Moving text

Mandya District Police

DAILY CRIME REPORT DATED : 13-02-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಾಬರಿ ಪ್ರಕರಣಗಳು,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ, 1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ,  1 ಕೊಲೆ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ರಾಬರಿ ಪ್ರಕರಣಗಳು :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 392 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಚೈತ್ರ ಬಿನ್. ಶಿವನಂಜು, 18 ವರ್ಷ, ಬಿಎಸ್ಸಿ ವಿಧ್ಯಾರ್ಥಿನಿ , ಬೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಪೀಹಳ್ಳಿ ಕೆರೆ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಸಂಜೆ 05-15 ಗಂಟೆಯಲ್ಲಿ ಒಂದು ಬೈಕ್ ಮೇಲೆ ಒಬ್ಬ ಅಸಾಮಿ ಕುಳಿತಿದ್ದು, ಮತ್ತೊಬ್ಬ ಕೆಳಗೆ ನಿಂತಿದ್ದು, ನಿಂತಿದ್ದ ಅಸಾಮಿ ನಮ್ಮ ಬಳಿಗೆ ಬಂದು ರೇಜರ್ ತೋರಿಸಿ, ನನ್ನ ಕತ್ತಿನಲ್ಲಿ ಹಾಕಿದ್ದ ಚಿನ್ನದ ಚೈನನ್ನು ಬಲವಂತವಾಗಿ ಕಿತ್ತುಕೊಂಡು ಓಡಿ ಹೋಗಿರುತ್ತಾನೆ, ಚಿನ್ನದ ಸರವು 15 ಗ್ರಾಂ. ತೂಕವಿದ್ದು, ಇದರ ಮೌಲ್ಯ 30 ಸಾವಿರ ರೂ ಆಗುತ್ತದೆ. ಆರೋಪಿಯನ್ನು ಪತ್ತೆ ಮಾಡಿ ಚಿನ್ನದ ಸರವನ್ನು ಕೊಡಿಸಿ ಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 384 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ಸಿದ್ದಯ್ಯ. ಬೆಸಗರಹಳ್ಳಿ ಅಡ್ಡರಸ್ತೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ರವಿ ಬಿನ್. ಸೋಮಯ್ಯ, ಇಗ್ಗಲೂರು ಗ್ರಾಮ, ಚನ್ನಪಟ್ಟಣ ತಾ. ರವರು ಕೋಳಿ ಫಾರಂನಲ್ಲಿ ಮಲಗಿದ್ದಾಗ ಆರೋಪಿ ಬಂದು ಚಾಕು ತೋರಿಸಿ ಅವರ ಬಳಿ ಇದ್ದ 12000=00 ರೂ ಗಳನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 498(ಎ)-504 ಕೂಡ34 ಐ.ಪಿ.ಸಿ.ಮತ್ತು ಕಲಂ4 ಡಿ.ಪಿ.ಕಾಯಿದೆ.

     ದಿನಾಂಕ: 13-02-2013 ರಂದು ಪಿರ್ಯಾದಿ ಅಂಜಲಿ ಕೋಂ. ಚಂದ್ರೇಗೌಡ, 20 ವರ್ಷ, ಒಕ್ಕಲಿಗರು, ಗೃಹಿಣಿ, ಹೊಸಕೋಟೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಚಂದ್ರೇಗೌಡ ಬಿನ್ ಲೇಟ್. ಅಂಕೇಗೌಡ ಹಾಗು ಅತ್ತೆ ಲಕ್ಷ್ಮಮ್ಮ ಕೋಂ. ಲೇಟ್ ಅಂಕೇಗೌಡ, ಇಬ್ಬರೂ ಹೊಸಕೋಟೆ ಗ್ರಾಮ ರವರುಗಳು ಪಿರ್ಯಾದಿಯವರನ್ನು ವರದಕ್ಷಿಣೆಯಾಗಿ ಎರಡು ಲಕ್ಷ ರೂ.ಗಳನ್ನು ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ಕೊಟ್ಟಿದ್ದು, ದಿಃ-12-02-2013 ರಂದು ಬೆಳಿಗ್ಗೆ 6 ಗಂಟೆಯಲ್ಲಿ ಪಿರ್ಯಾಧಿಯ ಗಂಡ ಮತ್ತು ಅತ್ತೆ ಇಬ್ಬರು ಪಿರ್ಯಾದಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಬೈದು ಮನೆಯಿಂದ ಹೊರಗೆ ನೂಕಿರುತ್ತಾರೆ ಕ್ರಮ ಕೈಗೊಳ್ಳಿ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 36/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ. 

     ದಿನಾಂಕ: 13-02-2013 ರಂದು ಪಿರ್ಯಾದಿ ಶೀನೆಗೌಡ ಬಿನ್. ಲೇಟ್. ಯಾಲಕ್ಕಿಗೌಡ, ಕಬ್ಬಲಗೆರೆ ಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ದಿನಾಂಕ: 07-02-2013 ರಂದು ಸಂಜೆ 05-00 ಗಂಟೆಯಲ್ಲಿ ತನ್ನ ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆಂದು ಹೋದವಳು ಮತ್ತೆ ವಾಪಸ್ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಪತ್ತೆಮಾಡಿಕೊಡಿ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 379 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಎಂ.ಎಸ್.ಇಂದ್ರ ವಾಸ ನಂ. 4/10, 1ನೇ ಕ್ರಾಸ್, 1ನೇ ಮುಖ್ಯರಸ್ತೆ, ಆಜಾದ್ನಗರ, ಬೆಂಗಳೂರು ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಅವರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಪರ್ಸ್ ನ್ನು,  ನೋಡಲು ವ್ಯಾನಿಟಿ ಬ್ಯಾಗ್ನ ಜಿಪ್ ತೆಗೆದಾಗ ಅದರಲ್ಲಿ ಪಸರ್್ ಇರಲಿಲ್ಲ. ಸದರಿ ಪಸರ್್ನಲ್ಲಿಟ್ಟಿದ್ದ 12 ಗ್ರಾಂ ತೂಕದ ಲಕ್ಷ್ಮಿ ಡಾಲರ್ ಇರುವ ಹಗ್ಗದ ಮಾದರಿಯ ಚಿನ್ನದ ಚೈನ್, 5 ಗ್ರಾಂ ತೂಕದ ಹಸಿರು ಹರಳಿರುವ ಚಿನ್ನದ ಉಂಗುರ ಮತ್ತು 700-00 ರೂ. ನಗದು ಹಣವನ್ನು ಯಾರೋ ಕಳ್ಳರು ಬಸ್ಸನ್ನು ಹತ್ತುವಾಗ ಪರ್ಸ್ ಸಮೇತ ಕಳವು ಮಾಡಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 48,000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :


ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

  ದಿನಾಂಕ: 13-02-2013 ರಂದು ಪಿರ್ಯಾದಿ ಮಂಜುಳ ಬೊಪ್ಪಸಮುದ್ರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-02-2013 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಯೋಗೇಶ ಬಿನ್ ದೊಡ್ಡೈದೇಗೌಡ ಬೊಪ್ಪಸಮುದ್ರ ರವರು ಗದ್ದೆಗೆ ಹೊಡೆಯುವ ಔಷದಿಯನ್ನು ಕುಡಿದು ಒದ್ದಾಡುತ್ತಿದ್ದಾಗ ಚಿಕಿತ್ಸೆಗೆ ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಬಗ್ಗೆ ಮಂಡ್ಯ ಜಿಲ್ಲಾ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 13-02-2013 ರಂದು ಸುಮಾರು ಸಂಜೆ 06-00 ಗಂಟೆ ಸಮಯದಲ್ಲಿ ಮೃತಪಟ್ಟಿರುವುದಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :


ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 353-504-506 ಕೂಡ 34 ಐಪಿಸಿ ಹಾಗೂ ಕಲಂ-3 ಕ್ಲಾಸ್() ಸಬ್ ಕ್ಲಾಸ್ (ಘಿ) ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ.  

     ದಿನಾಂಕ: 13-02-2013 ರಂದು ಪಿರ್ಯಾದಿ ಎಸ್.ಜಿ ವಸಂತಕುಮಾರ್, ಸಹ ಶಿಕ್ಷಕರು, ಶ್ರೀ ಯದುಶೈಲ ಪ್ರೌಢಶಾಲೆ, ಮೇಲುಕೋಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಕೆ.ಬಿ ನರಸಿಂಹೇಗೌಡ, 2] ಜವರೇಗೌಡ, ಕಾಡೇನಹಳ್ಳಿ, 3] ವಿ. ಮಚಂದ್ರ, ಕೊಡಗಹಳ್ಳಿ, 4] ಅನಂತರಾಮಶೆಟ್ಟ, ಮೇಲುಕೋಟೆ ರವರುಗಳು,  ಮುಖ್ಯ ಶಿಕ್ಷಕರನ್ನು ಬೈಯುತ್ತಿದ್ದರು. ಆಗ ಪಿರ್ಯಾಧಿಯನ್ನು ಆರೋಪಿ ಕೆ.ಬಿ ನರಸಿಂಹೇಗೌಡರು ಬಾರೋ ಲೋ ಬಡ್ಡಿ ಮಗನೇ ದನ ತಿನ್ನೋ ಹೊಲೆಯ ನನ್ನ ಮಕ್ಕಳಿಗೆ ಕೆಲಸ ಕೊಟ್ಟಿದ್ದೇ ತಪ್ಪಾಯ್ತು. ಕಾಲಿನ ಚಪ್ಪಲಿ  ಎಲ್ಲಿರ್ಸಬೇಕು ಅಲ್ಲೆ ಇರ್ಸಬೇಕು ಎಂದು ಕೆಂಡಾ ಮಂಡಲವಾಗಿ ಪಿರ್ಯಾದಿಯನ್ನು ಹೊಡೆಯಲು ಮುಂದಾಗಿದ್ದು, ಇದರಿಂದ ಪ್ರಾಣಭಯ ಉಂಟಾಗಿದ್ದು, ಶಾಲೆಯಲ್ಲಿ ಕಾರ್ಯನಿರ್ವಹಿಸಲು ತೊಂದರೆ ಉಂಟಾಗಿದೆ. ಆದ್ದರಿಂದ ದಯಮಾಡಿ ಆರೋಪಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕೊಲೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 302-201 ಐ.ಪಿ.ಸಿ.

ದಿನಾಂಕ: 13-02-2013 ರಂದು ಪಿರ್ಯಾದಿ ಆನಂದೇಗೌಡ, ಪಿ.ಎಸ್.ಐ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದಿನಾಂಕ:13-02-2013ರಂದು ಮೃತನ ಶವ ಪರೀಕ್ಷಾ ವರದಿಯನ್ನು ನೀಡಿದ್ದು ಮೃತನ ಸಾವಿನ ಕಾರಣದ ಬಗ್ಗೆ  All the above injuries are antemortum in nature. And death is due to ligature strangulation '' ಎಂದು ಅಭಿಪ್ರಾಯ ಪಟ್ಟಿದ್ದು ಮೃತನನ್ನು ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಯಾವುದೋ ಸಾದನದಿಂದ ಮೃತನ ಕುತ್ತಿಗೆಗೆ ಬಿಗಿದು ಉಸಿರು ಕಟ್ಟಿಸಿ ಸಾಯಿಸಿರುವುದು ವೈಧ್ಯಾಧಿಕಾರಿಗಳ ಅಭಿಪ್ರಾಯದಿಂದ ಕಂಡು ಬಂದಿರುವುದರಿಂದ ಈ ಯುಡಿಅರ್ ಪ್ರಕರಣದಲ್ಲಿ ದಿನಾಂಕ:13-02-2013 ರಂದು ಬೆಳಿಗ್ಗೆ 11-00ಗಂಟೆಯ ಸಮಯದಲ್ಲಿ ಕನರ್ಾಟಕ ಸರ್ಕಾರದ  ಪರವಾಗಿ ನಾನು ಸ್ವಯಂ ವರದಿಯನ್ನು ತಯಾರಿಸಿ ಠಾಣಾ ಮೊ.ಸಂ.  53/2013 ಕಲಂ 302-201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

DAILY CRIME REPORT DATED : 12-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಅರ್. ಪ್ರಕರಣ,  2 ಕೊಲೆ ಪ್ರಕರಣಗಳು ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 12-02-2013 ರಂದು ಪಿರ್ಯಾದಿ ಚೆಲುವರಾಜು ಬಿನ್ ಮಲ್ಲೇಸಿಂಗ್ರಯ್ಯ, ಬಿಲ್ಲೇನಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ,  ಮೂತರ್ಿ ರವರ ಹೆಂಡತಿ, 20 ವರ್ಷ ಕಾಗೇರೆ ಗ್ರಾಮ ರವರು ದಿನಾಂಕ: 02-02-2013 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ಬಿಲ್ಲೇನಹಳ್ಳಿ ಗ್ರಾಮದಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 12-02-2013 ರಂದು ಪಿರ್ಯಾದಿ ಶಿವಲಿಂಗಯ್ಯ ಬಿನ್. ಜವರಯ್ಯ, ಬಳ್ಳೇಕರೆ ಗ್ರಾಮ, ಸಂತೇಬಾಚಹಳ್ಳಿ ರವರು ನೀಡಿದ ದೂರು ಏನೆಂದರೆ ಅವರ ತಂದೆ ಜವರಯ್ಯ, 70 ವರ್ಷ ರವರು ಈಗ್ಗೆ 8-9 ವರ್ಷಗಳ ಹಿಂದೆ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಅರ್. ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174  ಸಿ.ಆರ್.ಪಿ.ಸಿ.

ದಿನಾಂಕ: 12-02-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇಟ್. ಸಿದ್ದೇಗೌಡ, 40 ವರ್ಷ, ಒಕ್ಕಲಿಗರು, ತಗ್ಗಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಒಬ್ಬ ಅಪರಿಚಿತ ಗಂಡಸು, ಸುಮಾರು 80 ವರ್ಷ ರವರು ತಗ್ಗಹಳ್ಳಿ ಗ್ರಾಮದ ಬಸ್ ನಿಲ್ದಾಣದ ಶೆಲ್ಟರ್ನಲ್ಲಿ  ಬಂದು ಮಲಗಿದ್ದು ಗ್ರಾಮದ ಜನರು ಊಟ ಕೊಟ್ಟರೂ ಸಹ  ಆಹಾರವನ್ನು ಸೇವಿಸುತ್ತಿರಲಿಲ್ಲ,  ಮಲಗಿದಾಗ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಕೊಲೆ ಪ್ರಕರಣಗಳು  :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 65/13 ಕಲಂ. 302 ಕೂಡ 34 ಐ.ಪಿ.ಸಿ.

   ದಿನಾಂಕ: 12-02-2013 ರಂದು ಪಿರ್ಯಾದಿ ಶಿವಲಿಂಗ ಬಿನ್. ಲೇಟ್. ಲಾರಿನಿಂಗಪ್ಪ, ಅಣ್ಣಳ್ಳಿದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಸೋದರ ಮಾವ ಬಿ, ಕೃಷ್ಣನ ಶವವನ್ನು ಹೊರಗಡೆ ಎತ್ತುಕೊಂಡು ಬಂದು ನೋಡಲಾಗಿ ಆತನ ಮೂಗು ಮುಖ ಗಡ್ಡದ ಹತ್ತಿರ ತರಚಿದಂತಹ ಸಣ್ಣ ಸಣ್ಣ ಗಾಯಗಳು ಆಗಿರುವುದು ಕಂಡು ಬಂತು ಅದನ್ನು ನೋಡಿದರೆ ಮೇಲ್ಕಂಡ ನನ್ನ ಸೋದರ ಮಾವನ ಸಾವಿನ ಬಗ್ಗೆ ಸಂಶಯವಿರುತ್ತದೆ ಆರೋಪಿತರಾದ 1) ವರಲಕ್ಷಿ ಕೋಂ. ಲೇಟ್ ಬಿ.ಕೃಷ್ಣ ಹಾಗು  2] ಶಿವರಾಜು ಬಿನ್ ಬೊಳ್ಳಗೌಡ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2.  ಅರಕೆರೆ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 302 ಐ.ಪಿ.ಸಿ.

     ದಿನಾಂಕ: 12-02-2013 ರಂದು ಪಿರ್ಯಾದಿ ಎನ್.ಎಸ್. ನವೀನ್. ಬಿನ್. ಶಿವಶಂಕರ್, 27 ವರ್ಷ, ನೇರಲೇಕೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ದುರಾತ್ಮರು ಆಯುದದಿಂದಲೇ ಅಥವಾ ಕತ್ತು ಹಿಸುಕಿ ಸಾಯಿಸಿಯೋ ಅಥವಾ ಮತ್ತಾವುದೋ ರೀತಿಯಲ್ಲಿ ಸಾಯಿಸಿದ್ದು ಕಂಡುಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 11-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-02-2013 ರಂದು ಒಟ್ಟು 9 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  1 ವಂಚನೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ  ಹಾಗು 5 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 32/13 ಕಲಂ. 379 ಐ.ಪಿ.ಸಿ.

     ದಿನಾಂಕ: 11-02-2013 ರಂದು ಪಿರ್ಯಾದಿ ಶಿವಶಂಕರ. ಬಿ. ಬಿನ್. ಲೇ ಬೋರಯ್ಯ, 50 ವರ್ಷ, ಚಿಕ್ಕಮಂಡ್ಯ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಫಿರ್ಯಾದಿಯವರ ಬಾಬ್ತು ಕೆ.ಎ-11-ಆರ್-3034ರ ಮೋಟಾರ್ ಸೈಕಲ್ ನ್ನು, ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ 25,500/- ರೂ. ಆಗುತ್ತದೆ. ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 379 ಐ.ಪಿ.ಸಿ.

    ದಿನಾಂಕ: 11-02-2013 ರಂದು ಯದುರಾಜೇಗೌಡ, ಆಡಳಿತಾಧಿಕಾರಿ, ಎಸ್.ಪಿ.ಸಿ.ಎಲ್ ಲಿಮಿಟೆಡ್, ಟಿ.ಕೆ.ಹಳ್ಳಿ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಟಿ.ಕೆ.ಹಳ್ಳಿ ಗ್ರಾಮದ ಬಿಡಬ್ಯ್ಲೂಎಸ್ಎಸ್ಬಿ ಕಾವೇರಿ ಕುಡಿಯುವ ನೀರಿನ ಸರಬರಾಜಿಗೆ ಉಪಯೋಗಿಸುತ್ತಿದ್ದ ನೀರೆತ್ತುವ 1] 8 ಹೆಚ್.ಪಿ. ನೀರೆತ್ತುವ ಮೋಟಾರ್, 2] 2 ಹೆಚ್.ಪಿ.ನೀರೆತ್ತುವ ಮೋಟಾರ್, 3] 500 ಮೀಟರ್ ಕೇಬಲ್ ವೈರ್ ಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ



ವಂಚನೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. 468-420 ಐ.ಪಿ.ಸಿ.

     ದಿನಾಂಕ: 11-02-2013 ರಂದು ಪಿರ್ಯಾದಿ ರಘು ಎಂ.ಪಿ. ವಿಭಾಗೀಯ ಭದ್ರತಾ ನಿರೀಕ್ಷಕ, ಕ.ರಾ.ರ.ಸಾ.ಸಂಸ್ಥೆ. ಮಂಡ್ಯ ವಿಭಾಗ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರಕಾಶ್ ಎಸ್.ಎನ್ ಬಿನ್ ನರೆಸೇಗೌಡ, ಬೆಳ್ಳಾಳೆ ಗ್ರಾಮ, ಪಾಂಡವಪುರ ತಾಲ್ಲೂಕು. ರವರು ಕ.ರಾ.ರ.ಸಾ. ಸಂಸ್ಥೆಯ ಪಾಸ್ ಹೋಲುವ ರೀತಿಯಲ್ಲಿ ಒಂದು ನಕಲಿ ಪಾಸನ್ನು ಸೃಷ್ಠಿಸಿಕೊಂಡು ಸದರಿ ಪಾಸ್ನಲ್ಲಿ ವಿಭಾಗೀಯ ನಿಯಂತ್ರಾಣಧಿಕಾರಿಗಳು ಕ.ರಾ.ರ.ಸಾಂ.ಸಂಸ್ಥೆಯ ಮಂಡ್ಯ ವಿಭಾಗ ಮಂಡ್ಯ ರವರ ಮೊಹರಿನ ರೀತಿಯಲ್ಲಿ ನಕಲಿ ಮೊಹರನ್ನು ಉಯೋಗಿಸಿಕೊಂಡು ಕಳೆದ ಮೂರು ತಿಂಗಳಿನಿಂದ ಸದರಿ ಪಾಸನ್ನು ಬಳಸಿ ಕ.ರಾ.ರ.ಸಾ.ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಿ ಸಂಸ್ಥೆಗೆ ವಂಚನೆ ಎಸಗಿ ಉಚಿತವಾಗಿ ಪ್ರಯಾಣಿಸಿರುತ್ತಾರೆ. ಸದರಿಯವರು ಈ ರೀತಿ ಮೂರು ತಿಂಗಳಿನಿಂದ ಆರ್ಥಿಕ  ನಷ್ಠ ಉಂಟು ಮಾಡಿರುತ್ತಾರೆ ಹಾಗೂ ಈ ದಿನದ ಸದರಿ ವಾಹನದ ಮಾರ್ಗ ಕಾರ್ಯಚರಣೆಗೆ  ಅಡಚಣೆ ಉಂಟಾಗಿ ಸಂಸ್ಥೆಗೆ ಸುಮಾರು 10,000/- ನಷ್ಟ ಮಾಡಿರುತ್ತಾರೆ ಆದ್ದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 11-02-2013 ರಂದು ಪಿರ್ಯಾದಿ ಗೌರಮ್ಮ ಕೋಂ ಶಾಂತಪ್ಪ, ಆಲಂಬಾಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಗಂಡ ಶಾಂತಪ್ಪ ಬಿನ್. ಬಸಪ್ಪ, 58 ವರ್ಷ, ಆಲಂಬಾಡಿ ಗ್ರಾಮರವರು  ನಂಜನಗೂಡು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿರುವುದಿಲ್ಲ, ನಾವು ಸಂಬಂಧಿಕರ, ಸ್ನೇಹಿತರ ಮನೆಗಳಲ್ಲಿ ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲ  ಪತ್ತೆಮಾಡಿಕೊಡಿ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 10-02-2013



 ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 4 ಯು.ಡಿ.ಆರ್. ಪ್ರಕರಣಗಳು, 3 ಮನುಷ್ಯ ಕಾಣೆಯಾದ ಪ್ರಕರಣಗಳು, 1 ರಸ್ತೆ ಅಪಘಾತ ಪ್ರಕರಣ,  1 ಕಳವು ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್.ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ವೆಂಕಟೇಶ್, ಬಸ್ತೀಪುರ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಲಕ್ಷ್ಮಮ್ಮ ರವರ ಗಂಡ ವೆಂಕಟೇಶ್ ಬಿನ್ ದಾಸಯ್ಯ, 40 ವರ್ಷ, ಬಿಇಎಂಎಲ್ ನೌಕರ, ಗಂಗಾಮತ, ವಾಸಃ ಬಸ್ತೀಪುರ ಗ್ರಾಮ, ರವರಿಗೆ ಕಳೆದ 5 ವರ್ಷದಿಂದ ಹೊಟ್ಟೆನೋವು ಬರುತ್ತಿದ್ದು ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದು,  ಯಾವುದೋ ವಿಷ ಸೇವನೆ ಮಾಡಿ ಒದ್ದಾಡುತ್ತಿದ್ದವರನ್ನು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆ ಮೈಸೂರಿನ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿರುತ್ತೆ. ನನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೇ ಕಾರಣವಿರುವುದಿಲ್ಲ. ಶವದ ಬಗ್ಗೆ  ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 (|||) ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಮಧು, 32ವರ್ಷ, ವಕ್ಕಲಿಗ, ವ್ಯವಸಾಯ, ಹೆಬ್ಬಕವಾಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಶಂಕರ ಬಿನ್ ಮುದ್ದೇಗೌಡ, ವಕ್ಕಲಿಗರು, ವ್ಯವಸಾಯ, ಹೆಬಕವಾಡಿ ಗ್ರಾಮ ಎಂಬುವವರು ಮರ ಒಂದಕ್ಕೆ ಲುಂಗಿ ಮತ್ತು ಟವಲ್ನಿಂದ ಕತ್ತಿಗೆ ಮತ್ತು ಮರಕ್ಕೆ ಕಟ್ಟಿಕೊಂಡು ಮರಣ ಹೊಂದಿರುತ್ತಾನೆ, ಸದರಿಯವರ ಸಾವಿನ ಬಗ್ಗೆ ಅನುಮಾನವಿರುತ್ತೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಯೋಗನರಸಿಂಹ ಬಿನ್. ರಾಜಣ್ಣ, ರಂಗನಾಥಸ್ವಾಮಿ ದೇವಸ್ಥಾನದ ಪಾರುಪತ್ತೆದಾರರು,  ಕೊಳದ ಗರಡಿ ಬೀದಿ ರವರು ನೀಡಿದ ದೂರಿನ ವಿವರವೇನೆಂದರೆ ಸುಮಾರು 40-45 ವರ್ಷ ವಯಸ್ಸಿನ ಒಬ್ಬ ಅಪರಿಚಿತ ಗಂಡಸು  ದೇವಸ್ಥಾನದ  ಹಿಂಬಾಗದ  ಹಕರ್ಿಲೆಸ್ ಮರಕ್ಕೆ  ನೇಣುಹಾಕಿಕೊಂಡು ಮೃತಪಟ್ಟಿದ್ದು,  ಬಿಳಿಯ ಶರ್ಟ, ಕಪ್ಪು ಕಲರ್ ಪ್ಯಾಂಟ್ ಧರಿಸಿರುತ್ತಾರೆ.   ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  .


4. ಕೆರೆಗೋಡು ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಡಿ.ವೈ.ಪ್ರಸನ್ನ ಬಿನ್. ಡಿ.ಎಸ್.ಯೋಗನಂದೇಗೌಡ, ಡಿ.ಎನ್.ಪುರ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಸಹೋದರ ಡಿ.ವೈ. ಸತೀಶ ಬಿನ್ ಡಿ.ಎಸ್. ಯೋಗಾನಂದೇಗೌಡರವರಿಗೆ ಈಗ್ಗೆ 02 ವರ್ಷಗಳಿಂದ ವಾಸಿಯಾಗದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದರಿಂದ ಮನನೊಂದು ತನ್ನ ಜಮೀನಿನ ಬಳಿ ಯಾವುದೋ ಕ್ರಿಮಿನಾಶಕ ವಿಷ ಔಷಧಿಯನ್ನು ಸೇವನೆ ಮಾಡಿ, ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ 08-30 ಗಂಟೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

 1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 14/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 10-02-2013 ರಂದು ಪಿರ್ಯಾದಿ ಜವರಯ್ಯ ಬಿನ್. ಗೆಂಡಯ್ಯ, ಕನ್ನಲಿ ಗ್ರಾಮ, ಮಂಡ್ಯ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಹೆಂಡತಿ ಅರಸಮ್ಮ ಕೋಂ. ಜವರಯ್ಯ 70 ವರ್ಷ, ಗಂಗಾಮತ ಜನಾಂಗ, ಕನ್ನಲಿ ಗ್ರಾಮ. ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದ ಸರಳ ಸಮೂಹಿಕ ಮದುವೆಗೆ ಗ್ರಾಮದವರ ಜೊತೆಯಲ್ಲಿ ಲಾರಿಯಲ್ಲಿ  ಮದುವೆ ಬಂದಿದ್ದು ವಾಪಸ್ಸ್  ಕನ್ನಲಿ ಗ್ರಾಮಕ್ಕೆ ಬರಲಿಲ್ಲ ಪಿರ್ಯಾದಿಯವರು ಜೊತೆಯಲ್ಲಿ ಬಂದಿದ್ದರವರನ್ನು ವಿಚಾರ ಮಾಡಲಾಗಿ ಸದರಿಯವರುಗಳು ಅರಸಮ್ಮಳು ನಾವು ಬರುವಾಗ ನಮ್ಮಗಳ ಜೊತೆಯಲ್ಲಿ ಬರಲಿಲ್ಲವೆಂದು ತಿಳಿಸಿರುತ್ತಾರೆ ನಾವು ಇದುವರೆಗೂ ನಮ್ಮ ನೆಂಟರಿಷ್ಠರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 10-02-2013 ರಂದು ಪಿರ್ಯಾದಿ ಹೊನ್ನೇಗೌಡ ಬಿನ್ ರಾಜಪ್ಪ, 40ವರ್ಷ, ವಕ್ಕಲಿಗರು, ಮೊಬೈಲ್ಅಂಗಡಿಯಲ್ಲಿ ವ್ಯಾಪಾರ, ಕೆಂಪೇಗೌಡ ವೃತ್ತ, ಬೆಳ್ಳೂರು ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕಃ 01-02-2013ನೇ ತಾರೀಖಿನಂದು ಡಿ.ಕೋಡಿಹಳ್ಳಿಯಿಂದ ಕಿರಣ್ ಬಿನ್ ತಮ್ಮಣ್ಣ, 14ವರ್ಷ, ವಕ್ಕಲಿಗರು, 8ನೇ ತರಗತಿಯ ವಿದ್ಯಾಥರ್ಿ, ವಾಸ ಡಿ. ಕೋಡಿಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋಬಳಿ ಎಂಬ ಹುಡುಗ ಬೆಳ್ಳೂರಿನಲ್ಲಿರುವ ನಮ್ಮ ಮನೆಗೆ ಬಂದಿದ್ದು, ಎರಡು ಮೂರು ದಿನಗಳು ಇಲ್ಲಿಯೇ ಇದ್ದು, ದಿನಾಂಕಃ 04-02-2013 ನೇ ತಾರೀಖಿನಂದು ಸೋಮವಾರ ಬೆಳಿಗ್ಗೆ ಮನೆಯಿಂದ ಡಿ.ಕೋಡಿಹಳ್ಳಿಯಲ್ಲಿರುವ ಅವರ ತಾಯಿಯ ಮನೆಗೆ ಹೋಗುತ್ತೇನೆಂದು ತಿಳಿಸಿ ಹೋದವನು ಅಲ್ಲಿಗೂ ಹೋಗದೆ ಶಾಲೆಗೂ ಸಹ ಹೋಗದೆ ಇರುವುದು. ನಮಗೆ ತಿಳಿದು ಬಂದಿರುತ್ತದೆ. ಸದರಿ ಕಾಣೆಯಾದ ಬಾಲಕನನ್ನು [ಕಿರಣ] ಪತ್ತೆಮಾಡಿ ಕೊಡಬೇಕೆಂದು ದೂರು ನೀಡಿರುತ್ತಾರೆ.  ನಮ್ಮ ಸಂಬಂದಿಕರ ಎಲ್ಲಾ ಊರುಗಳಲ್ಲಿ ಹುಡುಕಿ ಈ ದಿನ ತಡವಾಗಿ ದೂರು ನೀಡಿರು- ತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 43/13 ಕಲಂ. ಹೆಂಗಸು  ಕಾಣೆಯಾಗಿದ್ದಾಳೆ.

ದಿನಾಂಕ: 10-02-2013 ರಂದು ಪಿರ್ಯಾದಿ ಕೃಷ್ಣಾಚಾರಿ ಬಿನ್. ಲೇ|| ಸಿದ್ದಪ್ಪಾಜಿ, 39 ವರ್ಷ, ವಿಶ್ವಕರ್ಮ ಜನಾಂಗ,  ವಾಸ ಕಬ್ಬನಹಳ್ಳಿ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೋಕ್ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಅವರ ಹೆಂಡತಿ ಸುಶೀಲ ಕೋಂ. ಕೃಷ್ಣಚಾರಿ, ಮಂಡ್ಯ ಸುರಭಿ ನರ್ಸಿಂಗ್  ಹೋಂ. ಮಂಡ್ಯ, ಕಬ್ಬನಹಳ್ಳಿ ಗ್ರಾಮ ರವರು ದಿನಾಂಕ:  07-02-2013 ರಂದು ಸಂಜೆ 07-30 ಗಂಟೆಯಲ್ಲಿ, ಅಶೋಕ ನಗರದ ಸುರಭಿ ನರ್ಸಿಂಗ್ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ವೈದ್ಯರಿಗೆ ಹೇಳಿ ಮನೆಗೆ ಹೋಗುತ್ತೇನೆ ಎಂದು ಹೇಳಿ  ಹೋದವಳು ಮನೆಗೆ ಬಂದಿರುವುದಿಲ್ಲಾ ಪಿರ್ಯಾದಿಯವರು ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


ರಸ್ತೆ ಅಪಘಾತ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 62/13 279-337-304(ಎ) ಐ.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ವೀರಣ್ಣ ಕೆ.ಎ-42-ಎಫ್-205, ಕೆ.ಎಸ್.ಆರ್.ಟಿ.ಸಿ. ಚಾಲಕ, ಬಿಲ್ಲೆ. ಸಂಖ್ಯೆ 583, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-28-ಎಂ.ಬಿ-8888 ಟಾಟಾ ಸುಮೊ ಚಾಲಕ , ಮಹೆೇಶ, ಬೆಂಗಳೂರು ರವರು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರಸ್ತೆಯಲ್ಲಿ ಕೆಎ-28-ಎಂ.ಬಿ.-8888 ರ ಚಾಲಕನು ಟಾಟಾ ಸುಮೋದಲ್ಲಿ ಮೈಸೂರು ಕಡೆಗೆ ಹೋಗುತ್ತಿದ್ದು, ಟಿ.ಎಂ.ಹೊಸೂರು ಗೇಟ್ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿವ್ಶೆಡರ್ ಗೆ,   ಡಿಕ್ಕಿ ಮಾಡಿಸಿದ ಪರಿಣಾಮ ಟಾಟಾ ಸುಮೋವು ಪಲ್ಟಿ ಹೊಡೆದು ಮೈಸೂರು - ಬೆಂಗಳೂರು ರಸ್ತೆಯಲ್ಲಿ ಸ್ವಲ್ಪ ದೂರು ಉಜ್ಜಿಕೊಂಡು ಹೋಗಿ ಮಂಡ್ಯದ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ನ ಬಲಬದಿಯ    ಹಿಂಭಾಗಕ್ಕೆ ಡಿಕ್ಕಿ ಹೊಡೆದು  ಟಾಟಾ ಸುಮೋದಲ್ಲಿದ್ದ 3 ಜನ ಪುರಷರು ಸ್ಥಳದಲ್ಲಿಯೇ ಮೃತಪಟ್ಟಿದ್ದು  ಹಾಗೂ ಟಾಟಾ ಸುಮೋದಲ್ಲಿದ್ದ 06 ಜನರಿಗೆ ಪೆಟ್ಟಾಗಿರುತ್ತದೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 379 ಐ.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಡಾ. ಪ್ರವೀಣ್ ಕುಮಾರ್ ಬಿನ್. ಲೇಟ್. ಕೆ.ಬೋರೇಗೌಡ, 40 ವರ್ಷ, ಗೋಪಾಲಪುರ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ದಿನಾಂಕ-09-02-13ರಂದು ರಾತ್ರಿ ಯಾರೋ ಕಳ್ಳರು ಗೋಪಾಲಪುರ ಗ್ರಾಮದ ಸರ್ವೆ. ನಂ. 36/7 ರಲ್ಲಿ ಬೆಳೆದಿದ್ದ ಸುಮಾರು 30 ತೇಗದ ಮರಗಳ ಪೈಕಿ 5 ತೇಗದ ಮರಗಳನ್ನು ಕಡಿದುಕೊಂಡು ಹೋಗಿರುತ್ತಾರೆಂದು ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 09-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಹುಡುಗಿ ಕಾಣೆಯಾದ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಕೊಲೆ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಹುಡುಗಿ ಕಾಣೆಯಾದ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 41/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 09-02-2013 ರಂದು ಪಿರ್ಯಾದಿ ಕುಮಾರ್. ಬಿನ್. ಲೇ|| ರಾಮಸ್ವಾಮಿ, ಗುತ್ತಲುರಸ್ತೆ, ಮಂಡ್ಯ ನಗರ ರವರು ನೀಡಿದ ದೂರಿನ ವಿವರವೇನೆಂದರೆ ನೇತ್ರಾವತಿ ಕಾಲೇಜಿಗೆಂದು ಹೋದವಳು ವಾಪಸ್ಸು ಇಲ್ಲಿಯವರೆವಿಗೂ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. 498[ಎ]-323-504-506. ಐ.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ಕವಿತ ಎಂ,ಎಸ್, ಕೋಂ. ಸತೀಶ, 25ವರ್ಷ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಅವರ ಗಂಡ ಸತೀಶ.ಎಸ್ ಬಿನ್. ಶಿವ  ಲಿಂಗಯ್ಯ, ಮಂಡ್ಯ ಸಿಟಿ ರವರು ಪಿರ್ಯಾದಿಯವರ ಮನೆಯ ಹತ್ತಿರ ಬಂದು ಹಣ ತೆಗೆದುಕೊಂಡು ಬಂದರೆ ನನ್ನ ಜೊತೆ ಬಾ ಎಂದು ಗಲಾಟೆ ಮಾಡಿ ಪಿರ್ಯಾದಿಗೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದು ನೋವುಂಟು ಮಾಡಿ ಬಾಯಿಗೆ ಬಂದಂತೆ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕೊಲೆ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 302 ಐ.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ರಂಗಸ್ವಾಮಿ ಪಿ.ಎಸ್.ಐ. ಟೌನ್ ಠಾಣೆ, ಕೆ.ಆರ್. ಪೇಟೆ ರವರು ನೀಡಿದ ದೂರಿನ ವಿವರವೇನೆಂದರೆ ನಂಜುಂಡೇಗೌಡನನ್ನು ಯಾರೋ ದುಷ್ಕಮರ್ಿಗಳು ಉಸಿರುಗಟ್ಟಿಸಿ ನೇಣು ಹಾಕಿರುವುದ್ದರಿಂದ ಇದು ಕೊಲೆ ಎಂದು ನ್ಯಾಯಾಲಯವು ಪರಿಗಣಿಸಬೇಕೆಂದು ಸ್ವತಃ ವರದಿ ತಯಾರು ಮಾಡಿ ನಿವೇದಿಸಿಕೊಂಡಿರುತ್ತೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

 ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 (ಸಿ) ಸಿ.ಆರ್.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ಶಾಂತಮ್ಮ ಕೋಂ. ಲೇ|| ಸುಬ್ಬಯ್ಯ, ಚಿಕ್ಕೋನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಸುಬ್ಬಯ್ಯ ಬಿನ್ ಚನ್ನಯ್ಯ 45 ವರ್ಷ ಪರಿಶಿಷ್ಟಜಾತಿ ರವರು ಮೂತ್ರಪಿಂಡ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷವನ್ನು ಸೇವನೆ ಮಾಡಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 64/13 ಕಲಂ. 458-457-380-511 ಐ.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ಮಹಾಲಿಂಗೇ ಗೌಡ ಬಿನ್ ಲೇಟ್. ಕುಳ್ಳೀರೇಗೌಡ, ಬನಘಟ್ಟ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ನಮ್ಮ ಮನೆ ಅಲ್ಲದೆ ಲೇಟ್. ಲಿಂಗರಾಜು ಮತ್ತು ಚಿಕ್ಕೀರೇಗೌಡರವರ ಮನೆಯ ಚಿಲಕವನ್ನು ಮೀಟಿ ಕಳ್ಳತನಕ್ಕೆ ಪ್ರಯತ್ನಿಸಿದ್ದು, ನನ್ನ ಮೇಲೆ ಹಲ್ಲೆ ಮಾಡಿ ನನ್ನ ಮಗನ ಜೇಬಿನಲ್ಲಿ ಕಳ್ಳತನ ಮಾಡಿ, ಪಕ್ಕದ ಮನೆಯನ್ನು ಕಳ್ಳತನ ಮಾಡಲು ಪ್ರಯತ್ನಿಸಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 08-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಮಹಿಳಾ ದೌರ್ಜನ್ಯ ಪ್ರಕರಣ ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   

ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 08-02-2013 ರಂದು ಪಿರ್ಯಾದಿ ಕುಮಾರ ಬಿನ್. ಲೇಟ್. ಬುಂಡಯ್ಯ, ಬಸ್ತಿಹೊಸಕೋಟೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಮಗನಾದ ಬಿ.ಕೆ. ಕಿರಣಕುಮಾರ ಕೆ.ಆರ್.ಪೇಟೆ ಟೌನಿನ ಪ್ರಗತಿ ಕಾನ್ವೆಂಟ್ನಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ:04-02-2013 ರಂದು ಬಸ್ತಿಹೊಸ ಕೋಟೆಯಿಂದ ಬೆಳಿಗ್ಗೆ 08-30 ಗಂಟೆಗೆ ಕೆ.ಆರ್.ಪೇಟೆ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು ಇಲ್ಲಿಯವರೆಗೆ ಶಾಲೆಗಾಗಲಿ, ಹಾಸ್ಟೆಲ್ ಗಾಗಲಿ, ಮನೆಗಾಗಲಿ, ಸಂಬಂಧಿಕರ ಮನೆಗಾಗಲಿ ಹಾಗೂ ಸ್ನೇಹಿತರ ಮನೆಗಾಗಲಿ ಹೋಗಿರುವುದಿಲ್ಲ. ನಾವು ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 01/13 ಕಲಂ. 174(ಸಿ) ಸಿ.ಆರ್.ಪಿ.ಸಿ.

ದಿನಾಂಕ: 08-02-2013 ರಂದು ಪಿರ್ಯಾದಿ ಶಿವಸ್ವಾಮಿ, ಕಿಕ್ಕೇರಿ ಗ್ರಾಮ ಮತ್ತು ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಕಿಕ್ಕೇರಿ ಗ್ರಾಮದ ಅಘಲಯದ ಕೃಷ್ಣ ಪೋನ್ ಮಾಡಿ ನಿಮ್ಮ ಅಣ್ಣನ ಹಿರಿಯ ಮಗ ಸತೀಶ.ಕೆ.ವಿ ಬಿನ್. 22 ವರ್ಷ, ವಕ್ಕಲಿಗರು, ಕೋಳಿ ಅಂಗಡಿಯಲ್ಲಿ ಕೆಲಸ ಕಿಕ್ಕೇರಿ ಮಟನ್ ಮಾರಾಟ ಮಾಡುವ ಅಂಗಡಿಯ ಹಿಂಭಾಗದಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಸತ್ತಿ ಹೋಗಿರುತ್ತಾನೆಂದು ಹೇಳಿದಾಗ ತಕ್ಷಣ ಹೋಗಿ ನೋಡಲಾಗಿ ಸತೀಶನು ಅನುಮಾನಾಸ್ಪದವಾಗಿ ಸತ್ತಿರುವುದು ಕಂಡುಬಂದಿದೆ. ಮುಂದಿನ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿದೆ.


ಮಹಿಳಾ ದೌರ್ಜನ್ಯ ಪ್ರಕರಣ :

ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 143,147,148,323,324,504,506,307,498(ಎ) ಕೂಡ 149 ಐ.ಪಿ.ಸಿ.

      ದಿನಾಂಕ: 08-02-2013 ರಂದು ಪಿರ್ಯಾದಿ ಹಚ್.ಎಸ್.ಸಾಕಮ್ಮ ತಂದೆ ಸಿದ್ದೇಗೌಡ, ಹಲ್ಲಗೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಸಿದ್ದೇಗೌಡ, ಮತ್ತು ಇತರ 5 ಮಂದಿ, ಎಲ್ಲರೂ ಹಲ್ಲಗೆರೆ ಗ್ರಾಮ ರವರುಗಳು ಪಿರ್ಯಾದಿಗೆ ಮತ್ತು ಅವರ ತಾಯಿಗೆ ಆರೋಪಿತರು ಮನೆಯ ವಿಚಾರವಾಗಿ ಗುಂಪು ಕಟ್ಟಿಕೊಂಡು ಬೈದು ಕೈಗಳಿಂದ ಹೊಡೆದು ಪಿರ್ಯಾದಿಗೆ ದೊಣ್ಣೆಯಿಂದ ಹೊಡೆದು ಗಲಾಟೆ ಮಾಡಿ ಮಚ್ಚಿನಿಂದ  ಕತ್ತರಿಸಲು ಬೀಸಿದಾಗ ಪಿರ್ಯಾದಿಯು ತಪ್ಪಿಸಿಕೊಂಡಿದ್ದು ಆರೋಪಿ-1 ರವರು ಕೆಳಕ್ಕೆ ಕೆಡವಿಕೊಂಡು ಕತ್ತಿನ ಮೇಲೆ ಕಾಲು ಇಟ್ಟು ಸಾಯಿಸಲು ಪ್ರಯತ್ನಿಸಿರುತ್ತಾರೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 07-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-02-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು,  1 ವಂಚನೆ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಅತ್ಯಾಚಾರ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣಗಳು : 

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 07-02-2013 ರಂದು ಪಿರ್ಯಾದಿ ಗುರುಸ್ವಾಮಿ. ಟಿ.ಎಸ್. ಬಿನ್ ಲೇಟ್. ಶಿವಣ್ಣ, ತಾಳಶಾಸನ ಗ್ರಾಮ, ಪಾ ಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪ್ರದೀಪ. ಟಿ.ಜಿ. ಬಿನ್ ಗುರುಸ್ವಾಮಿ. ಟಿ.ಎಸ್., 19 ವರ್ಷ,  ತಾಳಶಾಸನ ಗ್ರಾಮ ರವರು ದಿನಾಂಕಃ21-01-2013 ರಂದು ಬೆಳಿಗ್ಗೆ 09-00 ಗಂಟೆಯಲ್ಲಿ ಪ್ರದೀಪ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ಹೇಳಿ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.


2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 30/13 ಹುಡುಗಿ ಕಾಣೆಯಾಗಿದ್ದಾಳೆ. 

ದಿನಾಂಕ: 07-02-2013 ರಂದು ಪಿರ್ಯಾದಿ ಗೋವಿಂದೇಗೌಡ ಬಿನ್. ಸಣ್ಣೇಗೌಡ, ಜೈನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ಸ್ಮಿತ ದಿನಾಂಕ:   4-02-13 ರಂದು 09-00 ಗಂಟೆಗೆ ಕಾಲೇಜಿಗೆ ಹೋಗುತ್ತನೆಂದು ಹೇಳಿ ಹೋದವಳು ಕಾಲೇಜಿಗು ಹೋಗಿಲ್ಲ ,ಮನೆಗು ಬಂದಿಲ್ಲ. ಕಾಲೇಜು ಮತ್ತು ನಮ್ಮ ಸಂಬಂದಿಕರ ಮನೆ ಮತ್ತು ಇತರೆ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲಾ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿಆರ್.ಪಿ.ಸಿ.

     ದಿನಾಂಕ: 07-02-2013 ರಂದು ಪಿರ್ಯಾದಿ ಗೌರಮ್ಮ ಕೋಂ ಲೇ|| ಬಸವರಾಜು, ಹಾಲಹಳ್ಳಿ ಸ್ಲಂ, ಮಂಡ್ಯ ರವರು ನೀಡಿದ ದೂರು ಏನೆಂದರೆ ಬಸವರಾಜ ಬಿನ್. ಲೇ|| ಮಹದೇವ, 33 ವರ್ಷ, ಒಕ್ಕಲಿಗರು, ಕೂಲಿ ಕೆಲಸ,  ಹಾಲಹಳ್ಳಿ ಸ್ಲಂ. ರವರಿಗೆ ಹೊಟ್ಟೆನೋವು ಜಾಸ್ತಿಯಾಗಿ ತಾಳಲಾರದೆ ಯಾವುದೋ ಕ್ರಿಮಿನಾಶಕ ಔಷಧಿಯನ್ನು ಕುಡಿದು ಮನೆಯಲ್ಲಿ ಇದ್ದಾಗ ವಿಚಾರ ಗೊತ್ತಾಗಿ ನಾನು ಮತ್ತು ನನ್ನ ಮೈದ ತಕ್ಷಣ ಆಸ್ಪತ್ರೆಗೆ ತಂದು ದಾಖಲಿಸಿ ಈವರೆವಿಗೂ ಚಿಕಿತ್ಸೆ ಕೊಡಿಸಲಾಗಿ ಚಿಕಿತ್ಸೆ ಫಲಕಾರಿಯಾಗಿದೆ ದಿನಾಂಕ: 07-02-2013 ರಂದು ಬೆಳಿಗ್ಗೆ 07-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174(3) ಮತ್ತು (4) ಸಿ.ಆರ್.ಪಿ.ಸಿ.

ದಿನಾಂಕ: 07-02-2013 ರಂದು ಪಿರ್ಯಾದಿ  ನಿಂಗಮ್ಮ, ಹಾಲಹಳ್ಳಿ ಗ್ರಾಮ, ಮಹದೇಶ್ವರ ದೇವಸ್ಥಾನದ ಹತ್ತಿರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೀಲಾರದಿಂದ   ಮನೆಗೆ ಬಂದಾಗ ಮನೆಯ ಬಾಗಿಲು ತೆಗೆದು ಒಳಗೆ ನೋಡಲಾಗಿ ನಾಗಲಿಂಗು ಬಿನ್. ಲೇಟ್. ಸಿದ್ದೇಗೌಡ 35 ವರ್ಷ, ಹಾಲಹಳ್ಳಿ ಮಂಡ್ಯ ಸಿಟಿ ರವರು ಸ್ನಾನದ ಮನೆಯ ಬಾಗಿಲಲ್ಲಿ ಮಕ್ಕಾಡೆಯಾಗಿ ಬಿದ್ದು ಸತ್ತು ಹೋಗಿದ್ದು ಮೃತನ ಹಣೆ ಮತ್ತು ಮೂಗಿನ ಮೇಲೆ ಊದಿಕೊಂಡು ಗಾಯವಾಗಿರುತ್ತದೆ. ಪಿಯರ್ಾದಿಯವರು ನಾಗಲಿಂಗನ ಸಾವಿನ ಬಗ್ಗೆ ಅನುಮಾನವಿರುತ್ತದೆ ಸೂಕ್ತ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 408, 420 ಐ.ಪಿ.ಸಿ.

ದಿನಾಂಕ: 07-02-2013 ರಂದು ಪಿರ್ಯಾದಿ ಎಂ.ಕೆ.ತ್ಯಾಗರಾಜ ಪ್ರಸಾದ್, ದ್ವಿತೀಯ ದಜರ್ೆ ಸಹಾಯಕರು, ಸಹಕಾರಿ ಅಭಿವೃದ್ದಿ ಅಧಿಕಾರಿಗಳ ಕಛೇರಿ, ಮಳವಳ್ಳಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆ.ಚೌಡಯ್ಯ ಬಿನ್ ಕೊತ್ತನಹಳ್ಳಿ ಚೌಡೇಗೌಡ, ದೇವಿಪುರ ಗ್ರಾಮ, ಮಳವಳ್ಳಿ ತಾಲ್ಲೊಕು ರವರು ದೇವಿಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಮಾಜಿ ಕಾರ್ಯದಶರ್ಿಯಾಗಿದ್ದು, ದಿನಾಂಕ : 01-04-05 ರಿಂದ 22-06-2007 ರವರಗೆ ದೇವಿಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿ, ದಲ್ಲಿ 2005-06 ರಿಂದ 2010-11 ನೇ ಸಾಲಿನ ಅಡಿಟ್ ವರಧಿ ರೀತ್ಯಾ ಸಂಘದ ಹಣ 4,12,158-00 ರೂ.ಗಳನ್ನು  ದುರುಪಯೋಗ ಪಡಿಸಿಕೊಂಡಿರುವುದು ಸಾಬೀತಾಗಿರುತ್ತದೆ. ಈತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 279-337-304[ಎ] ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 07-02-2013 ರಂದು ಪಿರ್ಯಾದಿ ಮಂಜುಳ ಕೊಂ. ಸ್ವಾಮಿಗೌಡ, 28ವರ್ಷ, ಒಕ್ಕಲಿಗರು, ಗೃಹಿಣಿ, ಕನಗನಮರಡಿ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಲಗೇಜ್ ಆಟೋ ಚಾಲಕ ಆಟೋವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಆಟೋಗೆ ತಾಗಿಸಿ ನಿಲ್ಲಿಸದೆ ಹೊರಟುಹೋದ ಇದರಿಂದ ಆಟೋ ರಸ್ತೆಯಲ್ಲಿ ಎಡಮೊಗ್ಗುಲಾಗಿ ಮಗುಚಿಕೊಂಡು ಮುಂದೆ ಕುಳಿತಿದ್ದ ಪಿರ್ಯಾದಿಯವರ ಮಾವ ರಾಮೇಗೌಡ ಆಟೋದಿಂದ ರಸ್ತೆಗೆ ಬಿದ್ದುಹೋಗಿ ತಲೆಗೆ ತೀವ್ರವಾಗಿ ಏಟಾಗಿ ನಮ್ಮಗಳಿಗೂ ಸಣ್ಣಪುಟ್ಟ ಏಟಾಗಿರುತ್ತದೆ ಆರೋಪಿ ಆಟೋ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅತ್ಯಾಚಾರ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 376 ಐ.ಪಿ.ಸಿ.

ದಿನಾಂಕ: 07-02-2013 ರಂದು ಪಿರ್ಯಾದಿ  ಹೆಮ್ಮಿಗೆ ಗ್ರಾಮ, ಹಾಲಿ ವಾಸ, ವೈದ್ಯನಾಥಪುರ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-02-2013 ರಂದು ಬ್ಲಫ್ ಕ್ರಾಸ್ನ ಹತ್ತಿರ ಮುಸ್ಲಿಂ ಬಾವುಟ ಕಟ್ಟಿರುವ ಮುಂದೆ ನಿರ್ಜನ ಪ್ರದೇಶದಲ್ಲಿ ಆರೋಪಿಗಳಾದ ಪುನೀತ್ ಹೆಚ್.ಪಿ. ಸ್ಥಳ ಹುಲ್ಲಹಳ್ಳಿ ಗ್ರಾಮ, ಹಲಗೂರು ಹೋಬಳಿ, ಮಳವಳ್ಳಿ ತಾಲ್ಲೂಕು, ಹಾಲಿ ವಾಸ ಓಂ ಶಾಂತಿ ಮಾರ್ಗ, ಕೆ.ಎಂ.ದೊಡ್ಡಿ ಟೌನ್, ಸಿ.ಎ. ಕೆರೆ ಹೋಬಳಿ, ಮದ್ದೂರು ತಾಲ್ಲೂಕು ರವರು ಹಾಗು ಡ್ರೈವರ್ ಶಿವು ರವರುಗಳು ಟಾಟಾ ಮ್ಯಾಜಿಕ್ ವಾಹನದಲ್ಲಿ ಮದ್ದೂರಿನಿಂದ ಕೊಳ್ಳೇಗಾಲಕ್ಕೆ ಹೋಗಿ ವಾಪಸ್ ಬರುತ್ತಿರುವಾಗ ಬ್ಲಫ್ನ ಹತ್ತಿರ ದೀಪು ಹಾಗೂ ಶಿವು ರವರು ವಾಹನದಿಂದ ಇಳಿದು ಸ್ವಲ್ಪ ದೂರ ಹೋದಾಗ ಆರೋಪಿಯು ಅಶ್ಲೀಲವಾಗಿ ಮಾತನಾಡುತ್ತ ಪಿರ್ಯಾದಿಯವರ ತುಟಿಯನ್ನು ಕಚ್ಚಿ, ಸ್ತನಗಳನ್ನು ಹಿಡಿದು ಹಿಸುಕಿ ಅತ್ಯಾಚಾರ ಮಾಡಿರುತ್ತಾನೆ ಆತನ ವಿರುದ್ದ ಕ್ರಮ ಜರುಗಿಸಿ ಎಂದು ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 06-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ:06-02-2013ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು, 2 ವಂಚನೆ ಪ್ರಕರಣಗಳು, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ಮನೆ ಕಳ್ಳತನ ಪ್ರಕರಣಗಳು,  1 ಅಪಹರಣ ಪ್ರಕರಣ,  1 ರಾಬರಿ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಯು.ಡಿ.ಆರ್. ಪ್ರಕರಣಗಳು :

1. ಮೇಲುಕೋಟೆ ಪೊಲೀಸ್ ಠಾಣೆ ಯು.ಡಿ,ಆರ್, ನಂ. 02/13 ಕಲಂ. 174 ಸಿ,ಆರ್,ಪಿ,ಸಿ.

ದಿನಾಂಕ: 06-02-2013 ರಂದು ಪಿರ್ಯಾದಿ ಕೆ.ಅಶೋಕ ಬಿನ್. ಕೃಷ್ಣಪ್ಪಗೌಡ, 55 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾಜೇಶ್ @ ರಾಜು ಬಿನ್. ಹನುಮಂತೇಗೌಡ, 24 ವರ್ಷ ಎಂಬುವವರಿಗೆ ಸುಮಾರು ದಿನಗಳಿಂದ ಹೊಟ್ಟೆನೋವು ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಮಾತ್ರೆಯನ್ನು ನುಂಗಿದ್ದು, ಬಿದ್ದು ಒದ್ದಾಡುತ್ತಿದ್ದನ್ನು ಕಂಡು ಚಿಕಿತ್ಸೆ ಫಲಕಾರಿಯಾಗದೇ ಮೃತ ಹೊಂದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೊಪ್ಪ. ಪೊಲೀಸ್ ಠಾಣೆ ಯು.ಡಿ,ಆರ್, ನಂ. 02/13 ಕಲಂ. 174 ಸಿ,ಆರ್,ಪಿ,ಸಿ.

ದಿನಾಂಕ: 06-02-2013 ರಂದು ಪಿರ್ಯಾದಿ ಪುಟ್ಟೇಗೌಡ. ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕೊಪ್ಪ.ಟೌನ್ ರವರು ನೀಡಿದ ದೂರು ಏನೆಂದರೆ ಅಪರಿಚಿತ ಗಂಡಸು. ಸುಮಾರು 50ವರ್ಷ, ಹೆಸರು, ವಿಳಾಸ ಗೊತ್ತಿಲ್ಲ ಇವರು ಮಲಗಿದ್ದು, ಹತ್ತಿರ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಮೃತಪಟ್ಟಿರುವುದು ಕಂಡು ಬಂದಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಬಿಂಡಿಗನವಿಲೆ ಪೊಲೀಸ್ ಠಾಣೆ ಯು.ಡಿ,ಆರ್, ನಂ. 02/13 ಕಲಂ. 174 ಸಿ,ಆರ್,ಪಿ,ಸಿ.

ದಿನಾಂಕ:06-02-2013 ರಂದು ಪಿರ್ಯಾದಿ ಕೃಷ್ಣೇಗೌಡ ಬಿನ್. ತಿರುಮಲೇಗೌಡರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಎ.ಜೆ.ತಮ್ಮಣ್ಣಗೌಡ ಬಿನ್. ಲೇ.ಎನ್ .ಜಗತೀಗೌಡ ರವರು ಸಂಜೆ 5 ಗಂಟೆಯಲ್ಲಿ ಮನೆಯಲ್ಲೇ ಮೃತಪಟ್ಟಿರುತ್ತಾರೆ ಇವರು ಅಪಘಾತದಿಂದ ಮೃತಪಟ್ಟಿರುತ್ತಾರೆಯೇ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುತ್ತಾರೆಯೇ ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಕೊಟ್ಟ ಲಿಖಿತ ದೂರಿನ ಮೇರೆಗೆ  ಯು.ಡಿ,.ಆರ್ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. ಕಲಂ.420 ಕೂಡ 34 ಐ.ಪಿ.ಸಿ.

ದಿನಾಂಕ:06-02-2013 ರಂದು ಪಿರ್ಯಾದಿ ಜಯಮ್ಮ ಕೋಂ ಸೋಮಣ್ಣ 28ವರ್ಷ. ಒಕ್ಕಲಿಗರು ಮನೆಕೆಲಸ, ವಾಸ ತಳಗವಾದಿ ಗ್ರಾಮ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಸುಮಾರು 20 ರಿಂದ 25ವರ್ಷ ವಯಸ್ಸಿನವರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಚೈನು ಒಂದು ತಾಳಿ ಎರಡು ಗುಂಡು ಎರಡು ಕಾಸು ಒಟ್ಟು 40 ಗ್ರಾಂ ತೂಕದ 1.20.000 ರೂ ಬೆಲೆ ಬಾಳುವ ಒಡವೆಗಳನ್ನು ಪಾಲಿಸ್ ಮಾಡಿ ಕೊಡುವುದಾಗಿ ನಂಬಿಸಿ ಪಿರ್ಯಾದಿಯಿಂದ  ಪಡೆದುಕೊಂಡು ಮೋಸ ಮಾಡಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಗ್ರಾಮಾಂತರ ಠಾಣೆ ಮೊ.ನಂ. 395/13 ಕಲಂ. 406-420 ಐ.ಪಿ.ಸಿ.

     ದಿನಾಂಕ: 06-02-2013 ರಂದು ಪಿರ್ಯಾದಿ ವೈಕೆ ಜಯರಾಮು ಬಿನ್. ಕಾಳೇಗೌಡ ರವರು ನೀಡಿದ ದೂರಿನ ಸಾರಾಂಶವೇನೆಂದರೆ ವೆಂಕಟರಾಮರೆಡ್ಡಿ ರವರ ಗಮನವನ್ನು ಬೇರೆಡೆ ಸೆಳೆದು ನನ್ನ ಮೊಟಾರ್ ಸೈಕಲ್ ಮತ್ತು 35 ಗ್ರಾಂ ಚಿನ್ನವನ್ನು ತೆಗೆದುಕೊಂಡು ಹೋಗಿರುವ ವೆಂಕಟರಾಮರೆಡ್ಡಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 498[ಎ], 506 ಕೂಡ 34 ಐಪಿಸಿ ಮತ್ತು 3 & 4 ಡಿ.ಪಿ. ಆಕ್ಟ್.

     ದಿನಾಂಕ: 06-02-2013 ರಂದು ಪಿರ್ಯಾದಿ ಉಮ್ಮೆ ತನ್ಜೀಮ್ ಕೋಂ. ಸಾಧಿಕ್ ಪಾಷ, 18 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಸಾಧಿಕ್ಪಾಷ ಹಾಗು ಜರೀನ್ತಾಜ್, ರಫತುನ್ನಿಸಾ, ಸುಮಯ ಸುಲ್ತಾನ ರವರುಗಳು ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿ ಪ್ರತಿ ದಿವಸ ವಿನಾಕಾರಣ ಹೊಡೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು ಎಲ್ಲರೂ ಗಂಡನನ್ನು ಬಿಟ್ಟುಬಿಡು ನೀನಗೇನು ಬೇಕು ಕೊಡುತ್ತೇವೆ, ಇಲ್ಲದಿದ್ದರೆ ನಿನ್ನನ್ನು ಸಾಯಿಸಿಬಿಡುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮನೆ ಕಳ್ಳತನ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 454-457-380 ಐ.ಪಿ.ಸಿ.

     ದಿನಾಂಕ: 06-02-2013 ರಂದು ಪಿರ್ಯಾದಿ ಸುಜಾತ ಕೋಂ. ತಾಂಡವಮೂರ್ತಿ, 37ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು, ಮನೆಯ ಬಾಗಿಲು ತೆಗೆದು ಒಳಗೆ ಪ್ರವೇಶಿಸಿ, ಅಡಿಗೆ ಮನೆಯಲ್ಲಿದ್ದ ಬೀರುವಿನ ಕೀಯಿಂದ ತೆರೆದು, ಒಂದು ಜೊತೆ ಚಿನ್ನದ ಹ್ಯಾಂಗಿಂಗ್ಸ್, ಮಾಟಿ, ತಾಳಿ ಹಾಗೂ ಬೆಳ್ಳಿಯ ಪೂಜೆ ಸಾಮಾನುಗಳು, ಒಟ್ಟು 08 ಗ್ರಾಂ. ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ,  ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 457-380 ಐ.ಪಿ.ಸಿ.

      ದಿನಾಂಕ: 06-02-2013 ರಂದು ಪಿರ್ಯಾದಿ ಮಹದೇವಮ್ಮ ಕೋಂ. ರಾಜು, ಶಾಂತಿಕೊಪ್ಪಲು ಗ್ರಾಮ, ಅರಕೆರೆ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಬೀಗ ಮುರಿದು, ಮನೆಯಲ್ಲಿ ಮರದ ಪೆಟ್ಟಿಗೆಯಲ್ಲಿದ್ದ 3000/- ರೂ. ಮತ್ತು ಒಂದು ತಾಮ್ರದ ಹಂಡೆಯನ್ನು ಕಳವು ಮಾಡಿಕೊಂಡು ಹೋಗಿದ್ದು ಇವುಗಳ ಬೆಲೆ 5000/- ರೂ. ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಅಪಹರಣ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 363 ಐ.ಪಿ.ಸಿ.

     ದಿನಾಂಕ: 06-02-2013 ರಂದು ಪಿರ್ಯಾದಿ ಶ್ರೀಮತಿ ಸುಶೀಲಮ್ಮ ಕೋಂ. ರಾಮಣ್ಣ, 42ವರ್ಷ, ಲಿಂಗಾಯಿತರು ಇವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗಳು ರೂಪ.ಆರ್. ಬಿನ್. ರಾಮಣ್ಣ, 18ವರ್ಷ ರವರು ದಿಃ 20-01-2013 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಬೊಮ್ಮನಹಳ್ಳಿ ಗ್ರಾಮದಿಂದ ಕೂಲಿ ಕೆಲಸಕ್ಕೆಂದು ಹೋದವಳು ಮತ್ತೆ ವಾಪಸ್ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 30/13 ಕಲಂ. 394 ಐ.ಪಿ.ಸಿ.

     ದಿನಾಂಕ: 06-02-2013 ರಂದು ಪಿರ್ಯಾದಿ ಆನಂದ ಬಿನ್. ನಾಗಣ್ಣ, 28 ವರ್ಷ, ಶಾಂತಿಕೊಪ್ಪಲು ಗ್ರಾಮ, ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ರಾತ್ರಿ 02-30 ರಿಂದ 03-00 ಗಂಟೆಯಲ್ಲಿ ಯಾರೋ ಕಳ್ಳರು ಡೋರ್ ಲಾಕ್ ನ್ನು ಮೀಟಿ ಒಳಗೆ ಬಂದು ಫಿರ್ಯಾದಿಯವರಿಗೆ ದೊಣ್ಣೆಯಿಂದ ಹೊಡೆದು, ಫಿರ್ಯಾದಿಯ  ಹೆಂಡತಿಯ ಕತ್ತಿನಲ್ಲಿದ್ದ 25 ಗ್ರಾಂ. ತೂಕದ ಮಾಂಗಲ್ಯ, 5 ಗ್ರಾಂ ತಾಳಿ, ತಲಾ 1 ಗ್ರಾಮ್, 2 ಚಿನ್ನದ ಗುಂಡುಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ. 

DAILY CRIME REPORT DATED : 05-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 05-02-2013 ರಂದು ಒಟ್ಟು 10 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  2 ವಾಹನ ಕಳವು ಪ್ರಕರಣಗಳು,  1 ವಂಚನೆ ಪ್ರಕರಣ ಹಾಗು 6 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 05-02-2013 ರಂದು ಪಿರ್ಯಾದಿ ತಿಮ್ಮರಾಜು ಬಿನ್. ಗೋವಿಂದಪ್ಪ, 22 ವರ್ಷ, ಮಾದವರು ಕುರಿಗಳನ್ನು ಮೆಯಿಸುವ ಕೆಲಸ, ವಾಜರಹಳ್ಳಿ ಗ್ರಾಮ,  ಶಿರಾ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಅಣ್ಣ ಕೃಷ್ಣಮೂರ್ತಿ ಬಿನ್. ಗೋವಿಂದಪ್ಪ, 26 ವರ್ಷ, ಗೊಲ್ಲರ ಜನಾಂಗ, ಕುರಿಮೇಯಿಸುವ ಕೆಲಸ, ವಾಜರಹಳ್ಳಿ, ಇರುತ್ತದೆ. ಮಾತನಾಡಲು ಬರುವುದಿಲ್ಲ(ಮೂಗ), ಕಿವಿ ಕೇಳಿಸುವುದಿಲ್ಲ ಕೃಷ್ಣಮೂರ್ತಿ  ಹಾಗೂ ಮತ್ತೊಬ್ಬರು ಕುರಿಗಳನ್ನು ಮೇಯಿಸಲು ಈಗ್ಗೆ 3 ವರ್ಷದ ಹಿಂದೆ ಬಂದಿದ್ದು ಪ್ರತಿ ದಿನ ಒಂದೊಂದು ಕಡೆ ಕುರಿಗಳನ್ನು ಮೇಯಿಸಿಕೊಂಡು ಅಲ್ಲೆ ತಂಗುತ್ತಿದ್ದು ಕಾರೇಕುರ ಗ್ರಾಮದ ರಾಜು ರವರ ಜಮೀನಿನ ಬಳಿ ತಂಗಿದ್ದು ಬೆಳಗಿನ ಜಾವ ಪಿರ್ಯಾಧಿಯವರ ಅಣ್ಣ ಕೃಷ್ಣಮೂರ್ತಿ ರವರು ಇರುವುದಿಲ್ಲ. ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಆತನು ಮೂಗ ಮತ್ತು ಕಿವುಡನಾಗಿರುತ್ತಾನೆ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಾಹನ ಕಳವು ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 379 ಐ.ಪಿ.ಸಿ.

ದಿನಾಂಕ:05-02-2013ರಂದು ಪಿರ್ಯಾದಿ ಕೆ.ಎಂ. ವೀರೇಗೌಡ ಬಿನ್. ಮರಿಮಾದೇಗೌಡ, ಕೋರೆಗಾಲ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ದಿನಾಂಕ: 04-02-2013 ರಂದು ಸಂಜೆ 04 ಗಂಟೆಯಿಂದ 05-00 ಗಂಟೆಯವರೆಗೆ ಮಳವಳ್ಳಿ ಟೌನ್, ತಾಲ್ಲೂಕು ಕಚೇರಿಯ ಮುಂಬಾಗದಲ್ಲಿ ಅವರ ಬಾಬ್ತು ಮೋಟಾರ್ ಸೈಕಲ್ ನ್ನು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಸದರಿ ಮೋಟಾರ್ ಸೈಕಲನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 379, ಐ.ಪಿ.ಸಿ

      ದಿನಾಂಕ: 05-02-2013 ರಂದು ಪಿರ್ಯಾದಿ ಬಿ.ವಿ ರಾಜು ಬಿನ್ ಲೇ:ವೆಂಕಟೇಗೌಡ, ನಂ.3957, 1ನೇತಿರುವು ಶಂಕರನಗರ ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಪಿರ್ಯಾದಿಯವರ ಬಾಬ್ತು ಬೈಕ್ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ನನ್ನ ಬೈಕ್ನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 406, 379, 420, 212, 411, 109 ರೆ/ವಿ 34 ಐ.ಪಿ.ಸಿ.

ದಿನಾಂಕ:05-02-2013ರಂದು ಪಿರ್ಯಾದಿ ಶಾಂತಿಲಾಲ್ ಆಚಾಬಿನ್ ಮಾಣಿಕ್ಯಲಾಲ್ಚಂದ್ ಜೈನ್, ವಾಸ ಭಾಗ್ಯಶಾಂತಿ ನಿಲಯ, ನಂ. 1866, 6ನೇ ಕ್ರಾಸ್, ಕೆ.ಆರ್.ರಸ್ತೆ, ಸುಭಾಷ್ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರ ಮಗ ವಿಕಾಸ್ ಎಸ್. ಜೈನ್ ಎಂಬುವನಿಗೆ 1ನೇ ಆರೋಪಿ ನಿಶಾ ಆರ್ ಜೈನ್ ಬಿನ್ ರಜನೀಶ್ ಜೈನ್  ಎಂಬುವಳನ್ನು ತಂದು ಮದುವೆ ಮಾಡಿಕೊಂಡಿದ್ದು ಮದುವೆ ಕಾಲದಲ್ಲಿ ಫಿರ್ಯಾದಿಯವರು ಸುಮಾರು 3.5 ಲಕ್ಷ ರೂ. ಖರ್ಚು  ಮಾಡಿದ್ದು ಮದುವೆ ಮಾಡಿಕೊಂಡಂದಿನಿಂದ ದಿನಾಂಕ: 08-10-2012 ರ ಅವಧಿಯಲ್ಲಿ ಆರೋಪಿ-2 ಅಶೋಕ್ ಮೆಹ್ತ ಬಿನ್ಲೇಟ್ ಗೇವರ್ಚಂದ್ ರವರ ಒಳಸಂಚಿನಿಂದ ಮದುವೆಯ ಕಾಲದಲ್ಲಿ ನಾವು ಆರೋಪಿ-1 ರವರಿಗೆ ನೀಡಿದ್ದಂತಹ 250 ರಿಂದ 260 ಗ್ರಾಂ ವಜ್ರ, ಚಿನ್ನ ಹಾಗೂ 275 ಗ್ರಾಂ ಬೆಳ್ಳಿಯ ವಡವೆಗಳನ್ನು ನಂಬಿಕೆ ದ್ರೋಹ ಮಾಡಿ ಮೋಸದಿಂದ ಕಳ್ಳತನದಿಂದ ಎಲ್ಲಾ ವಡವೆಗಳನ್ನು ತೆಗೆದುಕೊಂಡು ಹೊರಟು ಹೋಗಿರುತ್ತಾಳೆ. ಆರೋಪಿ-2 ರವರಿಗೆ ವ್ಯಾಪಾರ ವಹಿವಾಟು ನಡೆಸಲು ನೀಡಿದ್ದ 740 ಗ್ರಾಂ ವಜ್ರ ಮತ್ತು ಚಿನ್ನದ ವಡವೆಗಳನ್ನು ವಾಪಸ್ ಕೊಡದೆ ಮೋಸ ಮಾಡಿ ಹೊರಟು ಹೋಗಿರುತ್ತಾರೆ. ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರು  ಆರೋಪಿಗಳಾದ 1] ನಿಶಾ ಆರ್ ಜೈನ್ ಬಿನ್ ರಜನೀಶ್ ಜೈನ್ 2] ಅಶೋಕ್ ಮೆಹ್ತ ಬಿನ್ಲೇಟ್ ಗೇವರ್ಚಂದ್ ಜಿ. ಮೆಹ್ತ ಎಲ್ಲರೂ ವಾಸ ನಂ. 101, ಹನುಮಂತಪ್ಪ ಲೇಔಟ್, ಸುಲ್ತಾನ್ ಪಾಳ್ಯ, ಆರ್.ಟಿ.ನಗರ್, ಬೆಂಗಳೂರು ಸಿಟಿ ರವರುಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 04-02-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-02-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅತ್ಯಾಚಾರ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಕಳವು ಪ್ರಕರಣ,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 7 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.  


ಅತ್ಯಾಚಾರ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 376 ಐ.ಪಿ.ಸಿ.

ದಿನಾಂಕ: 04-02-2013 ರಂದು ಚಿಕ್ಕಬಾಗಿಲು ಗ್ರಾಮದ  ಪಿರ್ಯಾದಿ ರವರು ನೀಡಿದ ದೂರು ಏನೆಂದರ ಆರೋಪಿ ಮಹೇಶ @ ಚಿದರಹಳ್ಳಿ ಮಹೇಶ, ಸು:24 ವರ್ಷ, ಪರಿಶಿಷ್ಟ ಜನಾಂಗ, ಚಿಕ್ಕಬಾಗಿಲು ಗ್ರಾಮ, ಬಿ.ಜಿ.ಪುರ ಹೋ|| ಮಳವಳ್ಳಿ ತಾ||  ಪಿರ್ಯಾದಿಯವರ ಇಚ್ಛೆಗೆ ವಿರುದ್ದವಾಗಿ ಬಲಂತವಾಗಿ ಅತ್ಯಾಚಾರ ಮಾಡಿರುತ್ತಾರೆ, ಇದರಿಂದ ಪಿರ್ಯಾದಿಯವರಿಗೆ ತೊಂದರೆ ಯಾಗಿರುವ ಬಗ್ಗೆ ಗ್ರಾಮದಲ್ಲಿ ದಿನಾಂಕ:04-02-13 ರಂದು ಬೆಳಿಗ್ಗೆ ಪಂಚಾಯಿತಿ ಸೇರಿಸಿ ತೀರ್ಮಾನವಾಗದಿದ್ದಾಗ ಹಾಗೂ ಆರೋಪಿತನು ಪಂಚಾಯಿತಿಗೆ ಬಾರದಿದ್ದರಿಂದ ಠಾಣೆಗೆ ಈ ದಿನ ತಡವಾಗಿ ಬಂದು ಆರೋಪಿತನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಕೊಟ್ಟ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಆರ್. ಪ್ರಕರಣಗಳು :

 1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-02-2013 ರಂದು ಪಿರ್ಯಾದಿ ಬಿ.ಎನ್.ಕೆಂಪರಾಜು ಬಿನ್ ನಚಿಜಯ್ಯ, ಬಾಚನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ,  ನಂದಿನಿ, ಬಾಚನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರಿಗೆ ಹೊಟ್ಟೆ ನೋವು ಜಾಸ್ತಿಯಾಗಿ ದಿನಾಂಕ: 31-01-2013 ರಂದು ರಾತ್ರಿ 08-30 ಗಂಟೆಯ ಸಮಯದಲ್ಲಿ ಹೊಟ್ಟೆ ನೋವು ಜಾಸ್ತಿಯಾಗಿ ಔಷದಿ ತೆಗೆದುಕೊಳ್ಳುತ್ತಿದ್ದು, ನೋವು ತಾಳಲಾರದೆ ಯಾವುದೋ ವಿಷದ ಔಷದಿಯನ್ನು ಕುಡಿದು ಒದ್ದಾಡುತ್ತಿದ್ದವಳನ್ನು ಮಳವಳ್ಳಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 03-02-2013 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾಳೆ ಶವವು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಇರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-02-2013 ರಂದು ಪಿರ್ಯಾದಿ ಚನ್ನಪ್ಪ ಬಿನ್ ಸಿದ್ದಶೆಟ್ಟಿ ಕಾರಸವಾಡಿ, ಮಹದೇಶ್ವರ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ 04 ವರ್ಷದ ಅಮೂಲ್ಯ ಸತ್ತು ಹೋಗಿರುತ್ತಾಳೆಂದು ವೈದ್ಯರು ತಿಳಿಸಿದ್ದು  ಹಾಗು ಸಂಜಯ್ನನ್ನು ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಸೇರಿಸಿ ಹೆಣ್ಣು ಮಗುವಿನ ಶವವನ್ನು ಊರಿಗೆ ತೆಗೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಗಂಡು ಮಗು  ಸಂಜಯ  ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ: 04-02-2013 ರಂದು ಭೆಳಿಗ್ಗೆ 06-30 ರ ಸಮಯದಲ್ಲಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿಸಂಜಯ್ನನ್ನು ಮೈಸೂರಿಗೆ ಕರೆದುಕೊಂಡು ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಿರುವಾಗ  ಮಾರ್ಗದ ಮದ್ಯೆ ಬೆಳಿಗ್ಗೆ 07-15 ರಲ್ಲಿ ಮೈಸೂರು ಸಮೀಪ ಮಗು ಸಂಜಯ್ ಮೃತಪಟ್ಟಿರುತ್ತಾನೆ ಆದ್ದರಿಂದ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಕಳವು ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 379, 436 ಐ.ಪಿ.ಸಿ.

        ದಿನಾಂಕ: 04-02-2013 ರಂದು ಪಿರ್ಯಾದಿ ಬಸವೇಗೌಡ, ಎ.ಎಲ್. ನುಡಿಭಾರತಿ ಸಮುದಾಯ ಭವನದ ಮಾಲೀಕರು,  ಗುತ್ತಲು ರವರು ನೀಡಿದ ದೂರು ಏನೆಂದರರೆ ಯಾರೊ ದುಷ್ಕಮರ್ಿಗಳು ಬೆಂಕಿ ಹಚ್ಚಿ ಕಾಣೆಯಾಗಿರುತ್ತಾರೆ ಇದರಿಂದಾಗಿ ಪೆಟ್ಟಿ ಅಂಗಡಿ ಸಂಪೂರ್ಣ ಭಸ್ಮಗೊಂಡಿದ್ದು ಅಂಗಡಿಯಲ್ಲಿದ್ದ ನಗದು ಸುಮಾರು 15.ಸಾವಿರ ಮತ್ತು ಎರಡು ಸಿಲಿಂಡರ್ ಗಳನ್ನು (ಭಾರತ್ ಗ್ಯಾಸ್ ಕಂಪನಿ) ಕಳವು ಮಾಡಿರುತ್ತಾರೆ ಪಕ್ಕದಲ್ಲಿದ್ದ ಸುಮಾರು 15.ಸಾವಿರ ರೂ ಬೆಲೆ ಬಾಳುವ ಹಣ್ಣಗಳು ಭಸ್ಮವಾಗಿದೆ ಸುಮಾರು 2 ಲಕ್ಷ ರೂ ಬೆಲೆ ಬಾಳುವ ಪದಾರ್ಥಗಳು ಸುಟ್ಟು ಕಟ್ಟಡ ವಿಕಾರಗೊಂಡಿರುತ್ತೆದೆ ಅವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 498(ಎ)-323-506 ಕೂಡ 34 ಐ.ಪಿ.ಸಿ.

ದಿನಾಂಕ: 04-02-2013 ರಂದು ಪಿರ್ಯಾದಿ ಲಕ್ಷಮ್ಮ  ಕೊಂ. ಐಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ, ಶಂಕರಪುರ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಮಧು 2] ನಾಗಣ್ಣ  3] ಲಕ್ಷಮ್ಮ  ಎಲ್ಲರೂ ಶಿವಳ್ಳಿ ಗ್ರಾಮದ ವಾಸಿಗಳು  ನನ್ನ ಮಗಳಿಗೆ ಸರಿಯಾಗಿ ಊಟ ಬಟ್ಟೆ ತಂದುಕೊಡದೆ ನೀನು ಸರಿಯಾಗಿ ಕೆಲಸ ಮಾಡುವುದಿಲ್ಲ ಕೆಲಸಕ್ಕೆ ಬಾರದವಳು ನೋಡಲು ಚೆನ್ನಾಗಿಲ್ಲ ಕಪ್ಪಾಗಿದ್ದಿಯಾ ಎಂದು ಸಣ್ಣ ಪುಟ್ಟ ವಿಚಾರಕ್ಕೆಲ್ಲ ಬೈಯುವುದು, ಹೊಡೆಯುವುದು ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕಿರುಕುಳ ಕೊಡುತ್ತಿದ್ದರು. ಹಿಂಸೆ ಕಿರುಕುಳದ ಅವಮಾನವನ್ನು ತಾಳಲಾರದೆ ನನ್ನ ಮಗಳು ಗಂಡನ ಮನೆಯಲ್ಲಿ ನೇಣು ಹಾಕಿಕೊಂಡಿರುತ್ತಾಳೆ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 54/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 04-02-2013 ರಂದು ಪಿರ್ಯಾದಿ ಕುಮಾರ ಬಿನ್ ತಿಬ್ಬಯ್ಯ, 40 ವರ್ಷ, ಒಕ್ಕಲಿಗರು, ಚಂದಗಾಲು ಗ್ರಾಮ, ಶ್ರೀರಂಗಪಟ್ಟಣ ತಾ|| ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಲೀಲಾವತಿ ಹಾಗು ಮಗು ರೇಖಾ, 11 ವರ್ಷ ರವರುಗಳು ದಿನಾಂಕ: 04-02-2013 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಪಿರ್ಯಾದಿಯವರ ಮನೆಯಿಂದ 20,000/- ರೂ. ಹಣ ಮತ್ತು 50 ಗ್ರಾಂ, ಚಿನ್ನದ ಚೈನನ್ನು ತೆಗೆದುಕೊಂಡು  ಹೊರಟುಹೋಗಿರುತ್ತಾರೆ ಇವರುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 03-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-02-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  3 ಯು.ಡಿ.ಆರ್. ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ,  2 ಹಗಲು/ರಾತ್ರಿ ಕಳ್ಳತನ ಪ್ರಕರಣಗಳು,  1 ವಂಚನೆ ಪ್ರಕರಣ,  2 ರಸ್ತೆ ಅಪಘಾತ ಪ್ರಕರಣಗಳು ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 379 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಮಲ್ಲೇಶ ಲೇಟ್ ಮಲ್ಲೇಗೌಡ, 48 ವರ್ಷ, ಕೋಡಿಶೆಟ್ಟಿಪುರ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರ ಅವರ ಇಂಡಿಗೋ ಕಾರ್ ನಂ. ಕೆ.ಎ-11-ಎ-1840 ನ್ನು ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡು ಬೆಳಿಗ್ಗೆ 06-00 ಗಂಟೆಗೆ ಮನೆಯ ಹೊರಗಡೆ ಬಂದು ನೋಡಿದಾಗ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2.ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 379 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ನಾಗರತ್ನ, ಸ್ವರ್ಣಸಂದ್ರ, ಮಂಡ್ಯ ರವರು ನೀಡಿದ ದೂರು ಏನೆಂದರೆ ಮಳವಳ್ಳಿ ಸಕರ್ಾರಿ ಬಸ್ ನಿಲ್ದಾಣದಲ್ಲಿ ಮಂಡ್ಯಕ್ಕೆ ಬಸ್ನ್ನು ಹತ್ತುವ ವೇಳೆಯಲ್ಲಿ ತನ್ನ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಲೋಕೇಶ ಬಿನ್. ಲೇಟ್. ಜವರಯ್ಯ, ಹೊನಗಾನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಹರೀಶ.ಹೆಚ್.ಜೆ. 23 ವರ್ಷ, ಹೊನಗಾನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ಎಂಬುವವರು ಟಿಪ್ಪರ್ ಕೆಲಸಕ್ಕೆಂದು ಹೋಗಿದ್ದು, ಕ್ರಷರ್ ಹತ್ತಿರ ನಿಂತಿದ್ದ ಟಿಪ್ಪರ್ ನಂ ಕೆಎ-01-9326 ಮೇಲೆ ಹತ್ತಿದಾಗ ಮೇಲೆ ಹಾದು ಹೋಗಿದ್ದ ವಿಧ್ಯುತ್ ತಂತಿ ತಾಗಿದ್ದು, ಪರಿಣಾಮ ವಿಧ್ಯುತ್ ಮೈಮೇಲೆ ಹರಿದು ಟಿಪ್ಪರ್ ಮೇಲಿಂದ ಕೆಳಕ್ಕೆ ಬಿದ್ದ ಪರಿಣಾಮ ಬೆನ್ನು ಮತ್ತು ತಲೆಯ ಹಿಂಭಾಗ ಪೆಟ್ಟಾಗಿದ್ದು  ಮಿಷನ್ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಮಹಾದೇವ ಬಿನ್. ಕುಳ್ಳಿ ಮರೀಗೌಡ, ಜೆ.ಸಿ.ನಗರ ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಹದೇವ ಬಿನ್ ದೊಡ್ಡನಿಂಗೇಗೌಡ ಎಂಬುವವರು ಮಲವಿಸರ್ಜನೆಗೆ ಹೋಗಿ ಹೆಡ್ವಕ್ಸರ್್ ಬಳಿ ನೀರು ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸತ್ತುಹೋಗಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಕಾತರ್ಿಕ್ ಬಿನ್. ಲೋಕೇಶ್, 16 ವರ್ಷ, 10 ನೇ ತರಗತಿ ವಿದ್ಯಾಥರ್ಿ, ಕಾಳೇನಹಳ್ಳಿ, ಹೊಸಕೊಪ್ಪಲು, ಕೆ.ಆರ್. ನಗರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಆರೋಪಿ ರವಿಕುಮಾರ ಬಿನ್. ಪುಟ್ಟಸ್ವಾಮಿಗೌಡ ರವರು ಆದಿಚುಂಚನಗಿರಿ ಕ್ಷೇತ್ರದಲ್ಲಿರುವ ಐಲ್ಯಾಂಡ್ ಕಲ್ಯಾಣಿ ಕೆರೆಗೆ ಸ್ನಾನಕ್ಕಾಗಿ ಹೋಗಿ ನೀರಿನಲ್ಲಿ ಇಳಿದು ಸ್ನಾನ ಮಾಡುತ್ತಿದ್ದಾಗ ರವಿಕುಮಾರ ಕೆರೆಯ ನೀರಿನಲ್ಲಿ ಈಜುತ್ತಿದ್ದಾಗ ಸರಿಯಾಗಿ ಈಜುಬಾರದೆ ಇದ್ದುದರಿಂದ ರವಿಕುಮಾರ ಆಕಸ್ಮಿಕವಾಗಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ 


ಮನುಷ್ಯ ಕಾಣೆಯಾದ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 10/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.  

ದಿನಾಂಕ: 03-02-2013 ರಂದು ಪಿರ್ಯಾದಿ ನಟರಾಜು, ಹುಲ್ಲಂಬಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಟರಾಜು ಬಿನ್. ನಂಜಯ್ಯ, ಹುಲ್ಲಂಬಳ್ಳಿ ಗ್ರಾಮ ಎಂಬುವವರು ಪೂರಿಗಾಲಿಗೆ ಹೋಗಿ ಬರುತ್ತೇನೆಂದು ಹೋದವನು ಮನೆಗೆ ವಾಪಸ್ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಹಗಲು/ರಾತ್ರಿ ಕಳ್ಳತನ ಪ್ರಕರಣಗಳು :

1. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 454-380 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಯಮುನಾ ಕೊಂ ಗುರಪ್ಪ, ಎಂ.ಎಸ್ಸಿ. ವಿದ್ಯಾರ್ಥನಿರವರು ನೀಡಿದ ದೂರು ಏನೆಂದರೆ ಆರೋಪಿ ಕೃಷ್ಣ ಬಿನ್. ಸಣ್ಣೇಗೌಡ, ದಿನಗೂಲಿ ನೌಕರ, ಕೃಷಿಮಹಾವಿದ್ಯಾಲಯ, ವಿ.ಸಿ.ಫಾರಂ ರವರು ರೂಂ ಒಳಗಡೆ ಇಟ್ಟಿದ್ದ ಭರಣಿ ಕೊಂ. ಕೃಷ್ಣಮೂರ್ತಿ ರವರ ಬ್ಯಾಗ್ ನಲ್ಲಿದ್ದ ಸ್ಯಾಮ್ಸಂಗ್ ಮೋಬೈಲ್, ನಾಗಮಣಿ ಕೊಂ ವೆಂಕಟರಮಣಪ್ಪ ರವರ ಬ್ಯಾಗ್ ನಲ್ಲಿದ್ದ ಕಾರ್ಬನ್ ಮೊಬೈಲ್ ಕಳ್ಳತನವಾಗಿದ್ದವು. ಇವುಗಳನ್ನು ಕೃಷ್ಣ ಎಂಬುವನು ರೂಂ ಬಾಗಿಲು ತೆಗೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 457-380 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಹೆಚ್ಸಿ.ಶಿವಕುಮಾರ ಬಿನ್. ಲೇ|| ಹೆಚ್.ಕೆ. ಚಲುವಯ್ಯ, 56ವರ್ಷ, ಒಕ್ಕಲಿಗರು, ಕೆ. ಹೊನ್ನಲಗೆರೆ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಹೊಡೆದು ಒಳಗೆ ನುಗ್ಗಿ ಮನೆಯಲ್ಲಿದ್ದ 168 ಗ್ರಾಂ ಚಿನ್ನದ ವಡವೆಗಳು ಮತ್ತು 12 ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 420 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಎನ್.ಡಿ.ಮಂಜುಳ ಕೋಂ. ಡಾ|| ಕೆ.ಪಿ.ವೆಂಕಟೇಶ್, ವಾಸ ಪೂರ್ಣ ನಿಲಯ, 12ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಜಯಲಕ್ಷ್ಮಿ, 7ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ಫಿರ್ಯಾದಿಯ ಅತ್ತೆಯವರಿಗೆ ಬೀರುವನ್ನು ಕ್ಲೀನ್ ಮಾಡಿಕೊಡುವುದಾಗಿ ನಂಬಿಸಿ ಕ್ಲೀನ್ ಮಾಡುವಾಗ ಅವರಿಗೆ ಗೊತ್ತಿಲ್ಲದಂತೆ ಅವರ ಬೀರುವಿನಲ್ಲಿದ್ದ ಹವಳ ಮತ್ತು ಚಿನ್ನದ ಮುಡಿ ಚೈನ್ ಮತ್ತು ಒಂದು ಬಿಳಿ ಅರಳಿನ ಚಿನ್ನದ ಉಂಗುರ ಇವುಗಳ ಒಟ್ಟು ತೂಕ 40 ಗ್ರಾಂ ಇರುತ್ತೆ ಹಾಗೂ 1500/- ರೂ. ನಗದು ಹಣವನ್ನು ಹಾಗೂ ಫಿರ್ಯಾದಿಯವರ ಬೆಡ್ರೂಮಿನ ಬೀರುವಿನಲ್ಲಿದ್ದ ಫಿರ್ಯಾದಿಯವರ ಬಾಬ್ತು 15 ಗ್ರಾಂ ತೂಕದ ಚಿನ್ನದ ಒಂಟಿ ಬಳೆ ಮತ್ತು 15 ಗ್ರಾಂ ತೂಕದ ಒಂದು ಚಿನ್ನದ ಚೈನ್ ಇದರಲ್ಲಿ ವೆಂಕಟೇಶ್ವರಸ್ವಾಮಿಯ ಚಿನ್ನದ ಡಾಲರ್ ಇರುತ್ತೆ. ಇವುಗಳನ್ನು ಜಯಲಕ್ಷ್ಮಿಯು ಕಳವು ಮಾಡಿಕೊಂಡು ಮೋಸ ಮಾಡಿರುತ್ತಾರೆ. ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 279-337-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಕಾಯಿದೆ. 

ದಿನಾಂಕ: 03-02-2013 ರಂದು ಪಿರ್ಯಾದಿ ರುದ್ರೇಗೌಡ ಬಿನ್. ಹಲಗೇಗೌಡ, ಅಗ್ರಹಾರ ಬಡಾವಣೆ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾವುದೋ ಟ್ರಾಕ್ಟರ್ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕು ಇವರು ಟ್ರಾಕ್ಟರ್ ಅನ್ನು ವೇಗವಾಗಿ ಚಲಿಸಿದ ಪರಿಣಾಮ ಆಟೋರಿಕ್ಷಾ ಟ್ರೇಲರ್ ಗೆ  ತಗುಲಿ ಉರುಳಿ ಬಿದ್ದು ಆಟೋದಲ್ಲಿದ್ದ ನಾರ್ಗೋನಹಳ್ಳಿ ಗ್ರಾಮದ ಶ್ರೀನಿವಾಸ ಮತ್ತು ಮಾರ್ಗೋನಹಳ್ಳಿಯ ಮಂಜ ರವರಿಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದವರೆಲ್ಲರಿಗೂ ಮೈಕೈ ಮುಖ ಸೇರಿದಂತೆ ರಕ್ತ ಗಾಯಗಳಾಗಿದ್ದು ಅಪಘಾತ ಮಾಡಿದ ಟ್ರಾಕ್ಟರ್ ನ್ನು ಅದರ ಚಾಲಕ ಕಿಕ್ಕೇರಿ ಕಡೆಗೆ ಓಡಿಸಿಕೊಂಡು ಹೊರಟು ಹೋದನು ನಂಬರ್ ನೋಡಲಾಗಲಿಲ್ಲ ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 279,304[ಎ] ಐಪಿಸಿ ಕೂಡ 187 ಐ.ಎಂ..ವಿ. ಆಕ್ಟ್.

ದಿನಾಂಕ:03-02-2013 ರಂದು ಪಿರ್ಯಾದಿ ಕುಮಾರ್ ಬಿನ್. ಚಿಕ್ಕೇಗೌಡ, ಕಂಚನಹಳ್ಳಿ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ದಿನಾಂಕಃ03-02-2013 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಬೆಳ್ಳೂರು ಪೊಲೀಸ್ ಠಾಣ ಸರಹದ್ದಿಗೆ ಸೇರಿದ ಚಂದ್ರಶೇಖರಪುರದ ಐಯ್ಯನ ಕೆರೆಯ ತಿರುವಿನಲ್ಲಿ ಆರೊಪಿ ಕೆಎ-05-ಸಿ-6233ರ ಲಾರಿಯ ಚಾಲಕ, ಸದರಿ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಎದುರುಗಡೆಯಿಂದ ಬರುತ್ತಿದ್ದ ಕೆಎ-11-ಕ್ಯೂ-7913ರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿ ಬೈಕಿನಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಮೂರು ಜನರು ಸ್ಥಳದಲ್ಲೇ ಮೃತರಾಗಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 02-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-02-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನೆ ಕಳ್ಳತನ ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,    2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
  

ಮನೆ ಕಳ್ಳತನ ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 457, 380 ಐ.ಪಿ.ಸಿ.   

ದಿನಾಂಕ: 02-02-2013 ರಂದು ಪಿರ್ಯಾದಿ ಜೆ.ಎಂ. ಜಮುನಾ, ಶಶ್ರೂಷಕಿ, ಚಿನಕುರಳಿ ಪ್ರಾಥಮಿಕ ಆರೋಗ್ಯ ಕೇಂದ್ರ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಚಿನಕುರಳಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯ ನಿಮಿತ್ತ ಆಸ್ಪತ್ರೆಗೆ ಹೋಗಿದ್ದು, ಕರ್ತವ್ಯ ಮುಗಿಸಿ ಬೆಳಗ್ಗೆ 08-00 ಗಂಟೆಗೆ ವಾಪಾಸ್ ವಸತಿಗೃಹಕ್ಕೆ ಬಂದಾಗ ಮನೆಯ ಹಿಂದಿನ ಬಾಗಿಲನ್ನು ಹಾರೆಯಿಂದ ತಿವಿದು ಚಿಲಕ ಹೊಡೆದಿದ್ದು, ಮನೆಯಲ್ಲಿದ್ದ 5 ಸಾವಿರ ರೂ ನಗದು ಹಣ, ಸುಮಾರು 75 ಸಾವಿರ ರೂ ಬೆಲೆಬಾಳುವ ಒಂದು ಚಿನ್ನದ ನಕ್ಲೇಸ್, 2150 ರೂ. ಮೊತ್ತದ ಒಂದು ಟೈಟಾನ್ ರಾಗ ವಾಚ್, 2 ಸಾವಿರ ರೂ ಮೊತ್ತದ ಎರಡು ಸೊನಾಟ ವಾಚ್, 5 ಸಾವಿರ ರೂ ಮೊತ್ತದ 2 ಜೊತೆ ಬೆಳ್ಳಿಯ ಕಾಲು ಚೈನ್ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

 2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 454, 380 ಐ.ಪಿ.ಸಿ.

        ದಿನಾಂಕ: 02-02-2013 ರಂದು ಪಿರ್ಯಾದಿ ಮಲ್ಲಾಜಮ್ಮ ಕೋಂ, ಲೇಟ್ ಗವಿಸಿದ್ದಯ್ಯ ಗೌಡಗೆರೆ. ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಪ್ರಮೋದ 2) ಪ್ರಕಾಶ, ಗೌಡಗೆರೆ ಗ್ರಾಮ, ಮಳವಳ್ಳಿ ತಾಲ್ಲೋಕು. ಪಿರ್ಯಾದಿಯವರ ಮನೆಯ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ಡಿವಿಡಿ, ಕಬ್ಬಿನಣದ ಸರಳುಗಳು, ಸಾಮಾನುಗಳು, 5 ಸಿಮೆಂಟ್ ಮೂಟೆಗಳು ಒಟ್ಟು 6000 ರೂ ಬೆಳೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 02-02-2013 ರಂದು ಪಿರ್ಯಾದಿ ಸಣ್ಣತಾಯಮ್ಮ ಕೋಲಕಾರನದೊಡ್ಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ 19 ವರ್ಷದ ಮಗಳು ಕೋಲಕಾರನದೊಡ್ಡಿ ಗ್ರಾಮ ಮಂಡ್ಯ ತಾ. ರವರು ದಿನಾಂಕ: 01-02-2013 ರಂದು ನಮ್ಮ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇದುವರೆವಿಗೂ ವಾಪಸ್ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಆದ್ದರಿಂದ ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

1. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 279-337-304(ಎ) ಐ.ಪಿ.ಸಿ.

ದಿನಾಂಕ: 02-02-2013 ರಂದು ಪಿರ್ಯಾದಿ ಎಂ. ಲೋಕೇಶ್ ಬಿನ್. ಮಲ್ಲಪ್ಪ, ಕೊಳ್ಳೆಗಾಲ ಟೌನ್, ಚಾಮರಾಜನಗರ ನಗರ ಜಿಲ್ಲೆ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಚಲುವ, ಮಾಂಬಳ್ಳಿ ಗ್ರಾಮ, ಕೊಳ್ಳೆಗಾಲ ತಾ|| ರವರ ಬೈಕಿನಲ್ಲಿ ಬೆಳಕವಾಡಿ-ಮಳವಳ್ಳಿ ರಸ್ತೆಯ ನಿಂಗಪ್ಪನಕಟ್ಟೆಯ ಹತ್ತಿರ ತಿರುವಿನಲ್ಲಿ ತಿರುಗಿಸಿದಾಗ ಹಳ್ಳಕ್ಕೆ ಬಿದ್ದು ಚಲುವನಿಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಪಿರ್ಯಾದಿಯವರಿಗೆ ಪೆಟ್ಟಾಗಿರುತ್ತೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 498(ಎ) 504, 506, 323 ರೆ:ವಿ 34 ಐ.ಪಿ.ಸಿ.

ದಿನಾಂಕ: 02-02-2013 ರಂದು ಪಿರ್ಯಾದಿ ರಶ್ಮಿ ಕೋಂ. ಡಿ.ವಿ. ಗೋವಿಂದರಾಜು, ಟಿ.ಕಾಗೇಪುರ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ  1) ಡಿ.ವಿ.ಗೋವಿಂದರಾಜು, 2) ಅತ್ತೆ ಶಿವಮ್ಮ,      3) ಮೈದುನಾ ಗಿರೀಶ, 4) ನಾದಿನಿ ಶಾರದಮ್ಮ ಟಿ.ಕಾಗೇಪುರ ಗ್ರಾಮ ಪಿರ್ಯಾದಿಯವರಿಗೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈಯ್ದಿ, ನಿಮ್ಮ ತಂದೆಯ ಮನೆಯಿಂದ 1,00000 ರೂ. ವರದಕ್ಷಿಣೆ ತರುವಂತೆ ಹಿಂಸೆ ನೀಡಿ ಇಲ್ಲವಾದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಹಾಗೂ ನಿನ್ನನ್ನು ಕೊಲೆ ಮಾಡಿ ನನ್ನ ಮಗನಿಗೆ ಬೇರೆ ಮಧುವೆ ಮಾಡುತ್ತೇವೆ ಎಂದು ಹೇಳಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 498(ಎ) ರೆ:ವಿ 34 ಐ.ಪಿ.ಸಿ.

ದಿನಾಂಕ: 02-02-2013 ರಂದು ಪಿರ್ಯಾದಿ ಸೌಜನ್ಯ ಕೋಂ.ಸಿದ್ದು @ ಸಿದ್ದೇಗೌಡ, ಕೆ.ಜಿ.ದೊಡ್ಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1)ಸಿದ್ದು @ ಸಿದ್ದೇಗೌಡ  2) ಸಿದ್ದಮ್ಮ, 3) ಶಿವು ಕೆ.ಜಿ.ದೊಡ್ಡಿ ಗ್ರಾಮ,  ಪಿರ್ಯಾದಿಯವರಿಗೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕಿರುಕುಳ ನೀಡಿ ನಿನ್ನನ್ನು ಮಧುವೆಯಾಗಿರುವುದೇ ದುಡ್ಡಿಗಾಗಿ ಎಂದು ನಿಮ್ಮ ತಂದೆಯ  ಮನೆಯಿಂದ ಹೆಚ್ಚು ವರದಕ್ಷಿಣೆ ತರುವಂತೆ ಹಿಂಸೆ ನೀಡಿ ಇಲ್ಲವಾದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED 01-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-02-2013 ರಂದು ಒಟ್ಟು 14 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  1 ವಂಚನೆ ಪ್ರಕರಣ,  1 ಅಪಹರಣ ಪ್ರಕರಣ,  1 ರಾಬರಿ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 01-02-2013 ರಂದು ಪಿರ್ಯಾದಿ ಹೆಚ್.ಎಂ.ಗಿರಿಜಾ ಕೋಂ. ಡಿ.ಪಿ.ಕಾಂತರಾಜು, ಕೆ.ಎಂ.ದೊಡ್ಡಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಡಿ.ಪಿ.ಕಾಂತರಾಜು. ರವರು ತೊರೆಬೊಮ್ಮನಹಳ್ಳಿಯಲ್ಲಿರುವ ವೆಟನರಿ ಆಸ್ಪತ್ರೆಯಲ್ಲಿ 'ಡಿ'. ದರ್ಜಿಯ ಕೆಲಸ ಮಾಡುತ್ತಿದ್ದು ದಿನಾಂಕ: 26-01-2013 ರಂದು ಬೆಳಿಗ್ಗೆ 07-30 ಗಂಟೆ ಸಮಯದಲ್ಲಿ ಕೆಲಸಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 420 ಐ.ಪಿ.ಸಿ.

     ದಿನಾಂಕ: 01-02-2013 ರಂದು ಪಿರ್ಯಾದಿ ಚಂದ್ರೇಗೌಡ, ಆಹಾರ ನಿರೀಕ್ಷಕರು, ಕೆ.ಆರ್..ಪೇಟೆ ತಾ| ಕಚೇರಿ ರವರು ನೀಡಿದ ದೂರು ಏನೆಂದರೆ ಹೊನ್ನಪ್ಪ ಬಿನ್. ತಿಮ್ಮೇಗೌಡ, ರಾಯಸಮುದ್ರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿದ್ದು ಅದರಲ್ಲಿಯು ಸಹ ಮೇಲ್ಕಂಡ ಕುಂಟುಂಬದ ಸದಸ್ಯರ ಹೆಸರಿದ್ದು ಈ ಚೀಟಿಯಲ್ಲಿಯು ಸರ್ಕಾರ ರಿಯಾಯಿತಿ ದರದಲ್ಲಿ ಆಹಾರ ಸಾಮಗ್ರಿ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆಂದು ಆದ ಕಾರಣ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಪಹರಣ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 365,324,506 ಕೂಡ 34 ಐ.ಪಿ.ಸಿ.

     ದಿನಾಂಕ: 01-02-2013 ರಂದು ಪಿರ್ಯಾದಿ ಶ್ರೀನಿವಾಸ, ಟೈಲ್ಸ್ ಫಿಟ್ಟಿಂಗ್ ಕೆಲಸ, ವಾಸ ಆಡಿಲಿಂಗನಪಾಳ್ಯ ಗ್ರಾಮ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳು ಪಿರ್ಯಾದಿಯನ್ನು ಒಂದು ಟೆಂಪೋ ಟ್ರಾವೆಲ್ನಲ್ಲಿ ಎತ್ತಿಹಾಕಿಕೊಂಡು ಈ ಬಾರಿ ನಡೆಯುವ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಎ.ಮಂಜುರವರಿಗೆ  ಕ್ಯಾನ್ವಾಸ್ ಮಾಡುತ್ತಿದ್ದಾರೆ. ನೀವು ನಿಮ್ಮಪ್ಪ ಊರಿನಲ್ಲಿ ಕ್ಯಾನ್ವಾಸ್ ಮಾಡೋದು ಬೇಡ, ಚುನಾವಣೆವರೆಗೆ ನೀವು ಊರು ಬಿಟ್ಟು ಹೋಗಿ ಚುನಾವಣೆ ಮುಗಿದ ಮೇಲೆ ಬರಬೇಕು ಎಂದು ಹೆದರಿಸಿ ಪ್ರಾಣ ಭಯ ಹಾಕಿದ. ನಾನು ಅದಕ್ಕೆ ಪ್ರತಿರೋಧಿಸಿದಾಗ ಟೆಂಪೋ ಒಳಗಡೆ ಇದ್ದ ಯಾರೋ ಮತ್ತಿಬ್ಬರೂ ಕಬ್ಬಿಣದ ರಾಡನ್ನು ತೋರಿಸಿ ಕಬ್ಬಿಣದ ರಾಡಿನಲ್ಲಿ ಒಬ್ಬ ನನ್ನ ಎಡತೊಡೆ ಮತ್ತು ಎಡಸೊಂಟಕ್ಕೆ ಹೊಡೆದು ನೋವುಂಟು ಮಾಡಿರುತ್ತಾರೆ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಮೇಲುಕೋಟಿ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 392 ಐ.ಪಿ.ಸಿ.

     ದಿನಾಂಕ: 01-02-2013 ರಂದು ಪಿರ್ಯಾದಿ ದೇವಮ್ಮ ಕೋಂ. ಲೇಟ್. ಜವರೇಗೌಡ, ಗೃಹಿಣಿ, ಮಾಡರಹಳ್ಳಿ ಗ್ರಾಮ, ದೇವಮ್ಮ ಕೋಂ. ಲೇಟ್. ಜವರೇಗೌಡ, ಗೃಹಿಣಿ, ಮಾಡರಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರು ಅವರ ಮನೆಯಲ್ಲಿ ಮಲಗಿದ್ದಾಗ ಯಾರೋ ಮನೆಯ ಬಾಗಿಲನ್ನು ತಟ್ಟಿದ್ದು ಬಾಗಿಲನ್ನು ತೆಗೆದಾಗ ಇಬ್ಬರು ವ್ಯೆಕ್ತಿಗಳು ಬಾಯಿ, ಕಣ್ಣನ್ನು ಮುಚ್ಚಿ ಕತ್ತಿನಲ್ಲಿದ್ದ ಚಿನ್ನದ ತಾಳಿ, ಕತ್ತಿನ ಗುಂಡು, ಕಿವಿಯ ಓಲೆಯನ್ನು ಕಿತ್ತುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 31-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 31-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್.  ಪ್ರಕರಣಗಳು,  3 ಕಳ್ಳತನ ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ವಂಚನೆ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ  ಧನರಾಜ್, ಪಿಎಸ್.ಐ, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರು ನಂದಿಪುರ ಗ್ರಾಮದ ದೊಡ್ಡಪ್ಪ ಸಣ್ಣಪುಟ್ಟೇಗೌಡರ 3 ನೇ ಮಗ ಬಿ.ಎಸ್.ಪುಟ್ಟರಾಜು ದಿನಾಂಕ 31-01-13 ರಂದು ಜಮೀನಿಗೆ ನೀರು ಹಾಯಿಸಲು ಹೋಗಿರುವಾಗ ಮದ್ಯಾಹ್ನ 03-00 ಗಂಟೆಯಲ್ಲಿ ಯಾವುದೋ ವಿಷಪೂರಿತ ಹಾವು ಪುಟ್ಟರಾಜುವಿನ ಬಲ ಕಣಕಾಲಿನ ಬಳಿ ಕಚ್ಚಿದ್ದು ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಕುಬೇರಪ್ಪ ಬಿನ್ ಕುಂಟಯ್ಯ, ಡಿ.ಎಸ್.ಎಸ್. ಸಂಚಾಲಕರು, ಕೆ.ಶೆಟ್ಟಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರು ಏನೆಂದರ ಅಪರಿಚಿತ ಗಂಡಸು, ಸುಮಾರು 65 ವರ್ಷ ವಯಸ್ಸು ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ ಈ ಬಗ್ಗೆ ಮುಂದಿನ ಕ್ರಮ ಜರುಗಿಸುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಯುಡಿಆರ್ 01/13 ಕಲಂ-174[ಸಿ] ಸಿ.ಆರ್.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಹೆಚ್.ಎಸ್. ಚಂದ್ರ ಬಿನ್ ಲೇಟ್ ಹೆಚ್.ಎಸ್.ಸಿದ್ದೇಗೌಡ, 37 ವರ್ಷ, ಒಕ್ಕಲಿಗರು, ಕೂಲಿ ಕೆಲಸ, ವಾಸ ಎನ್.ಹೆಚ್.209 ಮುಖ್ಯರಸ್ತೆ, ಹಲಗೂರು ಗ್ರಾಮ, ಮಳವಳ್ಳಿ ತಾಲ್ಲೂಕು. ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ತನ್ನ ಅಣ್ಣ ಮಹದೇವೇಗೌಡ @ ಸುರೇಶ ಬಿನ್ ಲೇಟ್ ಹೆಚ್.ಎಸ್.ಸಿದ್ದೇಗೌಡ, ವಯಸ್ಸು ಸುಮಾರು 47 ವರ್ಷ, ಒಕ್ಕಲಿಗರು, ಅಂಗವಿಕಲ, ವಾಸ 4ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ. ಸ್ವಂತ ಸ್ಥಳ ಹಲಗೂರು ಗ್ರಾಮ, ಮಳವಳ್ಳಿ ತಾಲ್ಲೂಕು ರವರು ಮನೆಯ ಹಾಲಿನ ಮೂಲೆಯಲ್ಲಿರುವ ಮೇಲ್ಛಾವಣಿಯ ಕಬ್ಬಿಣದ ಸರಳಿನ ಕೊಂಡಿಗೆ ವಿದ್ಯುತ್ ವೈರಿನಿಂದ ನೇಣುಹಾಕಿಕೊಂಡು ಸತ್ತು ನೇತಾಡುತ್ತಿದ್ದು ಮನೆಯಲ್ಲಿ ಹೆಂಡತಿ ಮಕ್ಕಳೆಲ್ಲರೂ ಇದ್ದರು. ತನ್ನ ಅಣ್ಣ ಮಹದೇವೇಗೌಡ @ ಸುರೇಶನು ಮನೆಯಲ್ಲಿ ಇಲ್ಲದಿದ್ದಾಗ ಪ್ರೆಸ್ ರಿಪೋರ್ಟರ್ ಶಿವಕುಮಾರ ಎಂಬುವನು ತಮ್ಮ  ಮನೆಗೆ ಬಂದು ಹೋಗುತ್ತಿರುವ ವಿಚಾರ ತಿಳಿದು ಈ ವಿಷಯವನ್ನು ಮನನೊಂದು ಅವರ ಸ್ನೇಹಿತ ಚಂದೂಪುರ ಗ್ರಾಮದ ಮಾದೇಗೌಡ ರವರಿಗೆ ಹೇಳಿಕೊಂಡಿರುವ ವಿಚಾರ ತಿಳಿದುಬಂದಿರುತ್ತದೆ. ಇದರಿಂದಲೇ ತನ್ನ ಅಣ್ಣ ಮಹದೇವೇಗೌಡ @ ಸುರೇಶನು ಮನನೊಂದು ನೇಣುಹಾಕಿಕೊಂಡು ಸತ್ತಿರುವಂತೆ ಕಂಡುಬರುತ್ತದೆ. ಆದರೂ ತನ್ನ ಅಣ್ಣನ ಸಾವಿನ ಬಗ್ಗೆ ಅನುಮಾನವಿರುತ್ತದೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರು



ಕಳ್ಳತನ ಪ್ರಕರಣಗಳು :

1. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಪುಟ್ಟಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಡುಕೊತ್ತನಹಳ್ಳಿ ಗ್ರಾಮ,  ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಕಾಡುಕೊತ್ತನಹಳ್ಳಿ ಗ್ರಾಮದ  ಶಾಲೆಯ ಅಡುಗೆ ಮನೆಯ ಬಾಗಿಲು ಬೀಗವನ್ನು  ಮುರಿದು ಒಳಹೋಗಿ ಸುಮಾರು 1200/-ರೂ. ಬೆಲೆ ಬಾಳುವ ಗ್ಯಾಸ್ ಸಿಲೆಂಡರ್ನ್ನು ಕಳುವು ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾತರ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಮಹದೇವಮ್ಮ ಬಿನ್. ಗವಿಸಿದ್ದಯ್ಯ, 40 ವರ್ಷ, ಅಂಗನವಾಡಿ ಕಾರ್ಯಕರ್ತೆ, ಹೆಮ್ಮಿಗೆ ಗ್ರಾಮ ರವರು ನೀಡಿದ ದೂರು ಏನೆಂದರೆ  ಅವರು ಕೆಲಸ ಮಾಡುತ್ತಿದ್ದ ಹೆಮ್ಮಿಗೆ 2ನೇ ಅಂಗನವಾಡಿ ಕೇಂದ್ರದಲ್ಲಿ ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು  ಕೇಂದ್ರದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಹಾಕಿ ಒಳಗೆ ನುಗ್ಗಿ 2 ಕುಕ್ಕರ್ ಗಳು, 10 ತಟ್ಟೆಗಳು, 2 ಬೇಸಿನ್ ಗಳು, ಮತ್ತು 2 ಮುಚ್ಚಳಗಳು ಹಾಗೂ ತೂಕಮಾಪನ ಯಂತ್ರ ಒಟ್ಟು 6000/- ರೂ ಬೆಲೆಬಾಳು ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಸತ್ಯನಾರಾಯಣ ಬಿನ್ ಲೇಟ್ ನರಸಿಂಹಯ್ಯ, ಗೋಸೇಗೌಡರ ಬೀದಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕಿಲರ್ೋಸ್ಕರ್ ಕಂಪನಿಯ 1 ಹೆಚ್.ಪಿ. ಪಂಪ್ಸೆಟ್ ಮೋಟರ್ 2) ಒಂದು ಕಿರ್ಲೋಸ್ಕರ್ ಕಂಪನಿಯ 2 ಹೆಚ್.ಪಿ.ಯ ಸಬ್ ಮರ್ಸಿಬಲ್  ಪಂಪ್ಸೆಟ್ ಮೋಟರ್ ಒಟ್ಟು ಬೆಲೆ ಸುಮಾರು 10,000/- ರೂ. ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿ ಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 279-304(ಎ) ಐ.ಪಿ.ಸಿ.

      ದಿನಾಂಕ: 31-01-2013 ರಂದು ಪಿರ್ಯಾದಿ ಎಸ್.ಸುರೇಶ್ ಬಿನ್ ಲೇಟ್. ಸಣ್ಣಯ್ಯ, 32 ವರ್ಷ, ಪರಿಶಿಷ್ಟ ಜಾತಿ, ಹೊನಗಳ್ಳಿ ಮಠ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಹೆಚ್.ಬಿ.ಶ್ರೀಕಾಂತ್ ಬಿನ್. ಲೇಟ್. ಬೋರಯ್ಯ, 58 ವರ್ಷ, ಹೊನಗಳ್ಳಿ ಮಠ ಕಾಲೋನಿ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಮೋಟಾರ್ ಸೈಕಲ್ನ್ನು ಅತಿವೇಗ ಮತ್ತು ಅಜಾಗರೂ ಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಿಯಂತ್ರಣ ತಪ್ಪಿ ತಾನಾಗಿಯೇ ಮೋಟಾರ್ ಸೈಕಲ್ ಸಮೇತ ಬಿದ್ದು ತೀವ್ರ ಪೆಟ್ಟಾಗಿದ್ದು, ಸದರಿಯವರನ್ನು ಕೂಡಲೇ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ತಂದು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 30-1-2013 ರಂದು ರಾತ್ತಿ 11-45 ಗಂಟೆಯ ಸಮಯದಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ : 

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 420 ಐ.ಪಿ.ಸಿ.

      ದಿನಾಂಕ: 31-01-2013 ರಂದು ಪಿರ್ಯಾದಿ ಚಿಕ್ಕಮಾದಮ್ಮ ಕೋಂ ಬೀರೇಗೌಡ, ಸು:55ವರ್ಷ, ಮನೆ ಕೆಲಸ, ಹಿಪ್ಪೆ ಮರದ ಬೀದಿ, ಬೆಳಕವಾಡಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ತಮ್ಮ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಯಾರೋ ಇಬ್ಬರು ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಗಂಡಸರು ಬಂದು ಚಿನ್ನ ಮತ್ತು ಬೆಳ್ಳಿ ತೊಳೆದುಕೊಡುತ್ತೇವೆಂದು ಹೇಳಿ ಪಿರ್ಯಾದಿಯವರನ್ನು ನಂಬಿಸಿ ಮೋಸಮಾಡಿ ಮಾಂಗಲ್ಯ ಸರವನ್ನು ತೆಗೆದುಕೊಂಡಿರುತ್ತಾರೆಂದು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 30-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 30-01-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು,  2 ಕಳವು ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 5 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳ್ಳತನ ಪ್ರಕರಣಗಳು :

1. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 457-380 ಐ.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಜೆ. ಹೇಮಾವತಿ, ಅಂಗನವಾಡಿ ಕಾರ್ಯಕರ್ತೆ,  ಅರೆಚಾಕನಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅರೆಚಾಕನಹಳ್ಳಿ ಗ್ರಾಮದ ಅಂಗನವಾಡಿ ಬೀಗವನ್ನು ಮುರಿದು ಒಳಹೋಗಿ ಸುಮಾರು 2500/-ರೂ. ಬೆಲೆ ಬಾಳುವ ಗ್ಯಾಸ್ ಸಿಲೆಂಡರ್ ಗಳನ್ನು ಮತ್ತು ಒಂದು ತೂಕದ ಯಂತ್ರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 457-380 ಐ.ಪಿ.ಸಿ.

       ದಿನಾಂಕ: 30-01-2013 ರಂದು ಪಿರ್ಯಾದಿ ಹೆಚ್.ಎನ್. ಗಣೇಶಮೂರ್ತಿ,  ಮುಖ್ಯೋಪಾಧ್ಯಾಯ, ಪದ್ಯಾ ಗೋಪನಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 29-01-2013 ರಂದು ಯಾರೋ ಕಳ್ಳರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗವನ್ನು ಮುರಿದು ಒಳಹೋಗಿ ಸುಮಾರು 2500/-ರೂ. ಬೆಲೆ ಬಾಳುವ ಗ್ಯಾಸ್ ಸಿಲೆಂಡರ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 379 ಐ.ಪಿ.ಸಿ.

        ದಿನಾಂಕ: 30-01-2013 ರಂದು ಪಿರ್ಯಾದಿ ಎಸ್. ಮಹೇಶ, ಕಾಮನಕೆರೆ ಹುಂಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಫಿಯರ್ಾದಿಯ ಕೆ.ಎ-55-ಎಲ್-8080  ಹೀರೋ ಮೋಟಾರ್ ಸೈಕಲ್ ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 379 ಐ.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಎಂ.ಕೃಷ್ಣಯ್ಯ ಬಿನ್. ಮುದ್ದೀರಯ್ಯ, ಸಿದ್ದಪ್ಪಾಜಿ ದೇವಸ್ಥಾನದ ರಸ್ತೆ, 5ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಫಿರ್ಯಾದಿಯವರು ತಮ್ಮ ಬಾಬ್ತು ಕೆಎ-11 ಎಲ್. 1664 ನಂಬರಿನ ಹೀರೊಹೊಂಡ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 25,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 10/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 30-01-2013 ರಂದು ಪಿರ್ಯಾದಿ ಗಂಗಮ್ಮ ಕೋಂ. ಲೇ.ಹನುಮಂತಪ್ಪ, ಬಿಂಡಿಗನವಿಲೆ ಗ್ರಾಮರವರು ನೀಡಿದ ದೂರು ಏನೆಂದರೆ ರವರ ಮಗಳು 18ವರ್ಷ, ಪಿ.ಯು.ಸಿ. ವಿದ್ಯಾರ್ಥಿನಿ ರವರು ಕಾಲೇಜಿಗೆ ಹೊಗಿ ಬರುತ್ತೇನೆ ಎಂದು ಹೇಳಿ ಹೋದವಳು ಇದುವರೆವಿಗೂ ಮನೆಗೆ ವಾಪಸ್ ಬಂದಿರುವುದಿಲ್ಲ. ಕಾಣೆಯಾಗಿರುವ ನನ್ನ ಮೊಮ್ಮಗಳನ್ನು ಪತ್ತೆ ಮಾಡಿಕೊಡಿ ಎಂದು ಫಿರ್ಯಾದಿಯವರು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 30/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.


ದಿನಾಂಕ: 30-01-2013 ರಂದು ನಾಗರಾಜು ಬಿನ್. ಲೇಟ್. ಚನ್ನೇಗೌಡ, 50 ವರ್ಷ, ಬಿ.ಗೌಡಗೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ನನ್ನ ಮಗಳು 23 ವರ್ಷ, ಬಿ.ಗೌಡಗೆರೆ ಎಂಬುವವರು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಮನೆಯಿಂದ ಹೋದವಳು ಇದುವರೆಗೂ ವಾಪಸ್ ಬಂದಿರುವುದಿಲ್ಲ ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 498(ಎ)-448-323-324-504-506 ಕೂಡ34 ಐ.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಅಭಿಲಾಶಾ ಕೋಂ. ಶಂಕರ, 26 ವರ್ಷ, 1ನೇಕ್ರಾಸ್, ಹೊನಗಿರಿ ಡೈರಿ ಬೀದಿ, ಹೊಸಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಶಂಕರ ಬಿನ್ ಉಳ್ಳಕ್ಕಿ ಮಂಚಯ್ಯ, ಹೊಸಹಳ್ಳಿ ಮಂಡ್ಯ ಸಿಟಿ ರವರು ಆಗಾಗ್ಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ದೊಣ್ಣೆಯನ್ನು ಹಿಡಿದುಕೊಂಡು ಬಂದು ಬಾಯಿಗೆ ಬಂದಂತೆ ಬೈಯ್ದು ಭುಜ ಹಾಗೂ ಬೆನ್ನಿನ ಮೇಲೆ ಹೊಡೆದು ನೋವುಂಟುಮಾಡಿರುತ್ತಾನೆ.ಹಾಗೂ ಆತನ ಅಕ್ಕನ ಮಗನಾದ ಶಶಿಕುಮಾರ್ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಹಾಗೂ ನಿನ್ನ ಕತೆಯನ್ನು ಮುಗಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾನೆ.  ಆತನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿ ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಸರಸಮ್ಮ ಕೋಂ ಲೇಟ್. ರಾಜು, ನಿಡಘಟ್ಟ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಅವರ ಮಗಳು ರೂಪ ಕೋಂ. ಶೇಖರ್, ಬಸವನ ಪುರ ಗ್ರಾಮ, ಸ್ವಂತ ಊರು ಬಿ.ಗೌಡಗೆರೆ ಮಂಡ್ಯ ತಾಲ್ಲೂಕು ರವರಿಗೆ ಆಗ್ಗಾಗ್ಗೆ ಹೊಟ್ಟೆ ನೋವು ಬರುತ್ತಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ತೋರಿಸಿದ್ದು, ವಾಸಿಯಾಗದೆ ಇದ್ದುದ್ದರಿಂದ ಹೊಟ್ಟೆನೋವು ತಾಳಲಾರದೆ ದಿನಾಂಕ: 25-01-2013 ರಂದು ರೂಪಳು ಯಾವುದೋ ಕ್ರಿಮಿನಾಶಕದ ಔಷಧಿಯನ್ನು ಕುಡಿದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 29-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 29-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಕಳವು ಪ್ರಕರಣ,  1 ಹೆಂಗಸು ಕಾಣೆಯಾದ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 11 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.   


ರಸ್ತೆ ಅಪಘಾತ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಅಶೋಕ ಬಿನ್. ಚಿಕ್ಕಮರೀಗೌಡ, ಅರಳಕುಪ್ಪೆ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರು ಏನೆಂದರೆ ಮಹೇಂದ್ರ ಟ್ರಾಕ್ಟರ್ ಚಾಲಕ,  ಕೆಂಪು ಬಣ್ಣ, ವಾಹನದ ನಂಬರ್ ಗೊತ್ತಿರುವುದಿಲ್ಲ,  ಇಂಜಿನ್. ನಂ. ಎಸ್.ಎನ್.ಎಸ್. ಡಬ್ಯೂ-4742 ಡಿ-1 ರ ಚಾಲಕ ರಸೆ ದಾಟುತ್ತಿದ್ದಾಗ ಹಾರೋಹಳ್ಳಿ ಕಡೆಯಿಂದ ಬಂದ ಸದರೆ ಟ್ರಾಕ್ಟರ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬಸವಶೆಟ್ಟಿ ಎಂಬುವವರಿಗೆ ಡಿಕ್ಕಿ ಮಾಡಿ ಬಲಭಾಗದ ಚಕ್ರ ಹರಿದಿದ್ದು ನಾನು ಹಾಗು ಇತರರು ಆಸ್ಪತ್ರೆಗೆ ಸೇರಿಸಿದೆವು ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು, ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ರಾಜ ಬಿನ್ ಸತೀಶ, ಗೆಜ್ಜಲಗೆರೆ ಕಾಲೋನಿ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಪರಿಚಿತ ಗಂಡಸು, 45 ವರ್ಷ, ಹೆಸರು, ವಿಳಾಸ ತಿಳಿದಿರುವುದಿಲ್ಲ ಈ ವ್ಯಕ್ತಿಯು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಪೌಲಿಸನ್ ಕಬ್ಬಿಣದ ಕಾಖರ್ಾನೆ ಬಳಿ ಮೈಸೂರು-ಬೆಂಗಳೂರು ರಸ್ತೆಯ ಪಕ್ಕ ಯಾವುದೋ ಕಾಯಿಲೆಯಿಂದ ಬಳಲಿ ಸತ್ತು ಬಿದ್ದಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಪದ್ಮ ಕೋಂ. ಮಲ್ಲಿಕಾರ್ಜುನಸ್ವಾಮಿ, ಮನೆ. ನಂ.03, ಟಿ.ಬಿ. ಸರ್ಕಲ್ ಸೇಟು ಬಿಲ್ಡಿಂಗ್ ಬಳಿ. ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಅವರ ಗಂಡ ಮಲ್ಲಿಕಾರ್ಜುನಸ್ವಾಮಿ ರವರು ಮನೆಯಲ್ಲಿ ಇಲಿಗಳಿಗೆ ಪಾಷಣ ಹಾಕಿ ಇಟ್ಟಿದ್ದು ಗೊತ್ತಿಲ್ಲದೆ ತಿಂದು ಚಿಕಿತ್ಸೆ ಫಲಕಾರಿಯಾಗದೆ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 379 ಐ.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಶ್ರೀಕಾಂತ್ ಎ.ಪಿ. ಬಿನ್. ಜಿ.ಪ್ರಕಾಶ್, 29 ವರ್ಷ, ಅಂಗಡಿ ಬೀದಿ, ಹಳೆ ಪಂಚಾಯ್ತಿ ಆಫೀಸ್ ಹಿಂದೆ, ಅರಕೆರೆ ಪಟ್ಟಣ ರವರು ನೀಡಿದ ದೂರು ಏನೆಂದರೆ ದಿನಾಂಕ: 19-01-2013 ರಂದು ಅವರ ಬಾಬ್ತು ಹಿರೋಹೊಂಡ ಪ್ಯಾಷನ್ ಪ್ಲಸ್ ನಂ. ಕೆಎ-11-ಎಸ್-6954 ಮೋಟಾರ್ ಸೈಕಲ್ ನ್ನು ಪಿರ್ಯಾದಿಯವರು ಕಾವೇರಿ ನಸರ್ಿಂಗ ಹೋಂ, ಅಶೋಕ ನಗರ, 1 ನೇ ಕ್ರಾಸ್, ಮಂಡ್ಯ ನಗರ ಅಲ್ಲಿ ಪುಟ್ ಪಾತ್ ನಲ್ಲಿ ನಿಲ್ಲಿಸಿದ್ದು ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ, ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ, ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಹೆಂಗಸು ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 29-01-2013 ರಂದು ಪಿರ್ಯಾದಿ ಕೆಂಗಮ್ಮ ಕೋಂ. ಮರೀಗೌಡ, ಅಮಚಹಳ್ಳಿ ಗ್ರಾಮ, ಕೆ.ಆರ್. ಪೇಟಿ ತಾ. ರವರು ನೀಡಿದ ಪಿರ್ಯಾದು ಏನೆಂದರೆ ಅವರ ಮಗಳು ಮಂಜುಳ ಕೊಂ. ಸ್ವಾಮಿ, 25 ವರ್ಷ, ಅಮಚಹಳ್ಳಿ ರವರು ದಿನಾಂಕ: 25-01-2013 ರಂದು ಗಂಡನ ಮನೆಯಾದ ಮಾವಿನಕಟ್ಟೆ ಗ್ರಾಮಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ಗಂಡನ ಮನೆಗೆ ಹೋಗದೆ ಎಲ್ಲಿಯೋ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 457-380 ಐ.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಹೆಚ್.ಸಿ. ಸೋಮು ಬಿನ್. ಚನ್ನೇಗೌಡ, ಪಾಂಡವಪುರ ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ: 28-01-2013 ರಂದು ಯಾರೋ ಕಳ್ಳರು ಪಿರ್ಯಾದಿಯವರ ಪಂಪ್ ಸೆಟ್ ಮನೆಯ ಬಾಗಿಲು ಮುರಿದು 7 ಹೆಚ್.ಪಿ. ಮೋಟಾರ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ರೂ. 16,000/- ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 28-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 28-01-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನೆ/ಶಾಲೆ ಕಳ್ಳತನ ಪ್ರಕರಣಗಳು,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನೆ/ಶಾಲೆ ಕಳ್ಳತನ ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 457-380 ಐ.ಪಿ.ಸಿ.

ದಿನಾಂಕ: 28-01-13 ರಂದು ಪಿರ್ಯಾದಿ ಲೋಕೇಶ, ಹಳೆ ಕಿಕ್ಕೇರಿ ರಸ್ತೆ, ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮನೆಯ ಬಾಗಿಲು ತೆರೆದಿರುವುದು ಕಂಡಿತು ನಂತರ ಪಿರ್ಯಾದಿ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಒಳಬಾಗ ಹಾಲ್ನಲ್ಲಿ ಇಟ್ಟಿದ್ದ ಟಿವಿ ಷೋಕೆಸ್ ಹೊಡೆದು ಹಾಕಿದ್ದು ಮತ್ತು ಗೋಡೆ ಬೀರು ತೆಗೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದು ಬೀರುವನ್ನು ಯಾವುದೋ ಆಯುದದಿಂದ ಮೀಟಿ ಬೀರುವಿನಲ್ಲಿದ್ದ ಸುಮಾರು 22 ಸಾವಿರ ಬೆಲೆ ಬಾಳುವ 1 ಚಿನ್ನದ ಚೈನು. ಹಾಗು ಒಂದು ಜೊತೆ ಬೆಳ್ಳಿ ಚೈನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 457-380 ಐ.ಪಿ.ಸಿ.

ದಿನಾಂಕ: 28-01-13 ರಂದು ಪಿರ್ಯಾದಿ ಮಹದೇವೇಗೌಡ. ಎನ್. ಮುಖ್ಯೋಪಾಧ್ಯಾಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಡಾಲ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಕ್ಷರ ದಾಸೋಹ ಕೊಠಡಿಯ ಬಾಗಿಲಿಗೆ ಹಾಕಿದ್ದ ಬೀಗ ಹೊಡೆದು ಒಂದು ಸಿಲಿಂಡರ್ ಮತ್ತು ಒಂದು ಚಿಕ್ಕ ಗ್ಯಾಸ್ ಒಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾಗಿರುವ ವಸ್ತುಗಳ ಬೆಲೆ ಅಂದಾಜು 2250-00 ರೂಗಳಾಗಿದ್ದು, ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 28-01-2013 ರಂದು ಪಿರ್ಯಾದಿ ಮುಶ್ರಫ್ ಜಾನ್ ಕೋಂ. ರಫಿ ಮಹಮ್ಮದ್, 55 ವರ್ಷ, ಮುಖ್ಯ ಶಿಕ್ಷಕಿ, ಸರ್ಕಾರಿ  ಫ್ರೌಡ ಶಾಲೆ,  ಲಕ್ಷ್ಮೀಸಾಗರ ಗ್ರಾಮ,  ಮೇಲುಕೋಟೆ  ಹೋಬಳಿ ಪಾಂಡವಪುರ  ತಾಲ್ಲೋಕು, ಹಾಲಿ ವಾಸ ಮೈಸೂರು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 28-01-2013 ರಂದು ಪಿರ್ಯಾದಿಯವರು ಕೊಟ್ಟ ಲಿಖಿತ ದೂರೆನೆಂದರೆ ಸರ್ಕಾರಿ  ಪ್ರೌಢಶಾಲೆ ಲಕ್ಷ್ಮೀಸಾಗರ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆಂದು 7(ಏಳು) ಸಿಲಿಂಡರ್ ಗಳು  ಸರಬರಾಜು ಮಾಡಿದ್ದು ದಿನಾಂಕಃ 27-01-2013 ರ ಭಾನುವಾರ ರಾತ್ರಿ ಅಡುಗೆ ಮನೆಯ ಬೀಗ ಮತ್ತು ಬಾಗಿಲನ್ನು ಒಡೆದು ಎರಡು ಸಿಲಿಂಡರ್ಗಳು ಹಾಗೂ ಒಂದು ಸ್ಟೀಲ್ ಬಕೆಟ್, ಒಂದು ದೊಡ್ಡ ನೀರು ತುಂಬುವ ಡ್ರಮ್  [ ಎರಡು ಸಿಲಿಂಡರ್ ಗಳು ಭರ್ತಿಯಾಗಿದ್ದವು ] ಕಳುವಾಗಿದ್ದು  ದಿನಾಂಕಃ 28-01-2013 ರ ಬೆಳಿಗ್ಗೆ 08-15 ಕ್ಕೆ ನಮ್ಮ ಗಮನಕ್ಕೆ ಬಂದಿದ್ದು ಅವುಗಳನ್ನು ಹುಡುಕಿಸಿ ಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 143,504,355 ಕೂಡ 149 ಐ.ಪಿ.ಸಿ. ಹಾಗು 3 ಸಬ್ ಸಿಐಎಸ್ (11) ಎಸ್.ಸಿ./ಎಸ್.ಟಿ. ಕಾಯಿದೆ 1989.

       ದಿನಾಂಕ: 28-01-2013 ರಂದು ಪಿರ್ಯಾದಿ ದೇವಿರಮ್ಮ ಕೊಂ. ಶಿವಣ್ಣ, 40 ವರ್ಷ, ಪರಿಶಿಷ್ಟ ಜಾತಿ, ಕಡಿಲುವಾಗಿಲು ಗ್ರಾಮ ಪಂಚಾಯ್ತಿ ಸದಸ್ಯರು ಹಾಗು ಮಾಜೀ ಅಧ್ಯಕ್ಷರು, ಮಾದರಹಳ್ಳಿ ಗ್ರಾಮ ಪಂಚಾಯ್ತಿ, ಮದ್ದೂರು ತಾಲ್ಲೂಕು ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಾಗಿದು, ತಮ್ಮ ಕ್ಷೇತ್ರದಲ್ಲಿನ ಸ್ವಚ್ಚತೆ ಮತ್ತು ನೈರ್ಮಲತೆಯ ಪರಿಶೀಲನೆಗಾಗಿ ದಿನಾಂಕ;28-01-13 ರಂದು ಬೆಳಿಗ್ಗೆ 8.30 ಗಂಟೆಯಿಂದ ಬೆಳಿಗ್ಗೆ 9.00 ಗಂಟೆ ಸಮುದಾಯದಲ್ಲಿ ಕಡಿಲುವಾಗಿಲು ಗ್ರಾಮದ ಮಸಣಮ್ಮ ದೇವಸ್ಥಾನದ ಬೀದಿಯಲ್ಲಿ ಪರಿಶೀಲನೆಗೆ ಹೋಗುತ್ತಿದ್ದಾಗ ಆರೋಪಿಗಳಾದ 1]ಬೋರಯ್ಯ ಬಿನ್. ಚಿಕ್ಕಬೋರಯ್ಯ ಇತರೆ 6 ಜನರು ಎಲ್ಲರೂ ಕಡಿಲುವಾಗಿಲು ಗ್ರಾಮ, ಮದ್ದೂರು ತಾಲ್ಲೂಕು, ರವರುಗಳು ಪಿರ್ಯಾದಿಯವರನ್ನು ಉದ್ದೆಶಿಸಿ ಅವಾಚ್ಯವಾಗಿ ಬೈಯ್ದು ಚಪ್ಪಲಿ ತೋರಿಸಿ ಜಾತಿ ನಿಂದನೆ ಮಾಡಿರುತ್ತಾರೆ ಎಂಬಿತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 27-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-01-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ಅಪಹರಣ ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವಾಹನ ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ರಸ್ತೆ ಅಪಘಾತ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 279-304(ಎ) ಐಪಿಸಿ ಕೂಡ 187 ಐ.ಎಂ.ವಿ. ಕಾಯಿದೆ.

ದಿನಾಂಕ: 27-01-2013 ರಂದು ಪಿರ್ಯಾದಿ ಎನ್.ಆನಂದ ಬಿನ್ ನಟರಾಜು ಮಾರುತಿನಗರ ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. ಕೆಎ-11 ಟಿ-1634 ಟ್ರಾಕ್ಟರ್ ಚಾಲಕ (ಹೆಸರು ವಿಳಾಸ ತಿಳಿದಿಲ್ಲ) ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಹಿಂದಿನಿಂದ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ರಾಜೇಶನ ತಲೆಗೆ ತೀವ್ರ ತರಹದ ಪೆಟ್ಟಾಗಿ ಕೆ.ಆರ್.ಪೇಟೆ ಆಸ್ಪತ್ರೆಗೆ ಸೇರಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಆದ್ದರಿಂದ ಅಪಘಾತ ಉಂಟು ಮಾಡಿದ ಕೆಎ-11 ಟಿ-1634 ರ ಟಾಕ್ಟರ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಕೋರಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  



ಅಪಹರಣ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 363-366 (ಎ) ಐ.ಪಿ.ಸಿ.

       ದಿನಾಂಕ: 27-01-2013 ರಂದು ಪಿರ್ಯಾದಿ ಜಯಮ್ಮ ಕೋಂ. ರಮೇಶಚಾರಿ. ಹೊಸಕನ್ನಂಬಾಡಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ಅಂಗಡಿಯಲ್ಲಿ ಸಾಮಾನು ತರಲು ಹೋಗಿದ್ದಾಗ, ನೆಲಮನೆ ಗ್ರಾಮದ ಆರೋಪಿ ಶ್ರೀಕಂಠ ಬಿನ್ ಸುಬ್ಬಾಚಾರಿ, ನೆಲಮನೆ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ,  ಕಾನೂನು ರೀತ್ಯಾ ಕ್ರಮ ಕೈಗೊಂಡು, ನನ್ನ ಮಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

        ದಿನಾಂಕ: 27-01-2013 ರಂದು ಪಿರ್ಯಾದಿ ಪಾಲಲೋಚನ ಬಿನ್. ಗಂಗಾಧರಯ್ಯ, 4 ನೇ ಕ್ರಾಸ್, ಸಿದ್ದಾರ್ಥನಗರ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ಅಂತಿಮ ಬಿ.ಎ. ವಿದ್ಯಾಥರ್ಿನಿ ರವರು ದಿನಾಂಕ:: 22-01-2013 ರಂದು ಸಂಜೆ 04-00 ಗಂಟೆೆಯಲ್ಲಿ ಮಳವಳ್ಳಿ ಟೌನ್ ನಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 27-01-2013 ರಂದು ಪಿರ್ಯಾದಿ ನಾಗರಾಜು ಬಿನ್. ರಾಮಣ್ಣ ಮಂಡ್ಯ ಸಿಟಿ, ಗೂಬೇಹಳ್ಳ, 7 ನೇ ಕ್ರಾಸ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗಳು ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುವ ನಮ್ಮ ಮಗಳು ಅನಿತಾಳನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ವಾಹನ ಕಳವು ಪ್ರಕರಣ :

 ಹಲಗೂರು ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 379 ಐ.ಪಿ.ಸಿ.

ದಿನಾಂಕ: 27-01-2013 ರಂದು ಪಿರ್ಯಾದಿ ಸಿ.ಎಸ್.ಡಾಲಿ ಬಿನ್ ಸುಬ್ಬಯ್ಯ, ಹೆಚ್.ಎಸ್.ಆರ್ ಲೇಔಟ್, ಮಡಿವಾಳ ಬೆಂಗಳೂರು-79 ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ತನ್ನ ಬಾಬ್ತು ಕೆಎ-51, ಜಡ್-7839 ಮಹೀಂದ್ರಾ ಜೈಲೋ ಕಾರಿನಲ್ಲಿ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದು ಕಾರ್ ನಿಲ್ಲಿಸಿ ಕಾವೇರಿ ನದಿಯ ಹೊಳೆ ಕಡೆ ಹೋಗಿದ್ದಾಗ ಯಾರೋ ದುಷ್ಕಮರ್ಿಗಳು ಕಾರಿನ ಗ್ಲಾಸ್ಗಳನ್ನು ಹೊಡೆದು ಕಾರಿನಲ್ಲಿದ್ದ ಮೊಬೈಲ್ಗಳು, ಕ್ರೆಡಿಟ್ ಕಾಡರ್್ಗಳು, ಡೆಬಿಟ್ ಕಾಡರ್್ಗಳು, ಆರ್.ಸಿ ಬುಕ್, ಡಿ.ಎಲ್, ನಗದು 13,500/- ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 27-01-2013 ರಂದು ಪಿರ್ಯಾದಿ ವಿ.ಎಂ ಗಂಗಾಧರನ್ ಬಿನ್ ಮೋಹನ್, ಸಿವಿಲ್ ಇಂಜಿನಿಯರ್, ಮದುರೈ, ತಮಿಳುನಾಡು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಶಿವನಸಮುದ್ರದಲ್ಲಿ ಬಿ.ಡಬ್ಯೂ.ಎಸ್.ಎಸ್.ಬಿ.  ಕಾಮಗಾರಿಯನ್ನು ಕಂಟ್ರಾಕ್ಟ ಪಡೆದುಕೊಂಡು ನಿರ್ವಹಿಸುತ್ತಿದ್ದು, ಇವರ ಬಳಿ ಕೂಲಿಕೆಲಸ ಮಾಡಿಕೊಂಡಿದ್ದ ಲಿಂಗುಡು ಪ್ರಜಾ @ ಕೃಷ್ಣ, ಅಸ್ಸಾಂ ರಾಜ್ಯ ರವರು ರಾತ್ರಿವೇಳೆಯಲ್ಲಿ ಮಲವಿಸರ್ಜನೆಗೆ ಹೋಗಿ ನೀರು ತೆಗೆದುಕೊಳ್ಳಲು ಚಾನೆಲ್ಗೆ ಹೋದಾಗ ಕಾಲು ಜಾರಿ ಕೊಚ್ಚಿಕೊಂಡು ಸತ್ತುಹೋಗಿರುತ್ತಾನೆ. ಆದ್ದರಿಂದ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರುನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

Press Note MDY RL 27012013


ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ದಿನಾಂಕಃ 27-01-2013.

ಪತ್ರಿಕಾ ಪ್ರಕಟಣೆ 

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ  49/2012 ರ ಕೊಲೆ ಪ್ರಕರಣದ ಪತ್ತೆ ಬಗ್ಗೆ.





     ದಿನಾಂಕಃ 22-04-2011 ರಂದು ಬೆಳಿಗ್ಗೆ ಮಂಡ್ಯ ತಾಲ್ಲೂಕು ಹಳೇಬೂದನೂರು ಗ್ರಾಮದ ಹತ್ತಿರ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಿಂದ ಸುಮಾರು 15 ಅಡಿ ಅಂತರದಲ್ಲಿ ಹಳೇಬೂದನೂರು ಗ್ರಾಮದ ರತ್ನಮ್ಮರವರ ಜಮೀನು ಕಡೆಗಾದಂತೆ ಖಾಲಿ ಜಾಗದಲ್ಲಿ ಒಂದು ಆಪರಿಚಿತ ಗಂಡಸಿನ ಶವ ಬಿದ್ದಿದ್ದು. ಎಡಗೈನಲ್ಲಿ ರೂಪ ಎಂಬ ಹಚ್ಚೆ ಇರುತ್ತದೆ.  ಶವವನ್ನು ನೋಡಿದರೆ ಸಾವಿನ ಬಗ್ಗೆ ಅನುಮಾನವಿರುತ್ತದೆ ಈ ಬಗ್ಗೆ ತಾವು ಸ್ಥಳಕ್ಕೆ ಬಂದು ಕ್ರಮ ಜರುಗಿಸಬೇಕೆಂದು ದಿನಾಂಕ: 22-4-2011 ರಂದು  ಹಳೇಬೂದೂರು ಗ್ರಾಮದ ವಾಸಿ ಶ್ರೀಮಾನ್ ಟೀ ಸ್ಟಾಲ್ ಮಾಲೀಕ ಮಾದೇಶ ಬಿನ್ ಲೇಟ್ ಸಿದ್ದಯ್ಯ ರವರು ಮಂಡ್ಯ ಗ್ರಾಮಾಂತರ ಠಾಣೆಗೆ ನೀಡಿದ ಪಿಯರ್ಾದುವಿನ ಮೇರೆಗೆ  ಯು.ಡಿ.ಆರ್. ನಂ. 14/2011 ಕಲಂ 174 (ಸಿ) ಸಿ.ಆರ್.ಪಿ.ಸಿ ರೀತ್ಯ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ವೈದ್ಯರ ಶವ ಪರೀಕ್ಷೆಯ ನಂತರ ಸದರಿ ಪ್ರಕರಣವನ್ನು ಕೊಲೆ ಪ್ರಕರಣವೆಂದು ದಾಖಲಿಸಿ ತನಿಖೆಯನ್ನು ಮುಂದುವರೆಸಿರುತ್ತಾರೆ. 

      ತನಿಖೆಯಲ್ಲಿ ಮೃತ ಅಪರಿಚಿತ ಗಂಡಸಿನ ಶವವು ಬೆಂಗಳೂರು ಯಶವಂತಪುರ ಪೊಲೀಸ್ ಠಾಣಾ ಮೊ.ನಂ. 141/11 ಕಲಂ.ಮನುಷ್ಯ ಕಾಣೆಯಾದ ಪ್ರಕರಣದಲ್ಲಿ ಕಾಣೆಯಾಗಿರುವ ವ್ಯಕ್ತಿ ಮಲ್ಲೇಶ್ರವರ ಚಹರೆ ಗುರುತಿಗೆ ಹೋಲಿಕೆಯಾಗಿದ್ದು ಆ ಮುಖಾಂತರ ಕಾಣೆಯಾಗಿರುವ ವ್ಯಕ್ತಿ ಮಲ್ಲೇಶರವರ ವಾರಸುದಾರರ ದೂರವಾಣಿ ನಂಬರ್ನ್ನು ಪಡೆದುಕೊಂಡು ಕಾಣೆಯಾದ ಮಲ್ಲೇಶನ ತಂದೆ ಶಿವಲಿಂಗಯ್ಯ, ನಿವೃತ್ತ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಬೆಂಗಳೂರು ರವರಿಗೆ ಮೃತ ಅಪರಿಚಿತ ಗಂಡಸಿನ ಚಹರೆ ಮಾಹಿತಿ ತಿಳಿಸಲಾಯಿತು. ನಂತರ ಮೃತನ  ತಂದೆ ಮತ್ತು ಸಂಬಂಧಿಕರಿಂದ ಗುರುತಿಸಿ, ಮೃತ ಮಲ್ಲೇಶ ಬಿನ್ ಸಿ.ಎಲ್.ಶಿವಲಿಂಗಯ್ಯ 33ವರ್ಷ, ಒಕ್ಕಲಿಗರು, ನಂ. 81/48, 10 ನೇ ಮೈನ್, 1 ನೇ ಸ್ಟೇಜ್, 2ನೇ ಪೇಸ್, ಗೋಕುಲ್ ಎಕ್ಸ್ಟೆಷನ್. ಮತ್ತಿಕೆರೆ ಬೆಂಗಳೂರು-54 ನಿವಾಸಿಯಾಗಿರುವುದು ಪತ್ತೆಯಾಗಿರುತ್ತದೆ.

     ಮಾನ್ಯ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಾಗಿದ್ದ ಶ್ರೀ. ಕೌಶಲೇಂದ್ರಕುಮಾರ್ ಐಪಿಎಸ್ ರವರ ಆದೇಶದಂತೆ ದಿ:01-12-2012 ರಂದು ಮಂಡ್ಯ ಗ್ರಾಮಾಂತರ ವೃತ್ತದ ಪ್ರಬಾರವನ್ನು ಪೊಲೀಸ್ ಇನ್ಸ್ಪೆಕ್ಟರ್ ಎನ್.ಸಿ.ನಾಗೇಗೌಡರವರು ವಹಿಸಿಕೊಂಡು, ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಎ.ಎನ್. ರಾಜಣ್ಣ ರವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಮುಂದುವರೆಸಿ, ದಿನಾಂಕಃ 25-01-2013 ರಂದು ಮೃತನ ಸ್ವಂತ ಮಂಜುನಾಥ ಎಂಬುವವನ್ನು ವಿಚಾರಣೆಗೊಳಪಡಿಸಲಾಗಿ, ಆತನು  ಹಳೇ ದ್ವೇಷ ಹಾಗು ತಂದೆ ಮಾಡಿದ ಆಸ್ತಿ ಸಂಪೂರ್ಣ ತಾನೆ ಅನುಭವಿಸಬೇಕೆಂಬ ದುರಾಸೆಯಿಂದ ಈ ಕೆಳಕಂಡ ತನ್ನ ಸ್ನೇಹಿತರೊಡಗೂಡಿ ಮಲ್ಲೇಶನನ್ನು ಕೊಲೆ ಮಾಡುವ ಸಂಚು ರೂಪಿಸಿ, ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾನೆ.  ಈತನ ಸುಳಿವಿನ ಮೇರೆಗೆ ಈ ಕೆಳಕಂಡ ಎಲ್ಲ ಆರೋಪಿಗಳನ್ನು ಅ ದಿನ ರಾತ್ರಿಯೇ ತನಿಖಾದಿಕಾರಿಗಳು ದಸ್ತಗಿರಿ ಮಾಡಿರುತ್ತಾರೆ. 

ಎ1] ಮಂಜುನಾಥ . ಎಲ್,ಎಸ್. ಬಿನ್ ಎಲ್. ಶಿವಲಿಂಗಯ್ಯ, 25 ವರ್ಷ, ಸಾಪ್ಟವೇರ್ ಇಂಜಿನಿಯರ್. ನಂ. 81/48,
       10 ನೇ ಮೈನ್, 1 ನೇ ಸ್ಟೇಜ್, 2ನೇ ಪೇಸ್, ಗೋಕುಲ್ ಎಕ್ಸ್ಟೆಷನ್. ಮತ್ತಿಕೆರೆ (ಯಶವಂತಪುರ ) ಬೆಂಗಳೂರು-54
ಎ2] ಬಸವರಾಜು. ಎನ್. ಕೆ. ಬಿನ್ ಬಿ. ಕೆ  ನಾಗಪ್ಪ, 25 ವರ್ಷ, ಡ್ರೈವರ್ ಕೆಲಸ, ನಂ-139/ಬಿ, ರೈಲ್ವೇ   ಕ್ವಾಟ್ರಾಸ್,    
       ಯಶವಂತಪುರ, ಬೆಂಗಳೂರು-22
ಎ3] ಶ್ರೀಕಾಂತ .ಎಸ್. ಬಿನ್ ಲೇಟ್ ಶ್ರೀನಿವಾಸ್ .ಟಿ. , 25 ವರ್ಷ, ಅಲ್ಲ್ಯೂಮಿನಿಯಂ ಫ್ಯಾಬಿಕೇಶನ್ , ನಂ. 746,
    4 ನೇ ಕ್ರಾಸ್, ಗೋಕುಲ್ ಮೊದಲನೆ ಹಂತ, 2 ನೇ ಫ್ಯಾಸ್, ಗೋಕುಲ್, ಯಶವಂತಪುರ ಬೆಂಗಳೂರು-54
ಎ4] ಸಂತೋಷ ಬಿ.ಎ. ಬಿನ್ ಆನಂದಪ್ಪ , 27 ವರ್ಷ, ಕಾರು ಚಾಲಕ ವೃತ್ತಿ, ನಂ.45/3, 11 ನೇ ಕ್ರಾಸ್, 2ನೇ ಮೆಯಿನ್ ರಸ್ತೆ,
       ಎಲ್.ಸಿ.ಆರ್. ಸ್ಕೂಲ್ ಎದುರು, ಯಶವಂತಪುರ ಬೆಂಗಳೂರು,

       ಮೇಲ್ಕಂಡವರುಗಳು ಮಲ್ಲೇಶನನ್ನು ಕೊಲೆ ಮಾಡಲು ಸಂಚು ರೂಪಿಸಿ ದಿನಾಂಕ: 19-04-2011 ರಂದು ಬೆಂಗಳೂರಿನಿಂದ ಮೈಸೂರು ಕಡೆಗೆ ನಂ. ಕೆಎ-05-ಎನ್-86 ರ ಮಾರುತ್ತಿ ಎಸ್ಟೀಂ ಕಾರಿನಲ್ಲಿ ಮೃತ ಮಲ್ಲೇಶನನ್ನು ಕರೆದುಕೊಂಡು ಬಂದು ಬಲಮುರಿ, ಶ್ರೀರಂಗಪಟ್ಟಣ , ಮೈಸೂರು ಕಡೆಗಳಲ್ಲಿ ಸುತ್ತಾಡಿ ದಿನಾಂಕ: 21/22-04-2011 ರಂದು ಮದ್ಯರಾತ್ರಿ ಕೊಲೆ ಮಾಡಿ, ಕೊಲೆಯನ್ನು ಮರೆಮಾಚಲು ಶವವನ್ನು ಮಂಡ್ಯ ತಾಲ್ಲೂಕು ಹಳೇಬೂದನೂರು ಗ್ರಾಮದ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಿಂದ ಸುಮಾರು 15 ಅಡಿ ಅಂತರದಲ್ಲಿ ಹಳೇಬೂದನೂರು ಗ್ರಾಮದ ರತ್ನಮ್ಮ ರವರ ಜಮೀನು ಕಡೆಗಾದಂತೆ ಬಿಸಾಡಿ ಹೋಗಿದ್ದಾಗಿ ತಿಳಿಸಿರುತ್ತಾರೆ.  ನಾಲ್ಕು ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತದೆ.

ಮೇಲ್ಕಂಡ ಪ್ರಕರಣದ ಪತ್ತೆ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ವೃತ್ತ ನಿರೀಕ್ಷರಾದ ಶ್ರೀ. ಎನ್.ಸಿ.ನಾಗೇಗೌಡ, ಪ್ರೊಬೇಷನರಿ ಪಿ.ಎಸ್.ಐ. ಬ್ಯಾಟರಾಯಗೌಡ, ಸಿಬ್ಬಂದಿಯವರಾದ ಹೇಮಂತಕುಮಾರ್. ರಘುಪ್ರಕಾಶ್, ಮಹೇಶ, ರಾಮಣ್ಣ, ಆನಂದ, ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿಸಿರುತ್ತಾರೆ. 

Press Note Date:27-01-2013


                                                                                            ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
                                                ಮಂಡ್ಯ ಜಿಲ್ಲೆ, ದಿನಾಂಕಃ 27-01-2013.
ಪತ್ರಿಕಾ ಪ್ರಕಟಣೆ

      ದಿನಾಂಕ 06-09-12 ರಂದು ಶ್ರೀ. ಎಸ್.ಜಿ. ಕಾಳೇಗೌಡ ಬಿನ್ ಗೌಡೇಗೌಡ, ಸುಂಕಾತೊಣ್ಣೂರು ಗ್ರಾಮ, ಪಾಂಡವಪುರ ತಾಲ್ಲೋಕು ರವರು ಪಾಂಡವಪುರ ಠಾಣೆಗೆ ಹಾಜರಾಗಿ ತನ್ನ ತಂಗಿಯಾದ ಸುನಂದಾಳು ದಿನಾಂಕ 05-09-12 ರಂದು ಸಂಜೆ 5-00 ಗಂಟೆಯಿಂದ ಕಾಣುತ್ತಿಲ್ಲವೆಂದು ನೀಡಿದ ಪಿಯರ್ಾದುವಿನ ಮೇರೆಗೆ ಹೆಂಗಸು ಕಾಣೆಯಾಗಿದ್ದಾಳೆ ರೀತ್ಯಾ ಪ್ರಕರಣವನ್ನು ಪಾಂಡವಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. 

    ಸದರಿ ಪ್ರಕರಣದ ತನಿಖಾ ಕಾಲದಲ್ಲಿ  ಪಾಂಡವಪುರದ ಠಾಣೆಯ ಪಿಎಸ್ಐ ಶ್ರೀ. ಕೆ.ಮಂಜು ರವರು ಕಾಣೆಯಾದ ಶ್ರೀಮತಿ. ಸುನಂದಳು ಉಪಯೋಗಿಸುತ್ತಿದ್ದ ಮೊಬೈಲ್ನ ಐ.ಎಂ.ಇ.ಐ ನಂಬರ್ನ್ನು ಪಡೆದುಕೊಂಡು, ಅ ಮೊಬೈಲ್ನಲ್ಲಿ ಸಿಮ್ ಅಳವಡಿಸಿಕೊಂಡು ಉಪಯೋಗಿಸುತ್ತಿದ್ದ ಬಗ್ಗೆ ಕಾಲ್ ಡಿಟೈಲ್ಸ್ನ್ನು ಪಡೆದಿದ್ದು, ಮೇಲ್ಕಂಡ ಕಾಲ್ ಡಿಟೈಲ್ನ ಆದಾರದ ಮೇರೆಗೆ ಅದನ್ನು ಉಪಯೋಗಿಸಿರುವ ಸಿಮ್ ಅಸಾಮಿಯಾದ ಮಹೇಂದ್ರ ಬಿನ್ ನಾಗಣ್ಣ @ ನಾಗರಾಜು, ಚಿಕ್ಕಾಡೆ ಗ್ರಾಮ ರವರನ್ನು ದಿನಾಂಕಃ 24-01-2013 ರಂದು ಪತ್ತೆ ಹಚ್ಚಿ ಕರೆದುಕೊಂಡು ಬಂದು ಮೊಬೈಲ್ ಬಗ್ಗೆ ವಿಚಾರ ಮಾಡಲಾಗಿ ಸದರಿಯವರು ತಮ್ಮ ಸ್ವ ಇಚ್ಚಾ ಹೇಳಿಕೆಯಲ್ಲಿ ತನಗೆ ಹಾಗೂ ಆತನ ಸ್ನೇಹಿತ ವಿನೋದನಿಗೆ ಸಾಲ ಇರುತ್ತದೆ ಹಾಗೂ ಕುಡಿಯುವ ಹಾಗು ಹುಡುಗಿಯರ ಚಟ ಇದ್ದು ಸಾಲಗಾರರ ಕಾಟ ಜಾಸ್ತಿಯಾಗಿದ್ದರಿಂದಾಗಿ ಮೇಲ್ಕಂಡ ಸುನಂದಳು ಒಬ್ಬಳೆ ಪ್ರತಿ ದಿವಸ ಸಂಜೆ ಗದ್ದೆಯ ಕಡೆಗೆ ಒಬ್ಳಳೆ ಹೋಗಿ ಬರುತ್ತಿದುದ್ದನ್ನು ಹಾಗೂ ಅವಳ ಕತ್ತಿನಲ್ಲಿ ಯಾವಾಗಲು ಚಿನ್ನದ ಮಾಂಗಲ್ಯದ ಸರ ಇದ್ದುದನ್ನು ನೋಡಿದ್ದ ನಾವು ಹೇಗಾದರು ಮಾಡಿ ಇವಳನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ, ಕೊಲೆ ಮಾಡಿ ಸರವನ್ನು ಮಾರಾಟ ಮಾಡಿ ಸಾಲ ತೀರಿಸಿಕೊಳ್ಳೋಣ ಎಂದು ತಿಮರ್ಾನಿಸಿ ಅದರಂತೆ ದಿನಾಂಕ 05-09-12 ರಂದು ಸುನಂದ ಗದ್ದೆಯ ಕಡೆಗೆ ಹೋದಾಗ ಹಿಂಬಾಲಿಸಿಕೊಂಡು ಹೋಗಿ ಪುಸಲಾಯಿಸಿ ಕಬ್ಬಿನ ಗದ್ದೆಯ ಕಡೆಗೆ ಕರೆದುಕೊಂಡು ಹೋಗಿ ಆಕೆಯನ್ನು ಕೊಲೆ ಮಾಡಿ ಹೆಣವನ್ನು ಹಳ್ಳದ ನೀರಿಗೆ ಬಿಸಾಡಿ ಅವಳ ಬಳಿ ಇದ್ದ ಒಂದು ಮೊಬೈಲ್ ಹ್ಯಾಂಡ್ಸೆಟ್ ಹಾಗೂ 500/- ರೂ ಹಣವನ್ನು ತಾನು ಇಟ್ಟುಕೊಂಡಿದ್ದಾಗಿ ಮಾಂಗಲ್ಯದ ಸರವನ್ನು ವಿನೋದ ಇಟ್ಟುಕೊಂಡಿದ್ದು ನಂತರ ಅದನ್ನು ಮಾರಾಟ ಮಾಡಲು ಪಾಂಡವಪುರದ ಸೇಟು ಬಳಿ ಹೋದಾಗ ಅದು ನಕಲಿ ಎಂದು ತಿಳಿದ ಮೇಲೆ ಅದನ್ನು ವಿನೋದನ ಮನೆಯಲ್ಲಿ ಇಟ್ಟುಕೊಂಡಿದ್ದು ಮೊಬೈಲ್ ತನ್ನ ಬಳಿ ಇರುವುದಾಗಿ ತಿಳಿಸಿರುತ್ತಾನೆ.

ನಂತರ ಸದರಿ ಪ್ರಕರಣದಲ್ಲಿ ಈಗಾಗಲೇ ದಾಖಲಾಗಿರುವ ಮೊ.ನಂ. 323/2012 ಕಲಂ ಹೆಂಗಸು ಕಾಣೆಯಾಗಿದ್ದಾಳೆ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ತಯಾರಿಸಿ ಹೆಂಗಸು ಕಾಣೆಯಾಗಿದ್ದಾಳೆ ಎಂಬದರ ಬದಲು ಕಲಂ 302, 201, 404 ಕೂಡ 34 ಐಪಿಸಿಯನ್ನಾಗಿ ಬದಲಾವಣೆ ಮಾಡಿಕೊಂಡಿರುವ ಬಗ್ಗೆ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಗು ಹಿರಿಯ ಅದಿಕಾರಿಗಳಿಗೆ ವರದಿಯನ್ನು ಸಲ್ಲಿಸಿಕೊಂಡು ತನಿಖೆ ಮುಂದುವರೆಸಿ,  ಆರೋಪಿ ಮಹೇಂದ್ರನನ್ನು ದಸ್ತಗಿರಿ ಮಾಡಿ, ಆತನು ತನ್ನ ಮನೆಯಲ್ಲಿಟ್ಟಿದ್ದ ಡ್ಯೂಯಲ್ ಸಿಮ್ನ ಒಂದು ಕಾರ್ಬನ್ ಮೊಬೈಲ್ ಅಮಾನತ್ತು ಪಡಿಸಿಕೊಂಡಿರುತ್ತದೆ.      
                                                        
ಮತ್ತೊಬ್ಬ ಆರೋಪಿ ವಿನೋದ ಎಂಬುವವನ್ನು ಸಹ ದಿನಾಂಕಃ 24-01-2013 ರಂದು ಮದ್ಯಾಹ್ನ ದಸ್ತಗಿರಿ ಮಾಡಿ, ಕೂಲಂಕುಶವಾಗಿ ವಿಚಾರ ಮಾಡಿ ಆತನು ನೀಡಿದ ಸ್ವ ಇಚ್ಚಾ ಹೇಳಿಕೆಯನ್ನು ಪಡೆದುಕೊಂಡಿದ್ದು, ಆತನು ಸಹ ಈ ಕೊಲೆಯಲ್ಲಿ ಬಾಗಿಯಾಗಿರುವುದಾಗಿ ಹಾಗೂ ತನ್ನ ಮನೆಯ ಅಟ್ಟದ ಮೇಲೆ ಮೃತೆಯ ತಾಳಿ ಸಮೇತ ಇರುವ ಚೈನ್ನ್ನು ಇಟ್ಟಿರುವುದಾಗಿ ತಿಳಿಸಿ, ಅ ವಾಸದ ಮನೆಗೆ ಕರೆದುಕೊಂಡು ಹೋಗಿ ತಮ್ಮ ಮನೆಯ ಅಟ್ಟದ ಮೇಲೆ ಇಟ್ಟಿದ್ದ ತಾಳಿ ಸಮೇತ ಇರುವ ಮಾಂಗಲ್ಯದ ಸರವನ್ನು ಹಾಜರು ಪಡಿಸಿದ್ದನ್ನು ತನಿಖಾದಿಕಾರಿಗಳು ಅಮಾನತ್ತು ಪಡಿಸಿಕೊಂಡಿರುತ್ತಾರೆ.   

    ಸದರಿ ಪ್ರಕರಣದಲ್ಲಿ ಆರೋಪಿತರು ತೋರಿಸಿದ ಕೃತ್ಯ ನಡೆದ ಜಾಗಕ್ಕೆ ತನಿಖಾದಿಕಾರಿಗಳು ಸಿಬ್ಬಂದಿಗಳ ಸಮೇತ ತೆರಳಿ ಮೃತೆಯ ಶವದ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ. ಈವರೆಗೂ ಮೇಲ್ಕಂಡ ಮೃತೆ ಸುನಂದಳ ಶವ ದೊರಕಿರುವುದಿಲ್ಲ. ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಆದೇಶಿಸಿರುತ್ತದೆ.  

      ನಾಲ್ಕು ತಿಂಗಳಿನಿಂದ ಪತ್ತೆಯಾಗದೇ ಇದ್ದ ಮೇಲ್ಕಂಡ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪಾಂಡವಪುರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಕೆ.ಎಂ.ಮಂಜು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.