Moving text

Mandya District Police
DAILY CRIME REPORT OF MANDYA DISTRICT DTD : 31-12-2013
DAILY CRIME REPORT OF MANDYA DISTRICT DTA : 30-12-2013

INSTRUCTIONS FOR NEW YEAR CELEBRATION

 ದಿನಾಂಕ:31-12-2013 ಮತ್ತು ದಿನಾಂಕ:01-01-2014 ರಂದು ರಾಜ್ಯಾದ್ಯಂತ ಕ್ರಿಶ್ಚಿಯನ್ನರು ನೂತನ ವಷರ್ಾರಂಭ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಿದ್ದಾರೆ(.) ಸದರಿ ದಿನಗಳಂದು ಕ್ರೈಸ್ತ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಲು ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಲಿದ್ದಾರೆ (.) ಹೊಸ ವರ್ಷಾಚರಣೆ ಸಂಬಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಈ ಕೆಳಕಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.



1] ಜಿಲ್ಲೆಯಲ್ಲಿ ಇರುವ ಎಲ್ಲಾ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಲ್ಲಿ  ಹಾಗೂ ಇನ್ನಿತರೆ ಕಡೆಗಳಲ್ಲಿ ನಡೆಸುವ ಹೊಸ ವರ್ಷದ ಕಾರ್ಯಕ್ರಮಗಳು ರಾತ್ರಿ 1230 ಗಂಟೆಯೊಳಗೆ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳುವುದು.  

2] ಹೊಟೇಲ್, ರೆಸ್ಟೋರೆಂಟ್, ಕ್ಲಬ್,ರೆಸಾರ್ಟ್  ಮತ್ತು ಸಂಘ ಸಂಸ್ಥೆಗಳಲ್ಲಿ  ಹಾಗೂ ಇನ್ನಿತರೆ ಕಡೆಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳು ಆಯಾಯ ಹೋಟೆಲ್ ಹಾಗೂ ಸಂಸ್ಥೆಗಳ ಒಳ ಆವರಣದಲ್ಲಿಯೇ ನಡೆಯಬೇಕು ಹಾಗೂ ಕಾರ್ಯಕ್ರಮಗಳು ನಡೆಯುವ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹೊಟೇಲ್/ರೆಸ್ಟೊರೆಂಟ್, ಕ್ಲಬ್/ರೆಸಾರ್ಟ್ ಮಾಲೀಕರು ಹಾಗೂ ಕಾರ್ಯಕ್ರಮ ಆಯೋಜಕರು ನೋಡಿಕೊಳ್ಳುವುದು, ಒಂದು ಪಕ್ಷ ಯಾವುದಾದರೂ ಅಹಿತಕರ ಘಟನೆಗಳು ನಡೆದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದಾಗಿ ತಿಳಿಸುವುದು.

3] ಯಾವುದೇ ವ್ಯಕ್ತಿಗಳು ಕುಡಿದು ವಾಹನ ಚಾಲನೆ ಮಾಡದಂತೆ ನೋಡಿಕೊಳ್ಳುವುದು.  ಪೊಲೀಸ್ ಗಸ್ತನ್ನು ಏರ್ಪಡಿಸಿ, ಕುಡಿದು ವಾಹನ ಚಾಲನೆ ಮಾಡುವವರ  ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದು.

 4] ಹೊಸವರ್ಷ ಆಚರಣೆ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ಶುಭ ಕೋರುವ  ನೆಪದಲ್ಲಿ ಕಿರಿಕಿರಿ ಮಾಡದಂತೆ ಹಾಗೂ ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಯರಿಗೆ ಶುಬಕೋರುವ ನೆಪದಲ್ಲಿ ಕೀಟಲೆ ಅಸಭ್ಯವಾಗಿ  ವರ್ತಿಸದಂತೆ ಕ್ರಮಗಳನ್ನು ಕೈಗೊಳ್ಳುವುದು.

5] ಹೊಸವರ್ಷ ಆಚರಣೆ ಸಂಬಂದ ಏರು ದ್ವನಿಯಲ್ಲಿ ದ್ವನಿವರ್ದಕಗಳನ್ನು ಬಳಸದಂತೆ ಎಚ್ಚರಿಕೆ ನೀಡುವುದು.

6] ಹೊಸವರ್ಷ ಆಚರಣೆ ಸಂಬಂದ ಮಹಿಳಾ ಹಾಸ್ಟೆಲ್, ಕಾಲೇಜು ಹಾಗೂ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಗಸ್ತುನ್ನು ಏರ್ಪಡಿಸುವುದು.

          ಆದ್ದರಿಂದ, ನೂತನ ವರ್ಷದ ಮುನ್ನಾ ದಿನದ ಹಾಗೂ ಹೊಸವರ್ಷದ ದಿನದಂದು ಮುಂಜಾಗ್ರತಾ ವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದ ಹಾಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

PRESS NOTE DATE 30-12-2013



ಪೊಲೀಸ್ ಸೂಪರಿಂಟೆಂಡೆಂಟ್ ರವರ   ಕಛೇರಿ
                 ಮಂಡ್ಯ ಜಿಲ್ಲೆ, ಮಂಡ್ಯ
                 ದಿನಾಂಕಃ 29-12-2013

ಪತ್ರಿಕಾ ಪ್ರಕಟಣೆ






ದಿನಾಂಕ 28/12/13 ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ಸಿಪಿಐ, ಕೆ.ಆರ್. ಪೇಟೆ ಶ್ರೀ. ಕೆ. ರಾಜೇಂದ್ರ ಮತ್ತು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ಪಿಎಸ್ಐ ಎಂ.ಶಿವಕುಮಾರ್ ಮತ್ತು ಕ್ರೈಂ ಸಿಬ್ಬಂದಿಗಳು ಕೆ.ಆರ್.ಪೇಟೆ ಟೌನ್ಲ್ ನಲ್ಲಿ ಗಸ್ತು ಮಾಡುತ್ತಿದ್ದಾಗ ಟೌನಿನ ಮೈಸೂರು ರಸ್ತೆಯ ಲಲಿತಾ ಪೆಟ್ರೋಲ್ ಬಂಕ್ ಬಳಿ ಗಸ್ತು ಮಾಡುತ್ತಿದ್ದಾಗ, ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯ ಎಂಓಬಿ ಆಸಾಮಿಯು ಲಲಿತಾ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು, ತಕ್ಷಣ ಅವನನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ ರಮೇಶ್ ಗೌಡ @ ರಮೇಶ ಬಿನ್ ನಂಜೇಗೌಡ ಬಣ್ಣೇನಹಳ್ಳಿ ಗ್ರಾಮ ಕೆ.ಆರ್.ಪೇಟೆ ತಾ|| ಎಂತಲೂ ತಿಳಿಸಿದ್ದು, ನಂತರ ಆತನನ್ನು ಕೂಲಂಕುಷವಾಗಿ ವಿಚಾರ ಮಾಡಲಾಗಿ ಈ ಹಿಂದೆ ಬಾಂಬೆಯಲ್ಲಿ ಲೋಕೇಶಗೌಡ ಎಂಬುವರ ಮನೆಯಲ್ಲಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಬಂದು ಅವುಗಳನ್ನು ನಮ್ಮ ಮನೆಯಲ್ಲಿ ಇಟ್ಟಿರುವುದಾಗಿ,  ಇವತ್ತು ಕೆ.ಆರ್.ಪೇಟೆಯಲ್ಲಿ ಸಂತೆ ಇರುವುದರಿಂದ ಯಾರಾದರೂ ಗಿರಾಕಿಗಳು ಸಿಕ್ಕರೆ ಒಡವೆಗಳನ್ನು ತೋರಿಸಿ ಮಾರಾಟ ಮಾಡುವುದಾಗಿ ತಿಳಿಸಿದ್ದು, ನಂತರ ಆರೋಪಿಯನ್ನು  ಆತನ ಗ್ರಾಮವಾದ ಬಣ್ಣೇನಹಳ್ಳಿ ಗ್ರಾಮಕ್ಕೆ ಕರೆದುಕೊಂಡು ಆತನ ಮನೆಗೆ ತೆರಳಿ  ಪಂಚರ ಸಮಕ್ಷಮ ಆರೋಪಿಯು ತನ್ನ ಮನೆಯಲ್ಲಿಟ್ಟಿದ್ದ ಸುಮಾರು 75 ಗ್ರಾಂ ತೂಕದ ಚಿನ್ನದ ವಿವಿಧ ರೀತಿಯ ಒಡವೆಗಳನ್ನು ಅಮಾನತುಪಡಿಸಿಕೊಂಡಿರುತ್ತೆ. ನಂತರ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಗೆ ಆತನ ವಿರುದ್ದ ಪ್ರಕರಣ ದಾಖಲು ಮಾಡಿದ್ದು, ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂದನಕ್ಕೆ ಆದೇಶಿಸಿರುತ್ತದೆ. . ಈ ಬಗ್ಗೆ ಈಗಾಗಲೇ ಮಹಾರಾಷ್ಟ್ರ ರಾಜ್ಯದ ಮುಂಬೈನ ಅಂದೇರಿ ಸಹರ್ ಪೊಲೀಸ್ ಠಾಣೆಯಲ್ಲಿ ಮೊ.ನಂ. 335/2013 ಕಲಂಃ 381 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿ ಹಾಲಿ ತನಿಖೆಯಲ್ಲಿರುತ್ತದೆ ತಿಳಿದು ಬಂದಿರುತ್ತದೆ 
MANDYA DISTRICT DAILY CRIME REPORT DATE 29-12-2013
DAILY CRIME REPORT OF MANDYA DISTRICT DTD : 28-12-2013

PRESS NOTE DATE : 28-12-2013




               ಪೊಲೀಸ್ ಸೂಪರಿಂಟೆಂಡೆಂಟ್ ರವರ   ಕಛೇರಿ
                 ಮಂಡ್ಯ ಜಿಲ್ಲೆ, ಮಂಡ್ಯ
                 ದಿನಾಂಕಃ 28-12-2013

      ಪೊಲೀಸ್ ಪ್ರಕಟಣೆ




ದಿನಾಂಕ; 26-12-2013 ರಾತ್ರಿ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಡಿ.ಪಿ.ಧನರಾಜ್ ಮತ್ತು ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಶಿವಕುಮಾರ್ ಹಾಗೂ ಅವರ ಸಿಬ್ಬಂದಿರವರು ರಾತ್ರಿ ಗಸ್ತಿನಲ್ಲಿ ಹರಿಹರಪುರ ಗ್ರಾಮದಲ್ಲಿದ್ದಾಗ ವಾಹನ ತಪಾಸಣೆ ಮಾಡುತ್ತಿದ್ದಾಗ ಕೆಎ-04 ಇಡಬ್ಲ್ಯೂ-5108 ರ ಮೋಟಾರ್ ಸೈಕಲನ್ನು ತಪಾಸಣೆ ಸಮಯದಲ್ಲಿ ಸದರಿ ಮೋಟಾರ್ ಸೈಕಲನ್ನು ಕೈಗೋನಹಳ್ಳಿ ಗ್ರಾಮದ ಮೋಹನ ಹಾಗೂ ಕೆ.ಆರ್.ಪೇಟೆ ಟೌನ್ ಅಗ್ರಹಾರದ ರಾಜು ಉ: ಯುವರಾಜ ರವರು ಶ್ರವಣಬೆಳಗೊಳದಲ್ಲಿ ಈಗ್ಗೆ 4 ವರ್ಷಗಳಲ್ಲಿ ಕಳ್ಳತನ ಮಾಡಿ ತಂದಿರುವುದಾಗಿ ತಿಳಿದು ಬಂದು ಪಿ.ಎಸ್.ಐ. ರವರು ಅವರನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಸಮಯದಲ್ಲಿ ಇವರುಗಳ ಜೊತೆಗೆ ಆಟೋ ಡ್ರೈವರ್ ಗಳಾದ ಕೈಗೋನಹಳ್ಳಿ ಗ್ರಾಮದ ಅರುಣ ಮತ್ತು ಸಿಂಧಘಟ್ಟ ಗ್ರಾಮದ ಆನಂದ ಎಂಬುವರು ಈಗ್ಗೆ 2 ವರ್ಷಗಳ ಹಿಂದೆ ಕೆ.ಆರ್.ಪೇಟೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಈ ಕೆಳಕಂಡ ಮೋಟಾರ್ ಸೈಕಲ್ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಸಲುವಾಗಿ ಮೋಹನ ರವರು ತಮ್ಮ ಜಮೀನಿನ ಬಳಿ ಇಟ್ಟಿದ್ದು ಅವುಗಳನ್ನು ಮುಂದಿನ ಕ್ರಮದ ಬಗ್ಗೆ ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ. ಇನ್ನುಳಿಕೆ ಅರೋಪಿಗಳ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ.

1)   ಕೆಎ-04 ಇಹೆಚ್-2338 ಕೆಂಪು ಬಣ್ಣದ ಹೀರೋಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್
2)   ಕೆಎ-02 ಅರ್-7848 ಕಪ್ಪು ಬಣ್ಣದ ಹೀರೋಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್
3)   ನಂಬರ್ ಪ್ಲೇಟ್ ಇಲ್ಲದ ಒಂದು ಬಜಾಜ್ ಪಲ್ಸರ್ ಮೋಟಾರ್ ಸೈಕಲ್,
4)   ಕೆಎ-11 ಎಕ್ಸ್ -896 ರ ನಂಬರ್ ಪ್ಲೇಟ್ ಇರುವ  ಮೋಟಾರ್ ಸೈಕಲ್,
5)   ಕೆಎ-11 ಎಕ್ಸ್-49 ರ ಬಿಳಿ ಬಣ್ಣದ ಘಜರಠ ಸ್ಕೂಟರ್
6)   ಕೆಎ-06 ಎಲ್-127 ರ ಸಿ.ಡಿ-100 ಖಖ  ಮೋಟಾರ್ ಸೈಕಲ್
7)   ಕೆಎ-09 ಯು-8708 ರ ಸಿ.ಡಿ-100 ಖಖ  ಮೋಟಾರ್ ಸೈಕಲ್
8)   ಕೆಎ-04 ಇಡಬ್ಲ್ಯೂ -5108 ರ ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್. ಇವುಗಳ ಅಂದಾಜು ಬೆಲೆ ಸುಮಾರು 2,50,000/- ರೂ.ಗಳಾಗಿರುತ್ತದೆ.  

    ಈ ಮೇಲ್ಕಂಡ ಪ್ರಕರಣದ ಆರೋಫಿಗಳನ್ನು ಪತ್ತೆ ಮಾಡಿದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ 
DAILY CRIME REPORT OF MANDYA DISTRICT DTD : 27-12-2013
DAILY CRIME REPORT OF MANDYA DISTRICT DTD : 26-12-2013
DAILY CRIME REPORT OF MANDYA DISTRICT DTD : 25-12-2013
DAILY CRIME REPORT OF MANDYA DISTRICT DTD : 23-12-2013

MANDYA DISTRICT POLICE ANNUAL SPORTS MEET -2013











DAILY CRIME REPORT OF MANDYA DISTRICT DTD : 23-12-2013
DAILY CRIME REPORT OF MANDYA DISTRICT DTD : 22-12-2013
DAILY CRIME REPORT OF MANDYA DISTRICT DTD : 21-12-2013
DAILY CRIME REPORT OF MANDYA DISTRICT DTD : 20-12-2013
DAILY CRIME REPORT OF MANDYA DISTRICT DTD : 19-12-2013
DAILY CRIME REPORT OF MANDYA DISTRICT DTD : 18-12-2013
DAILY CRIME REPORT OF MANDYA DISTRICT DTD : 17-12-2013
DAILY CRIME REPORT OF MANDYA DISTRICT DTD : 16-12-2013
DAILY CRIME REPORT OF MANDYA DISTRICT DTD : 15-12-2013
MANDYA DISTRICT DAILY CRIME REPORT DATED 14-12-2013
DAILY CRIME REPORT OF MANDYA DISTRICT DTD : 13-12-2013

PRESS NOTE DATED : 13-12-2013


ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
             ಮಂಡ್ಯ ಜಿಲ್ಲೆ, ಮಂಡ್ಯ
            ದಿನಾಂಕಃ 13-12-2013

ಪತ್ರಿಕಾ ಪ್ರಕಟಣೆ







ಮಂಡ್ಯ ಉಪ ವಿಭಾಗದ ಅಪರಾಧ ಪತ್ತೆ ದಳದಿಂದ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 6 ಜನ ಆಸಾಮಿಗಳ ಬಂಧನ ಇವರುಗಳಿಂದ ಅಪಾಯಕಾರವಾದ ಒಂದು ಡಿಬಿಬಿಎಲ್ ಬಂದೂಕ ಹಾಗೂ 2 ಕಾಟ್ರೋಜ್ಗಳು, ಕಬ್ಬಿಣದ ಲಾಂಗ್, ಕಾರದಪುಡಿ ಪಟ್ಟಣ ಮತ್ತಿತರೆ ವಸ್ತುಗಳ ವಶ

   ದಿನಾಂಕಃ 06-12-2013 ರಂದು ಮದ್ಯಾಹ್ನ 02-00 ಗಂಟೆ ಸಮಯದಲ್ಲಿ ಮಂಡ್ಯದ ಕೆರೆ ಅಂಗಳದಲ್ಲಿರುವ ದೊಡ್ಡ ಚರಂಡಿಯ ಪಕ್ಕದಲ್ಲಿ ಒಂದು ಟಾಟಾ ಇಂಡಿಕಾ ಕಾರ್ ನಂಬರ್ ಕೆಎ 05 ಎಡಿ 7020 ರಲ್ಲಿ 6-7 ಜನ ಆಸಾಮಿಗಳು ಮಂಡ್ಯ ನಗರದಲ್ಲಿ ಡಕಾಯಿತಿ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಂಡ್ಯ ಉಪ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂಧಿಯವರು ಆಸಾಮಿಗಳ ಮೇಲೆ ದಾಳಿ ಮಾಡಿ ಅವರುಗಳಿಂದ ಅಪಾಯಕಾರಿ ಆಯುಧಗಳಾದ ಒಂದು ಡಿಬಿಬಿಎಲ್ ಬಂದೂಕ, 2 ಕಾಟ್ರೋಜ್ಗಳು, ಕಾರದಪುಡಿ ಪಟ್ಟಣ, ಕಬ್ಬಿಣದ ಲಾಂಗ್, ರಾಡು, ಚಗರೆ ಹಗ್ಗ, ಕಬ್ಬಿಣದ ಕಾಟ ಇವುಗಳನ್ನು ದಾಳಿ ಮಾಡಿ ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳ ಹೆಸರು ಮತ್ತು ವಿಳಾಸ
                            
1) ಸುನೀಲ್ ಕುಮಾರ್ ಬಿನ್ ಶಿವಣ್ಣ, 22ವರ್ಷ, ಕಾರ್ಚಾಲಕ, ವಾಸ: ಹೊಂಬಾಳೇಗೌಡನದೊಡ್ಡಿ, ಕೊಪ್ಪ ಹೋಬಳಿ, ಮದ್ದೂರು ತಾಲ್ಲೂಕು.
2) ಅರುಣ್ ಕುಮಾರ್  @ ಅರುಣ್ @ ಸೊಳ್ಳೆ ಬಿನ್ ಆನಂದ್ @ ಎಸ್ಟಿಡಿ ಆನಂದ  23ವರ್ಷ, ಕಾರ್ ಚಾಲಕ, ವಾಸ: ಬೆಸಗರಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು.
3) ಸ್ವಾಮಿ ಬಿನ್ ಹುಚ್ಚಪ್ಪ, 22ವರ್ಷ, ವಾಸ: ವೆಂಕಟರಾಯನದೊಡ್ಡಿ, ಸಾತನೂರು ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ.
4) ನಂದೀಶ ಬಿನ್ ಕಾಳಸಿಂಗೇಗೌಡ, 23ವರ್ಷ, ಕಾರ್ ಚಾಲಕ, ಡೋರ್ ನಂ: 1/1, ವ್ಯೆದ್ಯನಾಥೇಶ್ವರ ನಿಲಯ, 4ನೇ ಮೈನ್, ಬ್ಯಾಟರಾಯನಪುರ, ಮೈಸೂರು ರಸ್ತೆ, ಬೆಂಗಳೂರು ಸಿಟಿ.
5) ಮಂಜುನಾಥ್ ಬಿನ್ ಲೇಟ್, ನೀಲಯ್ಯ, 24ವರ್ಷ, ಹಬ್ಬೂರು ಗ್ರಾಮ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ.
6) ರಾಜೇಶ ಬಿನ್ ಲೇಟ್, ತಿಮ್ಮಯ್ಯ, 26ವರ್ಷ, ವಾಸ: ಬೆಂಡರವಾಡಿ ಗ್ರಾಮ, ಕಿರುಗಾವಲು ಹೋಬಳಿ, ಮಳವಳ್ಳಿ  ತಾಲ್ಲೂಕು.

     ಆರೋಪಿಗಳನ್ನು ದಿನಾಂಕಃ 06-12-2013 ರಂದು ದಸ್ತಗಿರಿ ಮಾಡಿ ದಿನಾಂಕ;7-12-13 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅಂದಿನಿಂದ ಆರೋಪಿಗಳು ಮಂಡ್ಯ ಉಪ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಪತ್ತೆ ಕಾರ್ಯ ಮುಂದುವರೆಸಿರುತ್ತಾರೆ.

      ಈ ಕೇಸಿನ ಪತ್ತೆ ಕಾರ್ಯದಲ್ಲಿ ಮಂಡ್ಯ ಉಪ-ವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಡಾ// ಶೋಭಾರಾಣಿ, ವಿ. ಜೆ. ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಕೆ.ಎಂ.ಹರೀಶ್ ಬಾಬು, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ, ಪಿಎಸ್ಐ, ಹೆಚ್.ಎನ್.ಬಾಲು, ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಎಎಸ್ಐ, ಸಿ. ಕೆ, ಪುಟ್ಟಸ್ವಾಮಿ, ಸಿ.ಹೆಚ್.ಸಿ ಗಳಾದ ನಿಂಗಣ್ಣ, ನಾರಾಯಣ, ಲಿಂಗರಾಜು, ಮುದ್ದುಮಲ್ಲಪ್ಪ, ನಟರಾಜು, ಸಂಪತ್, ಪಿಸಿಗಳಾದ ಇರ್ಪಾನ್ ಪಾಷ, ಪುಟ್ಟಸ್ವಾಮಿ, ಉಮೇಶ, ಮತ್ತು ಜೀಪ್ ಚಾಲಕರುಗಳಾದ ಬಲರಾಮೇಗೌಡ ಮತ್ತು ಯೋಗೇಶ ಕುಮಾರರವರು ಪಾಲ್ಗೊಂಡಿರುತ್ತಾರೆ.

    ಈ ಮೇಲ್ಕಂಡ ಪ್ರಕರಣದ ಆರೋಫಿಗಳನ್ನು ಪತ್ತೆ ಮಾಡಿದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ 
DAILY CRIME REPORT OF MANDYA DISTRICT DTD : 12-12-2013
DAILY CRIME REPORT OF MANDYA DISTRICT DTD : 11-12-2013
DAILY CRIME REPORT OF MANDYA DISTRICT DTD : 10-12-2013
DAILY CRIME REPORT OF MANDYA DISTRICT DTD : 09-12-2013
DAILY CRIME REPORT OF MANDYA DISTRICT DTD : 08-12-2013
DAILY CRIME REPORT OF MANDYA DISTRICT DTD : 07-12-2013
DAILY CRIME REPORT OF MANDYA DISTRICT DTD : 06-12-2013
DAILY CRIME REPORT OF MANDYA DISTRICT DTD : 04-12-2013
DAILY CRIME REPORT OF MANDYA DISTRICT DTD : 03-12-2013
DAILY CRIME REPORT OF MANDYA DISTRICT DTD : 02-12-2013
DAILY CRIME REPORT OF MANDYA DISTRICT DTD : 01-12-2013