದ ಹೋದವರು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 20/2013 ಕಲಂ. ಹುಡುಗಿ  ಕಾಣೆಯಾಗಿದ್ದಾಳೆ.

ದಿನಾಂಕ: 21-01-2013 ರಂದು ಪಿರ್ಯಾದಿ ಜಯರಾಮೇಗೌಡ ಬಿನ್. ಲೇ|| ಕರಿಗೌಡ, ಗಾಂದಿನಗರರವರು ನೀಡಿದ ದೂರು ಏನೆಂದರೆ ಅವರ ಮಗಳು ಸೌಮ್ಯ ಬಿನ್ ಜಯರಾಮೇಗೌಡ, ಗಾಂದಿನಗರ ಗ್ರಾಮ ರವರು ದಿನಾಂಕ: 16-01-2013 ರಂದು ಯಾರು ಇಲ್ಲದ ಸಮಯದಲ್ಲಿ ಮನೆಯನ್ನು ಬಿಟ್ಟು ಹೋಗಿರುತ್ತಾಳೆ ಇದುವರೆವಿಗೂ ಎಲ್ಲಿಯೂ ಹುಡುಕಿದರೂ ಸಿಕ್ಕಿರುವುದಿಲ್ಲ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮಹಿಳಾ ಕಿರುಕುಳ/ವರದಕ್ಷಿಣೆ ಪ್ರಕರಣಗಳು :

 1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 498(ಎ)-323-504 ಐ.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಪದ್ಮ ಕೋಂ.ಸತೀಶ, ಕೆ.ಹಾಗಲಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಆರೋಪಿ ಸತೀಶ ಬಿನ್. ಸುಭಾಷ್ ಕೆ.ಹಾಗಲಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಬಾಯಿಗೆ ಬಂದಂತೆ ಬೈಯ್ದು ಹೊಡೆಯುವುದು ಮಾಡುತ್ತಿದ್ದು, ಪಿರ್ಯಾದಿಯವರ ಮೇಲೆ ಅನುಮಾನ ಪಡುವುದು ಹಾಗೂ ಯಾರ್ಯಾರ ಜೊತೆ ಹೋಗಿದ್ದೆ ಎಂದು ಮನೆಗೆ ಸೇರಿಸಿದೆ ಕಿರುಕುಳ ನೀಡುತ್ತಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 498(ಎ)-323-506 ಕೂಡ 34 ಐ.ಪಿ.ಸಿ. & ಕಲಂ3 &4 ಡಿ.ಪಿ.ಕಾಯಿದೆ.

ದಿನಾಂಕ: 21-01-2013 ರಂದು ಪಿರ್ಯಾದಿ ಭವ್ಯಶ್ರೀ ಬಿ.ಎಸ್ ಕೋಂ ಸಿದ್ದರಾಜು, 22 ವರ್ಷ, ಒಕ್ಕಲಿಗರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಗಂಡ ಸಿದ್ದರಾಜು, ನಾದಿನಿ ಪ್ರಮಿಳಾ, ಮಾವ ದೇವೇಗೌಡ, ಅತ್ತೆ ಸಣ್ಣಮ್ಮ, ಎಲ್ಲರೂ ಬೆಳ್ಳಾಳೆ ಗ್ರಾಮರವರುಗಳು ಸೇರಿಕೊಂಡು ಪಿರ್ಯಾದಿಗೆ ಹಣವನ್ನು ತರುವಂತೆ ಒತ್ತಾಯಿಸಿ ಮನೆಯಿಂದ ಆಚೆಗೆ ತಳ್ಳಿ ಸೀಮೆಎಣ್ಣೆ ಸುರಿದು ಸಾಯಿಸುತ್ತೇನೆಂದು ಕೊಲೆ ಬೆದರಿಕೆ ಹಾಕಿ ಮೈ ಕೈ ಮೇಲೆ ಹೊಡೆದು ನೋವುಂಟು ಮಾಡಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಕಳವು ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 379 ಐ.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ನಾಗೇಶ್ ಬಾಬು, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಮಹಾಸಭಾ (ರಿ) ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಖಿತ ಭಾರತ ವೀರಶೈವ ಸಮಾಜದ ಕಛೇರಿಯ ಕಟ್ಟಡವನ್ನು ನಿರ್ಮಿಸಲಾಗಿದೆ ಹಾಗೂ ಈ ಕಟ್ಟಡಕ್ಕೆ ರೂ 10,000/- ಮೌಲ್ಯದ 2 ಬಾಗಿಲುಗಳನ್ನು ಅಳವಡಿಸಿರುವುದು ಸರಿಯಷ್ಟೆ. ನಮ್ಮ ಸಮಾಜದ ಕಟ್ಟಡದ ಕಛೇರಿಯ ಕಡೆ ನೋಡಲಾಗಿ ಬಾಗಿಲುಗಳು ಇಲ್ಲದಿರುವುದು ಅವರ ಗಮನಕ್ಕೆ ಬಂದು ಸದರಿ ವಿಷಯವನ್ನು ನಮ್ಮ ಸಮಾಜದ ಮುಖಂಡರುಗಳಿಗೆ ಖುದ್ದಾಗಿ ಬಂದು ತಿಳಿಸಿರುತ್ತಾರೆ. ನಮ್ಮ ಸಮಾಜದ ಮುಖಂಡರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ ಈ ಕೃತ್ಯವನ್ನು ನಂದೀಶ ಬಿನ್ ಡಿ.ಎಸ್.ಬಸವರಾಜಸ್ವಾಮಿ ಮತ್ತು ಇತರರು ಸೇರಿ ಕಳ್ಳತನ ಮಾಡಿರುವುದು ದೃಢಪಟ್ಟಿರುತ್ತದೆ ಆದ್ದರಿಂದ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಕಳವು ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 406 ಐ.ಪಿ.ಸಿ.

