Moving text

Mandya District Police

PRESS NOTE DATE : 26-02-2014


 ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
                                                 ಮಂಡ್ಯ ಜಿಲ್ಲೆ, ದಿನಾಂಕಃ 26-02-2014

     ಪತ್ರಿಕಾ ಪ್ರಕಟಣೆ


ದಿನಾಂಕಃ 24-02-2014 ರಂದು ಪಿಎಸ್ಐ ಶ್ರೀ. ಧನರಾಜ್, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ಸಿಬ್ಬಂದಿಗಳ ಸಮೇತ  ರಾತ್ರಿ ಗಸ್ತಿನಲ್ಲಿದ್ದಾಗ ರಾತ್ರಿ 1215 ಗಂಟೆಯಲ್ಲಿ ಬೂಕನಕೆರೆ ಗ್ರಾಮದಿಂದ ಬಲ್ಲೇನಹಳ್ಳಿ ಕಡೆಗೆ ಹೋಗುವ ರಸ್ತೆಯ ಪೆಟ್ರೋಲ್ ಬಂಕ್ ಬಳಿ 1) ನಟ @ ನಟರಾಜು ಬಿನ್ ಲಕ್ಷ್ಮಯ್ಯ, 35 ವರ್ಷ, ಚಾಲಕ ವೃತ್ತಿ, ಐಚನಹಳ್ಳಿ ಗ್ರಾಮ, ಬೂಕನಕೆರೆ ಹೊಬಳಿ ಕೆ.ಆರ್.ಪೇಟೆ ತಾ 2) ಚಲುವರಾಜು ಬಿನ್ ನಾಗಯ್ಯ, 22 ವರ್ಷ, ವ್ಯವಸಾಯ, ಹೆರಗನಹಳ್ಳಿ ಗ್ರಾಮ ಬೂಕನಕೆರೆ ಹೋಬಳಿ, ಕೆ.ಆರ್.ಪೇಟೆ ತಾಲ್ಲೂಕು ರವರುಗಳು ಒಂದು ಗೂಡ್ಸ್ ಆಟೋವನ್ನು ತೆಗೆದುಕೊಂಡು ಹೋಗಲು ಪ್ರಯತ್ನಮಾಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ಅವರುಗಳನ್ನು  ಹಿಡಿದು ಆಟೋ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಲಾಗಿ ಸದರಿ ಆಟೋ ಬಗ್ಗೆ ದಾಖಲಾತಿ ಇಲ್ಲದೇ ಇದ್ದು ನಕಲೀ ಕೀ ಬಳಸಿ ಮೈಸೂರು ಹತ್ತಿರ ಕಳ್ಳತನ ಮಾಡಿರುತ್ತೇವೆಂದು ತಿಳಿಸಿರುತ್ತಾರೆ. ನಂತರ ಆರೋಪಿತರನ್ನು ಠಾಣೆಗೆ ಕರೆದುಕೊಂಡು ಬಂದು ಅವರ ವಿರುದ್ದ ಪ್ರಕರಣ ದಾಖಲುಮಾಡಿ  ಆರೋಪಿತರನ್ನು ವಿಚಾರಣೆಗೊಳಪಡಿದಾಗ ಆರೋಪಿತರು ಈಗ್ಗೆ ಮೂರು ದಿವಸಗಳ ಹಿಂದೆ ಮೈಸೂರು ಹತ್ತಿರ ರಾತ್ರಿ ವೇಳೆಯಲ್ಲಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಒಂದು 407 ಗೂಡ್ಸ್ ಟೆಂಪೋ ಮತ್ತು ನಂತರ ಕೆ.ಆರ್.ಎಸ್. ಬಳಿ ಒಂದು ಪಲ್ಸರ್ ಮೋಟಾರ್ ಸೈಕಲ್ ನ  ಕೀ ಬಳಸಿ ಕಳ್ಳತನಮಾಡಿ ಆರೋಪಿತನಾದ ಚೆಲುವರಾಜು ರವರ ಹೆರಗನಹಳ್ಳಿ ಗ್ರಾಮದ ಮನೆಯಲ್ಲಿ ಮಾರಾಟಮಾಡಲು ನಿಲ್ಲಿಸಿರುತ್ತೇವೆಂದು ತಿಳಿಸಿರುತ್ತಾರೆ.

ಆರೋಪಿತರಿಂದ ಸುಮಾರು 7 ಲಕ್ಷ ರೂಪಾಯಿ ಬೆಲೆ ಬಾಳುವ 1) ನಂಬರ್ ಪ್ಲೇಟ್ ಇಲ್ಲದ ಗೂಡ್ಸ್ ಆಟೋ 2) ಕೆಎ-21-ಕೆ-72 ಪಲ್ಸರ್ ಮೋಟಾರ್ ಸೈಕಲ್ 3) ಕೆಎ-30-260 ನಂಬರಿನ 407 ಗೂಡ್ಸ್ ಟೆಂಪೋವನ್ನು ವಶಪಡಿಸಿಕೊಂಡಿರುತ್ತಾರೆ. ನಂತರ ಮೇಲ್ಕಂಡ ಆರೋಪಿಗಳನ್ನು ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ.

       ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.


No comments:

Post a Comment