Moving text

Mandya District Police

DAILY CRIME REPORT DATED : 28-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 28-01-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನೆ/ಶಾಲೆ ಕಳ್ಳತನ ಪ್ರಕರಣಗಳು,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನೆ/ಶಾಲೆ ಕಳ್ಳತನ ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 457-380 ಐ.ಪಿ.ಸಿ.

ದಿನಾಂಕ: 28-01-13 ರಂದು ಪಿರ್ಯಾದಿ ಲೋಕೇಶ, ಹಳೆ ಕಿಕ್ಕೇರಿ ರಸ್ತೆ, ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮನೆಯ ಬಾಗಿಲು ತೆರೆದಿರುವುದು ಕಂಡಿತು ನಂತರ ಪಿರ್ಯಾದಿ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಒಳಬಾಗ ಹಾಲ್ನಲ್ಲಿ ಇಟ್ಟಿದ್ದ ಟಿವಿ ಷೋಕೆಸ್ ಹೊಡೆದು ಹಾಕಿದ್ದು ಮತ್ತು ಗೋಡೆ ಬೀರು ತೆಗೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದು ಬೀರುವನ್ನು ಯಾವುದೋ ಆಯುದದಿಂದ ಮೀಟಿ ಬೀರುವಿನಲ್ಲಿದ್ದ ಸುಮಾರು 22 ಸಾವಿರ ಬೆಲೆ ಬಾಳುವ 1 ಚಿನ್ನದ ಚೈನು. ಹಾಗು ಒಂದು ಜೊತೆ ಬೆಳ್ಳಿ ಚೈನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 457-380 ಐ.ಪಿ.ಸಿ.

ದಿನಾಂಕ: 28-01-13 ರಂದು ಪಿರ್ಯಾದಿ ಮಹದೇವೇಗೌಡ. ಎನ್. ಮುಖ್ಯೋಪಾಧ್ಯಾಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಡಾಲ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಕ್ಷರ ದಾಸೋಹ ಕೊಠಡಿಯ ಬಾಗಿಲಿಗೆ ಹಾಕಿದ್ದ ಬೀಗ ಹೊಡೆದು ಒಂದು ಸಿಲಿಂಡರ್ ಮತ್ತು ಒಂದು ಚಿಕ್ಕ ಗ್ಯಾಸ್ ಒಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾಗಿರುವ ವಸ್ತುಗಳ ಬೆಲೆ ಅಂದಾಜು 2250-00 ರೂಗಳಾಗಿದ್ದು, ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 28-01-2013 ರಂದು ಪಿರ್ಯಾದಿ ಮುಶ್ರಫ್ ಜಾನ್ ಕೋಂ. ರಫಿ ಮಹಮ್ಮದ್, 55 ವರ್ಷ, ಮುಖ್ಯ ಶಿಕ್ಷಕಿ, ಸರ್ಕಾರಿ  ಫ್ರೌಡ ಶಾಲೆ,  ಲಕ್ಷ್ಮೀಸಾಗರ ಗ್ರಾಮ,  ಮೇಲುಕೋಟೆ  ಹೋಬಳಿ ಪಾಂಡವಪುರ  ತಾಲ್ಲೋಕು, ಹಾಲಿ ವಾಸ ಮೈಸೂರು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 28-01-2013 ರಂದು ಪಿರ್ಯಾದಿಯವರು ಕೊಟ್ಟ ಲಿಖಿತ ದೂರೆನೆಂದರೆ ಸರ್ಕಾರಿ  ಪ್ರೌಢಶಾಲೆ ಲಕ್ಷ್ಮೀಸಾಗರ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆಂದು 7(ಏಳು) ಸಿಲಿಂಡರ್ ಗಳು  ಸರಬರಾಜು ಮಾಡಿದ್ದು ದಿನಾಂಕಃ 27-01-2013 ರ ಭಾನುವಾರ ರಾತ್ರಿ ಅಡುಗೆ ಮನೆಯ ಬೀಗ ಮತ್ತು ಬಾಗಿಲನ್ನು ಒಡೆದು ಎರಡು ಸಿಲಿಂಡರ್ಗಳು ಹಾಗೂ ಒಂದು ಸ್ಟೀಲ್ ಬಕೆಟ್, ಒಂದು ದೊಡ್ಡ ನೀರು ತುಂಬುವ ಡ್ರಮ್  [ ಎರಡು ಸಿಲಿಂಡರ್ ಗಳು ಭರ್ತಿಯಾಗಿದ್ದವು ] ಕಳುವಾಗಿದ್ದು  ದಿನಾಂಕಃ 28-01-2013 ರ ಬೆಳಿಗ್ಗೆ 08-15 ಕ್ಕೆ ನಮ್ಮ ಗಮನಕ್ಕೆ ಬಂದಿದ್ದು ಅವುಗಳನ್ನು ಹುಡುಕಿಸಿ ಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 143,504,355 ಕೂಡ 149 ಐ.ಪಿ.ಸಿ. ಹಾಗು 3 ಸಬ್ ಸಿಐಎಸ್ (11) ಎಸ್.ಸಿ./ಎಸ್.ಟಿ. ಕಾಯಿದೆ 1989.

       ದಿನಾಂಕ: 28-01-2013 ರಂದು ಪಿರ್ಯಾದಿ ದೇವಿರಮ್ಮ ಕೊಂ. ಶಿವಣ್ಣ, 40 ವರ್ಷ, ಪರಿಶಿಷ್ಟ ಜಾತಿ, ಕಡಿಲುವಾಗಿಲು ಗ್ರಾಮ ಪಂಚಾಯ್ತಿ ಸದಸ್ಯರು ಹಾಗು ಮಾಜೀ ಅಧ್ಯಕ್ಷರು, ಮಾದರಹಳ್ಳಿ ಗ್ರಾಮ ಪಂಚಾಯ್ತಿ, ಮದ್ದೂರು ತಾಲ್ಲೂಕು ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಾಗಿದು, ತಮ್ಮ ಕ್ಷೇತ್ರದಲ್ಲಿನ ಸ್ವಚ್ಚತೆ ಮತ್ತು ನೈರ್ಮಲತೆಯ ಪರಿಶೀಲನೆಗಾಗಿ ದಿನಾಂಕ;28-01-13 ರಂದು ಬೆಳಿಗ್ಗೆ 8.30 ಗಂಟೆಯಿಂದ ಬೆಳಿಗ್ಗೆ 9.00 ಗಂಟೆ ಸಮುದಾಯದಲ್ಲಿ ಕಡಿಲುವಾಗಿಲು ಗ್ರಾಮದ ಮಸಣಮ್ಮ ದೇವಸ್ಥಾನದ ಬೀದಿಯಲ್ಲಿ ಪರಿಶೀಲನೆಗೆ ಹೋಗುತ್ತಿದ್ದಾಗ ಆರೋಪಿಗಳಾದ 1]ಬೋರಯ್ಯ ಬಿನ್. ಚಿಕ್ಕಬೋರಯ್ಯ ಇತರೆ 6 ಜನರು ಎಲ್ಲರೂ ಕಡಿಲುವಾಗಿಲು ಗ್ರಾಮ, ಮದ್ದೂರು ತಾಲ್ಲೂಕು, ರವರುಗಳು ಪಿರ್ಯಾದಿಯವರನ್ನು ಉದ್ದೆಶಿಸಿ ಅವಾಚ್ಯವಾಗಿ ಬೈಯ್ದು ಚಪ್ಪಲಿ ತೋರಿಸಿ ಜಾತಿ ನಿಂದನೆ ಮಾಡಿರುತ್ತಾರೆ ಎಂಬಿತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 27-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-01-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ಅಪಹರಣ ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವಾಹನ ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ರಸ್ತೆ ಅಪಘಾತ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 279-304(ಎ) ಐಪಿಸಿ ಕೂಡ 187 ಐ.ಎಂ.ವಿ. ಕಾಯಿದೆ.

ದಿನಾಂಕ: 27-01-2013 ರಂದು ಪಿರ್ಯಾದಿ ಎನ್.ಆನಂದ ಬಿನ್ ನಟರಾಜು ಮಾರುತಿನಗರ ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. ಕೆಎ-11 ಟಿ-1634 ಟ್ರಾಕ್ಟರ್ ಚಾಲಕ (ಹೆಸರು ವಿಳಾಸ ತಿಳಿದಿಲ್ಲ) ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಹಿಂದಿನಿಂದ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ರಾಜೇಶನ ತಲೆಗೆ ತೀವ್ರ ತರಹದ ಪೆಟ್ಟಾಗಿ ಕೆ.ಆರ್.ಪೇಟೆ ಆಸ್ಪತ್ರೆಗೆ ಸೇರಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಆದ್ದರಿಂದ ಅಪಘಾತ ಉಂಟು ಮಾಡಿದ ಕೆಎ-11 ಟಿ-1634 ರ ಟಾಕ್ಟರ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಕೋರಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  



ಅಪಹರಣ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 363-366 (ಎ) ಐ.ಪಿ.ಸಿ.

       ದಿನಾಂಕ: 27-01-2013 ರಂದು ಪಿರ್ಯಾದಿ ಜಯಮ್ಮ ಕೋಂ. ರಮೇಶಚಾರಿ. ಹೊಸಕನ್ನಂಬಾಡಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ಅಂಗಡಿಯಲ್ಲಿ ಸಾಮಾನು ತರಲು ಹೋಗಿದ್ದಾಗ, ನೆಲಮನೆ ಗ್ರಾಮದ ಆರೋಪಿ ಶ್ರೀಕಂಠ ಬಿನ್ ಸುಬ್ಬಾಚಾರಿ, ನೆಲಮನೆ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ,  ಕಾನೂನು ರೀತ್ಯಾ ಕ್ರಮ ಕೈಗೊಂಡು, ನನ್ನ ಮಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

        ದಿನಾಂಕ: 27-01-2013 ರಂದು ಪಿರ್ಯಾದಿ ಪಾಲಲೋಚನ ಬಿನ್. ಗಂಗಾಧರಯ್ಯ, 4 ನೇ ಕ್ರಾಸ್, ಸಿದ್ದಾರ್ಥನಗರ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ಅಂತಿಮ ಬಿ.ಎ. ವಿದ್ಯಾಥರ್ಿನಿ ರವರು ದಿನಾಂಕ:: 22-01-2013 ರಂದು ಸಂಜೆ 04-00 ಗಂಟೆೆಯಲ್ಲಿ ಮಳವಳ್ಳಿ ಟೌನ್ ನಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 27-01-2013 ರಂದು ಪಿರ್ಯಾದಿ ನಾಗರಾಜು ಬಿನ್. ರಾಮಣ್ಣ ಮಂಡ್ಯ ಸಿಟಿ, ಗೂಬೇಹಳ್ಳ, 7 ನೇ ಕ್ರಾಸ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗಳು ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುವ ನಮ್ಮ ಮಗಳು ಅನಿತಾಳನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ವಾಹನ ಕಳವು ಪ್ರಕರಣ :

 ಹಲಗೂರು ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 379 ಐ.ಪಿ.ಸಿ.

ದಿನಾಂಕ: 27-01-2013 ರಂದು ಪಿರ್ಯಾದಿ ಸಿ.ಎಸ್.ಡಾಲಿ ಬಿನ್ ಸುಬ್ಬಯ್ಯ, ಹೆಚ್.ಎಸ್.ಆರ್ ಲೇಔಟ್, ಮಡಿವಾಳ ಬೆಂಗಳೂರು-79 ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ತನ್ನ ಬಾಬ್ತು ಕೆಎ-51, ಜಡ್-7839 ಮಹೀಂದ್ರಾ ಜೈಲೋ ಕಾರಿನಲ್ಲಿ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದು ಕಾರ್ ನಿಲ್ಲಿಸಿ ಕಾವೇರಿ ನದಿಯ ಹೊಳೆ ಕಡೆ ಹೋಗಿದ್ದಾಗ ಯಾರೋ ದುಷ್ಕಮರ್ಿಗಳು ಕಾರಿನ ಗ್ಲಾಸ್ಗಳನ್ನು ಹೊಡೆದು ಕಾರಿನಲ್ಲಿದ್ದ ಮೊಬೈಲ್ಗಳು, ಕ್ರೆಡಿಟ್ ಕಾಡರ್್ಗಳು, ಡೆಬಿಟ್ ಕಾಡರ್್ಗಳು, ಆರ್.ಸಿ ಬುಕ್, ಡಿ.ಎಲ್, ನಗದು 13,500/- ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 27-01-2013 ರಂದು ಪಿರ್ಯಾದಿ ವಿ.ಎಂ ಗಂಗಾಧರನ್ ಬಿನ್ ಮೋಹನ್, ಸಿವಿಲ್ ಇಂಜಿನಿಯರ್, ಮದುರೈ, ತಮಿಳುನಾಡು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಶಿವನಸಮುದ್ರದಲ್ಲಿ ಬಿ.ಡಬ್ಯೂ.ಎಸ್.ಎಸ್.ಬಿ.  ಕಾಮಗಾರಿಯನ್ನು ಕಂಟ್ರಾಕ್ಟ ಪಡೆದುಕೊಂಡು ನಿರ್ವಹಿಸುತ್ತಿದ್ದು, ಇವರ ಬಳಿ ಕೂಲಿಕೆಲಸ ಮಾಡಿಕೊಂಡಿದ್ದ ಲಿಂಗುಡು ಪ್ರಜಾ @ ಕೃಷ್ಣ, ಅಸ್ಸಾಂ ರಾಜ್ಯ ರವರು ರಾತ್ರಿವೇಳೆಯಲ್ಲಿ ಮಲವಿಸರ್ಜನೆಗೆ ಹೋಗಿ ನೀರು ತೆಗೆದುಕೊಳ್ಳಲು ಚಾನೆಲ್ಗೆ ಹೋದಾಗ ಕಾಲು ಜಾರಿ ಕೊಚ್ಚಿಕೊಂಡು ಸತ್ತುಹೋಗಿರುತ್ತಾನೆ. ಆದ್ದರಿಂದ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರುನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

Press Note MDY RL 27012013


ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ದಿನಾಂಕಃ 27-01-2013.

ಪತ್ರಿಕಾ ಪ್ರಕಟಣೆ 

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ  49/2012 ರ ಕೊಲೆ ಪ್ರಕರಣದ ಪತ್ತೆ ಬಗ್ಗೆ.





     ದಿನಾಂಕಃ 22-04-2011 ರಂದು ಬೆಳಿಗ್ಗೆ ಮಂಡ್ಯ ತಾಲ್ಲೂಕು ಹಳೇಬೂದನೂರು ಗ್ರಾಮದ ಹತ್ತಿರ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಿಂದ ಸುಮಾರು 15 ಅಡಿ ಅಂತರದಲ್ಲಿ ಹಳೇಬೂದನೂರು ಗ್ರಾಮದ ರತ್ನಮ್ಮರವರ ಜಮೀನು ಕಡೆಗಾದಂತೆ ಖಾಲಿ ಜಾಗದಲ್ಲಿ ಒಂದು ಆಪರಿಚಿತ ಗಂಡಸಿನ ಶವ ಬಿದ್ದಿದ್ದು. ಎಡಗೈನಲ್ಲಿ ರೂಪ ಎಂಬ ಹಚ್ಚೆ ಇರುತ್ತದೆ.  ಶವವನ್ನು ನೋಡಿದರೆ ಸಾವಿನ ಬಗ್ಗೆ ಅನುಮಾನವಿರುತ್ತದೆ ಈ ಬಗ್ಗೆ ತಾವು ಸ್ಥಳಕ್ಕೆ ಬಂದು ಕ್ರಮ ಜರುಗಿಸಬೇಕೆಂದು ದಿನಾಂಕ: 22-4-2011 ರಂದು  ಹಳೇಬೂದೂರು ಗ್ರಾಮದ ವಾಸಿ ಶ್ರೀಮಾನ್ ಟೀ ಸ್ಟಾಲ್ ಮಾಲೀಕ ಮಾದೇಶ ಬಿನ್ ಲೇಟ್ ಸಿದ್ದಯ್ಯ ರವರು ಮಂಡ್ಯ ಗ್ರಾಮಾಂತರ ಠಾಣೆಗೆ ನೀಡಿದ ಪಿಯರ್ಾದುವಿನ ಮೇರೆಗೆ  ಯು.ಡಿ.ಆರ್. ನಂ. 14/2011 ಕಲಂ 174 (ಸಿ) ಸಿ.ಆರ್.ಪಿ.ಸಿ ರೀತ್ಯ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ವೈದ್ಯರ ಶವ ಪರೀಕ್ಷೆಯ ನಂತರ ಸದರಿ ಪ್ರಕರಣವನ್ನು ಕೊಲೆ ಪ್ರಕರಣವೆಂದು ದಾಖಲಿಸಿ ತನಿಖೆಯನ್ನು ಮುಂದುವರೆಸಿರುತ್ತಾರೆ. 

      ತನಿಖೆಯಲ್ಲಿ ಮೃತ ಅಪರಿಚಿತ ಗಂಡಸಿನ ಶವವು ಬೆಂಗಳೂರು ಯಶವಂತಪುರ ಪೊಲೀಸ್ ಠಾಣಾ ಮೊ.ನಂ. 141/11 ಕಲಂ.ಮನುಷ್ಯ ಕಾಣೆಯಾದ ಪ್ರಕರಣದಲ್ಲಿ ಕಾಣೆಯಾಗಿರುವ ವ್ಯಕ್ತಿ ಮಲ್ಲೇಶ್ರವರ ಚಹರೆ ಗುರುತಿಗೆ ಹೋಲಿಕೆಯಾಗಿದ್ದು ಆ ಮುಖಾಂತರ ಕಾಣೆಯಾಗಿರುವ ವ್ಯಕ್ತಿ ಮಲ್ಲೇಶರವರ ವಾರಸುದಾರರ ದೂರವಾಣಿ ನಂಬರ್ನ್ನು ಪಡೆದುಕೊಂಡು ಕಾಣೆಯಾದ ಮಲ್ಲೇಶನ ತಂದೆ ಶಿವಲಿಂಗಯ್ಯ, ನಿವೃತ್ತ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಬೆಂಗಳೂರು ರವರಿಗೆ ಮೃತ ಅಪರಿಚಿತ ಗಂಡಸಿನ ಚಹರೆ ಮಾಹಿತಿ ತಿಳಿಸಲಾಯಿತು. ನಂತರ ಮೃತನ  ತಂದೆ ಮತ್ತು ಸಂಬಂಧಿಕರಿಂದ ಗುರುತಿಸಿ, ಮೃತ ಮಲ್ಲೇಶ ಬಿನ್ ಸಿ.ಎಲ್.ಶಿವಲಿಂಗಯ್ಯ 33ವರ್ಷ, ಒಕ್ಕಲಿಗರು, ನಂ. 81/48, 10 ನೇ ಮೈನ್, 1 ನೇ ಸ್ಟೇಜ್, 2ನೇ ಪೇಸ್, ಗೋಕುಲ್ ಎಕ್ಸ್ಟೆಷನ್. ಮತ್ತಿಕೆರೆ ಬೆಂಗಳೂರು-54 ನಿವಾಸಿಯಾಗಿರುವುದು ಪತ್ತೆಯಾಗಿರುತ್ತದೆ.

     ಮಾನ್ಯ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಾಗಿದ್ದ ಶ್ರೀ. ಕೌಶಲೇಂದ್ರಕುಮಾರ್ ಐಪಿಎಸ್ ರವರ ಆದೇಶದಂತೆ ದಿ:01-12-2012 ರಂದು ಮಂಡ್ಯ ಗ್ರಾಮಾಂತರ ವೃತ್ತದ ಪ್ರಬಾರವನ್ನು ಪೊಲೀಸ್ ಇನ್ಸ್ಪೆಕ್ಟರ್ ಎನ್.ಸಿ.ನಾಗೇಗೌಡರವರು ವಹಿಸಿಕೊಂಡು, ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಎ.ಎನ್. ರಾಜಣ್ಣ ರವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಮುಂದುವರೆಸಿ, ದಿನಾಂಕಃ 25-01-2013 ರಂದು ಮೃತನ ಸ್ವಂತ ಮಂಜುನಾಥ ಎಂಬುವವನ್ನು ವಿಚಾರಣೆಗೊಳಪಡಿಸಲಾಗಿ, ಆತನು  ಹಳೇ ದ್ವೇಷ ಹಾಗು ತಂದೆ ಮಾಡಿದ ಆಸ್ತಿ ಸಂಪೂರ್ಣ ತಾನೆ ಅನುಭವಿಸಬೇಕೆಂಬ ದುರಾಸೆಯಿಂದ ಈ ಕೆಳಕಂಡ ತನ್ನ ಸ್ನೇಹಿತರೊಡಗೂಡಿ ಮಲ್ಲೇಶನನ್ನು ಕೊಲೆ ಮಾಡುವ ಸಂಚು ರೂಪಿಸಿ, ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾನೆ.  ಈತನ ಸುಳಿವಿನ ಮೇರೆಗೆ ಈ ಕೆಳಕಂಡ ಎಲ್ಲ ಆರೋಪಿಗಳನ್ನು ಅ ದಿನ ರಾತ್ರಿಯೇ ತನಿಖಾದಿಕಾರಿಗಳು ದಸ್ತಗಿರಿ ಮಾಡಿರುತ್ತಾರೆ. 

ಎ1] ಮಂಜುನಾಥ . ಎಲ್,ಎಸ್. ಬಿನ್ ಎಲ್. ಶಿವಲಿಂಗಯ್ಯ, 25 ವರ್ಷ, ಸಾಪ್ಟವೇರ್ ಇಂಜಿನಿಯರ್. ನಂ. 81/48,
       10 ನೇ ಮೈನ್, 1 ನೇ ಸ್ಟೇಜ್, 2ನೇ ಪೇಸ್, ಗೋಕುಲ್ ಎಕ್ಸ್ಟೆಷನ್. ಮತ್ತಿಕೆರೆ (ಯಶವಂತಪುರ ) ಬೆಂಗಳೂರು-54
ಎ2] ಬಸವರಾಜು. ಎನ್. ಕೆ. ಬಿನ್ ಬಿ. ಕೆ  ನಾಗಪ್ಪ, 25 ವರ್ಷ, ಡ್ರೈವರ್ ಕೆಲಸ, ನಂ-139/ಬಿ, ರೈಲ್ವೇ   ಕ್ವಾಟ್ರಾಸ್,    
       ಯಶವಂತಪುರ, ಬೆಂಗಳೂರು-22
ಎ3] ಶ್ರೀಕಾಂತ .ಎಸ್. ಬಿನ್ ಲೇಟ್ ಶ್ರೀನಿವಾಸ್ .ಟಿ. , 25 ವರ್ಷ, ಅಲ್ಲ್ಯೂಮಿನಿಯಂ ಫ್ಯಾಬಿಕೇಶನ್ , ನಂ. 746,
    4 ನೇ ಕ್ರಾಸ್, ಗೋಕುಲ್ ಮೊದಲನೆ ಹಂತ, 2 ನೇ ಫ್ಯಾಸ್, ಗೋಕುಲ್, ಯಶವಂತಪುರ ಬೆಂಗಳೂರು-54
ಎ4] ಸಂತೋಷ ಬಿ.ಎ. ಬಿನ್ ಆನಂದಪ್ಪ , 27 ವರ್ಷ, ಕಾರು ಚಾಲಕ ವೃತ್ತಿ, ನಂ.45/3, 11 ನೇ ಕ್ರಾಸ್, 2ನೇ ಮೆಯಿನ್ ರಸ್ತೆ,
       ಎಲ್.ಸಿ.ಆರ್. ಸ್ಕೂಲ್ ಎದುರು, ಯಶವಂತಪುರ ಬೆಂಗಳೂರು,

       ಮೇಲ್ಕಂಡವರುಗಳು ಮಲ್ಲೇಶನನ್ನು ಕೊಲೆ ಮಾಡಲು ಸಂಚು ರೂಪಿಸಿ ದಿನಾಂಕ: 19-04-2011 ರಂದು ಬೆಂಗಳೂರಿನಿಂದ ಮೈಸೂರು ಕಡೆಗೆ ನಂ. ಕೆಎ-05-ಎನ್-86 ರ ಮಾರುತ್ತಿ ಎಸ್ಟೀಂ ಕಾರಿನಲ್ಲಿ ಮೃತ ಮಲ್ಲೇಶನನ್ನು ಕರೆದುಕೊಂಡು ಬಂದು ಬಲಮುರಿ, ಶ್ರೀರಂಗಪಟ್ಟಣ , ಮೈಸೂರು ಕಡೆಗಳಲ್ಲಿ ಸುತ್ತಾಡಿ ದಿನಾಂಕ: 21/22-04-2011 ರಂದು ಮದ್ಯರಾತ್ರಿ ಕೊಲೆ ಮಾಡಿ, ಕೊಲೆಯನ್ನು ಮರೆಮಾಚಲು ಶವವನ್ನು ಮಂಡ್ಯ ತಾಲ್ಲೂಕು ಹಳೇಬೂದನೂರು ಗ್ರಾಮದ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಿಂದ ಸುಮಾರು 15 ಅಡಿ ಅಂತರದಲ್ಲಿ ಹಳೇಬೂದನೂರು ಗ್ರಾಮದ ರತ್ನಮ್ಮ ರವರ ಜಮೀನು ಕಡೆಗಾದಂತೆ ಬಿಸಾಡಿ ಹೋಗಿದ್ದಾಗಿ ತಿಳಿಸಿರುತ್ತಾರೆ.  ನಾಲ್ಕು ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತದೆ.

ಮೇಲ್ಕಂಡ ಪ್ರಕರಣದ ಪತ್ತೆ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ವೃತ್ತ ನಿರೀಕ್ಷರಾದ ಶ್ರೀ. ಎನ್.ಸಿ.ನಾಗೇಗೌಡ, ಪ್ರೊಬೇಷನರಿ ಪಿ.ಎಸ್.ಐ. ಬ್ಯಾಟರಾಯಗೌಡ, ಸಿಬ್ಬಂದಿಯವರಾದ ಹೇಮಂತಕುಮಾರ್. ರಘುಪ್ರಕಾಶ್, ಮಹೇಶ, ರಾಮಣ್ಣ, ಆನಂದ, ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿಸಿರುತ್ತಾರೆ. 

Press Note Date:27-01-2013


                                                                                            ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
                                                ಮಂಡ್ಯ ಜಿಲ್ಲೆ, ದಿನಾಂಕಃ 27-01-2013.
ಪತ್ರಿಕಾ ಪ್ರಕಟಣೆ

      ದಿನಾಂಕ 06-09-12 ರಂದು ಶ್ರೀ. ಎಸ್.ಜಿ. ಕಾಳೇಗೌಡ ಬಿನ್ ಗೌಡೇಗೌಡ, ಸುಂಕಾತೊಣ್ಣೂರು ಗ್ರಾಮ, ಪಾಂಡವಪುರ ತಾಲ್ಲೋಕು ರವರು ಪಾಂಡವಪುರ ಠಾಣೆಗೆ ಹಾಜರಾಗಿ ತನ್ನ ತಂಗಿಯಾದ ಸುನಂದಾಳು ದಿನಾಂಕ 05-09-12 ರಂದು ಸಂಜೆ 5-00 ಗಂಟೆಯಿಂದ ಕಾಣುತ್ತಿಲ್ಲವೆಂದು ನೀಡಿದ ಪಿಯರ್ಾದುವಿನ ಮೇರೆಗೆ ಹೆಂಗಸು ಕಾಣೆಯಾಗಿದ್ದಾಳೆ ರೀತ್ಯಾ ಪ್ರಕರಣವನ್ನು ಪಾಂಡವಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. 

    ಸದರಿ ಪ್ರಕರಣದ ತನಿಖಾ ಕಾಲದಲ್ಲಿ  ಪಾಂಡವಪುರದ ಠಾಣೆಯ ಪಿಎಸ್ಐ ಶ್ರೀ. ಕೆ.ಮಂಜು ರವರು ಕಾಣೆಯಾದ ಶ್ರೀಮತಿ. ಸುನಂದಳು ಉಪಯೋಗಿಸುತ್ತಿದ್ದ ಮೊಬೈಲ್ನ ಐ.ಎಂ.ಇ.ಐ ನಂಬರ್ನ್ನು ಪಡೆದುಕೊಂಡು, ಅ ಮೊಬೈಲ್ನಲ್ಲಿ ಸಿಮ್ ಅಳವಡಿಸಿಕೊಂಡು ಉಪಯೋಗಿಸುತ್ತಿದ್ದ ಬಗ್ಗೆ ಕಾಲ್ ಡಿಟೈಲ್ಸ್ನ್ನು ಪಡೆದಿದ್ದು, ಮೇಲ್ಕಂಡ ಕಾಲ್ ಡಿಟೈಲ್ನ ಆದಾರದ ಮೇರೆಗೆ ಅದನ್ನು ಉಪಯೋಗಿಸಿರುವ ಸಿಮ್ ಅಸಾಮಿಯಾದ ಮಹೇಂದ್ರ ಬಿನ್ ನಾಗಣ್ಣ @ ನಾಗರಾಜು, ಚಿಕ್ಕಾಡೆ ಗ್ರಾಮ ರವರನ್ನು ದಿನಾಂಕಃ 24-01-2013 ರಂದು ಪತ್ತೆ ಹಚ್ಚಿ ಕರೆದುಕೊಂಡು ಬಂದು ಮೊಬೈಲ್ ಬಗ್ಗೆ ವಿಚಾರ ಮಾಡಲಾಗಿ ಸದರಿಯವರು ತಮ್ಮ ಸ್ವ ಇಚ್ಚಾ ಹೇಳಿಕೆಯಲ್ಲಿ ತನಗೆ ಹಾಗೂ ಆತನ ಸ್ನೇಹಿತ ವಿನೋದನಿಗೆ ಸಾಲ ಇರುತ್ತದೆ ಹಾಗೂ ಕುಡಿಯುವ ಹಾಗು ಹುಡುಗಿಯರ ಚಟ ಇದ್ದು ಸಾಲಗಾರರ ಕಾಟ ಜಾಸ್ತಿಯಾಗಿದ್ದರಿಂದಾಗಿ ಮೇಲ್ಕಂಡ ಸುನಂದಳು ಒಬ್ಬಳೆ ಪ್ರತಿ ದಿವಸ ಸಂಜೆ ಗದ್ದೆಯ ಕಡೆಗೆ ಒಬ್ಳಳೆ ಹೋಗಿ ಬರುತ್ತಿದುದ್ದನ್ನು ಹಾಗೂ ಅವಳ ಕತ್ತಿನಲ್ಲಿ ಯಾವಾಗಲು ಚಿನ್ನದ ಮಾಂಗಲ್ಯದ ಸರ ಇದ್ದುದನ್ನು ನೋಡಿದ್ದ ನಾವು ಹೇಗಾದರು ಮಾಡಿ ಇವಳನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ, ಕೊಲೆ ಮಾಡಿ ಸರವನ್ನು ಮಾರಾಟ ಮಾಡಿ ಸಾಲ ತೀರಿಸಿಕೊಳ್ಳೋಣ ಎಂದು ತಿಮರ್ಾನಿಸಿ ಅದರಂತೆ ದಿನಾಂಕ 05-09-12 ರಂದು ಸುನಂದ ಗದ್ದೆಯ ಕಡೆಗೆ ಹೋದಾಗ ಹಿಂಬಾಲಿಸಿಕೊಂಡು ಹೋಗಿ ಪುಸಲಾಯಿಸಿ ಕಬ್ಬಿನ ಗದ್ದೆಯ ಕಡೆಗೆ ಕರೆದುಕೊಂಡು ಹೋಗಿ ಆಕೆಯನ್ನು ಕೊಲೆ ಮಾಡಿ ಹೆಣವನ್ನು ಹಳ್ಳದ ನೀರಿಗೆ ಬಿಸಾಡಿ ಅವಳ ಬಳಿ ಇದ್ದ ಒಂದು ಮೊಬೈಲ್ ಹ್ಯಾಂಡ್ಸೆಟ್ ಹಾಗೂ 500/- ರೂ ಹಣವನ್ನು ತಾನು ಇಟ್ಟುಕೊಂಡಿದ್ದಾಗಿ ಮಾಂಗಲ್ಯದ ಸರವನ್ನು ವಿನೋದ ಇಟ್ಟುಕೊಂಡಿದ್ದು ನಂತರ ಅದನ್ನು ಮಾರಾಟ ಮಾಡಲು ಪಾಂಡವಪುರದ ಸೇಟು ಬಳಿ ಹೋದಾಗ ಅದು ನಕಲಿ ಎಂದು ತಿಳಿದ ಮೇಲೆ ಅದನ್ನು ವಿನೋದನ ಮನೆಯಲ್ಲಿ ಇಟ್ಟುಕೊಂಡಿದ್ದು ಮೊಬೈಲ್ ತನ್ನ ಬಳಿ ಇರುವುದಾಗಿ ತಿಳಿಸಿರುತ್ತಾನೆ.

ನಂತರ ಸದರಿ ಪ್ರಕರಣದಲ್ಲಿ ಈಗಾಗಲೇ ದಾಖಲಾಗಿರುವ ಮೊ.ನಂ. 323/2012 ಕಲಂ ಹೆಂಗಸು ಕಾಣೆಯಾಗಿದ್ದಾಳೆ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ತಯಾರಿಸಿ ಹೆಂಗಸು ಕಾಣೆಯಾಗಿದ್ದಾಳೆ ಎಂಬದರ ಬದಲು ಕಲಂ 302, 201, 404 ಕೂಡ 34 ಐಪಿಸಿಯನ್ನಾಗಿ ಬದಲಾವಣೆ ಮಾಡಿಕೊಂಡಿರುವ ಬಗ್ಗೆ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಗು ಹಿರಿಯ ಅದಿಕಾರಿಗಳಿಗೆ ವರದಿಯನ್ನು ಸಲ್ಲಿಸಿಕೊಂಡು ತನಿಖೆ ಮುಂದುವರೆಸಿ,  ಆರೋಪಿ ಮಹೇಂದ್ರನನ್ನು ದಸ್ತಗಿರಿ ಮಾಡಿ, ಆತನು ತನ್ನ ಮನೆಯಲ್ಲಿಟ್ಟಿದ್ದ ಡ್ಯೂಯಲ್ ಸಿಮ್ನ ಒಂದು ಕಾರ್ಬನ್ ಮೊಬೈಲ್ ಅಮಾನತ್ತು ಪಡಿಸಿಕೊಂಡಿರುತ್ತದೆ.      
                                                        
ಮತ್ತೊಬ್ಬ ಆರೋಪಿ ವಿನೋದ ಎಂಬುವವನ್ನು ಸಹ ದಿನಾಂಕಃ 24-01-2013 ರಂದು ಮದ್ಯಾಹ್ನ ದಸ್ತಗಿರಿ ಮಾಡಿ, ಕೂಲಂಕುಶವಾಗಿ ವಿಚಾರ ಮಾಡಿ ಆತನು ನೀಡಿದ ಸ್ವ ಇಚ್ಚಾ ಹೇಳಿಕೆಯನ್ನು ಪಡೆದುಕೊಂಡಿದ್ದು, ಆತನು ಸಹ ಈ ಕೊಲೆಯಲ್ಲಿ ಬಾಗಿಯಾಗಿರುವುದಾಗಿ ಹಾಗೂ ತನ್ನ ಮನೆಯ ಅಟ್ಟದ ಮೇಲೆ ಮೃತೆಯ ತಾಳಿ ಸಮೇತ ಇರುವ ಚೈನ್ನ್ನು ಇಟ್ಟಿರುವುದಾಗಿ ತಿಳಿಸಿ, ಅ ವಾಸದ ಮನೆಗೆ ಕರೆದುಕೊಂಡು ಹೋಗಿ ತಮ್ಮ ಮನೆಯ ಅಟ್ಟದ ಮೇಲೆ ಇಟ್ಟಿದ್ದ ತಾಳಿ ಸಮೇತ ಇರುವ ಮಾಂಗಲ್ಯದ ಸರವನ್ನು ಹಾಜರು ಪಡಿಸಿದ್ದನ್ನು ತನಿಖಾದಿಕಾರಿಗಳು ಅಮಾನತ್ತು ಪಡಿಸಿಕೊಂಡಿರುತ್ತಾರೆ.   

    ಸದರಿ ಪ್ರಕರಣದಲ್ಲಿ ಆರೋಪಿತರು ತೋರಿಸಿದ ಕೃತ್ಯ ನಡೆದ ಜಾಗಕ್ಕೆ ತನಿಖಾದಿಕಾರಿಗಳು ಸಿಬ್ಬಂದಿಗಳ ಸಮೇತ ತೆರಳಿ ಮೃತೆಯ ಶವದ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ. ಈವರೆಗೂ ಮೇಲ್ಕಂಡ ಮೃತೆ ಸುನಂದಳ ಶವ ದೊರಕಿರುವುದಿಲ್ಲ. ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಆದೇಶಿಸಿರುತ್ತದೆ.  

      ನಾಲ್ಕು ತಿಂಗಳಿನಿಂದ ಪತ್ತೆಯಾಗದೇ ಇದ್ದ ಮೇಲ್ಕಂಡ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪಾಂಡವಪುರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಕೆ.ಎಂ.ಮಂಜು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.  

DAILY CRIME REPORT DATED : 26-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-01-2013 ರಂದು ಒಟ್ಟು 08 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು,  2 ಕಳ್ಳತನ ಪ್ರಕರಣಗಳು, 1 ವಾಹನ ಕಳವು ಪ್ರಕರಣ ಹಾಗು 3 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ರಸ್ತೆ ಅಪಘಾತ ಪ್ರಕರಣಗಳು :

1. ಹಲಗೂರು ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 279, 337, 304(ಎ) ಐ.ಪಿ.ಸಿ.

ದಿನಾಂಕ: 26-01-2013 ರಂದು ಪಿರ್ಯಾದಿ ಬಿ.ಟಿ.ರಾಜಣ್ಣ ಬಿನ್ ತಮ್ಮೇಗೌಡ, ಬಾಣಸಮುದ್ರ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮೋಟಾರ್ ಸೈಕಲ್ ಸವಾರ ಮಹೇಶ್ ಕುಮಾರ್, ಡಿ,ಹಲಸಹಳ್ಳಿ ಗ್ರಾಮ ರವರು ತಮ್ಮ ಮೋಟಾರ್ ಸೈಕಲ್ ನಂ. ಕೆಎ-11, ಯು-1847 ಹೊಂಡಾ ಸೈನ್ ನ್ನ ಅತಿವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ವಾಕಿಂಗ್ ಮಾಡಿಕೊಂಡು ಹೋಗುತ್ತಿದ್ದ ನಂಜುಂಡೇಗೌಡರವರಿಗೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಕೆಳಗೆ ಬಿದ್ದಾಗ ಬಲ ಕಪಾಲಕ್ಕೆ, ಬಲ ಕಿಬ್ಬರಿಗೆ ಮತ್ತು ಬಲ ಮಂಡಿಗೆ ಏಟು ಬಿದ್ದು ಮೂಗು, ಬಾಯಿ ಮತ್ತು ಬಲ ಕಪಾಲ ಹೊಡೆದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 05/13 ಕಲಂ. 279, 304 (ಎ) ಐ.ಪಿ.ಸಿ.

ದಿನಾಂಕ: 26-01-2013 ರಂದು ಪಿರ್ಯಾದಿ ವೀರೇಶ್ ಬಿನ್. ಮಹದೇವಪ್ಪ, 27ವರ್ಷ,  ಕಾರು ಚಾಲಕ, ಬೆಂಡರವಾಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾಜುಬಿನ್ ಗುರುಮಲ್ಲಪ್ಪ, 35ವರ್ಷ, ಕೆ.ಎ.05-ಹೆಚ್ಆರ್-1047ಮೋಟಾರ್ ಬೈಕ್ ಸವಾರ, ಬೆಂಡರವಾಡಿ ಗ್ರಾಮ, ರಸ್ತೆಯಲ್ಲಿ ಚಲಿಸುತ್ತಿದ್ದಾಗ ಹಳ್ಳವನ್ನು ತಪ್ಪಿಸುವ ಸಲುವಾಗಿ ಬೈಕ್ನ್ನು ಪಕ್ಕಕ್ಕೆ ಎಳೆದಾಗ ಬೈಕ್ ಹಿಡಿತ ತಪ್ಪಿ ಕೆಳಕ್ಕೆ ಬಿದ್ದು ಬೈಕ್ನ್ನು ಓಡಿಸುತ್ತಿದ್ದ ರಾಜುವಿನ ತಲೆಗೆ ರಕ್ತಗಾಯವಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು. ಚಿಕಿತ್ಸೆ ದುಬಾರಿ ಆದ್ದರಿಂದ ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸೋಣವೆಂದು ರಾಜುವನ್ನು ಸದರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ರಾಜು  ಮೃತಪಟ್ಟಿರುತ್ತಾನೆಂದು ಮೃತನ ಅಣ್ಣ ಶಿವಮಲ್ಲಪ್ಪ ಬಿನ್ ಗುರುಮಲ್ಲಪ್ಪ ರವರು ಈ ದಿನ ಗಂಟೆ ಸಮಯದಲ್ಲಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಪ್ರಕರಣದಲ್ಲಿ ಕಲಂ:304(ಎ) ಐ.ಪಿ.ಸಿಯನ್ನು ಅಳವಡಿಸಿಕೊಂಡು ತನಿಖೆ ಕೈಗೊಂಡಿರುವ ಬಗ್ಗೆ ತುತರ್ುವರದಿ.


ಕಳ್ಳತನ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 457,380 ಐ.ಪಿ.ಸಿ.

       ದಿನಾಂಕ: 26-01-2013 ರಂದು ಪಿರ್ಯಾದಿ ಜಯಮಾಲ ಬಿನ್. ರಾಚಯ್ಯ, 36ವರ್ಷ,ಅಂಗನವಾಡಿ ಕಾರ್ಯಕತರ್ೆ, ಗೆಂಡೆಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಂಗನವಾಡಿಯ ಬಾಗಿಲ ಬೀಗ ಮುರಿದು ಒಳಗೆ ಪ್ರವೇಶ ಮಾಡಿ, ಅಡುಗೆ ಮಾಡಲು ಉಪಯೋಗಿಸುತ್ತಿದ್ದ ಇಂಡೇನ್ ಗ್ಯಾಸ್ ಸಿಲಿಂಡರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರ. ಇದರ ಬೆಲೆ 2800/- ರೂ. ಆಗುತ್ತದೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457,454,380 ಐ.ಪಿ.ಸಿ.

      ದಿನಾಂಕ: 26-01-2013 ರಂದು ಪಿರ್ಯಾದಿ ಕು. ಸುಮತಿ. ಎನ್.ಎಂ ಬಿನ್. ಮಾದೇಗೌಡ , ಉಪಪ್ರಾಂಶುಪಾಲರು, ಸಕರ್ಾರಿ ಪದವಿ ಪೂರ್ವ ಕಾಲೇಜು, ಕೊಡಿಯಾಲ ಗ್ರಾಮ, ಹಾಲಿ ವಾಸಃ ನೇರಲಕೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಅಡುಗೆ ಮನೆಯ ಕಿಟಕಿಯ ಎರಡು ಸರಳುಗಳನ್ನು ಮುರಿದು ಒಳಗೆ ಪ್ರವೇಶ ಮಾಡಿ, ಅಡುಗೆ ಮಾಡಲು ಉಪಯೋಗಿಸುತ್ತಿದ್ದ ಒಂದು ಹೆಚ್.ಪಿ ಗ್ಯಾಸ್ ಸಿಲಿಂಡರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ 1200/- ರೂ. ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 379 ಐ.ಪಿ.ಸಿ.

ದಿನಾಂಕ: 26-01-2013 ರಂದು ಪಿರ್ಯಾದಿ ವೈ.ಎನ್. ಸಿದ್ದರಾಜು ಬಿನ್ ಲೇಟ್ ನಿಂಗೇಗೌಡ, ಯಲಾದಹಳ್ಳಿ, ಸಿ.ಎ. ಕೆರೆ ಹೋಬಳಿ, ಮದ್ದೂರು ತಾಃ ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ಯಾರೋ ಕಳ್ಳರು ತಾಲ್ಲೂಕು ಕಛೇರಿ ಕಾಂಪೌಂಡ್ ಒಳಗೆ ಮೋಟಾರು ಸೈಕಲ್ ನಂಬರ್ ಕೆಎ-41/ಹೆಚ್-2589 ಸ್ಪ್ಲೆಂಡರ್ ಪ್ಲಸ್ ಹಿರೋ ಹೋಂಡಾ ಗಾಡಿಯನ್ನು ನಿಲ್ಲಿಸಿ ಕಛೇರಿ ಒಳಗಡೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಬಂದು ತಾನು ನಿಲ್ಲಿಸಿದ್ದ ಮೋಟಾರ್ ಸೈಕಲ್ ಅನ್ನು ನೋಡಲಾಗಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರ ಬೆಲೆ ಸುಮಾರು 20000/- ರೂ ಆಗಲಿದ್ದು, ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 25-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-01-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,   1 ಅಪಹರಣ ಪ್ರಕರಣ,  2 ವಾಹನ ಹಾಗು ಸಾಮಾನ್ಯ ಕಳವು ಪ್ರಕರಣಗಳು ದಾಖಲಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

1. ಕಿರುಗಾವಲು ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. - 174 ಸಿ.ಆರ್.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಕೆ, ಸಿದ್ದೇಗೌಡ ಎ.ಎಸ್.ಐ, ಕಿರುಗಾವಲು ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೃಷ್ಣಾಚಾರಿ ಬಿನ್ ಲೇಃ ಸಣ್ಣಾಚಾರಿ, ದೋರನಹಳ್ಳಿ ಎಂಬುವವರು ಹೊಟ್ಟೆನೋವು ತಾಳಲಾರದೆ ಕಬ್ಬಿನ ಗದ್ದೆಗೆ ಸಿಂಪಡಿಸುವ ಔಷದವನ್ನು ಕುಡಿದಿದ್ದು ಚಿಕಿತ್ಸೆಗೆ ಆಸ್ಪತ್ರಗೆ ದಾಖಲು ಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಜೆ.ಜಿ.ಶಿವಮಂಜು ಎ.ಎಸ್.ಐ ಅರಕೆರೆ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ಪುಟ್ಟೇಗೌಡ ಬಿನ್. ಲೇ. ನಾಥೇಗೌಡ, 85 ವರ್ಷ,  ದಮ್ಮು (ಅಸ್ತಮ) ಜಾಸ್ತಿಯಾಗಿ ಬೇನೆ ತಾಳಲಾರದೆ ಮನೆಯ ಹಜಾರದಲ್ಲಿ ತರಕಾರಿ ಗಿಡಗಳಿಗೆ ತಂದಿದ್ದ ಕ್ರಿಮಿನಾಷಕ ಔಷದಿಯನ್ನು ದಮ್ಮಿಗೆ ತಂದಿರುವ ಔಷಧಿ ಎಂದು ತಿಳಿದು ಕುಡಿದು ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

 ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 143-498(ಎ)-341-504-506 ಕೂಡ 149 ಐ.ಪಿ.ಸಿ.

        ದಿನಾಂಕ: 25-01-2013 ರಂದು ಪಿರ್ಯಾದಿ ಡಿ.ಎನ್.ಪೂಣರ್ಿಮ ಕೋಂ. ಹೆಚ್.ಸತೀಶ, ಆರೋಪಿ.1 ಸತೀಶ ಹೆಚ್. ಪಿರ್ಯಾದಿಯವರನ್ನು ಮದುವೆಯಾಗಿ 8 ವರ್ಷವಾಗಿದ್ದು ಇಬ್ಬರೂ ಬೆಂಗಳೂರಿನಲ್ಲಿ ಇದ್ದು ಆರೋಪಿ-1 ರವರು ವಾಸದ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಎತ್ತಿಕೊಂಡು ಊರಿಗೆ ಬಂದಿದ್ದು ಈ ದಿವಸ ಪಿರ್ಯಾದಿಯವರು ಸಾಮಾಗ್ರಿಗಳನ್ನು ಕೇಳಿದ್ದಕ್ಕೆ ಆರೋಪಿಗಳೆಲ್ಲರು ಪಿರ್ಯಾದಿಯವರನ್ನು ತಡೆದು ಅವಾಚ್ಯವಾಗಿ ಬೈದು, ಕೊಲೆಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಇದಕ್ಕೆ ಇತರೆ 8 ಜನರು  ಎಲ್ಲರೂ ಕರಡಕೆರೆ ಗ್ರಾಮ, ಮದ್ದೂರು ತಾ. ರವರುಗಳು ಸಹ ಕುಮ್ಮಕ್ಕು ನೀಡಿರುತ್ತಾರೆ.  


ಅಪಹರಣ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 365,324,506 ಕೂಡ 34 ಐ.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಶ್ರೀನಿವಾಸ ಬಿನ್. ದೊಡ್ಡರಾಮಣ್ಣ, 26ವರ್ಷ, ವಕ್ಕಲಿಗರು, ವ್ಯವಸಾಯ ಮತ್ತು ಟೈಲ್ಸ್ ಫಿಟ್ಟಿಂಗ್ ಕೆಲಸ, ಆಡಿಲಿಂಗನಪಾಳ್ಯ ಗ್ರಾಮ, ಸಂಕೇಘಟ್ಟ ಅಂಚೆ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಹಾಗು ಸಾಮಾನ್ಯ ಕಳವು ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 379 ಐ.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಸಜ್ಜಾದ್ ಅಹಮದ್ ಬಿನ್. ರುಹುಲ್ಲಾ, ಫಿರ್ದೋಷ್ ಸಾಮಿಲ್ ಮಾಲೀಕರು, ಕಲ್ಕುಣಿ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಬಾಬ್ತು ಕೆಎ-11 ಆರ್.-3052 ನಂಬರಿನ ಹೀರೊಹೊಂಡ ಪ್ಯಾಷನ್ ಮೋಟಾರ್ ಸೈಕಲನ್ನು ಮಂಡ್ಯದ ಹಡರ್ಿಕರ್ ಭವನದ ಮುಂಭಾಗ ಬೀಗ ಹಾಕಿ ನಿಲ್ಲಿಸಿ ಹರ್ಡಿಕರ್ ಭವನದಲ್ಲಿದ್ದ ಸಾಮೀಲ್ ಮಾಲೀಕರ ಸಮಾವೇಶಕ್ಕೆ ಹೋಗಿ ನಂತರ ವಾಪಸ್ ಮಧ್ಯಾಹ್ನ     02-30 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 40/13 ಕಲಂ. 379  ಐ.ಪಿಸಿ. 

ದಿನಾಂಕ: 25-01-2013 ರಂದು ಪಿರ್ಯಾದಿ ಸತ್ಯನಾರಯಣ ಬಿನ್. ಲೇಟ್. ನರಸಿಂಹಯ್ಯ, ಗೋಸೇಗೌಡರ ಬೀದಿ, ಶ್ರಿರಂಗಪಟ್ಟಣ ಟೌನ್ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಅವರ ತೋಟದಲ್ಲಿ 70 ಗೊನೆಗಳನ್ನು ಕಳ್ಳತನ ಮಾಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 24-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು,  1 ವಂಚನೆ/ಕಳವು ಪ್ರಕರಣ,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    


ವಾಹನ ಕಳವು :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 379 ಐ.ಪಿ.ಸಿ.

ದಿನಾಂಕ: 24-01-2013 ರಂದು ಪಿರ್ಯಾದಿ ವೈ ನರಸಿಂಹಯ್ಯ ಬಿನ್. ಲೇಟ್. ಯರಪ್ಪ, ಎಲ್.ಐ.ಜಿ. 21 ಕೆ.ಹೆಚ್.ಬಿ ಕಾಲೋನಿ, ಸ್ವರ್ಣಸಂದ್ರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಕೆಎ-11-ಎಕ್ಸ್-3142ರ ಟಿವಿಎಸ್ ಎಕ್ಸೆಲ್ ಹೆವಿ ಡ್ಯೂಟಿ ಮೊಪೆಡ್ನ್ನು  ಯಾರೋ ಕಳ್ಳರು ಕಳವು ಮಾಡಿರುತ್ತಾರೆ, ಕಳುವಾಗಿರುವ ನನ್ನ ಬೈಕನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ/ಕಳವು ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 379-462-468-471-417-419-420-465-120(ಬಿ)-404-500 ಐ.ಪಿ.ಸಿ.

ದಿನಾಂಕ: 24-01-2013 ರಂದು ಪಿರ್ಯಾದಿ ಬಿ.ಸಿ.ಮಾದಪ್ಪ ಬಿನ್. ಲೇಟ್. ಚಿಕ್ಕಚನ್ನಯ್ಯ, ಒಕ್ಕಲಿಗರು, ಮಲ್ಲಯ್ಯನದೊಡ್ಡಿ ಗ್ರಾಮ, ಮಂಡ್ಯ  ತಾ. ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯ ಮಗ ಆರೋಪಿಯ ಬಳಿ ಸಾಲ ಪಡೆಯಲು ಪಿರ್ಯಾದಿಯವರ ಸಿಂಡಿಕೇಟ್ ಬ್ಯಾಂಕಿಗೆ ಸೇರಿದ 498358 ನಂಬರಿನ ಚೆಕ್ಕನ್ನು ಆರೋಪಿಗೆ ಕೊಟ್ಟಿದ್ದು ಆದರೆ ಆರೋಪಿಯು ಚೆಕ್ ಗೆ ಸಾಲವನ್ನು ನೀಡದೆ ಇದು ಫೋರ್ಜರಿ ಸಹಿವುಳ್ಳ ಚೆಕ್ಕೆಂದು ನಮ್ಮ ಮೇಲೆ ಗಲಾಟೆ ಮಾಡಿ ಚೆಕ್ಕನ್ನು ದುರುಪಯೋಗಪಡಿಸಿಕೊಂಡಿದ್ದು, ಪಿರ್ಯಾದಿಗೆ ಸೇರಿದ್ದ ಖಾಲಿ ಚೆಕ್ಕನ್ನು ತನ್ನದಲ್ಲವೆಂದು ಗೊತ್ತಿದ್ದರೂ ಸಹ ತನ್ನ ಬಳಿ ಇಟ್ಟುಕೊಂಡು ಪಿರ್ಯಾದಿಯವರಿಗೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 24-01-2013 ರಂದು ಪಿರ್ಯಾದಿ ಮಂಜುನಾಥ ಬಿನ್. ಭಿಮಪ್ಪ ತಳವಾರ್, ನೀಲನಕೊಪ್ಪಲು ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಸಂತೋಷ 13 ವರ್ಷ, ಶಾಲೆ ಬಿಟ್ಟು ನಂತರ ವಾಪಸ್ಸು ಬಂದಿರುವುದಿಲ್ಲಾ  ಪತ್ತೆ  ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 24-01-2013 ರಂದು ಪಿರ್ಯಾದಿ ಪಿ.ಕೃಷ್ಣಕುಮಾರ್. ಬಿನ್. ಎಸ್.ಪುಟ್ಟಸ್ವಾಮಿ, ಜೀವನ ಜ್ಯೋತಿ ವಿದ್ಯಾಸಂಸ್ಥೆಯ ಸಂಸ್ಥಾಪಕರು, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಡ್ಯದ ಜೀವನ ಜ್ಯೋತಿ ವಿದ್ಯಾರ್ಥಿ  ನಿಲಯದಲ್ಲಿದ್ದ ವಿದ್ಯಾರ್ಥಿ ಎಸ್.ಕೃಷ್ಣ ಬಿನ್ ಶಿವಣ್ಣ, 15 ವರ್ಷ, ರವರು, ಎಲ್ಲರಂತೆ ಮಲಗಿಕೊಂಡಿದ್ದು ದಿನಾಂಕ: 24-01-2013 ರಂದು ಬೆಳ್ಳಿಗೆ ಹಾಜರಾತಿ ವೇಳಿಯಲ್ಲಿ ಆತನು ಕಾಣೆಯಾಗಿರುತ್ತಾನೆ ಆದ್ದರಿಂದ ಕಾಣೆಯಾಗಿರುವ ಹುಡುಗನನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮದ್ದೂರು ಪೊಲೀಸ್ ಠಾಣೆ ಮೊ.ನಂ. 45/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 24-01-2013 ರಂದು ಪಿರ್ಯಾದಿ ಕಾಳಶೆಟ್ಟಿ ಬಿನ್. ಕರಿಶೆಟ್ಟಿ, ಉಪ್ಪಾರದೊಡ್ಡಿ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಹೆಂಡತಿ ಕಮಲಮ್ಮಳು ತಮ್ಮ ಮನೆಯಿಂದ ಕೆ.ಎಂ.ದೊಡ್ಡಿ ಕಡೆಗೆ ಹೋದವಳು ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂಬುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಯು.ಡಿ.ಆರ್. ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. ಯುಡಿಆರ್ ನಂ 01/13

ದಿನಾಂಕ: 24-01-2013 ರಂದು ಪಿರ್ಯಾದಿ ಕೃಷ್ಣ ಬಿನ್. ಲೇಟ್. ಕೆಂಡೇಗೌಡ, 40 ವರ್ಷ, ಹೊಸಕೆರೆ, ಕೊಪ್ಪ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಸ್ವಾಮಿ ಬಿನ್ ಕುಳ್ಳೇಗೌಡ, 46 ವರ್ಷ, ಹೊಸಕೆರೆ ಗ್ರಾಮ ಎಂಬುವವರು ಸಂಕ್ರಾಂತಿ ಹಬ್ಬದಲ್ಲಿ ದನ ಕಿಚಾಯಿಸುವಾಗ ದನಗಳ ಹಗ್ಗ ಮೃತನ ಕಾಲಿಗೆ ಸಿಕ್ಕಿಹಾಕಿಕೊಂಡು ಬೆಂಕಿ ತಗುಲಿ ಸುಟ್ಟಗಾಯಗಳಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 498(ಎ) 494, 506, ಕೂಡ 34 ಐ.ಪಿ.ಸಿ.

      ದಿನಾಂಕ: 24-01-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ಲಿಂಗರಾಜು, ಸುಣ್ಣದದೊಡ್ಡಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಗೆ ಮಕ್ಕಳಾಗದೆ ಇರುವುದರಿಂದ  ಆರೋಪಿಗಳಾದ 1] ಲಿಂಗರಾಜು, 2] ಮಾಲಮ್ಮ  3] ರಾಜು, ಎಲ್ಲರೂ ಸುಣ್ಣದದೊಡ್ಡಿ ಗ್ರಾಮ ರವರುಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದು,  ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿದರೂ ಪ್ರಯೋಜವಾಗದೆ ಈಗ್ಗೆ  ಒಂದು ವರ್ಷಗಳ ಹಿಂದೆ ಪಿರ್ಯಾದಿ ತನ್ನ ತಂದೆ-ತಾಯಿ ಮನೆಯಲ್ಲಿ ವಾಸವಿದ್ದು  ಈ ಸಮಯದಲ್ಲಿ  ಪಿಯರ್ಾದಿ ಗಂಡ ಮತ್ತೊಂದು ಮದುವೆಯಾಗಿದ್ದು  ಇದನ್ನು ಕೇಳಲು ಹೋದ ಪಿರ್ಯಾದಿಗೆ   ಈಕೆಯ ಗಂಡ, ಅತ್ತೆ, ಮತ್ತು ಪಿಯರ್ಾದಿ ಸ್ನೇಹಿತ ಪೋನಿನಲ್ಲಿ ಕೊಲೆ ಬೆದರಿಕೆ ಹಾಕಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 498(ಎ), 504, 427, 307,114 ಕೂಡ 34 ಐ.ಪಿ.ಸಿ.

        ದಿನಾಂಕ: 24-01-2013 ರಂದು ಪಿರ್ಯಾದಿ ವಿಜಯಲಕ್ಷ್ಮಿ ಕೋಂ.ಕರಿಯಪ್ಪ, 35 ವರ್ಷ, ವಕ್ಕಲಿಗರು, ಮನೆಕೆಲಸ, ಎನ್.ಇ.ಎಸ್.ಬಡಾವಣೆ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1) ಕರಿಯಪ್ಪ. 2) ತರಕಾರಿ ಶಿವಣ್ಣ. 3) ಚೇತನ ಎಲ್ಲರೂ ಮಳವಳ್ಳಿ ಟೌನ್ ರವರುಗಳು ಮನೆಯ ಬಾಗಿಲಿಗೆ ಕಲ್ಲನ್ನು ಎತ್ತಿ ಹಾಕಿ ಜಖಂಗೊಳಿಸಿ ಮನೆಯ ಟಿ.ವಿ ಇನ್ನಿತರ ಬೆಲೆ ಬಾಳುವ ಸಾಮಾನು ಗಳನ್ನು ಜಖಂಗೊಳಿಸಿ ನನಗೆ ನಿಮ್ಮ ತಂದೆ ಮನೆಯಿಂದ ಹಣವನ್ನು ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿ, ಒಂದು ಮಚ್ಚನ್ನು ತೆಗೆದು ಕೊಂಡು ನಿನ್ನನ್ನು ಇದೆ ಮಚ್ಚಿನಿಂದ ಕೊಲೆ ಮಾಡುತ್ತೇನೆಂದು  ಓಡಾಡಿಸಿ ಕೊಂಡು ಅಟ್ಟಾಡಿಸಿಕೊಂಡು ಮಚ್ಚ ನ್ನು ಬೀಸಿದಾಗ ಅದೃಷ್ಟವಶಾತ್ ನಾನು ತಪ್ಪಿಸಿಕೊಂಡೆನು. ಮಚ್ಚನ್ನು ಹಿಡಿದುಕೊಂಡು ಮತ್ತೆ ನನ್ನನ್ನು ಎಲ್ಲ ಕಡೆಯೂ ಮನೆಯ ಮುಂಭಾಗ ಓಡಾಡಿಸಿ ನಿನ್ನನ್ನು ಈ ದಿನ ಕೊಲೆ ಮಾಡದೆ ಬಿಡುವುದಿಲ್ಲ ಎಂದು ಹೇಳಿದ್ದು, ಆಸ್ತಿಯ ವಿಚಾರದಲ್ಲಿ ಇದಕ್ಕೆಲ್ಲ  ಅವರ ಅಣ್ಣ ಮತ್ತು ಅವರ ತಂಗಿಯ ಮಗ ಚೇತನ ರವರ ಕುಮ್ಮಕ್ಕು ಇರುತ್ತದೆ ಎಂದು ನೀಡಿದ ದೂರಿನ ಮೇರೆಗೆ.

DAILY CRIME REPORT DATED : 23-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-01-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಂಚನೆ ಹಾಗು ಸರ ಕಳವು ಪ್ರಕರಣ,  1 ಅಪಹರಣ ಹಾಗು ರಾಬರಿ ಪ್ರಕರಣ,   1 ಕೊಲೆ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  4 ಸಾಮಾನ್ಯ ಹಾಗು ವಾಹನ ಕಳವು ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ವಂಚನೆ ಹಾಗು ಸರ ಕಳವು ಪ್ರಕರಣ :

ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 420, 379 ಕೂಡ 34 ಐ.ಪಿ.ಸಿ.

ದಿನಾಂಕ: 23-01-2013 ರಂದು ಪಿರ್ಯಾದಿ ಸಣ್ಣತಾಯಮ್ಮ ಕೋಂ. ಮರೀಗೌಡ, ಶಂಭೂನಹಳ್ಳಿ ಗ್ರಾಮ, ಮೇಲುಕೋಟೆ ಹೋಬಳಿ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರು ಜಕ್ಕನಹಳ್ಳಿ ಸಂತೆಯಲ್ಲಿ ಮನೆ ಸಾಮಾನು ತೆಗೆದುಕೊಂಡು ದೇವರಹಳ್ಳಿಗೆ ಹೋಗುವ ರಸ್ತೆಯ ಕಟ್ಟೆಯ ಹತ್ತಿರ ಹೋಗುತ್ತಿದ್ದಾಗ ಅಪರಿಚಿತ ಇಬ್ಬರು ಹೆಂಗಸರು ಮತ್ತು ಒಬ್ಬ ಗಂಡಸು ಹೆಸರು ವಿಳಾಸ ಗೊತ್ತಿಲ್ಲ. ರವರಿಗ:ಇ ಕಚರ್ಿಪನ್ನು ಫಿರ್ಯಾದಿಯವರಿಗೆ ತೋರಿಸಿ ನಿನ್ನದೇನಮ್ಮ ಎಂದು ಹತ್ತಿರಕ್ಕೆ ತಂದು ತೋರಿಸಿ ತಲೆ ಮತ್ತು ಮೈಯನ್ನು ಸವರಿ  ಜ್ಞಾನ ತಪ್ಪಿಸಿ, ಫಿರ್ಯಾದಿಯವರಿಗೆ ಜ್ಞಾನ ಬಂದಾಗ ತಮ್ಮ ಮೈಯನ್ನು ನೋಡಿಕೊಂಡಾಗ ಕತ್ತಿನಲ್ಲಿದ್ದ ತಾಳಿ 2 ಗುಂಡು ಸಹಿತ ಚಿನ್ನದ ಮಾಂಗಲ್ಯ ಚೈನು ಇರಲಿಲ್ಲ ಮತ್ತು ಆರೋಪಿತರು ಸಹ ಇರಲಿಲ್ಲ ಅವರು ಹೋರಟು ಹೋಗಿರುವುದನ್ನ ನೋಡಿದರೆ ಅವರೆ ನನಗೆ ಕಚರ್ಿಫನ್ನು ತೋರಿಸಿ, ನಂಬಿಸಿ, ಮೋಸ ಮಾಡಿ ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಚೈನನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕಳುವಾಗಿರುವ ಚಿನ್ನದ ಮಾಂಗಲ್ಯ ಚೈನಿನ ತೂಕ ಸುಮಾರು 28 ಗ್ರಾಂ ಆಗಿದ್ದು ಬೆಲೆ ಸುಮಾರು 48,000/- ರೂ ಬೆಲೆ ಬಾಳುವುದಾಗಿರುತ್ತದೆ ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಪಹರಣ ಹಾಗು ರಾಬರಿ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 341-364[ಎ]-384-307 ಕೂಡ 149 ಐ.ಪಿ.ಸಿ.

