Moving text

Mandya District Police

DAILY CRIME REPORT DATED : 09-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಹುಡುಗಿ ಕಾಣೆಯಾದ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಕೊಲೆ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಹುಡುಗಿ ಕಾಣೆಯಾದ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 41/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 09-02-2013 ರಂದು ಪಿರ್ಯಾದಿ ಕುಮಾರ್. ಬಿನ್. ಲೇ|| ರಾಮಸ್ವಾಮಿ, ಗುತ್ತಲುರಸ್ತೆ, ಮಂಡ್ಯ ನಗರ ರವರು ನೀಡಿದ ದೂರಿನ ವಿವರವೇನೆಂದರೆ ನೇತ್ರಾವತಿ ಕಾಲೇಜಿಗೆಂದು ಹೋದವಳು ವಾಪಸ್ಸು ಇಲ್ಲಿಯವರೆವಿಗೂ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. 498[ಎ]-323-504-506. ಐ.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ಕವಿತ ಎಂ,ಎಸ್, ಕೋಂ. ಸತೀಶ, 25ವರ್ಷ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಅವರ ಗಂಡ ಸತೀಶ.ಎಸ್ ಬಿನ್. ಶಿವ  ಲಿಂಗಯ್ಯ, ಮಂಡ್ಯ ಸಿಟಿ ರವರು ಪಿರ್ಯಾದಿಯವರ ಮನೆಯ ಹತ್ತಿರ ಬಂದು ಹಣ ತೆಗೆದುಕೊಂಡು ಬಂದರೆ ನನ್ನ ಜೊತೆ ಬಾ ಎಂದು ಗಲಾಟೆ ಮಾಡಿ ಪಿರ್ಯಾದಿಗೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದು ನೋವುಂಟು ಮಾಡಿ ಬಾಯಿಗೆ ಬಂದಂತೆ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕೊಲೆ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 302 ಐ.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ರಂಗಸ್ವಾಮಿ ಪಿ.ಎಸ್.ಐ. ಟೌನ್ ಠಾಣೆ, ಕೆ.ಆರ್. ಪೇಟೆ ರವರು ನೀಡಿದ ದೂರಿನ ವಿವರವೇನೆಂದರೆ ನಂಜುಂಡೇಗೌಡನನ್ನು ಯಾರೋ ದುಷ್ಕಮರ್ಿಗಳು ಉಸಿರುಗಟ್ಟಿಸಿ ನೇಣು ಹಾಕಿರುವುದ್ದರಿಂದ ಇದು ಕೊಲೆ ಎಂದು ನ್ಯಾಯಾಲಯವು ಪರಿಗಣಿಸಬೇಕೆಂದು ಸ್ವತಃ ವರದಿ ತಯಾರು ಮಾಡಿ ನಿವೇದಿಸಿಕೊಂಡಿರುತ್ತೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

 ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 (ಸಿ) ಸಿ.ಆರ್.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ಶಾಂತಮ್ಮ ಕೋಂ. ಲೇ|| ಸುಬ್ಬಯ್ಯ, ಚಿಕ್ಕೋನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಸುಬ್ಬಯ್ಯ ಬಿನ್ ಚನ್ನಯ್ಯ 45 ವರ್ಷ ಪರಿಶಿಷ್ಟಜಾತಿ ರವರು ಮೂತ್ರಪಿಂಡ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷವನ್ನು ಸೇವನೆ ಮಾಡಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 64/13 ಕಲಂ. 458-457-380-511 ಐ.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ಮಹಾಲಿಂಗೇ ಗೌಡ ಬಿನ್ ಲೇಟ್. ಕುಳ್ಳೀರೇಗೌಡ, ಬನಘಟ್ಟ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ನಮ್ಮ ಮನೆ ಅಲ್ಲದೆ ಲೇಟ್. ಲಿಂಗರಾಜು ಮತ್ತು ಚಿಕ್ಕೀರೇಗೌಡರವರ ಮನೆಯ ಚಿಲಕವನ್ನು ಮೀಟಿ ಕಳ್ಳತನಕ್ಕೆ ಪ್ರಯತ್ನಿಸಿದ್ದು, ನನ್ನ ಮೇಲೆ ಹಲ್ಲೆ ಮಾಡಿ ನನ್ನ ಮಗನ ಜೇಬಿನಲ್ಲಿ ಕಳ್ಳತನ ಮಾಡಿ, ಪಕ್ಕದ ಮನೆಯನ್ನು ಕಳ್ಳತನ ಮಾಡಲು ಪ್ರಯತ್ನಿಸಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment