Moving text

Mandya District Police

DAILY CRIME REPORT DATED : 18-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-01-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ                 1  ಯು.ಡಿ.ಆರ್.ಪ್ರಕರಣ,  6 ಕಳ್ಳತನ ಪ್ರಕರಣಗಳು,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವರದಕ್ಷಿಣೆ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    

ಯು.ಡಿ.ಆರ್.ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ರೇಣುಕಮ್ಮ ಕೋಂ. ಲೇಟ್. ಹೆಚ್. ಮುತ್ತುರಾಯಪ್ಪ, 52 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ಕಲಾವತಿ ಕೋಂ. ಆನಂದ,   30 ವರ್ಷ, ಎಂಬುವವರಿಗೆ ಈಗ್ಗೆ ಸುಮಾರು ವರ್ಷಗಳಿಂದ ತಲೆಯಲ್ಲಿ ಗೆಡ್ಡೆ ಕಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದರು ಗುಣಮುಖವಾಗಿರಲಿಲ್ಲ, ಬೆಂಕಿ ಹತ್ತಿಸಿಕೊಂಡು ಆಕಸ್ಮಿಕವಾಗಿ ಸುಟ್ಟಗಾಯಗಳಿಂದ ಮೃತಪಟ್ಟಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣಗಳು :

1. ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ರಘು ಕೆ.ಎನ್. ಬಿನ್. ನಾಗರಾಜು, ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಅಜರ್ಿದಾರರ ಬಾಬ್ತು ಸುಮಾರು 25.000 ರೂ ಬೆಲೆ ಬಾಳುವ ಬಜಾಜ್ ಪ್ಯಾಸೆಂಜರ್ ಆಟೋ  ನಂ. ಕೆಎಲ್-10-ಎಸ್-4427 ರ ಆಟೋ ಇಂಜಿನ್  ನಂ.ಕೆಎಲ್-10-ಎಸ್-4427  ರ ಆಟೋ ಇಂಜಿನ್ ನಂ. ಎಇಎಂಬಿಕೆಎಂ12486 ಚಾಸಿಸ್ ನಂ. 24ಎಫಬಿಕೆಎಂ96388  ಆಟೋವನ್ನು ಮನೆಯ ಮುಂದೆ ಎಂದಿನಂತೆ ನಿಲ್ಲಿಸಿದ್ದು ಕಳುವಾಗಿರುವ ವಾಹನವನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಶಶಿಕಲಾ ಬಿನ್. ಈರೇಗೌಡ, ಮಲ್ಲೇನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಗವಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಿಸಲು ಬಂದಿದ್ದು ತುಂಬಾ ಜನ ಜಂಗುಳಿ ಇದ್ದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಪೂಜೆ ಮಾಡಿಸಿ ಮುಂದೆ ಬಂದು ನೋಡಿಕೊಂಡಾಗ ಪಿರ್ಯಾದಿ ಕತ್ತಿನಲ್ಲಿದ್ದ ಮಾಂಗಲ್ಯ ಸರ, 1 ಜೊತೆ ಗುಂಡು ಕಳುವಾಗಿತ್ತು. ನನಗೆ ಅರಿವಿಲ್ಲದಂತೆ ಯಾರೋ ಕಳ್ಳರು ಅದನ್ನು ಅಪಹರಿಸಿರುತ್ತಾರೆ.


3. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಚಿಕ್ಕಸ್ವಾಮಿ ಬಿನ್. ಮಂಚಯ್ಯ, 30 ವರ್ಷ, ಅಣಸಾಲೆ ಗ್ರಾಮ, ಕಿರುಗಾವಲು ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. ಕೆ.ಎ 11 ಯು -5094 ಟಿ.ವಿ.ಎಸ್ ಮೊಪೆಡ್ ನಲ್ಲಿ ತಾಲ್ಲೂಕು ಕಚೇರಿಗೆ ಬಂದು ಕೆಲಸದ ನಿಮಿತ್ತ ನಿಲ್ಲಿಸಿ ನಮ್ಮ ಕೆಲಸ ಮುಗಿಸಿಕೊಂಡು ವಾಪಸ್ಸು ಬಂದು ನೋಡಲಾಗಿ ನಮ್ಮ ಬಾಬ್ತು  ಟಿವಿ.ಎಸ್ ಮೊಪೆಡ್ ನಾವು ನಿಲ್ಲಿಸಿದ್ದ ಜಾಗದಲ್ಲಿ ಕಾಣಲಿಲ್ಲ ಯಾರೋ ಕಳ್ಳರು ನನ್ನ ಸ್ಕೂಟರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4.ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 32/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಪುಟ್ಟೇಗೌಡ ಲೇಟ್ ನಿಂಗೇಗೌಡ, 62 ವರ್ಷ, ವ್ಯವಸಾಯ, ಒಕ್ಕಲಿಗರು, ಕಪರನಕೊಪ್ಪಲು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ತಾಲ್ಲೋಕು ಕಛೇರಿಗೆ ನನ್ನ ಬಾಬ್ತು ಮೊಪೆಡ್ ನಂಬರ್ ಕೆ.ಎ-11- ಘ- 4839 ಖಿ.ಗಿ.ಖ ಘಿಐ ಸ್ಕೂಟರ್ನಲ್ಲಿ ಮಧ್ಯಾಹ್ನ 12-30 ಗಂಟೆಯಲ್ಲಿ ಬಂದು ಸ್ಕೂಟರ್ನ್ನು ತಾಲ್ಲೋಕು ಕಛೇರಿಯ ಆವರಣದಲ್ಲಿ ನಿಲ್ಲಿಸಿ ಒಳಕ್ಕೆ ಹೋಗಿ. ಕೆಲಸ ಮುಗಿಸಿ ಮಧ್ಯಾಹ್ನ ಸುಮಾರು     01-30 ಗಂಟೆಯಲ್ಲಿ ಹೊರಕ್ಕೆ ಬಂದು ನನ್ನ ಸ್ಕೂಟರ್ನ್ನು ನೋಡಲಾಗಿ ಸ್ಕೂಟರ್ ಇರಲಿಲ್ಲ. ಯಾರೋ ಕಳ್ಳರು ನನ್ನ ಸ್ಕೂಟರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


5. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಮಹಾಲಿಂಗೇಗೌಡ ಬಿನ್. ಲೇಟ್. ದೇವೇಗೌಡ, ತಿಮ್ಮನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಜಮೀನಿನಲ್ಲಿ ಅಳವಡಿಸಿದ್ದ ಪಂಪ್ ಸೆಟ್ ಮೋಟಾರ್ನ್ನು ದಿನಾಂಕ: 11-01-2013 ರಂದು ರಾತ್ರಿ ವೇಳೆ, ಆರೋಪಿ ಬಸಪ್ಪ ಬಿನ್. ಮರಿಯಪ್ಪ, ತಾಳಶಾಸನ ಗ್ರಾಮ, ಪಾಂಡವಪುರ ತಾಲ್ಲೋಕು, ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


6. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 379 ಐ.ಪಿ.ಸಿ.

     ದಿನಾಂಕ: 18-01-2013 ರಂದು ಪಿರ್ಯಾದಿ ಸಿ. ಗಜೇಂದ್ರ ಬಿನ್. ಲೇ|| ಚಿಕ್ಕತಾಯಪ್ಪ, 49 ವರ್ಷ ರವರು ನೀಡಿದ ದೂರು ಏನೆಂದರೆ ದಿನಾಂಕ: 17-01-2013 ರಂದು ಯಾರೋ ಕಳ್ಳರು ನನ್ನ ಬೈಕ್ನ್ನು ಕಳವು ಮಾಡಿ ತೆಗೆದುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೊಪ್ಪ. ಪೊಲೀಸ್ ಠಾಣೆ ಮೊ.ನಂ. 06/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 18-01-2013 ರಂದು ಪಿರ್ಯಾದಿ ಜಯಲಕ್ಷ್ಮಿ ಕೋಂ. ಎ.ಶಿವಣ್ಣ,  40ವರ್ಷ, ಒಕ್ಕಲಿಗರು, ಮನೆಕೆಲಸ, ಕೊಪ್ಪ ಟೌನ್, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಗಂಡ ಎ.ಶಿವಣ್ಣ ಬಿನ್. ಅಂಕೇಗೌಡ @ ತಮ್ಮೇಗೌಡ, 50ವರ್ಷ, ಒಕ್ಕಲಿಗರು ದಿನಾಂಕ: 26-01-2013 ರಂದು ಮನೆಯಿಂದ ಹೊರಗೆ ಹೋದವರು ಪುನ: ಮನೆಗೆ ವಾಪಸ್ ಆಗಲಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 18-01-2013 ರಂದು ಪಿರ್ಯಾದಿ ಭ್ರಮಲಿಂಗಾಚಾರಿ ಬಿನ್. ಲೇಟ್. ಲಿಂಗಣ್ಣಚಾರಿ ರವರು ನೀಡಿದ ದೂರಿನ ವಿವರವೇನೆಂದರೆ ಬ್ರಹ್ಮೇಶ್. ಬಿನ್. ಬ್ರಹ್ಮಲಿಂಗಚಾರಿ, 18 ವರ್ಷ, ರವರು ದಿನಾಂಕ: 13/01/2013 ರಂದು ಲಕ್ಷ್ಮಿಸಾಗರ ಗ್ರಾಮದಿಂದ ಕಾಣೆಯಾಗಿರುತ್ತಾರೆ. 


3.ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. ಮನುಷ್ಯ ಕಾಣೆಯಾಗಿರುತ್ತಾನೆ.    

ದಿನಾಂಕ: 18-01-2013 ರಂದು ಪಿರ್ಯಾದಿ ಮಲ್ಲೇಶ ಬಿನ್. ಮರೀಗೌಡ, 34 ವರ್ಷ, ವ್ಯವಸಾಯ, ಕೀಳಘಟ್ಟ ಗ್ರಾಮ, ಕೊಪ್ಪ ಹೋಬಳಿ, ಮದ್ದೂರು ತಾ: ರವರು ನೀಡಿದ ದೂರು ಏನೆಂದರೆ ಆರೋಪಿ ರವಿ ಬಿನ್. ಮರೀಗೌಡ, 22 ವರ್ಷ, ದಿನಾಂಕ: 15-01-2013 ಸಂಜೆ 04-00 ಗಂಟೆಯ ಸಮಯದಲ್ಲಿ ಕೀಳಘಟ್ಟ ಗ್ರಾಮ, ಕೊಪ್ಪ ಹೋಬಳಿ, ಮದ್ದೂರು ತಾ. ರವರು ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ : 

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 498[ಎ] ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಲತಾ.ಎನ್. ಕೋಂ ನಾಗರಾಜು, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮತ್ತು ಅವರ ಗಂಡ ನಾಗರಾಜು ಬಿನ್ ಉಗ್ರಪ್ಪ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ಮದುವೆಯಾದ ಹೊಸದರಲ್ಲಿ ಅನ್ಯೋನ್ಯವಾಗಿದ್ದು, ನಂತರ ಗಂಡ ಶೀಲ ಶಂಕಿಸಿ ಅನುಮಾನದಿಂದ ನೋಡುವುದು ಮಾಡುತ್ತಿದ್ದು, ಜಗಳ ಮಾಡುವುದು ಮಾಡುತ್ತಿರುತ್ತಾರೆ ಆದ್ದರಿಂದ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 457-380 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ರವಿಕುಮಾರ, ವೈದ್ಯಾದಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಬೀರುವಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಹೆಸರು ವಿಳಾಸ ತಿಳಿಯಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರ ಬೀರುವಳ್ಳಿಯ ಕಟ್ಟಡದೊಳಗೆ ''ಕರ್ನಾಟಕ ಹೆಲ್ತ್ ಸಿಸ್ಟಂ ಡೆವಲಪ್ ಮೆಂಟ್''   ಅಡಿಯಲ್ಲಿ ಇತ್ತೀಚಿಗಷ್ಟೆ ನೀಡಲಾಗಿದ್ದ ಕಂಪ್ಯೂಟರ್ ಸಿಸ್ಟಮ್ ನ್ನು (ಮಾನಿಟರ್, ಯುಪಿಎಸ್. ಸಿಪಿಯು. ಪ್ರಿಂಟರ್.) ಅಳವಡಿಸಲಾಗಿತ್ತು ಅಳವಡಿಸಲಾಗಿದ್ದ ಕೋಣೆಯ ಬಾಗಿಲು ಸರಳುಗಳನ್ನು ಕತ್ತರಿಸಿ ಒಳ ತೂರಿ ಕಂಪ್ಯೂಟರ್ ಸಿಸ್ಟಮ್ ಅನ್ನು ಕಳವು ಮಾಡಿರುತ್ತಾರೆ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 17-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 17-01-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವಾಹನ ಕಳವು ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ವಂಚನೆ/ಕಳವು ಪ್ರಕರಣ ಹಾಗು 15 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 17-01-2013 ರಂದು ಪಿರ್ಯಾದಿ ಹೆಚ್.ಸಿ.ರಾಜಣ್ಣ ಬಿನ್. ಲೇ ಚನ್ನೇಗೌಡ, ವಕ್ಕಲಿಗರು, ಬ್ಯಾಡರಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ  ಯಾರೋ ಒಬ್ಬ ಗಂಡಸು ನೀರು ಕುಡಿಯಲೋ, ಸ್ನಾನ ಮಾಡಲೋ ಆಕಸ್ಮಿಕವಾಗಿ ಕರೆಗೆ ಬಿದ್ದು ಮರಣ ಹೊಂದಿದ್ದು, ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದರಿಂದ ಗುರುತು ಹಚ್ಚಲು ಸಾಧ್ಯವಾಗಿರುವುದಿಲ್ಲ ಈತನ ಸಾವಿನ ಬಗ್ಗೆ ಯಾವುದೇ ಅನುಮಾನವಿರದ ಕಾರಣ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುತ್ತೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 17-01-2013 ರಂದು ಪಿರ್ಯಾದಿ ಬಿ.ಬೋರೇಗೌಡ ಬಿನ್ ಬೋರಯ್ಯ, ರಾಮ ಮಂದಿರದ ರಸ್ತೆ, ಪಾಲಹಳ್ಳಿ, ಶ್ರೀರಂಗಪಟ್ಟಣ ತಾ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಟಿ.ಪ್ರಬಾಕರ 30 ವರ್ಷ ಎಂಬುವವರು ಕೆಲಸಕ್ಕೆ ಮೈಸೂರಿಗೆ ಹೋಗುತ್ತೇನೆಂದು ಹೇಳಿ ಹೋದವನು ಕಾಣೆಯಾಗಿರುತ್ತಾನೆ. ಕಳೆದ 03 ತಿಂಗಳಿಂದಲೂ ನಮ್ಮ ಸಂಬಂದಿಕರ ಮನೆ ಮತ್ತು ಹೊರಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ ತಾ. ದಿನಾಂಕ: 26-10-2012 ರಂದು ಪೋನ್ ಮಾಡಿದಾಗ ನಾನು ಎಲ್ಲೋ ದೂರವಿದ್ದೇನೆ ಬರುತ್ತೇನೆ  ಎಂದು  ಪೋನ್. ನಂ. 9844046298ಕ್ಕೆ  ತಿಳಿಸಿದನು  ಇದುವರೆವಿಗೂ ಮನೆಗೆ ಬಂದಿರುವುದಿಲ್ಲಾ ಪತ್ತೆ  ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. ಹುಡುಗಿ ಕಾಣೆಯಾಗಿರುತ್ತಾಳೆ.

ದಿನಾಂಕ: 17-01-2013 ರಂದು ಪಿರ್ಯಾದಿ ವೈ.ನವನೀತ್ ಕುಮಾರ್ ಬಿನ್ ಯೇಸುದಾಸ್ 58 ವರ್ಷ, ವಿನಾಯಕ ಬಡಾವಣೆ ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ಎನ್.ಶೈನಿ ಓಶಿನ್ ರವರು ಮನೆಯಿಂದ ಹೊರಗಡೆ ಹೋದವಳು ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ಆದ್ದರಿಂದ ನಾವು ಗಾಬರಿಗೊಂಡು ಎಲ್ಲಾ ಸಂಬಂಧಿಕರ ಮನೆಗಳಲ್ಲಿ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದರೂ ಎಲ್ಲೂ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 41[ಡಿ]-102 ಸಿಆರ್.ಪಿ.ಸಿ. ಕೂಡ 379 ಐ.ಪಿ.ಸಿ.

ದಿನಾಂಕ: 17-01-2013 ರಂದು ಪಿರ್ಯಾದಿ ಕೆ.ಲೋಕೇಶ, ಸಿಪಿಸಿ 684, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎಂ.ಮಹೇಶ ರಾಜಾಜಿನಗರ, ಬೆಂಗಳೂರು ಸಿಟಿ ರವರು ಮಾರುತಿ ವ್ಯಾನನ್ನು ಎಲ್ಲಿಯೋ ಕಳವು ಮಾಡಿಕೊಂಡು ತಂದಿರಬಹುದೆಂದು ಅನುಮಾನದ ಮೇಲೆ ಮುಂದಿನ ಕ್ರಮದ ಬಗ್ಗೆ ಬೆಳಗಿನ ಜಾವ 03-30 ಗಂಟೆಗೆ ಠಾಣೆಗೆ ಹಾಜರುಪಡಿಸಿರುವುದಾಗಿ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 498[ಎ]-323-506  ಐ.ಪಿ.ಸಿ ಕೂಡ 3 & 4 ಡಿ.ಪಿ. ಅಕ್ಟ್.

ದಿನಾಂಕ: 17-01-2013 ರಂದು ಪಿರ್ಯಾದಿ ರಾಜಲಕ್ಷ್ಮಿ, ಎನ್.ಇ.ಎಸ್. ಬಡಾವಣೆ, ಮಳವಳ್ಳಿ ಟೌನ್. ಮೊ.ನಂ. 9845091178 ರವರು ನೀಡಿದ ದೂರು ಏನೆಂದರೆ ಅವರ ಗಂಡ ಎಂ.ಹೆಚ್. ಉಮೇಶ್ ಬಿನ್ ಜಿ. ಹುಚ್ಚಯ್ಯ, ಎನ್.ಇ.ಎಸ್. ಬಡಾವಣೆ, ಮಳವಳ್ಳಿ ಟೌನ್ ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ, ಕಿರುಕುಳ ನೀಡುತ್ತಿದ್ದು ಹಾಗೂ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ಬಗ್ಗೆ ಪ್ರಶ್ನಿಸಲು ಹೋದಾಗ ಕತ್ತನ್ನು ಹಿಡಿದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅದ್ದರಿಂದ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ವರದಕ್ಷಿಣಿ ಕಿರುಕುಳ ನೀಡುತ್ತಿರುವ ನನ್ನ ಗಂಡ ಉಮೇಶ್ನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. 


ವಂಚನೆ/ಕಳವು ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. 420, 379 ಐ.ಪಿ.ಸಿ.

       ದಿನಾಂಕ: 17-01-2013 ರಂದು ಪಿರ್ಯಾದಿ ಶಕುಂತಲಮ್ಮ ಕೊಂ. ಲೇಟ್. ಪುಟ್ಟೇಗೌಡ, 63 ವರ್ಷ, ವಕ್ಕಲಿಗರು. ಮನೆ ಕೆಲಸ, ಕಟ್ಟೇರಿ ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರನ್ನು ಕರೆದುಕೊಂಡು ಹೋಗಿ ಮೋಸ ಮಾಡುವ ಉದ್ದೇಶದಿಂದ ಕತ್ತಿನಲ್ಲಿ ಇದ್ದ ಮಾಂಗಲ್ಯ ಸರ ಹಾಗೂ ಕಿವಿಯಲ್ಲಿದ್ದ ಮಾಟಿಯನ್ನು ಬಿಚ್ಚಿಕೊಂಡು ನನಗೆ ಜ್ಞಾನ ತಪ್ಪಿದಂತಾಯಿತು. ನನಗೆ ಜ್ಞಾನ ಬಂದಾಗ ನನ್ನ ವಡವೆಯನ್ನು ನೋಡಿಕೊಂಡಾಗ 35 ಗ್ರಾಂ ತೂಕವುಳ್ಳ ಮಾಂಗಲ್ಯ ಸರ, ಕಿವಿಯ 5 ಗ್ರಾಂ ಮಾಟಿ, ಒಟ್ಟು 1,15,000/- ರೂ ಬೆಲೆ ಬಾಳುವ ವಡವೆಯನ್ನು ಮೋಸ ಮಾಡಿ ಕಳವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ದೂರಿನ ಮೇರೆಗೆ ತುರ್ತು ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  

DAILY CRIME REPORT DATED : 16-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-01-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ಕೊಲೆ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಸ್ಪೋಟಕ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ರಾಬರಿ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.     


ಕಳವು ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 379 ಐ.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಗಿರಿಸ್ವಾಮಿ ಬಿನ್ ಲೇಟ್. ಕೋಳಬೋವಿ, 39 ವರ್ಷ, ವ್ಯವಸಾಯ, ರಾಮನಂದ ನಗರ, ಬೆಳ್ಳೂರು ಹೋಬಳಿ, ನಾಗಮಂಗಲ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ಬೈಕ್ ನಂಬರ್ ಕೆ.ಎ.54-ಹೆಚ್-4149,  ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ ಬಂದು ಸಂಸ್ಕೃತ ಕಾಲೇಜಿನ ಪಕ್ಕದಲ್ಲಿ ನಿಲ್ಲಿಸಿ ತಮ್ಮ ಅಂಗಡಿಗೆ ಹೋಗಿ ಮದ್ಯಾಹ್ನ 13-30 ಗಂಟೆಯಲ್ಲಿ ಬಂದು  ನೋಡಲಾಗಿ ನಿಲ್ಲಿಸಿದ್ದ ತಮ್ಮ ಬೈಕ್ ಸ್ಥಳದಲ್ಲಿ ಇರಲಿಲ್ಲ. ಯಾರೋ ಕಳ್ಳರು ನನ್ನ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅದರ ಅಂದಾಜು ಬೆಲೆ 30000/- ರೂಗಳಾಗಿರುತ್ತದೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 8/13 ಕಲಂ. 379 ಐ.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಹನುಮಂತಯ್ಯ ಬಿನ್. ಮಾದೇಗೌಡ, ಶಾಖಾಧಿಕಾರಿ, ಸೆಸ್ಕ್ ಘಟಕ-2, ಮಳವಳ್ಳಿ ಉಪವಿಭಾಗ-1, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ದುಷ್ಕರ್ಮಿಗಳು  ಮಳವಳ್ಳಿ-ಕನಕಪುರ ರಸ್ತೆ, ಅಟ್ಟುವನಹಳ್ಳಿ ಕ್ರಾಸ್ ಬಳಿ, 11 ಕಿಲೋ ವ್ಯಾಟ್ ಮಾರ್ಗದಲ್ಲಿ 04 ಸ್ಪ್ಯಾನ್ ನ ಸುಮಾರು 480 ಮೀಟರ್ ರ್ಯಾಬಿಟ್ 12,000/- ರೂ.ಬೆಲೆ ಬಾಳುವ ಎ.ಸಿ.ಎಸ್.ಆರ್. ವೈರ್ ನ್ನು, ಕಳವು ಮಾಡಿರುವುದಾಗಿ, ಪತ್ತೆ ಮಾಡಿಕೊಡಬೇಕೆಂದು ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 454-457-380 ಐ.ಪಿ.ಸಿ.

      ದಿನಾಂಕ: 16-01-2013 ರಂದು ಪಿರ್ಯಾದಿ ಕೆ.ಮೋಹನ್ ಬಿನ್ ಲೇಟ್, ಕಾಶೀನಾದನ್, ಸಕ್ಕರೆ ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು 02-45 ಗಂಟೆಯಲ್ಲಿ ಮತ್ತೆ ಕೆಲಸಕ್ಕೆ ಹೋದೆ. ಕೆಲಸ ಮುಗಿಸಿಕೊಂಡು ಸಂಜೆ 7-30 ಗಂಟೆಗೆ ಮನೆಗೆ ಬಂದಾಗ ಮನೆ ಬಾಗಿಲ ಬೀಗ ತೆಗೆದು ಓಳಗಡೆ ಹೋದಾಗ ಮನೆಯ  ಹಿಂಬಾಗಿಲು ತೆರೆದಿತ್ತು. ಆಗ ನಾನು ಗಾಭರಿಗೊಂಡು ಮನೆಯಲ್ಲಿ ನೋಡಲಾಗಿ ರೂಮಿನಲ್ಲಿಟ್ಟಿದ್ದ ಹೆಚ್. ಪಿ ಕಂಪನಿಯ ಲ್ಯಾಫ್ಟಾಪ್, ಹಾಲ್ನಲ್ಲಿಟ್ಟಿದ್ದ ಓನಿಡ ಡಿವಿಡಿ ಪ್ಲೇಯ್ತುಗಳನ್ನು ಯಾರೋ ಕಳ್ಳರು, ಹೆಸರು ವಿಳಾಸ ತಿಳಿಯಬೇಕಾಗಿದೆ, ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ಕೇಸು ದಾಖಲಿಸಿದೆ.


ಕೊಲೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 302 ಐ.ಪಿ.ಸಿ.

     ದಿನಾಂಕ: 16-01-2013 ರಂದು ಪಿರ್ಯಾದಿ ಮುರಳಿಧರ ಬಿನ್. ಗೌಡೇಗೌಡ, ಒಕ್ಕಲಿಗರು, ವ್ಯವಸಾಯ, ಡಾಮಡಹಳ್ಳಿ  ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ  ನಾಗೇಗೌಡ, ಡಾಮಡಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ಮತ್ತು ಈತನ ಮಗ ಅನಿಲ್ಕುಮಾರ್ @ ನಿರಂಜನ್ ರವರಿಗೂ ಮನೆ ಮತ್ತು ಆಸ್ತಿ ವಿಚಾರದಲ್ಲಿ ಮನಸ್ಥಾಪವಿದ್ದು ದಿನಾಂಕ:16-01-2013 ರಂದು ರಾತ್ರಿ ಸುಮಾರು 8-45 ಗಂಟೆಯ ಸಮಯದಲ್ಲಿ ಆಸ್ತಿ ವಿಚಾರದಲ್ಲಿ ಆರೋಪಿತನು ತನ್ನ ಮನೆಯ ಮುಂದೆ  ಮಗ ಅನಿಲ್ಕುಮಾರ್ @ ನಿರಂಜನ್ ರವರ ಕೂಡ ಜಗಳ ತೆಗೆದು ಮಚ್ಚಿನಿಂದ ಹೊಡೆದು ರಕ್ತಗಾಯ ಮಾಡಿ ಕೊಲೆ ಮಾಡಿರುತ್ತಾನೆಂದು ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಯು.ಡಿ.ಆರ್. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 3/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಸೋಮಶೇಖರ ಎನ್.ಎಂ. ಬಿನ್. ಲೇ|| ಮರಿಸ್ವಾಮಿ, ಒಕ್ಕಲಿಗರು, ವ್ಯವಸಾಯ, ನಗುವನಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಪರಿಚಿತ ಗಂಡಸು, ಸುಮಾರು 50 ರಿಂದ 55 ವರ್ಷ ರವರು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು ಸರಿಯಾದ  ಸಮಯಕ್ಕೆ ಔಷದೋಪಚಾರ ಪಡೆಯದೆ ಮಲಗಿದ್ದಲ್ಲೇ ಮೃತಪಟ್ಟಂತೆ  ಕಂಡುಬಂದಿರುತ್ತೆ,  ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಬಿ.ಆರ್.ಉಮಾ ಮಹಿಳಾ ಎ,ಎಸ್.ಐ. ಮಂಡ್ಯಪೂರ್ವ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಅಪರಿಚಿತ ಗಂಡಸು  ವಯಸ್ಸು ಸುಮಾರು 60 ರಿಂದ 70 ವರ್ಷ ರವರು ಪ್ರಯಾಣಿಕರ ತಂಗುದಾಣದಲ್ಲಿ ಹೋಗಿ ಕುಳಿತು ಹಾಗೆಯೆ ಮಲಗಿಕೊಂಡು ಸ್ವಲ್ಪ ಸಮಯದ ನಂತರ ಬಾಯಿಂದ ರಕ್ತ ಬಂದು ಮೃತಪಟ್ಟಿರುವುದಾಗಿ ಯಾರೋ ಬಂದು ಪಿರ್ಯಾದಿಗೆ ತಿಳಿಸಿದಾಗ ಪಿರ್ಯಾದಿಯು ಹೋಗಿ ನೋಡಲಾಗಿ ಬಾಯಿಯಲ್ಲಿ ರಕ್ತ  ಬಂದು ಮೃತಪಟ್ಟಿದ್ದು ಮೃತನು ಯಾವುದೋ ಕಾಯಿಲೆಯಿಂದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿರುವು-ದಾಗಿದ್ದು ತಾವುಗಳು ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಿ ಅಂತ ಕೊಟ್ಟ  ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  


ಸ್ಪೋಟಕ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 286, 5 ಇಂಡಿಯನ್ ಎಕ್ಸ್ಪ್ಲೋಸಿವ್ ಸಬ್ಸ್ಟೆನ್ಸ್ ಕಾಯ್ದೆ 1908 ಕಲಂ.9 [ಬಿ] 1884 ಹಾಗು 504,324,323,506 ಕೂಡ 34 ಐ.ಪಿ.ಸಿ.

        ದಿನಾಂಕ: 16-01-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ. ಅರಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿಃ 16-01-13ರಂದು ಮಧ್ಯಾಹ್ನ ಫಿಯರ್ಾದಿಯವರಿಗೆ ಮಾಹಿತಿ ಬಂದ ಮೇರೆಗೆ ಫಿಯರ್ಾದಿಯವರು ತಮ್ಮ ಠಾಣಾ ಸಿಬ್ಬಂದಿಗಳಾದ ಎಎಸ್ಐ ಶಿವಮಂಜು, ಪಿಸಿ-03,120,97,85,725 ರವರೊಂದಿಗೆ ಇಲಾಖಾ ಜೀಪ್ ನಂ. ಕೆ.ಎ-11-ಜಿ-250ರಲ್ಲಿ ಪಂಚಾಯಿತಿದಾರರನ್ನು ಕರೆದುಕೊಂಡು ಮುಂಡುಗದೊರೆ ಗ್ರಾಮದ ಸವರ್ೆ ನಂ.351 ಎಂ.ಟಿ ರವೀಚಿದ್ರರವರ ಕಲ್ಲು ಕ್ವಾರೆಯ ಮೇಲೆ ದಾಳಿ ಮಾಡಿ, ಅದರಲ್ಲಿದ್ದ 1] ಶಿವಣ್ಣ ಬಿನ್ ಮರಿಗೌಡ ಮತ್ತು 2] ಶಿವಣ್ಣ ಬಿನ್ ಲೇ. ಬಾಗೂರಯ್ಯನವರನ್ನು ವಶಕ್ಕೆ ತೆಗೆದುಕೊಂಡು 149 ಕೇಪುಗಳು, 6 ಕೆ.ಜಿ ರಾಸಾಯನಿಕ ಉಪ್ಪು, ಮೆಗ್ಗರ್ ಬಾಕ್ಸ್, 2 ಕಟ್ಟು ತಂತಿ, ಡೀಸೈಲ್ ಪೈಪನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿರುತ್ತದೆ. ಆರೋಪಿಗಳಾದ ಎಂ.ಟಿ ರವೀಂದ್ರ ಮತ್ತು ಇತರೆ  ಎ-2, ಎ-3 ಮುಂಡುಗದೊರೆ ಗ್ರಾಮ, ಶ್ರೀರಂಗಪಟ್ಟಣ ತಾ. ರವರುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ. 

ದಿನಾಂಕ: 16-01-2013 ರಂದು ಪಿರ್ಯಾದಿ ಲಲಿತಾ ಕೊಂ. ರಾಜಯ್ಯ, ಲಕ್ಷ್ಮಿಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-01-13 ರಂದು ಪಿರ್ಯಾದಿ ಮನೆ ಕೆಲಸಕ್ಕೆಂದು ಹೊರಗಡೆ ಹೋಗಿದ್ದು ಕೆಲಸ ಮುಗಿಸಿ ವಾಪಸ್ ಬಂದು ಮನೆಯಲ್ಲಿ ನೋಡಿದಾಗ ಬೆಳಗ್ಗೆ 09-30 ಗಂಟೆಯಲ್ಲಿ ಮಗಳಾದ ಮಂಗಳ ಹರಿಹರಪುರಕ್ಕೆ ಬಟ್ಟೆಯನ್ನು ಹೊಲೆಯಲು ಕೊಡುತ್ತೇನೆಂದು ನಮ್ಮ ಪಕ್ಕದ ಮನೆಯವರಿಗೆ ಹೇಳಿ ಹೋದವಳು ಮತ್ತೆ ವಾಪಸ್ ಬಂದಿರುವುದಿಲ್ಲಾ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 16-01-2013 ರಂದು ಪಿರ್ಯಾದಿ ನಾಗಮಣಿ ಕೋಂ. ನಿಂಗರಾಜಾಚಾರಿ, ದೊಡ್ಡಬ್ಯಾಡರಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ  ನನ್ನ ಗಂಡ ನಿಂಗರಾಜಚಾರಿ ರವರು ದಿ: 13-01-13 ರಂದು ಸಂಜೆ 06-00 ಗಂಟೆಯಲ್ಲಿ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿ ಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ. 33/2013 ಕಲಂ: ಮನುಷ್ಯ ಕಾಣೆಯಾಗಿದ್ದಾನೆ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ. 


ರಾಬರಿ ಪ್ರಕರಣ : 

ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 392 ಐ.ಪಿ.ಸಿ.

         ದಿನಾಂಕ: 16-01-2013 ರಂದು ಪಿರ್ಯಾದಿ ಕೆಂಪಮ್ಮ ಕೋಂ ಚಿಕ್ಕೇಗೌಡ, ಕೋಡಿ ಹೊಸೂರು ಗ್ರಾಮ, ಬಿಂಡಿಗನವಿಲೆ ಹೋ, ನಾಗಮಂಗಲ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ  ಯಾರೋ ಕಳ್ಳರು ಹಿಂದಿನಿಂದ ಬಂದು ಟವಲ್ ಅನ್ನು ಹಾಕಿ ಕೈಗಳಿಂದ ಟವೆಲ್ನ್ನು ಹಾಗೂ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು, ಕೆಳಕ್ಕೆ ಕೆಡವಿಕೊಂಡು ನನ್ನ ಕುತ್ತಿಗೆಯಲ್ಲಿದ್ದ 55 ಗ್ರಾಂ ತೂಕದ ಎರಡು ಎಳೆ ಚಿನ್ನದ ಮಾಂಗಲ್ಯದ ಸರ ಕಿತ್ತುಕೊಂಡು ಹೊರಟು ಹೋದರು ನನಗೆ ಅಸ್ತಮಾ, ಬಿ.ಪಿ ಮತ್ತು ಶುಗರ್ ಕಾಯಿಲೆಗಳಿದ್ದುದರಿಂದ ನನಗೆ ಸ್ವಲ್ಪ ಹೊತ್ತು ಪ್ರಜ್ಞೆ ತಪ್ಪಿದಂತಾಯಿತು, ನಂತರ ಎಚ್ಚರವಾದಾಗ ಸುಧಾರಿಸಿಕೊಂಡು ನಮ್ಮ ಹೊಲದಲ್ಲೆಲ್ಲಾ ನನ್ನ ಸರ ಬಿದ್ದುಹೋಗಿದೆಯೆ ಎಂಬುದಾಗಿ ಹುಡುಕಾಡಿ ನೋಡಿದೆವು ಸಿಗಲಿಲ್ಲ. ನಂತರ ಮನೆಗೆ ಬಂದು ವಿಚಾರವನ್ನು ತಿಳಿಸಿದೆನು. ನಮಗೆ ಸ್ವಲ್ಪ ತಿಳುವಳಿಕೆ ಇಲ್ಲದಿದ್ದರಿಂದ ಇದರ ಬಗ್ಗೆ ಏನು ಮಾಡಬೇಕೆಂದು ಗೊತ್ತಾಗದೆ. ಬೆಂಗಳೂರಿನಲ್ಲಿರುವ ನನ್ನ ಎರಡನೇ ಮಗ ಮತ್ತು ನಾಲ್ಕನೆ ಮಗನಿಗೆ ಫೋನ್ ಮಾಡಿ ಈ ವಿಚಾರವನ್ನು ತಿಳಿಸಿದೆ, ಕೊನೆಯ ಮಗ ತಮ್ಮಣ್ಣನು ಈ ದಿವಸ ಊರಿಗೆ ಬಂದು ಕಂಪ್ಲೇಟ್ ಕೊಡೋಣ ಬಾ ಎಂದು ಹೇಳಿ ಕರೆದುಕೊಂಡು ಬಂದಿರುತ್ತಾನೆ. ನನ್ನ ಸರವನ್ನು ಕಿತ್ತುಕೊಂಡು ಹೋಗಿರುವ ಕಳ್ಳರನ್ನು ಹಾಗೂ ಸರವನ್ನು ಪತ್ತೆ ಮಾಡಿಕೊಡಿ, 55 ಗ್ರಾಂ ತೂಕದ ಎರಡು ಎಳೆ ಚಿನ್ನದ ಮಾಂಗಲ್ಯ ಸರದ ಅಂದಾಜು ಬೆಲೆ ಸುಮಾರು 1.5 ಲಕ್ಷ ರೂ. ಎಂಬಿತ್ಯಾದಿಯಾಗಿ ಫಿರ್ಯಾದಿಯವರು ಈ ದಿವಸ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.

DAILY CRIME REPORT DATED : 15-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-01-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು,  3 ಯು.ಡಿ.ಆರ್. ಪ್ರಕರಣಗಳು,    1 ಕಳ್ಳತನ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 17 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.     


ಅಪಹರಣ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 363 ಕೂಡ 34 ಐ.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ಶಿವಣ್ಣ ಬಿನ್ ಲೇಟ್. ಚಿಕ್ಕಬೋರೇಗೌಡ, ಕುದರಗುಂಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಜಯಂತ್ @ ಜಯಂತ್ ಕುಮಾರ್ ಮತ್ತು 2] ಶ್ರೀನಿವಾಸ ರವರುಗಳು ಪಿರ್ಯಾದಿಯವರ ಮಗಳನ್ನು ಎತ್ತಿಹಾಕಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಬೇಕೆಂದು ಹಾಗೂ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 323-504-506-498(ಎ) ಐ.ಪಿ.ಸಿ. 

ದಿನಾಂಕ: 15-01-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ಮರೀಗೌಡ, ಕರಡಿಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಲಕ್ಷ್ಮಿ ಕೋಂ ಮರೀಗೌಡ ಕರಡಿಕೊಪ್ಪಲು ಗ್ರಾಮ ರವರು ನೆನ್ನೆ ರಾತ್ರಿ ಜಗಳ ಮಾಡಿ ಮನೆಯಿಂದ ಹೊರ ಕಳುಹಿಸಿದ್ದು ಮನೆಯ ಬಳಿ ಹೋದಾಗ ಆಕೆಯ ತಲೆಕೂದಲು ಹಿಡಿದು ಎಳದಾಡಿ ಕೈಗಳಿಂದ ಎದೆ, ಮೈಕೈಯ ಮೇಲೆ ಹೊಡೆದು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದು ತನಗೆ ಎರಡು ಹೆಣ್ಣು ಮಕ್ಕಳಾಗಿವೆ ಎಂಬ ವಿಚಾರವಾಗಿ ಹಿಂದಿನಿಂದಲೂ ಕಿರುಕುಳ ನೀಡುತ್ತಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 498 (ಎ)506 ಐ.ಪಿ.ಸಿ. 

      ದಿನಾಂಕ: 15-01-2013 ರಂದು ಪಿರ್ಯಾದಿ ವರಲಕ್ಷ್ಮಿ, ಎಂ. ಕೋಂ ಸತೀಶ, ಮನೆ ನಂ: 690/1, 7ನೇ ಅಡ್ಡರಸ್ತೆ, ಸ್ವರ್ಣಸಂದ್ರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಸತೀಶ 2) ನಾಗರಾಜು ಸ್ವರ್ಣಸಂದ್ರ, ಮಂಡ್ಯ ಸಿಟಿ. ಪೂರ್ಣ ವಿಳಾಸ  ತಿಳಿಯಬೇಕಾಗಿದೆ ಇವರುಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದು ಕೊಲೆ ಬೆದರಿಕೆ ಹಾಕಿ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ರಸ್ತೆಯಲ್ಲಿ ಕಂಡರೆ ಸಾಯಿಸುತ್ತೇನೆಂದು ಕೊಲೆ ಬೆದರಿಕೆ ಹಾಕಿದ್ದಾನೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಶಿವಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಅರ್.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ಮಂಗಳಮ್ಮ ಕೊಂ. ಶಿವಬೋರಯ್ಯ ರವರು ನೀಡಿದ ದೂರು ಏನೆಂದರೆ ಅವರ ಪತ್ನಿ ಶಿವಬೋರಯ್ಯ ಬಿನ್. ಮುಲಗೂಡಯ್ಯ, 38 ವರ್ಷ, ಗಂಗಾಮಸ್ಥರು, ಹುಲಿಕೆರೆಕೊಪ್ಪಲು ಗ್ರಾಮ ರವರು ಮುಖ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಹರಿಯುತ್ತಿದ್ದ ಕಾಲುವೆ ಒಳಗೆ  ಮುಗ್ಗರಿಸಿ ಬಿದ್ದಿದ್ದಾರೆಂದು ಈ  ದಿವಸ ನನ್ನ ಗಂಡನ ಶವ ಹುಲಿಕೆರೆ ಗ್ರಾಮದಿಂದ ಮಳವಳ್ಳಿ ಕಡೆಗೆ ಹೋಗುವ ಕಾಲುವೆಯಲ್ಲಿ ನೀರು ನಿಂತು ಹೋಗಿದ್ದು ಕಾಲುವೆಯ ಒಳಭಾಗದಲ್ಲಿ ನೀರಿನ ಮೇಲೆ ಇರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ಭಾಗ್ಯಮ್ಮ ಕೋಂ. ಗುರುಸ್ವಾಮಿ, 40 ವರ್ಷ, ಒಕ್ಕಲಿಗರು, ಮನೆಕೆಲಸ, ಭೂತನ ಹೊಸೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ನಿವೇದಿತಾ ಕೋಂ. ಅಭಿಷೇಕ್ಗೌಡ, 19 ವರ್ಷ, ಭೂತನಹೊಸೂರು ಗ್ರಾಮ ರವರು ಜೀವನದಲ್ಲಿ ಜಿಗುಪ್ಸೆಗೊಂಡು ಕಾವೇರಿ ನದಿಯ ನೀರಿಗೆ ಬಿದ್ದು ಮೃತಪಟ್ಟಿರುತ್ತಾಳೆ ಮುಂದಿನ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ತಮ್ಮಯ್ಯ ಬಿನ್. ಲೇ|| ನರಸಿಂಹಯ್ಯ, ಅಗ್ರಹಾರ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರು ಏನೆಂದರೆ ನನ್ನ ಹೆಂಡತಿ ಬೋರಮ್ಮ ಕೊಂ ತಮ್ಮಯ್ಯ, 60 ವರ್ಷ, ಅಗ್ರಹಾರ ರವರು ಬಟ್ಟೆ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬಹುದು ಅಥವಾ ಆಕೆಯ ಕೈಗೆ ಪೆಟ್ಟಾಗಿದ್ದು ಆ ನೋವಿನ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಬಿದ್ದು ಮೃತಪಟ್ಟಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 457-380 ಐಪಿಸಿ.

       ದಿನಾಂಕ: 15-01-2013 ರಂದು ಪಿರ್ಯಾದಿ ಸಿಸ್ಟರ್ ಗ್ರೇಸ್ ಲಿಮಾ, ಮುಖ್ಯ ಶಿಕ್ಷಕರು, ಸೆಂಟ್ ಜೋಸೆಫ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ, ಎಂ.ಸಿ. ರೋಡ್, ಮಂಡ್ಯ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಶಾಲೆಯ ಒಂದು ಕಿಟಕಿಯ ವೆಂಟಿಲೇಟರ್ ಗ್ಲಾಸ್ ನ್ನು ಮುರಿದು ಒಳಗಿನ ಡೋರ್ನ ಚಿಲಕದ ಕೊಂಡಿ ಮೀಟಿ ಒಳಗೆ ಬಂದು ನಮ್ಮ ಶಾಲೆಯ ಕಛೇರಿಯ ಬೀಗವನ್ನು  ಹಾಗೂ ಡೋರ್ಲಾಕನ್ನು ಯಾವುದೋ ಆಯುಧದಿಂದ  ಮೀಟಿ ಒಳಗೆ ಬಂದು ಕಛೇರಿಯ ಕಬೋರ್ಡ್ ಡ್ರಾಯರ್ ನ,  ಡೋರ್ಲಾಕ್ ಮೀಟಿ ಓಳಗೆ ಇಟ್ಟಿದ್ದ  ಶಾಲಾ ಮಕ್ಕಳ ಫೀಜ್ ಹಣ 3,000/- ರೂ, ಚರ್ಚ್ ನ,  ಕಾಂಟ್ರಿಬ್ಯೂಷನ್ ಗೆ,  ಸಂಗ್ರಹಿಸಿದ ಹಣ 1,800/- ರೂ, ಇತರೆ ಕಂಟೇಜೆನ್ಸಿ ಖರೀದಿಸಲು ಇಟ್ಟಿದ್ದ 2,000/- ರೂ, ಹಾಗೂ ಕಾಯಿನ್ ಬೂತಿನ ಹಣ ಚಿಲ್ಲರೆ ಸುಮಾರು 700/- ರೂ ಕಾಯಿನ್ ಬೂತ್ ಹಣವನ್ನು ನನ್ನ ಟೇಬಲ್ ಡ್ರಾಯರ್ ನಲ್ಲಿಟ್ಟಿದ್ದುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 15-01-2013 ರಂದು ಪಿರ್ಯಾದಿ ಚಲುವರಾಜು ಬಿನ್. ಚನ್ನಕಣ್ಣನ್, ತಿಮ್ಮನಹೊಸೂರು ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ಚನ್ನಕಣ್ಣನ್ ಬಿನ್. ಲೇಟ್ ರಂಗಪ್ಪನಾಡ್ಡು, 70ವರ್ಷ, ತಿಮ್ಮನಹೊಸೂರು ಗ್ರಾಮರವರು ತಿರುಪತಿಗೆ ಹೋಗಿ ಬರುವುದಾಗಿ ಹೇಳಿ ಹೋಗಿ ದಿನಾಂಕ: 27-12-2012ರಂದು ಹೋದವರು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 14-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-01-2013 ರಂದು ಒಟ್ಟು 12 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣಗಳು :

1. ಕೊಪ್ಪ ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 14-01-2013 ರಂದು ಪಿರ್ಯಾದಿ ಮಂಜು ಬಿನ್. ಲೇಟ್. ಕೆಂಪಯ್ಯ, ಚಾಮನಹಳ್ಳಿ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ರಘು. 28ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ ಆಬಲವಾಡಿ ಎಂಬುವವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಯಾವುದೋ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವನೆ ಮಾಡಿ, ಅದೇ ದಿನ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಈತನ ಸಾವಿನ ಬಗ್ಗೆ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಮುಂದಿನ ಕ್ರಮ ಜರುಗಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 4/13 ಕಲಂ. 174 ಸಿ.ಆರ್.ಪಿ.ಸಿ.

       ದಿನಾಂಕ: 14-01-2013 ರಂದು ಪಿರ್ಯಾದಿ ಕುಮಾರಸ್ವಾಮಿ ಜಿ. ಎಂ. ಬಿನ್. ಲೇಟ್. ಮಹದೇವಪ್ಪ, ಗಂಜಿಗೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಶಾಂತಮ್ಮ, ಗಂಜೀಗೆರೆ ಗ್ರಾಮ  ರವರಿಗೆ ಜಾಯಿಂಟ್ ನೋವು  ಜಾಸ್ತಿಯಾದಾಗ ಆಕಸ್ಮಿಕವಾಗಿ ಕ್ರಿಮಿನಾಶಕವನ್ನು ಕುಡಿದ ಪರಿಣಾಮ ಚಿಕಿತ್ಸೆಗಾಗಿ ಮೈಸೂರಿನ ಮಿಶನ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 13-01-2013 ರಂದು ಭಾನುವಾರ ಸಂಜೆ 06-30 ಗಂಟೆ ಸಮಯದಲ್ಲಿ ಮೃತ ಹೊಂದಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 14-01-2013 ರಂದು ಪಿರ್ಯಾದಿ ಡಾ.ಶ್ರೀನಿವಾಸ.ಜೆ. ನಂ 319,  ಹಳೆ ಎಸ್.ಬಿ.ಎಂ ರೋಡ್, ಪಾಂಡವಪುರ ರವರು ನೀಡಿದ ದೂರಿನ ವಿವರವೇನೆಂದರೆ ಒಂದು ಮುತ್ತಿನ ಸರ ಮತ್ತು ಎರಡು ಉಂಗುರಗಳು ಮತ್ತು ಎರಡನೇ ಬೆಡ್ ರೂಮ್ ನಲ್ಲಿದ್ದ  ಒಂದು ಗೋಲ್ಟನ್ ಕೇಸ್ ಟೈಟಾನ್ ಸ್ಲಿಮ್ ವಾಚ್ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ ಸುಮಾರು 80000/- ಸಾವಿರ ರೂಗಳಾಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 14-01-2013 ರಂದು ಪಿರ್ಯಾದಿ ಭಾಗ್ಯ ಕೋಂ. ಗುರುಸ್ವಾಮಿ, ಭೂತನಹೊಸೂರು, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ನಿವೇದಿತ ಕೋಂ. ನಂದೀಶ, 19 ವರ್ಷ ರವರು ಮನೆಯಿಂದ ಹೊರಗಡೆ ಹೋದವಳು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಅಕ್ಕಪಕ್ಕದ ಗ್ರಾಮಗಳಲ್ಲಿ ತಮ್ಮ ನೆಂಟರ ಮನೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 13-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-04-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  1 ವಂಚನೆ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 379 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಕೃಷ್ಣಮೂರ್ತಿ ಬಿನ್. ರಾಮಚಂದ್ರು, ಚಿಕ್ಕ ಬಾಣಸವಾಡಿ, ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಒಂದು ಪರ್ಸ್  ಹಾಗೂ ಪಿರ್ಯಾದಿಯವರ ತಾಯಿಯ ಒಂದು ಪರ್ಸನ್ನು  ಯಾರೋ ಕಳ್ಳತನ ಮಾಡಿದ್ದು, 7000/- ರೂ ಹಣ, ಡ್ರೈವಿಂಗ್ ಲೈಸೆನ್ಸ್, ಡೆಬಿಟ್ ಕಾರ್ಡ, 1.500/- ರೂ ಹಣ ಇದ್ದು ಒಟ್ಟು 8500/- ರೂ. ಬೆಲೆ ಬಾಳುವುದಾಗಿದ್ದು ಇವುಗಳನ್ನು ಕಳ್ಳತನ ಮಾಡಿರುತ್ತಾರೆ ರತ್ನ ಎಂಬುವವರ ಮೇಲೆ ಅನುಮಾನುವಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 379 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್. ತಿಮೇಗೌಡ @ ದೊಳ್ಳೇಗೌಡ, ಒಕ್ಕಲಿಗರು, ವ್ಯವಸಾಯ, ಸೋಮನಹಳ್ಳಿ, ಕೊಪ್ಪ ಹೋ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ದಿನಾಂಕ:13-01-2013 ರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಮೀನಿನ ಬಳಿ ಹೋಗಲಾಗಿ ಮೋಟಾರ್ ಅಳವಡಿಸಿದ್ದ ಪೆಟ್ಟಿ ಬೀಗ ಜಡಿದು ಒಳಗಿದ್ದ ಸ್ಟಾಟರ್ ಅನ್ನು ಯಾರೋ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರೊಡನೆ ಇದ್ದ ಸಿಂಗಲ್ ಕಾಯಿಲ್ ವೈರ್ ಸಹ ಇರುವುದಿಲ್ಲ. ಇವುಗಳ ಒಟ್ಟು ಅಂದಾಜು ಮೌಲ್ಯ ಹತ್ತು ಸಾವಿರ ರೂ.ಗಳಾಗಿರುತ್ತೆ. ಹಾಗಾಗಿ ತಾವು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸ್ಟಾಟರ್ನ್ನು ಪತ್ತೆ ಮಾಡಿಸಿಕೊಡಬೇಕೆಂದು ಮತ್ತು ಮುಂದಿನ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 420 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಗೀತಾ ಕೋಂ. ನಿರಂಜನ, ಬೀರುವಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಕೈಗೆ ಪುಡಿಯನ್ನು ಹಾಕಿದಾಗ ಪಿರ್ಯಾದಿಗೆ ಏನಾಯಿತು ಎಂದು ತಿಳಿಯಲಿಲ್ಲ, ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು, ಹೆಸರು ವಿಳಾಸ ತಿಳಿಯಬೇಕಾಗಿದೆ ಪಿರ್ಯಾದಿಯವರ ಗಮನವನ್ನು ಬೇರೆ ಕಡೆಗೆ ಸೆಳೆದು ನಂಬಿಸಿ ಪಿರ್ಯಾದಿಯವರ ಕತ್ತಿನಲ್ಲಿದ್ದ ಎರಡು ಎಳೆ ಮಾಂಗಲ್ಯದ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 7/13 ಕಲಂ. 457-380 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಪ್ರಕಾಶ್ ಎನ್, ಬಿನ್. ಲೇಟ್. ನಂಜುಂಡರಾವ್, ಹೊಸ ಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಅಂಗಡಿಗೆ ಹಾಕಿದ್ದ ಬೀಗ ಮತ್ತು ಡೋರ್ಲಾಕ್ ನ್ನು ಒಡೆದು ಒಳಗಡೆಯಿದ್ದ 12000/- ರೂ ನಗದು, ಕಂಪ್ಯೂಟರ್ನ ಸಿಪಿಯು ಅನ್ನು ಹಾಗೂ ರಿಪೇರಿಗೆಂದು ಕೊಟ್ಟಿದ್ದ ಹಳೆಯ ಮೊಬೈಲ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಅಂದಾಜು ಬೆಲೆ ಸುಮಾರು 22000/- ರೂಗಳಾಗುತ್ತದೆ, ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಥಮ .ವರ್ತಮಾನ .ವರದಿ ದಾಖಲಿಸಲಾಗಿದೆ.  

DAILY CRIME REPORT DATED : 12-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-01-2013 ರಂದು ಒಟ್ಟು 26 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ,  1 ಅಪಹರಣ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ರಾಬರಿ ಪ್ರಕರಣ ಹಾಗು 22 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   


ವಾಹನ ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 379 ಐ.ಪಿ.ಸಿ.

ದಿನಾಂಕ: 12-01-2013 ರಂದು ಪಿರ್ಯಾದಿ ಸಂಜೀವಯ್ಯ ಬಿನ್. ಲೇಟ್. ಹನುಮಯ್ಯ, ಚನ್ನೇಗೌಡನದೊಡ್ಡಿ, ಮದ್ದೂರು ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಬಾಬ್ತು ಕೆಎ-11/ಎಕ್ಸ್-1985 ಮೊಪೆಡ್ ಸ್ಕೂಟರ್ ನ್ನು, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 363-366(ಎ) ಐ.ಪಿ.ಸಿ.

ದಿನಾಂಕ: 12-01-2013 ರಂದು ಪಿರ್ಯಾದಿ ರಾಜನಾಯ್ಕೆ ಬಿನ್. ವೆಂಕಟೇಶ ನಾಯ್ಕ, ಬಿ,ಬಿ, ತಾಂಡ ಗ್ರಾಮ, ಬಳ್ಳಾರಿ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶ್ರೀನಿವಾಸ ವಡ್ಡರಹಳ್ಳಿ ಗ್ರಾಮ ಕೆ ಆರ್ ಪೇಟೆ ತಾ| ರವರು ದಿನಾಂಕ 10.01.2013 ರಂದು ಬೆಳಗಿನ ಜಾವ ಸುಮಾರು 4-00 ಗಂಟೆ ಸಮಯದಲ್ಲಿ ಪಿರ್ಯಾದಿಯವರು ತಮ್ಮ ಶೆಡ್ ನಲ್ಲಿ ಮಲಗಿದ್ದಾಗ ಅವರ 15 ವರ್ಷದ ತಂಗಿಯನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಆದ್ದುದ್ದರಿಂದ ತಾವುಗಳು ನನ್ನ ತಂಗಿಯನ್ನು ಅಪಹರಣ ಮಾಡಿರುವ ಮೇಲ್ಕಂಡ ಶ್ರೀನಿವಾಸ ಎಂಬಾತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 12-01-2013 ರಂದು ಪಿರ್ಯಾದಿ ಶಿವಣ್ಣ.ಬಿ.  ಬಿನ್. ಬೋರಲಿಂಗೇಗೌಡ  ಬಿ.ಆರ್. ಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ರಂಜಿತಾ  ಬಿನ್. ಬಿ.ಶಿವಣ್ಣ, 19 ವರ್ಷ, ಬಿ. ಆರ್. ಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮನೆಯವರು ಯಾರೂ ಮನೆಯಲ್ಲಿ ಇಲ್ಲದ ಸಮಯದಲ್ಲಿ ಪಿರ್ಯಾದಿಯವರ ಮಗಳು ಮನೆಯಿಂದ ಹೊರಟು ಹೋಗಿದ್ದು ವಾಪಸ್ ಬಂದಿರುವುದಿಲ್ಲಾ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆ ಆಗಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 392 ಐ.ಪಿ.ಸಿ.

ದಿನಾಂಕ: 12-01-2013 ರಂದು ಪಿರ್ಯಾದಿ ಉಮಾಮಣಿ ಕೋಂ. ರಮೇಶ್ ಕುಮಾರ್, 42 ವರ್ಷ, ಬ್ರಾಹ್ಮಣರು, ಗೃಹಿಣಿ, ಪೂರ್ಣಯ್ಯನ ಬೀದಿ, ಶ್ರೀರಂಗಪಟ್ಟಣ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಉತ್ತರಾದಿ ಮಠದ ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಮೋಟಾರ್ ಸೈಕಲ್ ನಲ್ಲಿ ಎದುರಿನಿಂದ ಬಂದ ಮೂವರು ಪಿರ್ಯಾದಿಯವರ ಕತ್ತಿಗೆ ಕೈ ಹಾಕಿ   ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದು ಅದು ಸುಮಾರು 30 ಗ್ರಾಂ. ಇದ್ದು  ಬೆಲೆ ಸುಮಾರು 90.000/- ರೂ ಆಗಿರುತ್ತೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.        

DAILY CRIME REPORT DATED : 11-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-01-2013 ರಂದು ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಕಳವು ಪ್ರಕರಣಗಳು,  1 ಅತ್ಯಾಚಾರ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  2 ವಂಚನೆ ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 15 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   


ಕಳವು ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 41 ಕ್ಲಾಸ್[ಡಿ], 102 ಸಿ.ಆರ್.ಪಿ.ಸಿ. ಕೂಡ 379 ಐಪಿಸಿ

ದಿನಾಂಕ: 11-01-2013 ರಂದು ಪಿರ್ಯಾದಿ ಮಂಜು.ಕೆ.ಎಂ. ಪಿ.ಎಸ್.ಐ. ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ತನ್ನ ಊರು ತಿಮ್ಮನಕೊಪ್ಪಲು ಎಂದು ಮತ್ತೋಂದು ಬಾರಿ ಕೆ.ಆರ್.ನಗರ ಎಂದು ತನ್ನ ಹೆಸರನ್ನು ಸುಬ್ರಮ್ಮಣಿ ಎಂದು ತಿಳಿಸಿದ್ದು ಬೈಕ್ನ ಬಗ್ಗೆ ವಿಚಾರ ಮಾಡಿದಾಗ ಸದರಿ ಬೈಕ್ಗೆ ಸಂಭಂದಪಟ್ಟ ದಾಖಲಾತಿಗಳು ಯಾವುದು ತನ್ನ ಬಳಿ ಇಲ್ಲವೆಂದು ಸದರಿ ಬೈಕ್ ಕಳ್ಳತನದ್ದಾಗಿರುವುದಾಗಿ ತಿಳಿಸಿದ ಮೇರೆಗೆ ಬೈಕ್ ನಂಬರ್ ನೋಡಲಾಗಿ ಕೆ.ಎ.08-ಎಸ್-2027 ಎಂದು ಇದ್ದು ಸದರಿ ಬೈಕ್ ಹಾಗು ಆಸಾಮಿಯನ್ನು ಠಾಣೆಗೆ ಬೆಳಗಿನ ಜಾವ 05-00 ಗಂಟೆಗೆ ಕರೆದುಕೊಂಡು ಬಂದು ಸ್ವಯಂ ವರದಿ ತಯಾರಿಸಿರುತ್ತೆ.


 2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 7/12 ಕಲಂ. 41 ಕ್ಲಾಸ್. (ಡಿ) 102 ಸಿ.ಆರ್.ಪಿ.ಸಿ. ಕೂಡ 379 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಕೃಷ್ಣೇಗೌಡ, ಸಿಪಿಸಿ-678, ನಗರ ಠಾಣೆ ರವರು ನೀಡಿದ ದೂರು ಏನೆಂದರೆ 1] ಸಲೀಂ @ ಸಲ್ಮಾನ್ 2] ರವಿ ಬಿನ್ ಇಂದುಪುರ್ ಟೌನ್ ಆಂಧ್ರಪ್ರದೇಶ 3] ವಜ್ರಮುನಿ @ ವಜ್ರ ಹೊಳಲು ರವರುಗಳ ಬಳಿ ಇದ್ದ ಸಬ್ಮಸರ್ಿಬಲ್ ಪಂಪ್ ಬಗ್ಗೆ ವಿಚಾರಿಸಲಾಗಿ ಪಾಂಡವಪುರ ಟೌನ್ನ ವಿ.ಸಿ. ಕಾಲುವೆಯಲ್ಲಿ ಕಳ್ಳತನ ಮಾಡಿದ್ದು ಈ ದಿನ ಕೆ.ಆರ್.ಪೇಟೆಗೆ ಗುಜರಿ ಅಂಗಡಿಗೆ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದರು. ಇವರ ಬಗ್ಗೆ ಅನುಮಾನ ಬಂದು ಸದರಿ ಆಸಾಮಿಗಳನ್ನು ಮಾಲಿನ ಸಮೇತ ಮಧ್ಯಾಹ್ನ 03-15 ಗಂಟೆಗೆ ಠಾಣೆಗೆ ಕರೆತಂದು ವರದಿಯೊಂದಿಗೆ ಹಾಜರುಪಡಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಹಲಗೂರು ಪೊಲೀಸ್ ಠಾಣೆ ಮೊ.ನಂ. 8/13 ಕಲಂ. 427-379-511 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಕೆ.ನಾಗರಾಜು, ಕಾರ್ಯನಿರ್ವಾಹಕ ಅಭಿಯಂತರರು. ಟಿ.ಕೆ.ಹಳ್ಳಿ ರವರು ನೀಡಿದ ದೂರಿನ ವಿವರವೇನೆಂದರೆ ಹೆಚ್.ಬಸಾಪುರ ಗ್ರಾಮದ ಬಳಿ ಇರುವ ಬೆಂಗಳೂರಿಗೆ ಕುಡಿಯುವ ಶುದ್ದ ನೀರಿನ 4ನೇ ಘಟ್ಟ 2ನೇ ಹಂತದ ನೀರಿನ ಪೈಪಿಗೆ ಅಳವಡಿಸಿರುವ ಸ್ಕೋರ್ ವಾಲ್ವ್ ನ್ನು ಯಾರೋ ದುಷ್ಕರ್ಮಿಗಳು  ಹೊಡೆದು ನಾಶ ಮಾಡಿ ಅದನ್ನು ಕಳ್ಳತನ ಮಾಡಲು ಪ್ರಯತ್ನಪಟ್ಟಿದ್ದು ಇದರಿಂದ ಲಕ್ಷಾಂತರ ಲೀಟರ್ ನೀರು ಸೋರಿಕೆಯಾಗಿರುತ್ತೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅತ್ಯಾಚಾರ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 6/13 ಕಲಂ. 376 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಜಯರಾಮ್ ಬಿನ್. ಲೇಟ್. ಕೆಂಪೇಗೌಡ, ಸಿಂಗ್ರೀಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮಣ್ಣೇಗೌಡ ಬಿನ್ ಸಿಂಗ್ರೀಗೌಡ, ಸಿಂಗ್ರೀಗೌಡನಕೊಪ್ಪಲು ಗ್ರಾಮ ರವರು ಒಂದು ತಿಂಗಳ ಹಿಂದೆ ನನ್ನ ದೊಡ್ಡ ಮಗಳು ಸೌಮ್ಯ ಎಂಬ ಆಕೆಯನ್ನು ಬಾಣಂತನಕ್ಕೆ ಕರೆದುಕೊಂಡು ಬಂದಾಗ ನನ್ನ 2ನೇ ಮಗಳು ಗರ್ಭಿಣಿ  ಎಂದು ತಿಳಿದು ಬಂದಿರುತ್ತದೆ ಅವಳನ್ನು ಯಾರು ಗರ್ಭವತಿಯಾಗಲು ಕಾರಣ ಎಂದು ಕೇಳಿದಾಗ ಎದುರು ಮನೆ ತಮ್ಮಣ್ಣ ಎಂದು ತಿಳಿಸಿರುತ್ತಾಳೆ ಅವರು ನಮ್ಮ ಚಿಕ್ಕಪ್ಪ ಸಿಂಗ್ರೀಗೌಡನ ಮಗನಾದ ತಮ್ಮಣ್ಣೇಗೌಡ ಆಗಿರುತ್ತಾನೆ ಸದರಿ ವ್ಯಕ್ತಿಯ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಆರ್. ಪ್ರಕರಣಗಳು :

1. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 2/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಪಿ.ಜೆ ಲಕ್ಷ್ಮಣ, ಕಾರ್ಯನಿರ್ವಾಹಕ ಅಭಿಯಂತರರು, ಕವಿನಿನಿ, ಶಿವನಸಮುದ್ರರವರು ನೀಡಿದ ದೂರಿನ ಸಾರಾಂಶವೇನೆಂದರೆ ಶಿವನಸಮುದ್ರದ ಹೆಡ್ವಕ್ವಾಟರ್ ಒಂದು ಅನಾಥ ಗಂಡು ಶವ ನೀರಿನಲ್ಲಿ ತೇಲುತ್ತಿದೆ ತಾವು ಬಂದು ಮುಂದಿನ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 2. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಯು.ಡಿ.ಆರ್. 3/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ರಾಜಮ್ಮ ಕೊಂ. ನಾಗರಾಜೇಗೌಡ, ಹೊಡಕೆಶೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಸೀಮೆಎಣ್ಣೆ ಸ್ವವ್ಗೆ ಪಂಪು ಮಾಡಿದಾಗ ಹೆಚ್ಚು ಸೀಮೆಎಣ್ಣೆ ಹೊರ ಸುರಿದ್ದಿದ್ದು ಬೆಂಕಿಕಡ್ಡಿ ಗೀಚಿದಾಗ ಒಂದೇ ಸಲಕ್ಕೆ ಬೆಂಕಿ ಹತ್ತಿಕೊಂಡು ನವೀನಳಿಗೆ ಸುಟ್ಟಗಾಯವಾಗಿದ್ದರಿಂದ ಮೈಸೂರಿನ ಸುಟ್ಟಗಾಯಗಳ ವಾಡರ್ಿಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ನವೀನಳು ದಿನಾಂಕ: 11-01-13 ರಂದು ಬೆಳಗ್ಗೆ 07-00 ಗಂಟೆ ಸುಮಾರಿಗೆ ಚಿಕಿತ್ಸೆ ಪಡೆಯುತ್ತಿದ್ದ ವಾಡರ್ಿನಲ್ಲೇ ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ವಂಚನೆ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 420 ಕೂಡ 34 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ನಾಗಮ್ಮ ಕೋಂ. ಲೇಟ್. ಶಿವಸ್ವಾಮಿ, ಆಲಕೆರೆ ಗ್ರಾಮ, ಕೆರಗೋಡು ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ   ಅಪರಿಚಿತ ಸುಮಾರು 25 ವರ್ಷ ವಯಸ್ಸಿನ ಗಂಡಸು ಮತ್ತು 30 ವರ್ಷ ವಯಸ್ಸಿನ ಹೆಂಗಸು ಪಿರ್ಯಾದಿಯನ್ನು ಮಾತನಾಡಿಸಿ ಅವರ ಬಳಿ ಇದ್ದ ಚಿನ್ನದ ರೀತಿಯ ಕಾಸು ಮತ್ತು ಗುಂಡು, ತಾಳಿಯನ್ನು ತೋರಿಸಿ ತೆಗೆದುಕೊಳ್ಳಿ ಎಂದು ಪಿರ್ಯಾದಿಯ ಮೈಮುಟ್ಟಿದಾಗ ಪ್ರಜ್ಞೆ ತಪ್ಪಿದಂತಾಗಿದ್ದು ಅದಾದ ನಂತರ ಪಿರ್ಯಾದಿಯು ನೋಡಿಕೊಂಡಾಗ ಸದರಿ ಅಪರಿಚಿತ ವ್ಯಕ್ತಿಗಳು ಪಿರ್ಯಾದಿಯ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಚೈನ್ ಮತ್ತು ಕೈಯಲ್ಲಿದ್ದ 15 ಗ್ರಾಂ ತೂಕದ ಒಂದು ಚಿನ್ನದ ಬಳೆಯನ್ನು ಬಿಚ್ಚಿಕೊಂಡು ಹೋಗಿರುತ್ತಾರೆ ಅವರುಗಳನ್ನು ಪತ್ತೆ ಹಚ್ಚಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 6/12 ಕಲಂ. 417-420 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಲಲಿತ ಕೊಂ. ರಾಘವೇಂದ್ರ, ಚೀಕನಹಳ್ಳಿ ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಗಂಡರಾಘವೇಂದ್ರ ಹಾರೋಹಳ್ಳಿ ಗ್ರಾಮ ಪಾಂಡವಪುರ ತಾ|| ರವರು ಈ ನಿನ್ನ ಮಗುವಿಗೆ ನಾನು ಕಾರಣ ಅಲ್ಲ. ಬೇರೆಯವರಿಗೆ ಗಭರ್ಿಣಿಯಾಗಿದ್ದೀ ಎಂದು ತಿಳಿಸಿ ಪಿರ್ಯಾದಿಯನ್ನು ತಮ್ಮ ತವರು ಮನೆಯಲ್ಲೆ ಬಿಟ್ಟು ಹೋಗಿದ್ದು ರಾತ್ರಿ ಸುಮಾರು 03-00 ಗಂಟೆಯಲ್ಲಿ ಪಿರ್ಯಾದಿ ಬಚ್ಚಲು ಮನೆಗೆ ಹೋದಾಗ ತಲೆ ಸುತ್ತಿ ಬಿದ್ದು ಬಿಟ್ಟಿದ್ದು ಆ ವೇಳೆ ಪಿರ್ಯಾದಿಗೆ ಗಂಡು ಮಗು ಜನಿಸಿ ಸತ್ತು ಹೋಗಿದ್ದು ಆದ ಕಾರಣ ಪಿರ್ಯಾದಿಯನ್ನು ನಂಬಿಸಿ ಮೋಸ ಮಾಡಿದ ಪಿರ್ಯಾದಿ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳ್ಳತನ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 457-380 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಸುಬ್ಬಣ್ಣ ಬಿನ್ ಲೇಟ್ ಮಾದಪ್ಪ, ನಾನು ಬೇಸಾಯಕ್ಕೆಂದು ಹೈಸ್ಪೀಡ್ 5.5 ಹೆಚ್.ಪಿ. ಆಕ್ವಟಿಕ್ಸ್.  ನೀರೆತ್ತುವ ಪಂಪ್ಸೆಟ್ನ್ನು ಅಳವಡಿಸಿದ್ದು  ಪಂಪ್ಸೆಟ್ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದೆ. ಮಾರನೆ ದಿನ ಬಂದು ನೋಡಲಾಗಿ ಯಾರೋ ಕಳ್ಳರು ಬೀಗ ತೆಗೆದು ಒಳಗಡೆ ಇದ್ದ ಮೋಟಾರನ್ನು ಯಾವುದೋ ಆಯುಧದಿಂದ ಬಿಚ್ಚಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಬೆಲೆ ಸುಮಾರು 15,000/- ರೂಗಳು ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 7/13 ಕಲಂ. 279-304[ಎ] ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಬಿ.ವಿ. ಸ್ವಾಮಿ ಬಿನ್. ವೆಂಕಟೇಗೌಡ, ಬೇವಿನಹಳ್ಳಿ ಗ್ರಾಮ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಹೇಶ ಕೆಎ-09-ಎಫ್-3361 ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸ್ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮಹದೇವಯ್ಯನಿಗೆ ಡಿಕ್ಕಿ ಮಾಡಿಸಿದ ಪರಿಣಾಮ ಮಹದೇವಯ್ಯ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ರಕ್ತ ಸುರಿಯುತ್ತಿದ್ದು ಪೆಟ್ಟಾಗಿದ್ದ ಮಹದೇವಯ್ಯನನ್ನು ಅಪಘಾತ ಉಂಟು ಮಾಡಿದ ಬಸ್ಸಿನಲ್ಲಿ ಹಾಕಿಕೊಂಡು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿದ್ದು ವೈದ್ಯರು ಪರೀಕ್ಷಿಸಿ ರಾತ್ರಿ 08-38 ಗಂಟೆ ಸಮಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  

DAILY CRIME REPORT DATED : 10-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-01-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 13 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಕಳ್ಳತನ ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 457-380 ಐ.ಪಿ.ಸಿ.