       ದಿನಾಂಕ: 23-01-2013 ರಂದು ಪಿರ್ಯಾದಿ ಗೋವಿಂದೇಗೌಡ ಬಿನ್. ಲೇಟ್. ಚಿಕ್ಕತಿಮ್ಮೇಗೌಡ, ಕ್ಯಾತನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಕಿರಣ, ಹೊಸಕೋಟೆ ಗ್ರಾಮ, 2]ನವೀನ, ಕ್ಯಾತನಹಳ್ಳಿ ಗ್ರಾಮ, 3]ರವಿ, ಕ್ಯಾತನಹಳ್ಳಿ ಗ್ರಾಮ ಮತ್ತು ಇತರೆ 6 ಜನರು. ಹೆಸರು ವಿಳಾಸ ತಿಳಿದಿಲ್ಲ ಇವರುಗಳು 5 ಲಕ್ಷಕ್ಕೆ ಡೀಲ್ ಕೊಟ್ಟಿದ್ದು 50 ಸಾವಿರ ಅಡ್ವಾನ್ಸ್ ಕೊಟ್ಟಿದ್ದಾರೆ ಎಂದು ಹೇಳಿದಾಗ ಗಾಯಾಳು ತಾನೆ 10 ಲಕ್ಷ ರೂ ಕೊಡುತ್ತೇನೆ ಎಂದು ಹೇಳಿ ಸ್ನೇಹಿತ ಸ್ವಾಮಿಗೌಡನಿಗೆ 10:30 ಗಂಟೆಯಲ್ಲಿ ಪೋನ್ ಮಾಡಿ ಹಣ ರೆಡಿ ಮಾಡುವಂತೆ ತಿಳಿಸಿದ ನಂತರ ಪುನಃ ಸಿ.ಪಿ.ಎಡ್ ಕಾಲೇಜು ಬಳಿಗೆ ಕರೆದುಕೊಂಡು ಬಂದಿದ್ದು ಅಲ್ಲಿ ಇಬ್ಬರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದವರ ಜೊತೆ ಮಾತನಾಡಿ ಅವರು ಕಾರಿನಲ್ಲಿ ಬಂದು ಎಲೆಕರೆ ಹ್ಯಾಂಡ್ ಪೋಸ್ಟ್ ಬಳಿ ಒಬ್ಬರು ಕೆ.ಬೆಟ್ಟಹಳ್ಳಿ ಬಳಿ ಒಬ್ಬರು ಇಳಿದುಕೊಂಡಿದ್ದು ನಂತರ ಹುಲ್ಕೆರೆ ಪಾರೆಸ್ಟ್ ಬಳಿ ಹೋಗುವಾಗ ಪೋನ್ನಲ್ಲಿ ಜನರುಗಳು ಬರುತ್ತಿರುವ ಮಾಹಿತಿ ಬಂದ ಮೇರೆಗೆ ತನ್ನ ಬಳಿ ಇದ್ದ 40 ಸಾವಿರ ನಗದು, ಎರಡು ಎ.ಟಿ.ಎಂ ಕಾರ್ಡ್ ಗಳು,  ಒಂದು ಮೊಬೈಲ್ನ್ನು ಜೇಬಿನಿಂದ ತೆಗೆದುಕೊಂಡು ತನ್ನನ್ನು ಬಿಸಾಡಿ ಹೋಗಿದ್ದು, ತಾನು ಹುಲ್ಕೆರೆ ಗ್ರಾಮಕ್ಕೆ ಬಂದು ಯಾವುದೋ ಒಂದು ಮನೆಯವರನ್ನು ಎಚ್ಚರ ಮಾಡಿ ಮೊಬೈಲ್ ಪಡೆದುಕೊಂಡು ಸತ್ಯಪ್ಪ ರವರಿಗೆ ಪೋನ್ ಮಾಡಿ ಜನರನ್ನು ಕರೆಸಿಕೊಂಡು ಪಾಂಡವುಪರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಆರೋಪಿಗಳು 30 ವರ್ಷದ ಒಳಗಿನವರಾಗಿದ್ದು, ಪ್ಯಾಂಟ್, ಶರ್ಟ್ ಧರಿಸಿದ್ದರು ಎಂದು ಇತ್ಯಾದಿಯಾಗಿ ನೀಡಿದ ದೂರಾಗಿರುತ್ತೆ  ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.


ಕೊಲೆ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 302 ಐ.ಪಿ.ಸಿ.

        ದಿನಾಂಕ: 23-01-2013 ರಂದು ಪಿರ್ಯಾದಿ ಸಾಕಮ್ಮ ಕೋಂ. ಬೋರೇಗೌಡ, 50 ವರ್ಷ, ಒಕ್ಕಲಿಗರು, ಗೃಹಿಣಿ, ಚನ್ನಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ 22-01-2012 ರಂದು ಫಿರ್ಯಾದಿಯ ಮಗನಾದ ಜಗದೀಶ @ ಜಗ್ಗಿ ಎಂಬುವನು ರಾತ್ರಿ 09-00 ಗಂಟೆಯಲ್ಲಿ ತನ್ನ ಗ್ರಾಮದ ಸರ್ಕಲ್ ಬಳಿ ಹೋಗಿ ಬರುತ್ತೇನೆಂದು ಮನೆಯಿಂದ ಹೋದವನು ಮನೆಗೆ ಬಂದಿರಲಿಲ್ಲ. ಬೆಳಿಗ್ಗೆ 05-30 ಗಂಟೆಯ ಸಮಯದಲ್ಲಿ ಫಿರ್ಯಾದಿಯವರ ಮೈದನ ಮಗ ಬೋರೇಗೌಡ ಎಂಬುವರು ಫಿರ್ಯಾದಿಯ ಮಗನಾದ ಜಗದೀಶ @ ಜಗ್ಗಿಯನ್ನು ಯಾರೋ ಕೊಲೆ ಮಾಡಿರುತ್ತಾರೆಂದು ತಿಳಿಸಿದ ಮೇರೆಗೆ ಹೋಗಿ ನೋಡಲಾಗಿ ಯಾರೋ ದುರಾತ್ಮರು ಜಗದೀಶ @ ಜಗ್ಗಿಯ ತಲೆಯ ಮೂರು ಕಡೆ ಬಲವಾಗಿ ಹೊಡೆದು, ಮಿದುಳು ಹೊರಬಂದು ಜಗದೀಶ @ ಜಗ್ಗಿ ಸತ್ತು ಹೋಗಿರುತ್ತಾನೆಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿಆರ್.ಪಿ.ಸಿ.

          ದಿನಾಂಕ: 23-01-2013 ರಂದು ಪಿರ್ಯಾದಿ ಎಸ್.ಕೆ.ರಮೇಶ್ ಬಿನ್. ಎಸ್.ಸಣ್ಣಯ್ಯ,, 60 ವರ್ಷ, ವಕ್ಕಲಿಗರು, ಹಾಲಿನ ಡೈರಿ ಅದ್ಯಕ್ಷರು, ವಾಸ ಕಾರ್ಕಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಅನಾಥ ಗಂಡಸು, ಸುಮಾರು 68-70  ವರ್ಷ ಹೆಸರು ವಿಳಾಸ ಗೊತ್ತಿರುವುದಿಲ್ಲ, ಅನಾರೋಗ್ಯದಿಂದಲೋ ಏನೋ ಹಾಲಿನ ಡೈರಿನ ಜಗುಲಿಯ ಮೇಲೆ ಮಲಗಿದ್ದ ಸಮಯದಲ್ಲಿ ಮೇಲ್ಕಂಡ ಬಿಕ್ಷುಕ ಮೃತ ಪಟ್ಟಿರುತ್ತಾರೆ ಆತ ಎಲ್ಲಿಯವನು ಏನು ಎಂದು ಗೊತ್ತಿರುವುದಿಲ್ಲ. ತಾವುಗಳು ಸ್ಥಳಕ್ಕೆ ಬಂದು ಕಾನೂನು ಕ್ರಮ ಜರುಗಿಸಲು ಮನವಿ ಎಂದು ನಿಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಲಾಗಿದೆ.  



ಸಾಮಾನ್ಯ ಹಾಗು ವಾಹನ ಕಳವು ಪ್ರಕರಣಗಳು :

1. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 379 ಐ.ಪಿ.ಸಿ.

         ದಿನಾಂಕ: 23-01-2013 ರಂದು ಪಿರ್ಯಾದಿ ಸಿ.ಪುಟ್ಟೇಗೌಡ  ಬಿನ್ ಲೇ|| ಚಿಕ್ಕಸ್ವಾಮಿ, ನಿಖರ ಭಾರತ್ ಕನ್ಸ್ಟ್ರಕ್ಸನ್, ಕಂಪನಿಯ ಮ್ಯಾನೇಜರ್, ಸಂಕಲೆಗೆರೆ ಗ್ರಾಮ, ಮಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅನುಮಾನಿತ ಆರೋಪಿಗಳಾದ ವೆಂಕಟೇಶ, ಮಂಜುನಾಥ, ವೆಂಕಟೇಶ, ಬಿ.,  ಹಗಳು ಕರ್ತವ್ಯದಲ್ಲಿದ್ದ ದೇವಪ್ಪ ಮತ್ತು ಮಹದೇವಪ್ಪ, ಸೆಕ್ಯೂರಿಟಿ ರವರುಗಳು ಕಳ್ಳತನವಾಗಿರುವ ವಸ್ತುಗಳು ನಮ್ಮ ಸೆಕ್ಯೂರಿಟಿಗಳ ಜವಾಬ್ದಾರಿಯಲ್ಲಿದುದ್ದರಿಂದ ಯಾರು ಕಳ್ಳತನ ಮಾಡಿರುತ್ತಾರೆ ಎಂಬ ಬಗ್ಗೆ ಪರಿಶೀಲಿಸಿ ನಮ್ಮ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥನೆ. ಕಳವು ಆಗಿರುವ ವಸ್ತುಗಳ ಬೆಲೆ 21.500/- ರೂ ಆಗಿರುತ್ತದೆ. ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 379 ಐ.ಪಿ.ಸಿ.

ದಿನಾಂಕ: 23-01-2013 ರಂದು ಪಿರ್ಯಾದಿ ಎಂ.ಜಿ ನಂಜುಂಡಸ್ವಾಮಿ ಬಿನ್. ಲೇಟ್. ಗುರುವಯ್ಯ, ಕೀರ್ತಿ ನಗರ, ಮಳವಳ್ಳಿ ಟೌನ್ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ತಮ್ಮ ಬಾಬ್ತು ಕೆ,ಎ-11-ಕ್ಯೂ-1280 ಮೋಟಾರ್ ಸೈಕಲನ್ನು ಮಳವಳ್ಳಿ ಆಸ್ಪತ್ರೆಯ ಆವರಣದ ಬಳಿ ನಿಲ್ಲಿಸಿ ಆಸ್ಪತ್ರೆಯ ಒಳಗಡೆ ಹೋಗಿದ್ದು, ವಾಪಸ್ಸು ಬಂದು ನೋಡಲಾಗಿ ನನ್ನ ಬಾಬ್ತು ಮೇಲ್ಕಂಡ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 379 ಐ.ಪಿ.ಸಿ.

ದಿನಾಂಕ: 23-01-2013 ರಂದು ಪಿರ್ಯಾದಿ ಕೆ.ಹೆಚ್.ರವೀಂದ್ರನಾಥ್ ಬಿನ್. ಕೆ.ಹರಿಆಚಾರ್, ಹೋಟೆಲ್ ವಿಶ್ರಾಂತ್, ವಿ.ವಿ.ರಸ್ತೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ಮೋಟಾರ್ ಸೈಕಲನ್ನು ಮಂಡ್ಯದ ವಿ.ವಿ.ರಸ್ತೆಯಲ್ಲಿರುವ ವಿಶ್ರಾಂತ್ ಹೋಟೆಲ್ ಮುಂಭಾಗ ಬೀಗ ಹಾಕಿ ನಿಲ್ಲಿಸಿದ್ದು ನಂತರ ವಾಪಸ್ ರಾತ್ರಿ 09-30 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 25,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 379 ಐ.ಪಿ.ಸಿ.

ದಿನಾಂಕ: 23-01-2013 ರಂದು ಪಿರ್ಯಾದಿ ಪಿ,ಎಂ,ಷರೀಫ್ ಬಿನ್. ಲೇಟ್ ಪಿ,ಮೋದು, ಮನೆ. ನಂ. 79/ಎ, 4ನೇ ಕ್ರಾಸ್, ಉದಯಗಿರಿ, ಮಂಡ್ಯಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಮೋಟಾರ್ಸೈಕಲ್ ಬೈಕ್ ನಲ್ಲಿ ಬಂದು ಇಂಡಿಯನ್ ಬ್ಯಾಂಕ್ ಮುಂದಿನ ಕಾಂಪೌಂಡ್ ಬಳಿ ನಿಲ್ಲಿಸಿದ್ದು ಮದ್ಯಾಹ್ನ ಬಂದು ನೋಡಲಾಗಿ ಬೈಕ್ ಇರುವುದಿಲ್ಲಾ ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಬೆಲೆ 12000/- ರೂ ಆಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇಲೆ ಕೇಸು ದಾಖಲಾಗಿರುತ್ತೆ.



ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 23-01-2013 ರಂದು ಪಿರ್ಯಾದಿ ಬಿ.ಜೆ.ಮಹೇಶ ಬಿನ್. ಸಿ.ಜಯರಾಮು, 31ವರ್ಷ, ವ್ಯವಸಾಯ, ಒಕ್ಕಲಿಗರು, ಬಿ.ಗೌಡಗೆರೆ ಗ್ರಾಮ,  ಕಸಬಾ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸಂತೋಷ್ ಬಿನ್. ಬಿ.ಸಿ.ಸುರೇಶ, ಟ್ರಾಕ್ಟರ್ ನಂ.ಕೆ.ಎ-11 ಟಿ/3278  ಹಾಗೂ ಟ್ರಾಲಿ ನಂ.ಕೆಎ-11/ಟಿ-817 ರ ಚಾಲಕ, ಹಳೇಬೂದನೂರು ರವರು ಟ್ರಾಕ್ಟರ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದು ರಾಜ್ಯ ಹೆದ್ದಾರಿಯಲ್ಲಿ ನಮ್ಮ ಮುಂದೆ ಹೋಗುತ್ತಿದ್ದ ಶಂಕರನ ವಿಕ್ಟರ್ ಗಾಡಿಗೆ ಸಂಜೆ 07-00ಗಂಟೆಯ ಸಮಯದಲ್ಲಿ ಅಪಘಾತ ಪಡಿಸಿದ್ದರಿಂದ ಶಂಕರನ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು ಟ್ರಾಕ್ಟರ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದು ಮೇಲ್ಕಂಡ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು  ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ .ವರದಿ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 23-01-2013 ರಂದು ಪಿರ್ಯಾದಿ ಚಿಕ್ಕಣ್ಣ ಬಿನ್. ಲೇಟ್. ಮಹದೇವಯ್ಯ, 50 ವರ್ಷ, ಹಾಲುಮತ ಜನಾಂಗ, ವ್ಯವಸಾಯ ಮತ್ತು ಕೂಲಿಕೆಲಸ, ಚಂದಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಸಿದ್ದೇಗೌಡ, ಚಂದಹಳ್ಳಿ ಗ್ರಾಮ ಎಂಬುವವರು ಸಂಸಾರದ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದು, ದಿನಾಂಕ : 12-12-2012 ರಂದು ಮನೆಯಿಂದ ಹೋದವನು ಇರುವರೆವಿಗೂ ಬಂದಿರುವುದಿಲ್ಲ. ನಾವುಗಳು ನಮ್ಮ ಸಂಬಂಧಿಕರ ಹಾಗೂ ನೆಂಟರಿಷ್ಟರ ಮನೆಗಳ ಕಡೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



2. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 23-01-2013 ರಂದು ಪಿರ್ಯಾದಿ ಸಣ್ಣು ಬಿನ್. ಮರಿಮಾದಯ್ಯ, ಚಿಕ್ಕೇಗೌಡನದೊಡ್ಡಿ ಗ್ರಾಮ, ಕಿರುಗಾವಲು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಗ ಸಣ್ಣು  ಬಿನ್. ಮರಿಮಾದಯ್ಯ, ಚಿಕ್ಕೇಗೌಡನದೊಡ್ಡಿ ಗ್ರಾಮ, ಕಿರುಗಾವಲು ರವರು ದಿನಾಂಕ: 21-01-2013 ರಂದು ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋದವರು ಬೆಂಗಳೂರಿಗೆ ಹೋಗದೆ ಎಲೋ ಕಾಣೆಯಾಗಿರುತ್ತಾನೆ ನಾವು ಎಲ್ಲಾ ಕಡೆ ಹುಡುಕಾಡಿದರೂ ಆತ ಪತ್ತೆಯಾಗಿರುವುದಿಲ್ಲ,  ಅದ್ದರಿಂದ ಈದಿನ ತಡವಾಗಿ ಬಂದು ಈ ದೂರನ್ನು ನೀಡಿರುತ್ತೇನೆ.  ಕಾಣಿಯಾದ ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 21-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಮಹಿಳಾ ಕಿರುಕುಳ/ವರದಕ್ಷಿಣೆ ಪ್ರಕರಣಗಳು,  1 ಕಳವು ಪ್ರಕರಣ,  1 ವಂಚನೆ ಕಳವು ಪ್ರಕರಣ,  4 ಯು.ಡಿ.ಆರ್. ಪ್ರಕರಣಗಳು ಹಾಗು 7 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 21-01-2013 ರಂದು ಪಿರ್ಯಾದಿ ಸಿದ್ದರಾಮು ಬಿನ್. ಲೇಟ್. ನಿಂಗೇಗೌಡ, ಹೊಳಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿರವರ ಮಗ ಹೆಚ್.ಎಸ್. ಹೇಮಂತ್, 17 ವರ್ಷರವರು ತಮ್ಮ ಮನೆಯಿಂದ ಹೋದವರು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 20/2013 ಕಲಂ. ಹುಡುಗಿ  ಕಾಣೆಯಾಗಿದ್ದಾಳೆ.

ದಿನಾಂಕ: 21-01-2013 ರಂದು ಪಿರ್ಯಾದಿ ಜಯರಾಮೇಗೌಡ ಬಿನ್. ಲೇ|| ಕರಿಗೌಡ, ಗಾಂದಿನಗರರವರು ನೀಡಿದ ದೂರು ಏನೆಂದರೆ ಅವರ ಮಗಳು ಸೌಮ್ಯ ಬಿನ್ ಜಯರಾಮೇಗೌಡ, ಗಾಂದಿನಗರ ಗ್ರಾಮ ರವರು ದಿನಾಂಕ: 16-01-2013 ರಂದು ಯಾರು ಇಲ್ಲದ ಸಮಯದಲ್ಲಿ ಮನೆಯನ್ನು ಬಿಟ್ಟು ಹೋಗಿರುತ್ತಾಳೆ ಇದುವರೆವಿಗೂ ಎಲ್ಲಿಯೂ ಹುಡುಕಿದರೂ ಸಿಕ್ಕಿರುವುದಿಲ್ಲ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮಹಿಳಾ ಕಿರುಕುಳ/ವರದಕ್ಷಿಣೆ ಪ್ರಕರಣಗಳು :

 1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 498(ಎ)-323-504 ಐ.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಪದ್ಮ ಕೋಂ.ಸತೀಶ, ಕೆ.ಹಾಗಲಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಆರೋಪಿ ಸತೀಶ ಬಿನ್. ಸುಭಾಷ್ ಕೆ.ಹಾಗಲಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಬಾಯಿಗೆ ಬಂದಂತೆ ಬೈಯ್ದು ಹೊಡೆಯುವುದು ಮಾಡುತ್ತಿದ್ದು, ಪಿರ್ಯಾದಿಯವರ ಮೇಲೆ ಅನುಮಾನ ಪಡುವುದು ಹಾಗೂ ಯಾರ್ಯಾರ ಜೊತೆ ಹೋಗಿದ್ದೆ ಎಂದು ಮನೆಗೆ ಸೇರಿಸಿದೆ ಕಿರುಕುಳ ನೀಡುತ್ತಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 498(ಎ)-323-506 ಕೂಡ 34 ಐ.ಪಿ.ಸಿ. & ಕಲಂ3 &4 ಡಿ.ಪಿ.ಕಾಯಿದೆ.

ದಿನಾಂಕ: 21-01-2013 ರಂದು ಪಿರ್ಯಾದಿ ಭವ್ಯಶ್ರೀ ಬಿ.ಎಸ್ ಕೋಂ ಸಿದ್ದರಾಜು, 22 ವರ್ಷ, ಒಕ್ಕಲಿಗರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಗಂಡ ಸಿದ್ದರಾಜು, ನಾದಿನಿ ಪ್ರಮಿಳಾ, ಮಾವ ದೇವೇಗೌಡ, ಅತ್ತೆ ಸಣ್ಣಮ್ಮ, ಎಲ್ಲರೂ ಬೆಳ್ಳಾಳೆ ಗ್ರಾಮರವರುಗಳು ಸೇರಿಕೊಂಡು ಪಿರ್ಯಾದಿಗೆ ಹಣವನ್ನು ತರುವಂತೆ ಒತ್ತಾಯಿಸಿ ಮನೆಯಿಂದ ಆಚೆಗೆ ತಳ್ಳಿ ಸೀಮೆಎಣ್ಣೆ ಸುರಿದು ಸಾಯಿಸುತ್ತೇನೆಂದು ಕೊಲೆ ಬೆದರಿಕೆ ಹಾಕಿ ಮೈ ಕೈ ಮೇಲೆ ಹೊಡೆದು ನೋವುಂಟು ಮಾಡಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಕಳವು ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 379 ಐ.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ನಾಗೇಶ್ ಬಾಬು, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಮಹಾಸಭಾ (ರಿ) ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಖಿತ ಭಾರತ ವೀರಶೈವ ಸಮಾಜದ ಕಛೇರಿಯ ಕಟ್ಟಡವನ್ನು ನಿರ್ಮಿಸಲಾಗಿದೆ ಹಾಗೂ ಈ ಕಟ್ಟಡಕ್ಕೆ ರೂ 10,000/- ಮೌಲ್ಯದ 2 ಬಾಗಿಲುಗಳನ್ನು ಅಳವಡಿಸಿರುವುದು ಸರಿಯಷ್ಟೆ. ನಮ್ಮ ಸಮಾಜದ ಕಟ್ಟಡದ ಕಛೇರಿಯ ಕಡೆ ನೋಡಲಾಗಿ ಬಾಗಿಲುಗಳು ಇಲ್ಲದಿರುವುದು ಅವರ ಗಮನಕ್ಕೆ ಬಂದು ಸದರಿ ವಿಷಯವನ್ನು ನಮ್ಮ ಸಮಾಜದ ಮುಖಂಡರುಗಳಿಗೆ ಖುದ್ದಾಗಿ ಬಂದು ತಿಳಿಸಿರುತ್ತಾರೆ. ನಮ್ಮ ಸಮಾಜದ ಮುಖಂಡರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ ಈ ಕೃತ್ಯವನ್ನು ನಂದೀಶ ಬಿನ್ ಡಿ.ಎಸ್.ಬಸವರಾಜಸ್ವಾಮಿ ಮತ್ತು ಇತರರು ಸೇರಿ ಕಳ್ಳತನ ಮಾಡಿರುವುದು ದೃಢಪಟ್ಟಿರುತ್ತದೆ ಆದ್ದರಿಂದ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಕಳವು ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 406 ಐ.ಪಿ.ಸಿ.

       ದಿನಾಂಕ: 21-01-2013 ರಂದು ಪಿರ್ಯಾದಿ ರವಿ ಬಿನ್. ಮರಿಯಾಚಾರ್, ಕೆ.ಎಂ.ದೊಡ್ಡಿ ಟೌನ್ ರವರು ನೀಡಿದ ದೂರು ಏನೆಂದರೆ ಆರೋಪಿ 1.ಸೋಮ ಶೇಖರ್ @ ಸ್ವಾಮಿ ಮಡೆನಹಳ್ಳಿ ಗ್ರಾಮ ರವರು  ಪಿರ್ಯಾದಿಯವರ ಕಾರಿನ ಚಾಲಕನಾಗಿದ್ದು ಪಿರ್ಯಾದಿಯವರು ಚಿನ್ನದ ಒಡವೆಗಳನ್ನು ತರಲು ಆರೋಪಿಯನ್ನು ಕರೆದುಕೊಂಡು ಹೋಗಿದ್ದು ವಾಪಸ್ಸು ಕೆ.ಎಂ.ದೊಡ್ಡಿಗೆ ಬಂಧು ಪಿರ್ಯಾದಿಯವರು ಹಣ್ಣನ್ನು ತರಲು ಇಳಿದು ಹೋಗಿದ್ದಾಗ ಆರೋಪಿಯು ಪಿರ್ಯಾದಿಯವರು ಕಾರಿನಲ್ಲಿ ಇಟ್ಟಿ ಹೋಗಿದ್ದ ಒಂದು ಮಾವಿನ ಕಾಯಿ ಡಿಸೈನ್ ಇರುವ 73.5 ಗ್ರಾಂ ನ ಚಿನ್ನದ ಲಾಂಗ್ ಸರ. ಹಾಗು ಒಂದು ಕೆಂಪು ಬಿಳಿ ಹರಳಿನ 5.5 ಗ್ರಾಂ. ನ ಲೇಡಿಸ್ ಉಂಗುರ. ಚಿನ್ನದ ಒಡವೆಗಳನ್ನು ಎತ್ತಿಕೊಂಡಿರುತ್ತಾನೆಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಕಾಳಯ್ಯ ಬಿನ್. ಲೇ|| ಮೋಟಯ್ಯ, ನೆಲ್ಲೂರುಪಾಲ, ಹನಗೋಡು, ಹೋ|| ಹುಣಸೂರು, ತಾ|| ಮೈಸೂರು ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗ ಸೋಮಶೇಖರ @ ಸೋಮ ಬಿನ್. ಕಾಳಯ್ಯ, 24 ವರ್ಷ, ನೆಲ್ಲೂರುಪಾಲ, || ಮೈಸೂರು ಜಿಲ್ಲೆ ರವರು ಹಾಗು ರಮ್ಯ ಇಬ್ಬರು ಪ್ರೀತಿಸುತ್ತಿದ್ದು ನನ್ನ ಮಗ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷವನ್ನು ಸೇವನೆ ಮಾಡಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಸಲಾಗಿದೆ.  


2. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಡಾ|| ರವಿಶ್ರೀ, ವೈದ್ಯರು, ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶಿವಮ್ಮ ಕೋಂ ಸಿದ್ದೇಗೌಡ, ತೆಂಕಹಳ್ಳಿ ಗ್ರಾಮ, ಮಳವಳ್ಳಿ ತಾ|| ಎಂಬುವವರಿಗೆ ತೆಂಕಹಳ್ಳಿ ಗ್ರಾಮದಲ್ಲಿ ಹಾವು ಕಚ್ಚಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ 296/12 ಕಲಂ 174 ಸಿಆರ್ಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ಈ ದಿನ ಸದರಿ ಠಾಣೆಯವರು ಬೆಳಕವಾಡಿ ಠಾಣೆಗೆ ವಗರ್ಾವಣೆ ನೀಡಿರುವ ಮೇರೆಗೆ ಪ್ರತಮ ವರ್ತಮಾನ ವರದಿ ದಾಖಲಿಸಲಾಗಿದೆ.  


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯುಡಿಆರ್ 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಕುಮಾರ ಬಿನ್. ಚನ್ನಂಕೇಗೌಡ, ಟಿ. ಎಂ. ಹೊಸೂರು ಗ್ರಾಮ,  ಶ್ರೀರಂಗಪಟ್ಟಣ ತಾ. ರವರು ನೀಡಿದ ಪರ್ಯಾದು ಏನೆಂದರೆ ಮಹೇಶ್ ಬಿನ್. ಚೆನ್ನೇಗೌಡ  49 ವರ್ಷ, ಟಿ ಎಂ ಹೊಸೂರು ಗ್ರಾಮ, ಶ್ರೀರಂಗಪಟ್ಟಣ ತಾ. ರವರಿಗೆ ಆಗಾಗ ಬೆನ್ನು ನೋವು ಬರುತ್ತಿದ್ದು, ಬೆನ್ನು ನೋವು ಜಾಸ್ತಿಯಾಗಿ ನೋವಿನ ಭಾದೆಯನ್ನು ತಾಳಲಾರದೆ  ಮನೆಯಲ್ಲಿ ಬೆಳಿಗಳಿಗೆ  ಸಿಂಪಡಿಸಲು ಇಟ್ಟಿದ್ದ ಯಾವುದೋ ವಿಷವನ್ನು ಔಷದಿ ಎಂದು ಭಾವಿಸಿ ಕುಡಿದು ಒದ್ದಾಡುತ್ತಿದ್ದು, ಕೂಡಲೇ ಮೈಸೂರಿನ ಕೆ..ಆರ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ  ಫಲಕಾರಿಯಾಗದೆ  ಮೃತಪಟ್ಟಿರುತ್ತಾರೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ನಾಗರಾಜು ಬಿನ್. ಸಿದ್ದೇಗೌಡ, ತೊರೆಶೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಚಿಕ್ಕಪ್ಪನವರ ಮಗ ಮಧು @ ಸಿದ್ದೇಗೌಡ ಬಿನ್ ಚಿಕ್ಕೋನು, 25 ವರ್ಷ, ತೊರೆಶೆಟ್ಟಹಳ್ಳಿ ಗ್ರಾಮ ಎಂಬುವವನಿಗೆ ಅಗಾಗ್ಗೆ ಹೊಟ್ಟೆನೋವು ಬರುತ್ತಿದ್ದು ಅವನು ಔಷಧಿಯನ್ನು ತೆಗೆದುಕೊಳ್ಳುತ್ತಿದ್ದು ಎಂದಿನಂತೆ ಸಂಜೆ ಸಮಯದಲ್ಲಿ ಔಷದಿಯನ್ನು ಸೇವಿಸುವಾಗ ಹೊಟ್ಟೆನೋವಿನ ಔಷಧಿ ಎಂದು ತಿಳಿದು ಹಿಪ್ಪನೇರಳೆ ಕಡ್ಡಿಗೆ ಸಿಂಪಡನೆ ಮಾಡಲು ತಂದಿದ್ದ ಕ್ರಿಮಿನಾಶಕವನ್ನು ಸೇವಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರುತ್ತಾನೆ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 20-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-01-2013 ರಂದು ಒಟ್ಟು 14 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ಭಾರತೀಯ ಪುರಾತತ್ವ ಸಂರಕ್ಷಣಾ ಕಾಯಿದೆ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಅಕ್ರಮ ಮರಳು ಕಳವು ಹಾಗು ಸಾಗಾಣಿಕೆ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-01-2013 ರಂದು ಪಿರ್ಯಾದಿ ಚಿಕ್ಕೋನಯ್ಯ ಬಿನ್. ಲೇಟ್. ಕರಿಯಯ್ಯ, ಶಂಬೂನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಶಾಂತ ಕೋಂ ಸ್ವಾಮಿ, 28 ವರ್ಷ, ಪರಿಶಿಷ್ಟ ಜಾತಿ, ಗೃಹಿಣಿ, ಚಿಕ್ಕಾಯರಹಳ್ಳಿ ರವರು ಲ್ಯಾಂಪ್ಗೆ ಸೀಮೆಎಣ್ಣೆ ಸೀಸೆಯಿಂದ ಸೀಮೆಎಣ್ಣೆ ಹಾಕುತ್ತಿದ್ದಾಗ ಲ್ಯಾಂಪ್ ಸೀಮೆ ಎಣ್ಣೆ ತುಂಬಿ ಮೈಮೇಲೆ ಮತ್ತು ಬಟ್ಟೆಯ ಮೇಲೆ ಚೆಲ್ಲಿ ಆಕಸ್ಮಿಕವಾಗಿ ಗೋಡೆಯಲ್ಲಿ ನೇತುಹಾಕಿದ್ದ ಲ್ಯಾಂಪ್ಗೆ ಕೈ ತಗುಲಿ ಲ್ಯಾಂಪ್ ತಲೆಯ ಮೇಲೆ ಬಿದ್ದು ಲ್ಯಾಂಪ್ನಲ್ಲಿದ್ದ ಸೀಮೇಎಣ್ಣೆ ಮೈಮೇಲೆ ಚೆಲ್ಲಿದ್ದರಿಂದ ಬಟ್ಟೆಯೆಲ್ಲಾ ಪೂರ್ಣಹತ್ತಿಕೊಂಡಾಗ ಅಕ್ಕಪಕ್ಕದವರು ಬಂದು ಬೆಂಕಿ ಆರಿಸಿ ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಭಾರತೀಯ ಪುರಾತತ್ವ ಸಂರಕ್ಷಣಾ ಕಾಯಿದೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 447 ಐ.ಪಿ.ಸಿ. ಮತ್ತು 16[1], 19[1] ಹಾಗೂ 7 ಭಾರತೀಯ ಪುರಾತತ್ವ ಸಂರಕ್ಷಣಾ ಕಾಯಿದೆ 1958

ದಿನಾಂಕ: 20-01-2013 ರಂದು ಪಿರ್ಯಾದಿ ನಾಗರಾಜು.ವಿ.ಆರ್, ಸಹಾಯಕ ಸ್ಮಾರಕ ಸಂರಕ್ಷಣ ವಲಯ ಅಧಿಕಾರಿ, ಭಾರತೀಯ ಪುರಾತತ್ವ ಇಲಾಖೆ, ಶ್ರೀರಂಗಪಟ್ಟಣ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು, ಕೆರೆತಣ್ಣೂರು ಗ್ರಾಮ, ಪಾಂಡವಪುರ ತಾಲ್ಲೋಕು ರವರುಗಳು ಶ್ರೀನಂಬಿ ನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೆರೆತಣ್ಣೂರು ಗ್ರಾಮದ ಸದರಿ ಜಾಗವು ರಾಷ್ಟ್ರೀಯ ಸ್ಮಾರಕವಾಗಿ ರುವುದರಿಂದ ನಿಷೇದಿತ ಪ್ರದೇಶವಾಗಿದ್ದು, ಯಾವುದೇ ಅನ್ಯ ಚಟುವಟಿಕೆ ಮಾಡುವುಂತಿಲ್ಲ, ಸಭೆಗಳನ್ನು ಮಾಡುವಂತಿಲ್ಲ. ಸಭೆಯನ್ನು ಕೇಂದ್ರ ಸಕರ್ಾರದ ಅನುಮತಿ ಪಡೆದುಕೊಂಡು ಮಾಡಬೇಕಾಗಿದ್ದು, ಸದರಿ ಜಾಗದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖಾ ಕಾನೂನು ಉಲ್ಲಂಘನೆಯ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಇತ್ಯಾದಿಯಾಗಿ ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಳವಳ್ಳಿ ಗ್ರಾಮಾಂತರ. ಪೊಲೀಸ್ ಠಾಣೆ ಮೊ.ನಂ. 11/13 ಕಲಂ. ಕಲಂ.498(ಎ),506 ರೆ:ವಿ 34 ಐ.ಪಿ.ಸಿ. ಕೂಡ 3 & 4 ಡಿ.ಪಿ. ಕಾಯ್ದೆ.

ದಿನಾಂಕ: 20-01-2013 ರಂದು ಪಿರ್ಯಾದಿ ಮಂಜುಳ.ಎಂ.ಸಿ. ಕೋಂ. ಬಿ.ಎ.ಪ್ರಕಾಶ, ಮನೆಕೆಲಸ, ಬಂಡೂರು ಗ್ರಾಮ, ಕಿರುಗಾವಲು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1] ಮಾದಯ್ಯ 2] ನಿಂಗಮ್ಮ ಕೋಂ.ಮಾದಯ್ಯ, 3] ಬಸವರಾಜು ಬಿನ್ ಮಾದಯ್ಯ ಎಲ್ಲರೂ ಬಂಡೂರು ಗ್ರಾಮ, ಕಿರುಗಾವಲು ರವರುಗಳು ನೀಡಿದ ದೂರು ಏನೆಂದರೆ ನಿನ್ನನ್ನು ಮತ್ತು ನಿನ್ನ ಮಗುವನ್ನು ಕೊಲೆ ಮಾಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನನ್ನ ಮಗಳ ಸಾವಿಗೆ ಹಾಗೂ ನನಗೆ ಪ್ರತಿ ನಿತ್ಯ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಹಿಂಸೆಗೆ ನನ್ನ ಅತ್ತೆ , ಮಾವ ಹಾಗೂ ನನ್ನ ಗಂಡನ ಅಣ್ಣ ಬಸವರಾಜು ಇವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾಗಿರುತ್ತಾರೆ ಇವರ ವಿರುದ್ದ ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ದೂರಿನ ಮೇರೆಗೆ ತುತರ್ು ಅಪರಾಧ ವರದಿ ದಾಖಲಿಸಲಾಗಿದೆ.  


ಅಕ್ರಮ ಮರಳು ಕಳವು ಹಾಗು ಸಾಗಾಣಿಕೆ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 07/13 ಕಲಂ. 188-379 ಐ.ಪಿ.ಸಿ.

ದಿನಾಂಕ: 20-01-2013 ರಂದು ಪಿರ್ಯಾದಿ ಬಿ.ಎಲ್. ವೇಣುಗೋಪಾಲ. ತಗ್ಗಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ, ಕೊಪ್ಪ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಟ್ರಾಕ್ಟರ್ ನಂ. ಕೆಎ-11-ಟಿ-8658 ಟ್ರೈಲರ್ ನಂ.ಕೆಎ-11-8659ರ ಮರಳು ತುಂಬಿದ ಟ್ರಾಕ್ಟರ್ ಚಾಲಕ ರಾತ್ರಿ 09-30 ಗಂಟೆಗೆ ಬರುತ್ತಿದ್ದ ಗಾಡಿಯನ್ನು ನಮ್ಮ ಗ್ರಾಮಸೇವಕ ತಡೆಗಟ್ಟಿ ಮರಳು ಸಾಗಾಣಿಕೆ ಪರವಾನಗಿ ಬಗ್ಗೆ ಚಾಲಕನನ್ನು ವಿಚಾರಿಸಲು ಹೋದಾಗ ಅವನು ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾನೆ. ಹಾಗೂ ಶಿಂಷಾನದಿಯಲ್ಲಿ ನಿಷೇಧಾಜ್ಞೆ ಇದ್ದರು ಸಹ ಅಕ್ರಮವಾಗಿ ಮರಳು ತುಂಬಿಕೊಂಡು ಕಳವು ಮಾಡಿಕೊಂಡು ಹೋಗುತ್ತಿದ್ದ ಟ್ರಾಕ್ಟರನ್ನು ತಂದು ಹಾಜರ್ಪಡಿಸಿದ್ದು, ಇದರ ಬಗ್ಗೆ ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 19-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-01-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ವಂಚನೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ರಸ್ತೆ   ಅಪಘಾತ ಪ್ರಕರಣ,  1 ಕಳ್ಳತನ ಪ್ರಕರಣ,  1 ಕಳವು ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   


ಯು.ಡಿ.ಆರ್. ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 19-01-2013 ರಂದು ಪಿರ್ಯಾದಿ ಅಯೂಬ್ ಬಿನ್.ಲೇಟ್. ಮಹಮ್ಮದ್ ಪೀರ್, 1 ನೇ ಅಡ್ಡರಸ್ತೆ, ರವೀಂದ್ರ ರೈಸ್ ಮಿಲ್ ರಸ್ತೆ,  ಸಬ್ದರಿಯಾಬಾದ್ ಮೊಹಲ್ಲಾ, ಮಂಡ್ಯ ರವರು ನೀಡಿದ ದೂರು ಏನೆಂದರೆ ಈತನು ತೆವೆಳಿಕೊಂಡು ಭಿಕ್ಷೆ ಬೇಡುವಾಗಲೋ ಅಥವಾ ಹೋಗುವಾಗಲೋ ಬಿದ್ದು ತಲೆಯಲ್ಲಿ ಹಳೆ ಗಾಯವಾಗಿದ್ದು ತಲೆಗೆ ಬಿಳಿ ಬ್ಯಾಂಡೇಜ್ ಬಟ್ಟೆ ಕಟ್ಟಿಕೊಂಡಿರುತ್ತಾನೆ. ಈತನ ಮೈಮೇಲೆ ಆಕಾಶ ಬಣ್ಣದ ಚೆಕ್ಸ್ಶಟವೆಲ್, ಸೀಮೆಂಟ್ ಕಲರ್ ಪ್ಯಾಂಟು ಇದ್ದು ಸಾದಾರಣ ಮೈಕಟ್ಟು ಉಳ್ಳವನಾಗಿರುತ್ತಾನೆ ಈತನ ಹೆಸರು ವಿಳಾಸ ತಿಳಿದು ಬಂದಿಲ್ಲಾ ಈತನು ಈ ದಿನ ದಿನಾಂಕ: 18-01-2013 ರಂದು ಬೆಳಿಗ್ಗೆ 10-30 ಘಂಟೆ ಸಮಯದಲ್ಲಿ ರವೀಂದ್ರ ರೈಸ್ ಮಿಲ್ 1 ನೇ ಕ್ರಾಸ್ ನ ಮುತ್ತೂಟ್ಫಿನ್ಕಾಪರ್,  ಗೋಡೆಯ ಪಕ್ಕದ ಪ್ಲ್ಯಾಟ್ ಪಾರಂ ಮೇಲೆ ಸತ್ತುಹೋಗಿರುತ್ತಾನೆ, ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ  ದೂರಿನ ಮೇರೆಗೆ ಯುಡಿಆರ್ ಪ್ರಕರಣ ದಾಖಲಿಸಲಾಗಿದೆ. 



ವಂಚನೆ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 420 ಐ.ಪಿ.ಸಿ.

ದಿನಾಂಕ: 19-01-2013 ರಂದು ಪಿರ್ಯಾದಿ ಕಿಶೋರ್, ಹೊಸಹೊಳಲು ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಕೆಎ-04-ಬಿ-5277 ಈ ಟಾಟಾ ಸುಮೋವನ್ನು ಕೆ.ಆರ್. ಪೇಟೆ ಟೌನ್ನಲ್ಲಿ ಬಾಡಿಗೆ ಓಡಿಸುತ್ತಿದ್ದೆನು. ನಾನು ಟಾಟಾ ಸುಮೋವನ್ನು ದಿನಾಂಕ: 15.12.2012 ರಂದು ಬೆಳಿಗ್ಗೆ 11.15 ಗಂಟೆಯಲ್ಲಿ ಕೆ.ಆರ್. ಪೇಟೆ ಟೌನ್ ವಾಸಿ ಇಲಿಯಾಸ್ ಎಂಬ ವ್ಯಕ್ತಿಗೆ 1.60.000/- ರೂಗಳಿಗೆ ಚಂದ್ರು, ಗೋಪಿ, ಸಮೀರ್ ಹಾಗು ಬಸವರಾಜು ರವರ ಸಮಕ್ಷಮದಲ್ಲಿ ಮಾರಾಟ ಮಾಡಿದ್ದೆನು, 25 ಸಾವಿರ ಅಡ್ವಾನ್ಸ್ ಕೊಟ್ಟು ಉಳಿದ ಬಾಕಿಯ ಮೊತ್ತವನ್ನು ಕಿಕ್ಕೇರಿಗೆ ಹೋಗಿ ತಂದು ಕೊಡುತ್ತೆನೆಂದು ಟಾಟಾ ಸುಮೋ ತೆಗೆದುಕೊಂಡು ಹೋದವನು ಇದುವರೆವಿಗು ವಾಪಸ್ಸು ಬಂದಿರುವುದಿಲ್ಲ ಆದರಿಂದ ಹಣವನ್ನು ಕೊಡದೆ ಮೋಸ ಮಾಡಿ ಟಾಟಾ ಸುಮೋ ತೆಗೆದುಕೊಂಡು ಹೋದ ಇಲಿಯಾಸ್, ಕೆಆರ್ ಪೇಟೆ ಟೌನ್ ಎಂಬವವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 19-01-2013 ರಂದು ಪಿರ್ಯಾದಿ ಲಕ್ಷ್ಮಮ್ಮ, ಡಿ.ಎ.ಕೆರೆ ಗ್ರಾಮ,  ಸಿ.ಎ.ಕೆರೆ ಹೋಬಳಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಮಗಳು ಡಿ.ಸಿ.ಪೂಜಾ, ಸುಮಾರು 14ವರ್ಷ, ಬುದ್ದಿ  ಭ್ರಮಣೆಯಾಗಿದ್ದರಿಂದ ಅವರು ಆಗಾಗ ಹೊರಗಡೆ ಹೋಗಿ ಮತ್ತೆ ಕೆಲವು ದಿನಗಳ ನಂತರ ಬರುತ್ತಿದ್ದರು ಆದರೆ ಸುಮಾರು 6 ತಿಂಗಳ ಹಿಂದೆ ಮನೆಯಿಂದ ಹೊರಕ್ಕೆ ಹೋದವಳು ವಾಪಸ್ಸು ಮನೆಗೆ ಬಂದಿರುವುದಿಲ್ಲ ಪತ್ತೆಮಾಡಿಕೊಡಿ ಎಂದು ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ರಸ್ತೆ ಅಪಘಾತ ಪ್ರಕರಣ :


ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 279, 337, 304[ಎ] ಐ.ಪಿ.ಸಿ.

ದಿನಾಂಕ: 19-01-2013 ರಂದು ಪಿರ್ಯಾದಿ ಶ್ರಿನಿವಾಸ್ರಾಜು ಬಿನ್ ಲೇ; ವೆಂಕಟಪ್ಪ, 45 ವರ್ಷ, ಈಡಿಗ ಜನಾಂಗ ಕಾಮದೇನು ಬಾರ್ನಲ್ಲಿ ಕೆಲಸ, ವಾಸ ಬೋವಿ ಕಾಲೋನಿ, 7ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೃಷ್ಣಮೂತರ್ಿ, ಕೆ.ಎ-11, ಎಸ್-5529ರ ಹಿರೋಹೊಂಡಾ ಮೋಟಾರ್ ಸೈಕಲ್ ಚಾಲಕ, ವಾಸ ಮಂಡ್ಯ ರವರು ಮೋಟಾರ್ ಸೈಕಲನ್ನು ಅತಿವೇಗವಾಗಿ ಅಜಾಗರುಕತೆಯಿಂದ ಅಡ್ಡದಿಡ್ಡಿ ಚಾಲನೆ ಮಾಡಿಕೊಂಡು ಬಂದು ಹೆಬ್ಬಾಳಕ್ಕೆ ಕೆಡವಿದ್ದು ಸ್ನೇಹಿತರಾದ ಸತ್ಯನಾರಾಯಣ, ಶ್ರೀನಿವಾಸ್ರಾಜು ರವರುಗಳು ಒಟ್ಟಿಗೆ ಮೂರು ಜನರು ಮೋಟಾರ್ ಸೈಕಲ್ ಸಮೇತ ಹೆಬ್ಬಾಳದ ನೀರಿಗೆ ಬಿದಿದ್ದು, ಈ ಅಪಘಾತದಲ್ಲಿ ಫಿರ್ಯಾದುದಾರರಿಗೆ ಪೆಟ್ಟಾಗಿದ್ದು, ಮೋಟಾರ್ ಸೈಕಲ್ ಮಧ್ಯಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದು ಸತ್ಯನಾರಾಯಣರವರನ್ನು ಮಂಡ್ಯ ಜಿಲ್ಲಾ ಅಸ್ಪತ್ರೆಗೆ ತರಲಾಗಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಡಪಡಿಸಿರುತ್ತಾರೆ. ಮೋಟಾರ್ ಸೈಕಲ್ ಚಾಲಕರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಎಂದು ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 



ಕಳ್ಳತನ ಪ್ರಕರಣ :


ಮದ್ದೂರು ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 457-380 ಐ.ಪಿ.ಸಿ.

ದಿನಾಂಕ: 19-01-2013 ರಂದು ಪಿರ್ಯಾದಿ ನಾಥಪ್ಪ @ ಪೂಜಾರಿ ಬಿನ್. ಲೇ||ಕೆಂಚೇಗೌಡ, 60ವರ್ಷ, ಒಕ್ಕಲಿಗರು, ಶ್ರೀ ಪಟ್ಟಲದಮ್ಮ ದೇವರಪೂಜಾರಿ, ವಾಸ ರುದ್ರಾಕ್ಷಿಪುರಗ್ರಾಮ, ಮದ್ದೂರು ತಾ||. ರವರು ನೀಡಿದ ದೂರು ಏನೆಂದರೆ ದಿನಾಂಕಃ-18-01-2013 ರಂದು ರಾತ್ರಿ ವೇಳೆಯಲ್ಲಿ ರುದ್ರಾಕ್ಷಿಪುರ ಗ್ರಾಮ ಪಟ್ಟಲದಮ್ಮದೇವಸ್ಥಾನದ ಬಾಗಿಲು ಹೊಡೆದು ದೇವಸ್ಥಾನದ ಬೀರುವಿನಲ್ಲಿದ್ದ ಸುಮಾರು 2 ಕೆಜಿ ಬೆಳ್ಳಿಯ ದೇವರ ಪೂಜಾದ ಗಿಂಡಿ ಹಾಗೂ ದೇವರ ಮೈಮೇಲೆ ಇದ್ದ 2 ಗ್ರಾಂನ ಚಿನ್ನದ 1 ತಾಳಿ ಹಾಗೂ ಒಂದೊಂದು ಗ್ರಾಂನ ಎರಡು ತಾಳಿಗಳನ್ನು ಹಾಗೂ ದೇವರ ಬೆಳ್ಳಿಯ ಕಿರೀಟ 800 ಗ್ರಾಂ ಹಾಗೂ ದೇವಸ್ಥಾನದಲ್ಲಿದ್ದ ತಾಮ್ರದ ಬಿಂದಿಗೆಯ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು 2 ಲಕ್ಷದ 18,000 ರೂ ಆಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 36/13 ಕಲಂ. 379 ಐ.ಪಿ.ಸಿ.

ದಿನಾಂಕ: 19-01-2013 ರಂದು ಪಿರ್ಯಾದಿ ಸಿ.ಕೆ. ಸೋಮಶೇಖರ ಬಿನ್. ಕೆಂಪಯ್ಯ @ ಹುಚ್ಚೇಗೌಡ, ಮನೆ ನಂ. 634, ಚಾಮನಹಳ್ಳಿ ಗ್ರಾಮ, ಕಸಬಾ ಹೋಬಳಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ-18-01-2013 ರಂದು ಪಿರ್ಯಾದಿಯವರು ಮದ್ದೂರು ಟೌನ್ ಮಹಾವೀರ ಟಾಕೀಸ್ ಎದುರು ಇರುವ ಮಣಪ್ಪುರಂ ಗೋಲ್ಡ್ ಲೋನ್ ಕಛೇರಿ ಬಳಿ ಅವರ ಹೀರೋ ಹೋಂಡಾ ಮೋಟಾರ್ ಬೈಕ್ (ಸ್ಪ್ಲೆಂಡರ್ ಪ್ಲಸ್) ಸಂಖ್ಯೆ ಕೆಎ-11/ಆರ್-7397 ಅನ್ನು ನಿಲ್ಲಿಸಿ ಸದರಿ ಕಛೇರಿಗೆ ಹೋಗಿದ್ದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 18-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-01-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ                 1  ಯು.ಡಿ.ಆರ್.ಪ್ರಕರಣ,  6 ಕಳ್ಳತನ ಪ್ರಕರಣಗಳು,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವರದಕ್ಷಿಣೆ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    

ಯು.ಡಿ.ಆರ್.ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ರೇಣುಕಮ್ಮ ಕೋಂ. ಲೇಟ್. ಹೆಚ್. ಮುತ್ತುರಾಯಪ್ಪ, 52 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ಕಲಾವತಿ ಕೋಂ. ಆನಂದ,   30 ವರ್ಷ, ಎಂಬುವವರಿಗೆ ಈಗ್ಗೆ ಸುಮಾರು ವರ್ಷಗಳಿಂದ ತಲೆಯಲ್ಲಿ ಗೆಡ್ಡೆ ಕಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದರು ಗುಣಮುಖವಾಗಿರಲಿಲ್ಲ, ಬೆಂಕಿ ಹತ್ತಿಸಿಕೊಂಡು ಆಕಸ್ಮಿಕವಾಗಿ ಸುಟ್ಟಗಾಯಗಳಿಂದ ಮೃತಪಟ್ಟಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣಗಳು :

1. ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ರಘು ಕೆ.ಎನ್. ಬಿನ್. ನಾಗರಾಜು, ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಅಜರ್ಿದಾರರ ಬಾಬ್ತು ಸುಮಾರು 25.000 ರೂ ಬೆಲೆ ಬಾಳುವ ಬಜಾಜ್ ಪ್ಯಾಸೆಂಜರ್ ಆಟೋ  ನಂ. ಕೆಎಲ್-10-ಎಸ್-4427 ರ ಆಟೋ ಇಂಜಿನ್  ನಂ.ಕೆಎಲ್-10-ಎಸ್-4427  ರ ಆಟೋ ಇಂಜಿನ್ ನಂ. ಎಇಎಂಬಿಕೆಎಂ12486 ಚಾಸಿಸ್ ನಂ. 24ಎಫಬಿಕೆಎಂ96388  ಆಟೋವನ್ನು ಮನೆಯ ಮುಂದೆ ಎಂದಿನಂತೆ ನಿಲ್ಲಿಸಿದ್ದು ಕಳುವಾಗಿರುವ ವಾಹನವನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಶಶಿಕಲಾ ಬಿನ್. ಈರೇಗೌಡ, ಮಲ್ಲೇನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಗವಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಿಸಲು ಬಂದಿದ್ದು ತುಂಬಾ ಜನ ಜಂಗುಳಿ ಇದ್ದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಪೂಜೆ ಮಾಡಿಸಿ ಮುಂದೆ ಬಂದು ನೋಡಿಕೊಂಡಾಗ ಪಿರ್ಯಾದಿ ಕತ್ತಿನಲ್ಲಿದ್ದ ಮಾಂಗಲ್ಯ ಸರ, 1 ಜೊತೆ ಗುಂಡು ಕಳುವಾಗಿತ್ತು. ನನಗೆ ಅರಿವಿಲ್ಲದಂತೆ ಯಾರೋ ಕಳ್ಳರು ಅದನ್ನು ಅಪಹರಿಸಿರುತ್ತಾರೆ.


3. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಚಿಕ್ಕಸ್ವಾಮಿ ಬಿನ್. ಮಂಚಯ್ಯ, 30 ವರ್ಷ, ಅಣಸಾಲೆ ಗ್ರಾಮ, ಕಿರುಗಾವಲು ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. ಕೆ.ಎ 11 ಯು -5094 ಟಿ.ವಿ.ಎಸ್ ಮೊಪೆಡ್ ನಲ್ಲಿ ತಾಲ್ಲೂಕು ಕಚೇರಿಗೆ ಬಂದು ಕೆಲಸದ ನಿಮಿತ್ತ ನಿಲ್ಲಿಸಿ ನಮ್ಮ ಕೆಲಸ ಮುಗಿಸಿಕೊಂಡು ವಾಪಸ್ಸು ಬಂದು ನೋಡಲಾಗಿ ನಮ್ಮ ಬಾಬ್ತು  ಟಿವಿ.ಎಸ್ ಮೊಪೆಡ್ ನಾವು ನಿಲ್ಲಿಸಿದ್ದ ಜಾಗದಲ್ಲಿ ಕಾಣಲಿಲ್ಲ ಯಾರೋ ಕಳ್ಳರು ನನ್ನ ಸ್ಕೂಟರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4.ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 32/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಪುಟ್ಟೇಗೌಡ ಲೇಟ್ ನಿಂಗೇಗೌಡ, 62 ವರ್ಷ, ವ್ಯವಸಾಯ, ಒಕ್ಕಲಿಗರು, ಕಪರನಕೊಪ್ಪಲು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ತಾಲ್ಲೋಕು ಕಛೇರಿಗೆ ನನ್ನ ಬಾಬ್ತು ಮೊಪೆಡ್ ನಂಬರ್ ಕೆ.ಎ-11- ಘ- 4839 ಖಿ.ಗಿ.ಖ ಘಿಐ ಸ್ಕೂಟರ್ನಲ್ಲಿ ಮಧ್ಯಾಹ್ನ 12-30 ಗಂಟೆಯಲ್ಲಿ ಬಂದು ಸ್ಕೂಟರ್ನ್ನು ತಾಲ್ಲೋಕು ಕಛೇರಿಯ ಆವರಣದಲ್ಲಿ ನಿಲ್ಲಿಸಿ ಒಳಕ್ಕೆ ಹೋಗಿ. ಕೆಲಸ ಮುಗಿಸಿ ಮಧ್ಯಾಹ್ನ ಸುಮಾರು     01-30 ಗಂಟೆಯಲ್ಲಿ ಹೊರಕ್ಕೆ ಬಂದು ನನ್ನ ಸ್ಕೂಟರ್ನ್ನು ನೋಡಲಾಗಿ ಸ್ಕೂಟರ್ ಇರಲಿಲ್ಲ. ಯಾರೋ ಕಳ್ಳರು ನನ್ನ ಸ್ಕೂಟರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


5. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಮಹಾಲಿಂಗೇಗೌಡ ಬಿನ್. ಲೇಟ್. ದೇವೇಗೌಡ, ತಿಮ್ಮನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಜಮೀನಿನಲ್ಲಿ ಅಳವಡಿಸಿದ್ದ ಪಂಪ್ ಸೆಟ್ ಮೋಟಾರ್ನ್ನು ದಿನಾಂಕ: 11-01-2013 ರಂದು ರಾತ್ರಿ ವೇಳೆ, ಆರೋಪಿ ಬಸಪ್ಪ ಬಿನ್. ಮರಿಯಪ್ಪ, ತಾಳಶಾಸನ ಗ್ರಾಮ, ಪಾಂಡವಪುರ ತಾಲ್ಲೋಕು, ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


6. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 379 ಐ.ಪಿ.ಸಿ.

     ದಿನಾಂಕ: 18-01-2013 ರಂದು ಪಿರ್ಯಾದಿ ಸಿ. ಗಜೇಂದ್ರ ಬಿನ್. ಲೇ|| ಚಿಕ್ಕತಾಯಪ್ಪ, 49 ವರ್ಷ ರವರು ನೀಡಿದ ದೂರು ಏನೆಂದರೆ ದಿನಾಂಕ: 17-01-2013 ರಂದು ಯಾರೋ ಕಳ್ಳರು ನನ್ನ ಬೈಕ್ನ್ನು ಕಳವು ಮಾಡಿ ತೆಗೆದುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೊಪ್ಪ. ಪೊಲೀಸ್ ಠಾಣೆ ಮೊ.ನಂ. 06/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 18-01-2013 ರಂದು ಪಿರ್ಯಾದಿ ಜಯಲಕ್ಷ್ಮಿ ಕೋಂ. ಎ.ಶಿವಣ್ಣ,  40ವರ್ಷ, ಒಕ್ಕಲಿಗರು, ಮನೆಕೆಲಸ, ಕೊಪ್ಪ ಟೌನ್, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಗಂಡ ಎ.ಶಿವಣ್ಣ ಬಿನ್. ಅಂಕೇಗೌಡ @ ತಮ್ಮೇಗೌಡ, 50ವರ್ಷ, ಒಕ್ಕಲಿಗರು ದಿನಾಂಕ: 26-01-2013 ರಂದು ಮನೆಯಿಂದ ಹೊರಗೆ ಹೋದವರು ಪುನ: ಮನೆಗೆ ವಾಪಸ್ ಆಗಲಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 18-01-2013 ರಂದು ಪಿರ್ಯಾದಿ ಭ್ರಮಲಿಂಗಾಚಾರಿ ಬಿನ್. ಲೇಟ್. ಲಿಂಗಣ್ಣಚಾರಿ ರವರು ನೀಡಿದ ದೂರಿನ ವಿವರವೇನೆಂದರೆ ಬ್ರಹ್ಮೇಶ್. ಬಿನ್. ಬ್ರಹ್ಮಲಿಂಗಚಾರಿ, 18 ವರ್ಷ, ರವರು ದಿನಾಂಕ: 13/01/2013 ರಂದು ಲಕ್ಷ್ಮಿಸಾಗರ ಗ್ರಾಮದಿಂದ ಕಾಣೆಯಾಗಿರುತ್ತಾರೆ. 


3.ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. ಮನುಷ್ಯ ಕಾಣೆಯಾಗಿರುತ್ತಾನೆ.    

ದಿನಾಂಕ: 18-01-2013 ರಂದು ಪಿರ್ಯಾದಿ ಮಲ್ಲೇಶ ಬಿನ್. ಮರೀಗೌಡ, 34 ವರ್ಷ, ವ್ಯವಸಾಯ, ಕೀಳಘಟ್ಟ ಗ್ರಾಮ, ಕೊಪ್ಪ ಹೋಬಳಿ, ಮದ್ದೂರು ತಾ: ರವರು ನೀಡಿದ ದೂರು ಏನೆಂದರೆ ಆರೋಪಿ ರವಿ ಬಿನ್. ಮರೀಗೌಡ, 22 ವರ್ಷ, ದಿನಾಂಕ: 15-01-2013 ಸಂಜೆ 04-00 ಗಂಟೆಯ ಸಮಯದಲ್ಲಿ ಕೀಳಘಟ್ಟ ಗ್ರಾಮ, ಕೊಪ್ಪ ಹೋಬಳಿ, ಮದ್ದೂರು ತಾ. ರವರು ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ : 

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 498[ಎ] ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಲತಾ.ಎನ್. ಕೋಂ ನಾಗರಾಜು, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮತ್ತು ಅವರ ಗಂಡ ನಾಗರಾಜು ಬಿನ್ ಉಗ್ರಪ್ಪ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ಮದುವೆಯಾದ ಹೊಸದರಲ್ಲಿ ಅನ್ಯೋನ್ಯವಾಗಿದ್ದು, ನಂತರ ಗಂಡ ಶೀಲ ಶಂಕಿಸಿ ಅನುಮಾನದಿಂದ ನೋಡುವುದು ಮಾಡುತ್ತಿದ್ದು, ಜಗಳ ಮಾಡುವುದು ಮಾಡುತ್ತಿರುತ್ತಾರೆ ಆದ್ದರಿಂದ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 457-380 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ರವಿಕುಮಾರ, ವೈದ್ಯಾದಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಬೀರುವಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಹೆಸರು ವಿಳಾಸ ತಿಳಿಯಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರ ಬೀರುವಳ್ಳಿಯ ಕಟ್ಟಡದೊಳಗೆ ''ಕರ್ನಾಟಕ ಹೆಲ್ತ್ ಸಿಸ್ಟಂ ಡೆವಲಪ್ ಮೆಂಟ್''   ಅಡಿಯಲ್ಲಿ ಇತ್ತೀಚಿಗಷ್ಟೆ ನೀಡಲಾಗಿದ್ದ ಕಂಪ್ಯೂಟರ್ ಸಿಸ್ಟಮ್ ನ್ನು (ಮಾನಿಟರ್, ಯುಪಿಎಸ್. ಸಿಪಿಯು. ಪ್ರಿಂಟರ್.) ಅಳವಡಿಸಲಾಗಿತ್ತು ಅಳವಡಿಸಲಾಗಿದ್ದ ಕೋಣೆಯ ಬಾಗಿಲು ಸರಳುಗಳನ್ನು ಕತ್ತರಿಸಿ ಒಳ ತೂರಿ ಕಂಪ್ಯೂಟರ್ ಸಿಸ್ಟಮ್ ಅನ್ನು ಕಳವು ಮಾಡಿರುತ್ತಾರೆ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 17-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 17-01-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವಾಹನ ಕಳವು ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ವಂಚನೆ/ಕಳವು ಪ್ರಕರಣ ಹಾಗು 15 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 17-01-2013 ರಂದು ಪಿರ್ಯಾದಿ ಹೆಚ್.ಸಿ.ರಾಜಣ್ಣ ಬಿನ್. ಲೇ ಚನ್ನೇಗೌಡ, ವಕ್ಕಲಿಗರು, ಬ್ಯಾಡರಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ  ಯಾರೋ ಒಬ್ಬ ಗಂಡಸು ನೀರು ಕುಡಿಯಲೋ, ಸ್ನಾನ ಮಾಡಲೋ ಆಕಸ್ಮಿಕವಾಗಿ ಕರೆಗೆ ಬಿದ್ದು ಮರಣ ಹೊಂದಿದ್ದು, ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದರಿಂದ ಗುರುತು ಹಚ್ಚಲು ಸಾಧ್ಯವಾಗಿರುವುದಿಲ್ಲ ಈತನ ಸಾವಿನ ಬಗ್ಗೆ ಯಾವುದೇ ಅನುಮಾನವಿರದ ಕಾರಣ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುತ್ತೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 17-01-2013 ರಂದು ಪಿರ್ಯಾದಿ ಬಿ.ಬೋರೇಗೌಡ ಬಿನ್ ಬೋರಯ್ಯ, ರಾಮ ಮಂದಿರದ ರಸ್ತೆ, ಪಾಲಹಳ್ಳಿ, ಶ್ರೀರಂಗಪಟ್ಟಣ ತಾ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಟಿ.ಪ್ರಬಾಕರ 30 ವರ್ಷ ಎಂಬುವವರು ಕೆಲಸಕ್ಕೆ ಮೈಸೂರಿಗೆ ಹೋಗುತ್ತೇನೆಂದು ಹೇಳಿ ಹೋದವನು ಕಾಣೆಯಾಗಿರುತ್ತಾನೆ. ಕಳೆದ 03 ತಿಂಗಳಿಂದಲೂ ನಮ್ಮ ಸಂಬಂದಿಕರ ಮನೆ ಮತ್ತು ಹೊರಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ ತಾ. ದಿನಾಂಕ: 26-10-2012 ರಂದು ಪೋನ್ ಮಾಡಿದಾಗ ನಾನು ಎಲ್ಲೋ ದೂರವಿದ್ದೇನೆ ಬರುತ್ತೇನೆ  ಎಂದು  ಪೋನ್. ನಂ. 9844046298ಕ್ಕೆ  ತಿಳಿಸಿದನು  ಇದುವರೆವಿಗೂ ಮನೆಗೆ ಬಂದಿರುವುದಿಲ್ಲಾ ಪತ್ತೆ  ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. ಹುಡುಗಿ ಕಾಣೆಯಾಗಿರುತ್ತಾಳೆ.