       ದಿನಾಂಕ: 21-01-2013 ರಂದು ಪಿರ್ಯಾದಿ ರವಿ ಬಿನ್. ಮರಿಯಾಚಾರ್, ಕೆ.ಎಂ.ದೊಡ್ಡಿ ಟೌನ್ ರವರು ನೀಡಿದ ದೂರು ಏನೆಂದರೆ ಆರೋಪಿ 1.ಸೋಮ ಶೇಖರ್ @ ಸ್ವಾಮಿ ಮಡೆನಹಳ್ಳಿ ಗ್ರಾಮ ರವರು  ಪಿರ್ಯಾದಿಯವರ ಕಾರಿನ ಚಾಲಕನಾಗಿದ್ದು ಪಿರ್ಯಾದಿಯವರು ಚಿನ್ನದ ಒಡವೆಗಳನ್ನು ತರಲು ಆರೋಪಿಯನ್ನು ಕರೆದುಕೊಂಡು ಹೋಗಿದ್ದು ವಾಪಸ್ಸು ಕೆ.ಎಂ.ದೊಡ್ಡಿಗೆ ಬಂಧು ಪಿರ್ಯಾದಿಯವರು ಹಣ್ಣನ್ನು ತರಲು ಇಳಿದು ಹೋಗಿದ್ದಾಗ ಆರೋಪಿಯು ಪಿರ್ಯಾದಿಯವರು ಕಾರಿನಲ್ಲಿ ಇಟ್ಟಿ ಹೋಗಿದ್ದ ಒಂದು ಮಾವಿನ ಕಾಯಿ ಡಿಸೈನ್ ಇರುವ 73.5 ಗ್ರಾಂ ನ ಚಿನ್ನದ ಲಾಂಗ್ ಸರ. ಹಾಗು ಒಂದು ಕೆಂಪು ಬಿಳಿ ಹರಳಿನ 5.5 ಗ್ರಾಂ. ನ ಲೇಡಿಸ್ ಉಂಗುರ. ಚಿನ್ನದ ಒಡವೆಗಳನ್ನು ಎತ್ತಿಕೊಂಡಿರುತ್ತಾನೆಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಕಾಳಯ್ಯ ಬಿನ್. ಲೇ|| ಮೋಟಯ್ಯ, ನೆಲ್ಲೂರುಪಾಲ, ಹನಗೋಡು, ಹೋ|| ಹುಣಸೂರು, ತಾ|| ಮೈಸೂರು ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗ ಸೋಮಶೇಖರ @ ಸೋಮ ಬಿನ್. ಕಾಳಯ್ಯ, 24 ವರ್ಷ, ನೆಲ್ಲೂರುಪಾಲ, || ಮೈಸೂರು ಜಿಲ್ಲೆ ರವರು ಹಾಗು ರಮ್ಯ ಇಬ್ಬರು ಪ್ರೀತಿಸುತ್ತಿದ್ದು ನನ್ನ ಮಗ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷವನ್ನು ಸೇವನೆ ಮಾಡಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಸಲಾಗಿದೆ.  


2. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಡಾ|| ರವಿಶ್ರೀ, ವೈದ್ಯರು, ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶಿವಮ್ಮ ಕೋಂ ಸಿದ್ದೇಗೌಡ, ತೆಂಕಹಳ್ಳಿ ಗ್ರಾಮ, ಮಳವಳ್ಳಿ ತಾ|| ಎಂಬುವವರಿಗೆ ತೆಂಕಹಳ್ಳಿ ಗ್ರಾಮದಲ್ಲಿ ಹಾವು ಕಚ್ಚಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ 296/12 ಕಲಂ 174 ಸಿಆರ್ಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ಈ ದಿನ ಸದರಿ ಠಾಣೆಯವರು ಬೆಳಕವಾಡಿ ಠಾಣೆಗೆ ವಗರ್ಾವಣೆ ನೀಡಿರುವ ಮೇರೆಗೆ ಪ್ರತಮ ವರ್ತಮಾನ ವರದಿ ದಾಖಲಿಸಲಾಗಿದೆ.  


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯುಡಿಆರ್ 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಕುಮಾರ ಬಿನ್. ಚನ್ನಂಕೇಗೌಡ, ಟಿ. ಎಂ. ಹೊಸೂರು ಗ್ರಾಮ,  ಶ್ರೀರಂಗಪಟ್ಟಣ ತಾ. ರವರು ನೀಡಿದ ಪರ್ಯಾದು ಏನೆಂದರೆ ಮಹೇಶ್ ಬಿನ್. ಚೆನ್ನೇಗೌಡ  49 ವರ್ಷ, ಟಿ ಎಂ ಹೊಸೂರು ಗ್ರಾಮ, ಶ್ರೀರಂಗಪಟ್ಟಣ ತಾ. ರವರಿಗೆ ಆಗಾಗ ಬೆನ್ನು ನೋವು ಬರುತ್ತಿದ್ದು, ಬೆನ್ನು ನೋವು ಜಾಸ್ತಿಯಾಗಿ ನೋವಿನ ಭಾದೆಯನ್ನು ತಾಳಲಾರದೆ  ಮನೆಯಲ್ಲಿ ಬೆಳಿಗಳಿಗೆ  ಸಿಂಪಡಿಸಲು ಇಟ್ಟಿದ್ದ ಯಾವುದೋ ವಿಷವನ್ನು ಔಷದಿ ಎಂದು ಭಾವಿಸಿ ಕುಡಿದು ಒದ್ದಾಡುತ್ತಿದ್ದು, ಕೂಡಲೇ ಮೈಸೂರಿನ ಕೆ..ಆರ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ  ಫಲಕಾರಿಯಾಗದೆ  ಮೃತಪಟ್ಟಿರುತ್ತಾರೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ನಾಗರಾಜು ಬಿನ್. ಸಿದ್ದೇಗೌಡ, ತೊರೆಶೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಚಿಕ್ಕಪ್ಪನವರ ಮಗ ಮಧು @ ಸಿದ್ದೇಗೌಡ ಬಿನ್ ಚಿಕ್ಕೋನು, 25 ವರ್ಷ, ತೊರೆಶೆಟ್ಟಹಳ್ಳಿ ಗ್ರಾಮ ಎಂಬುವವನಿಗೆ ಅಗಾಗ್ಗೆ ಹೊಟ್ಟೆನೋವು ಬರುತ್ತಿದ್ದು ಅವನು ಔಷಧಿಯನ್ನು ತೆಗೆದುಕೊಳ್ಳುತ್ತಿದ್ದು ಎಂದಿನಂತೆ ಸಂಜೆ ಸಮಯದಲ್ಲಿ ಔಷದಿಯನ್ನು ಸೇವಿಸುವಾಗ ಹೊಟ್ಟೆನೋವಿನ ಔಷಧಿ ಎಂದು ತಿಳಿದು ಹಿಪ್ಪನೇರಳೆ ಕಡ್ಡಿಗೆ ಸಿಂಪಡನೆ ಮಾಡಲು ತಂದಿದ್ದ ಕ್ರಿಮಿನಾಶಕವನ್ನು ಸೇವಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರುತ್ತಾನೆ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 20-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-01-2013 ರಂದು ಒಟ್ಟು 14 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ಭಾರತೀಯ ಪುರಾತತ್ವ ಸಂರಕ್ಷಣಾ ಕಾಯಿದೆ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಅಕ್ರಮ ಮರಳು ಕಳವು ಹಾಗು ಸಾಗಾಣಿಕೆ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-01-2013 ರಂದು ಪಿರ್ಯಾದಿ ಚಿಕ್ಕೋನಯ್ಯ ಬಿನ್. ಲೇಟ್. ಕರಿಯಯ್ಯ, ಶಂಬೂನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಶಾಂತ ಕೋಂ ಸ್ವಾಮಿ, 28 ವರ್ಷ, ಪರಿಶಿಷ್ಟ ಜಾತಿ, ಗೃಹಿಣಿ, ಚಿಕ್ಕಾಯರಹಳ್ಳಿ ರವರು ಲ್ಯಾಂಪ್ಗೆ ಸೀಮೆಎಣ್ಣೆ ಸೀಸೆಯಿಂದ ಸೀಮೆಎಣ್ಣೆ ಹಾಕುತ್ತಿದ್ದಾಗ ಲ್ಯಾಂಪ್ ಸೀಮೆ ಎಣ್ಣೆ ತುಂಬಿ ಮೈಮೇಲೆ ಮತ್ತು ಬಟ್ಟೆಯ ಮೇಲೆ ಚೆಲ್ಲಿ ಆಕಸ್ಮಿಕವಾಗಿ ಗೋಡೆಯಲ್ಲಿ ನೇತುಹಾಕಿದ್ದ ಲ್ಯಾಂಪ್ಗೆ ಕೈ ತಗುಲಿ ಲ್ಯಾಂಪ್ ತಲೆಯ ಮೇಲೆ ಬಿದ್ದು ಲ್ಯಾಂಪ್ನಲ್ಲಿದ್ದ ಸೀಮೇಎಣ್ಣೆ ಮೈಮೇಲೆ ಚೆಲ್ಲಿದ್ದರಿಂದ ಬಟ್ಟೆಯೆಲ್ಲಾ ಪೂರ್ಣಹತ್ತಿಕೊಂಡಾಗ ಅಕ್ಕಪಕ್ಕದವರು ಬಂದು ಬೆಂಕಿ ಆರಿಸಿ ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಭಾರತೀಯ ಪುರಾತತ್ವ ಸಂರಕ್ಷಣಾ ಕಾಯಿದೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 447 ಐ.ಪಿ.ಸಿ. ಮತ್ತು 16[1], 19[1] ಹಾಗೂ 7 ಭಾರತೀಯ ಪುರಾತತ್ವ ಸಂರಕ್ಷಣಾ ಕಾಯಿದೆ 1958