ದಿನಾಂಕ:10-01-2013 ರಂದು ಪಿರ್ಯಾದಿ ಮಹಮದ್ ಅಪ್ರತಾಬ್ ಬಿನ್. ಅಮೀರ್ ಜಾನ್, ಹನೀಫ್ ಮೊಹಲ್ಲಾ ನಾಗಮಂಗಲ ಟೌನ್ & ತಾಲ್ಲೂಕು ಮಂಡ್ಯ ಜೆಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 09-01-2013 ರಂದು ರಾತ್ರಿ ವೇಳೆಯಲ್ಲಿ ನಾಗಮಂಗಲ ಟೌನ್ನ ಮಂಡ್ಯ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯ ಶೆಲ್ಟರ್ನ್ನು ಜಖಂಗೊಳಿಸಿ ಅಂಗಡಿಯಲ್ಲಿದ್ದ ಸುಮಾರು 20000-00 ರೂ ಬೆಲೆ ಬಾಳುವ ಮೊಬೈಲ್ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಕಳುವು ಮಾಡಿದ ಆರೋಪಿಗಳನ್ನು  ಮತ್ತು ಮಾಲನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೆಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 2/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 10-01-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ರಾಜಣ್ಣ. ಚಿಕ್ಕಂಕನಹಳ್ಳಿ, ಆತಗೂರು ಹೋ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗಳು ಶ್ವೇತಾ ಕೋಂ. ಸತೀಶ್. 24ವರ್ಷ, ಆಬಲವಾಡಿ, ಕೊಪ್ಪ ಹೋ. ರವರು ಮನೆಯಿಂದ ಹೋಗುವಾಗ ತಿಳಿಹಳದಿ ಬಣ್ಣದ ಸೀರೆ ಅದಕ್ಕೆ ಹೊಂದಿಕೊಂಡಂತಹ ಬಣ್ಣದ ರವಿಕೆ ತೊಟ್ಟಿರುತ್ತಾಳೆ. ಹಾಗಾಗಿ ಮೇಲ್ಕಂಡ ಚಹರೆಯುಳ್ಳ ನನ್ನ ಮಗಳನ್ನು ಕೂಡಲೇ ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 

DAILY CRIME REPORT DATED : 09-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ಸ್ಪೋಟಕ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಮನೆ ಕಳ್ಳತನ ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಸಂಚಾರಿ ಪೊಲೀಸ್ ಠಾಣೆ ಮೊ.ನಂ. 01/13 ಕಲಂ. 279, 304(ಎ) ಐ.ಪಿ.ಸಿ.

ದಿನಾಂಕ: 09-01-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇಟ್. ನಾಗಯ್ಯ, ಚಾಗಲ್ಪೇಟೆ ಬೀದಿ, ಬೇಥಂ ಚರ್ಲಮಂಡಲ, ಡೂನ್ ತಾ., ಕನರ್ೂಲ್ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ವಿವರವೇನೆಂದರೆ ನಮ್ಮ ಬೈಕ್  ಕೆಎ-11/ಹೆಚ್-8723 ಅನ್ನು ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ಸವಾರ ರಾಜು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಿರ್ಲಕ್ಷತೆಯಿಂದ ಸಡನ್ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸಮೇತ ನಾನು ಹಾಗೂ ರಾಜು ಇಬ್ಬರು ಕೆಳಗೆ ಬಿದ್ದಾಗ  ರಾಜುರವರು ನನಗೆ ತಲೆ ನೋಯ್ಯುತ್ತಿದ್ದು ತಲೆ ಸುತ್ತುತ್ತಿದೆ ಎಂದು ಹೇಳಿದ್ದರಿಂದ ಮಂಡ್ಯ ಜಿಲ್ಲಾ ಆಸ್ಪತ್ರೆ ಬಂದು ಬೆಳಿಗ್ಗೆ ವ್ಶೆದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಲಾಗಿ ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಆಂಬ್ಯೂಲೆನ್ಸ್ ಒಂದರಲ್ಲಿ ನಿಮ್ಹಾನ್ಸ್ ಆಸ್ಪತ್ರೆಗೆ ಕೆರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಬಿಡದಿ ಸಮೀಪದಲ್ಲಿ ಮೃತ ಪಟ್ಟಿದ್ದರಿಂದ ಈತನ ಸಾವಿಗೆ ರಾಜುರವರ ಅತಿವೇಗ ನಿರ್ಲಕ್ಷತೆಯ ಚಾಲನೆಯೇ ಕಾರಣವಾಗಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಸ್ಪೋಟಕ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 285,286-511 ಐಪಿಸಿ ಹಾಗು ಕಲಂ.4 ಎಕ್ಸ್ಪ್ಲೋಸಿವ್ ಸಬ್ಸ್ಟೆನ್ಸ್ ಆಕ್ಟ್ 1908

ದಿನಾಂಕ: 09-01-2013 ರಂದು ಪಿರ್ಯಾದಿ ಎಂ.ವೆಂಕಟರಾಮಪ್ಪ. ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶ್ರೀರಂಗಪಟ್ಟಣ ತಾ: ಜಕ್ಕನಹಳ್ಳಿ ಗ್ರಾಮದ ನಿಂಗೇಗೌಡ ಬಿನ್ ಸಿದ್ದೇಗೌಡ, ಎಂಬುವರಿಗೆ ಸೇರಿದ ಕಲ್ಲುಕೋರೆಯ ಹತ್ತಿರ ಬೆಳಿಗ್ಗೆ 07-00 ಗಂಟೆಗೆ ಹೋಗಿ, ನೋಡಲಾಗಿ ಇಬ್ಬರು ವ್ಯಕ್ತಿಗಳಿದ್ದು, ಒಬ್ಬ ವ್ಯಕ್ತಿ ಕಂಪ್ರೆಸರ್ ಟ್ರಾಕ್ಟರ್ ಮೇಲೆ ಕುಳಿತು, ಜಾಕ್ ಮೂಲಕ ಕುಳಿಗಳನ್ನು ಹೊಡೆಯುತ್ತಿದ್ದು, ಸದರಿಯವರು ಕಲ್ಲು ಕೋರೆಯಲ್ಲಿ ಟ್ರಾಕ್ಟರ್ ಹಾಗೂ ಕಂಪ್ರೆಸರ್ ಟ್ರಾಕ್ಟರನ್ನು ನಿಲ್ಲಿಸಿಕೊಂಡು, ಕಂಪ್ರೆಸರ್ ಜಾಕ್ ಮೂಲಕ ಕಲ್ಲುಕೋರೆಯಲ್ಲಿ ಕುಳಿಗಳನ್ನು ಹೊಡೆಯುತ್ತಿದ್ದರು. ಹತ್ತಿರ ಹೋಗಲಾಗಿ, ಕೆಲಸ ಮಾಡುತ್ತಿದ್ದ ಇಬ್ಬರೂ ನಮ್ಮನ್ನು ನೋಡಿ  ಕಂಪ್ರೆಸರ್ ಟ್ರಾಕ್ಟರ್ ಮತ್ತು ಟ್ರಾಕ್ಟರ್ ಹಾಗೂ ವಸ್ತುಗಳನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾರೆ. ಆರೋಪಿಗಳು 1] ನರಸಿಂಹ, 2] ರಘು, 3] ಸಾಕಮ್ಮ ಮತ್ತು 4] ನಿಂಗೇಗೌಡ ಜಕ್ಕನಹಳ್ಳಿ ಗ್ರಾಮ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 09-01-2013 ರಂದು ಪಿರ್ಯಾದಿ ಡಿ.ಸಿ.ಪಲ್ಲವಿ, ಸಲಹೆಗಾರರು, ಜ್ಞಾನಸಿಂಧು ಸ್ವಧಾರ್ ಕೇಂದ್ರ, ನೂರಡಿ ರಸ್ತೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಲಕ್ಷ್ಮಿ ಕೋಂ ಮಂಜುನಾಥ, 24 ವರ್ಷ, ಜ್ಞಾನಸಿಂಧು ಸ್ವಧಾರ್ ಕೇಂದ್ರ, ನೂರಡಿ ರಸ್ತೆ, ಮಂಡ್ಯ ಸಿಟಿ ಎಂಬುವರು ಬಾಲಕಿಯರ ಬಾಲಮಂದಿರದಲ್ಲಿರುವ ತಮ್ಮ ಮಗಳನ್ನು ನೋಡಿಕೊಂಡು ಬರುವುದಾಗಿ ಹೇಳಿ ಹೋದವಳು ಅಲ್ಲಿ ತಮ್ಮ ಮಗಳನ್ನು ನೋಡಿಕೊಂಡು ವಾಪಸ್ ತಮ್ಮ ಕೇಂದ್ರಕ್ಕೆ ಬಾರದೆ ಎಲ್ಲಿಯೋ ಹೊರಟು ಹೋಗಿರುತ್ತಾಳೆ. ಇದುವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆ ಆಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಲಕ್ಷ್ಮಿಯನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನೆ ಕಳ್ಳತನ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 09-01-2013 ರಂದು ಪಿರ್ಯಾದಿ ಟಿ. ವೆಂಕಟೇಗೌಡ ಬಿನ್. ಲೇಟ್. ತಮ್ಮೇಗೌಡ, 60 ವರ್ಷ, ಒಕ್ಕಲಿಗರು, ನಿವೃತ್ತ ಶಿಕ್ಷಕರು, ನಾರಣಾಪುರಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನದ ಮಾಂಗಲ್ಯ, ಕತ್ತಿನ ನೆಕ್ಲೆಸ್, ಕತ್ತಿನ ಚೈನು. 1 ಜೊತೆ ಚಿನ್ನದ ಪ್ಯಾನ್ಸಿ ಓಲೆ, ಕಿವಿ ಓಲ, ಚಿನ್ನದ ಉಂಗುರ, ಮಗುವಿನ ಉಂಗುರ, ದೇವರ ಚಿನ್ನದ ತಾಳಿ  ನಗದು ಹಣ -5000 [ಐದು ಸಾವಿರ] ಒಟ್ಟು ಅಂದಾಜು ಬೆಲೆ-ಸುಮಾರು 1,10,000-00 ರೂ.ಗಳನ್ನು ಯಾರೋ ಕಳ್ಳರು. ಬೀರುವಿನ ಪಕ್ಕ ಗೋಡೆಗೆ ನೇತು ಹಾಕಿದ್ದ ಕೀ ಗಳನ್ನು ತೆಗೆದುಕೊಂಡು ಬೀಗ ತೆಗೆದು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಅವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 09-01-2013 ರಂದು ಪಿರ್ಯಾದಿ ಬಿ.ಆರ್.ಉಮಾ ಮಹಿಳಾ ಎ,ಎಸ್.ಐ. ಮಂಡ್ಯ ಪೂರ್ವ ಪೊಲೀಸ್ ಠಾಣೆ ರವರು ನೀಡಿದ ದೂರು ಒಬ್ಬ ಅಪರಿಚಿತ ಗಂಡಸು, 45 ವರ್ಷ ವಯಸ್ಸು ರವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ  ಚಿಕಿತ್ಸೆಗಾಗಿ ದಾಖಲಿಸಿದ್ದು ಅಂದಿನಿಂದ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು  ಚಿಕಿತ್ಸೆ ಪಲಕಾರಿಯಾಗದೆ  ಆಸ್ಪತ್ರೆಯಲ್ಲಿ ಮೃತಪಟ್ಟರುವುದಾಗಿ ಡೆತ್ ಮೆಮೋ ನೀಡಿದ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 

DAILY CRIME REPORT DATED : 08-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-01-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಾಬರಿ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ವಾಹನ ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ರಾಬರಿ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 394 ಐ.ಪಿ.ಸಿ.

ದಿನಾಂಕ: 07/08-01-2013 ರಂಧೂ ಪಿರ್ಯಾದಿ ಕಣಿರಾಜ್, ಶಂಕರಪ್ಪ ಲೇಔಟ್. ಹಾಲಹಳ್ಳಿ ಬಡಾವಣೆ,ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಎಂ.ಡಿ.ಸಿ.ಸಿಯ ಸಮೀಪ ಹೋಗುತ್ತಿದ್ದಾಗ ಬರ್ಹಿದೆಸೆ ಮಾಡಲು ಮೋಟರ್ ಬೈಕ್ ನಿಲ್ಲಿಸಿ ರಿಸಸ್ ಮಾಡಿದ ನಂತರ ಮೋಟರ್ ಸೈಕಲ್ ಅನ್ನು ಸ್ರ್ಟಾಟ್ ಮಾಡುತ್ತಿದ್ದಾಗ ಅದೆ ರಸ್ತೆಯಲ್ಲಿ ಪಿರ್ಯಾದಿ ಮುಂದೆ ಒಂದು ಬೈಕ್ನಲ್ಲಿ ಮೂರು ಜನ ಮುಂದಕ್ಕೆ ಹೋಗಿ ವಾಪಸ್ಸು ಬೈಕ್ ಅನ್ನು ತಿರುಗಿಸಿಕೊಂಡು ಬಂದು ಮೋಟಾರ್ ಸೈಕಲ್ ಸಾಟ್ ಮಾಡುತ್ತಿದ್ದ ಪಿರ್ಯಾದಿ ಮುಖಕ್ಕೆ ಒಬ್ಬ ಕಾರದ ಪುಡಿಯನ್ನು ಎರಚಿದ, ಮತ್ತೊಬ್ಬ ಪಿರ್ಯಾದಿ ಕೈಯಲ್ಲಿಂದ್ದ ಹಣದ ಬ್ಯಾಗ್ ಅನ್ನು ಕಿತ್ತುಕೊಂಡನ್ನು ಮತ್ತು ಆಸ್ಪತ್ರೆ ಕಡೆಗೆ ಮೂರು ಜನರು ಹೊರಟು ಹೋದರು ಅವರನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಜರುಗಿಸುವಂತೆ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 08-01-2013 ರಂದು ಪಿರ್ಯಾದಿ ವೈ.ಬಿ.ಸಿದ್ದೇಗೌಡ, ಕುವೆಂಪುನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಹೆಂಡತಿ ಪಿ.ಗಾಯಿತ್ರಿ ಕೋಂ. ವೈ.ಬಿ.ಸಿದ್ದೇಗೌಡ, ಕ್ರಾಸ್, ಕುವೆಂಪುನಗರ, ಮಂಡ್ಯ ಸಿಟಿ ರವರು ದಿನಾಂಕ: 07-01-2013 ರಂದು ಕೆಎಸ್ಆರ್ಟಿ ನಿಲ್ದಾಣ, ಮಂಡ್ಯ ಸಿಟಿಯಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 12/13 ಕಲಂ. 379 ಐ.ಪಿ.ಸಿ.

ದಿನಾಂಕ: 08-01-2013 ರಂದು ಪಿರ್ಯಾದಿ ಕೆಂಪಯ್ಯ ಬಿನ್ ಸಣ್ಣೇಗೌಡ, 3ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಮೋಟಾರ್ ಸೈಕಲನ್ನು ಮಂಡ್ಯದ ಸರ್.ಎಂ.ವಿ. ಕ್ರೀಡಾಂಗಣದ ಮುಂಭಾಗ ಬೀಗ ಹಾಕಿ ನಿಲ್ಲಿಸಿ ಸ್ಟೇಡಿಯಂ ನಲ್ಲಿ ವಾಯುವಿಹಾರ ಮಾಡುತ್ತಿದ್ದು ನಂತರ ವಾಪಸ್ ಸಂಜೆ 06-30ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 15,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ  :

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 08-01-2013 ರಂದು ಪಿರ್ಯಾದಿ ಜಯರತ್ನಮ್ಮ ಕೊಂ..ಈಶ್ವರ. 6 ನೇ ನಂಬರ್, ಗರೀಬಿ ಸೈಟ್, ಕೆ.ಎಂ.ದೊಡ್ಡಿ ಟೌನ್. ಮದ್ದೂರು ತಾಲೋಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 08-01-2013 ರ ಹಿಂದಿನ ದಿನಗಳಲ್ಲಿ ಪಿರ್ಯಾದಿಯವರು ಗಾರ್ಮೆಂಟ್ ಕೆಲಸಕ್ಕೆ ಹೋಗಿದ್ದಾಗ ಕೆ.ಎಂ.ದೊಡ್ಡಿ ಟೌನ್ ಪಿರ್ಯಾದಿ ಮನೆಯಲ್ಲಿಯೆ ಇದ್ದ ಅವರ ಗಂಡ ಈಶ್ವರನು ಯಾವುದೋ ಕಾರಣಕ್ಕೆ ಮನೆಯ ಸೂರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

TRAFFIC SAFETY WEEK 2013- CLOSING CEREMONY

TRAFFIC SAFETY WEEK 2013- CLOSING CEREMONY 
ON 07-01-2013











DAILY CRIME REPORT DATED : 06-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 06-01-2013 ರಂದು ಒಟ್ಟು 10 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ಅಪಹರಣ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 06-01-2013 ರಂದು ಪಿರ್ಯಾದಿ ಎಸ್ಎಲ್ ರವಿಕುಮಾರ ಬಿನ್. ಲೇ|| ಲಿಂಗೇಗೌಡ, ಸಿಂಧಘಟ್ಟ ಗ್ರಾಮ, ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಎಸ್.ಎಲ್. ರವಿಕುಮಾರ್ ರವರ ಹೆಂಡತಿ ಎಸ್.ಆರ್. ಭಾಗ್ಯ ಅವರಿಗೆ ಈಗ್ಗೆ 8 ತಿಂಗಳಿನಿಂದ ಹೊಟ್ಟೆಯಲ್ಲಿ ಹುಣ್ಣಾಗಿದ್ದು ಹುಣ್ಣಿನಿಂದ ಹೊಟ್ಟೆನೋವು ಜಾಸ್ತಿಯಾಗಿ ಹೊಟ್ಟೆನೋವಿನ ಔಷಧಿಯೆಂದು ಯಾವುದೋ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಚಿಕತ್ಸೆ ಫಲಕಾರಿಯಾಗದೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರಗೆ ಸೇರಿಸಿದ್ದು ದಿನಾಂಕ: 05-01-2013 ರಂದು ಸಂಜೆ 07-20 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ  :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 363 ಐ.ಪಿ.ಸಿ.

