Moving text

Mandya District Police

Press Note on Mandya East PS Crime Rep.15-04-2012


                                                       ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ 
                                                  ಮಂಡ್ಯ ಜಿಲ್ಲೆ, ಮಂಡ್ಯ,  ದಿನಾಂಕಃ 16-04-2012  
                            
                                                                  ''ಪತ್ರಿಕಾ ಪ್ರಕಟಣೆ''

     ರಾಯಲ್ ಛಾಲೆಂಜರ್ ಬೆಂಗಳೂರು [ಆರ್.ಸಿ.ಬಿ] ವಿರುದ್ದ ರಾಜಸ್ಥಾನ್ ರಾಯಲ್ [ಆರ್ಆರ್] ಕ್ರಿಕೆಟ್ ಮ್ಯಾಚ್ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿಕೊಂಡು ಜೂಜಾಟವಾಡುತ್ತಿದ್ದ   9 ಜನ ಆಸಾಮಿಗಳ ಬಂಧನ, ಪಣಕ್ಕಿಟ್ಟಿದ್ದ ನಗದು ಹಣ 2,10,550-00 ರೂ,      16 ಮೊಬೈಲ್ ಹ್ಯಾಂಡ್ಸೆಟ್ಗಳು ಮತ್ತು 3 ಮೋಟಾರ್ ಸೈಕಲ್ಗಳ ವಶ.

     ದಿನಾಂಕಃ 15-04-2012 ರಂದು ರಾತ್ರಿ 8-00 ಗಂಟೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಛಾಲೆಂಜರ್ ಬೆಂಗಳೂರು [ ಆರ್.ಸಿ.ಬಿ] ವಿರುದ್ದ ರಾಜಸ್ಥಾನ ರಾಯಲ್ [ಆರ್ಆರ್] ಕ್ರಿಕೆಟ್ ಮ್ಯಾಚ್ ಪ್ರಾರಂಭವಾಗಿ ನಡೆಯುತ್ತಿದ್ದು ಸದರಿ ಕ್ರಿಕೆಟ್ ಮ್ಯಾಚ್ನಲ್ಲಿ ಹಣ, ಮೊಬೈಲ್ ಹ್ಯಾಂಡ್ಸೆಟ್, ಮೋಟಾರ್ ಸೈಕಲ್ಗಳನ್ನು ಪಣವಾಗಿ ಕಟ್ಟಿಕೊಂಡು ಮಂಡ್ಯ ನಗರದ ಹಾಲಹಳ್ಳಿ 1ನೇ ಕ್ರಾಸ್ನಲ್ಲಿರುವ ಅನಿಲ ಕುಮಾರ ಬಿನ್ ನಾಗೇಗೌಡ [ ಭೂತೇಗೌಡ] ಎಂಬುವರ ಮನೆಯ ರೂಂನಲ್ಲಿ ಟಿವಿ ನೋಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಎಂಬ ಜೂಜಾಟವನ್ನು ಆಡುತ್ತಿದ್ದ ಮನೆಯ ಮೇಲೆ ಮಂಡ್ಯ ಪೂರ್ವ ಠಾಣೆಯ ಪಿ.ಎಸ್.ಐ. ಮತ್ತು ಸಿಬ್ಬಂದಿಯವರುಗಳು ರಾತ್ರಿ 9-30 ಗಂಟೆಯಲ್ಲಿ ದಾಳಿಮಾಡಿ ಈ ಕೆಳಕಂಡ ಆರೋಪಿಗಳನ್ನು ಹಿಡಿದು ವಶಕ್ಕೆ ತೆಗೆದುಕೊಂಡು ಕ್ರಿಕೆಟ್ ಬೆಟ್ಟಿಂಗ್ ಕಟ್ಟಿದ್ದ ನಗದು ಹಣ 2,10,550-00 ರೂಗಳು, 16 ವಿವಿಧ ಕಂಪನಿಯ ಮೊಬೈಲ್ ಹ್ಯಾಂಡ್ಸೆಟ್ಗಳು, 3 ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಂಡಿರುತ್ತಾರೆ. ಸದರಿ ಆಸಾಮಿಗಳು ಕ್ರಿಕೆಟ್ ಬೆಟ್ಟಿಂಗ್ ಕಟ್ಟಲು ಬಳಸುತ್ತಿದ್ದ ಶಾಪರ್್ ಕಲರ್ ಟಿವಿ ಮತ್ತು 4 ಕ್ಯಾಲುಕೇಟರ್ಗಳನ್ನು ಸಹ ವಶಪಡಿಸಿಕೊಂಡು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

                                                       ಆರೋಪಿಗಳ ಹೆಸರು ಮತ್ತು ವಿಳಾಸ.