ದಿನಾಂಕ: 20-01-2013 ರಂದು ಪಿರ್ಯಾದಿ ನಾಗರಾಜು.ವಿ.ಆರ್, ಸಹಾಯಕ ಸ್ಮಾರಕ ಸಂರಕ್ಷಣ ವಲಯ ಅಧಿಕಾರಿ, ಭಾರತೀಯ ಪುರಾತತ್ವ ಇಲಾಖೆ, ಶ್ರೀರಂಗಪಟ್ಟಣ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು, ಕೆರೆತಣ್ಣೂರು ಗ್ರಾಮ, ಪಾಂಡವಪುರ ತಾಲ್ಲೋಕು ರವರುಗಳು ಶ್ರೀನಂಬಿ ನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೆರೆತಣ್ಣೂರು ಗ್ರಾಮದ ಸದರಿ ಜಾಗವು ರಾಷ್ಟ್ರೀಯ ಸ್ಮಾರಕವಾಗಿ ರುವುದರಿಂದ ನಿಷೇದಿತ ಪ್ರದೇಶವಾಗಿದ್ದು, ಯಾವುದೇ ಅನ್ಯ ಚಟುವಟಿಕೆ ಮಾಡುವುಂತಿಲ್ಲ, ಸಭೆಗಳನ್ನು ಮಾಡುವಂತಿಲ್ಲ. ಸಭೆಯನ್ನು ಕೇಂದ್ರ ಸಕರ್ಾರದ ಅನುಮತಿ ಪಡೆದುಕೊಂಡು ಮಾಡಬೇಕಾಗಿದ್ದು, ಸದರಿ ಜಾಗದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖಾ ಕಾನೂನು ಉಲ್ಲಂಘನೆಯ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಇತ್ಯಾದಿಯಾಗಿ ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಳವಳ್ಳಿ ಗ್ರಾಮಾಂತರ. ಪೊಲೀಸ್ ಠಾಣೆ ಮೊ.ನಂ. 11/13 ಕಲಂ. ಕಲಂ.498(ಎ),506 ರೆ:ವಿ 34 ಐ.ಪಿ.ಸಿ. ಕೂಡ 3 & 4 ಡಿ.ಪಿ. ಕಾಯ್ದೆ.

ದಿನಾಂಕ: 20-01-2013 ರಂದು ಪಿರ್ಯಾದಿ ಮಂಜುಳ.ಎಂ.ಸಿ. ಕೋಂ. ಬಿ.ಎ.ಪ್ರಕಾಶ, ಮನೆಕೆಲಸ, ಬಂಡೂರು ಗ್ರಾಮ, ಕಿರುಗಾವಲು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1] ಮಾದಯ್ಯ 2] ನಿಂಗಮ್ಮ ಕೋಂ.ಮಾದಯ್ಯ, 3] ಬಸವರಾಜು ಬಿನ್ ಮಾದಯ್ಯ ಎಲ್ಲರೂ ಬಂಡೂರು ಗ್ರಾಮ, ಕಿರುಗಾವಲು ರವರುಗಳು ನೀಡಿದ ದೂರು ಏನೆಂದರೆ ನಿನ್ನನ್ನು ಮತ್ತು ನಿನ್ನ ಮಗುವನ್ನು ಕೊಲೆ ಮಾಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನನ್ನ ಮಗಳ ಸಾವಿಗೆ ಹಾಗೂ ನನಗೆ ಪ್ರತಿ ನಿತ್ಯ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಹಿಂಸೆಗೆ ನನ್ನ ಅತ್ತೆ , ಮಾವ ಹಾಗೂ ನನ್ನ ಗಂಡನ ಅಣ್ಣ ಬಸವರಾಜು ಇವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾಗಿರುತ್ತಾರೆ ಇವರ ವಿರುದ್ದ ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ದೂರಿನ ಮೇರೆಗೆ ತುತರ್ು ಅಪರಾಧ ವರದಿ ದಾಖಲಿಸಲಾಗಿದೆ.  


ಅಕ್ರಮ ಮರಳು ಕಳವು ಹಾಗು ಸಾಗಾಣಿಕೆ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 07/13 ಕಲಂ. 188-379 ಐ.ಪಿ.ಸಿ.

ದಿನಾಂಕ: 20-01-2013 ರಂದು ಪಿರ್ಯಾದಿ ಬಿ.ಎಲ್. ವೇಣುಗೋಪಾಲ. ತಗ್ಗಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ, ಕೊಪ್ಪ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಟ್ರಾಕ್ಟರ್ ನಂ. ಕೆಎ-11-ಟಿ-8658 ಟ್ರೈಲರ್ ನಂ.ಕೆಎ-11-8659ರ ಮರಳು ತುಂಬಿದ ಟ್ರಾಕ್ಟರ್ ಚಾಲಕ ರಾತ್ರಿ 09-30 ಗಂಟೆಗೆ ಬರುತ್ತಿದ್ದ ಗಾಡಿಯನ್ನು ನಮ್ಮ ಗ್ರಾಮಸೇವಕ ತಡೆಗಟ್ಟಿ ಮರಳು ಸಾಗಾಣಿಕೆ ಪರವಾನಗಿ ಬಗ್ಗೆ ಚಾಲಕನನ್ನು ವಿಚಾರಿಸಲು ಹೋದಾಗ ಅವನು ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾನೆ. ಹಾಗೂ ಶಿಂಷಾನದಿಯಲ್ಲಿ ನಿಷೇಧಾಜ್ಞೆ ಇದ್ದರು ಸಹ ಅಕ್ರಮವಾಗಿ ಮರಳು ತುಂಬಿಕೊಂಡು ಕಳವು ಮಾಡಿಕೊಂಡು ಹೋಗುತ್ತಿದ್ದ ಟ್ರಾಕ್ಟರನ್ನು ತಂದು ಹಾಜರ್ಪಡಿಸಿದ್ದು, ಇದರ ಬಗ್ಗೆ ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 19-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-01-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ವಂಚನೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ರಸ್ತೆ   ಅಪಘಾತ ಪ್ರಕರಣ,  1 ಕಳ್ಳತನ ಪ್ರಕರಣ,  1 ಕಳವು ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   


