Moving text

Mandya District Police

Press Note Date: 07-04-2017

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ:07-04-2017.
ಪತ್ರಿಕಾ ಪ್ರಕಟಣೆ
       ದಿನಾಂಕಃ 31.03.17. ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಅರ್. ಶಶಿಭೂಷಣ್ ಇವರ ಕುತ್ತಿಗೆಯನ್ನು ಕುಯ್ದು ಕೊಲೆ ಮಾಡಿದ್ದು ಈ ಸಂಬಂದsವಾಗಿ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.
ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವ ಸಂಬಂ ಕೆ.ಎಂ.ದೊಡ್ಡಿ ವೃತ್ತದ ಸಿಪಿಐ ಶ್ರೀ ಶಿವಮಲವಯ್ಯ ಇವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದು ಆರೋಪಿಗಳನ್ನು ಹಿಡಿಯುವಲ್ಲಿ ಕೆ.ಎಂ.ದೊಡ್ಡಿ ಠಾಣೆಯ ಪಿಎಸ್‍ಐ ಆಯ್ಯನಗೌಡ, ಹಲಗೂರು ಠಾಣೆ ಪಿಎಸ್‍ಐ ಬಿ.ಎಸ್. ಶ್ರೀಧರ್, ಅರಕೆರೆ ಠಾಣಾ ಪಿಎಸ್‍ಐ, ಅಜರುದ್ದೀನ್, ಶ್ರೀರಂಗಪಟ್ಟಣ (ಗ್ರಾ) ಠಾಣಾ ಪಿಎಸ್‍ಐ ಪುನೀತ್ ಹಾಗೂ ಸಿಬ್ಬಂದಿಗಳಾದ ಎಎಸ್‍ಐ ಗೋವಿಂದಪ್ಪ, ಗಯಾಜï ಉದ್ದೀನ್ ಖಾನ್, ಮಹದೇವ, ಜಯರಾಮೇಗೌಡ, ಜಯರಾಮು ಹಾಗೂ ಚಾಲಕರುಗಳಾದ ಮಂಜುನಾಥ್ ಮತ್ತು ರವಿ ಇವರುಗಳ ಸಹಾಯದಿಂದ ಈ ಕೃತ್ಯದಲ್ಲಿ ಬಾಗಿಯಾಗಿರುವ ಈ ಕೆಳಕಂಡ ಅರೋಪಿಗಳನ್ನು ದಸ್ತಗಿರಿ ಮಾಡಿರುತ್ತೆ.
1] ಮೃತ ಶಶಿಭೂಷಣ್ ಇವರ ಪತ್ನಿ ಶ್ರೀಮತಿ ಶಾಂತಮ್ಮ ಇವರನ್ನು ದಸ್ತಗಿರಿ ಮಾಡಿ ಇವರಿಂದ ಒಂದು ಮೊಬೈಲ್ ಪೋನ್ ವಶಕ್ಕೆ ಪಡೆದು ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
2] ಮೃತ ಶಶಿಭೂಷಣ್ ಇವರ ಮಗಳು ನವ್ಯಶ್ರೀ ಈಕೆಯನ್ನು ದಸ್ತಗಿರಿ ಮಾಡಿ ಈಕೆಯಿಂದ ಒಂದು ಮೊಬೆಲ್ ವಶಕ್ಕೆ ಪಡೆದು ಈಕೆಯನ್ನು ಸಹ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
3] ಸುರೇಶ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಮೂರು ಬ್ಯಾಂಕ್ ಪಾಸ್ ಪುಸ್ತಕಗಳು, ಐದು ಕೀ ಗಳಿರುವ ಗೊಂಚಲು, ಒಂದು ಹಣ ಇರುವ ಪರ್ಸ್, ಒಂದು ಡೈರಿ, ಎರಡು ಮೊಬೈಲ್ ಪೋನ್‍ಗಳು ಹಾಗೂ ಕೃತ್ಯಕ್ಕೆ ಮುಂಗಡವಾಗಿ ಪಡೆದಿದ್ದ 7740/- ರೂ ನಗದು ಹಣ ವಶಕ್ಕೆ ಪಡೆದಿರುತ್ತೆ.
4] ವೆಂಕಟೇಶ್ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಕಾರನ್ನು ವಶಕ್ಕೆ ಪಡೆದಿರುತ್ತೆ.
5] ಮಹದೇವ @ ಶಾಕಾ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಮಚ್ಚನ್ನು ವಶಕ್ಕೆ ಪಡೆದಿರುತ್ತೆ.
6] ಸಂತೋಷ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಮಚ್ಚು ಹಾಗೂ ಒಂದು ಮೊಬೈಲ್ ವಶಕ್ಕೆ ಪಡೆದಿರುತ್ತೆ.
7] ನಂಜುಂಡ @ ನಂಜಪ್ಪ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಮೃತನ ಒಂದು ಮೊಬೆಲ್ ಪೋನನ್ನು ಈತನ ಮನೆಯಿಂದ ವಶಕ್ಕೆ ಪಡೆದಿರುತ್ತೆ.
          ಆರೋಪಿ ವೆಂಕಟೇಶ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಅರೋಪಿ ಸುರೇಶ ಮತ್ತು ಮಹದೇವ @ ಶಾಕಾ ಇವರನ್ನು ಪೆÇಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಿ ಇವರ ಮಾಹಿತಿ ಮೇರೆಗೆ ಅರೋಪಿಗಳಾದ ಸಂತೋಷ ಮತ್ತು ನಂಜುಂಡ @ ನಂಜಪ್ಪ ಇವರನ್ನು ದಸ್ತಗಿರಿ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.

No comments:

Post a Comment