1] ಪಂಚಾಕ್ಷರಿ ಬಿನ್ ಲೇಟ್ ನಿಂಗೇಗೌಡ, 34 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಹಾಲಹಳ್ಳಿ ಸ್ಲಂ ಮಂಡ್ಯ ಸಿಟಿ. ಸ್ವಂತ ಸ್ಥಳ ಬೂತನ ಹೊಸೂರು ಗ್ರಾಮ, ಮಂಡ್ಯ ತಾಲ್ಲೋಕು. 
2] ನಾಗೇಶ ಬಿನ್ ವೆಂಕಟರಾಮು, 33 ವರ್ಷ, ವಾಸ ಮನೆ ನಂ. 140. ಎಲ್.ಜೆ. ಟೆಂಪಲ್ ಸ್ಟ್ರೀಟ್. ಹಳೆ ನಗರ, ಮಂಡ್ಯ. 
3] ಅನಿಲ್ಕುಮಾರ್ ಬಿನ್ ನಾಗೇಗೌಡ, 33ವರ್ಷ, ವ್ಯವಸಾಯ, ವಾಸ 1ನೇಕ್ರಾಸ್, ಹಾಲಹಳ್ಳಿ, ಮಂಡ್ಯ 
4] ದೇವರಾಜು ಬಿನ್ ನಂಜುಂಡಯ್ಯ, 34 ವರ್ಷ, ಟೈಲರ್ ಕೆಲಸ, ವಾಸ 7 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ. 
5] ಆನಂದ ಬಿನ್ ವೆಂಕಟೇಶ, 26 ವರ್ಷ, ವಾಸ 4 ನೇ ಕ್ರಾಸ್, ಬೋವಿ ಕಾಲೋನಿ. ಮಂಡ್ಯ. 
6] ವೇಣುಗೋಪಾಲ ಬಿನ್ ರಾಮೇಗೌಡ, 28 ವರ್ಷ, ಆಪ್ಟಿಕಲ್ ಕೆಲಸ, ವಾಸ 4 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ ಸಿಟಿ. 
7] ಶಿವರಾಜ್ ಬಿನ್ ಲೇಟ್ ನಿಂಗೇಗೌಡ, 26 ವರ್ಷ, ಕಾಪೀ ಟಿ ವ್ಯಾಪಾರ, ವಾಸ ಕೇರಾಪ್ ಪಂಚಾಕ್ಷರಿ, ಹಾಲಹಳ್ಳಿ ಸ್ಲಂ ಮಂಡ್ಯ           ಸಿಟಿ. ಸ್ವಂತ ಸ್ಥಳ ಬೆಳ್ಳಾಳೆ ಗ್ರಾಮ, ಕನಕಪುರ ತಾಲ್ಲೋಕು.
8] ಮಧು ಬಿನ್ ಮಾದಯ್ಯ, 19 ವರ್ಷ, , ವಾಸ ಕೇರಾಪ್ ನಂಜುಂಡಯ್ಯ 7 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ. ಸ್ವಂತ               ಸ್ಥಳ ರಾಮನಾಥಮೋಳೆ, ಕನಕಪುರ ತಾಲ್ಲೋಕು. 
9] ಶಂಕರ ಬಿನ್ ಲೇಟ್ ಸಿದ್ದಯ್ಯ, 28 ವರ್ಷ, ಲಾರಿ ಚಾಲಕ, ವಾಸ 5 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ. 

         ಈ ಮೇಲ್ಕಂಡ ದಾಳಿಯಲ್ಲಿ ಪಾಲ್ಗೊಂಡಿದ್ದ ಮಂಡ್ಯ ಪೂರ್ವ ಠಾಣೆಯ ಪಿ.ಎಸ್.ಐ. ಶ್ರೀ ಎಂ. ಮಂಜುನಾಥ ಅಪರಾಧ ವಿಭಾಗದ ಪಿ.ಎಸ್.ಐ. ಶ್ರೀ ಎಂ.ಡಿ.ಶಿವರಾಜು ಹಾಗೂ ಸಿಬ್ಬಂದಿಯವರುಗಳುನ್ನು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಪ್ರಶಂಸಿರುತ್ತಾರೆ

No comments:

Post a Comment