ಯು.ಡಿ.ಆರ್. ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 19-01-2013 ರಂದು ಪಿರ್ಯಾದಿ ಅಯೂಬ್ ಬಿನ್.ಲೇಟ್. ಮಹಮ್ಮದ್ ಪೀರ್, 1 ನೇ ಅಡ್ಡರಸ್ತೆ, ರವೀಂದ್ರ ರೈಸ್ ಮಿಲ್ ರಸ್ತೆ,  ಸಬ್ದರಿಯಾಬಾದ್ ಮೊಹಲ್ಲಾ, ಮಂಡ್ಯ ರವರು ನೀಡಿದ ದೂರು ಏನೆಂದರೆ ಈತನು ತೆವೆಳಿಕೊಂಡು ಭಿಕ್ಷೆ ಬೇಡುವಾಗಲೋ ಅಥವಾ ಹೋಗುವಾಗಲೋ ಬಿದ್ದು ತಲೆಯಲ್ಲಿ ಹಳೆ ಗಾಯವಾಗಿದ್ದು ತಲೆಗೆ ಬಿಳಿ ಬ್ಯಾಂಡೇಜ್ ಬಟ್ಟೆ ಕಟ್ಟಿಕೊಂಡಿರುತ್ತಾನೆ. ಈತನ ಮೈಮೇಲೆ ಆಕಾಶ ಬಣ್ಣದ ಚೆಕ್ಸ್ಶಟವೆಲ್, ಸೀಮೆಂಟ್ ಕಲರ್ ಪ್ಯಾಂಟು ಇದ್ದು ಸಾದಾರಣ ಮೈಕಟ್ಟು ಉಳ್ಳವನಾಗಿರುತ್ತಾನೆ ಈತನ ಹೆಸರು ವಿಳಾಸ ತಿಳಿದು ಬಂದಿಲ್ಲಾ ಈತನು ಈ ದಿನ ದಿನಾಂಕ: 18-01-2013 ರಂದು ಬೆಳಿಗ್ಗೆ 10-30 ಘಂಟೆ ಸಮಯದಲ್ಲಿ ರವೀಂದ್ರ ರೈಸ್ ಮಿಲ್ 1 ನೇ ಕ್ರಾಸ್ ನ ಮುತ್ತೂಟ್ಫಿನ್ಕಾಪರ್,  ಗೋಡೆಯ ಪಕ್ಕದ ಪ್ಲ್ಯಾಟ್ ಪಾರಂ ಮೇಲೆ ಸತ್ತುಹೋಗಿರುತ್ತಾನೆ, ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ  ದೂರಿನ ಮೇರೆಗೆ ಯುಡಿಆರ್ ಪ್ರಕರಣ ದಾಖಲಿಸಲಾಗಿದೆ. 



ವಂಚನೆ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 420 ಐ.ಪಿ.ಸಿ.