ದಿನಾಂಕ: 17-01-2013 ರಂದು ಪಿರ್ಯಾದಿ ವೈ.ನವನೀತ್ ಕುಮಾರ್ ಬಿನ್ ಯೇಸುದಾಸ್ 58 ವರ್ಷ, ವಿನಾಯಕ ಬಡಾವಣೆ ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ಎನ್.ಶೈನಿ ಓಶಿನ್ ರವರು ಮನೆಯಿಂದ ಹೊರಗಡೆ ಹೋದವಳು ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ಆದ್ದರಿಂದ ನಾವು ಗಾಬರಿಗೊಂಡು ಎಲ್ಲಾ ಸಂಬಂಧಿಕರ ಮನೆಗಳಲ್ಲಿ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದರೂ ಎಲ್ಲೂ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 41[ಡಿ]-102 ಸಿಆರ್.ಪಿ.ಸಿ. ಕೂಡ 379 ಐ.ಪಿ.ಸಿ.

ದಿನಾಂಕ: 17-01-2013 ರಂದು ಪಿರ್ಯಾದಿ ಕೆ.ಲೋಕೇಶ, ಸಿಪಿಸಿ 684, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎಂ.ಮಹೇಶ ರಾಜಾಜಿನಗರ, ಬೆಂಗಳೂರು ಸಿಟಿ ರವರು ಮಾರುತಿ ವ್ಯಾನನ್ನು ಎಲ್ಲಿಯೋ ಕಳವು ಮಾಡಿಕೊಂಡು ತಂದಿರಬಹುದೆಂದು ಅನುಮಾನದ ಮೇಲೆ ಮುಂದಿನ ಕ್ರಮದ ಬಗ್ಗೆ ಬೆಳಗಿನ ಜಾವ 03-30 ಗಂಟೆಗೆ ಠಾಣೆಗೆ ಹಾಜರುಪಡಿಸಿರುವುದಾಗಿ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 498[ಎ]-323-506  ಐ.ಪಿ.ಸಿ ಕೂಡ 3 & 4 ಡಿ.ಪಿ. ಅಕ್ಟ್.

ದಿನಾಂಕ: 17-01-2013 ರಂದು ಪಿರ್ಯಾದಿ ರಾಜಲಕ್ಷ್ಮಿ, ಎನ್.ಇ.ಎಸ್. ಬಡಾವಣೆ, ಮಳವಳ್ಳಿ ಟೌನ್. ಮೊ.ನಂ. 9845091178 ರವರು ನೀಡಿದ ದೂರು ಏನೆಂದರೆ ಅವರ ಗಂಡ ಎಂ.ಹೆಚ್. ಉಮೇಶ್ ಬಿನ್ ಜಿ. ಹುಚ್ಚಯ್ಯ, ಎನ್.ಇ.ಎಸ್. ಬಡಾವಣೆ, ಮಳವಳ್ಳಿ ಟೌನ್ ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ, ಕಿರುಕುಳ ನೀಡುತ್ತಿದ್ದು ಹಾಗೂ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ಬಗ್ಗೆ ಪ್ರಶ್ನಿಸಲು ಹೋದಾಗ ಕತ್ತನ್ನು ಹಿಡಿದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅದ್ದರಿಂದ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ವರದಕ್ಷಿಣಿ ಕಿರುಕುಳ ನೀಡುತ್ತಿರುವ ನನ್ನ ಗಂಡ ಉಮೇಶ್ನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. 


ವಂಚನೆ/ಕಳವು ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. 420, 379 ಐ.ಪಿ.ಸಿ.

       ದಿನಾಂಕ: 17-01-2013 ರಂದು ಪಿರ್ಯಾದಿ ಶಕುಂತಲಮ್ಮ ಕೊಂ. ಲೇಟ್. ಪುಟ್ಟೇಗೌಡ, 63 ವರ್ಷ, ವಕ್ಕಲಿಗರು. ಮನೆ ಕೆಲಸ, ಕಟ್ಟೇರಿ ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರನ್ನು ಕರೆದುಕೊಂಡು ಹೋಗಿ ಮೋಸ ಮಾಡುವ ಉದ್ದೇಶದಿಂದ ಕತ್ತಿನಲ್ಲಿ ಇದ್ದ ಮಾಂಗಲ್ಯ ಸರ ಹಾಗೂ ಕಿವಿಯಲ್ಲಿದ್ದ ಮಾಟಿಯನ್ನು ಬಿಚ್ಚಿಕೊಂಡು ನನಗೆ ಜ್ಞಾನ ತಪ್ಪಿದಂತಾಯಿತು. ನನಗೆ ಜ್ಞಾನ ಬಂದಾಗ ನನ್ನ ವಡವೆಯನ್ನು ನೋಡಿಕೊಂಡಾಗ 35 ಗ್ರಾಂ ತೂಕವುಳ್ಳ ಮಾಂಗಲ್ಯ ಸರ, ಕಿವಿಯ 5 ಗ್ರಾಂ ಮಾಟಿ, ಒಟ್ಟು 1,15,000/- ರೂ ಬೆಲೆ ಬಾಳುವ ವಡವೆಯನ್ನು ಮೋಸ ಮಾಡಿ ಕಳವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ದೂರಿನ ಮೇರೆಗೆ ತುರ್ತು ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  

DAILY CRIME REPORT DATED : 16-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-01-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ಕೊಲೆ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಸ್ಪೋಟಕ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ರಾಬರಿ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.     


ಕಳವು ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 379 ಐ.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಗಿರಿಸ್ವಾಮಿ ಬಿನ್ ಲೇಟ್. ಕೋಳಬೋವಿ, 39 ವರ್ಷ, ವ್ಯವಸಾಯ, ರಾಮನಂದ ನಗರ, ಬೆಳ್ಳೂರು ಹೋಬಳಿ, ನಾಗಮಂಗಲ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ಬೈಕ್ ನಂಬರ್ ಕೆ.ಎ.54-ಹೆಚ್-4149,  ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ ಬಂದು ಸಂಸ್ಕೃತ ಕಾಲೇಜಿನ ಪಕ್ಕದಲ್ಲಿ ನಿಲ್ಲಿಸಿ ತಮ್ಮ ಅಂಗಡಿಗೆ ಹೋಗಿ ಮದ್ಯಾಹ್ನ 13-30 ಗಂಟೆಯಲ್ಲಿ ಬಂದು  ನೋಡಲಾಗಿ ನಿಲ್ಲಿಸಿದ್ದ ತಮ್ಮ ಬೈಕ್ ಸ್ಥಳದಲ್ಲಿ ಇರಲಿಲ್ಲ. ಯಾರೋ ಕಳ್ಳರು ನನ್ನ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅದರ ಅಂದಾಜು ಬೆಲೆ 30000/- ರೂಗಳಾಗಿರುತ್ತದೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 8/13 ಕಲಂ. 379 ಐ.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಹನುಮಂತಯ್ಯ ಬಿನ್. ಮಾದೇಗೌಡ, ಶಾಖಾಧಿಕಾರಿ, ಸೆಸ್ಕ್ ಘಟಕ-2, ಮಳವಳ್ಳಿ ಉಪವಿಭಾಗ-1, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ದುಷ್ಕರ್ಮಿಗಳು  ಮಳವಳ್ಳಿ-ಕನಕಪುರ ರಸ್ತೆ, ಅಟ್ಟುವನಹಳ್ಳಿ ಕ್ರಾಸ್ ಬಳಿ, 11 ಕಿಲೋ ವ್ಯಾಟ್ ಮಾರ್ಗದಲ್ಲಿ 04 ಸ್ಪ್ಯಾನ್ ನ ಸುಮಾರು 480 ಮೀಟರ್ ರ್ಯಾಬಿಟ್ 12,000/- ರೂ.ಬೆಲೆ ಬಾಳುವ ಎ.ಸಿ.ಎಸ್.ಆರ್. ವೈರ್ ನ್ನು, ಕಳವು ಮಾಡಿರುವುದಾಗಿ, ಪತ್ತೆ ಮಾಡಿಕೊಡಬೇಕೆಂದು ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 454-457-380 ಐ.ಪಿ.ಸಿ.

      ದಿನಾಂಕ: 16-01-2013 ರಂದು ಪಿರ್ಯಾದಿ ಕೆ.ಮೋಹನ್ ಬಿನ್ ಲೇಟ್, ಕಾಶೀನಾದನ್, ಸಕ್ಕರೆ ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು 02-45 ಗಂಟೆಯಲ್ಲಿ ಮತ್ತೆ ಕೆಲಸಕ್ಕೆ ಹೋದೆ. ಕೆಲಸ ಮುಗಿಸಿಕೊಂಡು ಸಂಜೆ 7-30 ಗಂಟೆಗೆ ಮನೆಗೆ ಬಂದಾಗ ಮನೆ ಬಾಗಿಲ ಬೀಗ ತೆಗೆದು ಓಳಗಡೆ ಹೋದಾಗ ಮನೆಯ  ಹಿಂಬಾಗಿಲು ತೆರೆದಿತ್ತು. ಆಗ ನಾನು ಗಾಭರಿಗೊಂಡು ಮನೆಯಲ್ಲಿ ನೋಡಲಾಗಿ ರೂಮಿನಲ್ಲಿಟ್ಟಿದ್ದ ಹೆಚ್. ಪಿ ಕಂಪನಿಯ ಲ್ಯಾಫ್ಟಾಪ್, ಹಾಲ್ನಲ್ಲಿಟ್ಟಿದ್ದ ಓನಿಡ ಡಿವಿಡಿ ಪ್ಲೇಯ್ತುಗಳನ್ನು ಯಾರೋ ಕಳ್ಳರು, ಹೆಸರು ವಿಳಾಸ ತಿಳಿಯಬೇಕಾಗಿದೆ, ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ಕೇಸು ದಾಖಲಿಸಿದೆ.


ಕೊಲೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 302 ಐ.ಪಿ.ಸಿ.

     ದಿನಾಂಕ: 16-01-2013 ರಂದು ಪಿರ್ಯಾದಿ ಮುರಳಿಧರ ಬಿನ್. ಗೌಡೇಗೌಡ, ಒಕ್ಕಲಿಗರು, ವ್ಯವಸಾಯ, ಡಾಮಡಹಳ್ಳಿ  ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ  ನಾಗೇಗೌಡ, ಡಾಮಡಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ಮತ್ತು ಈತನ ಮಗ ಅನಿಲ್ಕುಮಾರ್ @ ನಿರಂಜನ್ ರವರಿಗೂ ಮನೆ ಮತ್ತು ಆಸ್ತಿ ವಿಚಾರದಲ್ಲಿ ಮನಸ್ಥಾಪವಿದ್ದು ದಿನಾಂಕ:16-01-2013 ರಂದು ರಾತ್ರಿ ಸುಮಾರು 8-45 ಗಂಟೆಯ ಸಮಯದಲ್ಲಿ ಆಸ್ತಿ ವಿಚಾರದಲ್ಲಿ ಆರೋಪಿತನು ತನ್ನ ಮನೆಯ ಮುಂದೆ  ಮಗ ಅನಿಲ್ಕುಮಾರ್ @ ನಿರಂಜನ್ ರವರ ಕೂಡ ಜಗಳ ತೆಗೆದು ಮಚ್ಚಿನಿಂದ ಹೊಡೆದು ರಕ್ತಗಾಯ ಮಾಡಿ ಕೊಲೆ ಮಾಡಿರುತ್ತಾನೆಂದು ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಯು.ಡಿ.ಆರ್. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 3/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಸೋಮಶೇಖರ ಎನ್.ಎಂ. ಬಿನ್. ಲೇ|| ಮರಿಸ್ವಾಮಿ, ಒಕ್ಕಲಿಗರು, ವ್ಯವಸಾಯ, ನಗುವನಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಪರಿಚಿತ ಗಂಡಸು, ಸುಮಾರು 50 ರಿಂದ 55 ವರ್ಷ ರವರು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು ಸರಿಯಾದ  ಸಮಯಕ್ಕೆ ಔಷದೋಪಚಾರ ಪಡೆಯದೆ ಮಲಗಿದ್ದಲ್ಲೇ ಮೃತಪಟ್ಟಂತೆ  ಕಂಡುಬಂದಿರುತ್ತೆ,  ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಬಿ.ಆರ್.ಉಮಾ ಮಹಿಳಾ ಎ,ಎಸ್.ಐ. ಮಂಡ್ಯಪೂರ್ವ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಅಪರಿಚಿತ ಗಂಡಸು  ವಯಸ್ಸು ಸುಮಾರು 60 ರಿಂದ 70 ವರ್ಷ ರವರು ಪ್ರಯಾಣಿಕರ ತಂಗುದಾಣದಲ್ಲಿ ಹೋಗಿ ಕುಳಿತು ಹಾಗೆಯೆ ಮಲಗಿಕೊಂಡು ಸ್ವಲ್ಪ ಸಮಯದ ನಂತರ ಬಾಯಿಂದ ರಕ್ತ ಬಂದು ಮೃತಪಟ್ಟಿರುವುದಾಗಿ ಯಾರೋ ಬಂದು ಪಿರ್ಯಾದಿಗೆ ತಿಳಿಸಿದಾಗ ಪಿರ್ಯಾದಿಯು ಹೋಗಿ ನೋಡಲಾಗಿ ಬಾಯಿಯಲ್ಲಿ ರಕ್ತ  ಬಂದು ಮೃತಪಟ್ಟಿದ್ದು ಮೃತನು ಯಾವುದೋ ಕಾಯಿಲೆಯಿಂದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿರುವು-ದಾಗಿದ್ದು ತಾವುಗಳು ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಿ ಅಂತ ಕೊಟ್ಟ  ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  


ಸ್ಪೋಟಕ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 286, 5 ಇಂಡಿಯನ್ ಎಕ್ಸ್ಪ್ಲೋಸಿವ್ ಸಬ್ಸ್ಟೆನ್ಸ್ ಕಾಯ್ದೆ 1908 ಕಲಂ.9 [ಬಿ] 1884 ಹಾಗು 504,324,323,506 ಕೂಡ 34 ಐ.ಪಿ.ಸಿ.

        ದಿನಾಂಕ: 16-01-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ. ಅರಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿಃ 16-01-13ರಂದು ಮಧ್ಯಾಹ್ನ ಫಿಯರ್ಾದಿಯವರಿಗೆ ಮಾಹಿತಿ ಬಂದ ಮೇರೆಗೆ ಫಿಯರ್ಾದಿಯವರು ತಮ್ಮ ಠಾಣಾ ಸಿಬ್ಬಂದಿಗಳಾದ ಎಎಸ್ಐ ಶಿವಮಂಜು, ಪಿಸಿ-03,120,97,85,725 ರವರೊಂದಿಗೆ ಇಲಾಖಾ ಜೀಪ್ ನಂ. ಕೆ.ಎ-11-ಜಿ-250ರಲ್ಲಿ ಪಂಚಾಯಿತಿದಾರರನ್ನು ಕರೆದುಕೊಂಡು ಮುಂಡುಗದೊರೆ ಗ್ರಾಮದ ಸವರ್ೆ ನಂ.351 ಎಂ.ಟಿ ರವೀಚಿದ್ರರವರ ಕಲ್ಲು ಕ್ವಾರೆಯ ಮೇಲೆ ದಾಳಿ ಮಾಡಿ, ಅದರಲ್ಲಿದ್ದ 1] ಶಿವಣ್ಣ ಬಿನ್ ಮರಿಗೌಡ ಮತ್ತು 2] ಶಿವಣ್ಣ ಬಿನ್ ಲೇ. ಬಾಗೂರಯ್ಯನವರನ್ನು ವಶಕ್ಕೆ ತೆಗೆದುಕೊಂಡು 149 ಕೇಪುಗಳು, 6 ಕೆ.ಜಿ ರಾಸಾಯನಿಕ ಉಪ್ಪು, ಮೆಗ್ಗರ್ ಬಾಕ್ಸ್, 2 ಕಟ್ಟು ತಂತಿ, ಡೀಸೈಲ್ ಪೈಪನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿರುತ್ತದೆ. ಆರೋಪಿಗಳಾದ ಎಂ.ಟಿ ರವೀಂದ್ರ ಮತ್ತು ಇತರೆ  ಎ-2, ಎ-3 ಮುಂಡುಗದೊರೆ ಗ್ರಾಮ, ಶ್ರೀರಂಗಪಟ್ಟಣ ತಾ. ರವರುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ. 

ದಿನಾಂಕ: 16-01-2013 ರಂದು ಪಿರ್ಯಾದಿ ಲಲಿತಾ ಕೊಂ. ರಾಜಯ್ಯ, ಲಕ್ಷ್ಮಿಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-01-13 ರಂದು ಪಿರ್ಯಾದಿ ಮನೆ ಕೆಲಸಕ್ಕೆಂದು ಹೊರಗಡೆ ಹೋಗಿದ್ದು ಕೆಲಸ ಮುಗಿಸಿ ವಾಪಸ್ ಬಂದು ಮನೆಯಲ್ಲಿ ನೋಡಿದಾಗ ಬೆಳಗ್ಗೆ 09-30 ಗಂಟೆಯಲ್ಲಿ ಮಗಳಾದ ಮಂಗಳ ಹರಿಹರಪುರಕ್ಕೆ ಬಟ್ಟೆಯನ್ನು ಹೊಲೆಯಲು ಕೊಡುತ್ತೇನೆಂದು ನಮ್ಮ ಪಕ್ಕದ ಮನೆಯವರಿಗೆ ಹೇಳಿ ಹೋದವಳು ಮತ್ತೆ ವಾಪಸ್ ಬಂದಿರುವುದಿಲ್ಲಾ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 16-01-2013 ರಂದು ಪಿರ್ಯಾದಿ ನಾಗಮಣಿ ಕೋಂ. ನಿಂಗರಾಜಾಚಾರಿ, ದೊಡ್ಡಬ್ಯಾಡರಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ  ನನ್ನ ಗಂಡ ನಿಂಗರಾಜಚಾರಿ ರವರು ದಿ: 13-01-13 ರಂದು ಸಂಜೆ 06-00 ಗಂಟೆಯಲ್ಲಿ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿ ಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ. 33/2013 ಕಲಂ: ಮನುಷ್ಯ ಕಾಣೆಯಾಗಿದ್ದಾನೆ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ. 


ರಾಬರಿ ಪ್ರಕರಣ : 

ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 392 ಐ.ಪಿ.ಸಿ.

         ದಿನಾಂಕ: 16-01-2013 ರಂದು ಪಿರ್ಯಾದಿ ಕೆಂಪಮ್ಮ ಕೋಂ ಚಿಕ್ಕೇಗೌಡ, ಕೋಡಿ ಹೊಸೂರು ಗ್ರಾಮ, ಬಿಂಡಿಗನವಿಲೆ ಹೋ, ನಾಗಮಂಗಲ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ  ಯಾರೋ ಕಳ್ಳರು ಹಿಂದಿನಿಂದ ಬಂದು ಟವಲ್ ಅನ್ನು ಹಾಕಿ ಕೈಗಳಿಂದ ಟವೆಲ್ನ್ನು ಹಾಗೂ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು, ಕೆಳಕ್ಕೆ ಕೆಡವಿಕೊಂಡು ನನ್ನ ಕುತ್ತಿಗೆಯಲ್ಲಿದ್ದ 55 ಗ್ರಾಂ ತೂಕದ ಎರಡು ಎಳೆ ಚಿನ್ನದ ಮಾಂಗಲ್ಯದ ಸರ ಕಿತ್ತುಕೊಂಡು ಹೊರಟು ಹೋದರು ನನಗೆ ಅಸ್ತಮಾ, ಬಿ.ಪಿ ಮತ್ತು ಶುಗರ್ ಕಾಯಿಲೆಗಳಿದ್ದುದರಿಂದ ನನಗೆ ಸ್ವಲ್ಪ ಹೊತ್ತು ಪ್ರಜ್ಞೆ ತಪ್ಪಿದಂತಾಯಿತು, ನಂತರ ಎಚ್ಚರವಾದಾಗ ಸುಧಾರಿಸಿಕೊಂಡು ನಮ್ಮ ಹೊಲದಲ್ಲೆಲ್ಲಾ ನನ್ನ ಸರ ಬಿದ್ದುಹೋಗಿದೆಯೆ ಎಂಬುದಾಗಿ ಹುಡುಕಾಡಿ ನೋಡಿದೆವು ಸಿಗಲಿಲ್ಲ. ನಂತರ ಮನೆಗೆ ಬಂದು ವಿಚಾರವನ್ನು ತಿಳಿಸಿದೆನು. ನಮಗೆ ಸ್ವಲ್ಪ ತಿಳುವಳಿಕೆ ಇಲ್ಲದಿದ್ದರಿಂದ ಇದರ ಬಗ್ಗೆ ಏನು ಮಾಡಬೇಕೆಂದು ಗೊತ್ತಾಗದೆ. ಬೆಂಗಳೂರಿನಲ್ಲಿರುವ ನನ್ನ ಎರಡನೇ ಮಗ ಮತ್ತು ನಾಲ್ಕನೆ ಮಗನಿಗೆ ಫೋನ್ ಮಾಡಿ ಈ ವಿಚಾರವನ್ನು ತಿಳಿಸಿದೆ, ಕೊನೆಯ ಮಗ ತಮ್ಮಣ್ಣನು ಈ ದಿವಸ ಊರಿಗೆ ಬಂದು ಕಂಪ್ಲೇಟ್ ಕೊಡೋಣ ಬಾ ಎಂದು ಹೇಳಿ ಕರೆದುಕೊಂಡು ಬಂದಿರುತ್ತಾನೆ. ನನ್ನ ಸರವನ್ನು ಕಿತ್ತುಕೊಂಡು ಹೋಗಿರುವ ಕಳ್ಳರನ್ನು ಹಾಗೂ ಸರವನ್ನು ಪತ್ತೆ ಮಾಡಿಕೊಡಿ, 55 ಗ್ರಾಂ ತೂಕದ ಎರಡು ಎಳೆ ಚಿನ್ನದ ಮಾಂಗಲ್ಯ ಸರದ ಅಂದಾಜು ಬೆಲೆ ಸುಮಾರು 1.5 ಲಕ್ಷ ರೂ. ಎಂಬಿತ್ಯಾದಿಯಾಗಿ ಫಿರ್ಯಾದಿಯವರು ಈ ದಿವಸ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.

DAILY CRIME REPORT DATED : 15-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-01-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು,  3 ಯು.ಡಿ.ಆರ್. ಪ್ರಕರಣಗಳು,    1 ಕಳ್ಳತನ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 17 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.     


ಅಪಹರಣ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 363 ಕೂಡ 34 ಐ.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ಶಿವಣ್ಣ ಬಿನ್ ಲೇಟ್. ಚಿಕ್ಕಬೋರೇಗೌಡ, ಕುದರಗುಂಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಜಯಂತ್ @ ಜಯಂತ್ ಕುಮಾರ್ ಮತ್ತು 2] ಶ್ರೀನಿವಾಸ ರವರುಗಳು ಪಿರ್ಯಾದಿಯವರ ಮಗಳನ್ನು ಎತ್ತಿಹಾಕಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಬೇಕೆಂದು ಹಾಗೂ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 323-504-506-498(ಎ) ಐ.ಪಿ.ಸಿ. 

ದಿನಾಂಕ: 15-01-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ಮರೀಗೌಡ, ಕರಡಿಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಲಕ್ಷ್ಮಿ ಕೋಂ ಮರೀಗೌಡ ಕರಡಿಕೊಪ್ಪಲು ಗ್ರಾಮ ರವರು ನೆನ್ನೆ ರಾತ್ರಿ ಜಗಳ ಮಾಡಿ ಮನೆಯಿಂದ ಹೊರ ಕಳುಹಿಸಿದ್ದು ಮನೆಯ ಬಳಿ ಹೋದಾಗ ಆಕೆಯ ತಲೆಕೂದಲು ಹಿಡಿದು ಎಳದಾಡಿ ಕೈಗಳಿಂದ ಎದೆ, ಮೈಕೈಯ ಮೇಲೆ ಹೊಡೆದು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದು ತನಗೆ ಎರಡು ಹೆಣ್ಣು ಮಕ್ಕಳಾಗಿವೆ ಎಂಬ ವಿಚಾರವಾಗಿ ಹಿಂದಿನಿಂದಲೂ ಕಿರುಕುಳ ನೀಡುತ್ತಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 498 (ಎ)506 ಐ.ಪಿ.ಸಿ. 

      ದಿನಾಂಕ: 15-01-2013 ರಂದು ಪಿರ್ಯಾದಿ ವರಲಕ್ಷ್ಮಿ, ಎಂ. ಕೋಂ ಸತೀಶ, ಮನೆ ನಂ: 690/1, 7ನೇ ಅಡ್ಡರಸ್ತೆ, ಸ್ವರ್ಣಸಂದ್ರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಸತೀಶ 2) ನಾಗರಾಜು ಸ್ವರ್ಣಸಂದ್ರ, ಮಂಡ್ಯ ಸಿಟಿ. ಪೂರ್ಣ ವಿಳಾಸ  ತಿಳಿಯಬೇಕಾಗಿದೆ ಇವರುಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದು ಕೊಲೆ ಬೆದರಿಕೆ ಹಾಕಿ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ರಸ್ತೆಯಲ್ಲಿ ಕಂಡರೆ ಸಾಯಿಸುತ್ತೇನೆಂದು ಕೊಲೆ ಬೆದರಿಕೆ ಹಾಕಿದ್ದಾನೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಶಿವಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಅರ್.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ಮಂಗಳಮ್ಮ ಕೊಂ. ಶಿವಬೋರಯ್ಯ ರವರು ನೀಡಿದ ದೂರು ಏನೆಂದರೆ ಅವರ ಪತ್ನಿ ಶಿವಬೋರಯ್ಯ ಬಿನ್. ಮುಲಗೂಡಯ್ಯ, 38 ವರ್ಷ, ಗಂಗಾಮಸ್ಥರು, ಹುಲಿಕೆರೆಕೊಪ್ಪಲು ಗ್ರಾಮ ರವರು ಮುಖ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಹರಿಯುತ್ತಿದ್ದ ಕಾಲುವೆ ಒಳಗೆ  ಮುಗ್ಗರಿಸಿ ಬಿದ್ದಿದ್ದಾರೆಂದು ಈ  ದಿವಸ ನನ್ನ ಗಂಡನ ಶವ ಹುಲಿಕೆರೆ ಗ್ರಾಮದಿಂದ ಮಳವಳ್ಳಿ ಕಡೆಗೆ ಹೋಗುವ ಕಾಲುವೆಯಲ್ಲಿ ನೀರು ನಿಂತು ಹೋಗಿದ್ದು ಕಾಲುವೆಯ ಒಳಭಾಗದಲ್ಲಿ ನೀರಿನ ಮೇಲೆ ಇರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ಭಾಗ್ಯಮ್ಮ ಕೋಂ. ಗುರುಸ್ವಾಮಿ, 40 ವರ್ಷ, ಒಕ್ಕಲಿಗರು, ಮನೆಕೆಲಸ, ಭೂತನ ಹೊಸೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ನಿವೇದಿತಾ ಕೋಂ. ಅಭಿಷೇಕ್ಗೌಡ, 19 ವರ್ಷ, ಭೂತನಹೊಸೂರು ಗ್ರಾಮ ರವರು ಜೀವನದಲ್ಲಿ ಜಿಗುಪ್ಸೆಗೊಂಡು ಕಾವೇರಿ ನದಿಯ ನೀರಿಗೆ ಬಿದ್ದು ಮೃತಪಟ್ಟಿರುತ್ತಾಳೆ ಮುಂದಿನ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ತಮ್ಮಯ್ಯ ಬಿನ್. ಲೇ|| ನರಸಿಂಹಯ್ಯ, ಅಗ್ರಹಾರ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರು ಏನೆಂದರೆ ನನ್ನ ಹೆಂಡತಿ ಬೋರಮ್ಮ ಕೊಂ ತಮ್ಮಯ್ಯ, 60 ವರ್ಷ, ಅಗ್ರಹಾರ ರವರು ಬಟ್ಟೆ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬಹುದು ಅಥವಾ ಆಕೆಯ ಕೈಗೆ ಪೆಟ್ಟಾಗಿದ್ದು ಆ ನೋವಿನ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಬಿದ್ದು ಮೃತಪಟ್ಟಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 457-380 ಐಪಿಸಿ.

       ದಿನಾಂಕ: 15-01-2013 ರಂದು ಪಿರ್ಯಾದಿ ಸಿಸ್ಟರ್ ಗ್ರೇಸ್ ಲಿಮಾ, ಮುಖ್ಯ ಶಿಕ್ಷಕರು, ಸೆಂಟ್ ಜೋಸೆಫ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ, ಎಂ.ಸಿ. ರೋಡ್, ಮಂಡ್ಯ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಶಾಲೆಯ ಒಂದು ಕಿಟಕಿಯ ವೆಂಟಿಲೇಟರ್ ಗ್ಲಾಸ್ ನ್ನು ಮುರಿದು ಒಳಗಿನ ಡೋರ್ನ ಚಿಲಕದ ಕೊಂಡಿ ಮೀಟಿ ಒಳಗೆ ಬಂದು ನಮ್ಮ ಶಾಲೆಯ ಕಛೇರಿಯ ಬೀಗವನ್ನು  ಹಾಗೂ ಡೋರ್ಲಾಕನ್ನು ಯಾವುದೋ ಆಯುಧದಿಂದ  ಮೀಟಿ ಒಳಗೆ ಬಂದು ಕಛೇರಿಯ ಕಬೋರ್ಡ್ ಡ್ರಾಯರ್ ನ,  ಡೋರ್ಲಾಕ್ ಮೀಟಿ ಓಳಗೆ ಇಟ್ಟಿದ್ದ  ಶಾಲಾ ಮಕ್ಕಳ ಫೀಜ್ ಹಣ 3,000/- ರೂ, ಚರ್ಚ್ ನ,  ಕಾಂಟ್ರಿಬ್ಯೂಷನ್ ಗೆ,  ಸಂಗ್ರಹಿಸಿದ ಹಣ 1,800/- ರೂ, ಇತರೆ ಕಂಟೇಜೆನ್ಸಿ ಖರೀದಿಸಲು ಇಟ್ಟಿದ್ದ 2,000/- ರೂ, ಹಾಗೂ ಕಾಯಿನ್ ಬೂತಿನ ಹಣ ಚಿಲ್ಲರೆ ಸುಮಾರು 700/- ರೂ ಕಾಯಿನ್ ಬೂತ್ ಹಣವನ್ನು ನನ್ನ ಟೇಬಲ್ ಡ್ರಾಯರ್ ನಲ್ಲಿಟ್ಟಿದ್ದುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 15-01-2013 ರಂದು ಪಿರ್ಯಾದಿ ಚಲುವರಾಜು ಬಿನ್. ಚನ್ನಕಣ್ಣನ್, ತಿಮ್ಮನಹೊಸೂರು ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ಚನ್ನಕಣ್ಣನ್ ಬಿನ್. ಲೇಟ್ ರಂಗಪ್ಪನಾಡ್ಡು, 70ವರ್ಷ, ತಿಮ್ಮನಹೊಸೂರು ಗ್ರಾಮರವರು ತಿರುಪತಿಗೆ ಹೋಗಿ ಬರುವುದಾಗಿ ಹೇಳಿ ಹೋಗಿ ದಿನಾಂಕ: 27-12-2012ರಂದು ಹೋದವರು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 14-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-01-2013 ರಂದು ಒಟ್ಟು 12 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣಗಳು :

1. ಕೊಪ್ಪ ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 14-01-2013 ರಂದು ಪಿರ್ಯಾದಿ ಮಂಜು ಬಿನ್. ಲೇಟ್. ಕೆಂಪಯ್ಯ, ಚಾಮನಹಳ್ಳಿ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ರಘು. 28ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ ಆಬಲವಾಡಿ ಎಂಬುವವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಯಾವುದೋ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವನೆ ಮಾಡಿ, ಅದೇ ದಿನ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಈತನ ಸಾವಿನ ಬಗ್ಗೆ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಮುಂದಿನ ಕ್ರಮ ಜರುಗಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 4/13 ಕಲಂ. 174 ಸಿ.ಆರ್.ಪಿ.ಸಿ.

       ದಿನಾಂಕ: 14-01-2013 ರಂದು ಪಿರ್ಯಾದಿ ಕುಮಾರಸ್ವಾಮಿ ಜಿ. ಎಂ. ಬಿನ್. ಲೇಟ್. ಮಹದೇವಪ್ಪ, ಗಂಜಿಗೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಶಾಂತಮ್ಮ, ಗಂಜೀಗೆರೆ ಗ್ರಾಮ  ರವರಿಗೆ ಜಾಯಿಂಟ್ ನೋವು  ಜಾಸ್ತಿಯಾದಾಗ ಆಕಸ್ಮಿಕವಾಗಿ ಕ್ರಿಮಿನಾಶಕವನ್ನು ಕುಡಿದ ಪರಿಣಾಮ ಚಿಕಿತ್ಸೆಗಾಗಿ ಮೈಸೂರಿನ ಮಿಶನ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 13-01-2013 ರಂದು ಭಾನುವಾರ ಸಂಜೆ 06-30 ಗಂಟೆ ಸಮಯದಲ್ಲಿ ಮೃತ ಹೊಂದಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 14-01-2013 ರಂದು ಪಿರ್ಯಾದಿ ಡಾ.ಶ್ರೀನಿವಾಸ.ಜೆ. ನಂ 319,  ಹಳೆ ಎಸ್.ಬಿ.ಎಂ ರೋಡ್, ಪಾಂಡವಪುರ ರವರು ನೀಡಿದ ದೂರಿನ ವಿವರವೇನೆಂದರೆ ಒಂದು ಮುತ್ತಿನ ಸರ ಮತ್ತು ಎರಡು ಉಂಗುರಗಳು ಮತ್ತು ಎರಡನೇ ಬೆಡ್ ರೂಮ್ ನಲ್ಲಿದ್ದ  ಒಂದು ಗೋಲ್ಟನ್ ಕೇಸ್ ಟೈಟಾನ್ ಸ್ಲಿಮ್ ವಾಚ್ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ ಸುಮಾರು 80000/- ಸಾವಿರ ರೂಗಳಾಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 14-01-2013 ರಂದು ಪಿರ್ಯಾದಿ ಭಾಗ್ಯ ಕೋಂ. ಗುರುಸ್ವಾಮಿ, ಭೂತನಹೊಸೂರು, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ನಿವೇದಿತ ಕೋಂ. ನಂದೀಶ, 19 ವರ್ಷ ರವರು ಮನೆಯಿಂದ ಹೊರಗಡೆ ಹೋದವಳು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಅಕ್ಕಪಕ್ಕದ ಗ್ರಾಮಗಳಲ್ಲಿ ತಮ್ಮ ನೆಂಟರ ಮನೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 13-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-04-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  1 ವಂಚನೆ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 379 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಕೃಷ್ಣಮೂರ್ತಿ ಬಿನ್. ರಾಮಚಂದ್ರು, ಚಿಕ್ಕ ಬಾಣಸವಾಡಿ, ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಒಂದು ಪರ್ಸ್  ಹಾಗೂ ಪಿರ್ಯಾದಿಯವರ ತಾಯಿಯ ಒಂದು ಪರ್ಸನ್ನು  ಯಾರೋ ಕಳ್ಳತನ ಮಾಡಿದ್ದು, 7000/- ರೂ ಹಣ, ಡ್ರೈವಿಂಗ್ ಲೈಸೆನ್ಸ್, ಡೆಬಿಟ್ ಕಾರ್ಡ, 1.500/- ರೂ ಹಣ ಇದ್ದು ಒಟ್ಟು 8500/- ರೂ. ಬೆಲೆ ಬಾಳುವುದಾಗಿದ್ದು ಇವುಗಳನ್ನು ಕಳ್ಳತನ ಮಾಡಿರುತ್ತಾರೆ ರತ್ನ ಎಂಬುವವರ ಮೇಲೆ ಅನುಮಾನುವಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 379 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್. ತಿಮೇಗೌಡ @ ದೊಳ್ಳೇಗೌಡ, ಒಕ್ಕಲಿಗರು, ವ್ಯವಸಾಯ, ಸೋಮನಹಳ್ಳಿ, ಕೊಪ್ಪ ಹೋ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ದಿನಾಂಕ:13-01-2013 ರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಮೀನಿನ ಬಳಿ ಹೋಗಲಾಗಿ ಮೋಟಾರ್ ಅಳವಡಿಸಿದ್ದ ಪೆಟ್ಟಿ ಬೀಗ ಜಡಿದು ಒಳಗಿದ್ದ ಸ್ಟಾಟರ್ ಅನ್ನು ಯಾರೋ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರೊಡನೆ ಇದ್ದ ಸಿಂಗಲ್ ಕಾಯಿಲ್ ವೈರ್ ಸಹ ಇರುವುದಿಲ್ಲ. ಇವುಗಳ ಒಟ್ಟು ಅಂದಾಜು ಮೌಲ್ಯ ಹತ್ತು ಸಾವಿರ ರೂ.ಗಳಾಗಿರುತ್ತೆ. ಹಾಗಾಗಿ ತಾವು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸ್ಟಾಟರ್ನ್ನು ಪತ್ತೆ ಮಾಡಿಸಿಕೊಡಬೇಕೆಂದು ಮತ್ತು ಮುಂದಿನ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 420 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಗೀತಾ ಕೋಂ. ನಿರಂಜನ, ಬೀರುವಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಕೈಗೆ ಪುಡಿಯನ್ನು ಹಾಕಿದಾಗ ಪಿರ್ಯಾದಿಗೆ ಏನಾಯಿತು ಎಂದು ತಿಳಿಯಲಿಲ್ಲ, ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು, ಹೆಸರು ವಿಳಾಸ ತಿಳಿಯಬೇಕಾಗಿದೆ ಪಿರ್ಯಾದಿಯವರ ಗಮನವನ್ನು ಬೇರೆ ಕಡೆಗೆ ಸೆಳೆದು ನಂಬಿಸಿ ಪಿರ್ಯಾದಿಯವರ ಕತ್ತಿನಲ್ಲಿದ್ದ ಎರಡು ಎಳೆ ಮಾಂಗಲ್ಯದ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 7/13 ಕಲಂ. 457-380 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಪ್ರಕಾಶ್ ಎನ್, ಬಿನ್. ಲೇಟ್. ನಂಜುಂಡರಾವ್, ಹೊಸ ಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಅಂಗಡಿಗೆ ಹಾಕಿದ್ದ ಬೀಗ ಮತ್ತು ಡೋರ್ಲಾಕ್ ನ್ನು ಒಡೆದು ಒಳಗಡೆಯಿದ್ದ 12000/- ರೂ ನಗದು, ಕಂಪ್ಯೂಟರ್ನ ಸಿಪಿಯು ಅನ್ನು ಹಾಗೂ ರಿಪೇರಿಗೆಂದು ಕೊಟ್ಟಿದ್ದ ಹಳೆಯ ಮೊಬೈಲ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಅಂದಾಜು ಬೆಲೆ ಸುಮಾರು 22000/- ರೂಗಳಾಗುತ್ತದೆ, ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಥಮ .ವರ್ತಮಾನ .ವರದಿ ದಾಖಲಿಸಲಾಗಿದೆ.  

DAILY CRIME REPORT DATED : 12-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-01-2013 ರಂದು ಒಟ್ಟು 26 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ,  1 ಅಪಹರಣ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ರಾಬರಿ ಪ್ರಕರಣ ಹಾಗು 22 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   


ವಾಹನ ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 379 ಐ.ಪಿ.ಸಿ.

ದಿನಾಂಕ: 12-01-2013 ರಂದು ಪಿರ್ಯಾದಿ ಸಂಜೀವಯ್ಯ ಬಿನ್. ಲೇಟ್. ಹನುಮಯ್ಯ, ಚನ್ನೇಗೌಡನದೊಡ್ಡಿ, ಮದ್ದೂರು ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಬಾಬ್ತು ಕೆಎ-11/ಎಕ್ಸ್-1985 ಮೊಪೆಡ್ ಸ್ಕೂಟರ್ ನ್ನು, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 363-366(ಎ) ಐ.ಪಿ.ಸಿ.

ದಿನಾಂಕ: 12-01-2013 ರಂದು ಪಿರ್ಯಾದಿ ರಾಜನಾಯ್ಕೆ ಬಿನ್. ವೆಂಕಟೇಶ ನಾಯ್ಕ, ಬಿ,ಬಿ, ತಾಂಡ ಗ್ರಾಮ, ಬಳ್ಳಾರಿ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶ್ರೀನಿವಾಸ ವಡ್ಡರಹಳ್ಳಿ ಗ್ರಾಮ ಕೆ ಆರ್ ಪೇಟೆ ತಾ| ರವರು ದಿನಾಂಕ 10.01.2013 ರಂದು ಬೆಳಗಿನ ಜಾವ ಸುಮಾರು 4-00 ಗಂಟೆ ಸಮಯದಲ್ಲಿ ಪಿರ್ಯಾದಿಯವರು ತಮ್ಮ ಶೆಡ್ ನಲ್ಲಿ ಮಲಗಿದ್ದಾಗ ಅವರ 15 ವರ್ಷದ ತಂಗಿಯನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಆದ್ದುದ್ದರಿಂದ ತಾವುಗಳು ನನ್ನ ತಂಗಿಯನ್ನು ಅಪಹರಣ ಮಾಡಿರುವ ಮೇಲ್ಕಂಡ ಶ್ರೀನಿವಾಸ ಎಂಬಾತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 12-01-2013 ರಂದು ಪಿರ್ಯಾದಿ ಶಿವಣ್ಣ.ಬಿ.  ಬಿನ್. ಬೋರಲಿಂಗೇಗೌಡ  ಬಿ.ಆರ್. ಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ರಂಜಿತಾ  ಬಿನ್. ಬಿ.ಶಿವಣ್ಣ, 19 ವರ್ಷ, ಬಿ. ಆರ್. ಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮನೆಯವರು ಯಾರೂ ಮನೆಯಲ್ಲಿ ಇಲ್ಲದ ಸಮಯದಲ್ಲಿ ಪಿರ್ಯಾದಿಯವರ ಮಗಳು ಮನೆಯಿಂದ ಹೊರಟು ಹೋಗಿದ್ದು ವಾಪಸ್ ಬಂದಿರುವುದಿಲ್ಲಾ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆ ಆಗಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 392 ಐ.ಪಿ.ಸಿ.

ದಿನಾಂಕ: 12-01-2013 ರಂದು ಪಿರ್ಯಾದಿ ಉಮಾಮಣಿ ಕೋಂ. ರಮೇಶ್ ಕುಮಾರ್, 42 ವರ್ಷ, ಬ್ರಾಹ್ಮಣರು, ಗೃಹಿಣಿ, ಪೂರ್ಣಯ್ಯನ ಬೀದಿ, ಶ್ರೀರಂಗಪಟ್ಟಣ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಉತ್ತರಾದಿ ಮಠದ ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಮೋಟಾರ್ ಸೈಕಲ್ ನಲ್ಲಿ ಎದುರಿನಿಂದ ಬಂದ ಮೂವರು ಪಿರ್ಯಾದಿಯವರ ಕತ್ತಿಗೆ ಕೈ ಹಾಕಿ   ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದು ಅದು ಸುಮಾರು 30 ಗ್ರಾಂ. ಇದ್ದು  ಬೆಲೆ ಸುಮಾರು 90.000/- ರೂ ಆಗಿರುತ್ತೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.