        ದಿನಾಂಕ: 06-01-2013 ರಂದು ಪಿರ್ಯಾದಿ ಜಯರಾಮು ಬಿನ್. ದೊಡ್ಡಕರಿಯಯ್ಯ, ದೇವೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಚಿಕ್ಕಾಡೆ ಗ್ರಾಮ ಪಂಚಾಯ್ತಿಯಲ್ಲಿ ಅದ್ಯಕ್ಷರು ಹಾಗು ಉಪಾದ್ಯಕ್ಷರ ಚುನಾವಣೆ ನಡೆಯುವ ಸಂದರ್ಭದಲ್ಲಿ ನನ್ನ ಹೆಂಡತಿ ಜಯಮ್ಮಳನ್ನು ಆರೋಪಿಗಳು ಕರೆದುಕೊಂಡು ಬಂದಿದ್ದರು, ಆ ಸಮಯದಲ್ಲಿ ನನ್ನ ಮಕ್ಕಳಾದ ರಾಜೇಶ್. ಯೋಗಿಶ್. ಗಿರೀಶ್ ರವರು ನಮ್ಮ ತಾಯಿಯನ್ನು ಏಕೆ ಕರೆದುಕೊಂಡು ಹೋಗಿದ್ದೀರಾ? ನಮ್ಮ ತಾಯಿಯ ಹತ್ತಿರ ಮಾತನಾಡಲು ಬಿಡಿ ಎಂದು ಕೇಳಿದಾಗ ಅಲ್ಲೆ ಇದ್ದ ಆರೋಪಿಗಳಾದ 1] ಡಿ.ಕೆ.ದೇವೇಗೌಡ, 2]ಡಿ.ಎಲ್.ಶ್ರೀದರ ಬಿನ್ ಲಕ್ಷ್ಮೇಗೌಡ, 3] ಡಿ.ಎನ್.ರಮೇಶ್ ನಂಜೇಗೌಡ, ದೇವೇಗೌಡನಕೊಪ್ಪಲು,  4] ಯಜಮಾನ್ ಪ್ರಕಾಶ್ 5] ಡಿ.ರಾಜಪ್ಪ, 6] ಹೆಚ್.ಮೋಹನ್ ಕುಮಾರ್,  7] ಎನ್.ವಿಜೇಂದ್ರ, ಎಲ್ಲರೂ ಚಿಕ್ಕಾಡೆ ಗ್ರಾಮ, ನನ್ನ ಮಕ್ಕಳಿಗೆ ಹೀನಾಮಾನವಾಗಿ ಬೈಯ್ದು ಜಾತಿ ನಿಂದನೆ ಮಾಡಿದ್ದು ಈ ಹಿನ್ನಲೆಯಲ್ಲಿ ಚುನಾವಣೆ ರದ್ದಾಗಿರುತ್ತೆ. ಆದರೂ ಸಹ ನನ್ನ ಹೆಂಡತಿಯನ್ನು ನಮ್ಮ ಮನೆಗೆ ಕಳುಹಿಸಿಕೊಡದೆ ಮೇಲ್ಕಂಡವರು ಮತ್ತೆ ಅವರ ಜೊತೆ ಕರೆದುಕೊಂಡು ಹೋಗಿರುತ್ತಾರೆ, ಆದುದ್ದರಿಂದ ಅಪಹರಿಸಿರುವ ನನ್ನ ಹೆಂಡತಿಯನ್ನು ಪತ್ತೆ ಮಾಡಿ ನಮ್ಮ ಸ್ವಾದೀನಕ್ಕೆ ಕೊಡಿಸಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

Daily Crime Report of 05-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-01-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 5 ಸಾಮಾನ್ಯ/ವಾಹನ/ಮರಳು ಕಳವು ಪ್ರಕರಣಗಳು, 2 ಯು.ಡಿ.ಆರ್. ಪ್ರಕರಣಗಳು,   1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ವಂಚನೆ ಪ್ರಕರಣ ಹಾಗು 21 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.        


ಸಾಮಾನ್ಯ/ವಾಹನ/ಮರಳು ಕಳವು ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 379 ಐ.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ಪುಟ್ಟಮ್ಮ ಕೋಂ. ಲೇಟ್. ಸಿದ್ದಯ್ಯ, ಪಿ.. ಗಾಣದಾಳು ಗ್ರಾಮ, ಮಂಡ್ಯ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಪಾಂಡವಪುರ ತಾಲ್ಲೋಕು ವದೇಸಮುದ್ರ ಗ್ರಾಮದ ಸವರ್ೆ ನಂ 207/1ಬಿ ನಲ್ಲಿ 11 ಗುಂಟೆ ಜಮೀನು ಹೊಂದಿದ್ದು, ಸದರಿ ಜಮೀನಿನಲ್ಲಿ ಭತ್ತವನ್ನು ಬೆಳೆದಿದ್ದು, ದಿನಾಂಕ: 04-01-2013 ರಂದು ಭತ್ತದ ಬೆಳೆ ಕುಯಿದಿದ್ದು, ದಿನಾಂಕ 04-01-2013 ರಂದು ಸಾಯಂಕಾಲ 07-0 ಗಂಟೆಯಲ್ಲಿ ಆರೋಪಿಗಳಾದ ಪ್ರಭಾವತಿ ಮತ್ತು ಇತರೆ ಮೂರು ಜನರು, ಎಲ್ಲರೂ ಗಾಣದಾಳು ಗ್ರಾಮ, ಮಂಡ್ಯ ತಾಲ್ಲೋಕು ರವರುಗಳು ಭತ್ತದ ಬೆಳೆಯನ್ನು ಕದ್ದು ಸಾಗಿಸಿರುತ್ತಾರೆ, ತಾವು ಬೆಳೆದಿದ್ದ ಭತ್ತದ ಬೆಳೆಯನ್ನು ಕೊಡಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 379 ಐ.ಪಿ.ಸಿ. 

ದಿನಾಂಕ: 04-01-2013 ರಂದು ಪಿರ್ಯಾದಿ ಜ್ಞಾನ ಪ್ರಕಾಶ ಬಿನ್ ಎಂ. ಜೀವಿಯರ್, ಕ್ಯಾತುಂಗೆರೆ, ಮಂಡ್ಯ  ತಾ. ರವರುಗಳು ನೀಡಿದ ದೂರಿನ ವಿವರವೇನೆಂದರೆ ಕೆಎ-11-ಜೆ-8173 ರ ಸುಜುಕಿ ಸಮುರಾಯ್ ಮೋ/ಸೈನ್ನು  ತಮ್ಮ ಮನೆ ಮುಂದೆ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿರುವುದಾಗಿ ಇದರ ಅಂದಾಜು ಬೆಲೆ 13000-00 ರೂಗಳಾಗುತ್ತೆ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 5/13 ಕಲಂ. 379 ಐ.ಪಿ.ಸಿ.


ದಿನಾಂಕ: 04-01-2013 ರಂದು ಪಿರ್ಯಾದಿ ಬಿ.ಎಂ.ಸ್ವಾಮಿ ಬಿನ್. ಮಹದೇವಯ್ಯ, ಕ್ಯಾತನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದರಿಯಾ ದೌಲತ್ ಪಾಕರ್ಿಂಗ್ ಸ್ಥಳದಲ್ಲಿ ಕೆಎ-11-ಎಲ್-5019 ಟಿ.ವಿ.ಎಸ್. ಮೆಪೈಡ್ ನ್ನು ನಿಲ್ಲಿಸಿದ್ದು ದರಿಯಾದೌಲತ್ ಒಳಗೆ ಹೋಗಿ ವಾಪಸ್ಸು ಬಂದು ನೋಡಲಾಗಿ ಅಲ್ಲಿ ಇರುವುದಿಲ್ಲ ಯಾರೂ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 8/13 ಕಲಂ. 379 ಐ.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ಅಜರ್ುನ್ ಬಿನ್. ಹುಚ್ಚೇಗೌಡ, ವಾಸ ನಂ. 334, 2ನೇ ಕ್ರಾಸ್, ಕುವೆಂಪುನಗರ ರವರು ನೀಡಿದ ದೂರಿನ ವಿವರವೇನೆಂದರೆ ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 20,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

 5. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 379-188-353-506 ರೆ.ವಿ. 34 ಐ.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ತಿಮ್ಮಯ್ಯ, ರೆವಿನ್ಯೂ ಇನ್ಸ್ಪೆಕ್ಟರ್, ಆತಗೂರು ಹೋ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎಂ.ಹೆಚ್.-09-ಎಎಲ್-880ರ ಚಾಲಕ ಮತ್ತು ಮಾಲೀಕ, ಅಲ್ಲಿಗೆ ಬಂದು ನಮ್ಮ ಜೊತೆ ಸುಮಾರು ಐದು ಗಂಟೆವರೆಗೆ ಸತಾಯಿಸಿ ಜೆಸಿಬಿ ತೆಗೆದುಕೊಂಡು ಹೋಗದಂತೆ ಬೆದರಿಕೆ ಹಾಕಿ, ಸಕರ್ಾರಿ ಕೆಲಸಕ್ಕೆ ಅಡ್ಡಿಪಡಿಸಿರುತ್ತಾನೆ. ನಂತರ ಅದೇ ಜೆಸಿಬಿಯನ್ನು ಅದರ ಚಾಲಕನ ಸಹಾಯದಿಂದ ಕೊಪ್ಪ ಪೊಲೀಸ್ ಠಾಣೆ ಬಳಿ ತಂದು ಠಾಣಾಧಿಕಾರಿಯವರಿಗೆ ಈ ಜೆಸಿಬಿಯನ್ನು ಮಾಲೀಕನಿಗೆ ದಂಡ ವಿಧಿಸುವವರೆಗೆ ತಮ್ಮ ವಶದಲ್ಲಿ ಇಟ್ಟುಕೊಳ್ಳಲು ಕೋರಿ ಪತ್ರ ನಿಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 2/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ಮಹಾದೇವಿ ಕೋಂ. ಕೃಷ್ಣೇಗೌಡ, ಕರೋಟಿ ಗ್ರಾಮ, ಕಸಬಾ ಹೋ|| ಕೆ.ಆರ್.ಪೇಟೆ ತಾ|| ರವರು ನೀಡಿದ ದೂರು ಏನೆಂದರೆ ನೇತ್ರಾವತಿ ಬಂಡಿಹೊಳೆ ಗ್ರಾಮ || ರವರು ಹೊಟ್ಟೆನೋವು ಬಾಧೆಯನ್ನು ತಾಳಲಾರದೆ ಸಂಜೆ 04-00 ಗಂಟೆ ಸಮಯದಲ್ಲಿ ನೇಣು ಹಾಕಿಕೊಂಡಿದ್ದು ನಂತರ ಆಕೆಯನ್ನು ಪ್ರೀತಿ ಮತ್ತು ಯತೀಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ನನ್ನ ಮಗಳು ಮೃತಪಟ್ಟಿರುತ್ತಾಳೆ. ಆಕೆಯ ಸಾವಿನಲ್ಲಿ ಯಾವುದೇ ರೀತಿಯ ಅನುಮಾನವಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ವೆಂಕಟರಮಣ ಬಿನ್. ವೆಂಕಟಯ್ಯ, ಧನಗೂರು ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಮದರೆ ವೆಂಕಟೇಶ ಕೂಲಿಕೆಲಸ, ಧನಗೂರು ಗ್ರಾಮ, ಮಳವಳ್ಳಿ ತಾ. ರವರು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಕ್ರಿಮಿನಾಶಕ ಔಷಧಿ ಕುಡಿದು ಒದ್ದಾಡುತ್ತಿದ್ದವನನ್ನು 108 ಅಂಬ್ಯೂಲೆನ್ಸ್ನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 420 ಐ.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ಬಿ.ಶಿವಕುಮಾರ್ ಬಿನ್. ಲೇಟ್. ಸಿ.ಬೋರೇಗೌಡ, ಅಧ್ಯಕ್ಷರು, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಕೆನೆರಾ ಬ್ಯಾಂಕ್ ಶಾಖೆಯ ಕರೆಂಟ್ ಅಕೌಂಟ್ ನಂ. 0527201371 ರ ಶ್ರೀ ಅಂಬೇಡ್ಕರ್ ಎಸ್ಸಿ/ಎಸ್ಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ,  ಕುಣಿಗಲ್ ರವರು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ನೀವು ಕೊಟ್ಟಿದ್ದ ಚೆಕ್ ಕಳೆದು ಹೋಗಿದೆ, ಮತ್ತೊಂದು ಚೆಕ್ ಕೊಡಿ ಎಂದು ಕೇಳಿದಾಗ ಕಳೆದುಹೋಗಿರುವ ಚೆಕ್ನ ಬಗ್ಗೆ ಪರಿಶೀಲಿಸಲಾಗಿ ದಿನಾಂಕ: 31-10-2012 ರಂದು ಸದರಿ ಚೆಕ್ನಿಂದ ಕುಣಿಗಲ್ನ ಕೆನರಾ ಬ್ಯಾಂಕ್ ಶಾಖೆಯ ಕರೆಂಟ್ ಅಕೌಂಟ್ ನಂ 0527201371 ರಲ್ಲಿ ಶ್ರೀಅಂಬೇಡ್ಕರ್ ಎಸ್ಸಿ/ಎಸ್ಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕುಣಿಗಲ್ ಇವರ ಖಾತೆಗೆ 10,000-00 ರೂ ಹಣ ಜಮಾ ಆಗಿರುವುದಾಗಿ ತಿಳಿದುಬಂದಿದ್ದು ಸದರಿಯವರು ಹಣ ಡ್ರಾ ಮಾಡಿಕೊಂಡು ಮೋಸ ಮಾಡಿರುತ್ತಾರೆಂದು ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

Daily Crime Report of 04-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-04-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಅಕ್ರಮ ಮರಳು ಕಳವು ಪ್ರಕರಣ,  1 ಕನರ್ಾಟಕ ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ ಪ್ರಕರಣ ಹಾಗು 18 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   


ಯು.ಡಿ.ಆರ್. ಪ್ರಕರಣ :

ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. .ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ರಾಘವೇಂದ್ರ ಬಿನ್. ಕೆಂಪೇಗೌಡ, ಕೋಮನಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ    ಜಮೀನಿನ ಬಳಿ ಇರುವ ಕೆಂಪೇಗೌಡರ ಕಟ್ಟೆಯಲ್ಲಿ ಒಂದು ಶವವು ತೇಲುತ್ತಿದ್ದು, ಹತ್ತಿರ ಹೋಗಿ ನೋಡಲಾಗಿ ಗಂಡಸಿನ ಶವವಾಗಿದ್ದು ವಯಸ್ಸು ಸುಮಾರು 30-35 ಆಗಿದ್ದು, ಕೋಲುಮುಖ, ಕುರುಚಲುಗಡ್ಡ, ತುಂಬುತೋಳಿನ ಶಟರ್್, ಬಿಳಿಪ್ಯಾಂಟು ಧರಿಸಿರುತ್ತಾನೆ. ಈತನು ಕೆರೆಯಲ್ಲಿ ನೀರು ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿರುತ್ತಾನೆ. ಆದ ಕಾರಣ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 6/13 ಕಲಂ. 143-341-323-504-506 ಕೂಡ 149 ಐ.ಪಿ.ಸಿ. ಮತ್ತು 3 ಕ್ಲಾಸ್. (1) ಮತ್ತು (10) ಎಸ್.ಸಿ./ಎಸ್.ಟಿ. ಆಕ್ಟ್.

