Moving text

Mandya District Police

Press Note Dated: 22-05-2011.

ಪತ್ರಿಕಾ ಪ್ರಕಟಣೆ 

ಹಲಗೂರು ಪೊಲೀಸ್ ಠಾಣೆ ಮೊ.ಸಂ. 107/11 ಕಲಂ 379 ಐಪಿಸಿ 

ದಿನಾಂಕ 08-05-11 ರಂದು ಗೊಲ್ಲರಹಳ್ಳಿ ಗ್ರಾಮದ ಶಿವರಾಜು ಎಂಬುವವರು ದಿನಾಂಕ 06-05-11 ರಂದು ರಾತ್ರಿ 08-45 ಗಂಟೆ ಸಮಯಲ್ಲಿ ಅವರ ಬಾಬ್ತು ಕೆಎ-11-ಡಬ್ಲ್ಯೂ-0934 ಹೀರೊ ಹೊಂಡಾ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ಅನ್ನು ಮನೆಯ ಮುಂದೆ ನಿಲ್ಲಿಸಿದ್ದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿಯವರು ನೀಡಿದ ದೂರಿನ ಅನ್ವಯೆ  ಹಲಗೂರು ಪೊಲೀಸ್ ಠಾಣೆಯಲ್ಲಿ ಮೊ.ಸಂ. 107/11 ಕಲಂ 379 ಐಪಿಸಿ  ರೀತ್ಯ ಪ್ರಕರಣ ದಾಖಲಾಗಿರುತ್ತೆ. 

ಸದರಿ ದೂರಿನ ಅನ್ವಯ ಹೆಲಗೂರು ಪೊಲೀಸರಿಂದ ತನಿಖೆ ಕ್ರಮ ಕೈಗೊಳ್ಳಲಾಗಿತ್ತು. ಈ ಕೇಸಿನ ಪತ್ತೆ ಬಗ್ಗೆ ಹಲಗೂರು ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಧನರಾಜ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಸಿ.ಹೆಚ್.ಸಿ. 131 ಅಪ್ಪಾಜಿಗೌಡ. ಸಿ.ಪಿ.ಸಿ ಗಳಾದ 324 ಸತೀಶ. 686 ಹೆಚ್.ಬಿ ರಾಜು. ಸಿ.ಪಿ.ಸಿ 792 ಎನ್. ಹರ್ಷಕುಮಾರ ರವರುಗಳನ್ನನೊಳಗೊಂಡ ವಿಶೇಷ ದಳ ರಚಿಸಿ ಸದರಿ ಪ್ರಕರಣದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಕೊಂಡು ಪ್ರಕರಣದ ಆರೋಪಿಗಳಾದ ಗೊಲ್ಲರಹಳ್ಳಿ ಗ್ರಾಮದ 1] ಕುಮಾರ ಬಿನ್ ತಮ್ಮಯ್ಯ 20 ವರ್ಷ 2] ಕುಮಾರ್ @ ಪಿಯಾ ಬಿನ್ ಕೃಷ್ಣಪ್ಪ 22 ವರ್ಷ, 3] ಗಿರೀಶ ಬಿನ್ ಶಿವಣ್ಣ. ರವರುಗಳನ್ನು 21-05-2011 ರಂದು ರಾತ್ರಿ ಆರೋಪಿಗಳನ್ನು ದಸ್ತಗಿರಿ ಮಾಡಿ, ಸದರಿ  ಆರೋಪಿಗಳು ಕೊಟ್ಟಿ ಸ್ವ ಇಚ್ಚಾ ಹೇಳಿಕೆಯ ಮೇರೆಗೆ ಈ ಕೇಸಿನಲ್ಲಿ ಕಳುವು ಆಗಿದ್ದ ಕೆಎ-11-ಡಬ್ಲ್ಯೂ-0934 ಹೀರೊ ಹೊಂಡಾ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ಮತ್ತು ಆರೋಪಿಗಳು ಈ ಹಿಂದೆ ಕಳವು ಮಾಡಿದ ಕೆಎ-51-ಜೆ-8093 ಹೀರೊ ಹೊಂಡಾ ಸ್ಪ್ಲೇಂಡರ್ ಮೋಟಾರ್ ಸೈಕಲ್. ಹಾಗೂ 2 ಹೆವಿಡ್ಯೂಟಿ ಟಿ.ವಿ.ಎಸ್. ಮೋಪೆಡ್ ಒಟ್ಟು 4 ವಾಹನಗಳನ್ನು ಸದರಿ ಆರೋಪಿಗಳಿಂದ ವಶಪಡಿಸಿಕೊಂಡಿರುತ್ತಾರೆ ಅವುಗಳ ಒಟ್ಟು ಮೌಲ್ಯ 2.00,000/- ರೂ ..

ಸದರಿ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ರವರು ಮಂಡ್ಯ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ 

No comments:

Post a Comment