ದಿನಾಂಕ: 19-01-2013 ರಂದು ಪಿರ್ಯಾದಿ ಕಿಶೋರ್, ಹೊಸಹೊಳಲು ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಕೆಎ-04-ಬಿ-5277 ಈ ಟಾಟಾ ಸುಮೋವನ್ನು ಕೆ.ಆರ್. ಪೇಟೆ ಟೌನ್ನಲ್ಲಿ ಬಾಡಿಗೆ ಓಡಿಸುತ್ತಿದ್ದೆನು. ನಾನು ಟಾಟಾ ಸುಮೋವನ್ನು ದಿನಾಂಕ: 15.12.2012 ರಂದು ಬೆಳಿಗ್ಗೆ 11.15 ಗಂಟೆಯಲ್ಲಿ ಕೆ.ಆರ್. ಪೇಟೆ ಟೌನ್ ವಾಸಿ ಇಲಿಯಾಸ್ ಎಂಬ ವ್ಯಕ್ತಿಗೆ 1.60.000/- ರೂಗಳಿಗೆ ಚಂದ್ರು, ಗೋಪಿ, ಸಮೀರ್ ಹಾಗು ಬಸವರಾಜು ರವರ ಸಮಕ್ಷಮದಲ್ಲಿ ಮಾರಾಟ ಮಾಡಿದ್ದೆನು, 25 ಸಾವಿರ ಅಡ್ವಾನ್ಸ್ ಕೊಟ್ಟು ಉಳಿದ ಬಾಕಿಯ ಮೊತ್ತವನ್ನು ಕಿಕ್ಕೇರಿಗೆ ಹೋಗಿ ತಂದು ಕೊಡುತ್ತೆನೆಂದು ಟಾಟಾ ಸುಮೋ ತೆಗೆದುಕೊಂಡು ಹೋದವನು ಇದುವರೆವಿಗು ವಾಪಸ್ಸು ಬಂದಿರುವುದಿಲ್ಲ ಆದರಿಂದ ಹಣವನ್ನು ಕೊಡದೆ ಮೋಸ ಮಾಡಿ ಟಾಟಾ ಸುಮೋ ತೆಗೆದುಕೊಂಡು ಹೋದ ಇಲಿಯಾಸ್, ಕೆಆರ್ ಪೇಟೆ ಟೌನ್ ಎಂಬವವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 19-01-2013 ರಂದು ಪಿರ್ಯಾದಿ ಲಕ್ಷ್ಮಮ್ಮ, ಡಿ.ಎ.ಕೆರೆ ಗ್ರಾಮ,  ಸಿ.ಎ.ಕೆರೆ ಹೋಬಳಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಮಗಳು ಡಿ.ಸಿ.ಪೂಜಾ, ಸುಮಾರು 14ವರ್ಷ, ಬುದ್ದಿ  ಭ್ರಮಣೆಯಾಗಿದ್ದರಿಂದ ಅವರು ಆಗಾಗ ಹೊರಗಡೆ ಹೋಗಿ ಮತ್ತೆ ಕೆಲವು ದಿನಗಳ ನಂತರ ಬರುತ್ತಿದ್ದರು ಆದರೆ ಸುಮಾರು 6 ತಿಂಗಳ ಹಿಂದೆ ಮನೆಯಿಂದ ಹೊರಕ್ಕೆ ಹೋದವಳು ವಾಪಸ್ಸು ಮನೆಗೆ ಬಂದಿರುವುದಿಲ್ಲ ಪತ್ತೆಮಾಡಿಕೊಡಿ ಎಂದು ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ರಸ್ತೆ ಅಪಘಾತ ಪ್ರಕರಣ :


ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 279, 337, 304[ಎ] ಐ.ಪಿ.ಸಿ.

ದಿನಾಂಕ: 19-01-2013 ರಂದು ಪಿರ್ಯಾದಿ ಶ್ರಿನಿವಾಸ್ರಾಜು ಬಿನ್ ಲೇ; ವೆಂಕಟಪ್ಪ, 45 ವರ್ಷ, ಈಡಿಗ ಜನಾಂಗ ಕಾಮದೇನು ಬಾರ್ನಲ್ಲಿ ಕೆಲಸ, ವಾಸ ಬೋವಿ ಕಾಲೋನಿ, 7ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೃಷ್ಣಮೂತರ್ಿ, ಕೆ.ಎ-11, ಎಸ್-5529ರ ಹಿರೋಹೊಂಡಾ ಮೋಟಾರ್ ಸೈಕಲ್ ಚಾಲಕ, ವಾಸ ಮಂಡ್ಯ ರವರು ಮೋಟಾರ್ ಸೈಕಲನ್ನು ಅತಿವೇಗವಾಗಿ ಅಜಾಗರುಕತೆಯಿಂದ ಅಡ್ಡದಿಡ್ಡಿ ಚಾಲನೆ ಮಾಡಿಕೊಂಡು ಬಂದು ಹೆಬ್ಬಾಳಕ್ಕೆ ಕೆಡವಿದ್ದು ಸ್ನೇಹಿತರಾದ ಸತ್ಯನಾರಾಯಣ, ಶ್ರೀನಿವಾಸ್ರಾಜು ರವರುಗಳು ಒಟ್ಟಿಗೆ ಮೂರು ಜನರು ಮೋಟಾರ್ ಸೈಕಲ್ ಸಮೇತ ಹೆಬ್ಬಾಳದ ನೀರಿಗೆ ಬಿದಿದ್ದು, ಈ ಅಪಘಾತದಲ್ಲಿ ಫಿರ್ಯಾದುದಾರರಿಗೆ ಪೆಟ್ಟಾಗಿದ್ದು, ಮೋಟಾರ್ ಸೈಕಲ್ ಮಧ್ಯಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದು ಸತ್ಯನಾರಾಯಣರವರನ್ನು ಮಂಡ್ಯ ಜಿಲ್ಲಾ ಅಸ್ಪತ್ರೆಗೆ ತರಲಾಗಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಡಪಡಿಸಿರುತ್ತಾರೆ. ಮೋಟಾರ್ ಸೈಕಲ್ ಚಾಲಕರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಎಂದು ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 