ದಿನಾಂಕ: 04-01-2013 ರಂದು ಪಿರ್ಯಾದಿ ಜಯರಾಮಯ್ಯ ಬಿನ್. ಲೇಟ್.ದೊಡ್ಡಕರಿಯಯ್ಯ, 55 ವರ್ಷ, ಪರಿಶಿಷ್ಟ ಜಾತಿ, ದೇವೇಗೌಡನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಹೆಂಡತಿ ಜಯಮ್ಮಳು ಚಿಕ್ಕಾಡೆ ಗ್ರಾಮ ಪಂಚಾಯ್ತಿಯ ಸದಸ್ಯರಾಗಿದ್ದು ಚಿಕ್ಕಾಡೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಹಾಗೂ ಉಪಧ್ಯಕ್ಷರ ಚುನಾವಣೆಗೆ ಭಾಗವಾಹಿಸಲು ಮದ್ಯಾಹ್ನ 12-00 ಗಂಟೆಯಲ್ಲಿ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಚಿಕ್ಕಾಡೆ. ಗ್ರಾಮದ ವಿಜೇಯೇಂದ್ರ  ಬಿನ್ ನಂಜೇಗೌಡ @ ಶಿವಣ್ಣ, ನಾಗೇಂದ್ರ, ಸಿ.ಹೆಚ್.ಗಿರೀಶ್, ಸಿ.ಎಂ.ಕಿರಣ್, ಬಾಲಕೃಷ್ಣ, ಚೇತನ್ ಹಾಗೂ ದೇವೇಗೌಡನಕೊಪ್ಪಲು ಗ್ರಾಮದ ರಾಘವೇಂದ್ರ.ಅವಿನಾಶ್.ಇವರುಗಳು ನನ್ನ ಹೆಂಡತಿ ಓಟು ಮಾಡಲು ಒಳಗೆ ಹೊಗಲು ಬಿಡದೆ ಎಳೆದಾಡಿ ಹೊರಗೆ ತಳ್ಳಿ ನನ್ನನ್ನು ನೋಡಿ ಹೊಲೆಯ ನನ್ನ ಮಗನೆ, ಬೋಳಿ ಮಗನೆ ಸೂಳೆಮಗನೆ ನೀನು ಇದ್ದರೆ ತಾನೇ ನಿನ್ನ ಹೆಂಡತಿ ಓಟು ಮಾಡುವುದು ನಿಮ್ಮನ್ನೆ ಮುಗಿಸುತ್ತೇನೆ ಎಂದು ಬೈದು ಜಾತಿ ನಿಂದನೆ ಮಾಡಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಕ್ರಮ ಮರಳು ಕಳವು ಪ್ರಕರಣ :


ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 188-379 ಐ.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ಎಂ.ಹೆಚ್. ಸಿದ್ದೇಗೌಡ ಬಿನ್ ಕೆಂಪೇಗೌಡ, ಗ್ರಾಮ ಲೆಕ್ಕಾಧೀಕಾರಿ, ಎಸ್.ಐ ಹಾಗಲಹಳ್ಳಿ ವೃತ್ತ, ಮದ್ದೂರು ತಾ: ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಕೆ.ಎ 05 ಸಿ 3804 ರ ಲಾರಿ ಮಾಲಿಕ 2] ಲಾರಿ ಚಾಲಕ ಹೆಸರು ಮತ್ತು ವಿಳಾಸ ತಿಳಿಯ ಬೇಕಾಗಿರುತ್ತೆ, ಶಿಂಷಾ ನದಿ ಪಾತ್ರದಲ್ಲಿ ನಿಷೇದಾಜ್ಞೆಯನ್ನು ಉಲ್ಲಂ ್ಲಘನೆ ಮಾಡಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣೆ ಮಾಡುತ್ತಿದ್ದು  ಇಬ್ಬರು ಪರಾರಿಯಾಗಿರುತ್ತಾರೆ ಸದರಿಯವರ ಮೇಲೆ ಕೇಸು ದಾಖಲು ಮಾಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕರ್ನಾಟಕ ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ ಪ್ರಕರಣ : 


ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 7/13 ಕಲಂ. 4, 5, 8, 9 ಮತ್ತು 11 [ಡಿ] ಕನರ್ಾಟಕ ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964.

       ದಿನಾಂಕ: 04-01-2013 ರಂದು ಪಿರ್ಯಾದಿ ಎಂ. ಮಂಜುನಾಥ್, ಆರಕ್ಷಕ ಉಪ ನಿರೀಕ್ಷಕರು, ಪೂರ್ವ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಮಂಡ್ಯ ಸಿಟಿ ಹೊಳಲು ಸರ್ಕಲ್ ಕಡೆಯಿಂದ ವೀರಾಂಜನೇಯ ಎಂಬ ಹೆಸರಿನ ಕೆಎ-11-9770 ರ 407 ಗೂಡ್ಸ್ ಟೆಂಪೋದಲ್ಲಿ ಎಮ್ಮೆಗಳನ್ನು ತುಂಬಿಕೊಂಡು ಬರುತ್ತಿದ್ದಾನೆ ಅವುಗಳನ್ನು ರಕ್ಷಿಸಿ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳ ಜೊತೆ ಮತ್ತು ಪಂಚರುಗಳೊಂದಿಗೆ ಠಾಣೆಯ ಮುಂದಿನ ಬೆಂಗಳೂರು ಮುಖ್ಯ ರಸ್ತೆಯಲ್ಲಿ ಸಂಜೆ 06-15 ಗಂಟೆಯ ಸಮಯದಲ್ಲಿ ನಿಂತಿದ್ದಾಗ ನಂದಾ ಸರ್ಕಲ್ ಕಡೆಯಿಂದ ಕೆಎ-11-9770 ರ 407 ಗೂಡ್ಸ್ ಟೆಂಪೋ ಸುತ್ತಲೂ ಟಾರ್ಪಲ್ ಕಟ್ಟಿಕೊಂಡು ಬಂದದ್ದನ್ನು ನಾವುಗಳೆಲ್ಲರೂ ಒಟ್ಠಾಗಿ ಸೇರಿ ತಡೆದು ನಿಲ್ಲಿಸಿ ಪರಿಶೀಲಿಸಿ ನೋಡಲಾಗಿ ಒಂಬತ್ತು ಎಮ್ಮೆಗಳನ್ನು ತುಂಬಿಕೊಂಡು ಸಾಗಣೆ ಮಾಡುತ್ತಿದುದ್ದು ಕಂಡು ಬಂತು ಆರೋಪಿಗಳಾದ 1 ಜಗದೀಶ ಬಿನ್ ಮಲ್ಲಯ್ಯ ಶೆಟ್ಟಿ, 29 ವರ್ಷ, ಬಣಜಿಗ ಶೆಟ್ಟಿ, ಜನಾಂಗ, ಟೆಂಪೋ ಚಾಲಕ  ವಾಸ ಕೆ. ಗೌಡಗೆರೆ, ಕೆರಗೋಡು  ಹೋಬಳಿ ಮಂಡ್ಯ ತಾಲ್ಲೋಕ್ 2] ಸಜ್ಜು  ಗುತ್ತಲು  ಮಂಡ್ಯ ಸಿಟಿ  ಪೂರ್ಣ ವಿಳಾಸ ತಿಳಿಯಬೇಕಾಗಿದೆ ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿರುತ್ತೆ.

Daily Crime Report of 03-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-01-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 1 ಹುಡುಗಿ ಕಾಣೆಯಾದ ಪ್ರಕರಣ,  1 ಕಳ್ಳತನ ಪ್ರಕರಣ,    1 ವಂಚನೆ ಪ್ರಕರಣ ಹಾಗು 17 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿಆರ್. ನಂ. 01/13 ಕಲಂ. ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-01-13 ರಂದು ಪಿರ್ಯಾದಿ ನಿಂಗಶೆಟ್ಟಿ ಬಿನ್. ದೊಡ್ಡಣ್ಣಶೆಟ್ಟಿ, ಅಣ್ಣಹಳ್ಳಿ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ದೊಡ್ಡಣ್ಣಶೆಟ್ಟಿ, ಅಣ್ಣಹಳ್ಳಿ ಗ್ರಾಮ ರವರು ಯಾವುದೋ ಪ್ಲಾಸ್ಟಿಕ್ ಹಗ್ಗದಿಂದ ತನಗೆ ತಾನೇ ನೇಣು ಹಾಕಿಕೊಂಡು ಒದ್ದಾಡುತ್ತಿದ್ದಾಗ ನನ್ನ ಅಣ್ಣ ಮರಿನಾಗಶೆಟ್ಟಿ ಹಾಗೂ ನನ್ನ ಅತ್ತಿಗೆ ಯಶೋಧಮ್ಮ ಇಬ್ಬರೂ ಸೇರಿ ಹಗ್ಗದಿಂದ ಬಿಡಿಸಿ ನೀರು ಬಿಟ್ಟಿರುತ್ತಾರೆ. ಅಷ್ಟರಲ್ಲಿ ನಾನು ಕೂಡ ಮನೆಯಿಂದ ಎದ್ದು ಬಂದು ನೋಡಲಾಗಿ ನಮ್ಮ ತಂದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 4/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 03-01-13 ರಂದು ಪಿರ್ಯಾದಿ ಎಸ್.ಆರ್. ಅರವಿಂದಬಾಬು, ಕಾರ್ಯನಿವರ್ಾಹಕ ಅಧಿಕಾರಿ, ಶ್ರೀ ಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಕೆಎ-01 ಬಿ. 2657 ರ ಗೂಡ್ಸ್ ಆಟೋ ಚಾಲಕ ಮತ್ತು ಇತರೆ ಇಬ್ಬರು ಅಂಗಡಿ ಮೇಲ್ಭಾಗದಲ್ಲಿರುವ ಹೆಂಚನ್ನು ತೆಗೆದು ಒಳಗೆ ಹೋಗಿ ಇಲ್ಲಿದ್ದ ಮರದ ತುಂಡುಗಳನ್ನು ಕಳವು ಮಾಡಿ ಕೆಎ-01 ಬಿ. 2657 ರ ಗೂಡ್ಸ್ ಆಟೋದಲ್ಲಿ ಸಾಗಿಸುತ್ತಿದ್ದಾರೆಂದು ಮತ್ತು ತಮ್ಮನ್ನು ನೋಡಿ ಆಟೋದ ಡ್ರೈವರ್ ಮತ್ತು ಇತರೆ ಇಬ್ಬರು ಓಡಿ ಹೋದರೆಂದು ದೇವಾಲಯದ ಅಟೆಂಡರ್ ವೀರೇಗೌಡ ರವರು ಪಿರ್ಯಾದಿಯವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ ಮೇರೆಗೆ ಪಿರ್ಯಾದಿಯವರು ಸದರಿ ಸ್ಥಳಕ್ಕೆ ಬಂದು ನೋಡಲಾಗಿ ಗೂಡ್ಸ್ ಆಟೋದಲ್ಲಿ ಮರದ ತುಂಡುಗಳನ್ನು ತುಂಬಿಸಿ ನಿಲ್ಲಿಸಿದ್ದು ಕಂಡು ಬಂದಿರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ವಂಚನೆ ಪ್ರಕರಣ :

ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 413-420-114-506 ಐ.ಪಿ.ಸಿ.

ದಿನಾಂಕ: 03-01-13 ರಂದು ಪಿರ್ಯಾದಿ ಪುಟ್ಟಲಕ್ಷ್ಮಮ್ಮ ಕೊಂ. ಕೃಷ್ಣೇಗೌಡ, ಕತ್ತರಘಟ್ಟ ಗ್ರಾಮ, ಕೆ.ಅರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ವೆಂಕಟೇಗೌಡ @ ಗಿರೀಗೌಡ ಇತರೆ 4 ಜನರು ನನ್ನ ತಂದೆಯ ಮನೆಯ ಮೇಲೆ ಇರುವ ಆಸ್ತಿಯ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶದಿಂದ ಹಕ್ಕು ನಿವೃತ್ತಿ ಪತ್ರವನ್ನು ಸೃಷ್ಟಿಸಿಕೊಂಡು ಸದರಿ ಪತ್ರದಲ್ಲಿ ನನಗೆ 50 ಸಾವಿರ ಸಂದಾಯವಾಗಿರುತ್ತದೆ ಎಂದು ಸುಳ್ಳು ಬರೆಸಿರುತ್ತಾರೆ. ಸದರಿ ಪತ್ರ ಬರೆಯಲು ಸಾಕಮ್ಮನ ಗಂಡ ಬೋರೆಗೌಡ ಕುಮ್ಮಕ್ಕು ನೀಡಿದ್ದು ಮತ್ತು ನಮ್ಮ ಸಹೋದರಿಯರಾದ ತಿಮ್ಮಮ,್ಮ ಸರೋಜಮ್ಮ ಮತ್ತು ಜಾನಕಮ್ಮರವರಿಗೆ ವೈದ್ಪಾಪ್ಯ ವೇತನ ಕೊಡಿಸುತ್ತೇನೆಂದು ಮೋಸ ಮಾಡಿ ನಿವೃತ್ತಿ ನೊಂದಣಿ ಪತ್ರಕ್ಕೆ ಸಹಿ ಮಾಡಿಸಿರುತ್ತಾರೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

Daily Crime Report of 02-01-2013




ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕನರ್ಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ ಅಧಿನಿಯಮ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  3 ಯು.ಡಿ.ಆರ್. ಪ್ರಕರಣಗಳು,  1 ಮನೆ ಕಳ್ಳತನ ಪ್ರಕರಣ,  1 ಅಪಹರಣ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 



ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ ಅಧಿನಿಯಮ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 447 ಐಪಿಸಿ & 192(ಎ) ಕನರ್ಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್-1964.

ದಿನಾಂಕ: 02-01-2013 ರಂದು ಪಿರ್ಯಾದಿ ಸಿ ಪ್ರಸನ್ನ ಕುಮಾರ್, ಬಿನ್. ಎಸ್.ಚಲುವಯ್ಯ, 46 ವರ್ಷ, ವಕ್ಕಲಿಗರು, ರಾಜಸ್ವ ನಿರೀಕ್ಷಕರು, ಬೆಳಗೊಳ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಎನ್ ಸ್ವಾಮೀಗೌಡ ಬಿನ್ ನಂಜೇಗೌಡ, ಕೆ.ಆರ್.ಸಾಗರ ರವರು ಹೊಂಗಹಳ್ಳಿ ಸವರ್ೆ ನಂಬರ್297 ರ ಸಕರ್ಾರಿ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ಯಾವುದೇ ಪರವಾನಿಗೆ ಇಲ್ಲದೇ ಕಟ್ಟಡ ನಿಮರ್ಿಸುತ್ತಿದ್ದು ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ


ಯು.ಡಿ.ಆರ್. ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

  ದಿನಾಂಕ: 02-01-2013 ರಂದು ಪಿರ್ಯಾದಿ ಬೆಟ್ಟಸ್ವಾಮಿ ಬಿನ್ ಲೇ ತಿಮ್ಮಯ್ಯ, 40ವರ್ಷ,ಹಂಚಿಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಮಗಳು ಅಂಬಿಕಾ ಬಿನ್. ಬೆಟ್ಟಸ್ವಾಮಿ, 14ವರ್ಷ, ಹಂಚಿಪುರ ಗ್ರಾಮರವರು ಹೊಟ್ಟೆನೋವು ತಾಳಲಾರದೆ ಕ್ರಿಮಿನಾಶಕವನ್ನು ಕುಡಿದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 02-01-2013 ರಂದು ಪಿರ್ಯಾದಿ ನಾಗರಾಜ ಮೂತರ್ಿ ಬಿನ್. ವೆಂಕಟಯ್ಯ, ರಾಮಕೃಷ್ಣ ನಗರ, ಮೈಸೂರು ರವರು ನೀಡಿದ ದೂರು ಏನೆಂದರೆ ಅವರ ತಾಯಿ ಮಂಚಮ್ಮ ಕೋಂ.  ಲೇ|ವೆಂಕಟಯ್ಯ, 70 ವರ್ಷ, ಗೋಪಾಲಪುರ ಗ್ರಾಮರವರು ವಾಯು ವಿಹಾರಕ್ಕೆಂದು ಬಂದವರು ವಾಪಸ್ ಮನೆಗೆ  ಬಾರದೆ ಇದ್ದು ಎಲ್ಲಾ ಕಡೆ  ಹುಡುಕಾಡಲಾಗಿ ಈ ದಿನ ಶ್ರೀರಂಗಪಟ್ಟಣದ ಉತ್ತರ  ಕಾವೇರಿ ನದಿಯಲ್ಲಿ ಶವವು ತೇಲುತ್ತಿದ್ದು, ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 02-01-2013 ರಂದು ಪಿರ್ಯಾದಿ ಮಂಜುನಾಥ್ ಬಿನ್. ಲೇಟ್. ಶಿವಣ್ಣ, ಮಹದೇಶ್ವರಪುರ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಒಬ್ಬ ಅಪರಿಚಿತ ಹೆಂಗಸಿನ ಶವ, ಸುಮಾರು 25 ರಿಂದ 30 ವರ್ಷ, ಗುರುತು ಪತ್ತೆಯಾಗಿರುವುದಿಲ್ಲ, ವಿ.ಸಿ ನಾಲೆಯಲ್ಲಿ ಸ್ನಾನ ಮಾಡುವಾಗ ಅಥವಾ ಕಾಲುವೆಯಲ್ಲಿ ನೀರು ತೆಗೆದುಕೊಳ್ಳುವ ಸಮಯದಲ್ಲೋ ಕಾಲು ಜಾರಿ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತದೆ.



ಮನೆ ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 454-380 ಐ.ಪಿ.ಸಿ.

ದಿನಾಂಕ: 02-01-2013 ರಂದು ಪಿರ್ಯಾದಿ ಡಿ.ಆರ್.ಲೋಕೇಶ್ಕುಮಾರ್,  ಗ್ರಾಮ ಪಂಚಾಯಿತಿ ಸದಸ್ಯರು, ದೊಡ್ಡಮುಲಗೂಡು ಗ್ರಾಮ, ಟಿ.ನರಸೀಪುರ ತಾಲ್ಲೋಕು, ಹಾಲಿ ವಾಸ ನಂ.2888, 6ನೇ ಕ್ರಾಸ್, ಗಾಂಧಿನಗರ, ಮಂಡ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 01-01-13 ರಂದು 3-30 ರಿಂದ 6-00 ಪಿಎಂ/ ನಂ. 2888, 6ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿಯಲ್ಲಿ ಯಾರೋ ಕಳ್ಳರು ಫಿರ್ಯಾದಿಯವರ ಅಜ್ಜಿ ಚನ್ನಮ್ಮಳು ಬಾಗಿಲು ಹಾಕಿಕೊಂಡು ಮಲಗಿದ್ದ ಮನೆಯ ಹಿಂಬಾಗಿಲನ್ನು ತಳ್ಳಿ ಒಳಗಡೆ ಬಂದು ತಮ್ಮ ಅಜ್ಜಿ ಮಲಗಿದ್ದಾಗ ಅವಳಿಗೆ ಗೊತ್ತಿಲ್ಲದಂತೆ ಎರಡು ಕೈಗಳಲ್ಲಿದ್ದ ಚಿನ್ನದ ಬಳೆಗಳನ್ನು ಮತ್ತು ಕುತ್ತಿಗೆಯಲ್ಲಿದ್ದ ಎರಡೆಳೆ ಮಾಂಗಲ್ಯ ಸರವನ್ನು ಬಿಚ್ಚಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಎರಡು ಬಳೆಗಳ ಒಟ್ಟು ತೂಕ 30 ಗ್ರಾಂ ಇರುತ್ತದೆ. ಎರಡೆಳೆ ಚಿನ್ನದ ಮಾಂಗಲ್ಯ ಸರವು ಹಗ್ಗದ ಮಾದರಿಯಿಂದ ಕೂಡಿದ್ದು ಇದರಲ್ಲಿ ಒಂದು ಚಿನ್ನದ ತಾಳಿ, ಕರಿಮಣಿ ಮತ್ತು ಹವಳಗಳು ಇರುತ್ತವೆ. ಇದರ ತೂಕ 60 ಗ್ರಾಂ ಆಗಿರುತ್ತದೆ. ಮೇಲ್ಕಂಡ ಚಿನ್ನದ ಆಭರಣಗಳ ಒಟ್ಟು ಬೆಲೆ ಸುಮಾರು 2,50,000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 




Daily Crime Report of 01-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-01-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳವು ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಕೊಲೆ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   

ಕಳವು ಪ್ರಕರಣ :

ನಾಗಮಂಗಲ ಪುರ ಪೊಲೀಸ್ ಠಾಣೆ ಮೊ.ನಂ. 1/12 ಕಲಂ. 41 ಕ್ಲಾಸ್ (ಡಿ), 102 ಸಿ.ಆರ್.ಪಿ.ಸಿ ರೆ/ವಿ 379 ಐ.ಪಿ.ಸಿ.

ದಿನಾಂಕ: 01-01-2013 ರಂದು ಪಿರ್ಯಾದಿ ಟಿ.ಲಿಂಗರಾಜು, ಸಿ.ಹೆಚ್.ಸಿ 297, ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಮತ್ತು ಸಿಪಿಸಿ-311 ರವರು ಗಸ್ತಿನಲ್ಲಿದ್ದಾಗ ನಾಗಮಂಗಲ ಟೌನ್ನ ಮೈಸೂರು ರಸ್ತೆಯ ಬಳಿಯ ಜ್ಯುವೆಲರಿ ಶಾಪ್ ಹತ್ತಿರ ಒಬ್ಬ ಆಸಾಮಿ ಅನುಮಾನಾಸ್ಪದವಾಗಿ ವತರ್ಿಸುತ್ತಿದ್ದರಿಂದ ವಿಚಾರಿಸಲಾಗಿ ಅನುಮಾನ ಬಂದು ಅಂಗ ಶೋಧನೆ ಮಾಡಿದಾಗ, ಆತನ ಪ್ಯಾಂಟ್ ಜೇಬಿನಲ್ಲಿ ತುಂಡಾದ ಎರಡು ಎಳೆಯ ಚಿನ್ನದ ಚೈನು ಸಿಕ್ಕಿರುತ್ತೆ, ನಂತರ ಸದರಿ ಆಸಾಮಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ನಿವೇದಿಸಿಕೊಂಡಿರುತ್ತಾರೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  



ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 2/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 01-01-2013 ರಂದು ಪಿರ್ಯಾದಿ ಕೆಂಪಮ್ಮ ಕೋಂ. ಪುಟ್ಟಮಾದಪ್ಪ, ಮೆಳ್ಳಹಳ್ಳಿ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಗಂಡ ಮನೆಯಿಂದ ಹೊರಗೆ ಹೋದವರು    ಮನೆಗೆ ವಾಪಸ್ಸು ಬಂದಿರುವುದಿಲ್ಲ ಈವರಗೆ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕೊಲೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 302-201 ಐ.ಪಿ.ಸಿ.

ದಿನಾಂಕ: 01-01-2013 ರಂದು ಪಿರ್ಯಾದಿ ನಿಂಗೇಗೌಡ.ಡಿ.ಎಂ. ಬಿನ್. ಲೇಟ್. ಮರೀಗೌಡ, ದೊಡ್ಡಬ್ಯಾಡರಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಯಾವುದೋ ಹುಡುಗಿಯ ಶವ ಕಳ್ಳಿ ಬೇಲಿಯ ಮರೆಯಲ್ಲಿ ಅಂಗಾತವಾಗಿ ಬಿದ್ದಿದ್ದು ಮೈ ಮೇಲೆ ಕಪ್ಪು ಟೀ ಶಟರ್್, ಕಪ್ಪು ಪ್ಯಾಂಟ್ ತೊಟ್ಟಿದ್ದು ಕೇಸರಿ ಕಲ್ಲರ್ ದವಣಿ. [ವೇಲ್] ಬಿದ್ದಿದ್ದು ಕತ್ತಿನಲ್ಲಿ ಕಪ್ಪು ಮಣಿ, ಕಿವಿಯಲ್ಲಿ ರಿಂಗು, ಕಾಲಿನಲ್ಲಿ ನೀಲಿಗೆರೆಯ ಸಾಕ್ಸ್, ತೊಟ್ಟಿದ್ದು ಬಾಯಿಯಲ್ಲಿ ಹಾಗೂ ಮೂಗಿನಲ್ಲಿ ನೊರೆ ಬರುತಿತ್ತು.ಈ ಹುಡುಗಿ ಸುಮಾರು 18 ರಿಂದ 20 ವರ್ಷದಂತಿದೆ. ಈ ಶವವನ್ನು ನೋಡಿದರೆ ಯಾರೋ ದುಷ್ಕಮರ್ಿಗಳು, ಯಾವುದೋ ಉದ್ದೇಶದಿಂದ ಎಲ್ಲೋ ಕೊಲೆ ಮಾಡಿ ದೇವಸ್ಥಾನದ ಬಳಿಯ ವಿ.ಸಿ.ಲಿಂಕ್ ಚಾನಲ್ ಬಳಿಯ ಕಳ್ಳಿ ಬೇಲಿಯ ಒಳಗಡೆ ತಂದು ಬಿಸಾಕಿರುವಂತೆ ಕಂಡು ಬಂದಿರುತ್ತೆ. ಈ ಶವವನ್ನು ಒಂದು, ಎರಡು ದಿನಗಳ ಹಿಂದೆ ಹಾಕಿರುವಂತೆ ಕಂಡು ಬಂದಿರುತ್ತೆ. ಈ ಶವ ಅಪರಿಚಿತ ಹುಡುಗಿಯಾಗಿದ್ದು, ಯಾರು ಏನು ಅಂತ ಗೊತ್ತಿಲ್ಲ. ಎಂದು  ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಆರ್. ಪ್ರಕರಣಗಳು  :

1. ಮದ್ದೂರು ಪೊಲೀಸ್ ಠಾಣೆ ಯುಡಿಆರ್..ನಂ. 01/13 ಕಲಂ. 174 ಸಿಆರ್.ಪಿ.ಸಿ.    

ದಿನಾಂಕ: 01-01-2013 ರಂದು ಪಿರ್ಯಾದಿ ರಾಜು ಬಿನ್. ಜಾಣೇಗೌಡ, ಬೋರಾಪುರ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಹೆಂಡತಿ ಕವಿತಾಳು ದಿನಾಂಕ.20-12-12ರಂದು ಸಂಜೆ4-30ರಲ್ಲಿ ತನ್ನ ಹೆಂಡತಿ ತವರು ಮನೆಯಲ್ಲಿ ಚಕ್ಕುಲಿಯನ್ನು ಸುಡುತ್ತಿದ್ದಾಗ ಮನೆಯಲ್ಲೇ ಆಟ ವಾಡುತ್ತಿದ್ದ ನನ್ನ ಮಗು ಪೂವರ್ಿಕ, 7 ತಿಂಗಳು ಪಾಪು ಒಲೆಯ ಹತ್ತಿರ ಬಂದು ಬಾಣಲಿಯನ್ನು ಆಕಸ್ಮಿಕವಾಗಿ ಕೈಯಿಂದ ಹಿಡಿದಾಗ ಆ ಬಾಣಲಿಯಲ್ಲಿ ಕಾದಿದ್ದ ಎಣ್ಣೆ ಮಗುವಿನ ಮೈ ಮೇಲೆ ಬಿದ್ದು ಗಾಯವಾಗಿದ್ದ ಪೂವರ್ಿಕಳನ್ನು ಚಿಕಿತ್ಸೆಗಾಗಿ ಮದ್ದೂರು & ಮಂಡ್ಯ ಜಿಲ್ಲಾಸ್ಪತ್ರೆಗಳಲ್ಲಿ ತೋರಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿ ಯಾಗದೇ ದಿನಾಂಕ.1-1-2013ರಂದು ಬೆಳಿಗ್ಗೆ 10-45 ಗಂಟೆಯಲ್ಲಿ ಮೃತಪಟ್ಟಿರುತ್ತಾಳೆ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 1/12 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 01-01-2013 ರಂದು ನಟೇಶ ಬಿನ್. ಲೇಟ್. ಲಕ್ಕೇಗೌಡ, ಬೀರುವಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಅಂಗಡಿ ತೆಗೆಯಲು ಬಂದಾಗ ಯಾರೋ ಒಬ್ಬ ಅಪರಿಚಿತ ಗಂಡಸು ಮೃತಪಟ್ಟಿದ್ದು ಸುಮಾರು 40-45 ವರ್ಷ ವಯಸ್ಸಾಗಿದ್ದು ಸುಮಾರು ಒಂದು ವರ್ಷದಿಂದ ದೇವಸ್ಥಾನ ಹೇಮಗಿರಿ ಇತ್ಯಾದಿ ಕಡೆಗಳಲ್ಲಿ ಬಿಕ್ಷೆ ಮಾಡಿಕೊಂಡು ಇದ್ದು     ದಿನಾಂಕ: 31-12-2012 ರಂದು ರಾತ್ರಿ ವೇಳೆಯಲ್ಲಿ ಮಲಗಿದ್ದಲ್ಲೇ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಕೈಗೊಳ್ಳಿ ಎಂದು ದೂರು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 13-12-2012



ROAD SAFETY WEEK - MARATHON



ROAD SAFETY WEEK MARATHON ON 04-01-2013 










MANDYA DISTRICT POLICE RTI 20124(1) A AND 4(1) B

IMPORTANT DETECTION OF MANDYA RURAL CIRCLE POLICE STAFF

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ ದಿಃ 01.09.2012

ಮಂಡ್ಯ ಗ್ರಾಮಾಂತರ ವೃತ್ತದ ಅಪರಾದ ಪತ್ತೆ ದಳದಿಂದ ಕೊಲೆ ಮಾಡಿದ ಆರೋಪಿಗಳನ್ನು ಮತ್ತು ಮಂಡ್ಯ ನಗರದಲ್ಲಿ ಕನ್ನ ಕಳುವು ಮಾಡಿದ್ದ ಆರೋಪಿಗಳ ಬಂಧನ ಮತ್ತು ರೂ 1,50,000/- ಬೆಲೆಬಾಳುವ ವಸ್ತುಗಳ ವಶ ಮತ್ತು 2 ಘೋರ ಕೇಸುಗಳ ಪತ್ತೆ.


ದಿನಾಂಕಃ02-8-2012 ರ ಬೆಳಿಗ್ಗೆ 6-30 ಗಂಟೆಯಲ್ಲಿ ಹುಲಿವಾನ ಗ್ರಾಮದ ಉಮೇಶ ರವರ ಕಬ್ಬಿನ ಗದ್ದೆಯ ಪಕ್ಕ ಬಾಳಾದಿಟ್ಟು ಕಾಲುವೆಯಲ್ಲಿ ಅಪರಿಚಿತ ಗಂಡಸಿನ ಶವ ಬೆಂಕಿಯಿಂದ ಉರಿಯುತ್ತಿದ್ದು ಹೋಗಿ ನೋಡಲಾಗಿ ಸುಮಾರು 25 ರಿಂದ 28 ರ ವಯಸ್ಸಿನ ಗಂಡಸಿನ ಶವವಾಗಿರುತ್ತೆದೆ. ಯಾರೋ ದುಷ್ಕರ್ಮಿಗಳು ಸದರಿ ಗಂಡಸನ್ನು ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟಿದ್ದು ಶವ ಹೊಗೆಯಿಂದ ಕೊಡಿರುತ್ತದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಚಂದ್ರು ಎಂಬುವರು ನೀಡಿದ ದೂರಿನ ಮೇರೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಮೃತ ವ್ಯಕ್ತಿಯು ಅರಕೆರೆ ಹೋಬಳಿ, ದೇವರಗುಡ್ಡನಕೊಪ್ಪಲು ಗ್ರಾಮದ ಚಿಕ್ಕಸಿದ್ದಯ್ಯನ ಮಗ ನಂಜುಂಡ ಎಂದು ತನಿಖೆಯಿಂದ ತಿಳಿದು ಬಂದಿರುತ್ತದೆ.

ಈ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ವೃತ್ತದ ಸಿ.ಪಿ.ಐ ಶ್ರೀ. ಜಿ.ಕೃಷ್ಣಮೂರ್ತಿ, ಎ.ಎಸ್.ಐ, ಜಾರ್ಜ್ ವಿಲ್ಸನ್ ಹಾಗೂ ಇತರೆ ಸಿಬ್ಬಂದಿಗಳು ದಿನಾಂಕ: 30-08-2012 ರಂದು ಈ ಕೇಸಿನ ಆರೋಪಿಗಳಾದ 1. ಜಯಶಂಕರ 2. ಸೋಮ @ ಸೋಮಶೇಖರ ರವರುಗಳನ್ನು ಬಂಧಿಸಿ ಈ ಕೇಸಿಗೆ ಸಂಬಂಧಪಟ್ಟಂತೆ ಮೃತನಿಂದ ತೆಗೆದುಕೊಂಡು ಹೋಗಿದ್ದ ರೂ, 20,000 ಗಳನ್ನು 2 ನೇ ಆರೋಪಿ ಸೋಮ @ ಸೋಮಶೇಖರ ತನ್ನ ಇಂಡಿಯನ್ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾಗಿ ತಿಳಿದು ಬಂದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ.

ಈ ಮೆಲ್ಕಂಡ ಕೊಲೆ ಪ್ರಕರಣವಲ್ಲದೆ ಮೇಲ್ಕಂಡ 2 ಜನ ಆರೋಪಿಗಳು ಮತ್ತೊಬ್ಬ ಆರೋಪಿ 3 ಶಿವು @ ಶಿವ ಶಂಕರ ಎಂಬುವನೊಡನೆ ಸೇರಿ ಜೂನ್ 2012 ರಲ್ಲಿ ಮಂಡ್ಯ ನಗರದ ಗಾಂದಿನಗರ, 6ನೇ ಕ್ರಾಸ್ನಲ್ಲಿ ಶ್ರೀ. ಚಂದ್ರಶೇಖರ್ ಎಂಬುವರ ಮನೆಯ ಬೀಗದ ಕೀಯನ್ನು ಡ್ಯೂಪ್ಲಿಕೇಟ್ ಕೀ ನಿಂದ ತೆಗೆದು, ಸದರಿ ಮನೆಯಿಂದ ಲ್ಯಾಪ್ಟ್ಯಾಪ್, ಕ್ಯಾಮೆರಾ, ಚಿನ್ನದ ಮೂರು ಉಂಗುರಗಳು, ಚಿನ್ನದ ಸ್ಟಡ್ ಮತ್ತು ಡ್ರಾಪ್ಸ್, ಬೆಳ್ಳಿಯ ಕುಂಕುಮದ ಬಟ್ಟಲುಗಳು, ಬೆಳ್ಳಿಯ ಚಿಕ್ಕ ದೀಪಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಸುಮಾರು 1,50,000 ರೂ. ಬೆಲೆ ಬಾಳುವ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ಆರೋಪಿಗಳ ಹೆಸರು ಮತ್ತು ವಿಳಾಸ :

1. ಜಯಶಂಕರ ಕೆ.ಸಿ. ಬಿನ್ ಚನ್ನಬಸವೇಗೌಡ, 23 ವರ್ಷ, ಮಂಡ್ಯ ನಗರದ ಕೆ.ಹೆಚ್.ಬಿ. ಕಾಲೋನಿಯ, ಶೃತಿ ರೇಷ್ಮೆ ಮೊಟ್ಟೆ ಉತ್ಪಾದನ ಕೇಂದ್ರದಲ್ಲಿ ಕೆಲಸ, ಹಾಲಿ ವಾಸ ಕೆ.ಹೆಚ್.ಬಿ. ಕಾಲೋನಿ, ಚಿಕ್ಕ ಮಂಡ್ಯ ಕೆರೆ, ಮಂಡ್ಯ ಸಿ.ಟಿ. ಸ್ವಂತ ಊರು ಕರಿಹುರಳಿಕೊಪ್ಪಲು ಗ್ರಾಮ, ಬನ್ನೂರು ಹೋಬಳಿ, ಟಿ.ಎನ್. ಪುರ ತಾಲ್ಲೋಕು, ಮೈಸೂರು ಜಿಲ್ಲೆ.

2. ಆರ್.ಎನ್. ಸೋಮಶೇಖರ @ ಸೋಮ ಬಿನ್ ನಂಜುಂಡಯ್ಯ, 27 ವರ್ಷ, ಮಂಡ್ಯದ ಬಿ.ಎಸ್.ಎನ್.ಎಲ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರಿನ ಚಾಲಕ, ಹಾಲಿ ವಾಸ ಪಿ. ನಾಗೇಂದ್ರರವರ ಬಾಡಿಗೆ ಮನೆ ಯಲ್ಲಿ ವಾಸ, 11 ನೆ ಕ್ರಾಸ್, ಸ್ವರ್ಣಸಂದ್ರ, ಮಂಡ್ಯ ನಗರ, ಸ್ವಂತ ಊರು ರಾಮಂದೂರು, ಕಿರುಗಾವಲು ಹೋಬಳಿ, ಮಳವಳ್ಳಿ ತಾಲ್ಲೂಕು.

3. ಡಿ.ಸಿ. ಶಿವಕುಮಾರ @ ಶಿವು ಬಿನ್ ಚಿಕ್ಕಜ್ಞಾನಾಚಾರ್,24 ವರ್ಷ, ಕಾರ್ಪೆ ಂಟರ್ ಕೆಲಸ, ಹಾಲಿ ವಾಸ ಅಂಸಿಯಮ್ಮನ ಮನೆಯಲ್ಲಿ ಬಾಡಿಗೆ ಮನೆ, 1 ನೇ ಕ್ರಾಸ್, ಚಂಪಕದಮ್ಮ ದೇವಸ್ಥಾನದ ಬೀದಿ, ಬನ್ನೇರಗಟ್ಟೆ ಗ್ರಾಮ, ಆನೆಕಲ್ ತಾಲ್ಲೋಕು, ಬೆಂಗಳೂರು, ಸ್ವಂತ ಊರು ದೊಡ್ಡಅರಳಿಗೆರೆ ಗ್ರಾಮ, ಸೂಲಿಬೇಲಿ ಹೋಬಳಿ, ಹೊಸಕೊಟೆ ತಾಲ್ಲೋಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂಧಿಯವರ ಪತ್ತೆ ಕಾರ್ಯದ ಬಗ್ಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ.