Moving text

Mandya District Police

Press Note 28-05-2011

ಪತ್ರಿಕಾ ಪ್ರಕಟಣೆ
ಮಳವಳ್ಳಿ ಟೌನ್ ಎನ್.ಇ.ಎಸ್. ಬಡವಾಣೆಯಲ್ಲಿ ವಾಸವಾಗಿರುವ ಶ್ರೀಮತಿ ವಿಜಯ ಎಂಬುವವರಿಗೆ ಈಗ್ಗೆ ಮೂರು ತಿಂಗಳ ಹಿಂದೆ ಯಾರೋ ಒಬ್ಬ ವ್ಯಕ್ತಿ ಪೂಜೆ ಮಾಡಿಸಿ ನಿಧಿಯನ್ನು ತೆಗೆದುಕೊಡುವುದಾಗಿ ನಂಬಿಸಿ ಆಕೆಯಿಂದ ಹಣ ಹಾಗೂ ಚಿನ್ನದ ಒಡವೆಗಳನ್ನು ತೆಗೆದುಕೊಂಡು ಹೋದವನು ಈವರೆಗೆ ವಾಪಸ್ ಬರದೇ ಇದ್ದು, ಈತನ ಹೆಸರು ವಿಳಾಸವನ್ನು ಆಕೆಯು ವಿಚಾರಿಸಿಕೊಂಡಿದ್ದು, ಆತನ ಹೆಸರು ಜೆ.ರಾಜ ಬಿನ್ ಜವರಯ್ಯ, 54 ವರ್ಷ, ಗಿರಿಜನರು, ವೆಂಕಟಯ್ಯನ ಛತ್ರ, ವಾಟರ್ ಟ್ಯಾಂಕ್ ಹತ್ತಿರ, ಚಾಮರಾಜನಗರ ಎಂಬುದಾಗಿ ತಿಳಿದುಬಂದಿದ್ದು, ದಿನಾಂಕ:26-05-2011 ರಂದು ಆಕೆಯು ಮಳವಳ್ಳಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಹೋಗುತ್ತಿದ್ದಾಗ ಮೇಲ್ಕಂಡ ವ್ಯಕ್ತಿ ಜೆ.ರಾಜುವನ್ನು ಹಿಡಿದುಕೊಂಡು ಇತರ ಸಂಬಂಧಿಕರ ಜೊತೆ ಆತನನ್ನು ಮಳವಳ್ಳಿ ಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ನೀಡಿದ್ದು, ಈ ವಿಚಾರದಲ್ಲಿ ಮಳವಳ್ಳಿ ಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ.73/2011 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಆರೋಪಿಯಾದ ಜೆ.ರಾಜು ಬಿನ್ ಜವರಯ್ಯನನ್ನು ಮಳವಳ್ಳಿ ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಎಲ್.ಕೆ.ರಮೇಶ್ ರವರು ಕೂಲಂಕುಶವಾಗಿ ವಿಚಾರಣೆಗೊಳಪಡಿಸಲಾಗಿ ಆತನು ಮಳವಳ್ಳಿ ಟೌನ್ ಮತ್ತು ಅಕ್ಕಪಕ್ಕದ ಹಳ್ಳಿಗಳಲ್ಲಿ ಉಷಾರಿಲ್ಲದವರಿಗೆ ಮತ್ತು ಹಣಕಾಸಿನ ತೊಂದರೆ ಇದ್ದವರಿಗೆ ಪೂಜೆ ಮಾಡಿ ಹಾಗೂ ತಮ್ಮ ಮನೆಗಳಲ್ಲಿ "ನಿಧಿ" ತೆಗೆದುಕೊಡುತ್ತೇನೆಂದು ಜನರನ್ನನು ನಂಬಿಸಿ, ಜನರಿಂದ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಹೋಗಿ ಚಾಮರಜನಗರ ಟೌನ್ ನಲ್ಲಿರುವ ಮುತ್ತೂಟ್ ಪೈನ್ ಕಾರ್ಪ್ ಹಾಗೂ ಮಣಿಪುರಂ ಜನರಲ್ ಪೈನಾನ್ಸ್ ಅಂಡ್ ಲಿಜೀಂಗ್ ಲಿಮಿಟೆಡ್ ಕಂಪೆನಿಯಲ್ಲಿ ಹಾಗೂ ಚಾಮರಾಜನಗರ ಪಟ್ಟಣದ ಚಿಕ್ಕ ಅಂಗಡಿ ಬೀದಿಯ ಸೀರಿವಿ ಗಿರಿವಿ ಅಂಗಡಿಯಲ್ಲಿ ಇಟ್ಟಿರುತ್ತೇನೆಂದು ತಿಳಿಸಿದ್ದು, ಅದರಂತೆ ಆರೋಪಿ ರಾಜು ತಾನು ಗಿರಿವಿ ಇಟ್ಟಿದ್ದ ಕಂಪೆನಿ ಮತ್ತು ಗಿರಿವಿ ಅಂಗಡಿಯನ್ನು ತೋರಿಸಿದ ಮೇರೆಗೆ ಮುತ್ತೂಟ್ ಪೈನ್ ಕಾರ್ಪ್ ಕಂಪೆನಿಯಲ್ಲಿ ಅಡವಿಟ್ಟಿದ್ದ 145 ಗ್ರಾಂ ಚಿನ್ನದ ಆಭರಣಗಳು ಹಾಗೂ ಮಣಿಪುರಂ ಜನರಲ್ ಪೈನಾನ್ಸ್ ಲೀಜಿಂಗ್ ಲಿಮಿಟೆಡ್ ನಲ್ಲಿ ಇಟ್ಟಿದ್ದ 107 ಗ್ರಾಂ ಚಿನ್ನದ ಆಭರಣಗಳು ಹಾಗೂ ಸೀರಿವಿ ಗಿರಿವಿ ಅಂಗಡಿಯಲ್ಲಿಟ್ಟಿದ್ದ 3 ಗ್ರಾಂ ಚಿನ್ನವನ್ನು ಸೇರಿ ಒಟ್ಟು 255 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 5,50,000-00 ರೂಗಳಾಗಿರುತ್ತದೆ. ಸದರಿ ಆರೋಪಿ ಜೆ.ರಾಜುನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಈ ಪ್ರಕರಣವನ್ನು ಪತ್ತೆ ಮಾಡಲು ಶ್ರಮವಹಿಸಿದ ಮಳವಳ್ಳಿ ಟೌನ್ ಪೊಲೀಸ್ ಠಾಣೆಯ ಪಿಐ ಶ್ರೀ ಎಲ್.ಕೆ.ರಮೇಶ್ ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.

