Moving text

Mandya District Police

Daily Crime Report Date: 01-06-2011

ಜಿಲ್ಲೆಯಲ್ಲಿ ಈ ದಿನ ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 7 ರಸ್ತೆ ಅಪಘಾತ ಪ್ರಕರಣ, 3 ಕಳ್ಳತನ ಪ್ರಕರಣ, 1 ದರೋಡೆ ಪ್ರಕರಣ ಹಾಗೂ 1 ಯುಡಿಆರ್ ಪ್ರಕರಣ ಹಾಗೂ ಇತರೆ ಪ್ರಕರಣಗಳು ವರದಿಯಾಗಿರುತ್ತೆ.

ಯು.ಡಿ.ಆರ್. ಪ್ರಕರಣ
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ
1] ಯು.ಡಿ.ಆರ್. ನಂ 20/11 ಕಲಂ 174 ಸಿ.ಆರ್.ಪಿ.ಸಿ ದಿನಾಂಕ 01-06-11 ರಂದು ಮೃತ ಕೃಷ್ಣ ಬಿನ್ ರಾಚಾಚಾರಿ 31 ವರ್ಷ ಜೀವನಲ್ಲಿ ಜಿಗುಪ್ಸ್ ಗೊಂಡು ಯಾವುದೋ ಕ್ರಿಮನಾಶಕ ಔಷಧಿಯನ್ನು ಸೇವಿಸಿ ಮಂಡ್ಯ ಜಿಲ್ಲಾ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ

ಕಳ್ಳತನ ಪ್ರಕರಣ
ಪಾಂಡವಪುರ ಪೊಲೀಸ್ ಠಾಣೆ
1] ಮೊ.ಸಂ 265/11 ಕಲಂ 109 ಸಿ.ಆರ್.ಪಿ.ಸಿ ದಿನಾಂಕ 01-06-11 ರಂದು ಪಿರ್ಯಾದಿ ಕಾಳೇಗೌಡ ಸಿಹೆಚ್.ಸಿ. 87 ಪಾಂಡವಪುರ ಪೊಲೀಸ್ ಠಾಣೆ ರವರು ರೈಲ್ವೆ ನಿಲ್ದಾಣದ ಬಳಿ ರಾತ್ರಿ ಗಸ್ತು ಮಾಡುತ್ತಿದ್ದಾಗ ಆರೋಪಿ ರಮೇಶ @ ಲೋಕೇಶನು ಪಿರ್ಯಾದಿಯವರನ್ನು ಕಂಡು ಓಡಿ ಹೋಗಿ ಅಂಗಡಿಯ ಮರೆಯಲ್ಲಿ ಅವಿತುಕೊಳ್ಳು ಪ್ರಯತ್ನಿಸುತ್ತಿದ್ದಾಗ ಕಳ್ಳತನ ಮಾಡಲು ಹೊಂಚು ಹಾಕುತ್ತಿರಬಹುದು ಎಂದು ಅನುಮಾನ ಬಂದು ಠಾಣೆಗೆ ಕರೆತಂದು ಕೇಸು ದಾಖಲಿಸಿದ ಬಗ್ಗೆ

ಕೊಪ್ಪ ಪೊಲೀಸ್ ಠಾಣೆ
2] ಮೊ.ಸಂ 78/11 ಕಲಂ 379 ಐಪಿಸಿ ದಿನಾಂಕ 31-05-11 ರಂದು ಪಿರ್ಯಾದಿ ಜಿ.ವಿ ಪುಟ್ಟಸ್ವಾಮಿ ರವರ ಜೋಗಿಕೊಪ್ಪಲು ಗ್ರಾಮದ ದೇವಸ್ಥಾನದ ಬಳಿ ನಿಲ್ಲಿಸಿದ್ದ ಅವರ ಬಾಬ್ತು ಕೆಎ-11-ವಿ-8174 ಹೀರೊ ಹೊಂಟಾ ಪ್ಯಾಷನ್ ಪ್ರೋ ಬೈಕ್ ನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ

ಮಂಡ್ಯ ಪೂರ್ವ ಪೊಲೀಸ್ ಠಾಣೆ
3] ಮೊ.ಸಂ 152/11 ಕಲಂ 41 ಕ್ಲಾಸ್ [ಎ] ರೆ/ವಿ 109 ಸಿ.ಆರ್.ಪಿ.ಸಿ ದಿನಾಂಕ 31-05-11 ರಂದು ರಾತ್ರಿ ಪಿರ್ಯಾದಿ ಬಿ.ಸಿ. ಲೋಕೇಶ ಸಿ.ಹೆಚ್.ಸಿ 235 ಮಂಡ್ಯ ಪೂರ್ವ ಪೊಲೀಸ್ ಠಾಣೆ ರವರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಹಾಲಹಳ್ಳಿ ಆಟೋ ಸ್ಟಾಂಡ್ ಹತ್ತಿರ ಆರೋಪಿ ಕೆ.ಎಸ್. ಉಮೇಶ ಬಿನ್ ಸಿದ್ದನರಸಯ್ಯ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತ ಪಿರ್ಯಾದಿಯನ್ನು ಕಂಡು ಮರೆಮಾಚಿಕೊಳ್ಳಲು ಪ್ರಯತ್ನಪಟ್ಟಿದ್ದರಿರಂದ ಹಿಡಿದು ಠಾಣೆಗೆ ಹಾಜರು ಪಡಿಸಿದ ಬಗ್ಗೆ

ಇತರೆ ಪ್ರಕರಣ
ಮಂಡ್ಯ ಪೂರ್ವ ಪೊಲೀಸ್ ಠಾಣೆ
1] ಮೊ.ಸಂ 153/11 ಕಲಂ 406-417-420 ರೆ/ವಿ 34 ಐಪಿಸಿ ಮತ್ತು 4.5 ಮತ್ತು 6 Prize Chits and Money Circulation Scheme [Banning] Act 1978, ಆರೋಪಿ 6 ಹನುಮಂತ ಕುಮಾರ್ ಎಂಬುವರು ಪಿರ್ಯಾದಿ ಶಂಕರ್ ರವರಿಗೆ ಪರಿಚಯವಾಗಿದ್ದು ಮಂಡ್ಯ ಸಿಟಿ ಮಮತಾ ನರ್ಸಿಂಗ್ ಹೋಂ ಹತ್ತಿರ ಇದ್ದ ಕ್ವೆಸ್ಟ್ ನೆಟ್ಸ್ ಎಂಟರ್ ಪೈಸಸ್ ಇಂಡಿಯಾ ಪೈವೇಟ್ ಲಿಮಿಟೆಡ್ ಬ್ರಾಂಚ್ ಆಪೀಸ್ ನಲ್ಲಿ ಹಣ ತೊಡಗಿಸಿದರೆ ಚಿನ್ನದ ಹಾಗೂ ಬೆಳ್ಳಿಯ ಮಾಡಲ್ ಗಳನ್ನು ಖರೀದಿಸಿದರೆ ಕಂಪನಿಗೆ ಸ್ವತಂತ್ರ ಪ್ರತಿನಿದಿಯಾಗಿ ಕಮಿಷನ್ ರೂಪದಲ್ಲಿ ಹೆಚ್ಚು ಹಣ ಸಂಪಾದಿಸ ಬಗುದೆಂದು ಹೇಳಿದ ಮೇರೆಗೆ ಇತರೆ ಆರೋಪಿಗಳ ಭರವಸೆ ಮೇರೆಗೆ ಪಿರ್ಯಾದಿಯು ದಿನಾಂಕ 07-09-2007 ರಂದು 32.700 ರೂಗಳ ಎಂಡಿ.ಸಿ.ಸಿ. ಬ್ಯಾಂಕಿನಿಂದ ಚಕ್ಕನ್ನು ಪಡೆದು ಕ್ವೆಸ್ಟ್ ನೆಟ್ಸ್ ಕಂಪನಿಗೆ ಕಟ್ಟಿದ್ದ ನಂತರ ೀ ಬಗ್ಗೆ ಸ್ವೇಕೃತಿ ರಶೀತಿಯನ್ನು ಪಡೆದು ಕೊಂಡಿದ್ದಾಗಿ, ನಂತರ ೀ ಬಗ್ಗೆ ಕಂಪನಿಯಿಂದ ಯಾವುದೇ ಹಣದ ಕಮಿಷನ್ ದೊರೆಯಲಿಲ್ಲವೆಂತಲೂ, ನಂತರ ಈ- ಟಿವಿ ಹಾಗೂ ಇತರೆ ಮಾಧ್ಯಮಗಳಲ್ಲಿ ಸದರಿ ಕಂಪನಿ ಗ್ರಾಹಕರಿಗೆ ಮೋಸ ಮಾಡಿರುವ ಬಗ್ಗೆ ತಿಳಿದಿದ್ದ ನಂತರ ಸದರಿ ಆರೋಪಿಗಳನ್ನು ಸಂಪರ್ಕಿಸಿ ತಾನು ತೊಡಗಿಸಿದ್ದ ಹಣದ ಬಗ್ಗೆ ಕೇಳಲಾಗಿ ವಾಪಸ್ಸು ನೀಡಿಲ್ಲವೆಂದು ಸದರಿ ಆರೋಪಿತರುಗಳು ಸಮಾನ ಉದ್ದೇಶದಿಂದ ತಮಗೆ ನಂಬಿಕೆ ದ್ರೋಹ ಮಾಡಿ ವಂಚಿಸಿ ಹಣ ವಾಪಸ್ ನೀಡದೆ ಮೋಸ ಮಾಡಿರುವುದಾಗಿ ಪಿರ್ಯಾದು.

ರಾಬರಿ ಪ್ರಕರಣ
ಶ್ರೀರಂಗಪಟ್ಟಣ ಪೊಲೀಸ್ ಠಾಣೆ
1] ಮೊ.ಸಂ 368/11 ಕಲಂ 395 ಐಪಿಸಿ ದಿನಾಂಕ 01-06-11 ರಂದು ಪಿರ್ಯಾದಿ ಕಮಲಮ್ಮ ನವರು ವೈಧ್ಯನಾಥಪುರದಲ್ಲಿ ಬಸ್ ಗೆ ಕಾಯುತ್ತಾ ನಿಂತಿದ್ದಾಗ ಯಾರೋ 5 ಜನ ಆರೋಪಿಗಳು ಎಲ್ಲಿಗೆ ಬರುತ್ತೀರಾ ಎಂದು ಕೇಳಿ ಕಾರು ಹತ್ತಿಸಿಕೊಂಡು ಕಿರುಚಿದರೆ ಕೊಲೆ ಮಾಡುವುದಾಗಿ ಮುಚ್ಚು ತೋರಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಪಿರ್ಯಾದಿ ಮತ್ತು ಆಕೆಯ ತಾಯಿಯ ಮೈಮೇಲಿದ್ದ 60 ಗ್ರಾಂ ತೂಕದ ಒಂದು ಚಿನ್ನದ ಮಾಂಗಲ್ಯ ಚೈನು, ಜೋತೆ ಒಟ್ಟು 162 ಗ್ರಾಂ ಚಿನ್ನದ ವಡವೆಗಳನ್ನು ಇದರ ಬೆಲೆ 3 ಲಕ್ಷ, 20 ಸಾವಿರ ರೂ ನಗದು ತೆಗೆದುಕೊಂಡು ಹೋಗಿರುತ್ತಾರೆ.

No comments:

Post a Comment