Moving text

Mandya District Police

PRESS NOTE OF PANDAVAPURA PS DTD : 17-10-2013





ಪತ್ರಿಕಾ ಪ್ರಕಟಣೆ
 



      ದಿನಾಂಕ 17-10-2013 ರಂದು ದೊರೆತ ಖಚಿತ ವರ್ತಮಾನದ ಮೇರೆಗೆ ಪಾಂಡವಪುರ ತಾಲ್ಲೋಕು, ಹರಳಹಳ್ಳಿ ಗ್ರಾಮದಲ್ಲಿರುವ ಆರ್.ಕೆ. ಬ್ರಿಕ್ಸ್ ಗೊಡನ್ನಲ್ಲಿ ಅನದಿಕೃತವಾಗಿ ಕಲ್ಲು ಬಂಡೆ ಸಿಡಿಸಲು ಉಪಯೋಗಿಸುವ ಸ್ಪೋಟಕ ವಸ್ತು (ಅಮೋನಿಯಂ ನೈಟ್ರೇಟ್) ಗಳನ್ನು ದಾಸ್ತಾನು ಮಾಡಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಶ್ರೀರಂಗಪಟ್ಟಣ ಉಪವಿಭಾಗದ ಡಿ.ಎಸ್.ಪಿ, ಗೀತಾ ಎಂ.ಎಸ್ ರವರ ನೇತೃತ್ವದಲ್ಲಿ ಪಾಂಡವಪುರ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟೇಶ್ ಹಾಗು ಸಿಬ್ಬಂದಿಗಳಾದ ರಾಜೇಶ್, ವಿಜಯಕುಮಾರ್, ಚಾಲಕ ಚಂದ್ರಶೇಖರ್ ಇವರುಗಳೋಂದಿಗೆ, ದಾಳಿ ನಡೆಸಲಾಗಿ ಗೋಡೋನ್ನಲ್ಲಿ ಅಕ್ರಮವಾಗಿ ರಹದಾರಿ ಇಲ್ಲದೆ ದಾಸ್ತಾನು ಮಾಡಿದ್ದ 50 ಕೆ.ಜಿಯ 19 ಚೀಲ ಅಮೋನಿಯಂ ನೈಟ್ರೇಟ್ನ್ನು ವಶಪಡಿಸಿಕೊಂಡು ಗೋಡೋನ್ನಲ್ಲಿದ್ದ ಆಸಾಮಿ ಮೋಸಿಮ್ಖಾನ್ ಬಿನ್ ಏಜಾಜ್ ಅಲಿಖಾನ್ ಹರಳಹಳ್ಳಿ ಈತನನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡು ನ್ಯಾಯಾಂಗ ಬಂದನಕ್ಕೆ ಒಳಪಡಿಸಿದೆ,  ದಾಸ್ತಾನು ಮಾಡಿದ್ದ, ಆಸಾಮಿ ನಾಜೀಮುಲ್ಲಾಷರೀಪ್ ವಿರುದ್ದ ಮೊ.ನಂ. 367/2013 ಕಲಂ 3, 4, 5 ಸ್ಪೋಟಕ ವಸ್ತುಗಳ ಅದಿನಿಯಮದ ರೀತ್ಯಾ ಪ್ರಕರಣ ದಾಖಲಾಗಿದ್ದು, ಆರೋಪಿ ನಾಜಿಮುಲ್ಲಾಷರೀಪ್ ತಲೆ ಮರೆಸಿಕೊಂಡಿದ್ದು ಪತ್ತೆ ಬಗ್ಗೆ ಕ್ರಮ ಕೈಗೊಂಡಿದೆ.  ಪ್ರಕರಣದ ಪತ್ತೆ ಕಾರ್ಯದಲ್ಲಿ ಡಿ.ಎಸ್.ಪಿ ಶ್ರೀರಂಗಪಟ್ಟಣ, ಪಿ.ಐ ಪಾಂಡವಪುರ ಹಾಗು ಪಾಂಡವಪುರ ಪೊಲೀಸ್ ಠಾಣಾ ಸಿಬ್ಬಂದಿಗಳು ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ. 

       ಮೇಲ್ಕಂಡ ಪ್ರಕರಣದಲ್ಲಿ ಆರೋಪಿಯನ್ನು ದಸ್ತಗಿರಿಮಾಡಿ ಮಾಲನ್ನು ವಶಪಡಿಸಿಕೊಂಡ ಅಧಿಕಾರಿ ಮತ್ತು ಸಿಬ್ಬಂಧಿಯವರನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ. 
 

No comments:

Post a Comment