Daily Crime Report 28-05-2011

ಜಿಲ್ಲೆಯಲ್ಲಿ ಈ ದಿನ ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 8 ರಸ್ತೆ ಅಪಘಾತ ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣ, 1 ಅಪಹರಣ ಪ್ರಕರಣ, 1 ಕಳ್ಳತನ ಪ್ರಕರಣ, 1 ಯು.ಡಿ.ಆರ್. ಪ್ರಕರಣ, ಮತ್ತು 12 ಇತರೆ ಪ್ರಕರಣಗಳು ವರದಿಯಾಗಿರುತ್ತೆ.

ಮನುಷ್ಯ ಕಾಣೆಯಾದ ಪ್ರಕರಣ
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ
1] ಮೊ.ಸಂ 90/11 ಕಲಂ ಹುಡುಗಿ ಕಾಣೆಯಾಗಿದ್ದಾಳೆ ಕಾಣೆಯಾದ ಹುಡುಗಿ ಎಂ.ಡಿ. ಶೋಭಾ ಬಿನ್ ದೇಶಿಗೌಡ 18 ವರ್ಷ ರವರು ದಿನಾಂಕ 06-05-11 ರಂದು ಮನೆಯಿಂದ ಹೊರಗೇ ಹೋದವಳು ವಾಪಸ್ಸು ಹಿಂದಿರುಗಿ ಬಂದಿರುವುದಿಲ್ಲ.

ಮಂಡ್ಯ ಪೂರ್ವ ಪೊಲೀಸ್ ಠಾಣೆ
2] ಮೊ.ಸಂ 146/11 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 06-05-11 ರಂದು ಕಾಣೆಯಾದ ಮನುಷ್ಯ ಬಿ.ಸಿ. ದೇವರಾಜು 27 ವರ್ಷ ರವರ ಹೊಳ್ಳಿಯ ಅವರ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೇ ಹೋದವರು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

ಅಪಹರಣ ಪ್ರಕರಣ
ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ
1] ಮೊ.ಸಂ 130/11 ಕಲಂ 143-366 [ಎ] 114 ರ/ಡ 149 ಐಪಿಸಿ ದಿನಾಂಕ 28-05-11 ರಂದು ಆರೋಪಿ ಅಶೋಕ ರವರು ಪಿರ್ಯಾದಿ ನಿಂಗೇಗೌಡ ರವರ ಮಗಳಾದ ಕೆ.ಎನ್. ರಶ್ಮಿ ರವರನ್ನು ಕಾಲೇಜಿಗೆ ಹೋಗಿದ್ದಾಗ ಅಪಹರಿಸಿಕೊಂಡು ಹೋಗಿರುತ್ತಾನೆ.

ಕಳ್ಳತನ ಪ್ರಕರಣ
ಶ್ರೀರಂಗಪಟ್ಟಣ ಪೊಲೀಸ್ ಠಾಣೆ
1] ಮೊ.ಸಂ 355/11 ಕಲಂ 379 ಐಪಿಸಿ ದಿನಾಂಕ 21-05-11 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ನಾಗುವನ ಹಳ್ಳಿಯ ಕಾಲೋನಿಯಿಂದ ನಂಜನಗೂಡಿನ ಪಿರ್ಯಾದಿ ಪುಟ್ಟಮ್ಮ ನವರ ಚಿಕ್ಕಮ್ಮ ವಿಜಿಯಮ್ಮ ರವರಿಗೆ ವಡೆವೆಗಳನ್ನು ಕೊಡುವುದಕ್ಕಾಗಿ ಮೈಸೂರಿಗೆ ಹೋಗಲು ನಗುವನ ಹಳ್ಳಿಯ ಕಾಲೋನಿಯ ಅರಳಿಕಟ್ಟೆಯ ಬಳಿ ವೆಡವೆಗಳನ್ನು ಪರ್ಸ್ ಜೊತೆಗೆ ಬಸ್ಸ್ ಗಾಗಿ ಕಾಯುತ್ತಾ ಕುಳಿತ್ತಿದ್ದಾಗ ಬಸ್ ಬಂದಕೂಡಲೇ ಬಸ್ಸ್ ಹತ್ತಿ ಮೈಸೂರಿಗೆ ಹೋಗಿ ನಂಜನಗೂಡಿನಲ್ಲಿ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರನ್ನು ಒಳಗಡೆ ಪರ್ಸ್ ಇದೆ ಎಂದು ನೋಡಿಕೊಂಡಾಗ ಪರ್ಸ್ ಇರಲಿಲ್ಲ, ಪುನಃ ಅದೇ ದಿನ ಸಂಜೆಯೇ ನಗುವನ ಹಳ್ಳಿಯ ಕಾಲೋನಗೆ ಬಂದು ಅರಳಿಮ,ರದ ಬಳಿ ಮತ್ತು ಮನೆಯಲೆಲ್ಲಾ ಹುಡುಕಾಡಿ ವಡವೆಗಳು ಹೋಗಿತು ಎಂದು ಆಳುತ್ತಿದ್ದಾಗ ನಮ್ಮ ಕಾಲೋನಿಯ ಮಹೇಶ ರವರು ಬೆಳಿಗ್ಗೆ ನೀವು ಅರಳಿಕಟ್ಟೆಯ ಬಳಿ ಬಸ್ಸ್ ಹತ್ತಿದ್ದಾಗ ನೀವು ಕುಳಿತ್ತಿದ್ದ ಸ್ಥಳದಲ್ಲಿ ಒಂದು ಪರ್ಸ್ ಬಿದ್ದಿತ್ತು. ಅದನ್ನು ನಾರಾಯಣಪ್ಪ ತೆಗೆದು ಕೊಂಡು ಹೋದ ರಂದು ತಿಳಿಸಿದರು. ಅದರಲ್ಲಿ ವಡವೆಗಳು ಮೋಬೈಲ್ ಸೆಟ್ಟ್ 1200/-, ರೂ ನಗದು ಹಣ ಒಟ್ಟು ಬೆಲೆ 75.000/ ರೂ ಅಗಿದ್ದು ಅವುಗಳನ್ನು ನಗುವನಹಳ್ಳಿ ನಾರಾಯಣಪ್ಪ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರು.

ಯು.ಡಿ.ಆರ್. ಪ್ರಕರಣ
ಮದ್ದೂರು ಪೊಲೀಸ್ ಠಾಣೆ
1] ಯು.ಡಿ.ಆರ್. ನಂ 18/11 ಕಲಂ 174 ಸಿ.ಆರ್.ಪಿ.ಸಿ ದಿನಾಂಕ 28-05-11 ರಂದು ಪಿರ್ಯಾದಿ ಎನ್. ರಾಮಚಂದ್ರ ಸಿ.ಪಿ.ಸಿ 183 ಮದ್ದೂರು ಪೊಲೀಸ್ ಠಾಣೆ ರವರ ಗಸ್ತಿನಲ್ಲಿದ್ದಾಗ ಜಯಲಕ್ಷ್ಮಿ ಮಂಟಪದ ರಸ್ತೆಯಲ್ಲಿರುವ ರೈಲ್ವೆ ಕ್ರಾಸ್ ಸೇತುವೆ ಕೆಳಗೆ ಕಾಲುವೆ ನೀರಿನಲ್ಲಿ ಒಂದು ಅಪರಿಚಿತ ಗಂಡಸಿನ ಶವ ಸುಮಾರು 40-45 ವರ್ಷ ಬಿದ್ದಿದ್ದು. ಈತನು ಸುಮಾರು ದಿನಗಳ ಹಿಂದೆ ಎಲ್ಲಿಯೋ ಕಾಲುವೆ ನೀರಿನಲ್ಲಿ ಬಿದ್ದು ಸಾವನ್ನಪ್ಪಿರುತ್ತಾರೆ

test

test

Press Note Dated: 22-05-2011.

ಪತ್ರಿಕಾ ಪ್ರಕಟಣೆ 

ಹಲಗೂರು ಪೊಲೀಸ್ ಠಾಣೆ ಮೊ.ಸಂ. 107/11 ಕಲಂ 379 ಐಪಿಸಿ 

ದಿನಾಂಕ 08-05-11 ರಂದು ಗೊಲ್ಲರಹಳ್ಳಿ ಗ್ರಾಮದ ಶಿವರಾಜು ಎಂಬುವವರು ದಿನಾಂಕ 06-05-11 ರಂದು ರಾತ್ರಿ 08-45 ಗಂಟೆ ಸಮಯಲ್ಲಿ ಅವರ ಬಾಬ್ತು ಕೆಎ-11-ಡಬ್ಲ್ಯೂ-0934 ಹೀರೊ ಹೊಂಡಾ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ಅನ್ನು ಮನೆಯ ಮುಂದೆ ನಿಲ್ಲಿಸಿದ್ದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿಯವರು ನೀಡಿದ ದೂರಿನ ಅನ್ವಯೆ  ಹಲಗೂರು ಪೊಲೀಸ್ ಠಾಣೆಯಲ್ಲಿ ಮೊ.ಸಂ. 107/11 ಕಲಂ 379 ಐಪಿಸಿ  ರೀತ್ಯ ಪ್ರಕರಣ ದಾಖಲಾಗಿರುತ್ತೆ. 

ಸದರಿ ದೂರಿನ ಅನ್ವಯ ಹೆಲಗೂರು ಪೊಲೀಸರಿಂದ ತನಿಖೆ ಕ್ರಮ ಕೈಗೊಳ್ಳಲಾಗಿತ್ತು. ಈ ಕೇಸಿನ ಪತ್ತೆ ಬಗ್ಗೆ ಹಲಗೂರು ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಧನರಾಜ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಸಿ.ಹೆಚ್.ಸಿ. 131 ಅಪ್ಪಾಜಿಗೌಡ. ಸಿ.ಪಿ.ಸಿ ಗಳಾದ 324 ಸತೀಶ. 686 ಹೆಚ್.ಬಿ ರಾಜು. ಸಿ.ಪಿ.ಸಿ 792 ಎನ್. ಹರ್ಷಕುಮಾರ ರವರುಗಳನ್ನನೊಳಗೊಂಡ ವಿಶೇಷ ದಳ ರಚಿಸಿ ಸದರಿ ಪ್ರಕರಣದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಕೊಂಡು ಪ್ರಕರಣದ ಆರೋಪಿಗಳಾದ ಗೊಲ್ಲರಹಳ್ಳಿ ಗ್ರಾಮದ 1] ಕುಮಾರ ಬಿನ್ ತಮ್ಮಯ್ಯ 20 ವರ್ಷ 2] ಕುಮಾರ್ @ ಪಿಯಾ ಬಿನ್ ಕೃಷ್ಣಪ್ಪ 22 ವರ್ಷ, 3] ಗಿರೀಶ ಬಿನ್ ಶಿವಣ್ಣ. ರವರುಗಳನ್ನು 21-05-2011 ರಂದು ರಾತ್ರಿ ಆರೋಪಿಗಳನ್ನು ದಸ್ತಗಿರಿ ಮಾಡಿ, ಸದರಿ  ಆರೋಪಿಗಳು ಕೊಟ್ಟಿ ಸ್ವ ಇಚ್ಚಾ ಹೇಳಿಕೆಯ ಮೇರೆಗೆ ಈ ಕೇಸಿನಲ್ಲಿ ಕಳುವು ಆಗಿದ್ದ ಕೆಎ-11-ಡಬ್ಲ್ಯೂ-0934 ಹೀರೊ ಹೊಂಡಾ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ಮತ್ತು ಆರೋಪಿಗಳು ಈ ಹಿಂದೆ ಕಳವು ಮಾಡಿದ ಕೆಎ-51-ಜೆ-8093 ಹೀರೊ ಹೊಂಡಾ ಸ್ಪ್ಲೇಂಡರ್ ಮೋಟಾರ್ ಸೈಕಲ್. ಹಾಗೂ 2 ಹೆವಿಡ್ಯೂಟಿ ಟಿ.ವಿ.ಎಸ್. ಮೋಪೆಡ್ ಒಟ್ಟು 4 ವಾಹನಗಳನ್ನು ಸದರಿ ಆರೋಪಿಗಳಿಂದ ವಶಪಡಿಸಿಕೊಂಡಿರುತ್ತಾರೆ ಅವುಗಳ ಒಟ್ಟು ಮೌಲ್ಯ 2.00,000/- ರೂ ..

ಸದರಿ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ರವರು ಮಂಡ್ಯ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ 

Raid On 20-05-2011

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ  334/11 ಕಲಂ 79-80 ಕೆ.ಪಿ. ಕಾಯಿದೆ 

ದಿನಾಂಕ 19-05-11 ರಂದು ಶ್ರೀ ಪ್ರಭಾಕರ್ ರಾವ್ ಸಿಂದೆ ಸಿ.ಪಿ.ಐ ಶ್ರೀರಂಗಪಟ್ಟಣ ವೃತ್ತ ರವರ ದೊರೆತ ಮಾಹಿತಿಯಂತೆ ಕಪ್ಪರನ ಕೊಪ್ಪಲಿ ಗ್ರಾಮದ ಚಿಕ್ಕಬಸವಶೆಟ್ಟಿ ರವರ ಹೋಟೆಲ್ ನಲ್ಲಿ ಅಕ್ರಮವಾಗಿ ಜೂಜಾಟ ವಾಡುತ್ತಿದ್ದ ಆಸಾಮಿಗಳಾದ ಮಹೇಶ ಬಿನ್ ಚಿಕ್ಕ ಭೈರವಶಟ್ಟಿ ಮತ್ತು ಇತರೆ 7 ಜನರು ಎಲ್ಲರೂ ಕಪರನಕೊಪ್ಪಲು ಗ್ರಾಮ ಶ್ರೀರಂಗಪಟ್ಟಣ ತಾಲ್ಲೋಕು ರವರುಗಳ ಹಣವನ್ನು ಪಣವಾಗಿ ಇಟ್ಟುಕೊಂಡು ಜೂಜಾಟ ಆಡುತ್ತಿದ್ದು . ಸದರಿಯವರ ಮೇಲೆ  ಶ್ರೀ ಪ್ರಭಾಕರ್ ರಾವ್ ಸಿಂದೆ ಸಿ.ಪಿ.ಐ ಶ್ರೀರಂಗಪಟ್ಟಣ ವೃತ್ತ ಮತ್ತು ಸಿಬ್ಬಂದಿಗಳೊಡನೆ ದಾಳಿ ಸದರಿಯವರ ಬಂಧಿಸಿ ಅವರುಗಳ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ  334/11 ಕಲಂ 79-80 ಕೆ.ಪಿ. ಕಾಯಿದೆ ಕೇಸು ದಾಖಲು ಮಾಡಿ ಮತ್ತು ಅವರ ಬಳಿ ಇದ್ದ ಹಣ 15.400/- ರೂ 6 ಮೋಬೈಲ್ ಪೋನ್ ಗಳು, 3 ಮೋಟಾರ್ ಸೈಕಲ್ ಗಳನ್ನು ವಶಕ್ಕೆ ತೆಗೆದು ಕೊಂಡಿರುತ್ತೆ 

Raid On 18-05-2011

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ಸಂ 132/11 ಕಲಂ 188 ಐಪಿಸಿ ರೆ/ವಿ 34 ಕೆ.ಇ. ಕಾಯಿದೆ 

ದಿನಾಂಕ 18-05-11 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಪಿರ್ಯಾದಿ ಎಂ.ಪಿ. ಜಯಮಾರುತಿ ಸಿಪಿಐ ಮಂಡ್ಯ ನಗರ ವೃತ್ತ ರವರಿಗೆ ಬಂದು ಖಚಿತ ಮಾಹಿತಿ ಏನೆಂದರೇ ಮಂಡ್ಯ ಸಿಟಿ ಕಾಳಿಕಾಂಬ ದೇವಸ್ಥಾನದ ಸರ್ಕಲ್ ಪಕ್ಕ ಪಶು ಆಸ್ಪತ್ರೆಯ ಪಕ್ಕದಲ್ಲಿ ಆರೋಪಿ ನಾಗರಾಜು ಬಿನ್ ಸಿದ್ದಾಚಾರಿ ಎಂಬ ಸಾಮಿಯು ಮಧ್ಯದ ಬಾಟಲ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು, ಮಂಡ್ಯ ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ ನಡೆದು ಮತ ಎಣಿಕೆ ಕಾರ್ಯಕ್ರಮ ಇದ್ದು, ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು ಮಧ್ಯ ಮಾರಾಟ ಮಾಡುವುದನ್ನು ನಿಷೇಧಿಸಿದ್ದು. ಅದನ್ನು ಉಲ್ಲಂಘಿಸಿ ಮಧ್ಯ ಮಾರಾಟ ಮಾಡುತ್ತಿದ್ದ. ದಾಳಿ ಮಾಡಿ ಆರೋಪಿಯನ್ನು ಮತ್ತು 6 ಮಧ್ಯ ತುಂಬಿದ ಸೂಪರ್ ಜಾಕ್ ಬಾಟಲ್ ಗಳು ಹಾಗೂ 2 ಅರ್ಧ ಮಧ್ಯ ತುಂಬಿದ ಮಧ್ಯದ ಬಾಟಲ್ಗಳು ಮಧ್ಯ ಮಾರಾಟ ದಿಂದ ಬಂದ ಹಣ 120 ರೂ ವನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿಯ ವಿರುದ್ಧ ಕೇಸು ದಾಖಲು ಮಾಡಿರುತ್ತೆ 

press Note Dated: 17-05-2011.

ಪತ್ರಿಕಾ ಪ್ರಕಟಣೆ

ಇತ್ತೀಚೆಗೆ ಪಾಂಡವಪುರ ಪಟ್ಟಣದಲ್ಲಿ 3 ರಾತ್ರಿ ಕನ್ನ ಕಳವು ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನಲೆಯಲ್ಲಿ ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲುಗಳನ್ನು ಪತ್ತೆ ಮಾಡಲು ಶ್ರೀರಂಗಪಟ್ಟಣ ಉಪ-ವಿಭಾಗದಲ್ಲಿ ಪಾಂಡವಪುರ ಪೊಲೀಸ್ ಇನ್ಸಪೆಕ್ಟರ್ ರವರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಲಾಗಿತ್ತು.

ಈ ತಂಡ ಕಾರ್ಯಪ್ರವೃತ್ತೃರಾಗಿ ದಿನಾಂಕ 17-05-11 ರಂದು ಬೆಳಗಿನ ಜಾವ 5.00 ಗಂಟೆ ಸಮಯಲ್ಲಿ ಪಾಂಡವಪುರ ಟೌನ್ ವಿ.ಸಿ.ಕಾಲೋನಿಯ ಪೂರ್ವಸಜಾ ವ್ಯಕ್ತಿ ಮಹದೇವ @ ಕಂದಳ್ಳಿ ಮಹದೇವ @ ಪೆದ್ದಮಾವ ಬಿನ್ ಕುಂದಬಳ್ಳಶೆಟ್ಟಿ, ಕಂದಳ್ಳಿ ಗ್ರಾಮ, ಯಳಂದೂರು ತಾ: ಎಂಬುವನನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಆತನು ಕೊಟ್ಟ ಸುಳಿವಿನ ಮೇರೆಗೆ ಈ ಕೆಳಕಂಡ ಈ ಕೆಳಕಂಡ ಕೇಸುಗಳಿಗೆ ಸಂಬಂಧಪಟ್ಟ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಜೊತೆಗೆ ಕಳವು ಮಾಲುಗಳ ವಿಲೇವಾರಿಗೆ ಸಹಕರಿಸಿದ ಈತನ ತಾಯಿ ನಂಜಮ್ಮ @ ಪುಟ್ಟನಂಜಮ್ಮಳನ್ನು ಸಹ ದಸ್ತಗಿರಿ ಮಾಡಲಾಗಿರುತ್ತದೆ.

1.ಪಾಂಡವಪುರ ತಾ: ಕ್ಯಾತನಹಳ್ಳಿ ವಿಷಕಂಠೇಗೌಡ ರವರ ಮನೆಯಲ್ಲಿ ದಿ:20-12-2010 ರಂದು ರಾತ್ರಿ ಅವರ ಮನೆಗೆ ನುಗ್ಗಿ ಮನೆಯಲ್ಲಿದ್ದ 2 ಎಳೆ ಚಿನ್ನದ, ಹಗ್ಗದ ಚಿನ್ನದ ಚೈನ್, ಚಿನ್ನದ ಕೈ ಬಳೆಗಳು, ಚಿನ್ನದ ಬ್ರಾಸ್ ಲೈಟ್, ಬೆಳ್ಳಿ ದೀಪಾಲೆ ಕಂಬಗಳು, ಬೆಳ್ಳಿಯ ಚೊಂಬು, ತಟ್ಟೆ ಮುಂತಾದ ಒಟ್ಟು 4,25,000-00 ರೂ ಬೆಲೆಯುಳ್ಳ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಇವುಗಳ ಬಾಬ್ತು 178 ಗ್ರಾಂ ಚಿನ್ನ ಮತ್ತು 865 ಗ್ರಾಂ ಬೆಳ್ಳಿಯ ಆಭರಣಗಳು ಒಟ್ಟು 4,25,000-00 ರೂ ಬೆಲೆ ಬಾಳುವ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.

2.ದಿನಾಂಕ 22-04-2011 ರಂದು ರಾತ್ರಿ ಪಾಂಡವಪುರ ಟೌನ್ ನ ಟಿಎಪಿಸಿಎಂಎಸ್ ಬಳಿ ಇರುವ ಶಿಕ್ಷಕರಾದ ಎನ್.ಲಿಂಗರಾಜು ರವರ ಮನೆಯ ವೆಂಟಿಲೇಟರ್ ಮುಖಾಂತರ ಒಳ ಹೊಗಿ ಅಲ್ಮೇರಾದಲ್ಲಿ ಇಟ್ಟಿದ್ದ ಚಿನ್ನದ ಬ್ರಾಸ್ ಲೈಟ್, ಚಿನ್ನದ ಚೈನ್, ಉಂಗುರಗಳು, ಓಲೆಗಳು, ಕೈ ಬಳೆಗಳು ಮುಂತಾದ ಸುಮಾರು 2 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಪೈಕಿ 131 ಗ್ರಾಂ ಚಿನ್ನ ಮತ್ತು 58 ಗ್ರಾಂ ಬೆಳ್ಳಿಯ ಆಭರಣಗಳು ಅಂದಾಜು 3,25,000-00 ರೂ ಬೆಲೆ ಬಾಳುವ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.

3.ದಿನಾಂಕ 13-04-2011 ರ ರಾತ್ರಿ ಪಾಂಡವಪುರ ಟೌನ್ ಕೋಲಪ್ಪನ ಬೀದಿಯಲ್ಲಿರುವ ಕಾರ್ ಡ್ರೈವರ್ ನಾಗೇಂದ್ರ ಎಂಬುವವರ ಮನೆಯಲ್ಲಿ ಒಂದು ಚಿನ್ನದ ಚೈನ್, ಬ್ರಾಸ್ ಲೈಟ್, ಕಪಾಲಿ ಚಿನ್ನದ ಉಂಗುರ, ಚಿನ್ನದ ಓಲೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಪೈಕಿ 39 ಗ್ರಾಂ ಚಿನ್ನದ ಒಡವೆಗಳು ಅಂದಾಜು 85000-00 ರೂ ಬೆಲೆಬಾಳುವ ವಸ್ತುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.

ಮೇಲ್ಕಂಡ ಆರೋಪಿ ನೀಡಿದ ಸುಳಿವಿನ ಮೇರೆಗೆ ಒಟ್ಟು ಎಂಟು ಮುಕ್ಕಾಲು ಲಕ್ಷ ಬೆಲೆ ಬಾಳುವ ಚಿನ್ನದ ಮತ್ತು ಬೆಳ್ಳಿಯ ಆಭರಣಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಪತ್ತೆ ಹಚ್ಚಲು ಶ್ರಮವಹಿಸಿದ ಶ್ರೀ ಜಿ.ಕೃಷ್ಣಮೂರ್ತಿ, ಪಿಐ, ಪಾಂಡವಪುರ ಮತ್ತು ಸಿಬ್ಬಂದಿಗಳಾದ ಮಹದೇವಯ್ಯ, ಲಕ್ಷ್ಮಣ, ಮೆಹಬೂಬ್ ಪಾಷ್, ರಮೇಶ ರಾಜೇಅರಸ್, ಸುಮಾ, ತಾಂಡವಮೂರ್ತಿ ಮತ್ತು ಜೀಪ್ ಡ್ರೈವರ್ ಅಶೋಕ ರವರುಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಶಿಸಿರುತ್ತಾರೆ.

Raid On 16-05-2011

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ 139/11 ಕಲಂ 34 ಕೆ.ಇ. ಕಾಯಿದೆ ಮತ್ತು 188 ಐಪಿಸಿ

ದಿನಾಂಕ 16-05-11 ರಂದು  ಎ.ಪಿ.ಎಂ.ಸಿ ಚುನಾವಣೆ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು ಮಂಡ್ಯ ಜಿಲ್ಲೆ ರವರು ಮಧ್ಯ ಮಾರಾಟ ಮಾಡದಂತೆ ನಿಷೇದಾಜ್ಞೆ ಹೊರಡಿಸಿದ್ದರು ಸಹಾ ಸದರಿ ಆದೇಶವನ್ನು ಉಲ್ಲಂಘಿಸಿ ಮಂಡ್ಯದ ಹಳೆ ತಾಲ್ಲೋಕು ಕಛೇರಿ ಬಳಿ ಆರೋಪಿ 
ರಘು @ ರಾಘವೇಂದ್ರ ಎಂಬುವವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು. ಆತನ ಬಳಿ ಇದ್ದ 180 ಎಂ.ಎಲ್ ನ 4 ಸೂಪರ್ ಜಾಕ್ ಬಾಟಲ್ ಗಳು ಮತ್ತು 14 ಪ್ಲಾಸ್ಟಿಕ್ ರಟ್ಟಿನಲ್ಲಿದ್ದ 180 ಎಂ.ಎಲ್  ನ ಓಲ್ಡ್ ತವರಿನ್ ಪೋಚ್ಗಳನ್ನು ಹಾಗೂ ಮಾರಾಟ ಮಾಡಿದ್ದು 1500-00 ರೂಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ  ಸದರಿ ಆರೋಪಿಯು ವಿರುದ್ದ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ 139/11 ಕಲಂ 34 ಕೆ.ಇ. ಕಾಯಿದೆ ಮತ್ತು 188 ಐಪಿಸಿ ರೀತ್ಯಾ ಕೇಸು ದಾಖಲು ಮಾಡಿರುತ್ತೆ 

Raid On 14-05-2011

ಶ್ರೀರಂಗಪಟ್ಟಣ ಪೊಲೀಸ್ ಠಾಣೆ 

ದಿನಾಂಕ 14-05-11 ರಂದು ಪಿರ್ಯಾದಿ ಶ್ರೀ ಪ್ರಭಾಕರ್ ರಾವ್ ಸಿಂದೆ  ಪೊಲೀಸ್ ಇನ್ಸ್ ಪೆಕ್ಟರ್ ಶ್ರೀರಂಗಪಟ್ಟಣ ವೃತ್ತ ರವರ ದೊರೆತ ಮಾಹಿತಿಯಂತೆ ಶ್ರೀರಂಗಪಟ್ಟಣ ಟೌನ್ ನ ಬಾಲಾಜಿ ಲಾಡ್ಜ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 1] ಸೂಯದ್ ರೂಹುಲ್ಲಾ ಬಿನ್ ಸೈಯದ್ ಖಲಿಂ, 2] ಹಸೀನಾ ಕೋಂ ರಷೀದ್ , 3] ಮೊಹಮದ್ ಖಲಿಂ ಉಲ್ಲಾ, 4] ಲುಗ್ನಾ ಬಿನ್ ಜುಬೇರಾ. 5] ಪುಂಟಲೀಕ ಇತರರನ್ನು ಮತ್ತು 1940 ರೂ ಹಣವನ್ನು ಮತ್ತು ಒಂದು ಮೋಟಾರ್ ಬೈಕ್ ನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿಗಳ ವಿರುದ್ದ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ 317/11 ಕಲಂ 3-4-5-6-7 ಐ.ಟಿಪಿ ಆಕ್ಟ್ ರೀತ್ಯ ಪ್ರಕರಣ ದಾಖಲು ಮಾಡಿರುತ್ತೆ 

ಮಳವಳ್ಳಿ ಟೌನ್ ಪೊಲೀಸ್ ಠಾಣೆ ಮೊ.ಸಂ . 64/11 ಕಲಂ 87 ಕೆ.ಪಿ ಕಾಯಿದೆ ಮತ್ತು 420 ರೆ/ವಿ 34 ಐಪಿಸಿ 

ದಿನಾಂಕ 13-05-11 ರಂದು ಪಿರ್ಯಾದಿ ಶ್ರೀ ಎಲ್ ಕೆ ರಮೇಶ ಅರಕ್ಷಕ ನಿರೀಕ್ಷಕರು ಮಳವಳ್ಳಿ ಪುರ ಪೊಲಿಸ್ ಠಾಣೆ ರವರು ಗಸ್ತಿನಲ್ಲಿರು ಬೇಕಾದರೆ ಬೆಳ್ಳಿಗೆ 10-45 ಗಂಟೆ ಸಮಯಲ್ಲಿ ಆರೋಪಿಗಳಾದ  ಅನ್ವರ್ ಪಾಷ ಮತ್ತು  ಜಯಚಂದ್ರ  ಮುಸ್ಲಿಂ ಬ್ಲಾಕ್ ಅರಳಿ ಕಟ್ಟೆಯ ಬಳಿ. ಕುಳಿತುಕೊಂಡು ರಸ್ತೆಯಲ್ಲಿ ಬರುವ ಸಾರ್ವಜಿಕರನ್ನು ಕರೆದು ಐ.ಪಿ.ಎಲ್ ನಡೆಸುತ್ತಿರುವ ಕ್ರಕೇಟ್ ಪಂದ್ಯಾವಳಿಯಲ್ಲಿ. ಒಬ್ಬ ರಾಯಲ್ ಚಾಲೆಂಕರ್ಸ್ ಬೆಂಗಳೂರು ತಂಡ ಗೆಲ್ಲುತ್ತದೆ ಅಂತ ಹಣ ಕಟ್ಟಿಸಿಕೊಳ್ಳುತ್ತಿದ್ದ. ಮತ್ತೊಬ್ಬ ಕೊಲ್ಕತಾ ನೈಟ್ ರೈಡರ್ಸ್ ತಂಡ ಗೆಲ್ಲುತ್ತದೆ ಎಂದು ಕೂಗಿ ಹೇಳುತ್ತಾ ಹಣವನ್ನು ಪಣಾವಗಿ ಕಟ್ಟಿಸಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಾ ಜೂಜಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಡನೆ ದಾಳಿ ಮಾಡಿದ್ದಾಗ ಆರೋಪಿ ಅನ್ವರ್ ಪಾಷ ಬಳಿ ಶೋಧಿಸಿದಾಗ 22.510-00 ಒಂದು ನೋಕಿಯಾ ಮೊಬೈಲ್ ಮತ್ತು ಜಯಚಂದ್ರ ಶೋಧಿಸಿದಾಗ 32.500-00 ರೂ ನಗದು ಹಣ ಮತ್ತು 3 ನೋಕಿಯಾ ಮೋಬೈಲ್  ಗಳಿದ್ದ ಹಣವನ್ನು ವಶಕ್ಕೆ ತೆಗೆದು ಕೊಂಡು ಮೇಲ್ಕಂಡ ಆರೋಪಿಗಳ ವಿರುದ್ದಾ ಮಳವಳ್ಳಿ ಟೌನ್ ಪೊಲೀಸ್ ಠಾಣೆ ಮೊ.ಸಂ . 64/11 ಕಲಂ 87 ಕೆ.ಪಿ ಕಾಯಿದೆ ಮತ್ತು 420 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿ ತನಿಖೆ ಕ್ರಮ ಕೈಗೊಂಡಿರುತ್ತೆ 

Raid On 06-05-2011

ಪಾಂಡವಪುರ ಪೊಲೀಸ್ ಠಾಣೆ ಮೊ.ಸಂ 219/11 ಕಲಂ 3-5 ಸ್ಪೋಟಕ ವಸ್ತುಗಳ ಅಧಿ ನಿಯಮ 1908 

ದಿನಾಂಕ 04-05-11 ರಂದು ಹೊನ್ನಾಗಾನ ಹಳ್ಳಿ ಗ್ರಾಮದ ಚಲುವೇಗೌಡ ಬಿನ್ ಹನುಮಂತೇಗೌಡ ಬಾಬ್ತು ಸರ್ವೆ ನಂ 62 ರ ಕಬ್ಬಿನ ಗದ್ದೆಯಲ್ಲಿ ಕಲ್ಲು ಬಂಡೆಗಳನ್ನು ಸ್ಪೋಟಿಸಲು ಉಯೋಗಿಸುವ ಸ್ಪೋಟಕ ವಸ್ತುಗಳನ್ನು ಅನದಿಕೃತವಾಗಿ ಸಂಗ್ರಹಿಸಿಟ್ಟು ಕೊಂಡಿರುತ್ತಾರೆಂದು ಪಿರ್ಯಾದಿ ಶ್ರೀ ಕೃಷ್ಣಮೂರ್ತಿ ಪಿ.ಐ ಪಾಂಡವಪುರ ರವರಿಗೆ ಬಾತ್ಮಿದಾರಿಂದ ಖಚಿತ ವರ್ತಮಾನ  ಬಂದ ಮೇರೆಗೆ ಸಿಬ್ಬಂದಿಗಳೊಡನೆ ದಾಳಿ ಮಾಡಿ ಆರೋಪಿ ಚಲುವೇಗೌಡ ಬಿನ್ ಹನುಮಂತೇಗೌಡ ಅಕ್ರಮವಾಗಿ ಸಂಗ್ರಹಿಸಿಟ್ಟು ಕೊಂಡಿದ್ದ ಸ್ಪೋಟಕ ವಸ್ತುಗಳಾದ 1 ಲಕ್ಷ ಮೌಲ್ಯದ ಡಿಟೋನೇಟರ್ ಅನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿಯ ವಿರುದ್ದ ಪಾಂಡವಪುರ ಪೊಲೀಸ್ ಠಾಣೆ ಮೊ.ಸಂ 219/11 ಕಲಂ 3-5 ಸ್ಪೋಟಕ ವಸ್ತುಗಳ ಅಧಿ ನಿಯಮ 1908 ರೀತ್ಯ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