ಕಳ್ಳತನ ಪ್ರಕರಣ :


ಮದ್ದೂರು ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 457-380 ಐ.ಪಿ.ಸಿ.

ದಿನಾಂಕ: 19-01-2013 ರಂದು ಪಿರ್ಯಾದಿ ನಾಥಪ್ಪ @ ಪೂಜಾರಿ ಬಿನ್. ಲೇ||ಕೆಂಚೇಗೌಡ, 60ವರ್ಷ, ಒಕ್ಕಲಿಗರು, ಶ್ರೀ ಪಟ್ಟಲದಮ್ಮ ದೇವರಪೂಜಾರಿ, ವಾಸ ರುದ್ರಾಕ್ಷಿಪುರಗ್ರಾಮ, ಮದ್ದೂರು ತಾ||. ರವರು ನೀಡಿದ ದೂರು ಏನೆಂದರೆ ದಿನಾಂಕಃ-18-01-2013 ರಂದು ರಾತ್ರಿ ವೇಳೆಯಲ್ಲಿ ರುದ್ರಾಕ್ಷಿಪುರ ಗ್ರಾಮ ಪಟ್ಟಲದಮ್ಮದೇವಸ್ಥಾನದ ಬಾಗಿಲು ಹೊಡೆದು ದೇವಸ್ಥಾನದ ಬೀರುವಿನಲ್ಲಿದ್ದ ಸುಮಾರು 2 ಕೆಜಿ ಬೆಳ್ಳಿಯ ದೇವರ ಪೂಜಾದ ಗಿಂಡಿ ಹಾಗೂ ದೇವರ ಮೈಮೇಲೆ ಇದ್ದ 2 ಗ್ರಾಂನ ಚಿನ್ನದ 1 ತಾಳಿ ಹಾಗೂ ಒಂದೊಂದು ಗ್ರಾಂನ ಎರಡು ತಾಳಿಗಳನ್ನು ಹಾಗೂ ದೇವರ ಬೆಳ್ಳಿಯ ಕಿರೀಟ 800 ಗ್ರಾಂ ಹಾಗೂ ದೇವಸ್ಥಾನದಲ್ಲಿದ್ದ ತಾಮ್ರದ ಬಿಂದಿಗೆಯ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು 2 ಲಕ್ಷದ 18,000 ರೂ ಆಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 36/13 ಕಲಂ. 379 ಐ.ಪಿ.ಸಿ.

ದಿನಾಂಕ: 19-01-2013 ರಂದು ಪಿರ್ಯಾದಿ ಸಿ.ಕೆ. ಸೋಮಶೇಖರ ಬಿನ್. ಕೆಂಪಯ್ಯ @ ಹುಚ್ಚೇಗೌಡ, ಮನೆ ನಂ. 634, ಚಾಮನಹಳ್ಳಿ ಗ್ರಾಮ, ಕಸಬಾ ಹೋಬಳಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ-18-01-2013 ರಂದು ಪಿರ್ಯಾದಿಯವರು ಮದ್ದೂರು ಟೌನ್ ಮಹಾವೀರ ಟಾಕೀಸ್ ಎದುರು ಇರುವ ಮಣಪ್ಪುರಂ ಗೋಲ್ಡ್ ಲೋನ್ ಕಛೇರಿ ಬಳಿ ಅವರ ಹೀರೋ ಹೋಂಡಾ ಮೋಟಾರ್ ಬೈಕ್ (ಸ್ಪ್ಲೆಂಡರ್ ಪ್ಲಸ್) ಸಂಖ್ಯೆ ಕೆಎ-11/ಆರ್-7397 ಅನ್ನು ನಿಲ್ಲಿಸಿ ಸದರಿ ಕಛೇರಿಗೆ ಹೋಗಿದ್ದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.